ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ತೇಜಾವತಿ .ಎಚ್ .ಡಿ. ಅವರ ಕವಿತೆ “ಸೀಮೆ ಜಾಲಿ”

ಕಾವ್ಯ ಸಂಗಾತಿ ತೇಜಾವತಿ .ಎಚ್ .ಡಿ. “ಸೀಮೆ ಜಾಲಿ” ಅಂಕುಡೊಂಕಾದ ಕರಿ ನಾಗರಗಳಾಗಿಉದಯರಶ್ಮಿಗೆ ಮೈಯೊಡ್ಡಿರುವರಸ್ತೆಯ ಇಕ್ಕೆಲಗಳಲ್ಲಿದಶದಿಕ್ಕಿಗೂ ಕಬಂಧ ಬಾಹುಗಳನ್ನು ಚಾಚಿರುವಸಾಲು ಸಾಲು ಸೀಮೆಜಾಲಿಯ ಮರಗಳುಮೈತುಂಬಾ ಮುಳ್ಳು, ಕೆಸರು ದುರ್ನಾತ ಅವುಗಳ ನಡುವಲ್ಲೊಂದು ಪುಟ್ಟ ರಾಯಸಕ್ಕರಿ ಮರ ತಲೆಯೆತ್ತಿ ನಿಂತು ಸೂರ್ಯನೆಡೆಗೆ ಮುಖಮಾಡಿ ಕಂಗೊಳಿಸಿಚಿಗುರು ಹೂ ಮಿಡಿ ಕಾಯಿಹಣ್ಣು ತೊಟ್ಟು ಹಸಿರು ಉಟ್ಟು ಸಂಭ್ರಮಿಸಿದೆ ಅದೇ ಕೊಳಕು ಅದೇ ಕೆಸರು ಅದೇ ಗಾಳಿ ಅದೇ ಬಿಸಿಲನ್ನು ಉಂಡುಬರಡು ಭೂಮಿಯಲ್ಲಿ ತಂಪೆರೆದು ಅತ್ಮಾಭಿಮಾನವ ಸೂಸುತ್ತಿದೆಪರಿಸರದ ಹಂಗು ತೊರೆದು ಸುತ್ತಲಿದ್ದರೇನಂತೆ ಸೀಮೆಜಾಲಿ ಮುಳ್ಳು ಕಳ್ಳಿ ತಾನು ಮಧುಫಲವನ್ನೇ ನೀಡುವೆನೆಂದುಭೀಷ್ಮಪ್ರತಿಜ್ಞೆ ಮಾಡಿದೆಮುಳ್ಳಿನ ನಡುವೆ ಸುಳಿವ ಹೂಗಳಿಗೆ ಅಲ್ಲಿಂದಲೇ ಹರಕೆಯ ಕೊಟ್ಟಿದೆ ಜಾಲಿಯ ಮರದಾಗಗುಬ್ಬಿ ಗೂಡು ಕಟ್ಟಲಿಕಟ್ಟಿದ ಗೂಡು ನೂರಾಗಿಹಕ್ಕಿಗಳ ಬಾಳು ಹಸನಾಗಲಿ ಹಸನಾದ ಬದುಕು ಹೊನ್ನಾಗಿ ಸುಡು ಬಿಸಿಲ ಈ ನಾಡು ತಂಪಾಗಲಿ ತೇಜಾವತಿ .ಎಚ್ .ಡಿ. ಕ

ತೇಜಾವತಿ .ಎಚ್ .ಡಿ. ಅವರ ಕವಿತೆ “ಸೀಮೆ ಜಾಲಿ” Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ “ನೀಲಿ ನೀಲಿ ಆಕಾಶ”

