ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ ಗಜಲ್ ಅತಿಯಾದ ನಂಬಿಕೆಗೆ *ದ್ರೋಹವಾಗಿದೆ* ಸಖ ನನ್ನವರಿಂದ ನನಗೀಗ *ಮೋಸವಾಗಿದೆ* ಸಖ ಅತಿಯಾದರೆ ಅಮೃತವು ವಿಷವಾಗುವುದಲ್ಲವೇಬಣ್ಣದ ಮಾತುಗಳಿಗೆ ಬೆಲೆ *ಹೆಚ್ಚಾಗಿದೆ* ಸಖ ಕಣ್ಣೀರ ಹನಿಗಳು ಜಾರುತಿವೆ ಪ್ರತಿದಿನ ನೊಂದುಪ್ರಖರ ಸೂರ್ಯಂಗೀಗ ಗ್ರಹಣ *ಹಿಡಿದಿದೆ* ಸಖ  ಬೆನ್ನಿಗೆ ಚೂರಿ ಹಾಕುವವರೇ ಕಾಣುತಿಹರು ಇಲ್ಲಿನಂಬಿಕೆಯ ಗೋಪುರವು *ಕುಸಿಯುತಿದೆ* ಸಖ  ಈ ರೇಖೂ ಎದೆಗುಂದದೆ ಮುಂದೆ  ಸಾಗುತಿಹಳುನಮ್ರ ನಡೆಯ ಅಗ್ನಿ ಪರೀಕ್ಷೆ *ನಡೆಯುತ್ತಿದೆ* ಸಖ ಡಾ.ರೇಖಾ ಉದಯ 

ಡಾ.ರೇಖಾ ಉದಯ ಅವರ ಗಜಲ್ Read Post »

ಕಾವ್ಯಯಾನ

ಸಂಧ್ಯಾ ರಾಯ್ಕರ ಅವರ ಕವಿತೆ, “ಯುದ್ದ ಬೇಕೇಕೆ”

ಕಾವ್ಯ ಸಂಗಾತಿ ಸಂಧ್ಯಾ ರಾಯ್ಕರ “ಯುದ್ದ ಬೇಕೇಕೆ” ಮನುಜ… ಎಚ್ಚೆತ್ತುಕೋ ವಿನಾಶದತ್ತ ಸಾಗುವ ಮುನ್ನ …ಎಲ್ಲೋ ಹಚ್ಚಿದ ಬೆಂಕಿಯ ಕಾವು ನಿನ್ನ ಸುಡುವ ಮುನ್ನ…ಅದೆಷ್ಟೋ ಜೀವಗಳು ಹೆಣವಾದವು ಕಾಲ ಕಸದಂತೆ…. ತಮ್ಮವರ ಕಳೆದುಕೊಂಡು ಅನಾಥರಾದರು ,ಜೀವ ಇದ್ದು ಇಲ್ಲದಂತೆ…ಸಾಮ್ರಾಜ್ಯ ಕಟ್ಟುವ ನಿನ್ನಾಸೆಗೆ ಮನುಜ ಕುಲದ ವಿನಾಶವೇ…… ಅಲೆಕ್ಸಾಂಡರ್ ನ ಕೊನೆಯ ಸಂದೇಶ ಮರೆತೆಯ …ವಿಶ್ವವನೇ ಗೆದ್ದರೂ ಹೋಗುವೆ  ನೀ ಬರಿ ಕೈಯಲ್ಲಿ…ಸುಧಾರಿಸಿಕೋ …ಬೆಂದು ಹೋಗದಿರು ನೀನು ಈ ತೈಲದ  ಕೂಪದಲ್ಲಿ…….ಇಂದಿರುವವನು ನಾಳೆ ಇಲ್ಲ ಎಂಬಂತಿರುವಾಗ ಯುದ್ಧದ ರಣ ಕಹಳೆಯ ಅನಿವಾರ್ಯತೆ ಏಕೆ…… ..ನಾಲ್ಕು ದಿನದ ಈ ಬದುಕಿನಲ್ಲಿ ಪ್ರೀತಿಯ ಗೋಡೆಯನೇ ಕಟ್ಟಬಾರದೇ…..

