ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ಸಿಡಿಲು ಅಬ್ಬರಿಸಿದರೂ ಮಳೆಯು ಭರವಸೆಹುಟ್ಟಿಸಿದೆ ಗೆಳೆಯಾಮಿಡಿದು ಅಂತರಂಗದಲಿ ಮೂಡಿದ ಭಾವಗಳಮುಟ್ಟಿಸಿದೆ ಗೆಳೆಯಾ ಸುರಿದ ಧಾರೆಯೊಳಗೆ ಮಿಂದ  ಇಳೆಯಲಿತಂಪಿನ ಸಿಂಚನವಲ್ಲವೇಹರಿದು ಧಾರಾಕಾರವಾಗಿ ನದಿಯ ಸೇರುವಾಸೆಮೆಟ್ಟಿಸಿದೆ ಗೆಳೆಯಾ ವಸಂತ ತರುಲತೆಗಳಲಿ ಹಸಿರು ರಂಗವಲಿಎರಚುತ ಬಂದನುಹೊಸತು ಕನಸುಗಳ ಬಿತ್ತಲು ಆಸೆಗಳಕಟ್ಟಿಸಿದೆ ಗೆಳೆಯಾ ಕುಣಿದ ವಸುಂಧರೆಯ ಒಡಲು ಹರುಷದತೋರಣ ಬಿಡಿಸಿದೆತಣಿದ ರೈತಾಪಿವರ್ಗಕೆ ಮೂಡಿದ ಭಯವನುಅಟ್ಟಿಸಿದೆ ಗೆಳೆಯಾ ರಾಧೆಯ ಮನದಂಗಳದ ತೋಟದಿ ನಲಿದಿವೆಬಣ್ಣಬಣ್ಣದ ಹೂವುಗಳುಮಧುರ ಅನುಭೂತಿಯಲಿ ಬದುಕ ಮೌಲ್ಯವಗಿಟ್ಟಿಸಿದೆ ಗೆಳೆಯಾ ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »

ಕಾವ್ಯಯಾನ

ಶ್ರೀದೇವಿ .ಮ.ಗುಮ್ಮಗೋಳ ಕವಿತೆ “ಅಪ್ಪನಿಲ್ಲದ ಮನೆಯೊಳಗೆ ಅಮ್ಮ”