ಕಾವ್ಯಸಂಗಾತಿ ಮನ್ಸೂರ್ ಮುಲ್ಕಿ “ನೀಲಿ ನೀಲಿ ಆಕಾಶ” ನೀಲಿ ನೀಲಿ ಆಕಾಶ ಚುಕ್ಕಿಗಳಿಲ್ಲದೆ ಹೊಳೆಯುವುದೇಸೂರ್ಯನು ಕೊಡದಿರೆ ಆ ಶಾಖ ಚಂದಿರ ಸುಮ್ಮನೆ ಹೊಳೆಯುವನೇ ಹೂವುಗಳಿರದ ತೋಟಗಳು ಪರಿಮಳ ಬೀರಲು ಸಾಧ್ಯವೇಜೇನುಗಳಿರುವ ಗೂಡಿನಲಿ ಸಿಹಿಗಳು ಸಿಗದೇ ಇರುವುದೇ ಪ್ರೀತಿಯೇ ಇರದ ಹೃದಯದಲಿ ನಗುವನ್ನು ಕಾಣಲು ಸಾಧ್ಯವೇನಂಬಿಕೆ ಇಲ್ಲದ ಬದುಕಿನಲಿ ನೆಮ್ಮದಿ ಹುಡುಕಲು ಸಾಧ್ಯವೇ ವಿಶ್ವಾಸದ ನಡೆಯಲಿ ಬೆರೆತಾಗ ಜೀವನ ಸಾರ್ಥಕ ಆಗದೇಸೃಷ್ಟಿಗಳೆಲ್ಲ ಹೇಳುವುದು ಶಾಶ್ವತವಾದ ಸತ್ಯವೇ ನದಿಯು ಸಾಗರ ಸೇರದೆ ಭೂಮಿಯ ಒಡಲಲ್ಲಿ ನಿಲ್ಲುವುದೇಗಾಳಿಯು ಸನಿಹಕ್ಕೆ ಬರದಿರಲು ಉರಿಯುವ ದೀಪವು ಕೂಡ ಶಾಶ್ವತವೇ ಪ್ರೀತಿ ಇರದ ಮನುಜನಲಿ ಬದುಕಿನ ಅರ್ಥವು ತಿಳಿಯುವುದೇನ್ಯಾಯದ ಬದುಕೇ ಜಗದ ನಿಯಮ ಎಂದು ಮನುಜನು ಅರಿಯುವನೇ ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ “ನೀಲಿ ನೀಲಿ ಆಕಾಶ” Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನೆನಪಿನ ಸಾಲು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನೆನಪಿನ ಸಾಲು” ತಿರುಗಿ ಬಾರದ  ಪುಟಗಳು,ನೆನಪಿನ ಬಂಡಿಯಲಿ ಮರೆ ಕ್ಷಣಗಳು,ಚಿನ್ನದ ರಥದಲ್ಲಿ ಓಡಿದ  ಬಾಲ್ಯ,ಇಂದಿನ ನೆನಪಲಿ ಅರಳಿದ ಕಾವ್ಯ. ಕೆಸರಲಿ ಹೊರಳಾಡಿದ  ದಿನಗಳು,ಹಸಿರಲಿ ಓಡಿದ  ಹೆಜ್ಜೆಗಳು,ಅಮ್ಮನ ಮಡಿಲ ಸವಿ ನಿದ್ದೆಯ ಸುಖ, ಇಂದು ಬರಿ ನೆನಪಿನ ಮುಖ. ಗೆಳೆಯರ ಜೊತೆಗೂಡಿ ನಕ್ಕ  ದಿನಗಳು,ಕಾಗದದ ದೋಣಿ ತೇಲಿದ ದಿನಗಳು,ಚಿಂತೆಯಿಲ್ಲದ ನಿರಾತಂಕದ ನಗೆ,ಮರಳಿ ಬಾರದು  ಸಂಭ್ರಮ ಜಗತ್ತಿನೆಡೆಗೆ. ಕಾಲ ಚಕ್ರ ಉರುಳುತ ಸಾಗಿದೆ,ವರ್ತಮಾನದ ಬದುಕು ಯಾಂತ್ರಿಕ,ಹಳೆಯ ದಿನಗಳ ನೆನೆದ ಮನಕೆ, ಮಧುರ ಮೌನ ಆವರಿಸಿದೆ ತನಗೆ. ಹಿಂತಿರುಗಿ ನೋಡಿದೆ  ನೆನಪಿನ ಸಾಲು,ಕಳೆದು ಹೋದ  ದಿನಗಳು ಜೀವನದ ಹಾಲು.ಬಾಲ್ಯ ಯೌವನ ಮುಪ್ಪು  ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನೆನಪಿನ ಸಾಲು” Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ “ಪ್ರೀತಿ ಕಳೆದುಹೋಗಿದೆ…”

