ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

“ಬೈಸಿಕಲ್ಲು” ವಿಶ್ವ ಸೈಕಲ್ ದಿನಕ್ಕೊಂದು ಕವಿತೆ ಸುಜಾತಾ ರವೀಶ್ ಮೈಸೂರು

ಕಾವ್ಯ ಸಂಗಾತಿ “ಬೈಸಿಕಲ್ಲು” ವಿಶ್ವ ಸೈಕಲ್ ಸುಜಾತಾ ರವೀಶ್ ಮೈಸೂರು ಹಿಂದೊಂದು ಕಾಲದ ಪ್ರತಿಷ್ಠೆಯ ಲಾಂಛನಇಂದು ಹೆಸರೇ ಇದರದು ಬಡವರ ವಾಹನಗಾಲಿಯ ಆವಿಷ್ಕಾರದೊಂದಿಗೆ ಇದರ ಉಗಮಸೈಕಲೇರಿದರೆ ಎಷ್ಟು ಮಜಾ! ಆಹಾ ಆರಾಮ! ಬೇಡದು ಹೆಚ್ಚಿನ ಖರ್ಚಿನ ಇಂಧನಕೇಳದು ದುಬಾರಿ ಸರ್ವೀಸು ಉಸ್ತುವಾರಿಗಳತುಳಿದು ತುಳಿದು ರಟ್ಟೆ ಕಾಲುಗಳಿಗೆ ಬಲಹತ್ತಿರ ಸುಳಿಯದು ಬೊಜ್ಜು ರೋಗ ರುಜಿನ ಇಲ್ಲ ಸೈಕಲ್ ಸವಾರಿ ಮಾಡಲು ಬಯಸದ ಮನಸುಕೆಲವರಿಗಂತೂ ಉಳಿದೇ ಬಿಟ್ಟಿದೆ ಇದಾಗಿ ಕನಸುಅಗೆಯುತ್ತಾ ಹೋದರೆ ಬಾಲ್ಯದ ನೆನಪುಗಳ ಗಣಿಸಿಗುವುದು ಎಲ್ಲರಿಗೂ ಸೈಕಲ್ ಕಲಿಕೆಯ ಮೆಲುಕ ಮಣಿ ಆಗುತ್ತಾ ಹೋದಂತೆ ಮನುಜರು ಸೋಮಾರಿವಿರಳವಾಯಿತು ಸೈಕಲ್ ಉಪಯೋಗ ಸವಾರಿವ್ಯಾಯಾಮ ಆರೋಗ್ಯ ನೀಡುತ್ತಿದ್ದ ಆ ಉಪಕಾರಿಈಗ ತುಕ್ಕು ಹಿಡಿದ ಕಂಬಿಗಳ ಆಸ್ತಿಪಂಜರ ಬರೀ. ಸಮಯದ ಪರಿವರ್ತನೆಯ ನಿಯಮಗಳಸಾರುವಂತಿದೆ ನಶ್ವರ ಜೀವನದ ತತ್ವಗಳಹೇಳುತ್ತಲಿದೆ ಏಳು ಬೀಳುಗಳ ಪಾಠಗಳವಿಪರ್ಯಾಸಗಳ ವೈಚಿತ್ರ್ಯ ವೈರುಧ್ಯಗಳ ಕಥೆಗಳ ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕೆ ಇದು ವರಕಾಣದ ಕೇಳದ ರೋಗಗಳಿಗೆ ಕೊಡುವ ಉತ್ತರಬನ್ನಿ ಎಲ್ಲಾ ಉಪಯೋಗಿಸೋಣ ಸೈಕಲ್ಲುಕಡಿಮೆ ಮಾಡೋಣ ಪೆಟ್ರೋಲು ಡಾಕ್ಟರ ಬಿಲ್ಲು ಸುಜಾತಾ ರವೀಶ್ ಮೈಸೂರು