ಕಾವ್ಯ ಸಂಗಾತಿ ಶ್ರೀದೇವಿ .ಮ.ಗುಮ್ಮಗೋಳ “ಅಪ್ಪನಿಲ್ಲದ ಮನೆಯೊಳಗೆ ಅಮ್ಮ” ಅಪ್ಪನಿಲ್ಲದ ಮನೆಯೊಳಗೆನೋವು ನುಂಗಿ ಕಷ್ಟಸಹಿಸಿದೈರ್ಯ ವಹಿಸಿ…..ಮಕ್ಕಳನ್ನು ಸಾಕಿಬೆಳಸಿದಳಮ್ಮಮಕ್ಕಳೆಲ್ಲ ಬೆಳದು ಹೆಮ್ಮರವಾಗಿದ್ದಾರೆಮಕ್ಕಳೆಲ್ಲ ತಮ್ಮದೆಂಬ ನೆಲೆಯಲ್ಲಿಅಮ್ಮನಿಗ ಜೇಡರಬಲೆಯಲ್ಲಿ… ಹೆಗಲ ಮೇಲೆ ಹೊತ್ತು ಅಪ್ಪ ತಿರುಗುವಾಗನನ್ನ ಕೂಗು ಮುಗಿಲು ಮುಟ್ಟುತ್ತಿತ್ತುಅಪ್ಪಿನಿಲ್ಲದೇ ತಬ್ಬಲಿಗಳಾಗಿ….ಪ್ರಭಲ ಶಕ್ತಿಗಳ ಬಲಿಗಳಾಗಿ….ನಮ್ಮ ಕೂಗು ಕೇಳುವರಿರಲಿಲ್ಲತುತ್ತು ಕೂಳಿಗಾಗಿ ಅಮ್ಮಮುಸುರಿ ತಿಕ್ಕುತ ಅಲೆದಿದ್ದಳಲ್ಲ….. ಅಪ್ಪನಿಲ್ಲದ ಮನೆ ಈಗಉಪ್ಪರಗಿಯಲ್ಲಿದ್ದೂ ಅನಾಥಭಾವ….ಅಮ್ಮ ಕೇವಲ ಅಣ್ಣ-ಅತ್ತಿಗೆಯರ ಕೈಗೊಂಬೆಮರದಿಂದ ಬೇರ್ಪಟ್ಟ ರಂಬೆಕೊಂಬೆಜೀವವಿದ್ದು ನಿರ್ಜಿವದ ತೊಗುಲುಗೊಂಬೆ ಮನೆಗೆ ಬಂದಾಗಲೆಲ್ಲನೀ ಕುಳಿತ ಕುರ್ಚಿ, ಚಸ್ಮ, ಪೆನ್ನು, ಪುಸ್ತಕ ಬಣಗುಡುತ್ತಿವೆಕಣ್ಣಂಚಿನಲ್ಲಿ ಆರ್ದತೆ ತುಂಬಿಕೊಂಡುಮರೆಮಾಚುತ್ತೇನೆ ನೋವ….ಮಾತಿಗಿಳಿಯುತ್ತೇನೆ ಮಾತು ಒಣಗುತ್ತದೆನನ್ನ ಅಂತಾರಾಳದಲ್ಲಿ ಕುಳಿತುಅಪ್ಪ ಬಂದು ಗುಣಗಣಸಿದ ಭಾವ….. ಅಪ್ಪನಿದ್ದಾಗ ಅಮ್ಮನ‌ ಮಾತು ವಟವಟ…ಅಪ್ಪನ ಮೌನದಲ್ಲೂ ಇತ್ತು ಒಂದು ದಿಟ….ಈಗ ಅಮ್ಮನ ಮಾತುಗಳಿಗೆ ಭಾವವಿಲ್ಲಬರಿ ಮೌನ….ಅವಳ ಶಬ್ಧಗಳಿಗೆ ಕಿವಿಗಳಿಲ್ಲ…ರಕ್ಷಣೆಯೇ ಗೌಣ…. ಯಾವ ಆಸರೆಯಿಲ್ಲದ ಅಮ್ಮಗೋಡೆಯಾದರೂ ಆಸರೆಯಾದಿತೆಂದುಗೋಡೆಯ ಮೂಲೆಯೊಂದರಲ್ಲಿ ಕುಳಿತುಕೊಳ್ಳುತ್ತಾಳೆ….ಈಗ ಗೋಡೆಯೂ ಅಭದ್ರಅದಕ್ಕೂ ಕಾಡುತ್ತದೆ ನಿನ್ನ ನೆನಪು…. ಶ್ರೀದೇವಿ .ಮ.ಗುಮ್ಮಗೋಳ

ಶ್ರೀದೇವಿ .ಮ.ಗುಮ್ಮಗೋಳ ಕವಿತೆ “ಅಪ್ಪನಿಲ್ಲದ ಮನೆಯೊಳಗೆ ಅಮ್ಮ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಕವಿತೆ “ನಾವಿರೋದೇ ಹೀಗೆ”