ಕಾವ್ಯ ಸಂಗಾತಿ ಸವಿತಾ ದೇಶಮುಖ “ಪ್ರೀತಿ ಕಳೆದುಹೋಗಿದೆ…” ಮನೆ ಮೂಲೆ ಮೂಲೆಯಲಿ ಹುಡಕಿದೆನಿನ್ನ ಪುಟ್ಟ ಹೆಜ್ಜೆಯ ಸದ್ದು ಕೇಳದೆಆತುರದಿ ಓಡಿಬರುವ ನಿನ್ನ ನೋಟದ,ನೆನಪಾಗಿ ಹೃದಯ ತುಂಬಿ ಕಾಡುತ್ತಿದೆ.!!೧!! ತಿಂಡಿ ಬಟ್ಟಲೂ ಹಾಗೆಯೇ ಉಳಿದಿದೆ,ಕಾಯುತ ನಿನ್ನ ದಾರಿ ನೋಡುತ್ತಿದೆ.ಎಲ್ಲಿ ಹೋದೆ ಕಣ್ಮರೆಯಾಗಿ ಹೊರಟೆನಿನ್ನಿಲ್ಲದೆ ಮನವು ಖಾಲಿಯಾಗಿದೆ.!!೨!! ಮಡಿಲ ಮೇಲೆ ಮಲಗಿದ ಕ್ಷಣಗಳು,ಮನದಾಳದಿ ಜೀವಂತವಾದ ದಿನಗಳುಮುದ್ದಿನ ಮ್ಯಾವ್ ಮ್ಯಾವ್ ಕೇಳಿದ ಕ್ಷಣಕಣ್ಣಂಚಿನಲಿ ಕಂಡ ನಿನ್ನ ತುಂಟಾಟಗಳು!!೩!! ಕರೆಗೆ ಕಿವಿಗೊಡದೆ ಗಾಳಿಗೆ ತೂರಿದ ಓಟಬೇಡವೆಂದರು ಮತ್ತೆ ನನ್ನ ಮನೆಗೆ ಬಂದ ಆಟನಿನ್ನ ಪುಟ್ಟ ಪಾದಗಳ ಗುರುತು ಕಂಡರೆ,ನಲಿ ನಲಿದಾಡಿದ ದಿನಗಳ ನೆನಪಿನ ಕಾಟ!!೪!! ದುಃಖದ ಮೋಡಗಳ ದೂರವಾಗದದುಅದೇತ್ತೋ ದೂರ ಮರೆಯಾಗಿ ಹೋದೆನೀ ನೇಟ್ಟಿದ ಪ್ರೀತಿ ಕಳೆದು ಹೋಗದು,ನೆನಪುಗಳ ಬೆಳಕು ಎಂದಿಗೂ ಆರದು. !!೫!! ಹೃದಯ ನಿನ್ನನು ದೂರ ತಿಳ್ಳಿದರೂ ನೀಕಲಿಸಿದ ಪ್ರೀತಿ ಹಿಡಿಸಿದೆ ಮನಸ್ಸಿಗೆ,ಆ ನಿನ್ನ ಮುದ್ದು ಕಣ್ಣುಗಳು, ನಿಷ್ಕಲ್ಮಶಆ ಪುಟ್ಟ ಮುಖ, ನನ್ನ ದಿನದ ನಗು!!೬!! ಆ ಚೂಪಾದ ಕಿವಿಗಳು ಹೆಜ್ಜೆಯ ಸದ್ದಿಗೆಎಚ್ಚರವಾಗಿ ನಿಲುವ ನಿನ್ನ ಮೈಮಾಟದಸೊಬಗು, ಸವಿಯಲು ಹಬ್ಬವಾಗಿತ್ತು ನನಗೆನೀ ಬಂದರೆ ಮನೆ ತುಂಬಾ ಜೀವ ತುಂಬಿತ್ತ !!