“ಬೈಸಿಕಲ್ಲು” ವಿಶ್ವ ಸೈಕಲ್ ದಿನಕ್ಕೊಂದು ಕವಿತೆ ಸುಜಾತಾ ರವೀಶ್ ಮೈಸೂರು Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಎದೆ ಹಾಲು”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಎದೆ ಹಾಲು” ನವಮಾಸ ಕತ್ತಲೊಳಗೆರಕ್ತ ದೀಪ ಹೊತ್ತಿತು,ಕರುಳು ಬಳ್ಳಿಯ ಸೇತುವೆಯಲಿಜೀವ ಹನಿ ತೇಲಿತು. ಪ್ರಸವ ನೋವಿನ ಅಲೆಗಳಲಿಸಾವಿನ ಬಾಗಿಲ ತಟ್ಟಿತು,ಮೊದಲ ಅಳುವ ನಾದದೊಡನೆಮಮತೆ ಹೊಳೆ ಹರಿಯಿತು. ಎದೆ ಹಾಲಿನ ಬಿಳಿಹರಿವುಕರಗಿದ ರಕ್ತ ಜ್ಯೋತಿ,ಮಗುವ ತುಟಿ ನಗುವಿನಲಿಮತ್ತೆ ಮೊಳೆದ ಜೀವಶಕ್ತಿ. ಕನ್ನಡಿ ಮಿಂಚಿನ ಮೋಹದಲಿಮಡಿಲ ಜೋಗುಳ ಮಂಕಾಯಿತು,ಮೊಬೈಲಿನ ನೀಲಿ ಕಣ್ಣಲಿಬಾಲ್ಯ ಮೌನವಾಗಿ ಕರಗಿತು. ಕರುಳು ಬಳ್ಳಿಯ ನoಟ್ಟಿoದುಕಸಬುಟ್ಟಿ ದಾರಿ ಹಿಡಿಯಿತು,ಕಣ್ಣೀರ ಹನಿಯ ಆಳದಲಿಮಮತೆ ದೀಪ ಉಳಿಯಿತು. ತಾಯಿಯೆಂದರೆ  ಚಂದ್ರನಲ್ಲ,ಸುಟ್ಟು ಕರಕಾದ ದೀಪ,ಕರಗಿದ ಉಸಿರ ಬೂದಿಯಲಿಬಾಲ್ಯ ದಾರಿಯ ರೂಪ. ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಎದೆ ಹಾಲು” Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇಳಿದುಬಿಡು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇಳಿದುಬಿಡು“ ಇಳಿದು ಬಿಡು ಮಳೆ  ಬೇಗನೆ, ಸುಡುವ ಧರೆಗೆ ತಂಪು ನೀಡು.ಕಾದು ಕುಳಿತಿವೆ  ಜೀವ ಜಾಲ,ಕಾಯುತ್ತಿವೆ ಸಿಹಿ ಹನಿಗಳ ಮುತ್ತು ರತ್ನ . ಬತ್ತಿದ ಕೆರೆ ತೊರೆಗಳ ತುಂಬಿಸು,ನಗೆ ಅರಳಲಿ ಗಿಡ.ಮರ ಬಳ್ಳಿಗಳಲಿ ಒರೆಸು  ಕಣ್ಣೀರು ಸರಿಸಿ ಸಾಲದ ಮೂಟೆ,ಹಸಿರ ಹಂದರವ ಎಲ್ಲೆಡೆ ಕಟ್ಟಿ. ಚಲಿಸುವ ಕಾರ್ಮೋಡಗಳು ಒಂದಾಗಿ ಬನ್ನಿ,ತೆಪ್ಪನೆ ಮಳೆ  ಸುರಿದು ಜಗವ ನಲಿಸಿ.ಮಣ್ಣು ಹುಡಿ ಭಂಡಾರ ತೂರಿ  , ಜನ್ಮ ಆಸೆಯ ಮತ್ತೆ ಚಿಗುರಿಸಿ. ನಿನ್ನ ತಂಪ ಆ ಸಿಹಿ ಸಿಂಚನ,ಸೃಷ್ಟಿಯ ಒಡಲಿಗೆ ಜೀವ ಗಾನ!ಸದ್ದಿಲ್ಲದೆ  ಹೊರಟು ಬಿಡುನಿನ್ನ ದಾರಿ  ಬದುಕು ಪಾವನ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇಳಿದುಬಿಡು” Read Post »

ಕಾವ್ಯಯಾನ

ಭಾರತಿ ರವೀಂದ್ರ ಅವರ ಹಾಯ್ಕುಗಳು

ಕಾವ್ಯ ಸಂಗಾತಿ ಭಾರತಿ ರವೀಂದ್ರ ಹಾಯ್ಕುಗಳು ಅನುದಿನವುನವ ನವೀನ ಕಂದನಲಿಯುವಾಗ ಆಟ ಚಂದವು,ತೋದಲ್ನುಡಿ ಸಂಗೀತಮಗು ಆಡಲು ಇರುವಂತಿಗೆಅರಳಿದಾಗ, ಮನಮನೆ ಸೌರಭ. ಈಶ ಗೌರೀಶರಕ್ಷಿಸು ಭಗವಂತಬಿಸಿಲ ಬೇಗೆ ಉತ್ತರ ಇದೆಪ್ರತಿ ಗೂಢ ಪ್ರಶ್ನೆಗೆಅರಿಸು ನೋಡು ಊಸರವಳ್ಳಿಬಣ್ಣವು ಕೆಲವರನಡೆ ನುಡಿಲಿ ಎದೆಯಾಳದಿದಾವನಲ, ನಯನನಗುತಿರಲು, ಏಕೆ ಮನಸ್ಸೆ?ನಿನ್ನದಲ್ಲದ ಸಿರಿಯುಎಂದೂ ಸಿಗದು ಐಶ್ವರ್ಯ ಅಂಧಕಾಣನು ಯಾವದನ್ನೂದೇವರೇ ಗತಿ ಒಲವೇ ಸಿರಿಅರಿತ ಮನಗಳುಜೊತೆ ಸಾಗಲು ಓರೆ ನೋಟಕೆಸೋತು ಶರಣು, ನವ್ಯಪ್ರೇಮ ಕವನ ಔಷಧ ನೋಡುನಿನ್ನ ನಗು ಕಂಡಾಗನೋವು ಶಮನ ಭಾರತಿ ರವೀಂದ್ರ

ಭಾರತಿ ರವೀಂದ್ರ ಅವರ ಹಾಯ್ಕುಗಳು Read Post »

ಕಾವ್ಯಯಾನ

ಸುಮನಾ ರಮಾನಂದ,ಕೊಯ್ಮತ್ತೂರು “ಮುಸ್ಸಂಜೆ ನೋಟ”

ಕಾವ್ಯ ಸಂಗಾತಿ ಸುಮನಾ ರಮಾನಂದ,ಕೊಯ್ಮತ್ತೂರು “ಮುಸ್ಸಂಜೆ ನೋಟ” ಅಂದದ ವರ್ಷಧಾರೆ ಬರುತಿದೆಚೆಂದದ ಈ ಮುಸ್ಸಂಜೆಯಲಿ!ನೊಂದ ಬುವಿಯದನಪ್ಪಿ..ಮಿಂದಂತಿದೆ ಮಣ್ಣ ಘಮಲಿನಲಿ!! ಬಂಗಾರ ಬಣ್ಣದ ಬೆಳಕಿಂದರಂಗಾಗಿದೆ ಧರೆ ಹಸಿರಿನಲಿ!ಹಿಂಗಾರಿನ ಮುಸಲಧಾರೆಯ..ಗುಂಗಿನಲಿದೆ ಇಳೆ ಹರುಷದಲಿ!! ತೆಂಗಿನ ಗರಿಗಳ ಓಲಾಟದಿರಂಗಿನ ಚಿತ್ತಾರ ಗಗನದಲಿ!ಭೃಂಗವದು ಹೂವನ್ನು ಕಾಡುವಂತೆ..ತಂಗಾಳಿ ತೀಡಿದೆ ಸಂಜೆಯಲಿ!! ಬೆರಗಿನ ಚಟಪಟ ಮಳೆಹನಿಯುಮೆರುಗಿನಿಂದಾಗಮಿಸಿ ಅವನಿಯಲಿ!ಮೂಡಿಸಿ ಚಿತ್ತಾರವನಾಗಸದಿ..ಸೊಬಗು ತಂದಿದೆ ಬೈಗಿನಲಿ!! ಸುಮನಾ ರಮಾನಂದ,ಕೊಯ್ಮತ್ತೂರು

