ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿರಂಜನ ನಾಯಕ ಅವರ ಕವಿತೆ “ನಗರ ಜಾಗರಣೆ”

ಕಾವ್ಯ ಸಂಗಾತಿ ನಿರಂಜನ ನಾಯಕ “ನಗರ ಜಾಗರಣೆ” ನಗರ ಬೆಳೆಯುತಲಿದೆಉಕ್ಕಿ ಹರಿದ ಮೋರಿಯಂತೆ,ಸಿಕ್ಕ ಸಂದುಗಳಲಿ ಜಾರುತಾದುರ್ನಾತದೊಂದಿಗೆಜಾಗರಣೆ ಖಾತ್ರಿಯಾಗಿ! ಮುಚ್ಚದ ಕಣ್ಣುಗಳೆದುರುಮೆಚ್ಚುಗೆಯಾಗದ ಮುಖಗಳು;ಮನದ ಖಗ-ಮಿಗಗಳುಮಾಯಾಮೃಗಗಳಂತೆಮರೆಯಾಗುತಿವೆ. ಕಾಲು ಚಾಚಿಬಿದ್ದಿಹ ರಸ್ತೆಗಳಿಗೆತಡೆಒಡ್ಡುವ ಗೋಡೆಗಳು,ಬಣ್ಣ ಮಾಸುತ್ತಾಅಪರಿಚಿತವಾಗುತಿವೆ. ಇಕ್ಕೆಲದ ಅಂಗಡಿಗಳಎಗ್ಗಿಲ್ಲದ ವ್ಯಾಪಾರ,ಕುರುಡನ ತಟ್ಟೆಯಮೂರು ಕಾಸುಗಳನುಅಣಕಿಸುತಿದೆ! ನಿರಂಜನ ನಾಯಕ

ನಿರಂಜನ ನಾಯಕ ಅವರ ಕವಿತೆ “ನಗರ ಜಾಗರಣೆ” Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಬೆಳಗಾವಿ ಗಜಲ್ ಅಂದು ಹಸಿವಿನಿಂದ ಪರದಾಡಿದ ಪರದೇಶಿ ದಿನಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆಅಂತರಾಳದಲ್ಲಿಯ ಹಸಿ ಗಾಯಗಳ ರುಜು ಋಣಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಕರೆದು ಕೂಲಿಗೆ ಕಾಸು ಚೆಲ್ಲಿ ಸುಮ್ಮನೆ ಮನೆಗೆ ಕಳುಹಿಸಿದ್ದರೂಮರೆಯಬಹುದಿತ್ತು ನಾವುಕಲ್ಲಿನೇಟು ನೀಡಿ ,ಮುಳ್ಳುಗಳಿಂದ ತಿವಿದ ಜೀತ ಕ್ಷಣಗಳಿಂದು  ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ನಾಳೆಗಾಗಿ ಬರಿಗಾಲಲಿ ನಡೆದು ನೆತ್ತರು ಸುರಿಸಿ ಕಳೆದು ಹೋಗುತಿವೆನಿತ್ಯ ಕಂಡ ಕನಸುಗಳುಬೆತ್ತಲೆ ಪಾದಗಳು ಸೀಳಿ ರಕ್ತ ಒಸರಿ ಬಾಯ್ಬಿಟ್ಟ ಆರ್ತನಾದಗಳಿಂದು   ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಮಹಡಿ ಮನೆಗಳ ಮುಂಬಾಗಿಲಿಗೆ ಬಡವನನ್ನು ಸುಲಿದ ಚರ್ಮದತೋರಣ ಒಪ್ಪ ಓರಣವಾಗಿದೆಕನಸಿಗೆ ತೆರಿಗೆ ಹಾಕಿ,ಸಾವಿಗೂ ಸುಂಕ ಕಟ್ಟುವ ಹುನ್ನಾರುಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ನಿದ್ದೆ ಮಾಡುವವನು, ಕದ್ದು ಕರೆದರೂ ತುಸು ಎಚ್ಚರಗೊಳ್ಳುವನು ಅನಾಯಾಸವಾಗಿಆಳುವವರ ಮುಸುಕಿನಲ್ಲಿ ಸೋಗುಲಾಡಿತನದ ನಡೆಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಎಷ್ಟಂತ ತೇಪೆ ಹಾಕಿ, ಚಿತ್ತಾರ ಮೂಡಿಸಿ ಮನವ ಹಗುರಾಗಿಸೋಣ ಮರ್ಯಾದೆಗೆ ಅಂಜಿಅಪವಾದ, ಅವಮಾನಗಳಿಂದ ನುಜ್ಜುಗುಜ್ಜಾದ ಆಕ್ರಂದನಗಳಿಂದು ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಯಾರನ್ನೋ ದ್ವೇಷಿಸಿ, ದೂಷಿಸಿ, ಹಿಡಿಶಾಪ ಹಾಕಿ, ಕಣ್ಣೀರು ಹರಿಸಿದರೆ ಏನು ಪ್ರಯೋಜನ ಜ್ಯೋತಿಖಂಡ, ಮಾಂಸ, ಬೆವರು, ಬಿಸಿರಕ್ತಗಳ ಅಸಂಖ್ಯ ಬಲಿದಾನಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ

ತಾತಪ್ಪ ಕೆ ಉತ್ತಂಗಿ ಅವರಕವಿತೆ “ಪ್ರೇಮದಮೊಹರು”

ಕಾವ್ಯಸಂಗಾತಿ ತಾತಪ್ಪ ಕೆ ಉತ್ತಂಗಿ “ಪ್ರೇಮದಮೊಹರು” ಸದಾ ಸಣ್ಣೂರಗಲ್ಲಿಯಾಚಿನಹಸಿರೂರ ಪಥದಲಿಅದೇ ಹೊಳಪಿನ ಅವಳು,ಕಣ್ಣೋಟಕ್ಕೆಸಿಕ್ಕ ಅಪರೂಪದಕೆಂಪು ಸೌಂದರ್ಯದ  ಸುಂದರಿ,ಜಗಕ್ಕೆ ನಾಚಿದ ನಿತ್ಯಾಂಬರಿಜಗವನ್ನೇ ನಾಚಿಸಿದ ಕೆಂಪುರಂಗಿನಪ್ರೇಮಸುಂದರಿ. ಅಣಕಿಸುವ,ತವಕಿಸುವ,ಕರುಣಿಸುವ, ಹಿಗ್ಗಿಸುವಕುಗ್ಗಿಸುವ,ಪ್ರೇಮಿಸುವ   ಕುಕ್ಕುಕಣ್ಣಿನ  ವಾರೇನೋಟದ ಒಲವಿಗೆಸಿಕ್ಕ ಅವನುಸದಾ ಪ್ರೇಮಬಂಧಿ..ಸವಿಮಾತಿನ ಸಖನೇಸಂಬಂಧ ಬೆಸೆಯುವ ಭಾವಸಂಬಂಧಿ..ಅವಳೊರಗಿನ ಅವಳಿಗೆ ಪ್ರೀತಿಯ ಕೊಟ್ಟರೆಪ್ರೇಮದ ಮಳೆ ಸುರಿಸುವಋತುಬಂಧಿ..ಅವಳು.. ಮಳೆ ಮೋಡಗಳುಕಂಗೆಟ್ಟು ದಿಕ್ಕೆಟ್ಟು  ಓಡಾಡುವಾಗ,ಗುಡುಗು, ಸಿಡಿಲ್ ಆರ್ಭಟಿಸಿ, ಬೆಳಕಿನ ಮಿಂಚಿನಸಮಯದಲ್ಲಿ, ಕೋಲ್ಮಿಂಚಿನಕೆಂಡಕುಂಡದ ಗುಲಾಬಿಯ ಗುಂಗಿನ ವಿರಾಗಿಣಿಯಾಗಿಸ್ತಬ್ಧ ವಿಹಾರದ ನಡುನಡುವೆ, ದಿವ್ಯವೇದನೆಯ,ನವ್ಯ ನಿವೇದನೆಯೊಂದಿಗೆಕೈ ಬೀಸಿ, ಕೈ ಚಾಚಿಮಧುರ ವರ್ಣವ ರಾಚಿಕರೆಯೋಲೆ ಕಳಿಸುವಆದರದ ಅಂಬರಿಯಿವಳು.ಕೆಂಪುಮೊಗದ ಗಿಳಿನಾಸಿಕದಗರಿಗರಿ ನಗೆಯ,ಫಳಫಳ ಕಣ್ಬೆಳಕಿನಬೀಸುವ ಗಾಳಿಗೆಜೋ ಜೋ ಲಾಲಿಯಾಡುವ ಶುಭ್ರಜ್ಯೋತ್ಸ್ನೆಯಿವಳು.ಅಮರ ಮಧುರದಪ್ರೇಮಗೀತೆಯಾಡುವಸ್ವಪ್ನ ಸುಂದರಿ ಇವಳು.ಸಂಭ್ರಮದ ಎಲ್ಲೆ ಮೀರಿದಾಗಸಂತಸದ ಸರಸತೆಯ  ಸೋಬಾನೆಯಾಡುವವೈಶಾಖದ ಪ್ರೇಮದಮೊಹರಿನಇವಳೇ ಸುಗ್ಗಿಯ ಸಗ್ಗದಪ್ರೇಮಾಂಬರಿಯಾದಕೆಂಪು ಸೊಂಪಿನಮುಂಗಾರಿಗೆ ಮುತ್ತಿನಮುದ್ರೆಯನ್ನೊತ್ತಿದ *ಗುಲ್ ಮೊಹರ್*  ಇವಳು. ತಾತಪ್ಪ. ಕೆ.ಉತ್ತಂಗಿ

