ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯ ಸುಧೆ ಅವರ ಕವಿತೆ “ನನ್ನಾತ್ಮ ಸಖ”

ಕಾವ್ಯ ಸಂಗಾತಿ ಕಾವ್ಯ ಸುಧೆ “ನನ್ನಾತ್ಮ ಸಖ” ಏಕಾಂತದಲ್ಲಿ ಜೊತೆಯಾದವನು ನೀನುಭವಸಾಗರವ ದಾಟಿಸಿದವ ನೀನು.ದಣಿದಾಗ ಮೈದಡವಿ ಮಲಗಿಸಿದವ ನೀನು,ನನ್ನೆಲ್ಲಾ ಕನಸಿಗೆ ಕಾವಲಾದವನು ನೀನು. ಮನನೊಂದಾಗ ಸಾಂತ್ವಾನಿಸಿದವ ನೀನುಬೇಸರಕೆ ನನ್ನ ಹಾಡಾದವ ನೀನುಲೋಕದ ನಜರಿಗೆ ಎದೆಗೊಟ್ಟು ನಿಂತವ ನೀನು,ಸೋತೆನಾ ಎಂದಾಗ ಗೆಲುವು ತಂದವ ನೀನು ಕನ್ನಡಿಯಲ್ಲಿ ಪ್ರತಿಬಿಂಬವಾಗಿ ನಕ್ಕವನು ನೀನುಉಸಿರಿನ ಜಪದಲ್ಲಿ ಓಂಕಾರವಾಗಿ ಮಿಡಿದವ ನೀನುನನ್ನೊಳಗೆ ನಾ ಹುಡುಕಿ ಕಂಡುಕೊಂಡ ಸತ್ಯನನ್ನೊಳಗಿನ……..ನನ್ನಾತ್ಮಸಖ ನೀನು ! ಕಾವ್ಯ ಸುಧೆ

ಕಾವ್ಯ ಸುಧೆ ಅವರ ಕವಿತೆ “ನನ್ನಾತ್ಮ ಸಖ” Read Post »

ಕಾವ್ಯಯಾನ

ಎ.ಹೇಮಗಂಗಾ ಅವರ ಹೊಸ ಗಜಲ್

ಕಾವ್ಯ ಸಂಗಾತಿ ಎ.ಹೇಮಗಂಗಾ ಗಜಲ್ ಎಂದಾದರೂ ಒಮ್ಮೆ ಬಾಳ ಯಾತ್ರೆಯು ಮುಗಿಯಲೇಬೇಕಲ್ಲಕಾಲನ ಕರೆ‌ಯು ಬಂದಾಗ ಎದುರಾಡದೇ ಹೋಗಲೇಬೇಕಲ್ಲ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಲ್ಲ ಜೀವಿಗಳಿಗೂ ಬುವಿಯಲಿಬೇಕೋ ಬೇಡವೋ ಬಾಳ ಬಂಡಿಯನು ಎಳೆಯಲೇಬೇಕಲ್ಲ ನಿಯಂತ್ರಿಸುವ ವಿಧಿ ಆಣತಿಗೆ ತಲೆ ಬಾಗದವರು ಎಲ್ಲುಂಟು ?ಅಂತಕ ಬಂದಿರಲು ‘ ನಾಳೆ ಬಾ ‘ ಎನ್ನದೇ ಶರಣಾಗಲೇಬೇಕಲ್ಲ ಸಂಕಷ್ಟಗಳ ಸಂಕೋಲೆಯಲಿ ಸಿಲುಕಿ ನರಳುವುದು ಜೀವನೋವ ಮರೆಸುತ ನಗೆಯ ಮುಖವಾಡ ಧರಿಸಲೇಬೇಕಲ್ಲ ಅಪಮಾನ ಅಪನಿಂದೆಗೆ ಹೆದರಿ ಸಾವ ಬಯಸದಿರು *ಹೇಮ*ಸಾರ್ಥಕ ಜನ್ಮ ನಿನ್ನದಾಗಲು ದೃಢ ಮನದಿ ಬದುಕಲೇಬೇಕಲ್ಲ ಎ. ಹೇಮಗಂಗಾ

ಎ.ಹೇಮಗಂಗಾ ಅವರ ಹೊಸ ಗಜಲ್ Read Post »

ಕಾವ್ಯಯಾನ

ನಾಗರಾಜ ಬಿ ನಾಯ್ಕ ಅವರ ಕವಿತೆ “ಮುಖಪುಟ”

