ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-21 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಜಯದೇವಿ ತಾಯಿಯವರು ಕೋರ್ಟ್ ಕೇಸ್ನ್ನ ಗೆದ್ದು…..“ನ್ಯಾಯಕ್ಕೆ ಜೀವ ತುಂಬಿದರು.*ಆಗಿನ ಕಾಲದಲ್ಲಿ ಜಯದೇವಿ ತಾಯಿಯವರ ಪತಿಯು ಬಾಲಕರೆಂದು  ಬ್ರಿಟಿಷರ ಮೇಲ್ವಿಚಾರಣೆಯಲ್ಲಿದ್ದ ದೊಡ್ಡ ಆಸ್ತಿ, ಜಮೀನು, ಮನೆ, ವ್ಯವಹಾರ—ಎಲ್ಲವು ಒಂದೇ ಕ್ಷಣದಲ್ಲಿ ತಾಯಿ ಯ ಹೆಗಲ ಮೇಲೆ ಬಿದ್ದವು.ಪುರುಷರೇ ಹೆದರಿಬಿಡುವಂತಹ ಜವಾಬ್ದಾರಿಯನ್ನು ಒಬ್ಬ ಹೆಣ್ಣು ಮಗಳು ಒಬ್ಬಳೇ ಹೊತ್ತು ನಿಲ್ಲುವುದು ಅಂದಿನ ಸಮಾಜದಲ್ಲಿ ಅಸಾಧ್ಯವೆಂದು ಎಲ್ಲರೂ ಭಾವಿಸಿದ್ದರು.ಆದರೆ ಜಯದೇವಿ ತಾಯಿ ಒಬ್ಬ ಸಬಲ ತಾಯಿತನದ ಶಕ್ತಿಯಾಗಿ ನಿಂದರು.ಒಂದೆಡೆ ಗಂಡನ ಅಗಲಿಕೆಯ ನೋವು ಹೃದಯದಿ ಮುಚ್ಚಿಟ್ಟು ಮತ್ತೊಂದೆಡೆ ಐದು  ಮಕ್ಕಳ ಭವಿಷ್ಯ ಅವರ ಕಣ್ಣೆದುರಿಗೆ ನಿಂತಿತ್ತು ಬೆಳಗ್ಗೆ ಉದಯಿಸುವ ಸೂರ್ಯನಿಗಿಂತ ಮುಂಚೆಯೇ ಎದ್ದು ಮನೆಯ ಕೆಲಸ, ಮಕ್ಕಳ ಆರೈಕೆ, ಕಾರ್ಮಿಕರ ನೋಡಿಕೊಳ್ಳುವುದು, ಆಸ್ತಿಯ ಲೆಕ್ಕಪತ್ರ, ನ್ಯಾಯದ ವಿಚಾರ …..ಎಲ್ಲವನ್ನೂ ನಿರ್ವಹಿಸುತ್ತಿದ್ದರು. ಅವರಲ್ಲಿ ಆವರಿಸಿದ ಖಾಲಿತನವನು ಸಿದ್ದರಾಮನ ನೆನಹುನಲಿ ನಮ್ಮೆದೆಯ ತುಂಬಲಾರಂಭಿಸಿದರು. ಇಚ್ಛೆಯಿಂದಲೇ ಸರ್ವ|ತುಚ್ಚಿೀಕರಿಸಿ ಬೇಗ ಎಚ್ಚರದಿಂದ ಇರಬೇಕು- ನಮ್ಮಲಿಯಸಚ್ಚಿದಾನಂದನ ಸ್ಮರಿಸೂತ||*B ಸಚ್ಚಿದಾನಂದ ಶಿವಮಯನಾದ ಸಿದ್ದರಾಮನು ನೆನೆಯುತ ಐದು ಮಕ್ಕಳ ಬದುಕನ್ನು ಕಟ್ಟುವ ಉಕ್ಕಿನ ಮನೋಬಲವಿತ್ತು. ಮಕ್ಕಳ ಬದುಕು ಅರಳಬೇಕೆಂಬು ಕನಸು ಹೊತಿದ್ದರು…    ಮಕ್ಕಳಿಗೆ ಪರ್ವತದಂತೆ ಬಲವಾಗಿ ನಿಂತರು.ಅದರಲ್ಲೇ ಅವರ ತಾಯಿತನದ ದಿವ್ಯತೆ ಇತ್ತು. ಇಲ್ಲಿ ಒಂದೆರಡು ಘಟನೆಗಳನ್ನು ನೆನಪಿಸಿಕೊಳ್ಳಲೇ ಬೇಕು ತಾಯಿಯವರು ಆಗಿಂದ್ದಾಂಗ  ಹೇಳುತ್ತಿದ್ದರು.  ಮೊದಲ ಮಗಳು ಶಶಿಕಲಾ ಅವರಿಗೆ ರಾಜಶೇಖರ ಮಡಕಿ  ಸ್ವಂತ ತಮ್ಮನಿಗೆ ಕೊಟ್ಟು ಮದುವೆ ಮಾಡಲಾಗಿತ್ತು‌ . ಅವರು ಸುಖ ಸಂಸಾರದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಸಾಹಿತ್ಯವನ್ನು ರಚಿಸುತ್ತಾ ಸುಖವಾಗಿ ಇದ್ದರು. ತಾಯಿಯವರ ಹಿರಿಯ ಮಗಳು ಶಶಿಕಲಾ ಮಡಕಿ ಅಳಿಯ ರಾಜಶೇಖರ್ ಮಡಿಕೆ ಎರಡನೇ ಮಗ ಶ್ರೀಕಂಠ ಮೂರನೇ ಮಗ ಪ್ರಭುರಾಜ ಇವರಿಬ್ಬರನ್ನು ಪಂಚಗಣಿಯ ಶಾಲೆಯಲ್ಲಿ ಓದಲು ಕಳಿಸಿಕೊಟ್ಟಿದ್ದರು‌ ‌.ಸುಖದ ಸುಪತ್ತಿನಲ್ಲಿ ಬೆಳೆದು ಬಂದ್ದಿದ್ದ ಮಕ್ಕಳಿಗೆ ಅಲ್ಲಿಯ ಕಠಿಣವಾದ ಶಿಸ್ತು ಬದ್ಧತೆ ,ಕಟ್ಟುನಿಟ್ಟಾದ ನಿಯಮಗಳು, ಶಾಲೆಯ ಅಭ್ಯಾಸದ ಭಾರವು ಅವರಿಗೆ ಸರಿ ಹೊಂದಲಿಲ್ಲ, ಊಟದಲಿ ವ್ಯತ್ಯಾಸ ಸಹಿಸಲಾಗಲಿಲ್ಲ. ಹೀಗಾಗಿ ಅವರು ಅಲ್ಲಿ ಇರಲು ಒಪ್ಪಿಕೊಳ್ಳಲಿಲ್ಲ… ಹಿರಿಯ ಮಗ ಶ್ರೀಕಂಠ ಆದರೂ ತಾಯಿಗೆ ಹೆದರಿ ಮೊದಲು ಮಗ ಶ್ರೀಕಂಠ ಶಾಲೆಯ ರಜೆ ಪ್ರಾರಂಭವಾಗುವವರೆಗೂ ಇದ್ದು ರಜೆಗೆಂದು ಮನೆಗೆ ಬಂದಾಗ ಹಿಂತಿರುಗಿ ಹೋಗಲು ಸಾಧ್ಯವೇ ಇಲ್ಲವೆಂದು ತನ್ನ ಅಭಿರುಚಿಯು ಕೃಷಿಯಲ್ಲಿ ಹಾಗೂ ಅಂಗಡಿ ಮನೆ ನೋಡಿಕೊಂಡು ಹೋಗುವದರಲ್ಲಿ ಇದೆ ಎಂದು ತಿಳಿಸಿದಾಗ ತಾಯಿಯವರು ಅವರ ವಿಚಾರದ ವಿರುದ್ಧ ಹೋಗಲು ಒಪ್ಪಲಿಲ್ಲ ಏಕೆಂದರೆ ಶ್ರೀಕಂಠವರಿಗೆ ಕೃಷಿಯಲ್ಲಿ ಅಭಿರುಚಿ ಹೆಚ್ಚಿಗೆ ಇರುವುದನ್ನು ಗಮನಿಸಿದ್ದ ತಾಯಿಯವರು ಅವರಂತೆ ಒಪ್ಪಿಕೊಂಡರು.ಇಲ್ಲಿ ತಾಯಿಯವರು ಮಕ್ಕಳಿಗೆ ಯಾವುದೇ ರೀತಿಯಾದ ಒತ್ತಾಯದಿಂದ ಯಾವ ಶಿಕ್ಷಣವನ್ನು ಕೊಡಬಾರದು ಅನ್ನುವುದನ್ನು ಮನಗಂಡಿದ್ದರು ಅವರವರ ಅಭಿರುಚಿಯಂತೆ ಅವರವರ ಜೀವನದ ದಾರಿಯನ್ನು ತೊರಿ ಕೊಡಬೇಕು ಅನ್ನುವ ಅಭಿಪ್ರಾಯ ಹೊಂದಿದ್ದರು. ಇನ್ನು ಎರಡನೇ ಮಗ ಪ್ರಭುರಾಜ ಅತ್ಯಂತ ಮೃದು ಹೃದಯ, ಜಾಣ ಬುದ್ಧಿವಂತನು ಇವರಿಗೆ ದೊಡ್ಡ ಶಿಕ್ಷಣವನ್ನು ಕೊಡಿಸಬೇಕೆನ್ನುವ ಆಸೆ ತಾಯಿಯವರು ಹೊತ್ತಿದ್ದರು .ಅವರು ಕೂಡ ತಿರುಗಿ ಹೋಗಲು ಒಪ್ಪದಿದ್ದಾಗ ತಾಯಿಯವರು ನನಗಾಗಿ ನೀನು ಹೋಗಲೇ ಬೇಕು ಅನ್ನುವ ಪ್ರಮಾಣ ತೆಗೆದುಕೊಂಡರು… ಏಕೆಂದರೆ ಅವರಲ್ಲಿ ಮುಂದೆ ಕಲಿಯುವ ಯೋಗ್ಯತೆ ಇದೆ ಅನ್ನುವುದನ್ನು ಅರೆತಿದ್ದರು …..