ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಕೊಡಗು “ಹಾರಿತು ವಿಮಾನ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ ಕೊಡಗು “ಹಾರಿತು ವಿಮಾನ“ ನೆಲದಿಂದ ಮೇಲಕ್ಕೆಹಾರಿತು ವಿಮಾನ,ಹಕ್ಕಿಯಂತೆ ನಲಿದಿದೆ ನನ್ನಯ ಮನ.ಮೋಡಗಳ ನಡುವೆ ಸಾಗುವ ಈ ಪಯಣ,ಕಾಣದ ಲೋಕದ ಒಡನಾಟದ ನಯನ. ಕೆಳಗೆ ನೋಡಿದರೆ ಕಾಣದು ಗಡಿಗಳು,ಚಿಕ್ಕದಾಗಿ ಕಾಣುವವು ದೊಡ್ಡ ನದಿಗಳು.ಮನುಷ್ಯರ ಸೃಷ್ಟಿಯ ಈ ಅದ್ಭುತ ಯಾನ,ಬಾನಿನಂಚಿಗೆ ಮುಟ್ಟುವ ಸುಂದರ ಪಯಣ. ಬಿಳಿ ಮೋಡಗಳ ಹಾಸಿಗೆ ಮೈಯನ್ನು ತುಂಬಿ,ಕನಸಿನ ಲೋಕಕ್ಕೆ ಕರೆದೊಯ್ಯುವ ಹಾದಿ.ಗಾಳಿಯ ರಭಸದಲಿ ತೇಲುತ್ತಾ ಮುಂದೆ,ಮರೆಯಾಯಿತು ಎಲ್ಲ ಚಿಂತೆಯೂ ಒಂದೊಂದೇ  ಉಷಾರಾಣಿ ಗುರುಪ್ರಸಾದ್ ಕೊಡಗು

ಉಷಾರಾಣಿ ಗುರುಪ್ರಸಾದ್ ಕೊಡಗು “ಹಾರಿತು ವಿಮಾನ” Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ ಕವಿತೆ “ಯಾನ ಹೊರಟಾಗ…..”

ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಯಾನ ಹೊರಟಾಗ…..” ಮುಸ್ಸಂಜೆಗೊಂದುಬೆಳಗಿನ ಅವಸರಕ್ಕೊಂದುಹೊರಡುವ ಹಕ್ಕಿಗಳಸಾಲೊಂದು ಎಲ್ಲೋಹೊರಟಂತಿದೆಕಾಲದ ಅಳತೆಯೊಳಗೆಕಳೆದ ಸಮಯವಹುಡುಕಿ ಉಸಿರಿನಸಂಭ್ರಮಕ್ಕೆ ಚಿತ್ರ ಬರೆಯಲುದಾರಿಯಿರದ ದಾರಿಕಾಣದ ಹೆಜ್ಜೆಯ ಪಯಣನಭಕೆ ನಂಬಿಕೆ ಅಂಟಿಸಿಇಳೆಗೆ ಇಳಿವ ಕಾತರಮತ್ತೆ ಬದುಕಿನ ಸುತ್ತಅವಸರದ ಇಡುಗಂಟುಹಸಿವಿಗೆ ಅನ್ನದ ನಗುಮಣ್ಣೊಳಗೆ ಬೇರು ಬಿಟ್ಟಿದೆಭತ್ತವಾಗಲುಉಸಿರು ಉಳಿಸಲುನೆಲದ ಮಾತುಹಕ್ಕಿಗೆ ಗೊತ್ತುಗೂಡಿನ ಒಳಗೆಸಾಲು ಕಟ್ಟಿದ ಕನಸಿನಮೆರವಣಿಗೆಯ ಯಾನತಲುಪಿದ ಮೇಲೆತಿರುಗುವ ಗಡುವುಒಂದು ಪಯಣದ ಬದುಕುಸುಪ್ತ ನದಿಯಂತೆಹರಿದಷ್ಟು ಪರಿಶುದ್ಧತೆಮನದ ಬಿಂಬದ ಚಿತ್ರದಾರಿಯ ಹುಡುಕಬೇಕುಯಾನ ಹೊರಡಬೇಕು ನಾಗರಾಜ ಬಿ. ನಾಯ್ಕಹುಬ್ಬಣಗೇರಿ.ಕುಮಟಾ.