ಕಾವ್ಯ ಸಂಗಾತಿ ನಾಗರಾಜ ಬಿ ನಾಯ್ಕ “ಮುಖಪುಟ” ಮುಖದ ಪುಟದಮೇಲೆ ನೂರು ಬಿಂಬದಸಾಲು ಸಾಲು ಮೆರವಣಿಗೆಹೀಗೆ ಹಾಗೆ ಸುತ್ತಸುತ್ತುವ ಸುಳಿವ ಗಾಳಿಗೆತೂರಿ ಹೋಗುವಮಳೆ ಹನಿಯ ಚಿತ್ರಧೂಳು ಕಣಗಳ ದಾರಿಯದಾಟಿದರೆ ಕನ್ನಡಿಯಒಳಗೆ ಸೂರ್ಯ ಸಾಗಿದ ದಾರಿಯ ಪಯಣಪದ ಪಾದವೂ ಹಾಗೆಪದ ಅಂತ್ಯವೂ ಹಾಗೆನಿಲುಮೆಗೊಂದು ಚೂರುಒಲುಮೆಗೊಂದು ಗೀಟುಇದ್ದರೆ ಇಲ್ಲದ ಒಗಟುಇರುವ ರೂಪಕದ ನಡುವೆಇರದ ಸಾಲಿನ ಬವಣೆಮಸುಕು ಮುಸುಕಿನ ನಡುವೆಸುಳಿದು ಹೋದಸಮಯದ ಹರಿವುಅದೇ ಸಸಿಯ ಚಿತ್ರಕೆಮರವಾದ ನೆರಳುಹನಿಯಾದ ನೀರಿಗೆಮೋಡವಾದ ಹನಿ ಇಬ್ಬನಿಎಳೆ ಎಳೆಯಾಗಿಅಂಟಿದ ನಂಟುಹೊದಿಕೆಯಂದದ ಗಾಳಿಬೆಳಕಿನ ಪರಿಚಯಎಲ್ಲೋ ಆರಂಭವಾದಂತೆ ನಾಗರಾಜ ಬಿ ನಾಯ್ಕ

ನಾಗರಾಜ ಬಿ ನಾಯ್ಕ ಅವರ ಕವಿತೆ “ಮುಖಪುಟ” Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಮತ್ತು ವೈ.ಎಂ.ಯಾಕೊಳ್ಳಿ ಅವರುಗಳ “ಗಜಲ್‌ ಜುಗಲ್‌ ಬಂದಿ”

ಕಾವ್ಯ ಸಂಗಾತಿ ಅರುಣಾ ನರೇಂದ್ರ /ವೈ.ಎಂ.ಯಾಕೊಳ್ಳಿ “ಗಜಲ್‌ ಜುಗಲ್‌ ಬಂದಿ”. ಅವಳನ್ನು ಸದಾ ಮೆಚ್ಚಿಸುವ ಸಾಲುಗಳ ಎಲ್ಲಿಂದ ತರಲಿಅವಳ ಚಿತ್ತ ನನ್ನತ್ತ ಹೊರಳಿಸುವ ಮಾತುಗಳ ಎಲ್ಲಿಂದ ತರಲಿ ನುಡಿಯುವ ವೀಣೆಯ ತಂತಿಗಳು ಹರಿದು ಜಖಂಗೊಂಡಿವೆಒಲವ ಆಲಾಪ ಹೊರಹೊಮ್ಮಿಸುವ ರಾಗಗಳ ಎಲ್ಲಿಂದ ತರಲಿ ಅವಳು ನನ್ನ ನೋಡಿಯೂ ನೋಡದಂತೆ ನಡೆದಿದ್ದಾಳೆತಡೆದು ನಿಲ್ಲಿಸಿ ನಗಿಸುವ ಚಟಾಕಿಗಳ ಎಲ್ಲಿಂದ ತರಲಿ ಶತಮಾನದ ವಿರಹ ಎದೆಯನ್ನೇ ಸುಡುತಿದೆ ಹೇಳಲಿ ಹೇಗೆಅವಳನ್ನು ನಂಬಿಸುವ ನೂರು ದಾಖಲೆಗಳ ಎಲ್ಲಿಂದ ತರಲಿ ಜೋಗಿ ತನಗಾಗಿ ಹಂಬಲಿಸುತ್ತಾನೆಂದು ಅವಳಿಗೂ ಗೊತ್ತಿದೆಅವಳನು ಮಂಜಂತೆ ಕರಗಿ ನೀರಾಗಿಸುವ ಚಳಕಗಳ ಎಲ್ಲಿಂದ ತರಲಿ ವೈ ಎಂ ಯಾಕೊಳ್ಳಿ ಅವನನ್ನು ಮೆತ್ತಗೆ ಮೇಣವಾಗಿಸುವ ಶಬ್ದಗಳ ಎಲ್ಲಿಂದ ತರಲಿ ಉರಿಯುವ ಕೋಪ ತಣ್ಣಗಾಗಿಸುವ ಪದಗಳ ಎಲ್ಲಿಂದ ತರಲಿ ಸ್ವರ ನುಡಿಸುವ ಕೊಳಲೇಕೋ ಉಸಿರು ಮರೆತು ಮೂಲೆ ಸೇರಿದೆಮನಕ್ಕೆ ಮುದ ನೀಡಿ ಖುಷಿಗೊಳಿಸುವ ಗೀತೆಗಳ ಎಲ್ಲಿಂದ ತರಲಿ ಅವನು ಎಲ್ಲವನ್ನು ಮರೆಯಬೇಕೆಂದು ಮಧು ಶಾಲೆ ಸೇರಿದ್ದಾನೆ ಮತ್ತೆ ಮತ್ತೆ ನನ್ನ ನೆನಪಾಗಿಸುವ ಚಿತ್ರಗಳ ಎಲ್ಲಿಂದ ತರಲಿ ಖಾಲಿಯಾಗಿರುವ ಬಟ್ಟಲನ್ನೇ ನೋಡಿ ಬಡ ಬಡಿಸುತ್ತಾನೆ ಅವನು ಜನುಮದ ಅನುಬಂಧ ತಿಳಿಸುವ ಉಸ್ತಾದ್ ಗಳ ಎಲ್ಲಿಂದ ತರಲಿ ಅವನಿಗಂತೂ ಗೊತ್ತಿದೆ ದಿನ್- ರಾತ್ ಅರುಣಾ ಕೊರಗುತ್ತಾಳೆಂದು ಉದಾಸೀನಕ್ಕೆ ಮದ್ದರೆದು ಮೆಚ್ಚಿಸುವ ತಂತ್ರಗಳ ಎಲ್ಲಿಂದ ತರಲಿ ಅರುಣಾ ನರೇಂದ್ರ              

