ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಖದ ತುಂಬಾ ರಂಗೋಲಿ ಬಿಡಿಸಬೇಕೆಂದಿದ್ದೆ ಅಧರದ ಕುಂಚದಿ
ತನುವ ತುಂಬೆಲ್ಲ ಚಿತ್ತಾರ ಮೂಡಿಸಬೇಕೆಂದಿದ್ದೆ ಅಧರದ ಕುಂಚದಿ

ಪ್ರೀತಿಯಾ ಕುಸುಮಗಳು ಅರಳಿ ಕೆರಳಿ ನಗು ನಗುತ ನಲಿಯುತಿವೆ
ಹೊಂಗನಸಿನ ಬಯಕೆಗಳ ಮುತ್ತಾಗಿಸಬೇಕೆಂದಿದ್ದೆ ಅಧರದ ಕುಂಚದಿ

ಒಲವಿನ ಚೆಲುವ ಮಲ್ಲಿಗೆ ಬಿರಿದು ಗಮಗಮಿಸುತ್ತ ಪರಿಮಳಿಸುತ್ತಿದೆ
ಜಗದ ಜಂಜಡ ಮರೆತು ಮೈ ಮರೆಯಸಬೇಕೆಂದಿದ್ದೆ ಅದರದ ಕುಂಚದಿ

ಹಂಬಲದಾರುಟಿಗೆ ತುಂಬಿ ತುಳುಕುತ  ತಂಗಾಳಿ ಸೋಕಿ ತಂಪಾಗಿದೆ
ಬಯಸಿ ನಿಂತ ದೇಹದ ಭಾರವ ಇಳಿಸಬೇಕೆಂದಿದ್ದೆ ಅಧರದ ಕುಂಚದಿ

ಚಿತ್ತ ಚಿತ್ತಾರದಾಗ ಪ್ರೀತಿ ಕುಸುಮಗಳ ಸೊಭಗಿನ ಸೋಗು ತುಂಬಿದೆ
ಪ್ರೇಮಪತ್ರದಿ ಬರೆದಿಟ್ಟಕ್ಷರಗಳಿಗೆ ಮುತ್ತಿಡಬೇಕೆಂದಿದ್ದೆ ಅಧರದ ಕುಂಚದಿ

ಕೆಂಗುಲಾಬಿ ತೋಟದಾ ಚೆಲುವು ರಂಜಿಸಿ ರಂಗೇರಿ ಪರಿಮಳಿಸುತ್ತಿದೆ
ಬೆತ್ತಲಾದಾಸೆಗೆ ಚಿನ್ನದಂಗಿ ಹಾಕಿ ಬಳಸಬೇಕೆಂದಿದ್ದೆ ಅಧರದ ಕುಂಚದಿ

ತಿಳಿಗೊಳದ ತುಂಬ ಬಣ್ಣ ಬಣ್ಣದಾಸೆ ಮೀನು ಸುಳಿ ಸುಳಿದು ದನಿದಿದೆ
ಪ್ರೇಮತಾಪವೇರಿದ ತನು ಮಣಿಸಿ ತಣಿಸಬೇಕೆಂದಿದ್ದೆ ಅಧರದ ಕುಂಚದಿ

ಅನುಳ ವಿರಹವೇದನೆಯು ಗರಿಗೆದರಿ ಮಂಪರಿಸಿ ಕಂಗಾಲಾಗಿ ನಿಂತಿದೆ
ಮತ್ತೇರಿದ ಮದರಂಗಿ ಇಟ್ಟ ಮೈ ಮುದ್ದಿಸಬೇಕೆಂದಿದ್ದೆ ಅಧರದ ಕುಂಚದಿ

ಡಾ ಅನ್ನಪೂರ್ಣ ಹಿರೇಮಠ

—————————

.

About The Author

Leave a Reply

You cannot copy content of this page

Scroll to Top