ನಾಗರಾಜ ಬಿ. ನಾಯ್ಕ ಕವಿತೆ “ಯಾನ ಹೊರಟಾಗ…..” Read Post »

ಕಾವ್ಯಯಾನ

ಅಮು ಭಾವಜೀವಿ ಮುಸ್ಟೂರು ಅವರ ಕವಿತೆ”ಕಾಡಿಸದಿರು”

ಕಾವ್ಯ ಸಂಗಾತಿ ಅಮು ಭಾವಜೀವಿ ಮುಸ್ಟೂರು “ಕಾಡಿಸದಿರು” ಕೊಳಲನೂದಿ ಕರೆವಾಗಕರಗಿ ಹೋದೆ ಮಾಧವಪ್ರೀತಿಯ ಕರೆಯ ತಿರಸ್ಕರಿಸಿಬಾಳಲು ಸಾಧ್ಯವ ನವಿಲು ಗರಿಯ ಹಿಡಿದು ಬಂದೆನಲ್ಮೆಯ ಗೋಪಾಲನಿಗಾಗಿಬೆಣ್ಣೆಯ ಮಡಿಕೆ ಹೊತ್ತು ತಂದೆಕಳ್ಳನಾದ ಆ ಕೃಷ್ಣನಿಗಾಗಿ ಬೃಂದಾವನದೊಳಗೆ ಅವಿತಅವನ ಹುಡುಕತ ಬಂದೆರಂಗಿನೋಕುಳಿ ಎರಚಿಮರೆಯಾದವನ ಒಲವಲಿ ನೆನೆದೆ ಎದೆಯ ಬಯಕೆಯ ಅರಿತವನಾದರೂಎಲ್ಲರೆದುರು ಮಗ್ಧನ ರೀತಿ ನಿಂತು ಸತಾಯಿಸಿಗೋಪಿಕೆಯರ ಜೊತೆ ಕಳೆದು ಹೋದಗೋವರ್ಧನನ ಗುರುತು ಹಿಡಿದೆ ಭ್ರಮಿಸಿ ಇನ್ನು ಕಾಡಿಸ ಬೇಡ ಮಾಧವವಿರಹದಲಿ ಬೆಂದು ಸೋತಿದೆ ಜೀವಆನಂದದ ಯಮುನೆಯಲಿ ಮೀಯಿಸುಜೀವಚೇತನವಾಗಿ ಕೈಹಿಡಿದು ಮುನ್ನಡೆಸು ಅಮು ಭಾವಜೀವಿ ಮುಸ್ಟೂರು

ಅಮು ಭಾವಜೀವಿ ಮುಸ್ಟೂರು ಅವರ ಕವಿತೆ”ಕಾಡಿಸದಿರು” Read Post »

ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ  ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ  ಗಜಲ್ ಹುಟ್ಟಿ ಬಂದಿಹೆ ನೀನು ಈ ಭುವಿಯಲಿಅನುಭವಿಸಲೆಲ್ಲವನು ಈ ಬದುಕಲಿ.. ಸುಖದ ಜೊತೆಗೆ ಸ್ವಲ್ಪ ದುಃಖವಿರಲಿಬೆಲ್ಲದ ಜೊತೆ ತುಸು ಬೇವು ಇರಲಿ.. ನೋವುನಲಿವುಗಳು ಕೂಡಿ ಬರಲಿಮೊಗದಿಎಂದೆಂದೂ ನಗುತುಂಬಿರಲಿ.. ಹಗಲು ಬರುವುದು ಇರುಳಸರಿಸುತಲಿದೀಪಬೆಳಗುವುದುತಿಮಿರದೂಡುತಲಿ.. ಸ್ನೇಹಪ್ರೀತಿಗಳು ಹೃದಯದೊಳಿರಲಿಕೋಪ ಅಸೂಯೆಎಲ್ಲ ಭಸ್ಮವಾಗಲಿ.. ಒಲವಝರಿಯೊಂದುಜಿನುಗುತಿರಲಿಮನದೊಳೆಂದೂ ಅದು ಚಿಮ್ಮುತಿರಲಿ..  *ಇರುವಂತೆ ಇರಬೇಕು* ದೇವನೊಲುಮೆಯಲಿಬಾಳಿಗದು ಭದ್ರತೆ ನಿನಗೆ ನೆನಪಿರಲಿ.. ಜಗದ ಟೀಕೆಗಳ ನೀ  ಮರೆಯುತಿರಲಿಏನೇ ಆದರೂ ಎಂದೂ  ಹೂ ಮನವಿರಲಿ…! ಹಮೀದಾ ಬೇಗಂ ದೇಸಾಯಿ 