ಸಂಧ್ಯಾ ರಾಯ್ಕರ ಅವರ ಕವಿತೆ, “ಯುದ್ದ ಬೇಕೇಕೆ” Read Post »

ಕಾವ್ಯಯಾನ

ದಿವ್ಯ ಎಂ ಅವರ ಕವಿತೆ  “ಒಡೆದ ಕನ್ನಡಿಯೊಳಗಿನ ಮಾತು”

ಕಾವ್ಯ ಸಂಗಾತಿ ದಿವ್ಯ ಎಂ “ಒಡೆದ ಕನ್ನಡಿಯೊಳಗಿನ ಮಾತು” ತಪ್ಪು ನನ್ನದ ಅಥವಾ ನಿನ್ನದಾಇಲ್ಲಿ ನನಗೆ ಉತ್ತರವೇ ಸಿಗಲಿಲ್ಲ !ಹೋದವನು ನೀನಾ ಅಥವಾ ಕಳಿಸಿದವಳು ನಾನಾ..!ಇಲ್ಲಿ ನನಗೆ ಸ್ಪಷ್ಟತೆಯೇ ಸಿಗಲಿಲ್ಲ ! ಬಹುಶಃ ಮತ್ತಾರು ನನ್ನನ್ನುನಿನ್ನಷ್ಟು ಅರ್ಥಮಾಡಿಕೊಳ್ಳಲಾರರುಹಾಗೆ  ಮತ್ಯಾರು ನಿನ್ನನ್ನುನನ್ನಷ್ಟು ಪ್ರೇಮಿಸಲಾರರು..! ಅಳಲಾರದಷ್ಟು ನಗಿಸಿದವನೇಮತ್ತೆಂದೂ ನಗಲಾರದಂತೆ ಅಳಿಸಿಬಿಟ್ಟಅಂಗಲಾಚಿ ಬೇಡಿದೆಕೊನೆಗೆ ಅಸಹಾಯಕತೆಯ ನೋಟದಲ್ಲಿ ನಿನ್ನತ್ತ ತಿರುಗಿದೆ..! ಆದರೆ ನೀನುಅರಿವಿಗೆ ಬಾರದ ಜಾಣನಂತೆ ಮತ್ಯಾರಿಗೋ ಪ್ರೇಮಧಾರೆ ಎರೆಯುತ್ತಾ ಮತ್ಯಾರದೋ ಕೈ ಹಿಡಿದು ನಡೆಯುತ್ತಾ ಸಾಗಿಬಿಟ್ಟೆ..! ನಿನಗೆ ನನ್ನಿಂದ ದೂರವಾಗುವ ಇರಾದೆಯೊಂದು ನಿನ್ನೆದೆಯಲ್ಲಿ ಇದಿದ್ದೆ ಆದರೆನಾವು ಬೇರೇನಾದರೂ ದಾರಿಯೊಂದನ್ನು ಹುಡುಕಬಹುದಿತ್ತೇನೋನಮ್ಮನ್ನು ನಾವು ಉಳಿಸಿಕೊಳ್ಳಬಹುದಿತ್ತೇನೋ,ಬೇರಾಗಿ ನಡೆಯಬೇಕಿರೋ ಈ ಕವಲುದಾರಿಗಳ ಬದಲಾಗಿಏಳು ಬೀಳುಗಳೊಂದಿಗೆಒಬ್ಬರನ್ನೊಬ್ಬರು ಕೈ ಹಿಡಿದು ಸಾಗುವ ಗೆಳೆಯರಾಗಬಹುದಿತ್ತುಕಡೆ ತನಕ ನಮ್ಮನ್ನು ನಾವು ಉಳಿಸಿಕೊಳ್ಳಬಹುದಿತ್ತುಯಾವುದಾದರೂ ಒಂದುಮನುಷ್ಯತ್ವದ ರೂಪದಲ್ಲಿ..! ಆದರೂ ಕಾಲ ಮಿಂಚಿ ಹೋಗಿದೆಪ್ರತಿ ಹನಿಯೂ ಕಣ್ಣಿನಿಂದ ಜಾರುವಾಗ ಸುಮ್ಮನೆ ಯೋಚಿಸುತ್ತೇನೆ!ನನ್ನ ನೆನಪುಗಳು ಸಹ ಕಾಡಬಹುದೇ ನಿನ್ನನ್ನು?