ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ಲತಾ ಎ. ಆರ್. ಬಾಳೆಹೊನ್ನೂರು ಕವಿತೆ “ಸವಿಗಾನ”

ಕಾವ್ಯಸಂಗಾತಿ ಡಾ.ಲತಾ ಎ. ಆರ್. ಬಾಳೆಹೊನ್ನೂರು “ಸವಿಗಾನ” ಹೃದಯದಲಿ ವೀಣೆಯ ತಂತಿ ಮೀಟಿದೆಸುಖ ಸ್ವಪ್ನದ ಸವಿಗಾನ ನುಡಿಸಿದೆಮಧುರ ಮಮತೆಯ ಭಾವ ಬಿಂಬಿಸಿದೆಒಡಲಿನೊಳಗೆ  ಬಿಸಿ ಅನುಭವ ಮೊಳಗಿಸಿದೆ ನೀ ನೀಡಿದ ಪ್ರೀತಿ ಕಾಣಿಕೆ ಮರೆಯಲಾರೆಎಂದೆಂದೂ ಜೊತೆಯ ಪಾತ್ರ ತೊರೆಯಲಾರೆಭರವಸೆಯ ಜೊತೆಗಾರ ಬಾಳಲಿ ನೀನಾಸರೆನೆನಪಿಡುವೆ ಸದಾಕಾಲ ಮರೆಯದೆ ಮನಸಾರೆ ನಂಬಿಕೆಯ ನಡೆಯಲಿ ಸದಾ ನನ್ನೊಂದಿಗಿರುಬದುಕಲಿ ಬದುಕುವ ಭರವಸೆ ನೀನಾಗಿರುಯಾವ ಜನ್ಮದ ಋಣವೋ ತಿಳಿದಿರುಕೈ ಹಿಡಿದು ಬಾಳಲಿ ಮುನ್ನಡೆಸುತ್ತಿರು ಮುಗಿಯುವ ಪಯಣದಲಿ ಕಾವ್ಯವಾಗಿರುನಾ ಬರೆವ ಕವಿತೆಯಲಿ ಹಸಿರಾಗಿರುನೆಮ್ಮದಿಯ ಬದುಕಿಗೆ ನಿರಾಳ ಉಸಿರಾಗಿರುನಾ ಕಂಡ ಸುಂದರ ಕನಸುಗಳಲಿ ನನಸಾಗಿರು. ಡಾ.ಲತಾ ಎ. ಆರ್. ಬಾಳೆಹೊನ್ನೂರು

ಡಾ.ಲತಾ ಎ. ಆರ್. ಬಾಳೆಹೊನ್ನೂರು ಕವಿತೆ “ಸವಿಗಾನ” Read Post »