ಹಮೀದಾ ಬೇಗಂ ದೇಸಾಯಿ  ಅವರ ಗಜಲ್ Read Post »

ಕಾವ್ಯಯಾನ

ನಿರಂಜನ ನಾಯಕ ಕವಿತೆ “ಅನುಭವಿ ಮೇಷ್ಟ್ರು”

ಕಾವ್ಯ ಸಂಗಾತಿ ನಿರಂಜನ ನಾಯಕ “ಅನುಭವಿ ಮೇಷ್ಟ್ರು” ಒಮ್ಮೆ ಕಣ್ಣೀರಿಟ್ಟಿದ್ದರುಆ ಒಳ್ಳೆಯ ಮೇಷ್ಟ್ರು—ಪಾಠಕ್ಕೆ ತಡೆಯೊಡ್ಡಿ,ಸದಾ ರಂಪ ಮಾಡುತ್ತಿದ್ದಮಕ್ಕಳ ರಗಳೆಗೆ ಬೇಸತ್ತು… ದಿನಗಳು ಉರುಳಿದವು,ಮಕ್ಕಳ ಪಡೆ ಬದಲಾಯಿತು;ಬಂದ ಹೊಸಬರಂತೂಹಳೆಯವರಿಗಿಂತ ಒಂದು ಕೈ ತಂಟೆಕೋರರೇ!ಆದರೂ ಈ ಬಾರಿಮೇಷ್ಟ್ರು ನಗುತ್ತಲೇ ಪಾಠ ಮಾಡಿದರು,ತಮ್ಮ ಮುಂದಿರುವುದುಮಹಾ ಪಟಿಂಗರೆಂಬಅರಿವೇ ಇಲ್ಲದೇ… ಯಾವ ಕಣ್ಣೀರು ಅಂದು ಅವರನ್ನು ಕುಗ್ಗಿಸಿತ್ತೋ,ಅದೇ ಇಂದು ಅವರ ಆತ್ಮಬಲವಾಗಿತ್ತು!ಅಂದು ಬೆಟ್ಟದಂತಿದ್ದ ಅಡಚಣೆ,ಇಂದು ಅವರ ಬೋಧನೆಯ ಸಹಜ ರಾಗವಾಗಿತ್ತು. ಗಲಿಬಿಲಿಯ ಪ್ರತಿ ತರಗತಿಯೂ,ಸಾಟಿಯಿಲ್ಲದ ಪ್ರತಿ ತುಂಟ ಮಗುವೂ—ಅವರ ಭಾವಗಳ ಹದಗೊಳಿಸಿದವು,ಕಾಲದ ಜೊತೆ ಬೆಳೆಸಿದವು.ಅವರು ಒಳಗೂ ಬೆಳೆದರು, ಹೊರಗೂ ಮಾಗಿದರು—ಏಕೆಂದರೆ,ಅವರು ಕಲಿಸಿದ ಪ್ರತಿ ಮಗುವೂಅವರಿಗೊಂದು ಹೊಸ ಪಾಠ ಕಲಿಸಿತ್ತು;‘ಬೋಧಿಸುವುದೆಂದರೆ ತಿದ್ದುವುದಲ್ಲ, ತಾಳ್ಮೆಯಿಂದ ಕಲಿಯುವುದು’ ಎಂದು. ನಿರಂಜನ ನಾಯಕ

ನಿರಂಜನ ನಾಯಕ ಕವಿತೆ “ಅನುಭವಿ ಮೇಷ್ಟ್ರು” Read Post »

