ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಅಶ್ಫಾಕ್ ಪೀರಜಾದೆ ಕವಿತೆ “ಮನದ ಕಣಿವೆಯಲಿ…”

ಕಾವ್ಯ ಸಂಗಾತಿ ಅಶ್ಫಾಕ್ ಪೀರಜಾದೆ “ಮನದ ಕಣಿವೆಯಲಿ…” ರೆಪ್ಪೆ ಮುಚ್ಚಿದ ಕ್ಷಣಜಗತ್ತು ಕತ್ತಲಾಯಿತು ನಿಜ,ಅಂತರಂಗದ ಕಿಟಕಿಗಳೆಲ್ಲತೆರೆದುಕೊಂಡರೂ ಒಳಗೆಬಾರದ ಗಾಳಿ ಬೆಳಕು ​ಧ್ಯಾನದ ಆಳಕ್ಕೆ ಇಳಿದಷ್ಟುಮೌನದ ಪದರಗಳು ಕಳಚಿ ಬಿದ್ದವುಗುಲಾಬಿ ಹೂವಿನ ಎಸಳುಗಳಂತೆ ಕಣ್ಣೆದುರು ಈಗ ಶೂನ್ಯಮುಡುಗಟ್ಟಿದ ನೋವು ಹತಾಶೆಕೈಜಾರಿ ಹೋದ ಕಾಲದ ಹೆಜ್ಜೆ ಗುರುತುಗಳು ​ಒಂದೊಂದು ನೆನಪೂಒಂದೊಂದು ನಿಟ್ಟುಸಿರು,ಮನದ ಕಣಿವೆಯಲಿಈಗ ಗತಕಾಲದ ಆರ್ತನಾದ. ಅಶ್ಫಾಕ್ ಪೀರಜಾದೆ

ಅಶ್ಫಾಕ್ ಪೀರಜಾದೆ ಕವಿತೆ “ಮನದ ಕಣಿವೆಯಲಿ…” Read Post »

ಕಾವ್ಯಯಾನ, ಗಝಲ್

ಎಮ್.ಎಚ್.ಹಾಲ್ಯಾಳ ಅವರ ಗಜಲ್

ಕಾವ್ಯ ಸಂಗಾತಿ ಎಮ್.ಎಚ್.ಹಾಲ್ಯಾಳ ಗಜಲ್ ಅವರಿವರ ಮಾತಿಗೆ ನೊಂದು ದು:ಖಿಸದೆ ಮುಂದೆ ಸಾಗುಬರುವ ಕಷ್ಟಗಳನೆದುರಿಸಿ ಗುರಿ ಸಾಧನೆಗೆ ಮುಂದೆ ಸಾಗು.. ಸರಿ ದಾರಿ ಕಾಣದೆಂದು ಧೃತಿಗೆಟ್ಟು ಸೋತು ಮರಳಿ ಬಾರದೆಹೊಸ ದಾರಿ ಶೋಧಿಸಿ ಸಾಧನೆಗಾಗಿ ಮುಂದೆ ಸಾಗು.. ಬಾಳಿನಲಿ ಬರುವ ಗೋಳಿನುರಿಗೆ ಬಲಿಯಾಗದೆ ನಡೆದುಭವದ ಬಂಧನ ಕಳಚಿ ಅಂತಿಮ ಸತ್ಯ ಹುಡುಕುತ ಮುಂದೆ ಸಾಗು.. ಸೋಲುವೆನೆಂಬ ಭಯ ಬಿಟ್ಟು ಗೆಲುವಿನ ಹಾದಿ ಹಿಡಿದುಛಲದಂಕ ಮಲ್ಲನಂತೆ ಬಾಳ ಗೆಲುವು ಸಾಧಿಸುತಾ ಮುಂದೆ ಸಾಗು.. ಮುಳುಗಿದ ಸೂರ್ಯ ಮತ್ತೆ ಉದಿಸಿ ಬರುವ ಸತ್ಯವನರಿತುಈ ಶಾಂತಿದೂತನ ನಂಬುತಾ ಹೆದರದೆ ಮುಂದೆ ಸಾಗು.. ಎಮ್.ಎಚ್.ಹಾಲ್ಯಾಳ