೭!! ನೀ ಹೋದರೆ ಮೌನವೇ ಉಳಿಯುತ್ತಿತ್ತು.ಮತ್ತೆ ಮತ್ತೆ ಬಂದು ಪ್ರೀತಿ ಹರಿಸಿದ ಬೆಕ್ಕುನೋಡದೆ ಮನದ ಬಾಗಿಲು ಮುಚ್ಚಿದೆ.ಆದರೆ ನೀ ಮಾತ್ರ ಹಠಮಾರಿ ಮಗು, ಮತ್ತೆ ಮತ್ತೆ ಬಂದು ಹೃದಯ ತಟ್ಟಿದ್ದೆ.ಆ ನಿನ್ನ ಮುದ್ದು ಮುದ್ದಾದ ಕಣ್ಣುಗಳು…ಎರಡು ಪುಟ್ಟ ನಕ್ಷತ್ರಗಳು ಹೊಳಪುಒಮ್ಮೆ ನೋಡಿದರೆ ಸಾಕೆನಸದು ….. ಕಲ್ಲಿನ ಮನಕರಗುತ್ತು ಆ ಪುಟ್ಟ ಮುಖ,ಹಾಲಿನ ನೊರೆ ಮೃದು, ಚೂಪಾದ ಕಿವಿಗಳು,ಮಾತು ಕೇಳುತಿರೆ ನೆಟ್ಟಗೇ ನಿಲುವ ಆಟಮೈ ತುಂಬಿದ್ದ ಬಣ್ಣವೋ ದೇವರು ಬಿಡಿಸಿದ ಚಿತ್ರವೊಂದು! ಕಂದು ಮೋಡದ ನಡುವೆಕಪ್ಪು ಮಳೆಯ ಗೆರೆಗಳಂತೆ, ನಿನ್ನ ಮೈಮಾಟಕಣ್ಣಿಗೆ ಹಬ್ಬವಾಗಿತ್ತು.ಪುಟ್ಟ ಹೆಜ್ಜೆಗಳ ಸದ್ದು,ಮೃದುವಾದ ಬಾಲದ ನಾಟ್ಯ ಹೇಳ್ತಿರೋದು, ಸುತ್ತ ಸುತ್ತುವ ನಿನ್ನ ಪ್ರೀತಿ, ಮಾತಿಲ್ಲದಮಮತೆಯ ಭಾಷೆಯಾಗಿತ್ತು.ನಾನು ದೂರಸರಿದರು,ಮತ್ತೇ ಮತ್ತೇ ಬಂದೆ… ಅಂದುಅರಿಯಲಿಲ್ಲ ಅದು ಕೊನೆಯ ಬೆಟ್ಟೆಂದು.. ಈಗ ಮನೆ ತುಂಬಾ ನಿಶ್ಯಬ್ದ, ನಿನು ಪ್ರತಿಮೂಲೆಯಲ್ಲೂ ಜೀವಂತವಾಗಿರುವೆ ಹಾಗೆಮುದ್ದಾದ ಚೇಷ್ಟೆಗಳೆಲ್ಲ ಕಂಗಳ‌ ನೀರುಅದೆಂದು ನಿನ್ನ ಮೋಹದಿ ಸಿಲುಕಿದೆ…. ಎಲ್ಲೋ ಒಂದು ಕಡೆ ನೀ ಇದ್ದರೆ, ಒಮ್ಮೆಮಾತ್ರ ಬಂದು ನೋಡು ಜೀವಾ.ಕಣ್ಣಗಳ ನೋಟಕ್ಕೆ ಕಾಯುತ್ತಿವೆ,ಮನದ ಮನೆಯ ಬಾಗಿಲು ತೆರೆದು ಮತ್ತೇ ಬರುವಿಗಾಗಿ ಕಾಯುತ್ತಿರುವೆ ಸವಿತಾ ದೇಶಮುಖ

