ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿನ್ನೆದೆಯ ರಕ್ತವನೆ ಬೆವರಾಗಿ ಹರಿಸಿದವನು ನೀನು
ಲೋಕದ ಹೊಟ್ಟೆಯ ಹಸಿವು ನೀಗಿಸಿದವ ನೀನು

ಚಳಿ‌ ಮಳೆಗಳ ಲೆಕ್ಕಿಸದೆ ಬಿಸಿಲಲ್ಲಿ ಬಳಲಿದೆಯಲ್ಲ
ಬಂದಕಷ್ಟಗಳನೆಲ್ಲ ಒಬ್ಬನೆ ಉಂಡವನು ನೀನು

ಮಕ್ಕಳು ಬಂಧು ಬಾಂಧವರು ಎಲ್ಲರನೂ ಸಲಹಿದೆ
ಸಾಗರದ ಆಗಸದ ಆಳದ ಎದೆಯಂಥವನು ‌ನೀನು

ಬಿತ್ತಿದ ಬೀಜವನು ಬಂಜರು‌ಭೂಮಿ ನುಂಗಿದರೂ
ಹೆದರದೆ ದಿಟ್ಟತನದಿ ಅವಳೊಡನೆ ಏಗಿದವನು ನೀನು

ನಿನ್ನ ತುಳಿದವರು ನಿನ್ನಿಂದಲೇ ಬೆಳೆದು‌ ಮೇಲಾದರು
ಮೇಲೆರಿದವರ ನೋಡಿ ಕರುಬದೆ ಹರಸಿದವನು ನೀನು

ಬೆಳೆದ ಫಸಲಿಗೂ ಬೆಲೆ ಸೊಗದೆ ಮಾರುಕಟ್ಟೆಲಿ ಅನಾಥ
ಬಂದ ಸಂಪದವನೆಲ್ಲ ಕೈಚೆಲ್ಲಿ ಸುಮ್ಮನೆ ಬಂದವನು ನೀನು

ರಾಸಿ ರಾಸಿ ಸಂಕಟಗಳು ಹಾದಿಯ ಬದಿಯಲ್ಲಿ ಬಂದವು
ವಿಷವ ಕುಡಿದು ನಡೆದು ನಂಜುಂಡನಾದವನು ನೀನು


About The Author

Leave a Reply

You cannot copy content of this page

Scroll to Top