ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್ ಜಗವು ಉರಿಯುತಿದೆ ಜೀವಿಗಳು ನರಳುತಿವೆ ನೀ ಸುಮ್ಮನಿರುವಿಹೃದಯಗಳು ಬೆಂಕಿಯಲಿ ಬಿದ್ದು ಬೇಯುತಿವೆ ನೀ ಸುಮ್ಮನಿರುವಿ ಕಂದಮ್ಮಗಳು ಹುಡುಕುತಿವೆ  ಹೆತ್ತವರನು ನೆತ್ತರಿನಲಿ ನೋಡುದೀನರು ಕಂಡ ಕನಸುಗಳು ಮಣ್ಣಾಗುತಿವೆ  ನೀ ಸುಮ್ಮನಿರುವಿ ವಿಶ್ವದಲ್ಲಿ ನಾನೆಂಬ ಅಹಂಕಾರದ ಕಹಿ ಕಳೆಯು ಬೆಳೆಯುತಿದೆನಂಬಿದ  ದೈವಗಳೆಲ್ಲಾ ಸಾಯುತಿವೆ ನೀ ಸುಮ್ಮನಿರುವಿ ನಿತ್ಯ ಉರುಳುತಿವೆ ರಾಶಿ ಹೆಣಗಳು ಅಂತ್ಯಕ್ರಿಯೆ ಇಲ್ಲದೆಯೇಭೂಮಂಡಳದಲಿ ಮಸಣಗಳು ಬೆಳೆಯುತಿವೆ ನೀ ಸುಮ್ಮನಿರುವಿ ಪ್ರೀತಿಯಲಿ ಎಲ್ಲರನು ಬಂಧಿಸುವ ಶಕ್ತಿಯು ನಿನಗಿದೆ ಪ್ರಭೆದ್ವೇಷ ಅಸೂಯೆಯ ಬಾಂಬುಗಳು  ಸಿಡಿಯುತಿವೆ  ನೀ ಸುಮ್ಮನಿರುವಿ ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು”

ಕಾವ್ಯ ಸಂಗಾತಿ ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” ಚಿವುಟಿದಷ್ಟು ಚಿಗುರುವ ರೀತಿಯುನಿನ್ನದಾಗಲಿ ಮನವೆಕವಿಯುವ ಕತ್ತಲ ಹಾದಿಯಲಿದೀಪವಾಗು ಮನವೆ// ತಿವಿಯುವ ಮುಳ್ಳಿನ ಮೇಲೆ ಹೆಜ್ಜೆಯಹಾಕದಿರು ತನುವೆಅವಿತಿಹ ಧೈರ್ಯವ ಹೊರಗೆ ಎಳೆದುಬಾಳುತಿರು ಸುಮವೆ// ಛಲವದು ಇದ್ದರೆ ಚಿವುಟಿದ ಹಾಗೆಚಿಗುರುವೆ ನೀಗಿಡವೆಒಲವನು ಬದುಕಲಿ ಅನುಕ್ಷಣ ತೋರುತಸಾಗುತಿರು ಬಲವೆ// ಚುಚ್ಚುವ ಮಾತಿಗೆ ಇರಿಯುವ ನುಡಿಗೆಅಳುಕದಿರು ಎಂದೂಹಚ್ಚು ಎಲ್ಲರ ಮನದಲಿ ಸಮತೆಯ ಹಣತೆಯ ನೀ ಮುಂದೂ// ಗೋಳನು ಹೊಯ್ಸುತ ಖುಷಿಯ ಪಡುವರುಕುಹಕದ ಜನರಿಲ್ಲಿಗಾಳವ ಹಾಕುತ ಸಿಕ್ಕಿಸಿ ಹಾಕಲುಕಾಯುವ ಸ್ಥಿತಿಯಿಲ್ಲಿ// ಕಮರದೆ ಕುಂದದೆ ಬಾಡಿ ಹೋಗದೆಬೆಳೆಯೋ ಬದುಕಲ್ಲಿವಿಮಲ ಚರಿತಗೆ ಸಕಲವ ಒಪ್ಪಿಸಿಶರಣಾಗು ಬಾಳಲ್ಲಿ// ಶುಭಲಕ್ಷ್ಮಿ ಆರ್ ನಾಯಕ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” Read Post »