ಸುಮನಾ ರಮಾನಂದ,ಕೊಯ್ಮತ್ತೂರು “ಮುಸ್ಸಂಜೆ ನೋಟ” Read Post »

ಕಾವ್ಯಯಾನ

ಶಂಕರರಾವ ಉಭಾಳೆ ದೇವದುರ್ಗ ” ಯಾರದು?”

ಕಾವ್ಯ ಸಂಗಾತಿ ಶಂಕರರಾವ ಉಭಾಳೆ ದೇವದುರ್ಗ ” ಯಾರದು?” ಒಲೆ ಮಣ್ಣಿನದುಮಣ್ಣು ಕೆರೆಸಾಲಿನದುಕೆರೆ ಗೌಡನದು ಹಸಿವಿಗಾಗಿ ರೊಟ್ಟಿರೊಟ್ಟಿಗಾಗಿ ಜೋಳಜೋಳಕ್ಕಾಗಿ ಹೊಲಹೊಲ ಗೌಡನದು ಎತ್ತು ಗೌಡನದುಬಂಡಿ ಗೌಡನದುಉತ್ತಿ ಬಿತ್ತಿದ ಹೊಲದ ಶ್ರಮ ನನ್ನದುಬೆಳೆಯ ಅಧಿಕಾರ ಗೌಡನದು ಬಾವಿ ಗೌಡನದುನೀರು ಗೌಡನದುಹೊಲ ಗದ್ದೆ ಗೌಡನದುಓಣಿ ಕೇರಿಗಳೆಲ್ಲ ಗೌಡನದುಗ್ರಾಮಹೋಬಳಿತಾಲೂಕುಜಿಲ್ಲೆರಾಜ್ಯಗೌಡನದುಹಾಗಾದರೆನನ್ನದೇನಿದೆ…? ಶಂಕರರಾವ ಉಭಾಳೆ ದೇವದುರ್ಗ

ಶಂಕರರಾವ ಉಭಾಳೆ ದೇವದುರ್ಗ ” ಯಾರದು?” Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ “ಅಲ್ಲೆಲ್ಲೊ ನೀನೇ!”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ “ಅಲ್ಲೆಲ್ಲೊ ನೀನೇ!” ಅಂದೊಮ್ಮೆ ನನಗೆ ನಿನ್ನನ್ನು ಕಂಡುಮಾತಾಡೋ ಬಯಕೆ ಬಂದಿತ್ತು ಅಂದುಅಲ್ಲೆಲ್ಲೋ ನೀನು ಕಣ್ಮರೆಯಾಗಿ,ಸುಳಿವೊಂದು ಸಿಗದೆ ಕಣ್ಣೀರು ತಂದೆ ನಾ ನಿನ್ನ ಕರೆದು ಬಳಿ ಬಂದು ನಿಂದುನಿನ್ನ ಖುಷಿಯ ತಂದೆ ನಿನಗಾಗಿ ಇಂದುನಿನ್ನನ್ನು ಕರೆದು ಮಾತನಾಡೋ ಬಯಕೆ ನನಗಿತ್ತು ಅಂದು ಭಯವೆಲ್ಲ ಎಂದು ಆರೋಪ ಇರದ ಈ ರೂಪ ನಿನಗೆ ಕೊಡಬೇಕು ನಾನು ನಾನಿರುವವರೆಗೆಆ ನಿನ್ನ ನಗುವು ನನಗಾಗೆ ಇರಲು  ಸವಿಯುವೆ ನಾನು ಹಗಲು ಇರುಳು ನಗುವಲ್ಲಿ ಇರುವಂತ ಆ ನಿನ್ನ ಕನಸುಮಲ್ಲಿಗೆ ಹೂವಂತೆ ಅರಳುವ  ಸೊಗಸುಕೋಗಿಲೆ ಹಾಡು ನಾವಿರುವ ನಾಡುಇಂಪಾಗಿ ಕೇಳು ಈ ನನ್ನ ಹಾಡು ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ “ಅಲ್ಲೆಲ್ಲೊ ನೀನೇ!” Read Post »

