ಕಾವ್ಯ ಸಂಗಾತಿ ಮಧು ವಸ್ತ್ರದ “ನನ್ನತವರೂರು” ನನ್ನ ತವರೂರು ದಿವ್ಯ ಭವ್ಯ ಇತಿಹಾಸದ ಸುಂದರ ಚಿತ್ರದುರ್ಗಕೋಟೆ, ಕಣಿವೆ, ಕೊತ್ತಳಗಳಿಂದ ಆವೃತಭುವಿಯ ಮೇಲಿನ ಸ್ವರ್ಗ.. ಕಲ್ಲುಬಂಡೆಗಳ, ಗಂಡುಗಲಿಗಳು ಆಳಿದವೀರರ ನಾಡುಬಯಲುಸೀಮೆಯ ಬಿಸಿಲಿನಲೂ ತಂಪುನೀಡುವ ಬೀಡು.. ವೀರ ಮದಕರಿನಾಯಕರಾಳಿದ ಬಲಿಷ್ಠಉಕ್ಕಿನ ಕೋಟೆರಣಚಂಡಿ ಒನಕೆಓಬವ್ವ ರಕ್ಷಿಸಿದಳು ಆಡಿ ವೈರಿಗಳ ಬೇಟೆ ಮನ ಸೆಳೆವುದು ಇಲ್ಲಿನ ಆಡುಮಲ್ಲೇಶ್ವರ, ಚಂದ್ರವಳ್ಳಿಯ ತೋಟಅಪ್ರತಿಮವೆನಿಸುವುದು ಜೋಗಿಮಟ್ಟಿಯ ಮೇಲಿನ ರಮ್ಯನೋಟ.. ಮತ್ತೇರಿಸುವದು ಬೆಟ್ಟದ ಮೇಲಿನ ಕೆಂಡ ಸಂಪಿಗೆಯ ಕಂಪುಅದ್ಭುತವದು ಕಲ್ಲಿನ ತಣ್ಣೀರದೋಣಿಯಸಿಹಿನೀರ ತಂಪು.. ಉರುಮೆ, ತಮಟೆ, ಡೊಳ್ಳು, ಸೋಮ, ಮರಗಾಲಿನ ಕುಣಿತಬೇರೆಲ್ಲೂ ಕಾಣಸಿಗದು ಇಂತಹ ಅದ್ಭುತ ಜಾನಪದ ತುಡಿತ.. ಸಾಹಿತಿ ವೆಂಕಣ್ಣಯ್ಯ,ಕೃಷ್ಣಶರ್ಮ ತರಾಸು ಅವರಿಗೆ ಸರಿಸಾಟಿಯುಂಟೇಮನಗೆದ್ದ ಜನನಾಯಕ ನಿಜಲಿಂಗಪ್ಪನವರಅರಿಯದವರುಂಟೇ.. ವಿಷ್ಣು, ಅಂಬಿಯರಂಥ ನಟರತ್ನರನು ಚಿತ್ರರಂಗಕೆ ನೀಡಿದ ಹೆಮ್ಮೆದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲರಿಗೆ ಮರುಜನ್ಮವನಿತ್ತ ಹಿರಿಮೆ.. ಶಬ್ದಮಾಂತ್ರಿಕ ಬಿ ಎಲ್ ವೇಣು ದುರ್ಗದ ಕಥೆಯನಾಗಿಸಿಹರು ಜೀವಂತವೀರಭೂಮಿಯ ಗಂಧ ಪಸರಿಸಿಹ ಅವರಅದ್ಭುತ ಶೈಲಿ ಸದಾ ಜ್ವಲಂತ ಜೋಳದ ಮುದ್ದೆ ಸೊಪ್ಪಿನ ಸಾರು ಹಪ್ಪಳ ಉಪ್ಪಿನಕಾಯಿ ಊಟಪಂಚತಾರಾ ಹೋಟೆಲಿನಲೆಲ್ಲೂ ಸಿಗದಿಂಥಾ ಆತ್ಮೀಯ ಕೂಟ.. ನನ್ನ ತವರೂರು ದಿವ್ಯ ಭವ್ಯ ಇತಿಹಾಸದಸುಂದರ ಚಿತ್ರದುರ್ಗಕೋಟೆ, ಕಣಿವೆ, ಕೊತ್ತಳಗಳಿಂದ ಆವೃತಭುವಿಯ ಮೇಲಿನ ಸ್ವರ್ಗ.. ಮಧು ವಸ್ತ್ರದ್