ಕಾವ್ಯಯಾನ

“ಭೂದೇವಿಯಮದುವೆ” ಶ್ರೀದೇವಿ ಗುಮ್ಮಗೋಳ

ಕಾವ್ಯ ಸಂಗಾತಿ ಶ್ರೀದೇವಿ ಗುಮ್ಮಗೋಳ “ಭೂದೇವಿಯಮದುವೆ” (ಜಾನಪದ ಶೈಲಿಯ‌ಲ್ಲಿ‌ ಬರೆದ ಗೀತೆ)ಮಳೆರಾಯ ಮದುಮಗ ಬಂದಾನಭೂದೇವಿಗ ಮದುವ್ಯಾಗಕ ನಿಂದಾನ| ಮೋಡಗಳ ದಿಬ್ಬಣ ಹೊತ್ತ ಬಂದಾನಸುರಗಿನೀರ ಬರಬರ ಸುರಸ್ಯಾನ| ಭೂದೇವಿಗೆ ಮನಸೋತು ಕರಿಗ್ಯಾನಮುತ್ತು ಹನಿಗಳ ಹೂಹಾರ ಹಿಡಿದಾನ| ರೈತ ಬೀಗನ್ನ ಹಂದರಕ ಕರೆದಾನಜೊಡೆತ್ತಿನ್ಯಾಗ ಸಾರೂಟ ಹೊರಟಾಣ| ಜೋಳಗ್ಯಾಗ ಮುತ್ತಿನ ಜೋಳ ಹಿಡದಾನಬಸವಣ್ಣ ನೇಗಿಲ ಹೊತ್ತಾನ| ಬಸವಣ್ಣ ಬಿತ್ತುತ ನೇಯ್ಗಿ ನೇಯ್ದಾನಭೂದೇವಿಯ ಹಸಿರು ಸೀರೆಯ ಉಟ್ಟಾಳ| ಹಸಿರು ಉಸುರಾಗಿ ಫಲವಾಗಿ ನಿಂತಾಳದವಸದ ಉಡಿ ತಂದೇನಿ ಅಂದಾಳ| ಹಿಗ್ಗಿ ಹಿರಿದು ಊರ ಮಂದಿನನಮ್ಮಣ್ಣ ಸುಗ್ಗಿ ಊಟಕ್ಕ ಕರದಾನ| ಉಂಡ ಮಂದಿ ಬಾಯಿತುಂಬ ಅಣ್ಣನ ಹರಸ್ಯಾರಭೂತಾಯವ್ವಗ ಕೈ ಎತ್ತಿ ಮುಗದಾರ|  ಶ್ರೀದೇವಿ ಗುಮ್ಮಗೋಳ

“ಭೂದೇವಿಯಮದುವೆ” ಶ್ರೀದೇವಿ ಗುಮ್ಮಗೋಳ Read Post »

ಕಾವ್ಯಯಾನ, ಗಝಲ್

ಎ.ಹೇಮಗಂಗಾ ಅವರ ಗಜಲ್

ಕಾವ್ಯ ಸಂಗಾತಿ ಎ.ಹೇಮಗಂಗಾ ಅವರ ಗಜಲ್ ಬೇಕೆನಿಸಿದ ಕ್ಷಣಗಳಲಿ ನೀ ತೊರೆದು ಹೋದೆವಿರಹದ ಕಾವ್ಯಕೆ ಮುನ್ನುಡಿ ಬರೆದು ಹೋದೆ ನಡೆವ ಹಾದಿಗೆ ಸುರಿದ ಪ್ರೀತಿ ಸುಮಗಳೆಷ್ಟೋಕೊಂಚವೂ ದಯೆಯಿರದೇ ತುಳಿದು ಹೋದೆ ನಿನ್ನ ಕೈಯಲಿ ಕೀಲುಗೊಂಬೆ ನಾನಾಗಿ ಕುಣಿದೆಕಟು ಮಾತಿನ ಕೂರಂಬುಗಳಲಿ ಇರಿದು ಹೋದೆ ನಂಬಿ ಬಂದ ಈ ಜೀವಕೆ ಅದೆಷ್ಟು ಆಘಾತಗಳು !ತೋರಿದ ಅಸೀಮ ಒಲವನು ಜರೆದು ಹೋದೆ ನನಸಾಗದ ಕನಸುಗಳ ನೀ ಕಾಣದಿರು *ಹೇಮ*ನಿನಗಾಗಿ ಮಿಡಿದ ಹೃದಯವ ಮುರಿದು ಹೋದೆ ಎ. ಹೇಮಗಂಗಾ

ಎ.ಹೇಮಗಂಗಾ ಅವರ ಗಜಲ್ Read Post »

ಕಾವ್ಯಯಾನ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ “ಅಳು ಬಂದರೆ ಅತ್ತು ಬಿಡು”