ಕಾವ್ಯಯಾನ

ಹಮೀದ್ ಹಸನ್‌ ಮಾಡೂರು ” ಜಿರಳೆ ದಂಗೆ ಸಾರಿದೆ”

ಕಾವ್ಯ ಸಂಗಾತಿ ಹಮೀದ್ ಹಸನ್‌ ಮಾಡೂರು “ಜಿರಳೆ ದಂಗೆ ಸಾರಿದೆ” ಜಿರಳೆ ಬಂತಯ್ಯ ಜಿರಳೆಎಲ್ಲೆಡೆಯು ಗದ್ದಲ ಎಬ್ಬಿಸಿದುಷ್ಟ ಸ್ವಾರ್ಥಿಗಳ ನಿದ್ದೆಗೆಡಿಸಿಅತ್ತಿತ್ತ ವಾಟ್ಸಾಪ್ ತುಂಬ ಹರಿದಾಡಿಸಿ,! ದುಷ್ಟ ರಾಜಕೀಯ ನೀತಿಗೆಧರ್ಮ ರಾಜಕೀಯ ಕ್ರಾಂತಿಗೆಕೊಳಕು ಬಾಯಿಯ ಮತಿಭ್ರಾಂತಿಗೆಗೆದ್ದಲು ಸಾಮ್ರಾಜ್ಯಶಾಹಿ ಅವನತಿಗೆ,! ಯುವ ಜನಾಂಗದಶೋಷಿತ, ತುಳಿತಕ್ಕೊಳಗಾದಅಲ್ಪಸಂಖ್ಯಾತ,ನೊಂದವರಿಗಾದನ್ಯಾಯದ ಪರ ಹೋರಾಡ ಬಂದಿದೆ,! ಸರ್ವಾಧಿಕಾರಿಗಳ ಮಸ್ತಕನುಸುಳಿ ಮೆದಳಿಗೆ ನೋಯಿಸಿಸತ್ತಂತಿಹರನು ಇದೀಗ ಬಡಿದೆಬ್ಬಿಸಿನ್ಯಾಯಕ್ಕಾಗಿ ಜಿರಳೆ ಧಂಗೆಯ ಸಾರಿದೆ,! ಕುರ್ಚಿಯಾಸೆಗೆಆಡಳಿತೆಯ ದುರಾಸೆಗೆಮನುಜ ಮನಸುಗಳ ಕೊಳಚೆಗೆದೂಡಿ ಬಿಟ್ಟವರ ಬೆನ್ನಟ್ಟುತ್ತ ಬಂದಿದೆ.! ಹಮೀದ್ ಹಸನ್ ಮಾಡೂರು

ಹಮೀದ್ ಹಸನ್‌ ಮಾಡೂರು ” ಜಿರಳೆ ದಂಗೆ ಸಾರಿದೆ” Read Post »

ಕಾವ್ಯಯಾನ

ರಘುಪ್ರಸಾದ ಮರಿಯಮ್ಮನಹಳ್ಳಿ  ಅವರ ಕವಿತೆ “ನಿನ್ನ ಹಾಗೆ ಬದುಕಲುಂಟೆ ಗಾಂಧಿ…?”

