ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೇ ಮನುಜ ಬರಿದೇ ಬೀಗದಿರು ನೀನು
ಪ್ರತಿ ಅಣುಕಣವೂ ದೇವಲೀಲೆಯಲ್ಲವೇನು

ಕೆಸರೊಳಿದ್ದರೂ ತಾವರೆ ತಾನರಳಿ ನಗುವುದು
ಭಾಸ್ಕರನುದಯಕೆ ಧನ್ಯತೆಯಲ್ಲಿ ತಾ ಬಿರಿವುದು

ನೀಲಾಕಾಶದಿ ತೇಲಿ ನಗುವ ಮಳೆ ಮೇಘಗಳಿಗೆ
ಮುತ್ತು ಮಣಿಯಾಗಿ ಧರೆಗಿಳಿವುದೇ ಶುಭಘಳಿಗೆ

ಸುತ್ತಲೂ ಸುಗಂಧ ಪಸರಿಸಿ ನಗುವ ವನಸುಮಕೆ
ಬೇಕಿಲ್ಲ ಹೊಗಳಿಕೆ ಮನ ಮುದಗೊಳಿಸುವ ಕಾಯಕಕೆ

ಸಸ್ಯ ರಾಶಿಗೆ ಜೀವಕಳೆಯನಿತ್ತು ಕಡಲ ಸೇರುವ ನದಿಯದು
ಯಾರ ಪ್ರಶಂಸೆಯನೂ ತಾ ಅಪೇಕ್ಷಿಸದು

ಜಗದ ತಮವ ಕಳೆವ ನೇಸರ ನಿಗೆಲ್ಲಿದೆ ಬೇಸರ
ಬೆಳಗುವ ತಾ ಜೀವ ಕಳೆಯ ತುಂಬುತ ನಿತ್ಯ ನಿರಂತರ

ಮೂರು ದಿನದ ಬಾಳಿಗೆ ಹಮ್ಮು ಬಿಮ್ಮುಗಳೇಕೆ
ಕತ್ತಲೆಯಲಿ ಭರವಸೆಯನೀವ ದೀಪವಾಗಬಾರದೇಕೆ


About The Author

2 thoughts on “ಮಧುಮಾಲತಿ ರುದ್ರೇಶ್-ಬರಿದೇ ಬೀಗದಿರು”

  1. ತಮ್ಮ ಪ್ರೋತ್ಸಾಹಕ್ಕೆ ತುಂಬು ಧನ್ಯವಾದಗಳು. ಸಂಗಾತಿ ಬ್ಲಾಗ್ ಹೀಗೆ ಹೆಚ್ಚಿನ ಓದುಗರನ್ನು ಹೊಂದಿ ಯಶಸ್ಸು ಗಳಿಸಲೆಂದು ಆಶಿಸುತ್ತೆವೆ

Leave a Reply

You cannot copy content of this page

Scroll to Top