ಕಾವ್ಯಯಾನ

ಪ್ರಶಾಂತ್ ಬೆಳತೂರು ಅವರ ಕವಿತೆ ” ಇದ್ದಿಲು ಮತ್ತು ಪ್ರೇಮ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು ” ಇದ್ದಿಲು ಮತ್ತು ಪ್ರೇಮ” ಕಡು ಕಪ್ಪಿನರಾಶಿ ರಾಶಿ ಇದ್ದಿಲಿನ ಚೂರುಗಳಿಗೆಬೆಂಕಿ ತಾಕಿಸಿ ಮತ್ತೆ ಉರಿಸುವಂತೆಎದೆಯಾಳದಲ್ಲಿಬೆಂದು ಬೂದಿಯಾಗದೆಉಳಿದಿರುವ ನಿನ್ನ ನೆನಪುಗಳಿಗೆವಿನಾಕಾರಣ ತನ್ನಷ್ಟಕ್ಕೆ ತಾನೇಸಣ್ಣ ಕಿಡಿಯೊಂದುಹೊತ್ತಿಕೊಂಡು ಬಿಡುತ್ತದೆ..! ನಿನ್ನ ನೆನಪಿನ ಹೊಗೆಯೇಳುತ್ತದೆನನ್ನ ಉಚ್ಛ್ವಾಸ ನಿಸ್ವಾಸಗಳತಲೆಕೆಳಗಾಗಿಸಿ ಉಸಿರುಗಟ್ಟಿಸುತ್ತದೆಜೀವ ಹಿಂಡಿ ಪ್ರಾಣ ಹಾರಿತುಎನ್ನುವ ಹೊತ್ತಿಗೆಹೃದಯ ಬಗ್ಗನೇ ಉರಿದುಉಗುಳುತ್ತದೆಪ್ರೇಮವಿಲಾಪದ ಕೆಂಡದುಂಡೆಗಳವೈಶಾಖದ ಸೂರ್ಯನಂತೆ..! ತುದಿ ಮೊದಲಿಲ್ಲದಅನಂತ ನೆನಪುಗಳ ರಾಶಿಯಲ್ಲಿಛಿದ್ರಗೊಳ್ಳುವ  ಹೃದಯಚೂರಾದ ಇದ್ದಿಲುಗಳಂತೆಹಗುರವಾಗಿಮುಕ್ತಿ ದೊರಕದೆನಾಮಾವಶೇಷವಾಗುತ್ತದೆ..! ಅರಳುವುದಿಲ್ಲ ಮತ್ತೆಂದೂ..ಬೆಂದ ಎದೆಯ ಬನದಲ್ಲಿನವ ಪ್ರೇಮದ ಚಿಗುರು..!ಉರಿದ ಇದ್ದಿಲುಗಳ ರಾಶಿಯನ್ನೇನಿನ್ನ ಪ್ರೇಮದ ನೆನಪುಗಳಲ್ಲಿಮತ್ತೆ ಹೊತ್ತಿಸುತ್ತೇನೆ..! ಬೆಂದು ಬೂದಿಯಾಗಿ ಬಿಡಬೇಕೆಂಬಜಿದ್ದಿಗೆ ಬೀಳದೆನಿನ್ನ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿಕಡುಕಪ್ಪು ಇದ್ದಿಲಿನಂತಾಗುವಕಳಂಕವನ್ನುಸುಲಭದಲ್ಲಿ ಕಳಚಿಕೊಳ್ಳಲಾಗದೆಪ್ರೇಮದ ಹೆಸರಲ್ಲಿಸುಮ್ಮನೆ ಉರಿಯುತ್ತೇನೆ..! ಎಷ್ಟೇ ಬೆಂದರೂ ನೊಂದರೂಭುಗಿಲೇಳುವಪ್ರೇಮದ ಜ್ವಾಲೆಯಂತಾಗದೆಇಷ್ಟಿಷ್ಟೇ ಉರಿವಇದ್ದಿಲುಗಳ ಚೂರಾಗುತ್ತೇನೆ..! ಕಡೆಗೊಮ್ಮೆಈ ಬದುಕು ಥೇಟ್ ಇದ್ದಿಲಿನಂತೆಇಷ್ಟಿಷ್ಟೇ ನಶಿಸಿ ಹೋಗುತ್ತಿರುವಹೊತ್ತಿನಲ್ಲೂನಿನ್ನಂತೆ ನೂರೆಂಟು ಬಣ್ಣ ಬದಲಿಸದೆಮೂಲದಲ್ಲೇ ಕ್ಷಯವಾಗುವಅದರ ಅಸಲಿಯತ್ತಿಗೆತಲೆಬಾಗುತ್ತಾ… ಅಳಿದುಳಿದಪ್ರೇಮದ ಪಳೆಯುಳಿಕೆಗಳನ್ನುಒಟ್ಟುಗೂಡಿಸಿ ಸುಟ್ಟುಕೊಳ್ಳುತ್ತಾ  ನನ್ನನ್ನು ನಾನೇಎಂದಾದರೊಮ್ಮೆನಿನ್ನನ್ನು ಪ್ರೇಮಿಸಿದ ತಪ್ಪಿಗೆಬೆಂದುರಿದ ಗುರುತು ಸಿಗದಂತೆನಿಚ್ಚಳವಾಗಿಕೊನೆಗಾಣಿಸಿಕೊಳ್ಳುತ್ತೇನೆಅದೇ ಇದ್ದಿಲಿನ ಹಾಗೆ…! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಅವರ ಕವಿತೆ ” ಇದ್ದಿಲು ಮತ್ತು ಪ್ರೇಮ” Read Post »

ಕಾವ್ಯಯಾನ

ಜ್ಯೋತಿ ಮಾಳಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಉಕ್ಕಿಹೋದ ಹಾಲು ಹೆಕ್ಕಿ ತೆಗೆಯುವುದು ಹೇಗೆಮಿಕ್ಕಿ ಹೋದ ಕಾಲ ಹೊಕ್ಕು ಬಗೆಯುವುದು ಹೇಗೆ ಸವಿಸವಿ ಕ್ಷಣಗಳ ಚಿಕ್ಕ ಪಾಲೂ ಇಲ್ಲವೆಸವಿಯದ ಸಿಹಿಯನು ನೆಕ್ಕಿ ಜಗಿಯುವುದು ಹೇಗೆ ಹಾಲೆರೆದು ಹಾವಿನ ಜೊತೆಯಲಿ ನಡೆದಿದೆ ಸರಸವಿಧಿ ಕೊಟ್ಟ ವಿಷವನು ಮುಕ್ಕಿ ಉಗಿಯುವುದು ಹೇಗೆ ಬೆಂಕಿಕಡ್ಡಿ ಮಕ್ಕಿನಲಿ ಅಡಗಿ ಕಾದಿದೆ ಕಿಡಿದಕ್ಕದ  ಪ್ರೀತಿಯನು ತಿಕ್ಕಿ ಮೊಗೆಯುವುದು ಹೇಗೆ ಸಾರಾಯಿ ಕುಡಿದ ಮಂಗನಂತಾಗಿದೆ ಮನವುಹಕ್ಕಿ ರೆಕ್ಕೆ ಬೀಸಿ ಸೊಕ್ಕಿ ನೆಗೆಯುವುದು ಹೇಗೆ ಬೇಡೆಂದರೂ ಕಾಡಿವೆ ಅರಿವಿನ ಘಳಿಗೆಗಳುಕಹಿ ಕಹಿ ನೆನಪುಗಳ ಕಕ್ಕಿ ಹುಗಿಯುವುದು ಹೇಗೆ ಕಲ್ಲು ಕುಕ್ಕಿ ಜ್ಯೋತಿಯ ಕೊಕ್ಕು ರಗುತಾಗಿದೆಬದುಕಿನ ಭವಣೆಗಳ ಲೆಕ್ಕ ಮುಗಿಯುವುದು ಹೇಗೆ  ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಅವರ ಗಜಲ್ Read Post »

ಕಾವ್ಯಯಾನ

ರಾ.ಶೇ ಅವರ ನೆನಪುಗಳ ಲಹರಿ “ಆ ದಿನಗಳು”