ಕಾವ್ಯ ಸಂಗಾತಿ ರಘುಪ್ರಸಾದ ಮರಿಯಮ್ಮನಹಳ್ಳಿ   “ನಿನ್ನ ಹಾಗೆ ಬದುಕಲುಂಟೆ ಗಾಂಧಿ…?” ಈ ಹೊತ್ತಿನ ದಿನಗಳಲ್ಲಿ ನಿನ್ನ ಹಾಗೆ ಬದುಕಲುಂಟೆ ಗಾಂಧಿಕ್ಷಣ ಕ್ಷಣಕೂ ಹೊರಳಿಸುವ ನಾಲಗೆಗಳ ನಡುವೆಸತ್ಯವನ್ನೆ ಉಸಿರಾಡಿದಂತೆ ಬದುಕಲುಂಟೆ?!ಶತಾಯ ಗತಾಯ ಗಳಿಸುವ ಉಳಿಸುವಯೋಚನೆ ಯೋಜನೆಗಳ ನಡುವೆ ತಡವರಿಸುವ ನಾವುನಿನ್ನ ಹಾಗೆ ಅರೆಫಕೀರನಂತೆ ಬದುಕಲುಂಟೆ ಗಾಂಧಿ?! ಧರ್ಮಗಳಿಗೆ ಬಣ್ಣಬಳಿದು,ಜಾತಿಗೊಂದು ಮಠ ಕಟ್ಟಿ ಹೆಮ್ಮೆಯಿಂದ ಬೀಗುತಿರುವವರು ನಾವುನಿನ್ನ ಹಾಗೆ ಶ್ವೇತ ಭಾವದಿ ಬದಕುಲುಂಟೆ ಗಾಂಧಿ?!ಬೆರಳುಮಾಡುವುದನ್ನೆ ಗುರಿಯಾಗಿಸಿಕೊಂಡವರುಲೋಪಗಳ ಹುಡುಕುವುದರಲ್ಲೇ ಕಳೆದು ಹೋದವರುನಿನ್ನ ಸತ್ಯ ಪ್ರಯೋಗಗಳ ಅರ್ಥವ ತಿಳಿಯದೆ ಫೋಟೋ ಫ್ರೇಮಿನಲ್ಲಿ ಬಂಧಿಸಿಟ್ಟು ಪೂಜೆಗೈಯುವವರುನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?! ಮೊದಲು ನೀನು ಬೆಲ್ಲವ ತ್ಯಜಿಸಿ ಆ ನಂತರಅದರ ವರ್ಜ್ಯದ ಬಗ್ಗೆ ಮಾತಾಡಿದೆ ಉಪನ್ಯಾಸ, ಭಾಷಣಗಳೆ ಇಂದು ಮುನ್ನೆಲೆಯಲ್ಲಿರುವಾಗನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?ಅನ್ಯರೆನಿಸಿದ ವಿದೇಶಿಗರಿಗೆ ಏಸುವಿನಂತೆ ಕಂಡನಿನ್ನ ನಿಲುವು ನಮಗಿನ್ನೂ ಅರ್ಥವಾಗದಿರುವಾಗ ನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?! ಗಾಂಧಿ ಎಂಬ ಹೆಸರೇ ಭಾರವಾದ ಈ ಹೊತ್ತಿನಲಿ“ಸರಳ ಜೀವನ ಉನ್ನತ ಚಿಂತನೆ”“ಸೇವೆಯ ಪ್ರತಿಫಲ ಸೇವೆಯೇ”ಎದೆಯೊಳಿಳಿಸಲಾಗದ ತತ್ವಗಳಾಗಿರುವಾಗ,ಈಶ್ವರ-ಅಲ್ಲಾ, ರಾಮ-ರಹೀಮ ಎಲ್ಲಾ ಒಂದೇಎಂದ ನಿನ್ನ ದೇಶದಲ್ಲಿ ಹೆಸರು, ಬಣ್ಣಗಳೇ ರಾರಾಜಿಸುತ್ತಿರುವಾಗನಿನ್ನ ಹಾಗೆ ಬದುಕಲುಂಟೆ ಗಾಂಧಿ?! ಆದರೂ ಹತಾಶೆಯ ಮೀರುವೆನಿನ್ನಂತೆ  ಬದುಕಲಾಗದಿದ್ದರೂ ಆತ್ಮ ವಂಚನೆಯಲಿ ಬಳಲದಂತೆ ಬದುಕುವ ಸರಳ ಮಾರ್ಗವನ್ನು ಕಲಿತಿದ್ದೇನೆ.ಮತ್ತೆ ಮತ್ತೆ ನನ್ನೊಳಗೆ ನಿನ್ನ ಕರಗಿಸಿಕೊಳ್ಳುತ್ತೇನೆ.ನೀ ತೋರಿದ ಬದುಕಿನ ಸಂತಸದ ಸರಳ ನಡೆಯ ಕಂಡು ಪುಳಕಿತನಾಗುತ್ತೇನೆ.ಜೀವಿಸುತ್ತೇನೆ, ಜೀವನವನ್ನು ಸಂಭ್ರಮಿಸುತ್ತೇನೆ.  ರಘುಪ್ರಸಾದ ಮರಿಯಮ್ಮನಹಳ್ಳಿ  