ಕಾವ್ಯಯಾನ, ಗಝಲ್

 ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್

ಕಾವ್ಯ ಸಂಗಾತಿ  ಡಾ. ಶ್ರೀಶೈಲ ಮಾದಣ್ಣವರ ಗಜಲ್ ಎತ್ತ ನೋಡಿದತ್ತ ಕತ್ತಲು ಬೀಗುತಿದೆ ಸಾಕಿಸೂರ್ಯೋದಯ ಯಾವಾಗಮತಿ ಭ್ರಮಣೆಗೆ ಚಿತ್ತ ವಿಕಾರವಾಗುತಿದೆ ಸಾಕಿನವೋದಯ ಯಾವಾಗ ಕದ್ದೂ ಕಾಣದಿರುವ ಮುದ್ದು ಮುಖಗಳನುಒದ್ದು ಹೊರ ತರುತಿಹರುಸಜ್ಜನರ ಮುಖವಾಡ ಬಯಲಾಗುತಿದೆ ಸಾಕಿ,ಶುದ್ಧೋದಯ ಯಾವಾಗ ಅತಂತ್ರ ಜೀವನದಲಿ ಯಾಂತ್ರಿಕ ಬದುಕಿನತ್ತನಡೆದಿದೆ ಜಗತ್ತುಮನದಿ ಬೆಳದಿಂಗಳು ಮರೆಯಾಗುತಿದೆ ಸಾಕಿಚಂದ್ರೋದಯ ಯಾವಾಗ ದುಶ್ಚಟಕೆ ದಾಸರಾಗಿ ದುರ್ಜನರ ಸಂಗಕೆಸಾಯುತಿವೆ ಎಳೆ ಮನಗಳುಹೂವಿನಂತ ಬದುಕು ಹಾಳಾಗುತಿದೆ ಸಾಕಿಶುಭೋದಯ ಯಾವಾಗ ಕನಸು ಹುಗಿದರು, ಮನಸು ಹುಗಿದರು, ಈಗಮನುಜತೆಯನೂ ಹುಗಿದರುಪ್ರೀತಿ ಸಿಗದೆ ಹೃದಯ ಘಾಸಿಯಾಗುತಿದೆ  ಸಾಕಿಭಾಗ್ಯೋದಯ ಯಾವಾಗ  ಡಾ. ಶ್ರೀಶೈಲ ಮಾದಣ್ಣವರ

 ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್ Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ “ಹಸಿರು ಮಂದಿರ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಹಸಿರು ಮಂದಿರ” ಹಸಿರಿನ ಹೊದಿಕೆ ಹೊದ್ದ ಪವಿತ್ರ ಮಂದಿರ,ಜ್ಞಾನದ ಜ್ಯೋತಿ ಬೆಳಗುವ ಸರಕಾರಿ ಶಾಲೆ;ಸುಣ್ಣದ ಬಿಳಿಯ ಗೋಡೆಗಳ ನಗು,ನೋಡುವ ಮನದಲಿ ಅರಳಿಸುವ ಹೂವಿನ ಮಾಲೆ// ಶಾಲೆಯ ಆವರಣ ಹಚ್ಚಹಸಿರಾಗಿ,ಗಿಡಮರಗಳು ಕೈಬೀಸಿ ಸ್ವಾಗತಿಸುತಿವೆ;ತಂಗಾಳಿಯ ತಂಪಿನಲಿ ಹಕ್ಕಿಗಳ ಗಾಯನ,ಕಲಿಕೆಯ ದಾರಿಯಲಿ ಕನಸು ಬಿತ್ತುತ್ತಿವೆ// ಎಡಬಲ ಹಸಿರಿನ ಸಾಲುಗಳ ನಡುವೆ,ಪ್ರಕೃತಿಯೇ ಪಾಠ ಹೇಳುವ ಗುರುವಾಗುತಿದೆ;ಸ್ವಚ್ಛತೆ, ಶಿಸ್ತು, ಸಮಯದ ಮೌಲ್ಯ,ಪ್ರತಿ ಹೆಜ್ಜೆಯಲಿ ಬದುಕಿನ ಬೆಳಕಾಗುತಿದೆ// ಮಕ್ಕಳ ದಾಹ ತಣಿಸುವ ಶುದ್ಧ ನೀರಿನ ತೊರೆ,ಆರೋಗ್ಯದ ಅರಿವು ಬೆಳೆಸುವ ಅಕ್ಕರೆಯ ಸ್ಪರ್ಶ;ಹಸಿ–ಒಣ ಕಸದ ವಿಂಗಡಣೆಯ ಪಾಠ,ಪರಿಸರ ಪ್ರೀತಿಯ ಬದುಕಿನ ಆದರ್ಶ// ಸಾವಿತ್ರಿಬಾಯಿ ಫುಲೆ ವೇದಿಕೆಯ ಸೊಬಗು,ಜ್ಞಾನದ ದೀಪವನು ಹೊತ್ತ ಮಹಿಮೆಯ ಸಂಕೇತ;ಅದನು ನೋಡುವ ಎರಡು ಕಣ್ಣು ಸಾಲದೆ,ಮನದಲಿ ಮೂಡುತ್ತದೆ ಭವಿಷ್ಯದ ಸುಂದರ ಚಿತ್ರ// ಶಿಕ್ಷಕಿಯ ಉದಾತ್ತ ಚಿಂತನೆ, ದೂರದೃಷ್ಟಿ,ಮಕ್ಕಳ ಏಳಿಗೆಗೆ ಅಕ್ಷಯ ತಪಸ್ಸಾಗಿದೆ;ತಾಯಿಯ ಮಮತೆಯಲಿ ಜ್ಞಾನವನುಣಿಸುವ,ಸೇವೆಯ ಬದುಕು ಸಾರ್ಥಕತೆಯಾಗಿದೆ//  ಇದು ಶಾಲೆಯಲ್ಲ ಹಸಿರು ದೇವಾಲಯ,ಇದು  ಕೋಣೆಗಳು  ಕನಸುಗಳ ನೆಲೆ;ಇಲ್ಲಿಂದ ಹೊರಡುವ ಪ್ರತಿಯೊಂದು ಮಗು,ನಾಡಿನ ಭವಿಷ್ಯವ ಬೆಳಗಿಸುವ ದಿವ್ಯ ಕಿರಣ// ಹಸಿರು ಉಳಿಯಲಿ, ಶಿಕ್ಷಣ ಅರಳಲಿ,ಸಾವಿತ್ರಿಯ ಕನಸು ಸದಾ ಚಿಗುರಲಿ;ಇಂತಹ ಹಸಿರು ಮಂದಿರಗಳು ಎಲ್ಲೆಡೆ ಬೆಳೆಯಲಿ,ಜ್ಞಾನ ಭಾರತವು ಹಸಿರಾಗಿ ನಗುತಿರಲಿ  ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಅವರ “ಹಸಿರು ಮಂದಿರ” Read Post »

ಕಾವ್ಯಯಾನ

ಅನ್ನಪೂರ್ಣ ಪದ್ಮಸಾಲಿ ಅವರ ಕವಿತೆ “ಹೂವು ಮತ್ತು ಕದನ”

