ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಚಂಪಾ ಬಿ. ಜಿ. ಅವರ ಕವಿತೆ “ಒಲವಿನೋಲೆ”

ಕಾವ್ಯ ಸಂಗಾತಿ ಚಂಪಾ ಬಿ. ಜಿ. “ಒಲವಿನೋಲೆ” ಮಣ್ಣಿನ ವಾಸನೆ ಹೊತ್ತ ಮೊಗಸಿರಿಮುಗ್ಧ ನಗುವಿನ ಮೋಹನಾಂಗಿನಿನ್ನ ನಡಿಗೆಯ ಲಯಕೆಸುಳಿಗಾಳಿ ತಿಳಿಯಾಗಿತುಂತುರು ಹನಿಯಾಗಿಭುವಿಯೆಲ್ಲಾ ಹರಡಿತೇನೋಇವಳ ಒಡನಾಟವೇಮಧುರ ಸಂಗೀತವಾಗಿಝರಿಯಾಗಿ ಹರಿಯಿತೇನೋಸೂರ್ಯನ ಕಿರಣ ಕೂಡನಾಚಿ ಮೇಘಗಳ ಹಿಂದೆ ಸರಿಯಿತೇನೋನೀ ನಡೆವ ಹಾದಿಯಲಿ ನಿಸರ್ಗವೇಬರೆಯಿತೇನೋ ಒಲವಿನೋಲೆ. ಚಂಪಾ ಬಿ. ಜಿ.

ಚಂಪಾ ಬಿ. ಜಿ. ಅವರ ಕವಿತೆ “ಒಲವಿನೋಲೆ” Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಚಿತ್ರದುರ್ಗ “ಮರದ ಮೌನ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಮರದ ಮೌನ” ನನ್ನನ್ನುನೆರಳಿನ ಗಾಢತೆಯಿಂದ ಅಳೆಯುತ್ತೀರಿಬೇರುಗಳ ಆಳವನ್ನುಯಾರೂ ಗಮನಿಸುವುದಿಲ್ಲ! ನಾನು ನಿಂತಿರುವುದುನಿಮಗೆ ಸುಲಭವೆನಿಸುತ್ತದೆ;ನೆಲದೊಳಗೆ ಪ್ರತಿದಿನಕುಸಿಯದೆ ಹಿಡಿದಿಟ್ಟುಕೊಳ್ಳುವಬೇರಿನ ಹೋರಾಟ ನಿಮಗೆ ಕಾಣುವುದಿಲ್ಲ ನನ್ನ ಕೊಂಬೆಗಳಲ್ಲಿಹಕ್ಕಿಗಳು ಗೂಡು ಕಟ್ಟಿದಾಗಅದು ಅವುಗಳ ಮನೆಯೆನ್ನುತ್ತೀರಿ;ಗಾಳಿ ಅವನ್ನು ಕೆಡವಿದಾಗನನ್ನನ್ನೇ ಶಾಪಗ್ರಸ್ತವೆನ್ನುತ್ತೀರಿ! ನಾನು ಉದುರಿಸಿದ ಎಲೆಗಳುನನ್ನ ಸೋಲಲ್ಲ ಕೇಳಿರಿ;ಹೊಸ ಋತುವಿಗೆ ಬರೆದಮುನ್ನುಡಿಯಷ್ಟೇ ನೋಡಿರಿ! ನನ್ನ ಹಣ್ಣುಗಳ ಸಿಹಿಯನ್ನುನಿಮ್ಮ ನಾಲಿಗೆ ನೆನಪಿಡುತ್ತದೆ;ಆ ಸ್ವಾದಕ್ಕೆ ಕಾರಣವಾದನನ್ನ ಕಹಿ ಬೇರುಗಳನ್ನುಯಾರೂ ನೆನಪಿಸಿಕೊಳ್ಳುವುದಿಲ್ಲ! ಕಲ್ಲೆಸೆದ ಕೈಗಳಿಗೂನೆರಳನ್ನೇ ಕೊಟ್ಟಿದ್ದೇನೆ!ಆದರೂ ನನ್ನ ಮೌನವನ್ನುದುರ್ಬಲತೆಯೆಂದು ಕರೆಯುತ್ತೀರಿ! ನಾನು ಆಕಾಶದ ಕಡೆಎತ್ತರವಾಗಿ ಬೆಳೆದಂತೆಯೇಭೂಮಿಯ ಆಳಕ್ಕೆವಿನಯದಿಂದ ಇಳಿದಿದ್ದೇನೆ! ಕೊನೆಗೆ ನನ್ನನ್ನು ಇಂಚಿಂಚು ಕಡಿದುಮೇಜು ಬಾಗಿಲು ಚಿತೆಯನ್ನಾಗಿ ಮಾಡುತ್ತೀರಿ;ರೂಪಗಳು ಬದಲಾಗುತ್ತವೆ!ನನ್ನ ಮರತ್ವ ಮಾತ್ರ ಸಾಯುವುದಿಲ್ಲ! ನೀವು ಕಾಣುವುದುಮರದಂತಹ ನನ್ನ ಸಪೂರ ದೇಹ!ನಾನು ಬದುಕುವುದುಬೇರುಗಳ ಗಾಢ ನಿಗೂಢ ಮೌನ! ನಿಮ್ಮ ನೋಟಕ್ಕೆನಾನು ಕೇವಲ ಮರದಂತ ಸ್ವತ್ರು!ನನ್ನ ಆತ್ಮದ ಸಮಾಧಾನಕ್ಕೆಲೋಕದ ಸತ್ಯ ವ್ಯವಹಾರಕ್ಕುನಾನೇ ಒಂದು ಭೂಮಿ ಸಂಪತ್ತು! ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ.ಉಮೇಶ್ ಚಿತ್ರದುರ್ಗ “ಮರದ ಮೌನ” Read Post »

ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ “ಅದೆಂತಹ ಹೆಸರನಿಟ್ಟೆ”

ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ “ಅದೆಂತಹ ಹೆಸರನಿಟ್ಟೆ” ಕಟು ಪದದಿ ಕುಟುಕಿ ಪ್ರೀತಿಯಿಂದ ನಗುವ ಹೂಮನದ ಸ್ನೇಹ ಗಾನಕೆ ಅದೆಂತಹ ಹೆಸರನಿಟ್ಟೆಹಾಡಿ ಹರಸಿ ಹೃದಯದುಂಬಿ ಕುಣಿವ ಭಾವ ತಾನಕೆ ಅದೆಂತಹ ಹೆಸರನಿಟ್ಟೆ ನೂರು ಸಲ ದೂರ ನೂಕಿದರೂ  ಉಸಿರೆತ್ತದ ಹದುಳ ಜೀವ ಮಿಡಿದ ಮಧುರ ಗಾನವದುಮಾತಿನ ಚೂರಿಯಿಂದ ಇರಿದು ಕೊಂದು ಪವಿತ್ರ ನೇಹ ಪಾನಕೆ ಅದೆಂತಹ ಹೆಸರನಿಟ್ಟೆ ಕಾವ್ಯಯಾನದ ಪಥಿಕ ಮೃದು ಮಧುರ ಎದೆಹಾಸ ತುಂಬೆಲ್ಲ ಮಾತಿನ ಮುಳ್ಳುಗಳ ನೇವರಿಕೆಮಲ್ಲಿಗೆ ಮನದ ಮೌನ ದೋಣಿಯ ಪ್ರೀತಿ ಪಯಣ ಯಾನಕೆ  ಅದೆಂತಹ  ಹೆಸರನಿಟ್ಟೆ ತೊಟ್ಟು ನೀನಿತ್ತ ಗಾಯಗಳ ಆಭರಣ ಮೈ ನೇವರಿಸಿ ಹೃದಯ ಭಿತ್ತಿಯಲ್ಲಿ ಕಾಪಿಟ್ಟು ಕೊಂಡಿರುವೆ.ಕೊಟ್ಟ ನೋವುಗಳ ಸರಮಾಲೆ ಹೊತ್ತು ನಿನ್ನೆಡೆಗೆ ಬರುವ ಒಲವ ಹೆಜ್ಜೆ ಪಾದಕೆ ಅದೆಂತಹ ಹೆಸರನಿಟ್ಟೆ. ಬೆಳದಿಂಗಳ ಕಸಿದು ಕಾರ್ಗತ್ತಲು ನೀವಿದ ಶಶಿಗೆ ಗೊತ್ತಿಲ್ಲವೇ  ತಾನು ನೀಡಿದ ನೋವುಇಂದುವಿನ ಅಂತರಂಗದಿ ಅರಳಿದ  ಹೂಗೆಜ್ಜೆ ನಾದಕೆ ಅದೆಂತಹ ಹೆಸರನಿಟ್ಟೆ – ಇಂದಿರಾ  ಮೋಟೆಬೆನ್ನೂರ. ಬೆಳಗಾವಿ.

ಇಂದಿರಾ ಮೋಟೆಬೆನ್ನೂರ “ಅದೆಂತಹ ಹೆಸರನಿಟ್ಟೆ” Read Post »

ಕಾವ್ಯಯಾನ

ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ”

ಕಾವ್ಯ ಸಂಗಾತಿ ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ” ಮಸೀದೆಯ ಅಜಾನ್ಚರ್ಚ್ ನಲ್ಲಿ  ಕೇಳಬೇಕು ಚರ್ಚ್ ನಲ್ಲಿಯ ಪ್ರಾರ್ಥನೆಮಂದಿರ ದಲ್ಲಿ  ಜರುಗಬೇಕು ಮಂದಿರ ದಲ್ಲಿ ಸೇರಿದ ಜನಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು ನನ್ನ ಕಾಯಕರ್ಪುರ ವಾಗಬೇಕು ಮಂದಿರ ಮಸೀದೆಚರ್ಚ್ ನಲ್ಲಿ ಬೆಳಗಬೇಕು ನರನಾಡಿಗಳುನೀಲಾಂಜನಕೆ ಬತ್ತಿ ಯಾಗಬೇಕು ರಕುತ ಎಣ್ಣಿಯಾಗಬೇಕುಮನಸು ಬೆಣ್ಣಿಯಂತೆ ಕರಗಬೇಕು ಆ ಕಾಲಕ್ಕಾಗಿ ನನ್ನಕಣ್ಣುಗಳು ಕಾಯಬೇಕು ಎ.ಎಸ್. ಮಕಾನದಾರ ಗದಗ

ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ” Read Post »

ಕಾವ್ಯಯಾನ

ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್

ಕಾವ್ಯ ಸಂಗಾತಿ ಡಾ. ಶ್ರೀಶೈಲ ಮಾದಣ್ಣವರ ಗಜಲ್ ಮುಗಿಲ ವೀಣೆ ಮೀಟಿದವರಾರು ನುಡಿಸುತಿದೆ ಮೇಘ ರಾಗಹೃದಯ ಕೋಣೆಯ ತಟ್ಟಿದವರಾರು ಹರಿಸುತಿದೆ ಅನುರಾಗ ಸುರಿವ ಮಳೆ ಮೋಡಗಳಲಿ ಮಿಂಚುತಿದೆ ಬೆಳಕಿನ ಕೋಲುಬಾನಿನ ಎದೆಗಿಳಿದವರಾರು ಬೆಳಗಿಸುತಿಹರು ಪ್ರೀತಿ ಚಿರಾಗ ಹರಿದ ಹನಿ ಹನಿಗಳಿಗೂ ಹೂ ಅರಳಿಸುವ ಹಂಬಲಗಳುಮುತ್ತು ಮಣಿ ಬಿತ್ತಿದವರಾರು ಹರಡುತಿದೆ ಪ್ರೇಮ ಪರಾಗ ಉಂಡ ನೆಲವು ಹಸಿಯಾಗಿದೆ ಪ್ರೀತಿ ಇಂಗಿ ಒಡಲಿನೊಳಗೆಎದೆಹಾಲು ಉಣಿಸಿದವರಾರು ತೊದಲಿನಲೂ ಹೊಸರಾಗ ಹಸಿರು ಉಸಿರು ಬೆಳೆಸಿಕೊಂಡು ನಗುತಿದೆ ನೋಡು ಪರಿಸರಬಾಳು ತೆನೆಗಟ್ಟಿಸಿದವರಾರು ಬದುಕು ಈಗ ಬಲು ಸರಾಗ ಡಾ. ಶ್ರೀಶೈಲ ಮಾದಣ್ಣವರ

ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ ಗಜಲ್ ವಿದಾಯ ಹೇಳಲೇ ಕವಲೊಡೆದ ದಾರಿಗೆದೂರ ಸರಿಯಲೇ ಒಲವಿರದ ದಾರಿಗೆ ಘಮವಿಲ್ಲದ ಪಾರಿಜಾತ ನೊಂದಿದೆಕಳಚಿ ಹೋಗಲೇ ನಾಕವಿರದ ದಾರಿಗೆ ಪಡೆದುದೆಲ್ಲ ನಶ್ವರವಾಗಿ ಮೌನವಾದೆಮರೆತು ಬಿಡಲೇ ಸುಖವಿರದ ದಾರಿಗೆ ಕಲ್ಪನೆಯ ಭಾವನೆಗಳ ಬಳ್ಳಿ ರೋಧಿಸಿದೆಹರಿದು ತೊರೆಯಲೇ ನಲಿವಿರದ ದಾರಿಗೆ ತಪ್ಪಿದೆ ಯಾನದ ಹರಿಗೋಲು ಮಾಜಾಕಳೆದು ಕೂಡಲೇ ಕರುಣೆವಿರದ ದಾರಿಗೆ ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

‌ ಕಾವ್ಯ ಸಂಗಾತಿ. ಜ್ಯೋತಿ ಮಾಳಿ ಬೆಳಗಾವಿ ಗಜಲ್ ಕುಳಿತು ಮಾತನಾಡಿಸಿ ಎದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆನಕ್ಕು ನಗಿಸಿ ಮನವನು ಗೆದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಹೋದರೆ ಹೋಗಿ ನಿಮಗೂ ಏನೊ ಅನಿವಾರ್ಯತೆಗಳುಇರಬಹುದುಭಾವ ಬಸಿದ ಕವಿತೆಗಳನು ಕದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ನೊಂದು ಬೆಂದು ನರಳಿದ ಗಾಯಗಳ ಗುರುತು ಸಿಗದಂತೆಅಳಿಸಿ ಹಾಕಿದಿರಿಕಲಕಿದ ಕೊಳ ತಿಳಿಯಾಗಿಸಿ ಇದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಬೇಸರಗೊಂಡ  ಜೀವಗಳಿಗೆ ಎಡೆಯ ತುಂಬ ಸಂತಸವನುಮನದಿ ಬಡಿಸಿದಿರಿಹಾಲುಣಿಸಿ ಹಾಲಾಹಲ ಮೆದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಹೃದಯ ಹೃದಯಗಳನು ಬೆಸೆದು ಹಂದರವನು ಹಾಕಿ ಕರೆದುಕೂರಿಸಿದಿರಿಜ್ಯೋತಿ ಬೆಳಕಿನಲಿ ತಮವು ಬಿದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಸುಕನಸು ಅವರ‌ ಗಜಲ್

ಕಾವ್ಯ ಸಂಗಾತಿ ಸುಕನಸು ಗಜಲ್ ಬಾ ಅಪರಿಚಿತರಾಗೊಣ  ಮತ್ತೊಮ್ಮೆ ಗೆಳೆಯನೀ ಮರೆತು ಸಹ ಸಿಗದಿರು ಇನ್ನೊಮ್ಮೆ ಗೆಳೆಯ ಸದಾ ನಿನ್ಹೆಸರ ಜಪಿಸುವ ಮನಕೇನು ಸಂತೈಸಲಿನೆನಪುಗಳ ಕೊಂದ್ಹೋಗೂ ಬಂದೊಮ್ಮೆ ಗೆಳೆಯ ಜೊತೆ ಇಟ್ಟ ಹೆಜ್ಜೆಗಳ ಲೆಕ್ಕ ಎಲ್ಲಿದೆ ಸಂತೃಪ್ತಿಯಷ್ಟೆಮುಂದೆಂದೂ ಸಿಗದಂತೆ ಶಪಥ ಮಾಡೊಮ್ಮೆ ಗೆಳೆಯ ಮನ ತಬ್ಬಿಬಾಗಿದೆ ತಳ್ಳಿ ಹೋದ ಕಾರಣ ತಿಳಿಯದೆತೊರೆದು ಹೋದ ನೆಪ ಹೇಳಿ ಹೋಗೊಮ್ಮೆ ಗೆಳೆಯ ಸುಮದ ಪರಿಮಳವೆ ಅಪಾರವಾಯಿತು ನವಿರಲ್ಲವಒಲವಿಲ್ಲ ಲಾಲಶೆಯಷ್ಟೆಯೆಂದು ಹೇಳೊಮ್ಮೆ ಗೆಳೆಯ ಸುಕನಸು

ಸುಕನಸು ಅವರ‌ ಗಜಲ್ Read Post »