ರಘುಪ್ರಸಾದ ಮರಿಯಮ್ಮನಹಳ್ಳಿ  ಅವರ ಕವಿತೆ “ನಿನ್ನ ಹಾಗೆ ಬದುಕಲುಂಟೆ ಗಾಂಧಿ…?” Read Post »

ಕಾವ್ಯಯಾನ

ರೇಷ್ಮಾ ಕಂದಕೂರ “ಹೊತ್ತು ಮುಳುಗುವ ಮುನ್ನ”

ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಹೊತ್ತು ಮುಳುಗುವ ಮುನ್ನ” ನೆರಳು ಬೆಳಕಿನಾಟಸದ್ದಿಲ್ಲದೇ ನಡೆದಿದೆಪ್ರಕೃತಿಯ ಸೊಬಗಲೂಹಣಾ ಹಣಿ ಗದ್ದಲವಿಲ್ಲದೆ ಸಾಗಿದೆ. ಬಗೆಯ ಆಕಾರಅನಂತ ಶಕ್ತಿಯ ಹೊದಿಕೆಬಾನಂಚಿನ ವರೆಗೂರಮ್ಯ ಮನೋಹರ. ಒಂದೊಮ್ಮೆ ಬಿಡುಗಡೆಸಿದ್ಧವಾಗಿಯೂ ಇದೆಆಶವಾದುವೂ ಜೊತೆ ಜೊತೆಗೆಹಂಬಲದ ದಿನಮಾನಗಳೂ ಇವೆ. ಹೊತ್ತು ಮುಳುಗುವ ಮುನ್ನಆಯ್ದುಕೊ ಮುತ್ತುಬಿತ್ತರಿಸಿ ಬಿಡು ಹಿಡಿದಿಟ್ಟ ಶಕ್ತಿಮತ್ತೇನಿದೆ ಮಮತೆ ಮಡಿಲು ಬಿಟ್ಟು ಮೆತ್ತನೆ ಹಾಸಿಗೆ ಹೊದಿಯುವ ಮುನ್ನಶೋಧಿಸಿ ಬಿಡು ರೋಧನೆಯ ಹತ್ತಿಕ್ಕಿಬೋಧನೆಯ ಅರಿವಿನ ಹೊನಲಲಿಚಿತ್ತ ಶುದ್ಧಿ ಮಾಡಿಕೋ. ರೇಷ್ಮಾ ಕಂದಕೂರ

ರೇಷ್ಮಾ ಕಂದಕೂರ “ಹೊತ್ತು ಮುಳುಗುವ ಮುನ್ನ” Read Post »

You cannot copy content of this page

Scroll to Top