ಕಾವ್ಯ ಸಂಗಾತಿ ಎಮ್ಮಾರ್ಕೆ “ನಾವಿರೋದೇ ಹೀಗೆ” ಪಕ್ಕದ ಮನೆಗೆ ಬಿದ್ದ ಬೆಂಕಿ ನಮ್ಮಮನೆಗೆ ತಗುಲುವುದೆಂಬ ಪ್ರಜ್ಞೆಯಿಲ್ಲ,ನಮ್ಮ ಮನೆಗೆ ಬೆಂಕಿ ಬಿದ್ದಾಗಲಷ್ಟೇನಾವು ಆರಿಸಲು ಅಣಿಯಾಗುವೆವು ಕಣ್ಣ ಮುಂದೆ ವಂಚನೆ,ಮೋಸನಡೆದರೂ ತಡೆಯುವ ತುಡಿತವಿಲ್ಲ,ನಮ್ಮ ಹತ್ತಿರಕ್ಕೆ ಬಂದಾಗಲಷ್ಟೇನಾವು ಬಿಡದೇ ಹರಿಹಾಯುವೆವು ನಮಗ್ಯಾಕೆ ಇಲ್ಲದ ಉಸಾಬರಿನಮಗೂ ಅದಕೂ ಸಂಬಂಧವಿಲ್ಲ,ನಮಗೆ ಸಂಬಂಧ ಪಟ್ಟಾಗಲಷ್ಟೇಎದೆಯನ್ನುಬ್ಬಿಸಿ ಎದುರಾಡುವೆವು ಬಿಟ್ಟಿ ಉಪದೇಶ ನೀಡುವವರಸಂಖ್ಯೆಗಂತೂ ಕೊರತೆಯೇ ಇಲ್ಲ,ಸ್ವಾರ್ಥದ ಸದುದ್ದೇಶವಿದ್ದರಷ್ಟೇಉದ್ದ ಉಪದೇಶವ ನೀಡುವೆವು ಬಹುತೇಕ ಪ್ರಭು,ಪ್ರಜೆಗಳಲ್ಲಿನಅಹಂಕಾರಕ್ಕ್ಯಾವ ಅಳತೆಗೋಲಿಲ್ಲ,ಕಾಗೆಯ ಬಣ್ಣ ಬಿಳುಪೆಂದರೂಹೂಂ ಎಂದು ಗೋನು ಹಾಕುವೆವು ಒಬ್ಬನೇ ಸೂರ್ಯ ನಿತ್ಯ ಜಗವಬೆಳಗುವುದರ ಪರಿವೇ ನಮಗಿಲ್ಲ,ನಮ್ಮೊಬ್ಬರಿಂದಲೇ ಏನಾದೀತು!ಎಂದು ಮನದಲ್ಲೇ ಮರುಗುವೆವು ಎಮ್ಮಾರ್ಕೆ

ಎಮ್ಮಾರ್ಕೆ ಅವರ ಕವಿತೆ “ನಾವಿರೋದೇ ಹೀಗೆ” Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ‌ ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ‌ ಗಜಲ್ ಮುಗ್ಧ ಜೀವಿಗಳ ರಕ್ತಪಾತಕೆ  ಬೆಚ್ಚಿದ  *ರಾತ್ರಿಗಾಗಿ* ಹಣತೆ ಬೆಳಗುವೆದ್ವೇಷ ಕಲಹ ಕ್ರಾಂತಿಗಳಿಂದ  ನರಳಿದ  *ಧಾತ್ರಿಗಾಗಿ* ಹಣತೆ  ಬೆಳಗುವೆ ತಲ್ಲಣ ಗೊಂಡಿದೆ  ಮನುಕುಲ ಭೀಕರ ಯುದ್ಧಗಳ  ಸಿಡಿಲಿನಿಂದಕವಿದ ಕರಾಳ  ಮುಖವಾಡಗಳ ಕಳಚುವ  *ಖಾತ್ರಿಗಾಗಿ* ಹಣತೆ  ಬೆಳಗುವೆ ನಾನೆಂಬ ಅಹಂಕಾರದ ಕ್ರೂರ ವರ್ತುಲಗಳು   ಸುತ್ತಿವೆ  ಜಗದಗಲಕ್ಷುದ್ರರಲಿ ಅವಿತ  ದುರುಳತನಗಳ ಮೆಟ್ಟುವ  *ಕ್ಷಾತ್ರಿಗಾಗಿ* ಹಣತೆ ಬೆಳಗುವೆ ಭಯದ ನೆರಳುಗಳು ಆವರಿಸಿ  ಹೆದರಿಸುತಿವೆ  ಹೆಜ್ಜೆ  ಹೆಜ್ಜೆಗೆ ಅಲ್ಲವೇಭ್ರಾತೃತ್ವದ ಸ್ನೇಹ ವಿಶ್ವಾಸಗಳು  ಮೆರೆಯುವ  *ಜಾತ್ರಿಗಾಗಿ* ಹಣತೆ  ಬೆಳಗುವೆ ಒಳಗೊಳಗೆ ಉಸಿರುಗಳು ಮೌನವಾಗಿ  ಬಿಕ್ಕುತ್ತಿವೆ ಪ್ರತಿಷ್ಠೆಯ ಜಾಲಗಳಲಿ  ಸಿಲುಕಿ ಬೇಗಂಶಾಂತಿ ಪ್ರೇಮಗಳನು ನೀಡುವ  ದೂತನಾಗಿ  ಬರುವ  *ಯಾತ್ರಿಗಾಗಿ* ಹಣತೆ  ಬೆಳಗುವೆ ಹಮೀದಾಬೇಗಂ ದೇಸಾಯಿ