ಅನಿವಾರ್ಯವಾಗಿ ಪ್ರಭುರಾಜರಿಗೆ ಹೋಗ ಬೇಕಾಗಿ ಬಂತು. ಎರಡನೆ ಮಗ ಪ್ರಭುರಾಜ ಪ್ರಭುರಾಜ್ ಅವರ ಪ್ರತ್ನಿ ಪ್ರಮೀಳಾ (ಗದಗಿನ ಎಳೆಮಲಿ ಶಾಂತಪ್ಪನವರ ಮಗಳು) ತಾಯಿಯವರನ್ನು ಒಂದು ಕ್ಷಣವು ಬಿಟ್ಟಿರದಿದ್ದ ಪ್ರಭು ರಾಜರು ತಾಯಿಯ ನೆರಳಲ್ಲಿದವರು ಹಾಗೂ ಕರುಳಿನ ಸಂಬಂಧ ಗಾಡವಾಗಿತ್ತು. ತಾಯಿಯ ಮೇಲೆ ಅಪಾರ ಪ್ರೀತಿ ಹೊಂದಿದ ಅವರಿಗೆ ತಾಯಿಯಿಂದ ದೂರಿರುವುದು ಬಹಳ ಅಸಹನಿಯವಾಗಿತ್ತು ಹಿಂಸೆ ಕೊಡಲಾರಂಭಿಸಿತ್ತು …. ತಾಯಿಗೆ ಪತ್ರ ಬರೆದು ಹಿಂತಿರುಗಿ ಬರುವುದಾಗಿ ಒತ್ತಾಯಿಸುತ್ತಿದ್ದರು. ಮನೆಯಲ್ಲಿ ಇದ್ದಾಗ ಕೂಡ ಪ್ರಭುರಾಜರಿಗೆ ತಾಯಿಯವರು  ಅವನ ಸಮೀಪದಲ್ಲಿ ಇದ್ದರೆ ಮಾತ್ರ ಮನಸ್ಸಿಗೆ ಶಾಂತಿ….ತಾಯಿ ಕಣ್ಣೆದುರಿನಿಂದ ಸ್ವಲ್ಪ ದೂರವಾದರೂ ಅವನ ಹೃದಯ ಖಾಲಿಯಾಗಿಬಿಡುತ್ತಿತ್ತು. ಇನ್ನು ದೂರದ ಊರಲ್ಲಿ ಇದ್ದರೆ ಕೇಳಬೇಕೆ ಅವರ ಸ್ಥಿತಿ ಹೇಳಲಾಗಿತ್ತುಶಾಲೆಯಲ್ಲಿ ಕುಳಿತಿದ್ದರು ಪ್ರಭುರಾಜ್ ಮನಸ್ಸು ಅಲ್ಲಿ ನೆಲಸಲೇ ಇಲ್ಲ. ಸುತ್ತಲೂ ವಿದ್ಯಾರ್ಥಿಗಳು ಕುಳಿತು ಶಿಕ್ಷಕರು ಪಾಠ ಮಾಡುತ್ತಿದ್ದರೆ ಅವನ ಕಿವಿಯಲ್ಲಿ ಕೇಳಿಸುತ್ತಿದ್ದದ್ದು ತಾಯಿಯ ಧ್ವನಿಯೇ. ಊಟಕ್ಕೆ ಕೂತರೂ ತಾಯಿಯ ಕೈತುತ್ತಿನ ನೆನಪು, ರಾತ್ರಿ ಮಲಗಿದರೂ ತಾಯಿಯ ಮುಖವೇ ಕಣ್ಣಮುಂದೆ ತೇಲುತ್ತಿತ್ತು. ದಿನದಿಂದ ದಿನಕ್ಕೆ ತಾಯಿಯ ನೆನಪು ಅವನ ಮನಸ್ಸನ್ನು ಕಾಡಲಾರಂಭಿಸಿತು …..!!ಪ್ರಿಯ ಓದುಗರೆಇದೆಲ್ಲಾ ಏನೋ ನಾನು ಅತಿಶೋಯುಕ್ತಿಯಾಗಿ ಬರೆಯುತ್ತಿದ್ದೇನೆ ಅಂತ ಏನು ತಿಳಿಯಬೇಡಿ…. ಪ್ರಭು ರಾಜರ ತಾಯಿಯ ಮೇಲಿದ್ದ ಅಗಾಧವಾದ ಪ್ರೀತಿ ಯಾವದಕ್ಕೂ ಸಾಟಿಯಾಗದು….!!!!ಏನು ಹೇಳಿದರೂ ತಾಯಿಯು ಯಾವುದಕ್ಕೂ ಒಪ್ಪದಾದಾಗ ಕೊನೆಗೆ ತಾಳಲಾರದೆ ತಾಯಿಗೆ ಪತ್ರ ಬರೆದನು.“ಅವ್ವಾ… ನನಗೆ ಇಲ್ಲಿ ಇರಲು ಆಗುತ್ತಿಲ್ಲ. ನಿಮ್ಮನ್ನು ಬಿಟ್ಟು ಒಂದು ಕ್ಷಣವೂ ಇರಲಾಗುತ್ತಿಲ್ಲ. ನಾನು ಹಿಂದಿರುಗಿ ಬರುತ್ತೇನೆ. ಇಲ್ಲವಾದರೆ ಇಲ್ಲಿಯೇ ಗುಡ್ಡು ಪರ್ವತಗಳನ್ನು ಏರಿ, ಬಿದ್ದು ಸಾಯ್ತೀನಿ…” ಎಂದು ಕಣ್ಣೀರಿನಿಂದ ಬರೆದ ಆ ಮಾತುಗಳಲ್ಲಿ ಮಗನ ಅತಿಯಾದ ಮಮತೆ ಮತ್ತು ಅಧೈರ್ಯ ಎರಡೂ ತುಂಬಿಕೊಂಡಿದ್ದವು.ಆ ಪತ್ರ ಓದಿದ ತಾಯಿಯವರು ಕ್ಷಣಕಾಲ ಮೌನವಾಗಿದ್ದರು. ಮಗನ ಪ್ರೀತಿಯ ತೀವ್ರತೆ ಅವರಿಗೆ ಗೊತ್ತಿತ್ತು. ಆದರೆ ಜೀವನವೆಂದರೆ *ಕೇವಲ ಭಾವನೆಗಳಿಗೆ ತಲೆಬಾಗುವುದಲ್ಲ, ಧೈರ್ಯದಿಂದ ಎದುರಿಸುವ ಪಥ ಎನ್ನುವರು…… *ಕಣ್ಣೊಳಗಿನ ಕ‌ಸ  |ಸಣ್ಣಾಗಿದ್ದರೆ ಏನುಕಣ್ಣು ಚುಚ್ಚಿ ನೀರು ಸುರಿವುದು- ಮಾಯೆಯುಸಣ್ಣಲ್ಲ ಕಣ್ಣಿನ ವಿಸ್ತಾರ ||* ಈ ರೀತಿಯ ಮನಸ್ಸಿನ ಪ್ರವೃತ್ತಿಯು ಚಿಕ್ಕದಲ್ಲ ಅನ್ನುವುದು ಅರ್ಥವಾಯಿತು ಹೀಗಾಗಿ ತಾಯಿಗೆ ಕಠಿಣವಾದರೂ ಜೀವನದ ಪಾಠವಾಗುವ ಉತ್ತರ ಬರೆದರು… *ಬಾಳಿನಲ್ಲಿ ಕೆಟ್ಟ |ಕೀಳತನಕ್ಕೆ ಜಾಗಎಳ್ಳಿನ ಮನೆಯಷ್ಟು ಕೊಡದಿರು- ನಿನ್ನಲ್ಲಿಒಳ್ಳೆತನದಿ  ಗಟ್ಟಿತನವು ಬೆಳೆಯಲಿ||* ಎನ್ನುತ….. ಹೀಗೆ ಬರೆದರು“ನನ್ನ ಹೊಟ್ಟೆಯಲ್ಲಿ ಹುಟ್ಟಿದವನು ಇಂಥ ಹೇಡಿಯೇ.. ಇಂಥ ಅಧೈರ್ಯ ಹೇಗೆ ಬಂತು? ಜೀವನದಲ್ಲಿ ಸಾಧನೆ ಮಾಡಲು ದೂರದ ಊರಿಗೆ ಹೋದರೆ ಕಷ್ಟಗಳು ಬರುತ್ತವೆ, ಏಕಾಂತ ಕಾಡುತ್ತದೆ. ಅದಕ್ಕೆ ಓಡಿ ಮನೆಗೆ ಬರಬೇಕೆಂದರೆ ಬದುಕಿನಲ್ಲಿ ಏನನ್ನೂ ಸಾಧಿಸಲಾಗದು. ಧೈರ್ಯವಾಗಿ ನಿಂತು ಹೋರಾಡಬೇಕು.‘ನಾನು ಅಲ್ಲೇ ಬಿದ್ದು ಸಾಯ್ತೀನಿ’ ಅಂತ ಹೇಳುವಷ್ಟು ದುರ್ಬಲನಾಗಿ ನನ್ನ ಮಗ ಹುಟ್ಟಿಲ್ಲ.ಸಾಯಬೇಕೆಂದರೆ ಅಲ್ಲೇ ಸಾಯಿ… ಆದರೆ ಓಡಿ ಬರುವ ಹೇಡಿತನದ ಮಾತು ಬೇಡ!” ಎಂದು ಕಡಾ ಖಂಡಿತವಾಗಿ ಪತ್ರವನ್ನು ಬರೆದರು. *ಹಿರಿಯರಲ್ಲಿ ಶ್ರದ್ಧೆ |ಸ್ಥಿರವಾಗಿ ಇರಲಿಹರಕೆ ಕೊಡುವವರು ನಿನಗೆ -ಈ ಮಾತುಪರಕಿಸಿ ನೋಡು ಬಾಳಲಿ ||*ಎನ್ನುವಂತೆ ತಾಯಿಯವರ ಆ ಮಾತುಗಳು ಪ್ರಭುರಾಜ್ ಹೃದಯಕ್ಕೆ ಮಿಂಚಿನಂತೆ ತಾಕಿದವು. ಮೊದಲಿಗೆ ಅವರ ಕಣ್ಣು ತುಂಬಿ ಬಂದರೂ, ತಾಯಿಯವರ ಮಾತಿನೊಳಗಿನ ಕಠೋರ ಪ್ರೀತಿಯನ್ನು ಅವರು ಅರ್ಥ ಮಾಡಿಕೊಂಡರು.