ನೆನಪುಗಳ ಸಂಗಾತಿ ರಾ.ಶೇ ಅವರ ನೆನಪುಗಳ ಲಹರಿ “ಆ ದಿನಗಳು” ಕಾಲೇಜು ದಿನಗಳ ಸವಿ ನೆನಪುಗಳೇ ಹಾಗೆ.. ನಮ್ಮ ಕಾಲೇಜು ಓದು ಮುಗಿದ ನಂತರವೂ ಕೆಲವು ಘಟನೆಗಳು.. ಮರೆಯಲಾಗುವುದಿಲ್ಲ ಗೆಳೆಯರ ಜೊತೆ ಆ ದಿನಗಳ ಆಟ, ಕೋಪ, ಮುನಿಸು, ಲವ್.. ನಮ್ಮ ಹೀರೋಯಿಜಂ ಇವೆಲ್ಲವೂ ಆಗಾಗ ನೆನಪಾಗುತ್ತಲೆ ಇರುತ್ತದೆ.. ಒಮ್ಮೊಮ್ಮೆ ಮತ್ತೆ ಆ ಲೈಫ್ ಬರಬಾರದೆ ಎನಿಸುತ್ತದೆ..ಆದರೆ ನನ್ನ ಕಾಲೇಜು ಲೈಫ್ನನಗೆ ಮರೆಯಲಾಗದೆ ಉಳಿದುಹೋಗಿದೆ.. ಈ ಘಟನೆ ನನ್ನನ್ನು ಸದಾ ಕಾಡುತ್ತಿದೆ.. ಸೆಕೆಂಡ್ ಇಯರ್ ಡಿಗ್ರಿಯಲ್ಲಿ ಓದುವಾಗ ನಾನು ಸಹ ಪ್ರೀತಿಯ ಅಲೆಯಲ್ಲಿ ಸಿಲುಕಿದ್ದೆ ನನ್ನ ಪ್ರೀತಿ ಅವಳ ಬಳಿ ನಿವೇದಿಸಲಾಗದೆ ಒದ್ದಾಡುತ್ತಿದ್ದೆ.. ಅದೆಷ್ಟೋ ಸಂಧರ್ಭ ಸಿಕ್ಕರು ಹೇಳಲಾಗದೆ ತಡವರಿಸುತ್ತಿದ್ದೆ.. ಗೆಳೆಯರು ದೈರ್ಯ ತುಂಬಿದರೂ ಆಕೆಯ ಮುಂದೆ ನಿಂತು ಹೇಳುವ ದೈರ್ಯ ನನಗೆ ಬರಲಿಲ್ಲ..!ಅದೊಂದು ದಿನ ಕಾಲೇಜಿನಲ್ಲಿ ಪ್ರವಾಸ ಕಾರ್ಯಕ್ರಮ ಏರ್ಪಾಡಾಗಿತ್ತು.. ಗೋವಾ ಪ್ರವಾಸಕ್ಕೆ ಹೊರಡಲು ಇಚ್ಚಿಸುವ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ಕೊಡಬೇಕೆಂದು ನೋಟೀಸ್ ಬೋರ್ಡ್ ನಲ್ಲಿ ಮಾಹಿತಿ ಹಾಕಿದ್ದರು, ಅದಾಗಲೇ ಗೋವಾ ಟ್ರಿಪ್ ಗೆ ಹೋಗಿ ಬಂದಿದ್ದ ನನಗೆ ಮತ್ತೆ ಹೋಗುವ ಆಸಕ್ತಿ ಇರಲಿಲ್ಲ..ಆದರೆ ದಿನ ಕಳೆದಂತೆ ಗೆಳೆಯರ ಒತ್ತಾಯ ಅಲ್ಲದೇ ನನ್ನ ಹುಡುಗಿಯ ಹೆಸರು ಪಟ್ಟಿಯಲ್ಲಿರುವುದು ಗೊತ್ತಾಗಿ ಅವಳಿಗಾಗಿ ಹೋಗಬೇಕು ಈ ಪ್ರವಾಸದಲ್ಲಿಯೇ ನನ್ನ ಪ್ರೀತಿ ಹೇಳಿ ಅವಳ ಮನಸು ಗೆಲ್ಲಬೇಕೆಂಬ ಆಲೋಚನೆ ಮಾಡಿಕೊಂಡೆ..ಅಂತೂ ಗೆಳೆಯರ ಜೊತೆ ಖುಷಿಯಿಂದ ಬಸ್ ಹತ್ತಿದ್ದಾಯಿತು. ಅದೊಂದು ಎಂದೂ ಮರೆಯಲಾರದ ಪ್ರವಾಸ.. ಒಂದು ವಾರದ ಪ್ರವಾಸದ ಮದ್ಯೆ ಮದ್ಯೆ..ಹಸಿರು ಕಾಡು, ಜಲಪಾತ ಹೊಸ ವಾತವರಣದಲ್ಲಿ ಆಕೆಯನ್ನು ಮಾತನಾಡಿಸುವ ಫೋಟೊ ತೆಗೆಯುವ ಪ್ರಯತ್ನ ನನ್ನದು.. ಇದು ಗೆಳೆಯರಿಗೆ ಗೊತ್ತಿದ್ದ ಕಾರಣ ಅವರು ನನ್ನನ್ನು ಹುರಿದುಂಬಿಸುತ್ತಿದ್ದರು.ಅದಾಗಲೇ ಆಕೆಯ ಹಲವು ಫೋಟೊಗಳು ತೆಗಿದಿದ್ದೆ ಅವಳ ಗೆಳತಿ ಈಗಾಗಲೇ ನನಗೆ ಪರಿಚಯವಿದ್ದ ಕಾರಣ ಅವಳಿಗೆ ಫೋಟೋಗಳನ್ನು ತೋರಿಸಿದ್ದೆ.. ಅವಳ ಗೆಳತಿ ನನ್ನ ಕ್ಯಾಮರಾ  ಕೈ ಚಳಕಕ್ಕೆ ಫಿದಾ ಆಗಿದ್ದಳು.. ಮೆಲ್ಲಗೆ ಅವಳ ಬಳಿ ನನ್ನ ಮನದ ಬಯಕೆಯನ್ನು ಹೇಳಿಕೊಂಡು ಅವಳ ಪರಿಚಯ ಮಾಡಿಸಲು ದುಂಬಾಲು ಬಿದ್ದೆ..ಪ್ರವಾಸದ ಮೂರನೇ ದಿನ ನಾನು ಅವಳ ಗೆಳತಿಯ ಜೊತೆಗೆ ಸೇರಿ ನನ್ನ ಹುಡುಗಿಯ ಪರಿಚಯ ಮಾಡಿಕೊಂಡೆ.. ತಿಂಡಿ ತಿನ್ನುವ ಸಂದರ್ಭದಲ್ಲಿ ನಾನು ತೆಗಿದಿದ್ದ ಕೆಲವು ಫೋಟೊಗಳನ್ನು ಆಕೆಗೆ ತೋರಿಸಿದೆ..ಅವಳಿಗೆ ನಾನು ತೆಗೆದ ಅವಳ ಫೋಟೊಗಳ ನೋಡಿ ಬಹಳ ಖುಷಿಯಾಗಿ ಫೋಟೊ ಪ್ರಿಂಟ್ ಆದಮೇಲೆ ತನಗೆ ಕೊಡಬೇಕೆಂದು ಕೇಳಿಕೊಂಡಳು.. ನಾನು ಖುಷಿಯಿಂದ ಸರಿ ಎಂದಿದ್ದೆ ಹಾಗೆ ಪರಿಚಯ ಮಾತು, ಹಾಗೆ ನಮ್ಮಿಬ್ಬರ ಗೆಳೆತನದ ನೋಟ, ಕಣ್ಣೋಟ..ನಗು ಮುಂದುವರೆಯಿತು.. ಹೀಗೆ ಗೋವಾ ಪ್ರವಾಸ ನಮ್ಮಿಬ್ಬರ ಪ್ರೇಮ ಪ್ರಕರಣಕ್ಕೆ ವೇಧಿಕೆ ಆಯಿತು.. ನಾವಿಬ್ಬರು ಬಹಳ ಹತ್ತಿರವಾದೆವು.. ಏಕಾಂತದ ವೇಳೆ ನನ್ನ ಪ್ರೀತಿಯನ್ನು ಆಕೆಯಲ್ಲಿ ನಿವೇಧಿಸಿಕೊಂಡೆ..