ಹಮೀದಾ ಬೇಗಂ ದೇಸಾಯಿ‌ ಅವರ ಗಜಲ್ Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ

ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ ಅವರ ಕವಿತೆ ಕಾಗದದ ಮೇಲೆಬರೆಯಬೇಕೆಂದ ಸಾಲುಗಳುಇದ್ದಲ್ಲೇ ಕರಗಿಹೋದವು ಸುಮ್ಮನೇಗೆರೆಗಳ ಹಾಕಿಚಿತ್ರವಾಗಬೇಕಾದ ಚಿತ್ರಗಳೂರಸ್ತೆಗಳಾದವುಮರದ ನೆರಳಾಗಿಉಳಿಯಬೇಕಾದ ಹೂವುಗಳುಹಣ್ಣಿಗಾಗಿ ಇಳೆ ಸೇರಿತುಕಾಲದ ಸಹಜಓಟದ ಹರಿವಿಗೆಬಯಲು ನದಿಯಾಯಿತುಕಡಲು ಬದುಕಾಗಿಜೀವದ ಓಟ ಸಾಗಿತು ಮರದ ಮೇಲೊಂದು ಹಕ್ಕಿಕುಳಿತು ಗೂಡು ಕಟ್ಟುವುದುಹೇಗೆ ಎಂದು ನೋಡುತ್ತಿತ್ತುಹಾರಿ ಸಾಗಿ ಬದುಕಿನಉಸಿರಿಗೆ ಉಸಿರಾಗಿಕಣ್ಣೊಳಗೆ ಜಗವತುಂಬುತ್ತಿತ್ತು ಸುಮ್ಮನೇಗದ್ದೆಯ ಹಸಿರಿಗೆಚಿಗುರು ಮೂಡಿತ್ತುಮತ್ತೆ ಮೋಡದಿಮಳೆ ಹನಿಯ ಚಿತ್ರತಾನಾಗಿ ಮೂಡಿಜಗದಗಲದ ನೆಲಕೆತಂಪು ಹರಡಿತ್ತುಕಾಗದದ ಮೇಲೆಮೂಡಿದ ಬಣ್ಣಗಳೆಲ್ಲಾಗಾಳಿಯಲ್ಲಿ ತೇಲಿನೆಲಕೆ ಇಳಿದಿತ್ತುಮತ್ತೆ ಚಿತ್ರವಾಗುತ್ತನೆಲದೊಳಗೆ ಸೇರಿತ್ತು……. ನಾಗರಾಜ ಬಿ.ನಾಯ್ಕ

ನಾಗರಾಜ ಬಿ.ನಾಯ್ಕ ಅವರ ಕವಿತೆ Read Post »

ಕಾವ್ಯಯಾನ

ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ”