ಎಮ್.ಎಚ್.ಹಾಲ್ಯಾಳ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಪ್ರಭಾವತಿ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ದೇಸಾಯಿ ಗಜಲ್ ಬದುಕಿನ ಕಳವಳ ಎದೆಯ ಒಳಗೆ ಕಡೆಗೋಲು ಮಥಿಸಿತು ಇರುಳುಕಟ್ಟಿದ ಕರಿ ಮೋಡವು ತುಂತುರ ಹನಿಗಳ ಉದುರಿಸಿತು ಇರುಳು ನೆನಪಿನ ಹಳೆ ಗಂಟು ಬಿಚ್ಚಿ ಕಂಗಳ ನಿದಿರೆ ಕದಿಯಿತು ಚುಕ್ಕಿಹುಣ್ಣಿಮೆಯ ಚಂದಿರ ಕಿರಣ ಕೊಳದ ಮೊಗ್ಗು ಅರಳಿಸಿತು ಇರುಳು ಗತಕಾಲದ ವೈಭವ ನೆನೆಯುತ ಮೌನದಲಿ ಜಂತಿ ಎಣಿಸಿದೆ.ಮುತ್ತಿದ ಕತ್ತಲು ವಿರಹ ಅಗ್ನಿಯಲಿ ದೇಹ ದಹಿಸಿತು ಇರುಳು ಕುಸುಮದಲ್ಲಿ ಕಂಡ ಕನಸುಗಳು ಉದುರಿ ಮಣ್ಣಲಿ ಸೇರಿದವುಹೃದಯದ ಬಯಕೆಯು ಭೂತವಾಗಿ ಕಾಡಿಸಿ ನರಳಿಸಿತು ಇರುಳು ಅರ್ಧರಾತ್ರಿಯಲಿ ಗೊಂಬೆಗಳು ಎದ್ದು ಕುಣಿದಾಡ ತೊಡಗಿದವುಮೂಡಣದಲಿ ಮೂಡಿದ ಹೊನ್ನಕಿರಣ ಪ್ರಭೆ ಸರಿಸಿತು ಇರುಳು ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