ನಿನ್ನ ನೆನಪುಗಳು ನನ್ನನ್ನು ಕಾಡುವಷ್ಟೇ ಕಠೋರವಾಗಿ?ಅನ್ನ ನೀರು ನಿದ್ರೆಗಳ ತೊರೆಸಿ, ಹಗಲು ಇರುಳುಗಳ ವ್ಯತ್ಯಾಸವಿರದಂತೆನಿನ್ನ ನೆನಪುಗಳು ನನ್ನನ್ನು ಆವರಿಸಿರುವಷ್ಟೇ ಕ್ರೂರವಾಗಿ ?ಕಾಡಬಹುದೇ ನಿನ್ನನ್ನು ಆ ನನ್ನ ನೆನಪುಗಳು ? ಬಹುಶಃ ನನ್ನ ತಿಳಿಯಾದ ಪ್ರೇಮನಿನ್ನೆದೆಯಲ್ಲಿ ಆಳವಾದ ನೆನಪುಗಳನ್ನು ನೆಟ್ಟಿರಲಿಕ್ಕಿಲ್ಲಆದರೆ ನನ್ನ ಪಾಡು ಹಾಗಿಲ್ಲ ನೋಡು.! ಈ ಅತಿಯಾದ ಪ್ರೇಮ ನನ್ನೊಳಗೊಂದು ಆಲದಮರವನ್ನೇ ಬಿತ್ತಿ ನೀರೆರೆದಿದೆಅಲ್ಲಿ ಮತ್ಯಾರದೋ ಅಪ್ಪುಗೆಯೊಂದರಲ್ಲಿ ನೀನು ಬೆಚ್ಚಗಿರಬಹುದುಆದರೆ ನಿತ್ಯ ನನಗಿಲ್ಲಿ ನಿನ್ನ ನೆನಪುಗಳದ್ದೇ ಧ್ಯಾನ ! ಬಿಡುವಾದರೆನೀನೊಮ್ಮೆ ಇಲ್ಲಿ ಬಂದು ನೋಡಬಾರದೇಕೆ?ನನ್ನನೊಮ್ಮೆ ಚುಂಬಿಸಿ ಚಿವುಟಬಾರದೇಕೆ?ನನ್ನನೊಮ್ಮೆ ಆಲಂಗಿಸಿ ಪೂರ್ತಿಯಾಗಿ ಅಳಿಸಬಾರದೇಕೆ?ನನ್ನನೊಮ್ಮೆ ಸುತ್ತಿಸಿ ಸಂತೈಸಬಾರದೇಕೆ?ಮತ್ತೆಂದೂ ಕಾಡದಂತೆಈ ನೋವನು ಕೊನೆಯಾಗಿಸಬಾರದೇಕೆ?ನಿನ್ನೆಲ್ಲಾ ನೆನಪುಗಳನ್ನು ನೀನೇ ಹೊತ್ತಿ ಹೋಗಬಾರದೇಕೆ ?ಬಿಡಿಸಲಾಗದ ಒಗಟಿನ ಪ್ರಶ್ನೆಗಳು ಬಿಡು..! ನಿನ್ನನ್ನು ಪ್ರೇಮಿಸುವುದನ್ನಷ್ಟೇ ಕಲಿತ ನಾನುದ್ವೇಷಿಸುವುದನ್ನು,ದೂಷಿಸುವುದನ್ನೂಕೊನೆ ಪಕ್ಷ ಮರೆಯುವುದನ್ನು ಕೂಡ ಕಲಿಯಲಾಗಲೇ ಇಲ್ಲ..! ಹೋಗಲಿ ನಿನ್ನ ತೊರೆಯುವುದನ್ನಾದರೂ ಕಲಿಯಬೇಕಿತ್ತು ಎಂದುಕೊಂಡೆ..!ನಿನ್ನ ಪ್ರೇಮ ಪಂಜರದಲ್ಲಿರೆಕ್ಕೆ ಮುರಿದುಕೊಂಡುವೇದನೆಯಲ್ಲಿ ನರಳುತ್ತಿರುವಹಕ್ಕಿಯಂತಾದ ನನಗೆನಿನ್ನ ನೆನಪುಗಳ ಗರಿ ಬಿಚ್ಚದೆಹಾರುವ ಬಲವೊಂದುಈ ಕ್ಷಣಕ್ಕೂನನ್ನೊಳಗೆ ಮೊಳೆಯಲಿಲ್ಲವೆಂಬುದೇಬದುಕಿನ ಒಂದು ದುರಂತ..!  ದಿವ್ಯ ಎಂ