ಕಾವ್ಯ ಸಂಗಾತಿ ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ”. ಕಣ್ಣಿನ ನೋಟದಲ್ಲಿ ನೀಡಿದೆ ಭರವಸೆದೇವರಲಿ ನೀಡಿ ಬೇಡಿದೆ ಬೊಗಸೆಹೃದಯದಲಿ ನೀನೆಂದು ಸ್ಥಿರ ಮನಸೇನಿತ್ಯ ನೂತನ ನೆನಪೆoದು ನನಸೇ ಅಲೆ ಅಲೆಯಾಗಿ ಚಿಮ್ಮಿಸಿದೆ ಬಿಸಿ ಉಸಿರೇಬಾಳ ಬದುಕಲ್ಲಿ ನಮ್ಮಿಬ್ಬರ ಬೆರಸೇಸಂಸಾರದ ರಥ ನಡೆಸುವ ಕನಸೇತುಂಬುವುದು ಸಂತಸದ ಹೊಸ ಹಸಿರೇ ಬೆಚ್ಚನೆಯ ಗೂಡಲ್ಲಿ ಸುಂದರ ಲೋಕವದುಅನುಭವದ ಸವಿಸ್ತಾರ ಕೇಳುವುದುಜೀವನ ಚಕ್ರ ನಿಲ್ಲದೆ ಉರುಳುವುದುಸುಮಧುರ ಪ್ರೀತಿ ಅಳಿಯದೆ ಉಳಿಯುವುದು ಅನನ್ಯ ಅವಿಸ್ಮರಣೀಯ ಕಂಡ ಬೆರಗುಬೇಕಿಲ್ಲ ಜಂಜಾಟದ ಯಾವ ಕೊರಗುನೆಮ್ಮದಿಯ ಗೂಡಲ್ಲಿ ಕೈ ಹಿಡಿದು ಸಾಗುದೊರಕಿದೆ ಹೊಸತನದ ಹೊಸ ಮೆರಗು ಡಾ. ಲತಾ ಎ ಆರ್ ಬಾಳೆಹೊನ್ನೂರು.

ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ” Read Post »

ಕಾವ್ಯಯಾನ

ವೈ.ಎಂ.ಯಾಕೊಳ್ಳಿ ಅವರ “ಕವಿತೆ”

ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ ಕವಿತೆ ಎನಿತೊ‌ ಮಾತುಗಳುಮೌನದಲಿ‌ ಕರಗಿನಿಂತು ಹೋಗಿದೆಬಂಧವದು ಸೊರಗಿ ಎದೆಯ ಭಾವಗಳುಆಡದೆಯೆ ಉಳಿದುದೂರವಾದ ಹೃದಯಅಳುತಿದೆ ಮನದಿ ಕಾರಣವೆ ಇರದನೋವಿನ ಸರಮಾಲೆಯಾರದೇನೋ ಶಾಪವುತಿಳಿಯದಾವ ಲೀಲೆ ದಾಟದ ಸಾಗರವುಎದೆಗಳ ನಡುವೆಮುಗಿದು ಹೋದ ಮೇಲೆಮಾತವು ಬರಿ ಸಪ್ಪೆ ಕಡಿದ ಬಂಧವನುಜೋಡಿಸುವದೇ ತಂತುದಾರಿ ಕಾಣದ ಮನಮರುಗುತಿದೆ ಇಂತು ವೈ.ಎಂ.ಯಾಕೊಳ್ಳಿ

ವೈ.ಎಂ.ಯಾಕೊಳ್ಳಿ ಅವರ “ಕವಿತೆ” Read Post »

ಕಾವ್ಯಯಾನ

ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು”