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಅಳು ಬಂದರೆ ಅತ್ತು ಬಿಡು” ಅಳು ಮನವೆ ತಡೆದುಕೊಳ್ಳಬೇಡಈ ಕಣ್ಣೀರು ದೌರ್ಬಲ್ಯ ಅಲ್ಲವೊಅದಾರ ಮೇಲಿನ ಪ್ರೀತಿಯ ಸಾಕ್ಷಿಗೊಮುನಿಸಿಗೊ ನಿನ್ನ ಮನಸ ಹಗುರಾಗಲುಅತ್ತೆ ಬಿಡು ಅಳು ಬಂದರೆ. ಗಂಟಲು ಕಟ್ಟಿ ಮಾತು ಬಾರದಾದಾಗಕಣ್ಣುಗಳೇ ಮಾತಾಡಲಿ ನಿನ್ನೊಡನೆಒಂದೊಂದು ಹನಿಯೂ ಹೇಳಿವೆ“ನೆನಪುಗಳೆ ನೆನಪಾಗ್ತೀರಿ” ಅಂತ.   ಜನ ಏನಂದಾರೆಂದು ನೋಡಬೇಡಗಂಡಸರು ಅಳಬಾರದು ಅನ್ನೋದೆಲ್ಲ ಸುಳ್ಳುಅವಳು ಹೋದ ನೋವಿಗೆ ಅಳದಿದ್ರೆ  ಆ ಎದೆ ಕಲ್ಲು ಆಗಿರಬೇಕು ಎನ್ನುವರಲ್ಲ. ಅಳು, ಆದ್ರೆ ಆ ಹನಿಗಳಲ್ಲಿ ಮುಳುಗಬೇಡಅದೇ ಹನಿಗಳಿಂದಲೆ ಎದ್ದು ನಿಲ್ಲುನಿನ್ನ ಕಣ್ಣೀರು ಒರೆಸೋ ಕೈ ಇಲ್ಲಎಂದು ಕೊರಗಬೇಡ ಆಕಾಶದಿಂದಅವಳು ನೋಡುವಳಂತೆ. ಅಳು ನೀನು ಮನಸಾರೆ ಅಳು ಮನವೆ  ಅತ್ತ ಮೇಲೆ ಮನಸ್ಸು ಹಗುರ ಆಗವುದಂತೆಮತ್ತೆ ಬದುಕೋಕೆ ಶಕ್ತಿ ಬರುವುದಂತೆಅವಳಿಗಿಷ್ಟ ಆಗೋ ಹಾಗೆ ನಗೋಕೆದಾರಿ ಸಿಗುವುದಂತೆ.   ಅತ್ತೆಯಾ ಅತ್ತು ಬಿಡು ಅಳು ಬಂದರೆಅತ್ತು ಹಗುರ ಆಗು ನಾನಿದ್ದೀನಿ ನಿನ್ನ ಜೊತೆಗೆ. ಇಂತಿ ನಿನ್ನ  ಮನ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ “ಅಳು ಬಂದರೆ ಅತ್ತು ಬಿಡು” Read Post »

ಕಾವ್ಯಯಾನ

ಎಸ್. ಆರ್. ಆರ್. ವಿಜಯಲಕ್ಷ್ಮಿ ಅವರ ಕವಿತೆ “ನೀಲ ನಭದೊಳಗಣ ಮುಗಿಲ ದಿಬ್ಬಣ”