ತಾತಪ್ಪ ಕೆ ಉತ್ತಂಗಿ ಅವರಕವಿತೆ “ಪ್ರೇಮದಮೊಹರು” Read Post »

ಕಾವ್ಯಯಾನ

ಭಾಗ್ಯಶ್ರೀ ಕೋಟಿ ಜಮಖಂಡಿ‌ “ಭರವಸೆಯ ಬೆಳಕಿರಲಿ”

ಕಾವ್ಯ ಸಂಗಾತಿ ಭಾಗ್ಯಶ್ರೀ ಕೋಟಿ ಜಮಖಂಡಿ‌ “ಭರವಸೆಯ ಬೆಳಕಿರಲಿ” ಬಾನ ಅಂಗಳದಿ ಮೋಡಗಳ ನರ್ತನ,ಧರೆಗೆ ಇಳಿಯಲು ಸಜ್ಜಾದ ವರುಣಒಣಗಿದ ಭೂಮಿಗೆ ಜೀವ ತುಂಬುವ ಕ್ಷಣ,ಬರಡಾದ ಬದುಕಿಗೆ ತಂದ ಹೊಸ ಕಿರಣ. ಹನಿ ಹನಿಯು ಮುತ್ತಾಗಿ ಮಣ್ಣ ಸೇರಲಿ,ಸಸ್ಯ ಸಂಕುಲವು ಹಸಿರು ಸೀರೆಯ ಉಡಲಿ.ರೈತನ ಕಣ್ಣಲಿ ಕನಸಿನ ಬೆಳೆ ಅರಳಲಿ, ಹಸಿವು ನೀಗಿ ಸಮೃದ್ಧಿ ಬೆಳಗಲಿ. ಗುಡುಗು ಸಿಡಿಲ ಅಬ್ಬರವಲ್ಲದ ಮಳೆ,ನೊಂದ ಜೀವಗಳ ಕಣ್ಣೀರು ಒರೆಸುವ ಮಳೆ.ಸೋತ ಮನಗಳಿಗೆ ಸಾಂತ್ವನದ ಧಾರೆ,ಜೀವಜಗತ್ತಿಗೆ ಹೊಸ ಚೈತನ್ಯದ ಸಾರೇ. ಸುರಿಸು ಮಳೆಯೇ ಕರುಣೆಯ ಹನಿ,ತೊಳೆಯು ಜಗದಕಲ್ಮಶದ ಮನೆ.ಪ್ರೀತಿ ವಿಶ್ವಾಸದ ಹೊಳೆ ಹರಿಯಲಿ ಎಲ್ಲೆಡೆ,ಭರವಸೆಯ ಬೆಳಕಿರಲಿ ಸಾಗುವ  ಹೆಜ್ಜೆಯಲಿ. ಭಾಗ್ಯಶ್ರೀ ಕೋಟಿ ಜಮಖಂಡಿ

