ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ಬಾಗೇಪಲ್ಲಿ

ಜೇನು ಸ್ಪುರಿಸುವ ಹುಣ್ಣಿಮೆ ಚಂದ್ರನಂತೆ ನೀನು ಕಣೇ
ಹಾಲ ಹೊಳೆ ಬೆಳೆದಿಂಗಳು ಹರಿಯುವಂತೆ ನೀನು ಕಣೇ

ತಿಂಗಳ ಮಾವನ ಹೊಲುವ ದುಂಡನೆ ಆಕಾರ ನಿನ್ನಮೊಗ
ನಕ್ಷತ್ರಾಧಿಪನಲಿ ಕಾಣ್ವ ಪುಟ್ಟ ಮೊಲದಂತೆ ನೀನು ಕಣೇ

ಶಶಿ ಕಿರಣದಷ್ಟೇ ಸಮಸೀತೋಷ್ಣ ನಿನ್ನ ಕಣ್ಣೋಟ
ನಿಶಾನಭಕೆ ಇಟ್ಟ ಚಂದಿರವಟ್ಟಂತೆ ನೀನು ಕಣೇ

ಜತನದಿಂದಿರು ತರುಣೀ ವೃಥಾ ನಗೆಯ ನೀ ಸೂಸಬೇಡ ಯಾರಿಗೂ
ಆದೀಯ ಶಾಪಗ್ರಸ್ಥೆ ಚೌತಿ ವಕ್ರಮನಂತೆ ನೀನು ಕಣೇ.

ಕೃಷ್ಣ ನ ಸಲಹೆ ಸದಾ ಪಾಲಿಸು ವಹಿಸಿ ಎಚ್ಚರವ
ನುಂಗಿದರೆ ರಾಹು! ಇರುವೆ ತಾರಾ ಪತಿಯಂತೆ ನೀನು ಕಣೇ.

——-

(ಚಂದಿರವಟ್ಟು: ಸಿಂಧೂರ)

About The Author

Leave a Reply

You cannot copy content of this page

Scroll to Top