ಕಾವ್ಯಯಾನ

ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ”

ಕಾವ್ಯ ಸಂಗಾತಿ ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ” ಬದುಕಿದ್ದಾಗ…ಅವನ ಮನೆಯ ಬಾಗಿಲು ತಟ್ಟಿದರೂತೆರೆದದ್ದು ಯಾರ ಮನಸ್ಸೂ ಅಲ್ಲ. ಹಸಿವೆಂದು ಕೈ ಚಾಚಿದಾಗಒಂದು ತುತ್ತು ಅನ್ನಕ್ಕೂ ಲೆಕ್ಕ ಹಾಕಿದ ಜನ,ದುಃಖವೆಂದು ಕಣ್ಣೀರು ಸುರಿಸಿದಾಗಒಂದು ಹೆಗಲನ್ನೂ ನೀಡದ ಬಂಧುಗಳು. ಅವನ ಉಸಿರು ಇರುವಾಗಅವನ ಮಾತಿಗೆ ಬೆಲೆ ಇರಲಿಲ್ಲ;ಉಸಿರು ನಿಂತ ಕ್ಷಣದಿಂದಲೇಅವನ ಮೌನಕ್ಕೆ ಬೆಲೆ ಕಟ್ಟಲು ಹೊರಟರು. ಚಿತೆಯ ಬೆಂಕಿ ಹೊತ್ತಿತು…ದೇಹ ಬೂದಿಯಾಯಿತು…ಆದರೆ ಸುಟ್ಟು ಹೋದದ್ದು ದೇಹವಲ್ಲ—ಸಮಾಜದ ಕಪಟ ಮುಖವಾಡ. ಅಂತ್ಯಸಂಸ್ಕಾರಕ್ಕೆಸಾವಿರ ಜನ ಸೇರಿದರು;ಬದುಕಿನ ದಾರಿಯಲ್ಲಿಅವನೊಂದಿಗೆ ನಡೆದದ್ದುಅವನ ನೆರಳು ಮಾತ್ರ. ಮೂರನೇ ದಿನ…ಹತ್ತನೇ ದಿನ…ವಾರ್ಷಿಕ…ನಂತರ ಜಾತ್ರೆ… ವೇದಿಕೆ ಕಟ್ಟಿದರು.ಹೂವಿನ ಹಾರ ಹೊದಿಸಿದರು.ಅವನ ಹೆಸರಿನಲ್ಲಿ ಧ್ವಜ ಹಾರಿಸಿದರು.ನಿನ್ನೆ ಅವನನ್ನು ತಿರಸ್ಕರಿಸಿದವರೇಇಂದು ಹೊಗಳಿಕೆಯ ಹೊಳೆ ಹರಿಸಿದರು. “ಅವನು ಮಹಾನ್…” ಎಂದರು.“ಅವನು ಸಮಾಜದ ಬೆಳಕು…” ಎಂದರು.“ಅವನಂತವರು ಅಪರೂಪ…” ಎಂದರು. ಆ ಮಾತುಗಳನ್ನು ಕೇಳಿಕಾಲವೇ ಕಹಿಯಾಗಿ ನಕ್ಕಿತು. ಏಕೆಂದರೆ—ಅವನು ಬದುಕಿದ್ದಾಗಈ ಒಂದು ಮಾತನ್ನಾದರೂಅವನ ಕಿವಿಗೆ ಹೇಳಿರಲಿಲ್ಲ! ಜಾತ್ರೆಯ ದಿನಹೊಟ್ಟೆತುಂಬ ಊಟ,ಕೈತುಂಬ ಕಾಣಿಕೆ,ವೇದಿಕೆಯ ಮೇಲೆ ಭಾಷಣ,ಕೆಳಗೆ ಚಪ್ಪಾಳೆ… ಜಾತ್ರೆ ಮುಗಿದ ಮೇಲೆ? ಹೂವು ಒಣಗಿತು.ವೇದಿಕೆ ತೆರವಾಯಿತು.ಜನರು ಮರೆಯಾದರು.ಅವನ ಹೆಸರೂಮತ್ತೊಮ್ಮೆ ಧೂಳಿನೊಳಗೆ ಮಲಗಿತು. ಇದೇನಾ ಸಂಸ್ಕಾರ? ಸಂಸ್ಕಾರವೆಂದರೆಸತ್ತವನಿಗೆ ಚಂದನ ಹಚ್ಚುವುದಲ್ಲ;ಬದುಕಿರುವವನ ಗಾಯಕ್ಕೆಒಂದು ಮುದ್ದಾದ ಮದ್ದು ಹಚ್ಚುವುದು. ಸಂಸ್ಕಾರವೆಂದರೆಚಿತೆಗೆ ಬೆಂಕಿ ಕೊಡುವುದಲ್ಲ;ಜೀವಂತ ಹೃದಯದಲ್ಲಿಭರವಸೆಯ ದೀಪ ಹಚ್ಚುವುದು. ಸಂಸ್ಕಾರವೆಂದರೆಸಾವಿನ ನಂತರದ ಜಾತ್ರೆಯಲ್ಲ;ಜೀವನದೊಳಗಿನ ಮಾನವೀಯತೆ. ಕೊರಡಿಗಿಲ್ಲಿ ಸಂಸ್ಕಾರಮರಣದ ನಂತರದ ಆಡಂಬರವಲ್ಲ—ಬದುಕಿರುವಾಗಲೇಮನುಷ್ಯನನ್ನು ಮನುಷ್ಯನಾಗಿ ಕಾಣುವಕರುಣೆಯ ಕಣ್ಣು. ಇಲ್ಲದಿದ್ದರೆ… ಪ್ರತಿ ವರ್ಷ ಜಾತ್ರೆ ನಡೆಯುತ್ತದೆ,ಪ್ರತಿ ವರ್ಷ ಭಾಷಣಗಳು ಮೊಳಗುತ್ತವೆ,ಪ್ರತಿ ವರ್ಷ ಹೊಗಳಿಕೆಯ ಹೂವುಗಳು ಬೀಳುತ್ತವೆ. ಆದರೆ… ಬದುಕಿದ್ದಾಗ ಕಡೆಗಣಿಸಿದಒಬ್ಬ ಮನುಷ್ಯನ ನಿಟ್ಟುಸಿರುಆ ಚಪ್ಪಾಳೆಗಳಿಗಿಂತ ದೊಡ್ಡದು. . -ಎನ್.ಜಯಚಂದ್ರನ್ .ದಾಂಡೇಲಿ

ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ” Read Post »

ಕಾವ್ಯಯಾನ

ಪರಿಮಳ ಐವರ್ನಾಡು ಅವರ ಕವಿತೆ”ಅವಳಿಗೆ”

ಕಾವ್ಯ ಸಂಗಾತಿ ಪರಿಮಳ ಐವರ್ನಾಡು “ಅವಳಿಗೆ” ಅವಳಿರಬೇಕಿತ್ತು ಅಲ್ಲಿಅವನ ಜೊತೆಯಲ್ಲಿಅವನ ಬದುಕಲ್ಲಿಅವನ ಬಾಳಿನಲ್ಲಿ  ಆಗಬೇಕಿತ್ತು ಅವಳಿಗೆಅವನ ಮಗನ ತಾಯಿಯಾಗಿಅವನ ಬಾಳ ಸಂಗಾತಿಯಾಗಿಅವನ ಹೃದಯದ ಬಡಿತವಾಗಿ ಬಯಕೆಯಿತ್ತು ಅವಳಿಗೆಬಾಹುಗಳಲ್ಲಿ ಬಂಧಿಯಾಗಲುಸುಖ ದುಃಖಗಳಲಿ ಜೊತೆಯಾಗಲುಅವನ ತುಟಿಗಳ ನಗುವಾಗಲು ಕನಸಿತ್ತು ಅವಳಿಗೆಅವನ ಕನಸಿಗೆ ಜೀವ ತುಂಬಲುಅವನ ಕವಿತೆಗೆ ಪದವಾಗಲುಮಧುಮಂಚದ ವದುವಾಗಲು ಅಂತರಂಗದ ಭಾವನೆಗಳುಹೊರಬರಲಾರದ ಕನಸುಗಳುಬಲಿಪಶುವಾದ ಹೂಗಳುಅವಲೊಳಗಿನ ಅವಶೇಷಗಳು ಪರಿಮಳ ಐವರ್ನಾಡು

ಪರಿಮಳ ಐವರ್ನಾಡು ಅವರ ಕವಿತೆ”ಅವಳಿಗೆ” Read Post »

You cannot copy content of this page

Scroll to Top