ತನ್ನ ಕಣ್ಣಿಲ್ಲಿಯೇ ಆಕೆ  ಒಪ್ಪಿಗೆ ಸೂಚಿಸಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ..ಹೀಗೆ ಆ ದಿನಗಳು ನನ್ನ ಪಾಲಿಗೆ ಅಮೂಲ್ಯ.. ಆದರೆ ವಿಧಿಯಾಟ ಬೇರೆಯೇ ಆಗಿತ್ತು ನಾವು ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದಾಗ ನಡು ರಾತ್ರಿಯ ಸಮಯ ಘಾಟ್ ಸೆಕ್ಷನ್ ನ ಭಯಾನಕ ತಿರುವಿನಲ್ಲಿ ನಮ್ಮ ಬಸ್ ಊಹಿಸಲಾಗದ ರೀತಿಯಲ್ಲಿ ಬಾರಿ ಅಪಘಾತಕ್ಕೆ ಒಳಗಾಗಿ ಕಂದಕಕ್ಕೆ ಉರುಳಿ‌ ಬಿತ್ತು.. ದೊಡ್ಡ ಚೀತ್ಕಾರ, ಘೋರ ಆಕ್ರಂಧನ ನರಳಾಟ.. ನಿಧಾನವಾಗಿ ನಾನು ಪ್ರಜ್ಞೆ ಕಳೆದುಕೊಂಡೆ..! ಕಣ್ಬಿಟ್ಟಾಗ ಆಸ್ಪತ್ರೆಯ ಬೆಡ್ ಮೇಲೆ ಇದ್ದೆ ಮೈ ಕೈ ನೋವು, ಕಾಲು ಕೈಗೆ ಬ್ಯಾಂಡೇಜ್..ವೈದ್ಯರು ಬಂದು ಪರೀಕ್ಷೆ ಮಾಡಿ ಹೋದರು.. ಏನಾಯಿತು.. ಬಸ್ ಅಪಘಾತದಲ್ಲಿ ನನಗೆ ಪೆಟ್ಟಾಗಿದೆ, ಇನ್ನು ಉಳಿದವರೆಲ್ಲಿ ನನ್ನ ಪ್ರೀತಿಯ ಹುಡುಗಿ ಎಲ್ಲಿದ್ದಾಳೆ..! ಹೇಗಿದ್ದಾಳೆ..!? ಅವಳಿಗೇನಾಯಿತು ಕಣ್ಣಲ್ಲಿ ನೀರು ಜಿನುಗಿತು..ನಮ್ಮ ಕಾಲೇಜು ಉಪಾದ್ಯಾಯರುಗಳು ಬಂದಿದ್ದರು ನನ್ನನ್ನು ಸಮಾಧಾನ ಪಡಿಸಿ ಮಾತನಾಡಿದರು..ಬಸ್ ಅಪಘಾತದಲ್ಲಿ ನಿನಗೆ ಪೆಟ್ಟಾಗಿದೆ ನೀನು ಧೈರ್ಯವಾಗಿರು ನಿಮ್ಮ ತಂದೆ ತಾಯಿ ಬರುತ್ತಿದ್ದಾರೆ.. ಗಾಭರಿಯಾಗಬೇಡ ಎಂದು ಹೇಳಿ ಹೊರಟು ಹೋದರು.ನನಗೇನಾದರು ಸರಿ ಅವಳು ಹೇಗಿದ್ದಾಳೆ..? ಯಾರನ್ನು ಕೇಳುವುದು ಈಗೇನು ಮಾಡುವುದು ಅವಳದೇ ನೆನಪು.. ಅಪಘಾತದಲ್ಲಿ ಅವಳಿಗೇನಾದರು ಆಯಿತೆ..! ಗೆಳೆಯರು ಎಲ್ಲಿ ಹೋದರು.. ನರ್ಸ್ ಇಂಜೆಕ್ಷನ್ ಕೊಡುತ್ತಿದ್ದರು ಹಾಗೆ ನಿದ್ದೆಯು ಆವರಿಸಿಕೊಂಡಿತು..ಮರುದಿನ ಆಸ್ಪತ್ರೆಯಿಂದ ಬಿಡುಗಡೆಯಾದೆ.. ಅಪ್ಪ ಅಮ್ಮನೊಂದಿಗೆ ಮನೆ ಸೇರಿದೆ, ಅಮ್ಮ ಅಳುತ್ತಿದ್ದರು.. ಅಪ್ಪ ನಿಟ್ಟುಸಿರುಬಿಟ್ಟು ಸುಮ್ಮನಾದರು.. ಗೆಳೆಯ ರವಿ ಮನೆಗೆ ಬಂದಾಗ ನನಗಾಗಿದ್ದ ನೋವಿನಲ್ಲಿಯೂ ಸಂತೋಷ.. ಅಮ್ಮ ಟೀ ತಂದು ಕೊಟ್ಟರು.. “ಇಂದುಕಾಲೇಜಿನಲ್ಲಿ ಪ್ರವಾಸದಲ್ಲಿ ಮಡಿದ ವಿದ್ಯಾರ್ಥಿಗಳಿಗೆ ಶೃದ್ದಾಂಜಲಿ ಸಭೆ ಇದೆ.. ಅದು ಹೇಳಿ ಹೋಗಲು ಬಂದೆ.. ನೀನು ಹುಷಾರಾಗು ಎಂದಾಗ ನನಗೆ ಶಾಕ್..!ಎಷ್ಟು ಜನ ಸತ್ತರು..? ಏನೇನಾಯಿತು ರವಿ ನಿಜ ಹೇಳು..?ದಯವಿಟ್ಟು ನನ್ನನ್ನು ಏನು ಕೇಳಬೇಡ ಎಂದು ಮುಖ ಮುಚ್ಚಿಕೊಂಡು ದುಃಖಿಸಿದ ರವಿ.. ಪತ್ರಿಕೆಯೊಂದನ್ನು ನನ್ನ ಮುಂದಿಟ್ಟು ಹೋದ*ಗೋವಾ ಪ್ರವಾಸ ಮುಗಿಸಿ ಬರುತ್ತಿದ್ದ ಕಾಲೇಜು ಬಸ್ ಭೀಕರ ಅಪಘಾತ..*ನಡುಗುವ ಕೈಗಳು ಕಣ್ತುಂಬಾ ನೀರು.. ಪತ್ರಿಕೆ ಓದಲು ಭಯವಾಗುತ್ತಿತ್ತು ಅಮ್ಮಾ.. ಎಂದು ಕೂಗಿದೆ ಓಡಿ ಬಂದ ಅಮ್ಮ ನನ್ನನ್ನು ತಬ್ಬಿ ಸಂತೈಸಿದಳು..!ಈಗ ನಾನು ಪತ್ರಕರ್ತರುಗಳ ಮುಂದೆ ಕುಳಿತಿರುವೆ.. ಹಲವಾರು ಸುದ್ದಿ ವಾಹಿನಿಗಳು ನನ್ನ ಕತೆಯನ್ನು ಬಿತ್ತರಿಸಿವೆ.. ಈಗಾಗಲೇ ನನ್ನ ಕತೆಯನ್ನು ಎಲ್ಲಾ ಕಡೆ ತೋರಿಸಿದೆ.. ನನಗೆ ಕೆಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವವಿಸಿವೆ… ಅಮರ ಪ್ರೇಮಿ ಎಂದು ಹೊಗಳಿದ್ದಾರೆ..