ಆ ದಿನದಿಂದ ತನ್ನ ಕಲಿಕೆಯಲ್ಲಿ ಶ್ರದ್ಧೆಯಿಂದ ಓದಲಾರಂಭಿಸಿದರು ಮುಂದೆ ಎಲ್  ಎಲ್ ಬಿ…. ಕಲಿತು ವಕೀಲರಾದರು.. ಮುಂದೆ ದೊಡ್ಡ ರಾಜಕಾರಣಿ ಕೂಡ ಆದರು…ಮಮಕಾರದ ತಾಯಿಯಾಗಿ ಜೀವನದ ಬಿರುಗಾಳಿಯನ್ನು ಎದುರಿಸಲು ಮಕ್ಕಳ ಮನಸ್ಸನ್ನು ಉಕ್ಕಿನಂತೆ ಗಟ್ಟಿಗೊಳಿಸುವ ಗುರು ಕೂಡಾ ಆಗಿದ್ದರು. ಹೀಗೆ ಅತ್ಯಂತ ಧೈರ್ಯದಿಂದ ಆಸ್ತಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ. ಸಿದ್ದರಾಮನ ಅಪ್ಪಟ ಭಕ್ತಿಯಾಗಿ,  ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಹೊಂದಿದ ತಾಯಿಯವರು ಬಹಳ ಸುಭದ್ದವಾಗಿ ಭಧ್ಧತೆಯಿಂದ ತಾಯಿತನದ ಜವಾಬ್ದಾರಿಯನ್ನು, ಆಸ್ತಿಯ ಮಾಲೀಕತ್ವತೆಯನು ಹಾಗೂ ಜನ ಸೇವಕಿಯಾಗಿ ಕೆಲಸ ನಿರ್ವಹಿಸಲಾರಂಭಿಸಿದರು…. ಬಹಳ ಜನರು “ಹೆಂಗಸು ಒಬ್ಬಳೇ ಇಷ್ಟು ದೊಡ್ಡ ಜವಾಬ್ದಾರಿ ನಿಭಾಯಿಸಲಾರಳು” ಎಂದು ಮಾತಾಡಿದವರಿಗೆ ಉತ್ತರವಾಗಿ  ತಮ್ಮ ಬದುಕನ್ನು ಬದುಕಿ ತೋರಿಸಿದರು.ಅವರ ಜೀವನ ಒಂದು ಅಳಲಿನ ಕಥೆಯನು ಒರಸಿ ಅದು ತಾಯಿತನದ ಮಹಾಕಾವ್ಯವನು ಬರೆದರು. *ದುಃಖ ದುಮ್ಮಾನಗಳು |ಸಿಕ್ಕಿ ಒದ್ದಾಡದಿರುಸುಖ ಬಂದಿತ್ತೆಂದು ಹಿಗ್ಗದಿರು -ಮನವೇಸುಖ ದುಃಖ ಅರ್ಪಿಸು ಶಿವನಡಿಗೆ ||*ಎಂದು ಬಾಳನು ಆರಂಭಿಸಿದರು. ಸವಿತಾ ದೇಶಮುಖ್

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-20 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಭಾಗ- 20*ಜಯದೇವಿತಾಯಿ ಜೀವನ ವೃತ್ತಾಂತ*ಪತಿಯನ್ನು ದಿನರಾತ್ರಿ ಕಾಳಜಿಯಿಂದ ನೋಡಿಕೊಳ್ಳುತ್ತ ಜಯದೇವಿ ತಾಯಿಯವರು   ತಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಮರೆತಿದ್ದರು. ತಮ್ಮ ದೇಹದ ನೋವನ್ನು ಕಡೆಗಣಿಸಿದ್ದರು. ಆ ಸಮಯದಲ್ಲಿ ಅವರಿಗೆ ಬೇನೆಯ ಅರಿವು ಆಗಲಿಲ್ಲ….  ನಂತರದ ದಿನಗಳಲ್ಲಿ ಒಳಗಿದ್ದ ನೋವುಗಳು ಒಂದೊಂದಾಗಿ ತಲೆ ಎತ್ತಲು ಶುರುಮಾಡಿದವು.ಆ ನಡುವೆ ಪತಿಯ ಸೇವೆ ಮಾಡುವಾಗ ಮೆಟ್ಟಲು ಏರಲು ಹೋಗಿ ಬಿದ್ದು ಬೆನ್ನಿನ ಎಲುಬಿಗೆ  ಗಂಭೀರ ಹಾನಿ ಮಾಡಿತ್ತು.  ಅವರು ತಾತ್ಕಾಲಿಕ ಚಿಕಿತ್ಸೆ ಪಡೆದು ಪತಿಗೆ ತನ್ನ ಆರೋಗ್ಯದ ಬಗ್ಗೆ ತಿಳಿಯದ ಹಾಗೆ ದಿನಗಳನ್ನು ಕಳೆಯುತ್ತಿದ್ದರು. ಪತಿಯ ಆರೈಕೆಯೇ ಅವರ ಪ್ರಪಂಚವಾಗಿತ್ತು. ಮೊದಲಿಗೆ ಅದು ಸಾಮಾನ್ಯವಾಗಿ ಕಂಡರೂ,  ದಿನದಿಂದ ದಿನಕ್ಕೆ ತೀವ್ರವಾಗತೊಡಗಿತು. ತಲೆ ಸುತ್ತುವುದು, ನಿಶಕ್ತತೆ ಹೆಚ್ಚಾಗುತ್ತಿರುವುದು ಕಂಡುಬಂದಿತು…ದೇಹದಲ್ಲಿ ವಿಚಿತ್ರವಾದ ದುರ್ಬಲತೆ,.. ನಿಂತುಕೊಳ್ಳಲು ಸಾಧ್ಯವಾಗದಷ್ಟು ನೋವು ಕೊಡತೊಡಗಿತು. .. ಕೊನೆಗೆ ಮಕ್ಕಳು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಪರಿಶೀಲಿಸಿದಾಗ, ಬಹಳ ದಿನಗಳಿಂದ ನಿರ್ಲಕ್ಷ್ಯಗೊಂಡ ಆರೋಗ್ಯ ಸಮಸ್ಯೆಗಳು ಗಂಭೀರ ಹಂತಕ್ಕೆ ಬಂದಿವೆ ಎಂದು ತಿಳಿದುಬಂತು.ಮುಂಬೈಯಲ್ಲಿರುವ ದೊಡ್ಡ ಆಸ್ಪತ್ರೆಗೆ ಸೇರಿಸಲಾಯಿತು .ಪರೀಕ್ಷೆಗಳ ನಂತರ ವೈದ್ಯರು ಗಂಭೀರವಾಗಿ ಹೇಳಿದರು…..“ಇದು ತುಂಬಾ ದಿನಗಳಿಂದ ಇದ್ದ ಸಮಸ್ಯೆ. ಈಗ ಆಪರೇಷನ್ ಮಾಡಲೇಬೇಕು. ಆದರೆ…”“ಆದರೆ” ಎಂಬ ಒಂದು ಪದವೇ ಮಕ್ಕಳ ಮನಸ್ಸನ್ನು ನಡುಗಿಸಿತು.ವೈದ್ಯರು ಮುಂದುವರೆದು ಹೇಳಿದರು….“ಆಪರೇಷನ್ ಮಾಡಿದರೂ ಅವರು ಮತ್ತೆ ಸಹಜವಾಗಿ ಓಡಾಡುತ್ತಾರೆ ಎಂಬ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ. ” ದೀರ್ಘಕಾಲದ ನಿರ್ಲಕ್ಷ್ಯ, ಮತ್ತು ಎಲುಬಿನ ಹಾನಿ….ಇವುಗಳ ಕಾರಣದಿಂದ ಫಲಿತಾಂಶ ಅನಿಶ್ಚಿತ.”ಎಂದರು.ಆ ಮಾತು ಕೇಳಿ ಮಕ್ಕಳ ಕಣ್ಣು ನೀರಾಯಿತು. ಆದರೆ ತಾಯಿಯವರು ಮಾತ್ರ ಶಾಂತವಾಗಿದ್ದರು.“ನನಗೆ ಭಯ ಇಲ್ಲ… ನಾನು ನನ್ನ ಜೀವನವನ್ನು ನನ್ನವರಿಗಾಗಿ ಬದುಕಿದ್ದೇನೆ. ಈಗ ಏನಾದರೂ ಆಗಲಿ, ನಾನು ಒಪ್ಪಿಕೊಂಡಿದ್ದೇನೆ…” ಎಂದು ವಿಶ್ವಾಸದಿಂದ ಹೇಳಿದರು.ಆಸ್ಪತ್ರೆಯ ಹಾಸಿಗೆಯಲ್ಲಿ ಇದ್ದಾಗಲೂ ಅವರು ತಮ್ಮ ನೋವನ್ನು ಹೇಳಿಕೊಳ್ಳಲಿಲ್ಲ. ಬದಲಾಗಿ ಮಕ್ಕಳ ಮುಖ ನೋಡುತ್ತಾ,“ನೀವು ಚೆನ್ನಾಗಿರಬೇಕು… ನಾನು ಹುಷಾರಾಗಿ ಬೇಗ ಬರುತ್ತೇನೆ…” ಅನ್ನುವ ಮನೋಬಲದ ಧೈರ್ಯ ತೋರುತ್ತಿದ್ದರು . ಆಪರೇಷನ್ ದಿನ ಬಂದಿತು. ವೈದ್ಯರು ತಮ್ಮ ಶ್ರೇಷ್ಠ ಪ್ರಯತ್ನ ಮಾಡಿದರು.ಐದು ಗಂಟೆಗಳ ಕಾಲ ನಡೆದ ಆ ಶಸ್ತ್ರಚಿಕಿತ್ಸೆ ಕುಟುಂಬದವರಿಗೆ ಯುಗದಷ್ಟು ಉದ್ದವಾಗಿತ್ತು.ಆಪರೇಷನ್ ನಂತರ, ಹಾಸಿಗೆಯಲ್ಲಿದ್ದರೂ ಅವರು ಮಕ್ಕಳಿಗೆ ಆಶೀರ್ವಾದ ಕೊಡುತ್ತಾ,“ನೀವು ಖುಷಿಯಾಗಿ ಇರಿ… ಅದೇ ನನ್ನ ಗೆಲುವು…”ಎಂದು ಹೇಳುತ್ತಿದ್ದರು.