ಕಾವ್ಯ ಸಂಗಾತಿ ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು” ಮುಚ್ಚಿ ಬಚ್ಚಿ ಕಟ್ಟಿಟ್ಟ ಕನಸುಕೊಚ್ಚಿ ಹರಿದು ಹೋದ ಹಾಸುಮತ್ತೆ ಬಿಚ್ಚ ಸೂರೆಗೊಳ್ಳುತಿರೆ-ಮನಸ್ಸು!!೧!! ಕನಸು ನನಸಾಗುವ ಕನವರಿಕೆಕಳೆದು ಹೋದವೆಷ್ಟೋ ಮನದ ಅರಿಕೆಕೊಚ್ಚಿಕೊಂಡಯ್ಯದ ಮನ ಚೇತರಿಕೆ!!೨!! ಕಟ್ಟಿದ ಕಲ್ಪನೆ ಕನಸಾಗಿಯೇ ನಿಂದವೂಅದೆಂದೊ ಕಾಲ ಗರ್ಭದಿ ಅವಿತವುಮರೆಯಾದವೆಂದು ವಿಷಾದದಿ ಕುಳಿತಿರೆ..!!೩!! ಅದು ಎಲ್ಲಿಯೋ ಎನಿತೋ ಹೊಳೆದಬೆಳಕು …ನನ್ನ ಅಬ್ಬೇ ಕನ್ನಡಾಂಬೆ ಕೂಗಿದಥಳುಕು..ಕರೇಯುತಿರೆ ಅಕ್ಕರದಿ….!!೪!! ಮಾಸಿ ಕಳೆಗುಂದಿ ಹೋದ ಗತ್ತು-ಮತ್ತೆತರುತ್ತೀವಿ ಸಕಾರತೆ ಋಣ ಹೊತ್ತುಹರಡಿವೆ ಉಡಿ ತುಂಬ ನುಡಿ ಮುತ್ತು!!೫!! ಎದೆ ತುಂಬಿ ಬಂದ ನುಡಿ ಬೆಳಕು,ಪ್ರಕಾಶಮಾನ ಹೊಂಬೆಳಕಿನ ತುಳುಕುನುಡಿ ಅಮ್ಮನ ಶಬ್ದಗಳ ಚಳಕು…!!೬!! ಎಳೆ ಎಳೆ ಬಿಚ್ಚುತ್ತಿರೆ ಕಟ್ಟಿಟ್ಟ ಕನಸಿನಗಂಟಿನ ನಂಟು ನೋಡಿ ನಿಬ್ಬೆರಗಾಗಿಹರುಷದಿ ಮತ್ತೆ ನಲಿದಾಡುತ!!೭!! ಕಂಡ ಕಿರು ಗನಸು ಹೆಮ್ಮರವಾಗಿಬಿಚ್ಚಿಕೊಳ್ಳುತಿವೆ..ಚಂದ ಚೆಂದವಾಗಿಎತ್ತರ ಅಂಬರನೆತ್ತರಕ್ಕೆ ಪಸರಿಸಲು..!!೮!! ಪಡೆದ ಸನ್ಮಾನದ ಸುಮ್ಮಾನವಾಗಲು.. ಸವಿತಾ ದೇಶಮುಖ

ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು” Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ” ಮರೆಯದೇ ಬರೆದು ಬಿಡು ಪ್ರೀತಿ ನಿನ್ನ ಕಂಗಳ ಕಾಂತಿ ಮತ್ತು ನಿನ್ನಮರೆಗುಳಿತನದ ಶಾಂತಿಡಿಮೆನ್ಷಿಯಾ ಎಂದಾಗುವ ಮುನ್ನ ಬರೆದು ಬಿಡು ಪ್ರೀತಿ,ಪ್ರೀತಿ ಮಾಸುವಾ ಮುನ್ನಹೇಳಿಬಿಡು ಪ್ರೀತಿಯ ರೀತಿ! ಒಂದಾನೊಂದು ಕಾಲದ ಕಥೆಗಳು ಕಳೆದು ಹೋಗುವ ಮುನ್ನ,ಕಳೆದ ಕಥೆಗಳು ಧಾರಾವಾಹಿಯಾಗದೇಮಿದುಳ ಬಳ್ಳಿಯಿಂದ ಚಾಚಿಹೃದಯದಿಂದ ಚಿಮ್ಮುತ್ತಕಾಲಾಂತರ್ಗತವಾಗುವ ಮುನ್ನ. ಪ್ರೀತಿ ,ಕಾಲನ ತುಳಿತಕ್ಕೆ ನುಚ್ಚಾಗುವ ಮುನ್ನ ಸೋಸಿ ಬಿಡುನುಚ್ಚಿನ ನೆಚ್ಚಿನ ಪಾಯಸದ ಘಮ ನಾಸಿಕಕ್ಕೆ ತಲುಪುವ ಸುಮುಹೂರ್ತದ ಒಳಗೆ ನೀ ಹೊಗೆಯಾಗಿ ಬಿಡು ಹಬೆಯಾಗಿ ಬಿಡುಕಾಲ ಚಕ್ರನ ವೇಗಕ್ಕೆ ಸಿಲುಕಿ ಸೊಗಸಿ ಬಿಡು ಪ್ರೀತಿ ಇರುವಷ್ಟು ದಿನ ರಾತ್ರಿ ಸಮಯ!! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ” Read Post »