ಅರುಣಾ ನರೇಂದ್ರ ಮತ್ತು ವೈ.ಎಂ.ಯಾಕೊಳ್ಳಿ ಅವರುಗಳ “ಗಜಲ್‌ ಜುಗಲ್‌ ಬಂದಿ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಬಾಳ ಸಂತೆಯೊಳಗೆ ಭಾವಗಳನ್ನು ಬಿಕರಿಗಿಡಲಾಗಿದೆಮೋಸ ಹೋದ ಹೃದಯಗಳನ್ನು ಹರಾಜಿಗಿಡಲಾಗಿದೆ ಪ್ರೀತಿ ಪ್ರೇಮಗಳೆಲ್ಲವೂ ಸಹಿತ ಆಟದ ವಸ್ತುಗಳಾಗಿವೆಹಾರೋ ಹಕ್ಕಿಗಳ ಪಂಜರದೊಳಗೆ ಬಂಧಿಸಿಡಲಾಗಿದೆ ದೂರಾದವರ ಬಗ್ಗೆ ದೂರನು ಕೊಡವುದಾದರೂ ಹೇಗೆ?ಸುತ್ತಿದ ಗಿಡಮರ ಬೆಟ್ಟಗುಡ್ಡದ ಸಾಕ್ಷಿ ನಿರಾಕರಿಸಲಾಗಿದೆ ಮುಖಕ್ಕಷ್ಟೇ ಅಲ್ಲ ಮನಸಿಗೂ ಬಣ್ಣವ ಬಳಿಯಲಾಗಿದೆದೋಸೆಯಷ್ಟೇ ಸಲೀಸಾಗಿ ಮಾತನು ತಿರುಚಿಡಲಾಗಿದೆ ಕುಂಬಾರನ ಎದೆಕಲಶದ ತುಂಬಾ ಪರಿಶುದ್ಧ ಪ್ರೀತಿಯಿದೆಸುಖಾಸುಮ್ಮನೆ ಅನುಮಾನದ ಬೀಜ ಎದೆಗಿಳಿಸಲಾಗಿದೆ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

ಅನುರಾಧಾ ರಾಜೀವ್ ಅವರ ಕವಿತೆ “ಸ್ಪಂದನ”