ಸವಿತಾ ದೇಶಮುಖ ಅವರ ಕವಿತೆ “ಪ್ರೀತಿ ಕಳೆದುಹೋಗಿದೆ…” Read Post »

ಕಾವ್ಯಯಾನ, ಗಝಲ್

ಡಾ ರೇಣುಕಾತಾಯಿ ಸಂತಬಾ ರೇಮಾಸಂತರವರ ಗಜಲ್

ಕಾವ್ಯ ಸಂಗಾತಿ ಡಾ ರೇಣುಕಾತಾಯಿ ಸಂತಬಾ  ರೇಮಾಸಂತರವರ ಗಜಲ್ ನೀ ಒಪ್ಪದಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ನೀ ಸುಮ್ಮನಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll ಅಂತರಾತ್ಮ ನಿನ್ನ ಪ್ರೀತಿಗೆ ಶರಣಾಗಿ ಬಿಟ್ಟೇತಿ,ನೀ ಕಾಣದಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll ರಾಧೆಯಾಗಿ ನಿನ್ನ ದನಿ ಪೂಜಿಸುತ್ತೇನಿ ಗೊತ್ತೇನ,ನೀ ನೋಡದಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll ಸದ್ದಿಲ್ಲದ ಮನಸ್ಸಿನ್ಯಾಗ ಮೆತ್ತಗ ಬಂದಬಿಟ್ಟಿ,ನೀ ಒಲಿದಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll ತಾಯಿಗೆ ಗೊತ್ತಿಲ್ಲದ ನಾ ಹೃದಯದೊಳಗಿಟ್ಟಿನಿ,ನೀ ದೂರವಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll ಡಾ ರೇಣುಕಾತಾಯಿ ಸಂತಬಾ ರೇಮಾಸಂತ    

ಡಾ ರೇಣುಕಾತಾಯಿ ಸಂತಬಾ ರೇಮಾಸಂತರವರ ಗಜಲ್ Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಅದೆಷ್ಟು ಮುದ್ದಿಸಿ ಹಿಡಿದರೂ,ಮೂಷ್ಟಿಯಲ್ಲಿನ ಮರಳು ಸೋರಿದಾಗ ನೀ ನೆನಪಾದೆರಾತ್ರಿಯಿಡೀ ನಿಟ್ಟಿಸುತ ಕೂತರೂ,ಬೆಳಕಾದಂತೆ ಚಂದ್ರ ಮರೆಯಾದಾಗ ನೀ ನೆನಪಾದೆ ಹೊರೆಯೆನಿಸಿದರೂ ಎಂದೂ ಹೊರಗೆಲ್ಲೂ ಹೇಳಿಕೊಳ್ಳಲಿಲ್ಲಹಗಲನು ಹೊಂಗನಸಿನಂತೆ ಬದುಕಿದರೂ ,ಕತ್ತಲಾದಂತೆ ರವಿಯು  ಕರಗಿದಾಗ ನೀ ನೆನಪಾದೆ ಪ್ರತಿದಿನವೂ ಮಮತೆಯಿಂದ, ನಗು ನಗುತಾ ನೋಡಿಕೊಂಡೆಅಡಿಗಡಿಗೆ ನೀರುಣಿಸಿ ಪೋಷಿಸಿದರೂ, ಗಿಡವು ಹೂ ಬಿಡದಾದಾಗ ನೀ ನೆನಪಾದೆ ನನ್ನದೆನ್ನುವ ಮೋಹದಲಿ ಪ್ರತಿ ಹೊಡೆತವನೂ ಅಪ್ಪಿಕೊಳ್ಳುತಾ ಹೋದೆಸುನಾಮಿಯಿಂದ ಭೋರ್ಗರೆದು ಸಾಗರ ಅತ್ತರೂ, ಆ ಬಂಡೆ ಅನುನಯಿಸದಾಗ ನೀ ನೆನಪಾದೆ ತನ್ನ ಶಾಂತ ಕಂಗಳನೇ ತಂಗುದಾಣದಂತೆ  ನೀಡಿದಳು ವಾಣಿ,ಬೇಡೆಂದರೂ ಕೃತಘ್ನನಂತೆ ಅನ್ಯರೆದುರು ಕಂಬನಿ ಸುರಿದಾಗ ನೀ ನೆನಪಾದೆ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ರೇಖಾ ಉದಯ ಗಜಲ್ ಹರಿಯುವ ನದಿಗೆ ತಡೆಗೋಡೆ ಕಟ್ಟುವವರು ಯಾರು?ಕಷ್ಟಗಳಿಗೆ ಹೆದರಿದರೆ ಗುರಿ ಮುಟ್ಟುವವರು ಯಾರು? ಬಂದದ್ದು ಬರಲಿ ಶಿವನ ದಯೆಯೊಂದಿರಲಿ ಗೆಳೆಯಬೆನ್ನಹಿಂದೆ ನಡೆಸುವ ಹುನ್ನಾರಗಳ ಮೆಟ್ಟುವವರು ಯಾರು? ಮಾನವೀಯತೆ ಬಂಧ ಕಳಚಿ ಬಿದ್ದದ್ದು ಕಂಡಿಲ್ಲವೇ?ಹೆದರಿ ಮೆಟ್ಟಿದರೆ ಧೈರ್ಯದ ಬಾಗಿಲು ತಟ್ಟುವವರು ಯಾರು? ಮಾತಿನ ಗಾಳದಲ್ಲಿ ಮೀನು ಹಿಡಿಯುವವರ ನೆಚ್ಚದಿರು.ಸ್ವಾರ್ಥದ ಮಹಲಿನಲ್ಲಿ ಪ್ರೇಮದೊಲವನ್ನು ಒಟ್ಟುವವರು ಯಾರು? ರೇಖೂ ಹೆದ್ದಾರಿಯ ನಡವಲ್ಲೂ ಅಪಘಾತಗಳು ಸಹಜವಲ್ಲವೇ?ನೀನು ಹಿಂಜರಿದರೆ ಕೆಟ್ಟ ಕ್ರಿಮಿಗಳನ್ನು ಅಟ್ಟುವವರು ಯಾರು? ರೇಖಾಂಕಿ 