ಕಾವ್ಯ ಸಂಗಾತಿ ಎಸ್. ಆರ್. ಆರ್. ವಿಜಯಲಕ್ಷ್ಮಿ “ನೀಲ ನಭದೊಳಗಣ ಮುಗಿಲ ದಿಬ್ಬಣ” ನೀಲ ನಭದೊಳಗಣಮುಗಿಲ ದಿಬ್ಬಣ. ನೀಲ ನಭ ದೊಳಗಣಮುಗಿಲ ಮೇಘಗಾನಸೋಜಿಗದ ಸೊಬಗುಸೃಜಿಸಿದೆ ರಿಂಗಣ           ಬಂಗಾರ ವರ್ಣದ         ಬಾಂದಳದೊಡೆಯಭಾಸ್ಕರನ ಶೃಂಗಾರಕಲ್ಪಲೀಲಾ ಮಗದೊಮ್ಮೆಮರು ಹುಟ್ಟು ಪಡೆದಿದೆ         ಮುಸ್ಸಂಜೆ ಯು  ರವಿಯರಶ್ಮಿ ಯೊಳಗೆ ಮಿಂದೆದ್ದ. ಉಷೆಯ ಉಸುಕುರಂಗೇರಿ ಮೇಘ ತರಂಗಗಳಹಣೆಗೆ ಕೆಂಪಿನ ತಿಲಕ ವಿಟ್ಟಂತೆಇಲ್ಲೊಂದು. ಗಾಂಧಾರಲೋಕ ವರಳಿಸಿದೆ           ಜಗ ತನ್ನಿರುವ ಮರೆತಿರುವಂತೆಮೆಲ್ಲ ನೆಲ್ಲೋ  ಬಾನಾಡಿ. ಗರಿ ಗೆದರಿನಭ ನೋಡಿ  ನಕ್ಕಂತೆಭ್ರಮರವಿದೋ. ಮೆಲು ಹೂವು ಸ್ಪರ್ಶಿಸಿಮಧುವ ಹೀರಿ ಸಂಭ್ರಮಿಸುವಂತೆ                            ಮೇಲ್ ಮುಗಿಲುನೀಲಿ ಕಂಗಳ ತೆರೆದುಧರಣಿ ಯನ್ನೊಮ್ಮೆ ಬಳಿ ಕರೆದುಅವಳ ಕರಿ ಮುಂಗುರಳ               ತೆರೆ ಸರಿಸಿದಂತೆಅಲ್ಲಲ್ಲಿ. ರಂಗೇರಿದಕೆಂದಾವರೆಯ  ಕೆನ್ನೆ ಯನಾಚಿಕೆಯ  ಕೆಂಪುಎಲ್ಲೆಡೆ ಪಸರಿಸಿ ದಂತೆ           ಆಮುಗಿಲ. ಸೌಂದರ್ಯ ದಸಾರವನ್ನೆಲ್ಲ     ತನ್ನೊಡಲೊಳಗಿನಕಡಲಿನೊಳಗಿರಿಸಿ.ಛಾಯೆಯಾಗಿಸಿದೃಷ್ಟಿ ಬೊಟ್ಟಿನಂತೆ.ಪ್ರತಿ ಬಿಂಬಿಸಿನಭದ ನಕ್ಷೆ ಯಲ್ಲಿಚಿತ್ತಾರ.  ಬರೆದಜಗದ ಸೃಷ್ಟಿ ಯಸಾಕ್ಷಾತ್ಕಾರ,   ಎಸ್. ಆರ್. ಆರ್. ವಿಜಯಲಕ್ಷ್ಮಿ                                   