ಭಾಗ್ಯಶ್ರೀ ಕೋಟಿ ಜಮಖಂಡಿ‌ “ಭರವಸೆಯ ಬೆಳಕಿರಲಿ” Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಕದಿಯಲಾರದ ಕನಸುಗಳು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಕದಿಯಲಾರದ ಕನಸುಗಳು” ಕಣ್ಣ ರೆಪ್ಪೆಯ ಮರೆಯಲ್ಲಿ,ಬಚ್ಚಿಟ್ಟ ಆಸೆಗಳ ಮೆರವಣಿಗೆ;ಜಗದ ಕಣ್ಣಿಗೆ ಕಾಣದಂತೆ,ಮೌನವಾಗಿಹ ಪಯಣ. ಸೂರ್ಯ ಸುಟ್ಟರೂ ಸರಿಯೇ,ಚಳಿ ಗಾಳಿ ಬೀಸಲಿ ಬಿಡು;ಮನದ ಮೂಲೆಯ ಗೂಡಿನಲ್ಲಿ,ಬೆಚ್ಚಗಿನ ನನ್ನ ಲೋಕವೊಂದು. ಕಾಲನ ಚಕ್ರ ಉರುಳಿದರೂ,ವಿಧಿಯ ಆಟ ಮುಂದುವರಿದರೂ;ಸಾವಿರ ಜನ ಬಂದು ಹೋದರೂ,ಕದಿಯಲಾರದ ಕನಸುಗಳು. ಬೆಳಕಿನ ಕಿರಣ ಮೂಡುವವರೆಗೆ,ಹಾದಿಯ ಗುರಿ ಮುಟ್ಟುವವರೆಗೆ;ನನ್ನ ಅಂತರಾತ್ಮದ ನಂಬಿಕೆ,ಯಾರು ಅಳಿಸಲು ಸಾಧ್ಯ? ಕನಸುಗಳು ಬಿಕರಿಗಲ್ಲಮಾರುಕಟ್ಟೆಯ ಮೂಟೆಯಲ್ಲಹೊತ್ತು ಹೊತ್ತಿಗೆ ಉಣ್ಣುವ ತುತ್ತಲ್ಲಕನಸುಗಳು ನನ್ನ ಭಾವ ಅಸ್ಮಿತೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಕದಿಯಲಾರದ ಕನಸುಗಳು” Read Post »

ಕಾವ್ಯಯಾನ

ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ”

ಕಾವ್ಯ ಸಂಗಾತಿ ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ” ನಿತ್ಯ ನಿರಂತರ ಕಾಯಕಯೋಗಿ ಅಂಬರದ ನೇಸರ ಪೂರ್ವದ ದಾರಿಯಲಿ ಬೆಳ್ಳಿಯ ಬೆಳಕಚಲ್ಲುತಾ ಮೆಲ್ಲನೆ ಮೆಘಗಳಮಧ್ಯ ನುಸುಳುತಾ ಬರುತಿಹಏಳಿರಯ್ಯ ಎನ್ನ ಬಾಂಧವರೆ ಬರಿಬೆಳಕಲ್ಲವಿದು ಸತ್ಯದರ್ಶನಲೋಕಬೆಳಗುವ ನಿತ್ಯನಿಯಾಮಕಜಗದಕರೆಗೆ ಸದ್ದಿಲ್ಲದ ಬರುವವನಿತ್ಯನಿರಂತರ ಕಾಯಕಯೋಗಿಸಮಯದ ಪರಿಪಾಲಕ ಪರಂಜ್ಯೊತಿ… ಬೆಳಕಬೆಳಗಿಗೆ ಜಗವೇತೂಗುವದುಏರುಪೇರಿಲ್ಲದ ರಾಯಭಾರಿ ತೇಜಸೃಷ್ಟಿಗೆ ಜೀವದಾತ ಮನುಕುಲದ ಮನ್ವಂತರನೀತ ಮೈಮರೆಯದವಕ್ಷಣ ಕ್ಷಣ ಅನುಕ್ಷಣ ಆದರನೀಯ ಚರಾಚರ ಜೀವರಾಶೀಗಳ ಜೀವದಣಿವರಿಯದ ಭೂಮ್ಯಾಕಾಶ ಬೆಳಗುವ ಭಾಸ್ಕರ ಬಾನಲೀಲೆತರುಲತೆಗಳ ಹಸಿರ ಸಿಂಚನಭೂಮಾತೆಯ ಮಡಿಲತುಂಬುವ ಚೇತನ… ನಿಸ್ವಾರ್ಥ ಸೇವೆಯ ನಿತ್ಯನೂತನೀತಸ್ವಾರ್ಥಿ ಮನುಜ ಕಲಿಯಬೇಕಿದೆತಮಸೋಮಾ ಜ್ಯೊತಿರ್ಮಯ…ಸತ್ ಚಿಂತನ ಸತ್ ದರ್ಶನ ಅಡಗಿಹುದು ಬೆಳಕೆಂಬ ದೇವಲೀಲೆಯಲಿ….ಸತ್ಯವೇ ದೇವರು ಸತ್ಯವೇ ಬೆಳಕುಹೇ! ಮನುಜಾ ಬೆಳಕ ದಾರಿಯಲಿನಡೆ,ಬೆಳಕಿನಲಿ ಬೆರೆತು ಬೆಳಕಾಗು…. ಜಯಶ್ರೀ ಭ. ಭಂಡಾರಿ.

ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ” Read Post »

ಕಾವ್ಯಯಾನ

ನಾಮದೇವ ಕಾಗದಗಾರ ಹನಿಗವಿತೆಗಳು “ನಂಜಿನ ಉಸಿರು”

ಕಾವ್ಯ ಸಂಗಾತಿ ನಾಮದೇವ ಕಾಗದಗಾರ “ನಂಜಿನ ಉಸಿರು” ಕಣ್ಣು ಬಿಟ್ಟ ಕ್ಷಣಗಳೆಲ್ಲಾಮಂಜಿನ ಹನಿಗಳೆಂದುಕೊಂಡಿದ್ದೆ;ನಂಜಿನ ನೂಲುಗಳಾಗಿ ಗೋಚರಿಸುತ್ತಿವೆ.. *** ಅಸಮಾನೆತೆಯ ನೆತ್ತರುಕುಡಿದ ನೆಲ ಕುದಿಯುತ್ತಿದೆ;ತೂಗುವ ತೊಟ್ಟಿಲು ಮಸಣವಾಗುತ್ತಿದೆ. *** ವೈಷಮ್ಯ ಚಿಗುರೊಡೆದುನೆಲ ಕೆಂಪಾಗಿದೆಈಗ ನಂಜೇರಿ ಕಪ್ಪಾಯಿತು *** ನಮ್ಮೊಳಗೆ ಧರ್ಮದ ಅಮಲು ಏರಿದೆಅಸಮಾನತೆಯ ಕಸದಿಂದಒಡಲು ತುಕ್ಕು ಹಿಡಿದಿದೆ *** ನಯವಂಚಕರ ದುನಿಯಾಬದುಕ ಪಾತ್ರೆಯಲ್ಲಿಜಗದ ಐಕ್ಯತೆ ತಳ ಹತ್ತಿದೆ. *** ಎದೆಗೆ ಎದೆ ನೇಯ್ದ ಮಗ್ಗ ನಂಜಾಗಿದೆ;ಇನ್ನೂ, ಜಾತಿ ಜಾತಿಯದೋಂಬಿ ನಡೆಯದೇ ಇರುತ್ತದೆಯೇ *** ಬಿದ್ದ ಬೀಜವೂಮೊಳಕೆಯೊಡೆಯಲುನೆಲ ಉರಿವ ಕೆಂಡವಾಗಿದೆ *** ಕಿಚ್ಚು ಹಚ್ಚಿಕೊಂಡ ಎದೆಗಣ್ಣಿಗೆಬೆಂಕಿ ಮತ್ತು ದೀಪದ ವ್ಯತ್ಯಾಸ ಗೊತ್ತಾಗುವುದೇ ನಾಮದೇವ ಕಾಗದಗಾರ Recipients

ನಾಮದೇವ ಕಾಗದಗಾರ ಹನಿಗವಿತೆಗಳು “ನಂಜಿನ ಉಸಿರು” Read Post »

ಕಾವ್ಯಯಾನ

ಕವಿತಾ ಶ್ರೀನಿವಾಸ್‌ ನಾಯಕ್‌ ಕವಿತೆ “ಬರಹದ ಗುಂಗಿನಲ್ಲಿ”