ರೇಖಾ ಉದಯ ಅವರ ಗಜಲ್ Read Post »

ಕಾವ್ಯಯಾನ

ಶಿವಕುಮಾರ ಕೋಡಿಹಾಳ ಅವರ ಕವಿತೆ “ಮೃಗಶಿರಾ ಮಳೆ”

ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ “ಮೃಗಶಿರಾ ಮಳೆ” ಬಿಸಿಲ ಬೇಗೆಗೆ ಬಸವಳಿದಭೂರಮೆಯ ತಂಪುಗೊಳಿಸಲುಇಳೆಗೆ ಸುರಿಯಿತಿಂದುಮೃಗಶಿರಾ ಮಳೆಧರಣಿದೇವಿಯತಾಪ ನೀಗಿಸಲು ಕಣ್ಣೋಟ ಹರಿಸಿದೆಡೆಹಸಿರಿನ ವೈಭವಮುನ್ನೋಟ ವಿಹರಿಸಿದೊಡೆಆಹ್ಲಾದದ ಸೂರಭನಿಸರ್ಗ ಚೆಲುವಿನಅಮೃತಪಾವನಈ ಮೃಗಶಿರಾ ಮಳೆ ಕಾದ ನೆಲವ ತಂಪಾಗಿಸಿದಆ ವರುಣದೇವಹಸಿದೊಡಲ ಬರ ನೀಗಿಸಿದಈ ಅನ್ನದೇವಭಾವ ಸಮಾಧಿಯಸಿಂಧೂರಈ ಮೃಗಶಿರಾ ಮಳೆ ಕಪ್ಪೆಗಳ ವಟವಟ ನಿನಾದಚಿಟ್ಟೆಗಳ ಚಿಲಿಪಿಲಿ ನಾದಗುಂಯ್ ಗುಡುವ ಸೊಳ್ಳೆಗಳಮಧುರಾಯನ ಮೈಳೈಸಿತೇಳ್ಈ ಮಳೆಯ ಆರ್ಭಟದಿಂ ಮಳೆಯಿಂದ ಇಳೆಕಾಣುತಿದೆ ಬೆಳೆಮನದಿಂದ ಕಲ್ಮಶವ ಕಳೆಇದೇ ಬಾಳಿಗೆ ಚಿತ್ಕಳೆಬೆಳಗುತಿದೆ ಬಾಳುಸುಖದ ಕುರುಹು ಕೇಳು ಶಿವಕುಮಾರ ಕೋಡಿಹಾಳ      

ಶಿವಕುಮಾರ ಕೋಡಿಹಾಳ ಅವರ ಕವಿತೆ “ಮೃಗಶಿರಾ ಮಳೆ” Read Post »

ಕಾವ್ಯಯಾನ

ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಕೊಳ್ಳುವವರಿಲ್ಲ…….”