ಎಸ್. ಆರ್. ಆರ್. ವಿಜಯಲಕ್ಷ್ಮಿ ಅವರ ಕವಿತೆ “ನೀಲ ನಭದೊಳಗಣ ಮುಗಿಲ ದಿಬ್ಬಣ” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ‌ ಅವರ ಕವಿತೆ”ಸ್ವರ್ಗ ಮನದೊಳಿದೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ‌ “ಸ್ವರ್ಗ ಮನದೊಳಿದೆ” ಕಾಣದ ಸ್ವರ್ಗಕೆಹಂಬಲವೇಕೆಕಾಣುವ ಬದುಕನುಕಳೆವೆಯೇಕೆ ಹುಟ್ಟಿದ ಉಸಿರುಹೊರಡಲೇಬೇಕುಈ ನಿತ್ಯ ಸತ್ಯವನುಮರೆವೆಯೇಕೆ ನರಕದ ಭಯಕೆನಡುಗುವೆಯೇಕೆಮನದ ಗಾಯಕ್ಕಿಂತದೊಡ್ಡದೇನಿದೆ ಮೂರ್ತಿಯಲ್ಲಅಮೂರ್ತದಲ್ಲಕೊನೆಯ ತೀರ್ಪುಆತ್ಮಸಾಕ್ಷಿಯಲ್ಲವೇ ಕೈಯಲಿ ಕರುಣೆಮನದಲಿ ಪ್ರೀತಿಬದುಕಲಿ ಮಾನವತೆಸಾಕಲ್ಲವೇ ಕಾಣುವ ಬದುಕೇಕೈಯಲ್ಲಿರುವುದುಪ್ರೀತಿ ಇರುವೆಡೆಸ್ವರ್ಗ ಇರುವುದು ಮೂರು ದಿನದ ಬದುಕುನಗುನಗುತಾ ಸಾಗಲಿಒಬ್ಬರ ನೋವಿಗೆಇನ್ನೊಬ್ಬ ಕಾರಣವಾಗದಿರಲಿ ಸ್ವರ್ಗ ನರಕವೆಲ್ಲಮನದೊಳಿವೆಮಾಡಿದ ಒಳಿತುಗಳೇಉಳಿಯಲಿವೆ ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ‌ ಅವರ ಕವಿತೆ”ಸ್ವರ್ಗ ಮನದೊಳಿದೆ” Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್                                            ಅವಳ ಕಂಗಳ ಮಿಂಚನು ಅರಸುತಾ ಕಾಡಿನಿಂದ ಬಂದೀನಿಅವಳಿಗಾಗಿ ಸುಂದರ ಕನಸುಗಳ ಮೂಟೆ ಹೊತ್ತು ತಂದೀನಿ ಅವಕುಂಠದೊಳಗಿನ ಮೊಗವು ನಗೆ ಜೊನ್ನ ಚೆಲ್ಲುತಿದೆಮಾನಸ ‌ಸರೋವರದೊಳಗಿನ ಬಿರಿದ ನೈದಿಲೆ ಹಿಡಿದು ನಿಂತೀನಿ ಕರದೊಳಗಿನ ಕುಸುಮ ಜಾರಿದರೂ ಕಂಪು ಉಳಿದಿದೆ ದುಂಬಿ ಯಾಗಿ ಅವಳ ಒಡಲೊಳಗೆ ಪರಾಗ ತುಂಬೀನಿ ನಾನು ಅವಳ ವ್ಯಾಮೋಹದ ಬಲೆಯಲಿ ಸಿಲುಕಿರುವೆ ನೋಡುಹೊಳೆವ ಅವಳ ಕಪೋಲದ ಮೇಲೆ ಪ್ರೇಮದುಂಗುರ ಒತ್ತೀನಿ ಬೆಳದಿಂಗಳ ಇರುಳು ಅರಳಿದ ಪಾರಿಜಾತದ ಘಮಲು ಹರಡಿದೆಅನುರಾಗದ ಕಡಲಿಂದ ಪ್ರಭೆಯ ಹೃದಯದ ಮುತ್ತನು ಕದ್ದೀನಿ ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಡಾ.ವೈ.ಎಂ.ಯಾಕೊಳ್ಳಿ ಅವರ “ಹತ್ತು‌ ಕವಿತೆ ಚೂರು”

ಕಾವ್ಯ ಸಂಗಾತಿ ಡಾ.ವೈ.ಎಂ.ಯಾಕೊಳ್ಳಿ “ಹತ್ತು‌ ಕವಿತೆ ಚೂರು” ೧ಅವ್ವ ಕಾಯುತ್ತಾಳೆಕಣ್ಣಾಗಿ ಜಗವಬುದ್ಧನಂತೆ ೨ಅಪ್ಪನ‌ ನೇಗಿಲಕುಳಕ್ಕೆ ಬೇಸರವೆಂಬುದಿಲ್ಲಬರಿ ಹಸಿರು ಬಿತ್ತುತ್ತದೆ ೩ಲೋಕ ನಿದ್ದೆಗಣ್ಣಲ್ಲಿದೆಎಚ್ಚರಿಸ ಬೇಕಾದ ದೈವಮರೆತು‌ ಮಲಗಿದೆ ೪ಯುದ್ಧ ನಿಲ್ಲದುಎದೆಯಲ್ಲಿ ಶಾಂತಿ ತೋಟಬೆಳೆಯುವವರೆಗೆ ೫ಕೈಯ ಕೋವಿಗೂಕ್ಷಮಿಸುವ ಶಕ್ತಿಕೊಟ್ಟಾಗ ಬುದ್ಧ ನಗುತ್ತಾನೆ ೬ನಮ್ಮ‌ಕೇರಿಯತುಂಬ ಹೂವು ಚೆಲ್ಲಿವೆರಂಜಾನ್,ಯುಗಾದಿ ಕೂಡಿ ನಡೆದಿವೆ೭ಅವ್ವ  ತಟ್ಟುವರೊಟ್ಟಿಗೆ ಜಗದ ಹಸಿವುನೀಗಿಸೊ ತಾಕತ್ತಿದೆ ೮ಬರೆದು ಸೋಲುತ್ತೇನೆಆಕೆ ಮಹಾಜಾಣೆಕಣ್ಣೊಳಗೇ ಓದಿ ನಗುತ್ತಾಳೆ ೯ನಾನು ಅಕ್ಷರ ಜೀವಅವಳು‌ ಪ್ರೇಮದ ಅರ್ಥಬಲ್ಲವಳು ಸಾಂಗತ್ಯ ಸಸಾರ ೧೦ಪ್ರೀತಿಯ ಬಾವಿಬತ್ತಿದ ದಿನಸಂಸಾರ ಸತ್ತು ಹೋಗಿರುತ್ತದೆ ಡಾ.ವೈ.ಎಂ.ಯಾಕೊಳ್ಳಿ