ಕಾವ್ಯ ಸಂಗಾತಿ ಕವಿತಾ ಶ್ರೀನಿವಾಸ್‌ ನಾಯಕ್‌ “ಬರಹದ ಗುಂಗಿನಲ್ಲಿ” ​ಬರಹದ ಗುಂಗಿನಲ್ಲಿ…​ದಾರಿ ದೀರ್ಘವಾಗಿತ್ತು, ಮೌನ ಜೊತೆಯಾಗಿತ್ತುಮನದ ಅಂಗಳದಲ್ಲಿ ಕವಿತೆಯೊಂದು ಮೊಳೆಯುತ್ತಿತ್ತು;ಅಂದು ಕೈಲಿ ಲೇಖನಿಯಿತ್ತು, ಕಾಗದದ ಒಡನಾಟವಿತ್ತುಇಂದು ಅಕ್ಷರಗಳ ಗೀಚಲು ಚರವಾಣಿಯ ತಲಾಶೆ ಶುರುವಾಗಿದೆ!​ಲೇಖನಿ ಹೋದ ಜಾಗಕ್ಕೆ ಬೆರಳಚ್ಚು ಬಂದು ಕುಳಿತಿದೆಹಳೆಯ ಕಾಲದ ಆ ಸೊಗಡು ಇಂದು ಡಿಜಿಟಲ್ ಆಗಿದೆ;ಕವನದ ಗುಂಗಿನಲ್ಲಿ ನಾನು ಎಲ್ಲಿದ್ದೆ ಎಂಬ ಅರಿವೇ ಇಲ್ಲಅಂಗಡಿಯವನು ಮಾತಾಡಿಸಿದಾಗಲೇ ವಾಸ್ತವದ ಅರಿವಾಗಿದ್ದು!​ಕವಿತೆ ಇನ್ನು ಮನದ ತುಂಬೆಲ್ಲಾ ಹರಿಯುತ್ತಲೇ ಇತ್ತುದೇಹ ಮಾತ್ರ ನಿಧಾನವಾಗಿ ಮನೆಯ ದಾರಿ ಹಿಡಿದಿತ್ತು;ಶಬ್ದಗಳ ಲೋಕದಲಿ ನಾನು, ಮೌನದಲಿ ನನ್ನ ಬರಹ..ದಾರಿ ಮುಗಿದಿತ್ತು, ಮನೆಯು ಬಂದಿತ್ತು.. ಮನಸು ಮಾತ್ರ ಕವನ ಬರೆಯುತ್ತಿತ್ತು. ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

ಕವಿತಾ ಶ್ರೀನಿವಾಸ್‌ ನಾಯಕ್‌ ಕವಿತೆ “ಬರಹದ ಗುಂಗಿನಲ್ಲಿ” Read Post »

ಕಾವ್ಯಯಾನ

ದಾನಮ್ಮ ಝಳಕಿ ಅವರ ಕವಿತೆ “ಕನಸಿನ ಅರಮನೆ”

ಕಾವ್ಯ ಸಂಗಾತಿ ದಾನಮ್ಮ ಝಳಕಿ “ಕನಸಿನ ಅರಮನೆ” ರಾತ್ರಿಯ ಮೌನದ ಮಡಿಲಿನಲ್ಲಿಒಂದು ಕನಸು ಕಣ್ಣು ತೆರೆದಿತು,ಬಡ ಹೃದಯದ ಚಿಕ್ಕ ಗುಡಿಸಲಲ್ಲಿಅರಮನೆಯೊಂದು ಅರಳಿತು. ಕಲ್ಪನೆಯ ಕಲ್ಲು ಕಲ್ಲಿನಿಂದಕಟ್ಟಿದ ಮನದ ಮಂದಿರವು,ಆಶೆಗಳ ಹೊನ್ನಿನ ಕಿಟಕಿಯಿಂದಬೆಳಗಿತು ಬದುಕಿನ ಅಂತರವು. ಕಣ್ಣೀರ ಹನಿಯ ನೀರಿನಿಂದಲೇಬೇರು ಬಿಟ್ಟಿತು ಬಯಕೆಯ ಗಿಡ,ನೋವಿನ ಬೆಂಕಿ ದಾಟಿಬಂದಾಗಹೂವಾಯಿತು ಬದುಕಿನ ಹಾದಿ ಬಿಡ. ಬೆವರ ಹನಿಗಳ ಮುತ್ತುಗಳಿಂದಗೋಡೆಯ ಮೇಲೆ ಚಿತ್ರ ಬರೆದೆ,ಸಹನೆಯ ದೀಪ ಹಚ್ಚಿಕೊಂಡುಸಾವಿರ ಕತ್ತಲ ದಾರಿ ನಡೆದೆ. ಬಿರುಗಾಳಿಗಳು ಬಂದಾಗಲೂಮನದ ಬಾಗಿಲು ಮುಚ್ಚಲಿಲ್ಲ,ಸೋಲಿನ ನೆರಳು ಸುತ್ತಿದಾಗನಂಬಿಕೆಯ ಸೂರ್ಯ ಅಸ್ತವಾಗಲಿಲ್ಲ. ಅರಮನೆ ಎಂದರೆ ಚಿನ್ನವಲ್ಲ,ಅದು ಮನದ ಮಹತ್ವದ ಗೃಹ,ಪ್ರೀತಿಯೇ ಅದರ ಸಿಂಹಾಸನ,ಮನುಜತ್ವವೇ ಅದರ ಸುಗಂಧ ಸುಭ್ರ. ಕನಸು ಎಂದರೆ ಕೇವಲ ನಿದ್ರೆ ಅಲ್ಲ,ಕನಸು ಎಂದರೆ ಜೀವದ ಜ್ಯೋತಿ,ಬಿದ್ದರೂ ಮತ್ತೆ ಎದ್ದು ನಿಲ್ಲುವಧೈರ್ಯದ ಅಮರ ಪ್ರೀತಿ. ಇಂದು ನಿಂತಿದೆ ಆ ಅರಮನೆಕಾಲದ ಮುಂದೆ ಗರ್ವವಾಗಿ,ನಿನ್ನೆ ಕಣ್ಣೀರಲಿ ತೇಲಿದ ಮನಸುಇಂದು ನಗುತ್ತಿದೆ ಹೂವಾಗಿ. ಜೀವನವೆಂಬ ವಿಶಾಲ ಭುವಿಯಲ್ಲಿಕನಸೇ ಮಾನವನ ರೆಕ್ಕೆ,ಕನಸಿನ ಅರಮನೆ ಕಟ್ಟಿದವನಿಗೆಆಕಾಶವೂ ಚಿಕ್ಕದಾದ ತೆಕ್ಕೆ. ಡಾ ದಾನಮ್ಮ ಝಳಕಿ

ದಾನಮ್ಮ ಝಳಕಿ ಅವರ ಕವಿತೆ “ಕನಸಿನ ಅರಮನೆ” Read Post »

ಕಾವ್ಯಯಾನ

ಗೊರೂರು ಅನಂತ ರಾಜು ಅವರ ಹನಿಗವನಗಳು

ಕಾವ್ಯ ಸಂಗಾತಿ ಗೊರೂರು ಅನಂತ ರಾಜು ಹನಿಗವನಗಳು ಗೊತ್ತೇ..? ಮಡದಿಯ ಹೆಸರಿನ ಮುಂದೆಗಂಡನ ಹೆಸರು ಏಕಿರುತ್ತದೆಯೋಚಿಸಿ ತುಸು ಹೊತ್ತುಮುಂದೆ ಮುಂದೆ ನಡೆಯುತ್ತಾನಲ್ಲಲಗೇಜ್ ಹೊತ್ತು ಗೊತ್ತಿಲ್ಲ.. ವರಾನ್ವೇಷಣೆಯಲ್ಲಿ ಜೋಡಿ ಚಪ್ಪಲಿ ಸವೆಸಿದ ಅಪ್ಪನಿಗೆತನ್ನ ಮಗಳ ಹಿಂದೆ ಹುಡುಗರುಹನ್ನೆರೆಡು ಚಪ್ಪಲಿ ಸವೆಸಿದ್ದುಗೊತ್ತಿಲ್ಲ.. ಗೊತ್ತೇ..? ದುರಂತ ಕಥೆ ಕಾದಂಬರಿಬರೆದು ಪ್ರಸಿದ್ಧನಾದಕತೆಗಾರನಿಗೆ ಸ್ಫೂರ್ತಿಅವನ ಹೆಂಡತಿ ಎಂಬುದುಗೊತ್ತೇ..? ಗೊತ್ತಿಲ್ಲ.. ಹುಡುಗರು ಚುಡಾಯಿಸ್ತಾರೆ ಅಂತಬಿಡ್ತಾರಾ ಹುಡುಗಿಯರುಧರಿಸೋದು ಮಿಡಿಹುಡುಗಿಯರಿಗಾಗಿಯೇ ತಲೆ ಕೆಡಿಸಿಕೊಳ್ಳುವ ಹುಡುಗರು ಬಿಡ್ತಾರ ಸೇದೋದು ಸಿಗರೇಟು ಬೀಡಿ ಗೊತ್ತಿಲ್ಲ..! ಗೊರೂರು ಅನಂತರಾಜು 

ಗೊರೂರು ಅನಂತ ರಾಜು ಅವರ ಹನಿಗವನಗಳು Read Post »

You cannot copy content of this page

Scroll to Top