ರಾಜೇಶ್ ಮಾತನಾಡುತ್ತಿದ್ದರು“ನನಗಾಗಿ ಇಷ್ಟು ದೂರ ಬಂದು ನನ್ನ ಕತೆ ಕೇಳಿ ನಾಲ್ಕು ಒಳ್ಳೆಯ ಮಾತು ಹೇಳಿ ನನ್ನ ಬಗ್ಗೆ ಬರೆದ ನಿಮಗೆಲ್ಲರಿಗೂ ಅನಂತ ಕೋಟಿ ಧನ್ಯವಾದಗಳನ್ನು ಅರ್ಪಿಸುತ್ತೇನೆ..ನಾನೀಗ ಸಣ್ಣದೊಂದು ವ್ಯಾಪಾರ,ವಹಿವಾಟು ಮಾಡುತ್ತಿದ್ದೇನೆ ನನಗೆ ಮದುವೆ ಆಗಿದೆ.. ಅಮ್ಮ ಅಪ್ಪ ತೀರಿಕೊಂಡರು.. ಅಪಘಾತದಲ್ಲಿ ಕಾಲು ಮುರಿದುಕೊಂಡು ಅಂಗವಿಕಲನಾದರು ಸ್ವಾಭಿಮಾನದಿಂದ ಬದುಕುತ್ತಿರುವೆ.. ನಾನೀಗ ತೃಪ್ತಿಕರವಾಗಿ ಜೀವನ ನಡೆಸುತ್ತಿದ್ದೇನೆ, ಅದಕ್ಕೆ ಕಾರಣ ನಾನು ನನ್ನ ಪ್ರೀತಿಯನ್ನು ಉಳಿಸಿಕೊಂಡಿದ್ದು.. ಹತ್ತು ವರುಷಗಳ ಹಿಂದೆ ನಡೆದ ಅಪಘಾತದಲ್ಲಿ ನನ್ನ ಗೆಳೆಯರು, ಸಹಪಾಠಿಗಳು ಸಾವಿಗೀಡಾದರು ನಾನು ಹೀಗೆ ಅಂಗವಿಕಲನಾದೆ ಆದರೆ ಯಾವ ದೇವರ ದಯೆಯೋ ಕಾಣೆ ನನ್ನ ಪ್ರೀತಿಯಲ್ಲಿ ಗೆದ್ದೆ..ಅಂದು ನಾನು ಪ್ರೀತಿಸಿದ ಹುಡುಗಿಗೆ ಗೋವಾ ಪ್ರವಾಸದಲ್ಲಿ ನನ್ನ ಪ್ರೀತಿಯನ್ನು ಹೇಳಿಕೊಂಡಿದ್ದೆ.. ಆದರೆ ಅಪಘಾತದಲ್ಲಿ ಆ ಹುಡುಗಿಯ ತಲೆಗೆ ಪೆಟ್ಟಾಗಿ ಅವಳು ಜೀವಶ್ಚವವಾಗಿ ಆಸ್ಪತ್ರೆಯಲ್ಲಿದ್ದಾಗ ನಾನು ಅಪ್ಪ ಅಮ್ಮನ ಜೊತೆ ಆಕೆಯಿದ್ದ ಆಸ್ಪತ್ರೆಗೆ ಹೋಗಿ ಅವಳ ಪೋಷಕರ ಬಳಿ ಮಾತನಾಡಿ ವಿಷಯ ತಿಳಿಸಿ ಅಂತಿಮವಾಗಿ ಅವರ ಒಪ್ಪಿಗೆಯೊಂದಿಗೆ ನನ್ನ ಪ್ರೀತಿಯ ಗೆಳತಿಯನ್ನು ಮದುವೆಯಾಗಿದ್ದೇನೆ..ನಮ್ಮಿಬ್ಬರದೂ ಸುಖೀ ಸಂಸಾರ.. ನೋಡಿ ಈಕೆಯೆ ನನ್ನ ಪ್ರೀತಿಯ ಗೆಳತಿ ನನ್ನ ಧರ್ಮಪತ್ನಿ ಸುಮಲತ ಎಂದು ಪತ್ರಕರ್ತರಿಗೆ ಸುಮಲತಳನ್ನು ಪರಿಚಯಿಸುತ್ತಾನೆ.. ರಾಜೇಶ್ ನಿಜಕ್ಕೂ ಮಾನವೀಯತೆಗೆ ತಾನು ಪ್ರೀತಿಸಿದ ತನ್ನ ಪ್ರೀತಿಗೆ ಬಹು ದೊಡ್ಡ ಗೌರವ ನೀಡಿ ಪ್ರೀತಿಯ ಮಹತ್ವವನ್ನು ಸಾರಿ ಹೇಳುತ್ತಾರೆ.. ವೀಲ್ ಚೇರ್ ಮೇಲೆ ಕುಳಿತ ಸುಮಲತಳನ್ನು ರಾಜೇಶ್  ಪರಿಚಯ ಮಾಡಿಸುತ್ತಾರೆ..ಮಾತು ಕಳೆದುಕೊಂಡು ಕೈ ಕಾಲುಗಳ ಸ್ವಾದೀನ ಇಲ್ಲದೆ ವೀಲ್ ಚೇರ್ ನಲ್ಲಿ ಕುಳಿತಿರುವ ಸುಮಲತಳನ್ನು ಕಂಡ ಪತ್ರಕರ್ತರು, ಟೀವಿ ವಾಹಿನಿಗಳು ಒಂದು ಕ್ಷಣ ಮೌನಕ್ಕೆ ಜಾರುತ್ತಾರೆ.. ಕಣ್ಣಿನಲ್ಲಿ ಜೀವ ಇಟ್ಟುಕೊಂಡು ಉಸಿರಾಡುತ್ತಿರುವ ನಿಶ್ಚಲ ಬದುಕಿನ ಪಯಣಿಗಳಂತೆ ಕಾಣುವ ಸುಮಲತ‌ ಮತ್ತು ಆಕೆಯ ಬಾಳಿಗೆ ಬೆಳಕು ನೀಡಿ ಪ್ರೀತಿಯ ಬದುಕಿಗೆ ಜೀವ ತುಂಬಿದ ನಾವಿಕ ರಾಜೇಶ್ ತನ್ನ ಅಂಗವೈಕಲ್ಯತೆಯನ್ನು ಮೀರಿ ನಿಂತು ಮಾನವತೆಯ ದೇಗುಲದ ಮಹಾನ್ ದೈವಿಕರಂತೆ ಗೋಚರಿಸುತ್ತಾರೆ.. ಲೈವ್ ಟೀವಿ ನೋಡುತ್ತಿರುವ ಅಸಂಖ್ಯಾತ ವೀಕ್ಷಕರು ತಮಗರಿವಿಲ್ಲದಂತೆಯೇ ಕಣ್ಣೀರು ಜಿನುಗಿಸುತ್ತಾರೆ.. ಎಲ್ಲೆಲ್ಲೂ ಚಪ್ಪಾಳೆ ನವ ದಿಗಂತದಲ್ಲಿ ಬಣ್ಣದೋಕುಳಿ.. ಈ ಅಮರಜೀವಿಗಳ ಪಾಲಿಗೆ ಸಣ್ಣ ಹನಿಗಳು ಸುರಿಸಿ ಆರತಿ ಎತ್ತುತ್ತದೆರಾಜೇಶ್ ಮತ್ತು ಸುಮಲತ ತಮ್ಮ ಅಂಗ ವೈಕಲ್ಯವನ್ನು ಮೀರಿ ನಿಂತು ತಮ್ಮ ಪ್ರೇಮದ ಪ್ರೀತಿಯ ಪರಾಕಾಷ್ಠೆ ಅಮರಕಾವ್ಯದ ಪ್ರೇಮ ಬರಹಕ್ಕೆ ಸಾಕ್ಷಿಯಾಗಿ ಹೊಸದೊಂದು ಮುನ್ನುಡಿ ಬರೆದು ಪ್ರೇಮಲೋಕದ ದೃವ ತಾರೆಗಳಾಗಿ ಪ್ರಜ್ವಲಿಸುತ್ತಾರೆ. ರಾಜ ಶೇಖರ್. ಕೆ