“ಗಜಲ್‌ ಜುಗಲ್‌ ಬಂದಿ”ಅರುಣಾ ನರೇಂದ್ರ ಮತ್ತು ವೈ ಎಂ ಯಾಕೊಳ್ಳಿ

ಕಾವ್ಯ ಸಂಗಾತಿ “ಗಜಲ್‌ ಜುಗಲ್‌ ಬಂದಿ” ಅರುಣಾ ನರೇಂದ್ರ ವೈ ಎಂ ಯಾಕೊಳ್ಳಿ ಬಾಡದ ಹೂವ ಕಿತ್ತೆಸೆಯಬಹುದೇ ಮುಡಿಯಿಂದ ತೆಗೆದುಜಿಗಿತ ಪ್ರೀತಿ ಚಿವುಟಿ ಒಗೆಯಬಹುದೇ ಎದೆಯಿಂದ ತೆಗೆದು ಹೆಣ್ಣು ಮಣ್ಣು ಹೊನ್ನಿ ಗಾಗಿ ನೆತ್ತರು ಹರಿದಿದೆ ಈ ಭೂಮಿ ಮೇಲೆನೋವಾಯಿತೆಂದು ಕರುಳ ಕಿತ್ತು ಹಾಕಬಹುದೇ ಒಡಲಿಂದ ತೆಗೆದು ಗಿಡದಲ್ಲಿ ಅರಳಿದ ಹೂವಿಗಿಂತ ಕೃತಕ ಹೂಗಳೆ ಚಂದ ತೋರುತ್ತವೆಬೆಂಕಿ ಸುಟ್ಟಿತೆಂದು ದೀಪವನು ಗಾಳಿಗಿಡಬಹುದೇ ಒಳಗಿಂದ ತೆಗೆದು ಇಲ್ಲಿ ಮುಖವಾಡಗಳೇ ಮಾತಾಡುತ್ತಿವೆ ಯಾವುದನ್ನು ನಂಬುವುದು ಸತ್ಯ ಕಹಿಯೆಂದು ಸುಳ್ಳನ್ನೇ ಮೆರೆಸಬಹುದೇ ಪಾಪದಿಂದ ತೆಗೆದು ಅವ ಇಟ್ಟಂತೆ ಇರಬೇಕು ನಾವೆಲ್ಲ ಇರುವಷ್ಟು ದಿನ ನಗು ನಗುತ ಮೌನವಾದ ಅರುಣಾಗೆ ಮೂಗಿ ಅನ್ನಬಹುದೇ ಯಾದಿಯಿಂದ ತೆಗೆದು —- ಎದೆಯ ಮಾತನು ಬಿಚ್ಚಿ ಆಡಬಹುದೇ ಆಳದಿಂದ ತಗೆದುಮೂಡಿದ ಒಲವನು ತೊರೆಯಬಹುದೇ ಎದೆಯಿಂದ ತಗೆದು ಜಾತಿ‌ಮತ ಪಂಥಗಳ ಹೆಸರಲ್ಲಿ ಉಸಿರಾಡುತ್ತಿದೆ ಜಗವುಮನುಜ‌ಮತ ಉಳಿಯಬಹುದೇ ಮೋಸದಿಂದ ತಗೆದು ಒಡಲ ಕೂಸೆ ಒಮ್ಮೊಮ್ಮೆ ದೂರ ವಾಗಬಹುದು ಮರೆತುಕರುಳ ಕುಡಿಯನು ದೂರ ತಳ್ಳಬಹುದೆ ಸಿಟ್ಟಿನಿಂದ ತಗೆದು ತೋರಿಕೆಯ ಮಾತುಗಳು ಆಡಂಬರದ ಆಟಗಳು ಮೆರೆಯುತ್ತಿವೆಕೃತ್ರಿಮತೆಯೆದುರು ನಿಜ ಮರೆಸಬಹುದೆ  ಹುಸಿಯಿಂದ ತಗೆದು ಲೋಕವನಾಳುವ ಮಾಲೀಕನೊಬ್ಬ‌ ಮೇಲಿಹನು ಜೋಗಿಅವನ ತಕ್ಕಡಿಯಲ್ಲಿದೆ ನಮ್ಮ ಆಟ ಗೆಲ್ಲಬಹುದೆ ತಂತ್ರದಿಂದ ತಗೆದು ಡಾ ವೈ ಎಮ್ ಯಾಕೊಳ್ಳಿ