ಕಾವ್ಯಯಾನ, ಗಝಲ್

 ವಾಣಿ ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ  ವಾಣಿ ಭಂಡಾರಿ ಗಜಲ್ ಹಚ್ಚಿಟ್ಟ ಹಣತೆ ಎದೆಯನ್ನು ಸುಡುವಾಗ ಬೆಳಕಿನ ತಾಪವನ್ನು ಏನೆಂದು ಶಪಿಸಲಿಮಾತು ಕಳೆದುಕೊಂಡ ನಾಲಿಗೆ ಜೊತೆಗಿರುವಾಗ ಮೌನದ ನೋವನ್ನು ಏನೆಂದು ಕರೆಯಲಿ ಎಲ್ಲ ನಾಟಕ ಬರಿ ಪೊಳ್ಳು ಬಾಳ ಬಯಲಾಟದಲ್ಲಿ ನಡೆಯುತಿದೆ ತಾಲೀಮು ದಿಕ್ಕೆಟ್ಟುಇರುಳ ಬೆಳಕಿನಾಟದಲ್ಲಿ ರಾತ್ರಿ ಸಾವು ಹಗಲಿಗೆ ಹುಟ್ಟು ಕೂಡಿರುವಾಗ ಪ್ರೀತಿಯನ್ನು ಏನೆಂದು ಹೆಸರಿಸಲಿ ಹುಚ್ಚರ ಸಂತೆಯಲ್ಲಿ ತತ್ರಾಣಿ ಕನಸು ಸೋತು ಗೆಲುವಿನ ಕಂದೀಲು ಅಬ್ಬರಿಸುತ್ತಿದೆಜಾತಿ ಧರ್ಮ ಪ್ರೇಮಕ್ಕೆ ಕಾಮದ ಹಣೆಪಟ್ಟಿ ಕಟ್ಟಿರುವಾಗ ಬದುಕನ್ನು ಏನೆಂದು ಬಣ್ಣಿಸಲಿ. ಮೆಚ್ಚಿಸೊ ಹುಚ್ಚು ಹಂಗಿಸೊ ಆಸೆ ಇರದ ಭಾವಗಳು ಜನ್ನತ್ ಗೆ ಧಾವಿಸುತ್ತಿವೆಒಂದು ದಿನದ ಸಾವು ಸೋಲಾಗಿ ಕೈಹಿಡಿವಾಗ ಬಾಳ ಬಣ್ಣವನ್ನು ಏನೆಂದು ತಿಳಿಯಲಿ. ಮೂರ್ಖರ ಮಧ್ಯೆ ಸ್ವರ್ಗಕ್ಕೆ‌ ದಾರಿಕೇಳಬೇಡ ವಾಣಿ ಏಕತಾರಿ ನುಡಿಸುತ್ತ ಸಾಗುಆತ್ಮದ ಬಾಗಿಲು ಮುಕ್ತಿಯನ್ನೇ ಬೇಡುವಾಗ ಕುಹಕಿಗಳ‌ ಮನವನ್ನು ಏನೆಂದು ಚಿತ್ರಿಸಲಿ. ವಾಣಿ ಭಂಡಾರಿ                    

 ವಾಣಿ ಭಂಡಾರಿ ಅವರ ಗಜಲ್ Read Post »

You cannot copy content of this page

Scroll to Top