ಡಾ. ನಟರಾಜ್ ಆರ್ಯ ಅವರ ಕವಿತೆ “ಅರಳಿಯ ನೆರಳು”
ಕಾವ್ಯ ಸಂಗಾತಿ ಡಾ. ನಟರಾಜ್ ಆರ್ಯ “ಅರಳಿಯ ನೆರಳು” ಬೆಟ್ಟ ಗುಡ್ಡದ ತೋಳಲಿಕೆರೆಯೂರ ಕೇರಿ;ಅರಳಿಯ ನೆರಳಲಿಊರು ಉಸಿರಾಡಿತು. ಕರುಗಳ ಮೊರೆ,ಒಲೆ ಹೊಗೆ,ಒನಕೆಯ ತಾಳಕೆಬೆಳಗು ಮೂಡಿತು. ಹುಟ್ಟು ಬಂದರೆಅರಳಿಯ ಕೆಳಗೆ;ಸಾವು ಬಂದರೂಅರಳಿಯ ಕೆಳಗೆ. “ಅರಳಿ ಕಡೀಬೇಡಯ್ಯ…ಒಳಗ ದೇವರಿರ್ತಾರೆ…”ಹಿರಿಯರ ನುಡಿಗಾಳಿಯಲಿ ತೇಲಿತು. ಹೊನ್ನಯ್ಯನ ಕೊಡಲಿಬೇರಿಗೆ ಇಳಿಯಿತು. ಕೊಂಬೆ ಮುರಿಯಿತು.ಗೂಡು ಉದುರಿತು.ಮರಿ ಬಿತ್ತು.ಊರು ಮೌನವಾಯಿತು. ತಾಯಿಹಕ್ಕಿ ಅತ್ತಿತು;ಗಾಳಿ ನಿಟ್ಟುಸಿರಿಟ್ಟಿತು;ಅರಳಿಯ ಎಲೆಗಳುಮಾತಿಲ್ಲದೆ ಉದುರಿದವು. ಅರಳಿ ಬಿದ್ದ ಮೇಲೆಬಿಸಿಲು ಹರಡಿತು;ಕೇರಿಯ ದಾರಿಯಲಿನೆರಳು ಕಳೆದುಹೋಯಿತು. ಹೂವಯ್ಯಕಣ್ಣು ಮುಚ್ಚಿದ. ಅರಳಿ ಬಿದ್ದ ಜಾಗದಲ್ಲಿಇಂದಿಗೂಗಾಳಿ ಬೀಸಿದರೆಮೌನ ಅಲುಗಾಡುತ್ತಿದೆ. ಡಾ. ನಟರಾಜ್ ಆರ್ಯ
ಡಾ. ನಟರಾಜ್ ಆರ್ಯ ಅವರ ಕವಿತೆ “ಅರಳಿಯ ನೆರಳು” Read Post »









