ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯಾವ ಜನ್ಮದ ಶಾಪವೋ
ತಳಸಮುದಾಯದಲ್ಲಿ ಜನನವೊ
ಕತ್ತಲೆ ಕೂಪದಲ್ಲಿ ಜೀವನವು

ಮೌಡ್ಯೆತೆಯ ಅಂಧ ಭಕ್ತರು
ದೇವಿಗೆ ಹರಕೆ ಹೊರುವರು
ದೇವದಾಸಿಯಾಗಿ ಬಿಡುವರು

ಗುಡಿಯ ಅಂಗಳುಗಳಲ್ಲಿ
ತಮಟೆಯ ಸದ್ದುಗಳಿಗೆ
ಕುಣಿದು ರಂಜಿಸುವಳು ರಸಿಕರಿಗೆ

ಸತ್ತ   ಪ್ರಾಣಿ ಪಕ್ಷಿಗಳನ್ನು
ಕೊಕ್ಕಿ ತಿನ್ನುವ ರಣ ಹದ್ದುಗಳಂತೆ
ಕಿತ್ತು ತಿನ್ನುವರು ನಿತ್ಯ ಕಾಮುಕರು

ಒಮ್ಮೆ ಬಂದು ಅಪ್ಪಿಕೊಂಡವರು
ಮತ್ತೆ ತಿರುಗಿ ಬಾರದವರು
ಹುಟ್ಟಿದ ಮಕ್ಕಳಿಗೆ ಅಪ್ಪನ ಹೆಸರಾಗದವರು

ಬಡತನದ ಬಾಹು ಸಲಿಲವಲ್ಲ
ಮಕ್ಕಳ ನಾಳೆಯ ಕನಸುಗಳಿಗೆ ಬೆಳಕಿಲ್ಲ
ನೋವಿನ ಗೊಂಚಲ ಭಾರ ಮೈಯಲ್ಲ

ಕಷ್ಟದಲ್ಲಿ ಬೆಂದ ಗಟ್ಟಿ ಜೀವ
ಉರುಳನ್ನು ಜಾರಿ ಬದುಕಿ ಬಂದು
ಬೆಳಕು ಕಾಣುವ ಹಂಬಲ

ತೊಗಲಲಿ ದರಿದ್ರ ಮೌಡ್ಯೆತೆ
ಸಿಗಲಿ ಮಹಿಳೆಗೆ ಮಾನ್ಯತೆ
ಸಹಾನುಭೂತಿ ಬೇಕಿಲ್ಲ ಸಹಾಯಹಸ್ತ ನೀಡಿ
ಆಗತಾನೆ ಜನನಿ ತಾನು ಧನ್ಯಳಾದಳು


ಜಯದೇವಿ ಆರ್ ಯದಲಾಪೂರೆ 

About The Author

Leave a Reply

You cannot copy content of this page

Scroll to Top