ದಿವ್ಯ ಎಂ ಅವರ ಕವಿತೆ  “ಒಡೆದ ಕನ್ನಡಿಯೊಳಗಿನ ಮಾತು” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ “ಕೆಂಪು ಕಾಶ್ಮೀರ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಕೆಂಪು ಕಾಶ್ಮೀರ” ಹಿಮಾಲಯ ಮಡಿಲಲ್ಲಿಸ್ವರ್ಗ ಮಲಗಿತ್ತು,ಬೆಳ್ಳಿಯ ಹಿಮದ ಹಾಸಿಗೆಯಲ್ಲಿಮೌನ ಮುತ್ತು ಹೊಳೆಯಿತು. ದಾಲ್ ಸರೋವರಸ್ಫಟಿಕ ಕಣ್ಣಾಗಿ,ಆಕಾಶ ತನ್ನ ಮುಖ ನೋಡಿತು;ಶಿಕಾರಾಗಳ ಕನಸು ತೇಲಿತುನೀರಿನ ಎದೆ ಮೇಲೆ, ಮೃದುವಾಗಿ. ಗುಲ್ಮಾರ್ಗ್ ಹಿಮಮಕ್ಕಳ ನಗುವಿನಂತೆ,ಪಹಲ್ಗಾಮ್ ಹುಲ್ಲುತಾಯಿಯ ಮಡಿಲಂತೆ,ಚಿನ್ನಾರ್ ಎಲೆಗಳುಕಾಲದ ಬಣ್ಣ ಹೊತ್ತವು. ಒಂದು ಕ್ಷಣದಲ್ಲಿಸ್ವರ್ಗ ನಡುಗಿತು,ಗುಂಡಿನ ಶಬ್ದಪರ್ವತ ಹೃದಯ ತೂರಿತು,ಹಿಮದ ಬಿಳುಪುರಕ್ತದ ಕೆಂಪು ಕುಡಿದುನೀರಾಗಿ ಹರಿಯಿತು. ಹೂವಲ್ಲ, ಟುಲಿಪ್ ಅಲ್ಲ,ನೆಲ ಮೇಲೆ ಬಿದ್ದಮಾನವ ಉಸಿರಿನ ಗುರುತು. ಪ್ರವಾಸದ ನಗುಮರಣದ ಅಳುವಾಯಿತು,ಗಾಳಿ ಮಾತು ನಿಶ್ಶಬ್ದವಾಗಿ ಕರಗಿತು,ಹೃದಯದ ನೋವುಹಿಮದಲ್ಲಿ ಮಿಶ್ರಿತ. ಕಾಡು ಮೌನವಾಗಿ ತಿಳಿದುಕೊಂಡಿತು,ರಕ್ತದ ಪ್ರತಿಜ್ಞೆಮಣ್ಣಿಗೆ ನೆನೆಸಿತು;ಹೆಜ್ಜೆಗಳ ಶಬ್ದ ಮೌನದಲ್ಲಿ ಹಾರಿತು,ಹೃದಯದ ನೋವು ನದಿಯಲ್ಲಿ ಹರಿಯಿತು. ನದಿಗಳು ಹರಿಯುತ್ತಿವೆ,ಆದರೆ ಹಾಡುತ್ತಿಲ್ಲ,ಹಿಮದ ಶ್ವೇತದಲ್ಲಿ ಕೆಂಪು ನೀರು ಹರಿದು,ಮರುಳು ಹೊಳೆಯುತ್ತದೆ,ನೋವು ಕುಸಿದು,ಆಕ್ರಂದನ ತೇಲಿ. ಕಾಶ್ಮೀರಾ,ನೀನು ಸುಂದರ,ಆದರೆ ನಿನ್ನ ಸೌಂದರ್ಯಸಾವು ನೆರಳಿನಿಂದ ಮಿಶ್ರಿತ. ನಿಲ್ಲಲಿ ಉಗ್ರವಾದ,ಗುಂಡಿಗೆ ಜಾಗ ಬೇಡ;ಹಿಮ ಮತ್ತೆ ಬಿಳಿಯಾಗಲಿ,ನದಿಗಳು ಹಾಡಾಗಲಿ,ಹೃದಯಗಳಲ್ಲಿ ಮರಳಿಮಾನವೀಯತೆ ಆರಾಧನೆಯಾಗಲಿ. ಕೆಂಪು ಅಧ್ಯಾಯಕಣ್ಣೀರಾಗಿ ಒಣಗಿ,ಮಾನವೀಯತೆಇಲ್ಲಿ ಮತ್ತೆಸ್ವರ್ಗವಾಗಲಿ. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ “ಕೆಂಪು ಕಾಶ್ಮೀರ” Read Post »