ರಾ.ಶೇ ಅವರ ನೆನಪುಗಳ ಲಹರಿ “ಆ ದಿನಗಳು” Read Post »

ಕಾವ್ಯಯಾನ

ನಾಗರಾಜ ಬಿ ನಾಯ್ಕ ಅವರ ಕವಿತೆ”ಸುಂದರಚಿತ್ರಕೆ”

ಕಾವ್ಯ ಸಂಗಾತಿ ನಾಗರಾಜ ಬಿ ನಾಯ್ಕ “ಸುಂದರಚಿತ್ರಕೆ” ಹಗಲು ಬಿಡಿಸಿದಸುಂದರ ಚಿತ್ರಕೆಗರಿಗಳು ನೂರುನಗೆಯ ನವಿಲುಗಳುಹಾರೋ ಹಕ್ಕಿಗಳುತೇಲೋ ಮೋಡಗಳಒಲವಿನ ಸೂರುಇಳೆಯ ಮಂಟಪಕೆಚಿನ್ನದ ರೇಖೆಗಳುಬೆಳಕಿನ ತೇರುಬಳ್ಳಿ ಬಳುಕಿನಲಿಮರದ ಸೊಂಪಿನಲಿಹಕ್ಕಿಗಾನ ಜೋರುಮಣ್ಣ ರಾಶಿಯಲಿನೀರ ಹನಿಗಳಲಿಚೆಂದ ಕವಿತೆ ಸಾಲುದಿನದ ಬದುಕಿನಲಿನೂರು ತೆರೆ ಬರಲಿಬದುಕು ಚೆಂದ ನೋಡು ನಾಗರಾಜ ಬಿ ನಾಯ್ಕ.