ತಾಯಿಯವರಿಗಾದ ಈ ಅನುಭವದಿಂದ ನಮ್ಮೆಲ್ಲರಿಗೂ  ಒಂದು ಮಾತನ್ನು ಹೇಳುತ್ತಿದ್ದರು…. “ನಮ್ಮ ಆರೋಗ್ಯವನ್ನು ಕಡೆಗಣಿಸುವ… ತ್ಯಾಗ ಒಂದು ದಿನ ನೋವಿನ ರೂಪದಲ್ಲಿ ಹಿಂದಿರುಗುತ್ತದೆ. ಹೀಗಾಗಿ ದೇಹದ ಆರೋಗ್ಯದತ್ತ ಯಾವಾಗಲೂ ನಾವು ಅಲಕ್ಷಿಸಬಾರದು ದೇಹದಲ್ಲಿ ಸ್ವಲ್ಪಾದರೂ ಏರುಪೇರಾದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಅದರ ಚಿಕಿತ್ಸೆಯನ್ನು ಪಡೆದುಕೊಳ್ಳಲೇಬೇಕು. ದೇವರು ದಯಪಾಲಿಸಿದ ಅತ್ಯ ಅಮೂಲ್ಯವಾದ ನಮ್ಮ ಆತ್ಮ- ನಮ್ಮ ದೇಹದ ಕಾಳಜಿಯನ್ನು ನಾವೇ ತೆಗೆದುಕೊಳ್ಳಲೇ ಬೇಕೆನ್ನುವ ವೈಚಾರಿಕತೆಯಿಂದ ತಿಳಿ ಹೇಳುತ್ತಿದ್ದರು. ಆಪರೇಷನ್ ಆದ ನಂತರದ ದಿನಗಳು….. ತಾಯಿಯವರ ಜೀವನದಲ್ಲಿ ಅತ್ಯಂತ ಕಠಿಣವಾದ ಅಧ್ಯಾಯವಾಗಿತ್ತು. ವೈದ್ಯರು ಸ್ಪಷ್ಟವಾಗಿ ಸೂಚಿಸಿದ್ದರು…“ಇನ್ನೂ ಕೆಲವು ವಾರಗಳು, ಬೋರಲಾಗಿಯೇ (ಹಾಸಿಗೆಯ ಮೇಲೆಯೇ) ಮಲಗಿರಬೇಕು… ಚಲನವಲನ ಬಹಳ ಕಡಿಮೆ ಇರಬೇಕು.”ದಿನವಿಡೀ ಓಡಾಡುತ್ತಿದ್ದ…ಎಲ್ಲರಿಗೂ ಆಧಾರವಾಗಿದ್ದ ತಾಯಿಯವರು ಈಗ ಹಾಸಿಗೆಯ ಮೇಲೆ  ಮಲಗಬೇಕಾದ ಪರಿಸ್ಥಿತಿ…ಅದು ದೇಹ- ಮನಸ್ಸಿಗೂ ದೊಡ್ಡ ಪರೀಕ್ಷೆ.ಬೆನ್ನು ನೋವು ಇನ್ನೂ ತೀವ್ರವಾಗಿತ್ತು. ಪ್ರತಿಯೊಂದು ತಿರುಗಾಟವೂ ನೋವಿನ ಅಲೆ ತರಿಸುತ್ತಿತ್ತು. ಆದರೆ ಆ ನೋವನ್ನೂ ಅವರು ತಮ್ಮ ಮುಖದಿ ತೋರಿಸಲಿಲ್ಲ.ಡಾಕ್ಟರ್‌ಗಳು, ನರ್ಸ್‌ಗಳು ಭೇಟಿ ನೀಡಿದಾಗ“ನೋವು ಹೇಗಿದೆ?” ಎಂದು ಕೇಳಿದರೆ,ಅವರು ತುಂಟ ನಗೆಯೊಂದಿಗೆ,“ಚೆನ್ನಾಗಿದೆ… ನಾನು ಬಲವಾಗಿದ್ದೇನೆ…” ಎಂದು ಉತ್ತರಿಸುತ್ತಿದ್ದರು. *ಗಟ್ಟಿಕೊಂಡಿದೆ ಮನ| ಬೆಟ್ಟದ ಎತ್ತರವಾಗಿಪೆಟ್ಟಿಗೆ ಮಣೆಯಾದ ನಿಶ್ಚಲ- ನಿಲ್ಲುವದುಕಟ್ಟು ಕಾವಲು ಇಲ್ಲದಲೆ||* ಎನ್ನುತ ತಾಯಿಯ ಮೊಗದ ನಗು …. ಅವರ ಮನೋಬಲದ ಪ್ರತಿಬಿಂಬವಾಗಿತ್ತು……!! ಒಳಗೆ ಎಷ್ಟೇ ನೋವು ಇದ್ದರೂ, ಹೊರಗೆ ಅವರು  ಪ್ರಸನ್ನ ಚಿತ್ತರಾಗಿ ಇರುತ್ತಿದ್ದರು.ಮಕ್ಕಳು ಅವರ ನೋವನ್ನು ಅರಿತುಕೊಳ್ಳುತ್ತಿದ್ದರು. ಕೆಲವೊಮ್ಮೆ ಕಣ್ಣೀರು ತಡೆಯಲಾಗದೆ ಹೊರಬಂದಾಗ, ತಾಯಿಯವರು ಅವರನ್ನು ಸಮಾಧಾನಪಡಿಸುತ್ತಿದ್ದರು..“ನೀವು ಅಳಬೇಡಿ… ನಾನು ಚೆನ್ನಾಗುತ್ತೇನೆ…”ಎನ್ನುವ ಸಕಾರಾತ್ಮಕತೆಯ ಭಾವನೆ  ಬಲವೇ ಅವರನ್ನು ಬೇಗನೆ ಚೇತರಗೊಳಿಸಿತು ಅನ್ನುತ್ತಿದ್ದರು. ದಿನಗಳು ಕಳೆದಂತೆ, ವೈದ್ಯರು ಕೂಡ ಆಶ್ಚರ್ಯಪಟ್ಟಿದರು.ಅವರ ಚೇತರಿಕೆಯ ವೇಗ, ಅವರ ಸ್ಥಿತಿಗಿಂತ ಹೆಚ್ಚು ಉತ್ತಮವಾಗಿತ್ತು.“ಇದು ನಮ್ಮ ಚಿಕಿತ್ಸೆಕಿಂತ… ಅವರ ಮನೋಬಲವೇ ಅವರನ್ನು ಗುಣಪಡಿಸಿದೆ,” ಎಂದು ವೈದ್ಯರು ಹೇಳಿದರು.ಹೌದು, ದೇಹದ ಗಾಯಗಳನ್ನು ಔಷಧಿಗಳು ಗುಣಪಡಿಸಿದಂತೆ….. ನಮ್ಮಲ್ಲಿ ಬಲವಾಗಿದ್ದ ಸಕಾರಾತ್ಮಕತೆಯೇ ಅದೇ ನಿಜವಾದ ಚಿಕಿತ್ಸಕ ಎನ್ನುವರು‌ ತಾಯಿಯವರು. *ಬಿದ್ದು ಹೋಗುವ| ದೇಹಕ್ಕೆ ಕಾದಿಡುವುದೆತಕ್ಕೆಸಾಧಿಸಬೇಕು ಅದರಿಂದ- ಮಾಕಾರ್ಯಶೋಧಿಸಬೇಕು ತನ್ನಿರುವ|| ಎನ್ನುವಂತೆ ತಮ್ಮ ಮುಂದಿನ ಕಾರ್ಯಕ್ಕೆ ಅಣೆಯಾಗಲು ಸಿದ್ದರಾದರು. ಸ್ವಲ್ಪ ಸ್ವಲ್ಪವಾಗಿ ಅವರು ಕುಳಿತುಕೊಳ್ಳಲು ಆರಂಭಿಸಿದರು… ನಂತರ ನಿಧಾನವಾಗಿ ಹೆಜ್ಜೆ ಇಡಲು ಪ್ರಯತ್ನಿಸಿದರು. ಪ್ರತಿಯೊಂದು ಹೆಜ್ಜೆಯಲ್ಲೂ ನೋವು ಇದ್ದರೂ, ಅವರ ಮುಖದಲ್ಲಿ ನಗು ಕಡಿಮೆಯಾಗಲಿಲ್ಲ.ಅವರ ಚೇತರಿಕೆ  ವೈದ್ಯಕೀಯ ಸಾಧನೆ ಜೊತೆಗೆಅವರ ಅಜೇಯ ಮನೋಬಲದ ಜಯವಾಗಿತ್ತು….!! ದೇಹ ದುರ್ಬಲವಾದರೂ, ಮನಸ್ಸು ಬಲವಾಗಿದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ…. ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟರು ತಾಯಿಯವರು ಅಂತ ವೈದ್ಯರು ಹೊಗಳುತ್ತಿದ್ದರು. *ಎಲೆ ಎಲೆ ಮಾನವ |ಏನಿದೆ ನಿನ್ನ ಕೈಯಲಿಕಾಲನ ಕೈವಾಡ ತಿಳಿದುಕೊ- ಮರ್ತ್ಯದಿಖಾಲಿ ಬಂದು ಖಾಲಿ ಹೋಗುವುದು||* ಅನ್ನುವಂತೆ ನನ್ನ ಕೈಯಲ್ಲಿ ಏನಿದೆ ಎಲ್ಲಾ ಸಿದ್ದರಾಮ ನಡೆಸಿದಂಗೆ …ಅವನ ಆಶೀರ್ವಾದದಿಂದಲೇ ನಾನು ಮತ್ತೆ ಎದ್ದು ಬದುಕಿ ಬಂದೆ ಅಂತ ಹೇಳುತಿದ್ದರು. ಇನ್ನು ಮಾಡುವ ಕೆಲಸ ನೂರಾರು ಇದೆ ಅದಕ್ಕೆ ಸಿದ್ದರಾಮನು ಮತ್ತೆ ನನಗೆ ಕರುಣಿಸಿದನು ಎನ್ನುವರು. ಎಲ್ಲ ನೋವುಗಳಿಗೂ ಗಟ್ಟಿಯಾಗಿ ನಿಂತ ದೇಹವು ಎಲ್ಲದಕ್ಕೂ ಅಣಿಯಾಗಿ ಆರೋಗ್ಯವಂತರಾಗಿ  ಸೊಲ್ಲಾಪುರಕ್ಕೆ ಬರುತ್ತಿದ್ದಂತೆ ಅವರಿಗೆ ಇನ್ನೊಂದು ಆಘಾತ ಕಾಯಿದಿತ್ತು. ಬರುವಾಗ ತರಲಿಲ್ಲ| ಬರಿದಾಗಿ ಹೋಗುವೆವೈರಿತನ ಬೆಳೆಸಿ ಎಷ್ಟು ದಿನ- ಬಾಳುವಿಪರರ ಹೃದಯ ಕಮರಿಸಿ || ಎನ್ನುವಂತೆ ಹೃದಯವನ್ನು ಕಮರಿಸಿದ ಗಂಡನ ತಮ್ಮ ಜಯದೇವಪ್ಪ…. ತಾಯಿಯವರ ಮೇಲೆ ಕೋರ್ಟಿನಲ್ಲಿ ಕೇಸು ದಾಖಲೆ ಮಾಡಿದ್ದ. *ದೂಶಿಸುತ ಅನ್ಯರ |ರೋಷ ಹಿಡಿದು ನೀನುದ್ವೇಷ ಮಾಡುವಿ ಏ ಮರಳೇ ಆಸ್ಥಿರ,ಆಯುಷ್ಯ ಪಡೆದು ಬಂದಿರುವೆ ||* ಅನ್ನುವಂತೆ ತಾಯಿಯವರು ಮಾಡಿದ ಮಹಾನ್ ಕಾರ್ಯಗಳಲಿ ಒಂದಾದ ಬಡ್ಡಿ ವ್ಯವಹಾರವನ್ನು ನಿಲ್ಲಿಸಿ, ಜನರಿಂದ ಕಿತ್ತುಕೊಂಡ ಆಸ್ತಿಗಳನ್ನು ತಿರುಗಿ ಕೊಟ್ಟಿದ್ದೇ ಒಂದು ದೊಡ್ಡ ಅಪರಾಧವಾಗಿತ್ತು ಜಗದೇಪ್ಪನಿಗೆ….. ಜಗದೇವಪ್ಪನು ಅಣ್ಣನ ಹೆಸರಿನಲ್ಲಿ ಇರುವ ಆಸ್ತಿಯ ಮೇಲೆ ಕಣ್ಣಿಟ್ಟಿದ್ದವನು…. ತಾಯಿಯವರು ಅಸಹಾಯಕರ ಆಸ್ತಿಯನ್ನು ಹಿಂದಿರುಗಿಸುವ ತ್ಯಾಗವನ್ನು…. ದೌರ್ಬಲ್ಯವೆಂದು ಭಾವಿಸಿದ. “ಅಣ್ಣನ ಮಕ್ಕಳು ಚಿಕ್ಕವರು… ಆಸ್ತಿಯ ಜವಾಬ್ದಾರಿ ನನ್ನದು ಆಗಬೇಕು…” ಎಂಬ ದುರಾಸೆ ಅವನ ಮನಸ್ಸನ್ನು ಆವರಿಸಿತು. ತಾಯಿಯವರು ಎಲ್ಲ ಆಸ್ತಿಯನ್ನು ಜನರಿಗೆ ಹಿಂತಿರುಗಿಸುತ್ತಿರುವುದನ್ನು ನೋಡಿ, ಅವನ ಅಹಂಕಾರಕ್ಕೆ ಹೊಡೆತ ಬಂತು. *ಅಹಂಕಾರ ತಲೆಗೇರಿ| ಮಂಕನಂತೆ ಮಾತಾಡಿಬೆಂಕಿ ಉಡಿಯಲ್ಲಿ ಕಟ್ಟಿದಂತೆ ನೋಡಯ್ಯಬೆಂಕಿ ಆರಿಸುವದೇ ಬಲು ಲೇಸು ||* ಅಹಂಕಾರದ ಬೆಂಕಿಯ ಹುಡಿಯಲ್ಲಿ ಕಟ್ಟಿಕೊಂಡ ಜಗದೇವಪ್ಪನು ಅತ್ತಿಗೆಯು ಇನ್ನೂ ಎಲ್ಲಾ ಆಸ್ತಿಗಳನ್ನು ಹೀಗೆ ದಾನ ಮಾಡಿ ಕರಗಿಸಿ ಬಿಡುವಳು ಅಂತ ದಾವೇ ಮಾಡಿದ.ಆ ಸುದ್ದಿ ಕೇಳಿದ ಕ್ಷಣದಲ್ಲಿ, ತಾಯಿಯವರ ಹೃದಯ ಕ್ಷಣಮಾತ್ರ ಕಲುಕಿತು… ಆದರೆ ಮುಖದಲ್ಲಿ ಅದೇ ಶಾಂತಿ.*ಕಾಲನ ಕೈವಾಡ |ಅಲಗಿನಂತೆ ಕ್ರೂರಬಲ್ಲವರಿಗಿಲ್ಲ ಇಲ್ಲಿ ಸುಖವಿಲ್ಲ- ಪಾಪದಚೆಲ್ಲಾಟಕೆ ತಾಣವಾಗಿದೆ *||ಎನ್ನುವಂತಿದ್ದ ಸನ್ನಿವೇಶವನ್ನು ಎದುರಿಸುತ “ನಾನು ತಪ್ಪೇನೂ ಮಾಡಿಲ್ಲ… ಜನರ ಹಕ್ಕನ್ನು ಅವರಿಗೆ ತಿರುಗಿ ಕೊಟ್ಟಿದ್ದೇನೆ…” ಎಂದು ವಾದಿಸಿದರು ಆ  ನಂಬಿಕೆ ಅವರಿಗೆ ಬಲ ನೀಡಿತು *ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾಪಂಜು ಹಿಡಿದು ನಿಜ ತತ್ವ -ಸಾರುವೇ  ಕೆಂಜಡೆಯವನ ಕೃಪೆಯಿಂದ ||*ಎಂದು ಎದೆಗುಂದದೆ  ಕೋರ್ಟಿಗೆ ಹೋದರು… ಕೋರ್ಟ್‌ನ ವಾತಾವರಣ….ತಾಯಿಯವರು ಮೊದಲ ಬಾರಿಗೆ ಅಲ್ಲಿ ಕಾಲಿಟ್ಟರು.ಒಂದು ಕಡೆ ಜಗದೇವಪ್ಪನ ದುರಾಸೆಯ ಧ್ವನಿ,ಇನ್ನೊಂದು ಕಡೆ ತಾಯಿಯವರ ಸತ್ಯದ ಧರ್ಮ. ಜಗದೇವಪ್ಪ ತನ್ನ ವಾದಗಳನ್ನು ಜೋರಾಗಿ ಮಂಡಿಸುತ್ತಿದ….“ಆಸ್ತಿ ನಮ್ಮ ಕುಟುಂಬದವರದು… ಇವರಿಗೆ ಹಕ್ಕಿಲ್ಲ…ಅದನ್ನು ಬೇಕಾದ ಹಾಗೆ ದಾನವನ್ನು ಮಾಡುತ್ತಿರುವುದಾಗಿಯು… ಹಾಗೆ ತವರು ಮನೆಯವರು ಆಸ್ತಿಯನ್ನು ಲಪಟಾಯಿಸಲು ಕುಳಿತುಕೊಂಡಿದ್ದಾರೆ ಅನ್ನುವ ವಾದ ಮಂಡಿಸಿದ.  ತಾಯಿಯವರು ತಲೆಯನ್ನು ತಗ್ಗಿಸದೆ, ಶಾಂತವಾಗಿ ನಿಂತಿದ್ದರು.ಅವರ ಕಣ್ಣುಗಳಲ್ಲಿ ನೋವು ಇದ್ದರೂ, ಅವುಗಳಲಿ ನೈತಿಕತೆಯ ಧೈರ್ಯ ಹೊಳೆಯುತ್ತಿತ್ತು.ಅವರು ಮಾತನಾಡಿದಾಗ, ಮಾತುಗಳು ಮೃದುವಾಗಿ ಅರ್ಥ ಗಂಭೀರವಾಗಿತ್ತು“ನಾವು ಜನರಿಂದ ಅನ್ಯಾಯವಾಗಿ ಪಡೆದಿದ್ದನ್ನು ನಾನು ಹಿಂತಿರುಗಿಸಿದೆ. ಅದರಲ್ಲಿ ತಪ್ಪೇನಿದೆ?”ಕೋರ್ಟ್‌ನಲ್ಲಿದ್ದವರ ಹೃದಯಕೆ ಆ ಮಾತುಗಳು ತಲುಪಿದವು. *ಗೊತ್ತಾಯಿತು ಲೋಕದ| ಗತ್ತುಗಾರಿಕೆಯಲ್ಲಬಿತ್ತುವರು ಮೋಸದ ಬೀಜವೂ ಜನಗಳುಸತ್ತು ಹೋಗುವರು ವಿಷವುಂಡು||*ಎನ್ನುವಂತೆಒಬ್ಬ ತಾಯಿ, ತನ್ನದೇ ಸೌಕರ್ಯವನ್ನು ಬಿಟ್ಟು, ಅನ್ಯಾಯದ ವಿರುದ್ಧ ನಿಂತಿದ್ದಳು…ದೇಹದ ನೋವು, ಆಪರೇಷನ್‌ನ ತೊಂದರೆ ಎಲ್ಲವನ್ನೂ ಮರೆತು, ತಾಯಿಯವರು ಧರ್ಮದ ಪರವಾಗಿ ನಿಂತ ದೃಶ್ಯ,ಎಲ್ಲರ ಮನಸ್ಸನ್ನೂ ಸ್ಪರ್ಶಿಸಿತು.