ಕಾವ್ಯಯಾನ

ಮಹಿಳಾ ವಿಶೇಷ ದಿನ,ರಶ್ಮಿ ಶಮಂತ್

ಮಹಿಳಾ ವಿಶೇಷ ದಿನ ರಶ್ಮಿ ಶಮಂತ್ ಪ್ರೇಮಕುಸುಮ ಅಲೆವಳು ಅವಳುಜವಾಬ್ದಾರಿಗಳ ಸಂತೆಯಲಿಕನಸಿನ ಅಂಗಡಿಯ ಹುಡುಕುತಪರಿಚಿತರ ಮುಖವಾಡದೊಳಗೆತನ್ನವರೆಂಬುವರ ಅರಸುತ ಹೊರುವಳು ಆಕೆಹೊಣೆಯ ಮೂಟೆಗಳದೊರಕದವಳಿಗೆ ಸನ್ಮಾನಅಲಂಕರಿಸುವುದುಕೊಂಕು ಬಿರುದುಗಳ ತಾತ್ಸಾರ ಮನದ ಬಯಲಿನಲಿಸುಂಟರಗಾಳಿ ತಾಂಡವವಾಡುತಿರಲುತಾಳ್ಮೆ ಸಹನೆಗಳ ಕಡಿವಾಣವದಕೆಬೆನ್ನೆಲುಬಾಗಿಹಳುತನ್ನದಲ್ಲದ ಕನಸುಗಳ ಸಾಕಾರಕೆ ನಗುನಗುತಲೇ ಬದುಕುವಳುತನ್ನದಲ್ಲದ ಜೀವನದಲಿಪ್ರವಾಹಗಳನೇ ಎದುರಿಸುವಳುಸಂಸಾರದ ಹೊನಲಿನಲಿಸುಗಂಧವ ಬೀರುವ ಪ್ರೇಮಕುಸುಮವಾಕೆ…. ರಶ್ಮಿ ಶಮಂತ್

ಮಹಿಳಾ ವಿಶೇಷ ದಿನ,ರಶ್ಮಿ ಶಮಂತ್ Read Post »

ಕಾವ್ಯಯಾನ

ಡಾ.ವೈ.ಎಂ ಯಾಕೊಳ್ಳಿ ಅವರ ಕವಿತೆ “ನಾವಂದುಕೊಂಡಂತಲ್ಲ….”

ಕಾವ್ಯ ಸಂಗಾತಿ ಡಾ.ವೈ.ಎಂ ಯಾಕೊಳ್ಳಿ “ನಾವಂದುಕೊಂಡಂತಲ್ಲ….” ನಾವಂದಂತೆಬದುಕಲಾಗದಾದಾಗ‌ಬದುಕು ಬಂದಂತೆಬದುಕಬೇಕು ನಮ್ಮ ಆಸೆಗಳಿಗೆಅವಕಾಶವಿಲ್ಲದಾಗಜಗತ್ತಿ ಆಸೆಗಳ ಜೊತೆನಾವು ಸಾಗಬೇಕು ನಮ್ಮಿಚ್ಛೆಗಳನಷ್ಟೇಪೂರೈಸಲೆಂದು ಬಂದಿಲ್ಲಎಲ್ಲರಿಗೂ ತುಸುಸಮಯವಿತ್ತು ಕಾಯಬೇಕು ಜಗವು ಸ್ಪರ್ಧೆಯಕಣವಷ್ಟೇ ಅಲ್ಲಹೊಂದಾಣಿಕೆಯೂಬಾಳಿನ ಸೂತ್ರವಾಗಬೇಕು ಎಲ್ಲ ನಾನೆ ಗೆಲ್ಲಲಿಎನ್ನುವದು ಸರಿಯಲ್ಲಕೆಲವೊಮ್ಮೆ ನಾವೂ ನೂಸೋಲಿನ ಸವಿಯಅನುಭವಿಸಬೇಕು ಡಾ.ವೈ.ಎಂ‌.ಯಾಕೊಳ್ಳಿ