ನಾಗರಾಜ ಬಿ ನಾಯ್ಕ ಅವರ ಕವಿತೆ”ಸುಂದರಚಿತ್ರಕೆ” Read Post »

ಕಾವ್ಯಯಾನ

ನಿಶ್ಚಿತ ಎಸ್( ಎಸ್. ಎನ್)ಅವರ ಕವಿತೆ “ನನ್ನ ಕ್ಷಮಿಸಿ”

ಕಾವ್ಯ ಸಂಗಾತಿ ನಿಶ್ಚಿತ ಎಸ್( ಎಸ್. ಎನ್) “ನನ್ನ ಕ್ಷಮಿಸಿ” ಮನದಾಳದ ಮಾತನ್ನುಮನ ಬಂದಂತೆಹೇಳಿದ್ದಕ್ಕಾಗಿ ಕ್ಷಮಿಸಿ ನನ್ನ ನೀವು ನನ್ನವರೆಂದು ತಿಳಿದುನನ್ನವರನ್ನೆಲ್ಲ ಬಿಟ್ಟುಬಂದಿದ್ದಕ್ಕಾಗಿ ಕ್ಷಮಿಸಿ ನನ್ನ ನಿಮ್ಮವರನ್ನೆಲ್ಲ ನಮ್ಮವರೆಂದುತಿಳಿದುಕೊಂಡಿದ್ದಕ್ಕಾಗಿಕ್ಷಮಿಸಿ ನನ್ನ ನನ್ನ ಅಂತರಂಗವ ನೀವುಅರಿಯುತ್ತೀರಾ ಎಂದುನಂಬಿದ್ದಕ್ಕಾಗಿ ಕ್ಷಮಿಸಿ ನನ್ನ ನಾ ಇರುವ ಹಾಗೆ ನನ್ನನ್ನುಒಪ್ಪಿಕೊಳ್ಳುವಿರಿ ಎಂದುಬಯಸಿದ್ದಕ್ಕಾಗಿ ಕ್ಷಮಿಸಿ ನನ್ನ ನಿಮ್ಮ ಆಸೆಗಳಿಗಾಗಿನನ್ನಾಸೆಗಳನ್ನತೊರೆದಿದ್ದಕ್ಕಾಗಿ ಕ್ಷಮಿಸಿ ನನ್ನ ನನ್ನ ಕನಸುಗಳನ್ನುನನಸು ಮಾಡುವಿರಿ ಎಂದುಅಪೇಕ್ಷಿಸಿದ್ದಕ್ಕಾಗಿ ಕ್ಷಮಿಸಿ ನನ್ನ ನನ್ನ ಭಾವನೆಗಳಿಗೆನಿಮ್ಮ ಸ್ಪಂದನೆಯಕೇಳಿದ್ದಕ್ಕಾಗಿ ಕ್ಷಮಿಸಿ ನನ್ನ ನಾನು ನೀವು ಎರಡು ದೇಹಒಂದು ಪ್ರಾಣ ಎಂದುಕಲ್ಪಿಸಿಕೊಂಡಿದ್ದಕ್ಕಾಗಿ ಕ್ಷಮಿಸಿ ನನ್ನ ಒಟ್ಟಾರೆಯಾಗಿ ನಾನು ಆ ಮನೆಯಸೊಸೆಯಲ್ಲ ಮಗಳೆಂದುಬದುಕಿದ್ದಕ್ಕಾಗಿ ಕ್ಷಮಿಸಿ ನನ್ನ ನಿಶ್ಚಿತ ಎಸ್( ಎಸ್. ಎನ್)ನಿಶ್ಚಿತಾರ್ಜುನ್

ನಿಶ್ಚಿತ ಎಸ್( ಎಸ್. ಎನ್)ಅವರ ಕವಿತೆ “ನನ್ನ ಕ್ಷಮಿಸಿ” Read Post »

ಕಾವ್ಯಯಾನ

ವಾಣಿ ಶಿವಕುಮಾರ್‌ ಅವರ ಕವಿತೆ ” ಜೀವದ ಗೆಳತಿ”

ಕಾವ್ಯ ಸಂಗಾತಿ ವಾಣಿ ಶಿವಕುಮಾರ್‌ “ಜೀವದ ಗೆಳತಿ” pic adobeai̧chatgpt ಕಣ್ಣಲ್ಲಿ ಮೂಡಿದ ಕಾಂತಿಯ ಹೊನಲು,ಮನದಲ್ಲಿ ಪ್ರೀತಿಯ ಮೊಗ್ಗು ಅರಳಲು,ಜೀವದ ಗೆಳತಿ ನೀನಾಗಿ ಬಂದರೆ,ಬಂದಿಯು ನಿನ್ನ ತೋಳಿನಾಸರೆ.. ಚಂದಿರನೂ ನಾಚಿ ಮೋಡದಿ ಮರೆಯಾದ,ಹೃದಯ ತಾಳಕೆ ಬೆಸೆಯಿತು ಗೆಜ್ಜೆನಾದ,ಶೃಂಗಾರದ ಮೈಸಿರಿಗೆ ದೃಷ್ಟಿ ತಾಕದಂತೆ,ನನ್ನ ಕಣ್ಣುಗಳೇ ನಿನಗೆ ಕಾವಲಿನಂತೆ.. ಒಲವು ಚೆಲುವಿನ ಚಿತ್ತಾರ ಬರೆದಿದೆ,ಕಾಮನಬಿಲ್ಲಾಗಿ ರಂಗನು ಹರಿಸಿದೆ,ಭತ್ತದ ಎಸಳನು ನವಿರಾಗಿ ಬಿಡಿಸುತಾ,ಗುಲಾಬಿ ತಿರುಳನು ಸವೆದು ಮರ್ಧಿಸುತ,-ಸಣ್ಣ ಆಲಾಪನೆ-ಜಗವ ಮರೆಯುತ, ಉಸಿರ ಬೆಸೆಯುತ,ಸಾಗುವ ಜೊತೆಗೆ ಹೆಜ್ಜೆಯನೂರುತ.. ಕಣ್ಣಲ್ಲಿ ಮೂಡಿದ ಕಾಂತಿಯ ಹೊನಲು,ಮನದಲ್ಲಿ ಪ್ರೀತಿಯ ಮೊಗ್ಗು ಅರಳಲು,ಜೀವದ ಗೆಳತಿ ನೀನಾಗಿ ಬಂದರೆ,ಬಂದಿಯು ನಿನ್ನ ತೋಳಿನಾಸರೆ.. ವಾಣಿ ಶಿವಕುಮಾರ್