ಕಾವ್ಯ ಸಂಗಾತಿ ಅನ್ನಪೂರ್ಣ ಪದ್ಮಸಾಲಿ “ಹೂವು ಮತ್ತು ಕದನ” ಹೂವುಕಂಡಾಗ ನದಿಯ ನೀರಿನೊಡನೆಈಜಾಡಿದ ಹಾಗೆಕದನಕಂಡಾಗ ಬೆಂಕಿಯೊಡನೆಕಾದಾಡಿದ ಹಾಗೆಪರಿಹಾರ ಕಾಣದ ತಂಪು – ಬಿಸಿಕದನವಿದು ಖಾಲಿ ಖಾಲಿ ಇದ್ದಂತೆಇಬ್ಬರಲ್ಲೂ ….ಗೆದ್ದವರು ಸೋತ ಹಾಗೆ!ಸೋತವರು ಸತ್ತ ಹಾಗೆ! ಹೂವಿನಂತಹ ಬದುಕಿನೊಡನೆಇರುವಷ್ಟು ಹೊತ್ತು ಬಾಗಿಕೊಂಡ ಹಾಗೆಬದುಕಿದರೆ.. ಹೀಗೆಆಹಾ! ಎನುವ ವಿಸ್ಮಯದ ಹೂವುಕೊಲುವವನ ಕೈಯಲ್ಲಿಇಬ್ಬರೂತಮ್ಮ ಕ್ರೂರತೆಯನ್ನುಮರೆತುನೋಡುವ ಚುಂಬಕದ ರೇವು ಆದಾಗ್ಯೂಗುಂಡುಗಳ ಸುರಿಮಳೆಯಲ್ಲಿನೆತ್ತರಿನ ಮಡುವಲ್ಲಿಲಾಭ – ನಷ್ಟಗಳ ಲೆಕ್ಕಾಚಾರವೆಲ್ಲಿ?ಗೊತ್ತುಂಟೆ….ಕ್ಷಣಕ್ಷಣಕ್ಕೂ ವಿಸ್ತರಿಸುವ ವಿಶ್ವದನಿತ್ಯ ಅನಂತ ಅವಿರ್ಭಾವದಚಿರನೂತನತೆಯ ಬ್ರಹ್ಮಾಂಡದ ಕೊನೆಯತನಕಬದುಕುವಹಂಬಲದಿಂದ ನಡೆಯುವ ನವನವೀನ ಕದನಗಳುಗಂಭೀರ ವಿಚಾರಗಳುವಾದವಿವಾದಗಳು ತರ್ಕ ವಿತರ್ಕಗಳುಹೂವು, ನೋವು, ನಲಿವುಗಳ ಶಿಲಾಶಾಸನಕಾಲ ವಿಶ್ರಮಿಸಿಕೊಳ್ಳಲು ಉಳಿಸಿದಒಂದು ಹಳೆಯ ಆಸನ ಈ ಕದನಗಳುಯುಗ ಯುಗಗಳ ಬಯಲಾಟಕೃತದಿಂದ ಕಲಿಯವರೆಗೆಜೀವದ ಹೂವುಗಳು ಪಾಠ ಕಲಿಯುವವರೆಗೆ..!!ನಡೆಯುತ್ತಲೇ ಇರುತ್ತವೆಯೇ…?! ಅನ್ನಪೂರ್ಣ ಪದ್ಮಸಾಲಿಕೊಪ್ಪಳ

ಅನ್ನಪೂರ್ಣ ಪದ್ಮಸಾಲಿ ಅವರ ಕವಿತೆ “ಹೂವು ಮತ್ತು ಕದನ” Read Post »

ಕಾವ್ಯಯಾನ

ತ್ಯಾಗರಾಜು.ಎನ್ ಅವರ ಕವಿತೆ “ನಾ ಮೀಸಲು”