ಡಾ.ವೈ.ಎಂ ಯಾಕೊಳ್ಳಿ ಅವರ ಕವಿತೆ “ನಾವಂದುಕೊಂಡಂತಲ್ಲ….” Read Post »

ಕಾವ್ಯಯಾನ

ಪರವಿನಬಾನು ಇ. ಯಲಿಗಾರ ಅವರ ಕವಿತೆ “ನೀನು ನೀನೇ”

ಕಾವ್ಯ ಸಂಗಾತಿ ಪರವಿನಬಾನು ಇ. ಯಲಿಗಾರ “ನೀನು ನೀನೇ” ಏನೆಂದು ಬಣ್ಣಿಸಲಿ ನಿನ್ನ ….?ಹೇಗೆಲ್ಲ ವರ್ಣಿಸಲಿ ನಿನ್ನ  ….? ಸೂರ್ಯನೆನ್ನಲೇ ? ಅಬ್ಭಾ ! ಕಡು ಕೋಪದಲ್ಲಿ ಸುಡುವವನು ,ಇರುಳಲಿ ಮರೆಯಾಗುವವನ ನಿನಗೆ  ಹೇಗೆ ಹೋಲಿಸಲಿ ,ತಂಪೆರೆಯುವ ಶೀತಲ ತಂಗಾಳಿ ನೀ ,ಎಂದೂ ಮರೆಯಾಗದ  ಬಂಧು ನೀ ….. ಚಂದ್ರನೆನ್ನಲೇ ? ಅಯ್ಯೋ ! ಅವನಿಗೂ ಗ್ರಹಣ ಬಾಧಿಸುವುದಲ್ಲ ,ಅಮವಾಸ್ಯೆಯಲಿ ಮಂಕು ಕವಿಯುವವನ ನಿನಗೆ ಹೇಗೆ ಹೋಲಿಸಲಿ ? ಕಲೆಗಳೇ ಇಲ್ಲದ ಶುಭ್ರ ಶ್ವೇತ ಮನಸಿಜ ನೀ ,ಸದಾ ಪಾದರಸ  …. ಸಾಗರವೆನ್ನಲೇ ? ಛೇ ! ಅದು ಉಕ್ಕುವುದು ನಿಷ್ಕರುಣಿಯಂತೆ , ಕೆಲವೊಮ್ಮೆ ಕೆರಳುವುದುರುದ್ರನಂತೆ  . ಹೇಗೆ ಹೋಲಿಸಲಿ ? ಶಾಂತ ಸಿಹಿ ನೀರಿನ ಸರೋವರ ನೀ , ಎಲ್ಲರನೂ ಪೊರೆದು ಪಾವನಗೋಳಿಸುವ ,ಅಂತರ್ಜಲ ನೀ …. ಗಾಳಿ ಎನ್ನಲೇ ? ಅಬ್ಬಬ್ಬಾ ! ನೋಡನೋಡುತ್ತಿದ್ದಂತೆ ಬಿರುಗಾಳಿ ,ಸುಂಟರ ಗಾಳಿಯಾಗಿ ಉಸಿರೇ ಕಸಿಯುವುದು  , ಹೇಗೆ ಹೋಲಿಸಲಿ ? ನೀ ದೇಹದೊಡನಾಡುವ ,ಹೃದಯ ಮಿಡಿಯುವ , ಜೀವ ನೀಡುವ ಉಸಿರು  ನೀ …. ಹೂ ಎನ್ನಲೇ ? ಪಾಪ ! ಅದು ಮುದುಡಿ ಬಾಡುವುದು ಸಂಜೆಗೆ , ಅಲ್ಪಾಯುಷಿಯಾದ ಅದಕೆ ಹೇಗೆ ಹೋಲಿಸಲಿ ? ನೀ ಚೀರಂಜೀವಿ ,ನಿತ್ಯ ನೂತನ ನಿನ್ನ ಜೀವನ  , ಬಾಡದ , ಬತ್ತದ ಅನುರಾಗದ ಸುಧೆ ನೀಯುವೆ ನೀ…… ಅಂಬರವೆನ್ನಲೇ ? ಛೇ ! ಒಂದು ದಿನಕ್ಕೆ ಹಲವು ಬಣ್ಣ ಬದಲಿಸುವುದು ,  ಕಣ್ಣಿಗೆ ಕಂಡರು ವಿಸ್ಮಯದಂತೆ ಕಾಡುವುದು , ಹೇಗೆ ಹೋಲಿಸಲಿ ?  ಎಂದೆಂದೂ ಒಂದೇ ಬಣ್ಣ , ನಿತ್ಯ ಸತ್ಯ ನೀ ….. ಯಾವ ಹೋಲಿಕೆಗೂ ಸಿಗದ , ಯಾವ ವರ್ಣನೆಗೂ ನಿಲುಕದ ನೀನು , ನೀನಾಗಿರು , ಬೇಡ ನಿನಗೆ ಯಾವ ಉಪಮಾನ , ಉಪಮೆಯ . ವರ್ಣನಾತೀತ ನೀ …… ಪರವಿನಬಾನು ಇ. ಯಲಿಗಾರ

ಪರವಿನಬಾನು ಇ. ಯಲಿಗಾರ ಅವರ ಕವಿತೆ “ನೀನು ನೀನೇ” Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ ಅವರ ಕವಿತೆ “ಬಾಯಲ್ಲಿಯ ಅಕ್ಕಿ ಕಾಳು”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಬಾಯಲ್ಲಿಯ ಅಕ್ಕಿ ಕಾಳು” ತಥಾಕಥಿತ ದೊಡ್ಡಣ್ಣ ದೂರದೇಶದಿಂದಲೇ ಕಳುಹಿದ ತನ್ನೆಲ್ಲ ಅಷ್ಟೈಶ್ವರ್ಯದ ಶಸ್ತ್ರಾಸ್ತ ಸಾಮರ್ಥ್ಯ ತನ್ನ ನೆಲ ತಣ್ಣಗಿರಲಿಬೇರೆಯವನ ನೆಲ ಜಲ ವಾಯುಗಳು ವಿಷಾನಿಲಗಳಾಗಲಿ, ಉರಿಯುತಿರಲಿ ಸದಾ. ತಾ ಮಾತ್ರ ಹೊಂದಬೇಕು ಮಾರಕಾಸ್ತ್ರ ಅಣ್ವಸ್ತ್ರಅವನಿಗೇಕೆ ಬೇಕು ಈ ಅಶ್ವತ್ಥಾಮಾಸ್ತ್ರ ದೊಡ್ಡಣ್ಣ ನಾನೇ ನಾನೇದುರ್ಯೋಧನನೇ ಅಂದವನು. ಇಬ್ಬರೂ ಮೂರ್ಖರುಇಬ್ಬರೂ ದುರ್ಬುದ್ಧಿಯವರುಇಬ್ಬರಿಗೂ ಹೇಳ ಬಹುದುವಿನಾಶ ಕಾಲೇ ವಿಪರೀತ ಬುದ್ಧಿಃ ಅಡಕತ್ತರಿಯಲ್ಲಿರುವ ನಾವುಇಹ ಪರಗಳ ನೆನೆವವರು ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಅವರ ಕವಿತೆ “ಬಾಯಲ್ಲಿಯ ಅಕ್ಕಿ ಕಾಳು” Read Post »

ಕಾವ್ಯಯಾನ

ಡಾ‌.ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಒಲವಿನ ಉಡುಗೊರೆ”