ಜಗದೇವಪ್ಪನ ದುರಾಸೆ ಒಂದು ಕಡೆ,ತಾಯಿಯವರ ಧರ್ಮಬಲ ಇನ್ನೊಂದು ಕಡೆ… ಕೋರ್ಟ್‌ ಹಾಲ್‌ನಲಿ…ಎಲ್ಲರ ಕಣ್ಣುಗಳು ಒಂದೇ ದಿಕ್ಕಿನಲ್ಲಿ ನೆಟ್ಟಿದ್ದವು…ಅಲ್ಲಿ ಮೊದಲ ಬಾರಿಗೆ ನಿಂತಿದ್ದ ಜಯದೇವಿ ತಾಯಿಯವರ ಮೇಲೆ…ಚಿಕ್ಕ ವಯಸ್ಸಿನ ವಿಧವೆ ಬಿಳಿ ಸೀರೆ ತೊಟ್ಟು, ಕಪ್ಪು ಕೂದಲು,ನೊಸಲ ಮೇಲೆ ಬೆಳ್ಳಿಯ ಕಿರಣಗಳಂತೆ  ಹೊಳೆ ಹೊಳೆವ ಮೂರು ಬಿಟ್ಟು ವಿಭೂತಿ ಬೊಟ್ಟು,ಅತ್ಯಂತ ಸೌಮ್ಯ ದೈವಿ ಕಳೆ ಹೊಂದಿದ…  ಶಾಂತ ಮನಸ್ಸು  ಆ ನೋವನ್ನು ಮೀರಿತ್ತು……ಅವರು ತ್ಯಾಗದ ಪ್ರತಿಮೆಯಂತೆ ನಿಂತಸಂಗಮರಮರಿಯ ಮೂರ್ತಿಯಂತೆ ಕಂಡರು……ನ್ಯಾಯವಾದಿಯು ತಾಯಿಯವರನ್ನು ದೀರ್ಘವಾಗಿ ಒಮ್ಮೆ ನೋಡಿ “ಏನಪ್ಪಾ ನಿನ್ನ ಸಮಸ್ಯೆ???”ಅಂತ ಜಗದೇವಪ್ಪನ ತತ್ತಿರುವಿ ಕೇಳದರು… ಜಗದೇವಪ್ಪ ತನ್ನ ಮಾತನ್ನು ಮಂಡಿಸಿದ.ಜಯದೇವಿ ತಾಯಿಯವರ ಕಣ್ಣು ನಿಧಾನವಾಗಿ ತಿರುಗಿ ಜಗದೇವಪ್ಪನ ಮೇಲೆ ಬಿದ್ದವು…ಆ ಕ್ಷಣ…ತಾಯಿಯ ಕಣ್ಣಲ್ಲಿ ಕೋಪ ಇರಲಿಲ್ಲ…ದ್ವೇಷ ಇರಲಿಲ್ಲ…ಇದ್ದದ್ದು ಮಾತ್ರ ಮಮತೆ…ತಮ್ಮ ಮಗನಂತೆ ನೋಡಿದ ಆ ವ್ಯಕ್ತಿ…ಇಂದು ಕೋರ್ಟ್‌ನಲ್ಲಿ ಎದುರಾಳಿ…!!!ಜಗದೇವಪ್ಪನನ್ನು ನೋಡಿ ಕನಿಕರ ಪಟ್ಟರು. ಜಗದೇವಪ್ಪ ತಲೆತಗ್ಗಿಸಿದ್ದ…ಆ ಕಣ್ಣೋಟವನ್ನು ಎದುರಿಸಲು ಅವನಿಗೆ ಧೈರ್ಯ ಇರಲಿಲ್ಲ… ನ್ಯಾಯವಾದಿಯು ತಿರುಗಿ ತಾಯಿ ಅವರಿಗೆ ಯಾವ ಪ್ರಶ್ನೆಯನ್ನು ಕೇಳದೆ” ಸರಿ ಹಾಗಿದ್ದರೆ ಇವರು ಯಾರು ??”ಅಂತ ಜಗದೇವಪ್ಪನಿಗೆ ಕೇಳಿದರು “ಇವರೇ ನನ್ನ ಅಣ್ಣನ ಹೆಂಡತಿ ಇವರೇ” ಅಂತ ಹೇಳಿದ .”ಆತುರ ಆತುರದಲಿ*ಹಾಗಿದ್ದರೆ ಅಣ್ಣನ ಹೆಂಡತಿ ಎಂದರೆ ತಾಯಿಯ ಸಮಾನ ಹೀಗಾಗಿ ಅವರಿಗೆ ನಿನ್ನ ಆಸ್ತಿಯನ್ನೆಲ್ಲಒಪ್ಪಿಸಿಬಿಡು….. ನಿನ್ನ ಮಕ್ಕಳು ದೊಡ್ಡವರಾದ ಮೇಲೆ ಅವರು ಎಲ್ಲವನ್ನು ನಿನಗೆ ಜೋಪಾನವಾಗಿ ಇಟ್ಟುಕೊಂಡು ಒಪ್ಪಿಸುತ್ತಾರೆ “ಅಂತ  ತೀರ್ಪನ್ನು ಕೊಟ್ಟು …..ಮರು ಮಾತನಾಡದೆ ನ್ಯಾಯವಾದಿಗಳು ಅಲ್ಲಿಂದ  ಎದ್ದು ಹೊರಟು ಹೋದರು.ಕೋರ್ಟ್‌ನಲಿ  ಕ್ಷಣಕಾಲ ಎಲ್ಲರೂ ಬೆರಗಾದರು…ಜಗದೇವಪ್ಪ ನಿಬ್ಬೆರಗಾಗಿ ಮಾತಿಲ್ಲದೆ ನಿಂತುಬಿಟ್ಟ…ಆದರೆ ತಾಯಿಯವರು…ಹಿಂದಿರುಗಿ ನೋಡಲಿಲ್ಲ…ಅವರ ಹೆಜ್ಜೆಗಳು ನಿಧಾನವಾಗಿ ಹೊರಗೆ ನಡೆದವು…ಅದು ಜಯದ ಹೆಜ್ಜೆಗಳಾಗಿದ್ದವು…..“ಸ್ವಾರ್ಥದ ಮೇಲೆ ಮಾನವೀಯತೆಯ ಜಯ”… *ಹೇಸಿ ಈ  ಲೌಕಿಕದ| ಆಸೆಯು ಎನಿತಿಲ್ಲಈಶ ಸಿದ್ದರಾಮನ ಚಿಂತನೆ -ನನಗೆಹೊಸ ಬೆಳಕು ನೀಡಿ ಸಲಹುವದು ||* ಲೌಕಿಕದ ಆಸೆಗಳಿಗೆ ಹೇಸಿದ ತಾಯಿಯವರು ಸಿದ್ದರಾಮನ ಚಿಂತೆಯಲ್ಲಿ ಅವರಿಗೆ ಯಾವ ಸೋಲು ಗೆಲುವಿಗೆ ಪ್ರಾಮುಖ್ಯತೆ ಇರುತ್ತಿರಲಿಲ್ಲ…. *ಈ ಸನ್ನಿವೇಶದಲ್ಲಿ ತಾಯಿಯವರು ಸೋಲಲಿಲ್ಲ“ನ್ಯಾಯಕ್ಕೆ ಜೀವ ತುಂಬಿದರು.(ಮುಂದುವರೆಯುವುದು) ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-19 ಸವಿತಾದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಭಾಗ-೧೯*ಜಯದೇವಿ ತಾಯಿಯವರ ಜೀವನ ವೃತ್ತಾಂತ*(ಅಸಹಾಯಕರು ಒತ್ತಿಟ್ಟ ಆಸ್ತಿ ಹಿಂದಿರುವಿಕೆ) *ಅಮರವಾಗಲು | ಭ್ರಮೆಯು ನಿಕ್ಕರಿಸಿಸಮರ ಯೋಗ ದೊರೆಬೇಕು -ಮನದತಾಮಸಾದಿ ಗುಣ ಅಳಿಬೇಕು||* ಈ ಸಾಲುಗಳು ತುಂಬಾ ಆಳವಾದ ತತ್ವವನ್ನು ಒಳಗೊಂಡಿವೆ. ಜಯದೇವಿ ತಾಯಿಯವರ ಚಿಂತನೆ ಎಷ್ಟು ಶುದ್ಧ, ಎಷ್ಟು ಜೀವನಾನುಭವದಿಂದ ಬಂದದ್ದು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.“ಅಮರವಾಗಲು ಭ್ರಮೆಯು ನಿಕ್ಕರಿಸಿ” “ದೈಹಿಕವಾಗಿ ಅಮರವಾಗುವದು ಒಬ್ಬರ ಹೆಸರು, ಕಾರ್ಯ, ಮೌಲ್ಯಗಳು ಕಾಲಾಂತರಕ್ಕೂ ಉಳಿಯಬೇಕು ಎಂಬ ಅರ್ಥ. “ಭ್ರಮೆಯು ನಿಕ್ಕರಿಸಿ” ….. ಮನಸ್ಸಿನಲ್ಲಿರುವ ಅಜ್ಞಾನ, ಮಿಥ್ಯಾಭಾವನೆಗಳು,  ಜೀವನದಲ್ಲಿ ನಾವು ಕಾಣುವ ಬಹುತೇಕ ದುಃಖಗಳಿಗೆ ಕಾರಣ ನಮ್ಮ ಭ್ರಮೆಗಳೇ—ಅಹಂಕಾರ, ಆಸೆ, ಮಮಕಾರ. “ಸಮರ ಯೋಗ ದೊರೆಬೇಕು – ಮನದ”ಇಲ್ಲಿ “ಸಮರ”  ಇದು ಹೊರಗಿನ ಯುಧ್ಧ ಹಾಗೂ ನಮ್ಮೊಳಗಿನ ಯುದ್ಧ.  ವಿರುದ್ಧ ನಡೆಯುವ ಆಂತರಿಕ ಸಮರ.“ಯೋಗ ದೊರೆಬೇಕು…. ಸಮರದಲ್ಲಿ ಜಯ ಸಾಧಿಸಲು ಮನಸ್ಸು ಶಾಂತವಾಗಿರಬೇಕು, ಏಕಾಗ್ರವಾಗಿರಬೇಕು. “ತಾಮಸಾದಿ ಗುಣ ಅಳಿಬೇಕು”ತಾಮಸ ಗುಣ  ಬೇರೆಯವರಿಗೆ ನೋವು ಕೊಡುವುದು ಅವರ ಆಸ್ತಿಯ ಹಕ್ಕು ಪಡೆಯುವುದು ಇವು ನಮ್ಮನ್ನು ಕೆಳಕ್ಕೆಳೆಯುವ ಕೆಟ್ಟ ಗುಣಗಳನ್ನು ಸಂಪೂರ್ಣವಾಗಿ ನಾಶ ಮಾಡಬೇಕು. ಆಗ ಮಾತ್ರ ಮನಸ್ಸು ಶುದ್ಧವಾಗುತ್ತದೆ.ತನ್ನೊಳಗಿನ ಕೆಟ್ಟ ಗುಣಗಳ ವಿರುದ್ಧ ಹೋರಾಡಿ, ಶುದ್ಧ ಮನಸ್ಸಿನಿಂದ ಬದುಕಬೇಕು. ಇದೇ ನಿಜವಾದ “ಅಮರತ್ವ”ದ ಮಾರ್ಗ.