ಕಾವ್ಯ ಸಂಗಾತಿ ಅನುರಾಧಾ ರಾಜೀವ್ “ಸ್ಪಂದನ” ಮುಂಜಾನೆಯ ಮಂಜಿನಲಿ ಪ್ರಕೃತಿನಾಟ್ಯವಾಡುತ ಬಂದಳೇಅಂಜುತ್ತಾ ಅಳುಕುತ್ತಾ ಇಳೆಯಸೌಂದರ್ಯ ನೋಡಿ ನಿಂದಳೇ ಜೀವನದ ಅನಿತ್ಯತೆ ಅರೆಕ್ಷಣ ಬಂದುಹೋಗುವ ಮಿಂಚಿನಂತೆಕವಿಹೃದಯ ಮಿಡಿಯುತಿದೆ ಮೆಲ್ಲನೆಎದೆಯ ಸಂವಹನದಂತೆ ಕೊಳಲ ಕರೆಯಲಿ ಅದೆಂತಹ ಉತ್ಕೃಷ್ಟಪ್ರೇಮದ ಉತ್ಕಟತೆಕೇಳಿದಷ್ಟೂ ತಳಮಳ ಅಂತರಾಳದಲಿಬೇಕಿದೆ ಕ್ಷಮತೆ ಮಿಲನದ ಹೂರಣ ತುಂಬಿಟ್ಟೆ ಮನದಿಸವಿಯುವ ಆಕಾಂಕ್ಷೆಸಲಿಲದ ಬಿಂದುವಾಗಿ ಹರಿಯುತಬೇಡುವೆ ಒಲವ ಬಿಕ್ಷೆ ಬಚ್ಚಿಟ್ಟ ಭಾವದ ಪೆಟ್ಟಿಗೆಯ ಕಾಯುತ್ತಾಕುಳಿತಿರುವೆ ತೆರೆಯಲುಮುಚ್ಚಿಟ್ಟ ಬೆಚ್ಚನೆಯ ಮಾತುಗಳ ನಿರೀಕ್ಷೆಒಲುಮೆಯ ಎರೆಯಲು ಅನುರಾಧಾ ರಾಜೀವ್

ಅನುರಾಧಾ ರಾಜೀವ್ ಅವರ ಕವಿತೆ “ಸ್ಪಂದನ” Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ಅವನನ್ನು ಮೆತ್ತಗೆ ಮೇಣವಾಗಿಸುವ ಶಬ್ದಗಳ ಎಲ್ಲಿಂದ ತರಲಿ ಉರಿಯುವ ಕೋಪ ತಣ್ಣಗಾಗಿಸುವ ಪದಗಳ ಎಲ್ಲಿಂದ ತರಲಿ ಸ್ವರ ನುಡಿಸುವ ಕೊಳಲೇಕೋ ಉಸಿರು ಮರೆತು ಮೂಲೆ ಸೇರಿದೆಮನಕ್ಕೆ ಮುದ ನೀಡಿ ಖುಷಿಗೊಳಿಸುವ ಗೀತಗಳ ಎಲ್ಲಿಂದ ತರಲಿ ಅವನು ಎಲ್ಲವನ್ನು ಮರೆಯಬೇಕೆಂದು ಮಧು ಶಾಲೆ ಸೇರಿದ್ದಾನೆ ಮತ್ತೆ ಮತ್ತೆ ನನ್ನ ನೆನಪಾಗಿಸುವ ಚಿತ್ರಗಳ ಎಲ್ಲಿಂದ ತರಲಿ ಖಾಲಿಯಾಗಿರುವ ಬಟ್ಟಲನ್ನೇ ನೋಡಿ ಬಡ ಬಡಿಸುತ್ತಾನೆ ಅವನು ಜನುಮದ ಅನುಬಂಧ ತಿಳಿಸುವ ಉಸ್ತಾದ್ ಗಳ ಎಲ್ಲಿಂದ ತರಲಿ ಅವನಿಗಂತೂ ಗೊತ್ತಿದೆ ದಿನ್- ರಾತ್ ಅರುಣಾಕೊರಗುತ್ತಾಳೆಂದುಉದಾಸೀನಕ್ಕೆ ಮದ್ದರೆದು ಮೆಚ್ಚಿಸುವ ತಂತ್ರಗಳ ಎಲ್ಲಿಂದ ತರಲಿ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ.ರೇಖಾಉದಯ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾಉದಯ್‌ ಗಜಲ್ ನಾನೆಂಬ ಅಹಂಕಾರ ನಿನ್ನನ್ನೇ ಸುಡುವುದು ಮರುಳೇಅಂತಿಮದಲ್ಲಿ ನಿನ್ನನ್ನೇ ನಾಶ ಮಾಡುವುದು ಮರುಳೇ. ಪ್ರೇಮ ಪ್ರೀತಿಯಲ್ಲಿ ಗೆಲ್ಲಬಹುದು ಜಗದ ಜೀವಿಗಳನ್ನದ್ವೇಷ ಹಗೆಗಳು ಪಾತಾಳಕ್ಕೆ ದೂಡುವುದು ಮರುಳೇ ಹಿರಿಯರು ಕಿರಿಯರೆಂಬ ಗೌರವ ನೀಡುವುದ ಕಲಿತುಕೋನಾನೆಂದು ಮೆರೆದರೆ ಆತ್ಮವೇ ಕಾಡುವುದು ಮರುಳೇ ಹಿತಚಿಂತಕರು ಹಿತಶತ್ರುಗಳ ಗುರುತಿಸುವುದ ತಿಳಿದುಕೋದುರ್ಬುದ್ಧಿಯೊಳಿದ್ದರೆ ವಿಧಿ ಬೇರೆ ಆಡುವುದು ಮರಳೇ ರೇಖೂ ಇರುವ ಬದುಕನು ಚಂದದಿ ಬದುಕಲು ಹೇಳಿಬಿಡುದುರುಳರ ಸಂಗದಿ ನಿನ್ನ ಬದುಕೇ ಕೆಡುವುದು ಮರುಳೇ ಡಾ.ರೇಖಾಉದಯ್

