ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಮಾಜಾನ್ ಮಸ್ಕಿ

ವಿಶಾಖದತ್ತ ಭುವನೇಶ್ವರಿಯ ಮಗನಾಗಿ ಹುಟ್ಟಿದರು ವಿವೇಕಾನಂದ
ಭಾರತೀಯ ಸಂಸ್ಕೃತಿಯ ವಿಶ್ವವಿಖ್ಯಾತಕ್ಕೆ ಮೆರಗಾದರು ವಿವೇಕಾನಂದ

ಚಿಕಾಗೋದಲ್ಲಿಯ ಭಾಷಣದಿ ವಿಶ್ವವನ್ನೇ ಬೆರಗುಗೊಳಿಸಿದರು
ಸಹೋದರತ್ವದ ಗುಣದಿ ವೀರಸನ್ಯಾಸಿಯಾಗಿ ಬೆಳೆದರು ವಿವೇಕಾನಂದ

ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಘರ್ಜಿಸಿ
ಯುವಕರ ಸೋಮಾರಿತನ ಬಡಿದು ಓಡಿಸಿದರು ವಿವೇಕಾನಂದ

ಜೀವ ನಮ್ಮ ಕೈಯ್ಯಲ್ಲಿ ಇಲ್ಲ ಜೀವನ ನಮ್ಮ ಕೈಯ್ಯಲ್ಲಿ ಇದೆ ಎಂದು ನಂಬಿ
ಮೂಢನಂಬಿಕೆ ಬಿಟ್ಟು ಜೀವನ ಮಾರ್ಗ ತೋರಿಸಿದರು ವಿವೇಕಾನಂದ

ಭಾರತ ನಿರ್ಮಾಣದ ಅದಮ್ಯ ಚೇತನ ಆದ್ಯಾತ್ಮಿಕತೆಯ ಮೇರು ಪರ್ವತ ಇವರು
ಮಾಜಾ ನರೇಂದ್ರರು ವಿಶ್ವ ಮಾನವ ಸಿಡಿಲ ಸಂತರಾಗಿ ಮಿಂಚಿದರು ವಿವೇಕಾನಂದ


About The Author

Leave a Reply

You cannot copy content of this page

Scroll to Top