“ಗಜಲ್‌ ಜುಗಲ್‌ ಬಂದಿ”ಅರುಣಾ ನರೇಂದ್ರ ಮತ್ತು ವೈ ಎಂ ಯಾಕೊಳ್ಳಿ Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಹೂವೆಂದು ಕೈಗೆತ್ತಿಕೊಂಡೆ ಮುಳ್ಳಾಗಿ ಚುಚ್ಚಿತುಬಳ್ಳಿಯೆಂದು ನೀರೆರೆದೆ ಹಾವಾಗಿ ಮೇಲೆರಗಿತು!! ಹೇಗೆ ತೋರಲಿ? ಹಸಿಯಾದ ಹೃದಯದ ಗಾಯವನುಕರುಣೆಗಾಗಿ ಕೈಮುಗಿದೆ ಕಠೋರವಾಗಿ ಎದೆಗಿರಿಯಿತು!! ನಂಬಿಸಿ ಅನಾಯಾಸವಾಗಿ ಗಿಚ್ಚಬಹುದೇ ಹೀಗೆ ಮುತ್ತಿಟ್ಟು ಕೆನ್ನೆಯನು,ಗಲ್ಲವನು ಜೋರಾಗಿ ಕಿರುಚಿ ಹೇಳಿದೆ..ಕಿವುಡಾಗಿ ಕಚ್ಚಿತು!! ಮಾಯಾವಿ ಮಾತುಗಳು ಮನಸ್ಸಿಗಿಳಿದವು..ಈ ಯುದ್ಧ ಸಾಕು ಬೇಡವೆಂದೇ,ಮೋಹವಾಗಿ ಪಾಶವಾಯ್ತು!! ದೀಪಾವಳಿಯ ರಾತ್ರಿ ಕತ್ತಲೆಯಿತ್ತು..ಬೆಳಕಿನ ಜೊತೆ ಸರಸಬೇಡವೆಂದೇ..ಬೀಜವಾಗಿ  ಸಸಿಯಾಯಿತು!! ಬಾಳ ಕದ್ದವನಿನ್ನೂ ಸಿಕ್ಕಿಬಿದ್ದಿಲ್ಲಾ,,ಬಗಲಲ್ಲಿ ಕಂದ ನಗುತ್ತಿಲ್ಲಾಹುಡುಕಾಡಿದೆ ಬದುಕೇ ಮರಳುಗಾಡಾಗಿ ಭಾಸವಾಯ್ತು!! ಮರುಕವಷ್ಟೇ ಹುಟ್ಟೀತು,ನಷ್ಟವನು ಯಾವುದರಿಂದ ತುಂಬಲಿ ಜಯ?ಅಮೃತವೆಂದು ಸೇವಿಸಿದೆ ವಿಷವಾಗಿ ಕೊಂದಿತು!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ಒಲವ ಪದಗಳ ಸಾಲಿನಲಿ ಇಳಿಸಿಕವಿತೆ ಆಗಿಸು ಗೆಳೆಯಾಚೆಲುವ ಕವನದ ಭಾವಗಳ ಒಳಗೆಮನವ ಬಾಗಿಸು ಗೆಳೆಯಾ ಬಾಳೆಂಬ ಪುಸ್ತಕದ ಪುಟದಲಿ ಬರೆದುಗೀಚಿದ ಹಾಳೆಗಳು ಅದೆಷ್ಟೋಹೇಳಲು ಮುಜುಗರ ಪಡದಂತೆ ಆತ್ಮವಿಶ್ವಾಸ ತೂಗಿಸು ಗೆಳೆಯಾ ಕಾಲದ ಮಿತಿಯಲಿ ಎಲ್ಲವೂ ಚೆಂದವೇತಿಳಿದಂತೆ ನಡೆಯಬೇಕು ಎಚ್ಚರಬೇಲಿಯ ದಾಟದಂತೆ ವರ್ತುಲವ ಕಟ್ಟಲುಭಯವ ನೀಗಿಸು ಗೆಳೆಯಾ ಹಲವು ವಿಷಯವು ಚರ್ಚೆಗೆ ಗ್ರಾಸವಾಗಿಪರಿಹಾರ ಸಿಗುವುದು ಕಷ್ಟಛಲವು ತುಂಬಿರಲು ಎದೆಯಲಿ ದೃಢನಿರ್ಧಾರ ಸಾಗಿಸು ಗೆಳೆಯಾ ನಿಲುವು ಸ್ಪಷ್ಟವಾಗಿ ಇರಲು ಬದುಕಅಲ್ಲಾಡಿಸಿ ಕಾಡಲು ಅಸಾಧ್ಯಗೆಲುವು ಸಿಗಲು ಮಾಲೆಯ ಹಾಕುತರಾಧೆಯ ಬೀಗಿಸು ಗೆಳೆಯಾ ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಕಾಲ ಎಲ್ಲವನ್ನೂ ಮರೆಸಿತು ನಿನ್ನ ನೆನಪೊಂದನು ಬಿಟ್ಟುಕಾಲ ಎಲ್ಲಾ ನೋವನ್ನು