ಕಾವ್ಯ ಸಂಗಾತಿ ಡಾ‌.ಗೀತಾ ದಾನಶೆಟ್ಟಿ “ಒಲವಿನ ಉಡುಗೊರೆ” ಜೀವನವೆಂಬುದುದೇವರು ಕೊಟ್ಟ ಕೊಡುಗೆಕಳೆಯುವ ಪ್ರತಿಕ್ಷಣವೂ ಒಲವಿನ ಉಡುಗೊರೆ ಹುಟ್ಟಿ ಬಂದ ಈ ಜಗಕೆಕೊಟ್ಟು ಹೋಗುವುದು ಬೆಟ್ಟದಷ್ಟಿದೆಉಣಲು ಮುದ್ದೆ,ನೆಮ್ಮದಿಯ ನಿದ್ದೆಸದ್ಗುಣಗಳಿಂದ ಗೆದ್ದು ಬೀಗಬೇಕು ಮನವೆಂಬ ವನದಲ್ಲಿಪ್ರೀತಿ, ಪ್ರೇಮ,ಪ್ರೇರಣೆಪ್ರಾಮಾಣಿಕತೆ,ಪರಿಶ್ರಮ,ಉತ್ಸಾಹದಬೀಜಗಳ ಬಿತ್ತಿ ಬೆಳೆಯಬೇಕು ಬದುಕಿನ ಪಯಣದಲಿಏರಿಳಿತಗಳನು ಸ್ವೀಕರಿಸಿಸೋಲು,ಗೆಲುವಿನ ಸೋಪಾನದಿಸಾಧನೆ ಶಿಖರವೇರಬೇಕು ಸುಖ-ದುಃಖಗಳನು ಮರೆತುಮಾನವೀಯ ಮೌಲ್ಯಗಳನರಿತುದಿವ್ಯತೆಯ ದಾರಿಯಲಿಭವ್ಯತೆಯ ಬಾಳು ಬೆಳಗಬೇಕು ಪ್ರೀತಿಸುವರೆಷ್ಟೋ,ದ್ವೇಷಿಸುವರೆಷ್ಟೋಕೆಡಿಸಿಕೊಳ್ಳದೆ ಮನದ ಮತಿವಿಶಿಷ್ಟ ವಿಚಾರ,ಆಚಾರಗಳಿಂದಅರೆಕ್ಷಣ ಅರಿತುಕೊಳ್ಳಬೇಕುಡಾ‌.ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ‌.ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಒಲವಿನ ಉಡುಗೊರೆ” Read Post »

ಕಾವ್ಯಯಾನ

ನಿರಂಜನ ನಾಯಕ ಕವಿತೆ “ಹಗೆಯ ಸುಳಿ”

ಕಾವ್ಯ ಸಂಗಾತಿ ನಿರಂಜನ ನಾಯಕ “ಹಗೆಯ ಸುಳಿ” ಮಿತಿಯನು ನಾವು ಮೀರುವುದು ಯಾವಾಗ?ಮಾನವೀಯತೆಯು ಮಣ್ಣಾದಾಗ! ಹಗೆತನಕೆ ಮುಕ್ತಿ ದೊರೆಯುವುದು ಯಾವಾಗ?ನೆತ್ತರು ಹೊಳೆಯಾಗಿ ಹರಿದಾಗ! ಯಾವ ವಿಷವೃಕ್ಷದ ಕಟುಫಲವಿದು?ಒಡಲೊಳು ದ್ವೇಷದ ಬೀಜವೇ ತುಂಬಿಹುದು. ಗಡಿಯ ಗೋಡೆಯ ಒಡೆಯುವ ಹಂಬಲವ ಬಿಟ್ಟು,ಬಂಧನ ಬಿಗಿಯಾಗುತ ಸಾಗಿಹುದು! ಮುಳ್ಳಿನ ನಡುವೆ ನಗುವ ಗುಲಾಬಿಯ,ಕಪಟದ ಒಳಮರ್ಮ ಅರ್ಥವಾಗದಿರದು! ನಿರಂಜನ ನಾಯಕ

ನಿರಂಜನ ನಾಯಕ ಕವಿತೆ “ಹಗೆಯ ಸುಳಿ” Read Post »

You cannot copy content of this page

Scroll to Top