ಇದು  ಕವಿತೆಯ ಸಾಲುಗಳು ಬದುಕಿಗೆ ದಾರಿ ತೋರಿಸುವ ಮಾರ್ಗಗಳು ಹಾಗೆ‌ ಜಯದೇವಿತಾಯಿಯವರು  ಬದುಕಿದರು. ೩೬ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಳ್ಳುವುದು ಯಾವ ಸ್ತ್ರೀಯಿಗೂ ಜೀವನದ ದೊಡ್ಡ ಆಘಾತದ ನೋವನ್ನು ಅನುಭವಿಸಿದ ಜಯದೇವಿ ತಾಯಿಯವರ ಮನಸ್ಸಿನಾಳದಲ್ಲಿ ತುಂಬಿದ ಶೋಕವು ನಂದಿ ಹೋಗುವ ಮುನ್ನವೇ….. ಅನೇಕ ಕಾರ್ಯಗಳನ್ನು ಕೈಕೊಂಡರು…..ಅವರು ಶಾಂತರಾಗಿ ಕುಳಿತುಕೊಳ್ಳಲಿಲ್ಲ… ಜೀವನ ಇನ್ನೂ ಅನೇಕ ಹೊಣೆಗಾರಿಕೆಗಳನ್ನು ತಮ್ಮ ಕೈಯಲ್ಲಿ ಇಟ್ಟಿದೆ ಎಂಬ ಅರಿವು ಅವರಿಗೆ ಬಹಳ ಸ್ಪಷ್ಟವಾಗಿತ್ತು.ಪತಿ ಬಿಟ್ಟಿದ್ದ ಆಸ್ತಿಪಾಸ್ತಿಗಳು, ಗರ್ಭಶ್ರೀಮಂತಿಕೆ, ಹಾಗೂ ಬಡ್ಡಿ ವ್ಯವಹಾರವು ಮುಖ್ಯವಾಗಿ ಮಕ್ಕಳ ಲಾಲನೆ ಪಾಲನೆ ಬಹು ದೊಡ್ಡ ಹೊಣೆಗಾರಿಕೆಯಾಗಿ ಅವರ ಮುಂದೆ ನಿಂತವು.  ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ದಿಕ್ಕುತೋಚದೆ ಇತರರ ಮೇಲೆ ಅವಲಂಬಿತರಾಗತಾರೆ. ಆದರೆ ಜಯದೇವಿ ತಾಯಿಯವರು ಅದಕ್ಕೆ ವಿರುದ್ಧವಾಗಿ ಸ್ವತಃ ಮುಂದೆ ಬಂದರು. *ಚಿಂತಿಸುವೆಕೆ ನೀ |ಶಾಂತವಾಗಿರುವ ಮನವೇಎಂಥ ವಿಪತ್ತು ಬಂದರರೂ- ಹೆದರದೆಧೈರ್ಯದಿ ಅಡಿ ಇಡು ಮುಂದೆ||* ಅಂತ ಹೇಳುತಅವರು ಮನೆಮಠದ ಆರ್ಥಿಕ ಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲು ಪ್ರಾರಂಭಿಸಿದರು.ಅದರಿಂದಲೇ ಅವರು ಒಂದು ಮಹತ್ವದ ನಿರ್ಧಾರ ಕೈಗೊಂಡರು…… ಭರಾಟೆಯಲ್ಲಿ ನಡೆಯುತ್ತಿದ್ದ ಬಡ್ಡಿ ವ್ಯವಹಾರದಿಂದ ಬಂದ ಹಣ ಮತ್ತೊಬ್ಬರ ಕಣ್ಣೀರಿಗೆ ಕಷ್ಟಕ್ಕೆ ಕಾರಣವಾಗುತ್ತಿರುವುದನ್ನು ಗ್ರಹಿಸಿದರು. ತಾಯಿಯವರು “ಭ್ರಮೆಯು ನಿಕ್ಕರಿಸಿ, ತಾಮಸಾದಿ ಗುಣ ಅಳಿಬೇಕು” ಎಂದು ಬರೆದ್ದಂತೆ ಬದುಕಿನಲ್ಲಿ ನಡೆದು ತೋರಿಸಿದ ಸತ್ಯ.  ಬಡ್ಡಿ ವ್ಯವಹಾರವನ್ನು ನೋಡಿದಾಗ ಅವರ ಮನಸ್ಸು ಒಳಗೆ ಒಳಗೆ ಕದಡಿತು. ಈ ವ್ಯವಹಾರವನ್ನು ಪೂರ್ತಿಯಾಗಿ ಇಲ್ಲಸಬೇಕು….. ಅಂತ ಪತಿಯಲ್ಲಿ ಬಹಳಷ್ಟು ಸಲ ಕೇಳಿಕೊಂಡಿದ್ದರು ಆದರೆ ಅದರಿಂದ ಹಿಂದೆತಿರುಗುವದು ಅಸಾಧ್ಯವಾದ ಮಾತು ಎನ್ನುತಿದ್ದರು ಪತಿ ಅದರಿಂದಾಗುವ ನಷ್ಟಗಳನ್ನು ಬಹಳಷ್ಟು ಸಲ ಹೇಳಿದ್ದರು.  ಶ್ರೀಮಂತಿಕೆ ಹೆಚ್ಚಿದಂತೆಲ್ಲ ಬಡ್ಡಿಯ ವ್ಯವಹಾರವು ತನ್ನಿಂದತಾನಾಗಿ ಕುದುರಿಕೊಳ್ಳುವುದು ಸಹಜವಾಗಿತ್ತು….. ಇಂತ ಪರಿಸ್ಥಿತಿಯಲ್ಲಿ ಹಿಂದಿರುಗುವುದು ಬಹಳ ಕಠಿಣವಾಗಿರುತ್ತದೆ…. ಏಕೆಂದರೆ ಬಡ್ಡಿಯ ವ್ಯವಹಾರಗಳನ್ನು ನೋಡಿಕೊಂಡು ಹೋಗಲೇ 14 ಮುನಿಮರನ್ನು ಅವರು ನೇಮಿಸಿದ್ದರು….. ಅಂದರೆ ನಾವು ಊಹಿಸಬಹುದು ಅದು ಎಂಥ ದೊಡ್ಡ ಬಡ್ಡಿ ವಹಿವಾಟು ಅಲ್ಲಿ ನಡೆಯುತ್ತಿತ್ತು ಅನ್ನುವುದನ್ನು ಗಮನಿಸಬಹುದಾಗಿದೆ .ಒಮ್ಮಿಂದ ಒಮ್ಮಲೆ  ವ್ಯವಹಾರವನ್ನು ಸ್ಥಗಿತಗೊಳಿಸಲಾಗದಂತ ಸ್ಥಿತಿ ಇತ್ತು ಅನ್ನುವುದು ಖಚಿತವಾಗಿತು. *ಬಾರೆ ಇಚ್ಛಾಶಕ್ತಿ |ತೋರೆ  ಕ್ರಿಯಾ ಶಕ್ತಿಬೀರೆ ಮಂತ್ರಶಕ್ತಿ ಪ್ರಭಾವ -ಆದಿಶಕ್ತಿಪರಾಶಕ್ತಿ ನೀನು ದಾರಿ ತೋರೆ||* ಅಂತ ಜಯದೇವಿ ತಾಯಿಯವರು ತನ್ನ  ಇಚ್ಛಾಶಕ್ತಿ- ಆತ್ಮ ಶಕ್ತಿಯನ್ನೇ ಆದಿಶಕ್ತಿಯನ್ನಾಗಿ ಮಾಡಿಕೊಂಡು  ಕ್ಷಣಾರ್ಧದಲ್ಲಿ  ಅವರು ಒಂದು ದೊಡ್ಡ ನಿರ್ಧಾರ ಕೈಗೊಂಡರು….ಮನೆಯಲ್ಲಿದ್ದ ಬಡ್ಡಿ ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ.ಒಂದು ದಿನ ಎಲ್ಲ ಮುನಿಮರನ್ನು ಕರೆಯಿಸಿ ಒಂದು ಇರ್ತ್ಯಾರ್ಥಕ್ಕೆ ಬಂದರು ….ಅಡವಿಇಟ್ಟ ಜನರನೇಲ್ಲ  ಕರೆಸಿಕೊಂಡರು.ಯಾರು ಯಾರಿಗೆ ಎಷ್ಟು ಸಾಲವಿದೆ ಎಂಬುದನ್ನು ಲೆಕ್ಕ ಹಾಕಿ, ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕೂಡಿ ಮಾತನಾಡಿದರು.“ನೀವು ಕೊಟ್ಟಿದ್ದು ನಿಮ್ಮದೇ…ಇದು ನಿಮ್ಮ ಹಕ್ಕು… ತೆಗೆದುಕೊಳ್ಳಿ…”ಎಂದು ಹೇಳುತ್ತಾ, ಅವರ  ಆಸ್ತಿಯ ಕಾಗದ ಪತ್ರಗಳನ್ನು, ಅಡಿವೆ ಇಟ್ಟ ವಿವಿಧ ರೀತಿಯ ಬಂಗಾರದ ಒಡೆಯ ,ಬೆಳ್ಳಿಯ ಸಾಮಗ್ರಿಗಳು, ತಾಮ್ರದ ಹಿತ್ತಾಳೆಯ ಅಡುಗೆ ಮಾಡುವ ದೊಡ್ಡ ದೊಡ್ಡ ಪಾತ್ರೆಗಳು ಕೂಡ ಇರುತ್ತಿದ್ದವು….ದನ ಕರುಗಳನ್ನು   ತಿರುಗಿ ನೀಡಲು ಪ್ರಾರಂಭಿಸಿದರು. ಎಷ್ಟೋ ಜನರು ಅಮ್ಮ ನಮಗೆ ತಿರುಗಿಕೊಡಲು ನಮ್ಮತ್ರ ದುಡ್ಡ ಇಲ್ಲ ಅಂತ ಕಣ್ಣೀರು ಕರೆದರು… ” ಸರಿ ನಿಮಗೆ ಆದಾಗ ಸಾಧ್ಯವಾದಾಗ ತಂದು ಕೊಡಿ”  ಅಂತ ಹೇಳಿ  ಅವರ ಆಸ್ತಿ ತಿರುಗಿಸಿದರು.