ವಾಣಿ ಶಿವಕುಮಾರ್‌ ಅವರ ಕವಿತೆ ” ಜೀವದ ಗೆಳತಿ” Read Post »

ಕಾವ್ಯಯಾನ

ಡಾ.ಹೆಚ್.ನಟರಾಜ್‌ ಅರ್ಯ ಅವರ ಕವಿತೆ “ಬೆಳದಿಂಗಳ ರಾತ್ರಿ ಕಂಡ ಕನಸು”

ಕಾವ್ಯ ಸಂಗಾತಿ ಡಾ.ಹೆಚ್.ನಟರಾಜ್‌ ಅರ್ಯ “ಬೆಳದಿಂಗಳ ರಾತ್ರಿ ಕಂಡ ಕನಸು” ಬೆಳದಿಂಗಳ ಬೆಳ್ಳಿ ಹಾದಿಯಲ್ಲಿ,ಮನಸು ಮೌನವಾಗಿ ತೇಲಿತು;ನೆರಳಿನ ಮಧ್ಯೆ ನಿಂತ ಕನಸು,ನನ್ನ ಕೈ ಹಿಡಿದು ನಡೆಯಿತು. ಕತ್ತಲ ಕಾಡು ದಟ್ಟವಾದರೂ,ಚಂದ್ರ ಕಣ್ಣು ಮಿಟುಕಿಸಿತು;ದಿಕ್ಕಿಲ್ಲದ ಹೆಜ್ಜೆ ಮುಂದೆ,ಕನಸೇ ದಾರಿಯಾಗಿ ನಿಂತಿತು. ಒಣ ಮಣ್ಣಿನ ನಿಶ್ಶಬ್ದದಲ್ಲಿ,ಒಂದು ಮೊಳೆ ತಲೆ ಎತ್ತಿತು;“ದಯೆ ಬಿದ್ದ ಬೀಜವಾದರೆ,ಬಾಳೇ ಮರವಾಗಿ ಬೆಳೆಯಿತು.” ಹಸಿದ ಕಣ್ಣಿನ ತೇವದಲ್ಲಿ,ದೇವರ ಮೌನ ಕಾಣಿಸಿತು;ಒರೆಸಿದ ಒಂದು ಕಣ್ಣೀರಲ್ಲಿ,ಒಂದು ದೀಪವೇ ಹೊತ್ತಿತು. ಸುಲಭ ಸಿಹಿಯ ಮೃದುವಾದ ಧ್ವನಿ,ದೂರದಿಂದ ಕರೆಯಿತು;ಬೆವರಿನ ಉಪ್ಪು ಬಿದ್ದ ಜಾಗದಲ್ಲಿ,ಸತ್ಯದ ಬೆಳೆ ಮೊಳೆಯಿತು. ಕಲ್ಲಿನ ಹೃದಯದೊಳಗೂ,ಒಂದು ಹನಿ ದಯೆ ಬೀಳಿತು;ಹಿಮಾಲಯದ ಅಹಂಕಾರವೂ,ಮೌನವಾಗಿ ನೀರಾಯಿತು. ಬೀಜವಾಗಿ ಬಿದ್ದ ಸಣ್ಣ ಕೈಹಿಡಿತ,ಕಾಲದಲ್ಲಿ ಮರವಾಗಿ ನಿಂತಿತು;ಆ ಮರದ ನೆರಳಲ್ಲಿ ಒಂದು ದಿನ,ಕೊಟ್ಟ ಕೈಯೂ ಮರೆತು ಹೋಯಿತು. ಬೆಳದಿಂಗಳ ಮೌನ ರಾತ್ರಿ,ಕನಸು ಬಂದು ಮಾತಾಡಿತು“ಒಂದು ಮನದಲ್ಲಿ ಬೆಳಕು ಹತ್ತಿದರೆ,ಲೋಕವೆಲ್ಲ ಪ್ರಭಾತವಾಯಿತು.” ಡಾ.ಹೆಚ್.ನಟರಾಜ್‌ ಅರ್ಯ

ಡಾ.ಹೆಚ್.ನಟರಾಜ್‌ ಅರ್ಯ ಅವರ ಕವಿತೆ “ಬೆಳದಿಂಗಳ ರಾತ್ರಿ ಕಂಡ ಕನಸು” Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ ಗಜಲ್ ಅದಾವ ಮೋಹದ ಮಾಯೆ ಸೆಳೆದಿದೆ ನಿನ್ನೆಡೆಕಣ್ಣೊಳಗಿನ ಒಲವಿನ ನೋಟ ಕರೆದಿದೆ ನಿನ್ನೆಡೆ ಗಾಳದಲ್ಲಿ ಸಿಕ್ಕ ಮೀನಂತಾಗಿದೆ ನನ್ನೀ ಜೀವನನಂಬಿಕೆಯೇ ಒಲವೆಂಬ ಜಾಡು ಹಿಡಿದಿದೆ ನಿನ್ನೆಡೆ ನಯವಾದ ಮಾತುಗಳೇ ಮುದ ನೀಡಿದವು ಎನಗೆಶರದಿ ಸೇರುವ ತವಕದಿ ಮನ ನಡೆದಿದೆ ನಿನ್ನೆಡೆ ತಿಳಿಯದಂತಿರಬೇಕು ಮಾಡಿದ ತಪ್ಪುಗಳಿಗೆ ಅಲ್ಲವೇಭ್ರಮೆಯ  ತೊರೆದು ನಂಬಿಕೆಯ ಪಡೆದಿದೆ ನಿನ್ನೆಡೆ ರೇಖೂ ಸೋಕಿಸಿಕೊಳ್ಳದಿರು ಕರಿ ನೆರಳ ಛಾಯೆಯಸೋಲಿನ ಭೀತಿಯ ಬಿಟ್ಟು ಭರವಸೆ ಬೆಳೆದಿದೆ ನಿನ್ನೆಡೆ ಡಾ.ರೇಖಾ ಉದಯ

ಡಾ.ರೇಖಾ ಉದಯ ಅವರ ಗಜಲ್ Read Post »

You cannot copy content of this page

Scroll to Top