ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕ್ಷಣ ಕ್ಷಣಕ್ಕೂ
 ನಡೆಯುವ
ದಣಿವಿರದ ಕಾಲುಗಳು
ಒಮ್ಮೊಮ್ಮೆ ಎಡುವಿ
ಬೀಳುತ್ತವೆ
ಆಗಸದಿ ರೆಕ್ಕೆ ಬಿಚ್ಚಿ
ಮುಕ್ತವಾಗಿ ಹಾರುವ
ಹಕ್ಕಿಗಳು ನೆಲಕ್ಕೆ
ಉರುಳುತ್ತವೆ
ಮಿನುಗುವ ತಾರೆಗಳು
ಪತನವಾಗುತ್ತವೆ
ಬಿಟ್ಟಿಲ್ಲ ಸೂರ್ಯ ಚಂದ್ರರಿಗೆ
ಗ್ರಹಣದ ಕಾಟ
ಸೃಷ್ಟಿ ದೃಷ್ಟಿ ಶಿವನ ಆಟ
ಬದುಕುವ ಛಲ
 ಮನುಜನ ಮಾಟ
ನಡೆದಷ್ಟು ದಾರಿ
ಪಡೆದಷ್ಟು  ಭಾಗ್ಯ
ನಕ್ಕು ನಗಿಸಿ
ಬಾಳುವುದೇ
ಬಯಲು ಆಲಯದ
ದೈವ ಕೂಟ
———————————————–

About The Author

13 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬಯಲು ಆಲಯ”

  1. ಬಯಲು ಆಲಯ…. ನಿಜವಾದ ಅರ್ಥದಲ್ಲಿ ಬಾಳ ಪಯಣವನ್ನು ತಿಳಿಸುತ್ತಾ..
    ನಡೆದಷ್ಟು ದಾರಿ
    ಪಡೆದಷ್ಟು ಭಾಗ್ಯ
    ನಕ್ಕು ನಗಿಸಿ ಬಾಳುವುದೇ
    ಬಯಲು ಆಲಯದ
    ದೈವ ಕೂಟ… ಎನ್ನುವ ಮನೋಜ್ಞ ಕವನ ಕಟ್ಟಿಕೊಟ್ಟಿರುವಿರಿ..

    ಸುಧಾ ಶಿವಾನಂದ ( ಸುಶಿ )

  2. ಸವಿತಾ ಪಾಟೀಲ

    ಸೃಷ್ಟಿ ದೃಷ್ಟಿ ಶಿವನ ಆಟ ಬದುಕುವ ಶಕ್ತಿ ಮೇಲುಗೈ ಸಾಧಿಸಬೇಕು

Leave a Reply

You cannot copy content of this page

Scroll to Top