ಅಳಿಸಿತು ನೀ ಮಾಡಿದ ಗಾಯವೊಂದನು ಬಿಟ್ಟು..!! ಯುಗವುರಳಿ ಭಿನ್ನ ಮುಖ ಕಣ್ಣ ಮುಂದೆ ಚಲಿಸುತ್ತಿವೆ ಒಂದೊಂದೇಕಾಲ ಕಸದರಾಶಿಯಲೂ ಹೂ ಅರಳಿಸಿತು ನನ್ನ ಪಾಲಿನ ಹೂವೊಂದನು ಬಿಟ್ಟು!! ಮೊದಲಿಲ್ಲದ ಕೊನೆ,ಕೊನೆಯಿಲ್ಲದ ಮೊದಲು  ಒಂಟಿತನಕೆ ನಾಂದಿ ಬಯಸವುಕಾಲ ಎಲ್ಲಾ ಕಲಿಸಿತು ನನ್ನ ನೆರಳಿಗೆ ನಗಿಸುವುದೊಂದನು ಬಿಟ್ಟು!! ಈ ಶೋಕ ಒಂದು ಗಳಿಗೆಯದ್ದಲ್ಲಾ ಇಡೀ ಜೀವಮಾನದ್ದಾಯ್ತುಕಾಲ ಕಂಬನಿ ನಿಲ್ಲಿಸೆಂದಿತು ರಕ್ತ ಒಸರುವುದೊಂದನು ಬಿಟ್ಟು!! ಖಾಲಿತನದ ಹೆಜ್ಜೆ ಅನುಕಂಪದ ಪೆಟ್ಟಿಗೆಗೆ ಸರಿಯಬಹುದೆಂದುಕೊಂಡೆಕಾಲ ಛಿದ್ರ ಹಳಿಗಳನು ಒಂದುಗೂಡಿಸಿತು ಹಾದಿ ತಪ್ಪಿದ ಪ್ರೀತಿಯೊಂದನು ಬಿಟ್ಟು!! ಪ್ರೀತಿಯೆಂಬ ಪುಸ್ತಕದಿ ಉಳಿದಿದ್ದು ಹೆಸರೇ ಇಲ್ಲದ ನಾನು, ನೀನುಕಾಲ ಎಲ್ಲವನ್ನೂ ಉಳಿಸಿತು ನಿನ್ಹೆದೆಯಲಿ ನನ್ಹೆಸರೊಂದನು ಬಿಟ್ಟು!! ಕತ್ತಲು ಕನಸುಗಳ ನಡುವೆ ಮೌನ ಹೊದಿಕೆ ಹೊದ್ದು ಜಯವನ್ನು ಬೇಡಿದಾಗಕಾಲ ಕೊನೆಗೂ ಕನಿಕರಿಸಿತು ಸಾವೊಂದನು ಬಿಟ್ಟು!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ‌ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ‌ ಗಜಲ್ ಪ್ರೇಮ ನಶೆಯ ಮದಿರೆ ಏರಿದರಲ್ಲೆಯ ನಿದಿರೆಒಲವಿನುಯ್ಯಾಲೆಯಲಿ ತೂಗುತಲಿದ್ದರೆಲ್ಲಿಯ ನಿದಿರೆ ಕಳವಳದಲ್ಲಿ ಜೀವ ಕುಸುಮ ಮಂಪರಿಸುತ ಕಂಪನಪ್ರೀತಿಯ ಮಾಯೆಯಲಿ ಮೈಮರೆತರೆಲ್ಲಿಯ ನಿದಿರಿ ಹಗಲಿರುಳು ಹಂಬಲದ ಕೊಳದಿ ಅಲೆಗಳ ನಿಲ್ಲದ ಶಬ್ದಅಪ್ಪುಗೆಯಾಲಿಂಗನಕೆ ಕಾಯುತದಲಿದ್ದರೆಲ್ಲಿಯ ನಿದಿರೆ ಬಿಸಿಯುಸಿರು ಧಗೆಯಲಿ ದೇಹ ಧಗಧಗಿಸುವ ನೋವುಕನಸುಗಳ ಹಾಸಿ ಹೊತ್ತು ಮಲಗಿದರೆಲ್ಲಿಯ ನಿದಿರೆ ನೆನಪಿನಲೆಯ ಕೋಲಾಹಲ ತಾಳಲಾರದ ಸಿಹಿ ಸಂಕಟಕಣ್ಣ ಕೊಳದಲಿ ನೆಟ್ಟ ಚಿತ್ರ ಮಾಸದಿರೆಲ್ಲಿಯ ನಿದಿರೆ ಮನ ಮಂದಾರ ಬಿರಿಯುವ ಸಂಕಟ ಕಾತುರದ ಕೌತುಕಜೀವ ಕುಸುಮ ರವಿಗಾಗಿ ಕಾಯುತಲ್ಲಿದ್ದರೆಲ್ಲಿಯ ನಿದಿರೆ ಅನುರಾಗದಲೆಯಲಿ ಅನು ಕೊಚ್ಚಿ ಹೋಗುತಿಹಳು ತಾಳದೇರಾಗಕೆ ತಾಳ ಬೆರೆಸಲು ದುಂಬಿ ಬರದಿದ್ದರೆಲ್ಲಿಯ ನಿದಿರೆ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ‌ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ರತ್ನರಾಯಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ನೀ ಸಾಗಿದ ದಾರಿಯು ಸುಲಭವಾಗಿ ಇರಲಿಲ್ಲ ಗಾಲಿಬ್ನಿನ್ನ ಮನದ ತೊಳಲಾಟ ಸರಳವಾಗಿ ಇರಲಿಲ್ಲ ಗಾಲಿಬ್ ಕಂಬನಿಯಲೂ ಗಜಲ್ ರಚಿಸಿದ ಮಹಾ ಕಲಾಕಾರ ನೀನುಅಶಾಂತಿಯಲಿ ಬದುಕು ಸುಂದರವಾಗಿ ಇರಲಿಲ್ಲ ಗಾಲಿಬ್ ವ್ಯಥೆಯೊಳಗೆ ವ್ಯಂಗ್ಯವಿಟ್ಟು ನಕ್ಕ ಪರಿ ನಾ ಮರೆಯಲಿ ಹೇಗೆಹೊರ ಜಗತ್ತಿಗೆ ನಿನ್ನ ನಗು ಸಹಜವಾಗಿ ಇರಲಿಲ್ಲ ಗಾಲಿಬ್ ಮಲ್ಲಿಗೆಯ ಸುಮ ಕಾಯುತಲೆ ಇತ್ತು ಅವಸರ ಮಾಡಿದೆಎದೆಯಲಿ ನೀನಿಟ್ಟ ಹೆಜ್ಜೆ ನಿಧಾನವಾಗಿ ಇರಲಿಲ್ಲ ಗಾಲಿಬ್ ಮರಣವನ್ನೂ ಮೀರಿದ ಚಿರಂಜೀವಿ ನೀ ಮಲ್ಲಿ ಮನದಲಿನೀ ನಡೆಸಿದ ಹೋರಾಟ ಖಚಿತವಾಗಿ ಇರಲಿಲ್ಲ ಗಾಲಿಬ್ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ಚೂರಾದ ಹೃದಯ ತೆರೆದು ತೋರಿಸಲಿ ಹೆಂಗ ಹೇಳನೋವಿನಲಿ ಒದ್ದಾಡೊ ಮನಸ ಬಚ್ಚಿಡಲಿ ಹೆಂಗ ಹೇಳ ನೂರು ಮಾತು ಎದೆಯಲ್ಲೇ ಉಳಿದು ಕೊರೆಯುತಿವೆಉಕ್ಕೊ ಬಯಕೆ ಬಾಂಧಳವ  ಬತ್ತಿಸಲಿ ಹೆಂಗ ಹೇಳ ದುಃಖದೊಡಲ ಕೊರೆದ ನೋವಿನಲೆಗಳು ಬೊಬ್ಬಿಡುತಿವೆದಿನರಾತ್ರಿ ಕಂಡ ಕನಸನೆಲ್ಲ ಕೊಂದುಬಿಡಲಿ ಹೆಂಗ ಹೇಳ ತುಂಟತನದಿ ಮಾಡಿದ ಆ ಗಾಯಕೆ ಮುಲಾಮು ಸಿಕ್ಕೀತೇಕಂಗೋಳಿಸುವ ಆಸೆಗಳ ತೋಟಕೆ ಕಿಚ್ಚಚ್ಚಲಿ ಹೆಂಗ ಹೇಳ ಕಾದು ಕಾದು ಕಂಗೆಟ್ಟು ಬೆಂಗಾಡ ಹೊಕ್ಕು ಬೆಚ್ಚಿಬಿದ್ದಿರುವೆಒತ್ತರಿಸಿ ಬರೋ ಹಂಬಲದ ಹಸಿವ ಹಿಂಗಿಸಲಿ ಹೆಂಗ ಹೇಳ ಸಂಗದಾಟ ತಂದ ಸಂಕಷ್ಟದ ಬೇನೆ ಸುಡುತಿವೆ ನನ್ನೊಡಲತಾಳದ ತುಡಿತಗಳ ತಾಪವೇರಿರಲು ತಗ್ಗಿಸಲಿ ಹೆಂಗ ಹೇಳ ಅನು ಹತ್ತು ಜನುಮಕಾಗುವಷ್ಷು ಅನುರಾಗ ಕಟ್ಟಿಟ್ಟಿದ್ದಳುತೋಡಿದ ಒಲವಿನೊರತೆ ಬತ್ತುತಿರಲು ಸಹಿಸಲಿ ಹೆಂಗ ಹೇಳ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಗಜಲ್ Read Post »

You cannot copy content of this page

Scroll to Top