ಡಾ.ರೇಖಾಉದಯ್‌ ಅವರ ಗಜಲ್ Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ಮೌನ ಮಳೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಮೌನ ಮಳೆ” ಮನೆ ತುಳಸಿ ಬಾಡಿತು,ಹೊಸ್ತಿಲ ದೀಪ ಆರಿತು;ಒಂದೇ ಸೂರಿನ ನೆರಳಲಿನಗುವು ಮೌನ ಸೇರಿತು. ಮಾತು ಹಕ್ಕಿ ಹಾರಿತು,ಮೌನ ಗೂಡು ಕಟ್ಟಿತು;ಕೈಯ ಸ್ಪರ್ಶವಿದ್ದರೂಮನಸು ದೂರ ಸರಿಯಿತು. ನಂಬಿಕೆ ಮೊಗ್ಗು ಬಾಡಿತು,ಸ್ವಾರ್ಥ ಗಾಳಿ ಬೀಸಿತು;ಅರಳುವ ಮೊದಲೇ ಪ್ರೀತಿಧೂಳಾಗಿ ಉದುರಿತು. ಕಾದ ಕಣ್ಣ ಬೆಳಕಲಿಹೊಸ್ತಿಲ ನೆರಳು ನಿಂತಿತು;ಹೆಜ್ಜೆ ಸದ್ದು ಮೂಡದೆಸಂಜೆ ಮೌನ ಹರಡಿತು ಒಣ ಮಣ್ಣ ಮಡಿಲಲಿಬೀಜ ಇನ್ನೂ ಮಲಗಿತು;ಪ್ರೀತಿಯ ಮೊದಲ ಹನಿಯಲಿಬಂಧ ಮತ್ತೆ ಚಿಗುರಿತು. ✍️ ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ಮೌನ ಮಳೆ” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮೌನ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಮೌನ” ಮೌನವೆಂದರೆ ಮಾತಿಲ್ಲದ ಸ್ಥಿತಿಯಲ್ಲಮನದ ಮಾತುಗಳ ಸಮ್ಮಿಲನ ಮೌನವೆಂದರೆ ಶೂನ್ಯವಲ್ಲಸಾವಿರ ಭಾವನೆಗಳ ಸಾಗರ ಮೌನವೆಂದರೆ ಪದಗಳ ಅಂತ್ಯವಲ್ಲಅಂತರಂಗದ ಅರಿವಿನ ಆರಂಭ ಮೌನವೆಂದರೆ ಅಂತರವಲ್ಲಜೀವ ಭಾವದ ಸೇತುವೆ ಮೌನವೆಂದರೆ ದೌರ್ಬಲ್ಯವಲ್ಲಸಂಯಮ ಸಹನೆಯ ಪ್ರತಿಕ ಮೌನವೆಂದರೆ ಕತ್ತಲೆಯಲ್ಲಆತ್ಮಜ್ಞಾನದ ಹೊಂಬೆಳಕು ಮೌನವೆಂದರೆ ಖಾಲಿತನವಲ್ಲಸಚ್ಛಿಂತನೆಗಳ ಚಿಲುಮೆ ಮೌನವೇ ಆತ್ಮಾವಲೋಕದ ಆಗರಮೌನವೇ ಮನಶಾಂತಿಯ ಮಂದಿರ ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮೌನ” Read Post »

You cannot copy content of this page

Scroll to Top