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಕೊಳ್ಳುವವರಿಲ್ಲ…….” ಜೀವನ ನಾವು ಅಂದುಕೊಂಡತಲ್ಲಅಂದುಕೊಂಡಿದ್ದೆಲ್ಲ ಜೀವನವಲ್ಲಮೇಲೊಬ್ಬನ ಹಣೆಬರಹ ತಿಳಿಯಲ್ಲಬದುಕಿನ ಏರಿಳಿತ ಎಂದೂ ಅರಿವಿಲ್ಲ ಜಗವೇ ಒಂದು ನಾಟಕ ರಂಗಬಾಳಲ್ಲಿ ಇರಲಿ ಒಳ್ಳೆಯವರ ಸಂಗಅರಿಯದೆ ಬಾಳಿದರೆ ಬದುಕು ಭಂಗತಿಳಿಯದಿದ್ದರೆ ಇಂಗು ತಿಂದ ಮಂಗ ಬದುಕಿನ ಸಂತೆಯಲಿ ಬಿಕರಿಗಿದೆ ಕನಸು ಮತ್ತು ಚಿಂತೆಕೊಳ್ಳುವವರಿಲ್ಲ ನೋವುಗಳ ಸಾಲಿನ ಕಂತೆತುಂಬಿಹುದು ಬಾಳಲಿ ಸುಖ ದುಃಖದ ಬೊಂತೆಎಲ್ಲರು ನನ್ನವರೆಂಬ ಸುಳ್ಳು ಭ್ರಮೆಯಂತೆ ಜಗದಿ  ಅರಿಯಬೇಕು ಬಂದ ಕಾರಣಮಾಡಬೇಕು ಏಳಿಗೆಗೆ ಶ್ರಮಿಸಿದವರ ಸ್ಮರಣಸವಿಯುತ್ತಿರು ಸುಂದರ ನೆನಪುಗಳ ತೋರಣಬರೆದಿಹನು ಎಲ್ಲರಿಗೂ ಒಂದು ದಿನ ಮರಣ.  ಲತಾ ಎ ಆರ್ ಬಾಳೆಹೊನ್ನೂರು

ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಕೊಳ್ಳುವವರಿಲ್ಲ…….” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ನನ್ನೊಳಗೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ನನ್ನೊಳಗೆ“ ನನ್ನೊಳಗೆ ಬೆಳಕೊಂದುಮೌನವಾಗಿ ಹೊಳೆಯಿತು,ಮೋಡದಾಚೆ ಹುಡುಕಿದ ಕಣ್ಣುಮನದೊಳಗೆ ಮರಳಿತು. ನದಿಯಂತೆ ದಿನ ಹರಿದು,ಗಾಳಿಯಂತೆ ಸುಖ ಸರಿದು;ಜಿಂಕೆಯ ಭಯ, ಸಿಂಹದ ಉರಿಒಂದೇ ಎದೆಯಲಿ ಬೆರೆತು. ಹುಟ್ಟಿನ ಕಂಬನಿ ಹನಿಯಲಿ,ತಾಯಿ ನಗುವಿನ ಹೊನಲಲಿ;ದುಃಖದ ಕಾವು, ಸುಖದ ತಂಪುಒಂದೇ ಮನದ ನೆರಳಲಿ. ಕಲ್ಲಿನ ಗುಡಿ ದಾಟಿದರೂಕಾಣದ ಸತ್ಯ ಉಳಿಯಿತು,ಕಣ್ಣು ಮುಚ್ಚಿದ ಮೌನದಲಿಆತ್ಮದೀಪ ಹೊತ್ತಿತು. ಬಂಧದ ಬೇರು ಮನದಲಿ,ಮುಕ್ತಿಯ ಹೂವು ಮನದಲಿ;ಮನ ಹಸಿರಾದ ಕ್ಷಣದಲಿಬದುಕು ಹೂವಾಯಿತು. ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ನನ್ನೊಳಗೆ” Read Post »

You cannot copy content of this page

Scroll to Top