ಡಾ.ವೈ.ಎಂ.ಯಾಕೊಳ್ಳಿ ಅವರ “ಹತ್ತು‌ ಕವಿತೆ ಚೂರು” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ “ವಚನಕಾರರ ಹರಿಕಾರ:ಫಗು ಹಳಕಟ್ಟಿ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ವಚನಕಾರರ ಹರಿಕಾರ:ಫಗು ಹಳಕಟ್ಟಿ” ನಾಡಿನ ನೆಲದ ನಂದಾದೀಪ,ನುಡಿಯ ಬೆಳಕಿನ ಶಾಶ್ವತ ರೂಪ;ಫಗು ಹಳಕಟ್ಟಿ ಮಹನೀಯರ ಹೆಸರು,ಕನ್ನಡಿಗರ ಹೃದಯದ ಚಿರಸ್ಮರಣೆ// ಧಾರವಾಡದ ಧರೆಗೆ ಜನಿಸಿ,ಧೀಮಂತ ಚಿಂತನೆ ಹೊತ್ತು ಬೆಳೆದು;ಸರಳ ಬದುಕಿನ ಸತ್ಯದ ದಾರಿಯಲ್ಲಿ,ಸಾಹಿತ್ಯ ಸೇವೆಯೇ ಜೀವನವಾಗಿಸಿ// ವಚನಗಳ ಅಮೃತವನು ಹುಡುಕುತ್ತ,ಹಳ್ಳಿ-ಹಳ್ಳಿ ಹೆಜ್ಜೆ ಇಟ್ಟರು;ತಾಳೆಗರಿ, ಹಸ್ತಪ್ರತಿ, ಹಳೆಯ ಗ್ರಂಥಗಳಲಿ,ಅಮೂಲ್ಯ ನಿಧಿಯನು ಕಾಪಾಡಿದರು// ಚದುರಿದ ವಚನ ಮುತ್ತುಗಳನು,ಒಂದೊಂದು ಹಾರವ ಮಾಡಿ ಜೋಡಿಸಿ;ಶರಣರ ಸಂದೇಶದ ಸಿರಿಯನ್ನು,ಜಗದ ಮುಂದೆ ಬೆಳಗಿಸಿದರು// ಶ್ರಮವೇ ಅವರ ಉಸಿರಾಯಿತು,ಸೇವೆಯೇ ಅವರ ಜೀವನವಾಯಿತು;ನಿರಹಂಕಾರದ ನಗುವಿನೊಳಗೆ,ಜ್ಞಾನಜ್ಯೋತಿ ಸದಾ ಹೊಳೆಯಿತು// ವ್ಯಕ್ತಿತ್ವದ ಎತ್ತರ ಬೆಟ್ಟದಷ್ಟು,ವಿನಯದ ಆಳ ಸಾಗರದಷ್ಟು;ಕಾಯಕವೇ ಕೈಲಾಸವೆಂಬ ತತ್ತ್ವವನು,ತಮ್ಮ ಬದುಕಿನಲ್ಲೇ ತೋರಿದರು// ವಚನ ಸಾಹಿತ್ಯದ ರಕ್ಷಕರಾಗಿ,ಕನ್ನಡದ ಕಾವಲುಗಾರರಾದರು;ಶರಣರ ಚಿಂತನೆ ಚಿರಂಜೀವಿಯಾಗಿ,ಮುಂದಿನ ಪೀಳಿಗೆಗೆ ಉಡುಗೊರೆಯಾದರು// ಫಗು ಹಳಕಟ್ಟಿ ಎಂಬ ಹೆಸರು,ಕನ್ನಡದ ಕಿರೀಟದ ಹೊಳೆಯುವ ರತ್ನ;ವಚನಗಳ ಬಟ್ಟೆ ನೇಯ್ದ ಮಹಾಶಿಲ್ಪಿ,ಸಾಹಿತ್ಯ ಲೋಕದ ಅಮರ ಚೇತನ// ನಾವು ಹೋಗೋಣ ಅವರ ಹಾದಿಯನು,ನಾವು ಬೆಳಗೋಣ ಜ್ಞಾನದ ದೀಪವನು;ವಚನಗಳ ಮೌಲ್ಯ ಉಳಿಸೋಣ ಎಲ್ಲರೂ,ಫಗು ಹಳಕಟ್ಟಿ ಆದರ್ಶವನು ಪಾಲಿಸೋಣ ಸದಾಕಾಲ// ವಚನಗಳ ವನದ ಕಾವಲುಗಾರ,ಕನ್ನಡ ನುಡಿಯ ಅಪರೂಪದ ಸೇವಕ;ಫಗು ಹಳಕಟ್ಟಿ ಚಿರಸ್ಮರಣೀಯ,ಸಾಹಿತ್ಯಾಕಾಶದ ಧ್ರುವತಾರೆ// ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಅವರ “ವಚನಕಾರರ ಹರಿಕಾರ:ಫಗು ಹಳಕಟ್ಟಿ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ “ನ್ಯಾಯದ ಕೂಗು”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನ್ಯಾಯದ ಕೂಗು” ಬಡಿಯೋಣ ನ್ಯಾಯದ ಕದಮೌನದ ಗೋಡೆ ಕುಸಿಯುವ ತನಕ,ಮುಖವಾಡಧಾರಿಗಳನಿಜಮುಖ ಬೆಳಕಿಗೆ ಬರುವ ತನಕ,! ಎಚ್ಚೆದ್ದು ಕೊಳ್ಳೋಣ….ನಿದ್ರಿಸಿದ ಮನಸ್ಸುಗಳನ್ನೆಬ್ಬಿಸಿ,ಕಪಟದ ನೆರಳಲ್ಲಿ ಬೆಳೆದಶಾಂತಿ ಕದಡುವ ದುಷ್ಟರ ಓಡಿಸಿ,! ಹೋರಾಡೋಣ….ಸುಳ್ಳಿನು ಬಿತ್ತುವ ಕಣಿವೆಗಳಲ್ಲಿ,ದ್ವೇಷದ ಬೆಳೆಯನು ಬೆಳೆಸುವಕಾಣದ ಕೈಗಳ ವಿರುದ್ಧ ಸಟೆದು ನಿಂತು,! ಧ್ವನಿಯಾಗೋಣ….ನಿಶ್ಯಬ್ದದ ಕಣ್ಣೀರಿಗೆ ಧ್ವನಿಯಾಗಿ,ನ್ಯಾಯದ ಹಾದಿಯಲಿ ನಡೆವಶೋಷಿತರ ನಂಬಿಕೆಗಳ ಪರ ನಿಂತು,! ಚಿಂತಿಸಿ ಬಾಳೋಣ…ಸತ್ಯದ ದೀಪಗಳ ಎಲ್ಲೆಡೆ ಬೆಳಗಿಸಿ,ಮೋಸದ ಜಾಲವನು ಬೀಸಿದಕೈಗಳಿಗೆ ಕಾನೂನಿನ ಬಿಸಿ ಮುಟ್ಟಿಸಿ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ “ನ್ಯಾಯದ ಕೂಗು” Read Post »

You cannot copy content of this page

Scroll to Top