ಕಾವ್ಯ ಸಂಗಾತಿ ತ್ಯಾಗರಾಜು.ಎನ್ “ನಾ ಮೀಸಲು“ ನೀ ಬಾ,ಬಾರದಿರು ಎನ್ನ ನೋಡಲುಎಂದೆಂದೂ ನೀನಿರುವೆ ಎನ್ಮನದಲಿ.ನೀ ಕಾದರೂ ಕಾಯದಿದ್ದರೂ,ಎನ್ಮನ ಕಾಯುತಿರುವುದು ಎಂದೆಂದಿಗೂ,ನಿನ್ನಗಲಿಕೆಯ ಮಧುರ ನೋವ ಮೀಯುತ,ನೀ ಅಂದು ಕೊಟ್ಟ ಸಿಹಿ ನೆನಪುಗಳ ಸವಿಯುತ.ನೀ ಎಂದು ಬರುವೆಯೋ ನಾ ಕಾಣೆ,ಬಂದು ಬರದಂತೆ ಹೊರಡುವುದೂ ನಾ ಮಾಣೆ,ನಾ ಬಲ್ಲೆನಾದರೂ ಕಾಯುವೆನುನಿನ್ನ ಬಿಸಿಯುಸಿರ ಔತಣಕೆ,ಬಿಸಿಯ ಕಾವುಗಳನೆಲ್ಲ ಸರಿಸಿಹಸಿಹಸಿದು ಕಾದಿರುವೆ.ನಿನ್ನೊಳಗಿನಂತರಾಳವ ಅರಿತೂಅರಸಿರುವೆ ಬಯಸಿರುವೆ.ಎನ್ಮನದೊಡೆಯ ಎನ್ಮವ ಅರಿವೆಯಾ,ಎನ್ನೊಡಲ ಸೇರುವಿಯೆಂದುಕಾದಿಹುದೀ ಮಡಿಲು.ನಿನ್ನ ತಲೆಯ ನೇವರಿಸಿಸರಿಸಿ ಎಲ್ಲ ನೋವುಗಳಅಪ್ಪಿಕೊಳಲರಸಿಹುದು.ಎಂದು ಬರುವೆಯೋ ಕಾಣೆಬರದೆ ಹೋಗುವುದೂ ಮಾಣೆನೀ ಬಂದರೂ ಬರದಿದ್ದರೂನಾ, ನನ್ನೊಳಗಿನ ಎಲ್ಲ ಭಾವಗಳೂಮೀಸಲು ನಿನಗೇ ಎಂದೆಂದಿಗೂ. ತ್ಯಾಗರಾಜು.ಎನ್

ತ್ಯಾಗರಾಜು.ಎನ್ ಅವರ ಕವಿತೆ “ನಾ ಮೀಸಲು” Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಬೆಳಗಾವಿ ಗಜಲ್ ಸುಂದರ ಬಾಳಿಗೆ ಅಂದ ಅನುಭೂತಿಯೇ ಗೆಳೆತನಹಸಿರು ಹಂದರ ಹಾಕಿ ತಂಪೆರೆಯುವುದೇ ಗೆಳೆತನ ಕರೆಯದೆ ಬರುವ ನಿಜ ಆಪತ್ಬಾಂಧವನಿವನುಪ್ರತಿಕ್ಷಣಗಳಲಿ ಜೊತೆಯಲಿ ಇರುವುದೇ ಗೆಳೆತನ ನಡೆದ ಹಾದಿ ಬದಲಾಗಲುಬಹುದು ಬಾಳಿನಲಿಎಂದೂ ಬದಲಾಗದೆ ಉಳಿಯುವುದೇ ಗೆಳೆತನ ನಗುವಿನಲಿ ಅಳುವಿನಲಿ ಮೌನದಲೂ ಜೊತೆಗೆದೂರದಲ್ಲಿದ್ದರೂ ಮನವನಾಳುವುದೇ ಗೆಳೆತನ ಬಾಳ ದಾರಿಗಳು ಬಲು ದುಸ್ತರವಾಗಿವೆ ಸಾಕಿ,ಗುರುಗುಟ್ಟದೆ ಹೆಜ್ಜೆಗುರುತಾಗಿರುವುದೇ ಗೆಳೆತನ ಅಂಟೆ ತಂಟೆಗಳಿಲ್ಲದ ಪ್ರಾಮಾಣಿಕ ಹೃದಯಒಂಟಿತನವ ಕುಂತು ನೀಗಿಸುವುದೇ ಗೆಳೆತನ ನೋವಿನಲೂ ನವಿರಾದ ಭಾವಗಳ ಸಂಗಾತಿನಲಿವಿನ ಸವಿ ಸುಧೆ ಸುರಿಸುವುದೇ ಗೆಳೆತನ ಗೆಳೆತನಕ್ಕೆ ಒಂದು ದಿನವಿರಬಹುದು ವರುಷದಿಹಗಲಿರುಳೂ ನಿತ್ಯ ಹಸಿರಾಗಿರುವುದೇ ಗೆಳೆತನ ಜ್ಯೋತಿಯ ನೋವುಗಳಿಗೆ ಮದ್ದಿನ ಬರವಿಲ್ಲಮಂದ ಬೆಳಕಿರಲಿ ಸದಾ ಬೆಳಗುವುದೇ ಗೆಳೆತನ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

You cannot copy content of this page

Scroll to Top