ಆ ಕ್ಷಣ ಕಣ್ಣುಗಳು ನಂಬಲಾರದ ಆಶ್ಚರ್ಯ,  ಕೃತಜ್ಞತೆಯ ವಾತಾವರಣ ಹರಡಿತು ಕೆಲವರು ಕಣ್ಣೀರಿನಿಂದ‌ ತಾಯಿಯವರ ಪಾದವನ್ನು ತೊಳೆದರೂ… ಹಿಂತಿರುಗಿಸುವ ಕಾರ್ಯವ ಒಂದು ಮನೆತನದ ಧರ್ಮದ ಪುನರ್ಜನ್ಮವಾಗಿತ್ತು. ಈ ಕಾರ್ಯದಿಂದ ತಾಯಿಯವರು ತಮ್ಮೊಳಗಿನ “ತಾಮಸ”ವನ್ನು ಅಳಿಸಿ, “ಸಮರ ಯೋಗ”ವನ್ನು ಸಾಧಿಸಿದವರಾಗಿ ಬೆಳಗಿದರು.ಅವರು ಹೊರಗಿನ ಯುದ್ಧಗಳೊಂದಿಗೆ, ಒಳಗಿನ ಯುದ್ಧವನ್ನು ಗೆದ್ದರು. ಇದೇ ಕಾರಣಕ್ಕೆ ಅವರು ಅಮರರಾದರು…ಜನರ ಮನಸ್ಸಿನಲ್ಲಿ, ಆಶೀರ್ವಾದಗಳಲ್ಲಿ, ಮತ್ತು ಅವರ ಮಾಡಿದ ಸತ್ಕಾರ್ಯಗಳಲ್ಲಿ….. ಅಜರಾಮರರಾದರು…!!! *ಗಳಿಸಿದ ಧನವನು | ಉಳಿಸಬೇಕಾದರೆ ಬಳಿಸಬೇಕಾಗುತ್ತದೆ ಎಚ್ಚರ- ಅಣ್ಣಯ್ಯ ಕಳೆಯಬೇಕಾದ ಅನಾಚಾರದಿ ||* ಹೌದು ಗಳಿಸಿದ ಧನವನ್ನು ಉಳಿಸಬೇಕಾದರೆ ಬಹಳ ಎಚ್ಚರದಿಂದ  ಸಆಚಾರದಿಂದ ಉಳಿಸಿ ಬೆಳೆಸಿಕೊಂಡು ಹೋಗಬೇಕು ಅಂತ ಹೇಳುತ್ತಿದ್ದರು. ಅನಾಚಾರದಿಂದ ಗಳಿಸಿದ ದುಡ್ಡು ನಮ್ಮ ಕೈಗೆ ಎಟುಕದು ಅದು ಮುಂದಿನ ಪೀಳಿಗೆಗೆ ಅನಾಹುತ ಮಾಡುವುದು ಖಚಿತ ಅನ್ನೋದನ್ನ ಯಾವಾಗಲೂ ಜಯದೇವಿ ತಾಯಿಯವರು ಹೇಳುತ್ತಿದ್ದರು. ತಾಯಿಯವರು ಅದನ್ನು ನೆನಪಿಸಿಕೊಂಡಾಗ ಅವರ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿತ್ತು…“ನಮ್ಮ ಮನೆಯ ಹಿಂದಿನ ದಿನಗಳು ತುಂಬಾ ಐಶ್ವರ್ಯವಾಗಿದ್ದವು… ಆದರೆ ಆ ಐಶ್ವರ್ಯಕ್ಕೆ ನೆರಳಾಗಿ ನಿಂತದ್ದು ಬಡ್ಡಿ ವ್ಯಾಪಾರ,” ಎಂದು ಅವರು ನಿಧಾನವಾಗಿ ಹೇಳುತ್ತಿದ್ದರು. ಅವರ ಗಂಡನ ತಂದೆ, ಅಂದರೆ ಮನೆಯ ಅಜ್ಜ, ಬಡ್ಡಿ ವ್ಯಾಪಾರದಲ್ಲಿ ದೊಡ್ಡ ಹೆಸರು ಮಾಡಿದ್ದರು.ಆದರೆ ಅದು  … ಕಠೋರವಾದ   ಮಾರ್ಗವಾಗಿತ್ತು ಧಡೂತಿ ಜನರನ್ನು ಇಟ್ಟುಕೊಂಡು ಬಡವರ ಮನೆ ಬಾಗಿಲು ತಟ್ಟಿಸುತ್ತಿದ್ದರು. ಸಾಲ ತೀರಿಸಲಾಗದವರ ಕಣ್ಣೀರನ್ನು ಲೆಕ್ಕಿಸದೇ, ಅವರ ಆಸ್ತಿಪಾಸ್ತಿಯನ್ನು ಕಸಿದುಕೊಳ್ಳುತ್ತಿದ್ದರು. ಬಡವರ ಅಳಲು, ತಾಯಿಯರ ನೋವು, ಮಕ್ಕಳ ಭಯದ ನೆರಳು ನಮ್ಮಮನೆಯ ಗೋಡೆಗಳಲ್ಲಿ  ಉಳಿದುಕೊಂಡಿದ್ದವೆಂದು…. ತಾಯಿಯವರು ಹೇಳುತ್ತಿದ್ದರು.“ಅವರು ತಮ್ಮ ಆಸ್ತಿಗಳನ್ನು ಬಿಟ್ಟು ಕೊಡುವಾಗ ಎಷ್ಟೊಂದು ಅಳಲುಗಳ ಶಾಪ ಇತ್ತರೋ ಏನೋ…”ಕಾಲ ಕಳೆಯಿತು… …..ಅಜ್ಜ ಕೂಡಿಟ್ಟ ಸಂಪತ್ತಿನ ವೈಭವದಲ್ಲಿ ನಾವೆಲ್ಲ ಇರಬಹುದು. ಆದರೆ ಆ ಪಾಪದ ಶಾಪ ಮನೆಯ ಮೇಲೆ ಹಬ್ಬುತ್ತಲೇ ಹೋಯಿತು.ಅದರ ಪರಿಣಾಮವಾಗಿ ನನ್ನ ಪತಿ ಹಾಗೂ ಅತ್ತೆಯಂದಿರು ಅನುಭವಿಸಬೇಕಾಯಿತು.“ನನ್ನ ಗಂಡ ಒಳ್ಳೆಯ ಮನಸ್ಸಿನವರು… ಯಾರಿಗೂ ನೋವು ಕೊಡದವರು…” ಎಂದು ಹೇಳುವಾಗ ತಾಯಿಯವರ ಧ್ವನಿ ನಡುಗುತ್ತಿತ್ತು.“ಆದರೂ… ಅವರ ಜೀವನ ಬಹಳ ಚಿಕ್ಕದಾಯಿತು… ಬೇಗನೇ ನನ್ನನ್ನು ಬಿಟ್ಟು ಹೋದರು…”ಅವರು ಹೇಳುತ್ತಿದ್ದಾಗ,  ಆ ಸಾವು …  ಕುಟುಂಬದ ಮೇಲೆ ಬಿದ್ದ ಪಾಪದ ಪ್ರತಿಫಲ ಎಂಬ ಭಾವನೆ ಮೂಡುತ್ತಿತ್ತು. “ಬೇರೆಯವರ ಕಣ್ಣೀರಿಂದ ಕಟ್ಟಿದ ಮನೆ, ಒಂದು ದಿನ ತನ್ನವರ ಕಣ್ಣೀರಿಂದಲೇ ಕರಗುತ್ತದೆ…”ಅವರ ಮಾತಿನಲ್ಲಿ ನೋವು ಇತ್ತು… ಆದರೆ ಅದರಲ್ಲಿ ಒಂದು ದೊಡ್ಡ ಪಾಠವೂ ಇತ್ತುಅನ್ಯಾಯದಿಂದ ಬಂದ ಹಣ ಸುಖ ಕೊಡದು…ಪಾಪದ ಬೀಜ ಯಾವಾಗಲಾದರೂ ಮೊಳೆಯುತ್ತದೆ… ಮತ್ತು ಅದರ ಫಲವನ್ನು ನಿರಪರಾಧಿಗಳೂ ಅನುಭವಿಸಬೇಕಾಗುತ್ತದೆ…ಎನ್ನುವ ಸತ್ಯವನು ಅನೇಕ ಉದಾಹರಣೆಗಳೊಂದಿಗೆ ಹೇಳುತ್ತಿದ್ದರು. ಅಂತಹ ಉದಾಹರಣೆಗಳಲ್ಲಿ ಒಂದು ಉದಾಹರಣೆಯನ್ನು ತಾಯಿಯವರು ಮೇಲಿಂದ ಮೇಲೆ ಹೇಳುತ್ತಿದ್ದರುಅಜ್ಜ ಬಹಳ ಕಾಯಿಲೆ ಇದ್ದಾಗ ಜ್ವರ ಹೆಚ್ಚಾಗಿ ಅವರು  ತಾಯಿಯವರನ್ನು ಕರೆದು“ಅಲ್ಲಿ ಹೊರಗಡೆ ಯಾವುದು ಅಮಾಯಕ ಹೆಣ್ಣುಮಗಳು ನನ್ನನ್ನು ಶಪಿಮಿಸುತ್ತಿರುವಳು… ಅವಳನ್ನು ಇಲ್ಲಿಂದ ಕಳಿಸಿಕೊಡು “ಅನ್ನುತ್ತಿದ್ದರಂತೆ. ತಾಯಿಯವರು ನೋಡಿದರೆ ಅಲ್ಲಿ ಯಾರು ಇರುತ್ತಿರಲಿಲ್ಲ ಆದರೂ ಕೂಡ “ಅವಳು ಇಲ್ಲೇ ಇದ್ದಾಳೆ ಹೇಳು ಅವಳಿಗೆ ಹೋಗಲು ಹೇಳು ನೀನು ಹೇಳಿದರೆ ಮಾತ್ರ  ಹೋಗುವಳು ಅವಳಿಗೆ ಬೆದರಿಸಿ ಹೇಳು…..”ಅನ್ನುತ್ತಿದ್ದರಂತೆ.ಅದೇ ರೀತಿಯಾಗಿ ತಾಯಿಯವರು “ನೀನು ಹೋಗಮ್ಮ ಇಲ್ಲಿಂದ” ಅಂತ ಬೆದರಿಸಿದಂತೆ ನಟಿಸುತ್ತಿದ್ದರಂತೆ ….ಆಗ ಅಜ್ಜ ಸಮಾಧಾನರಾಗಿ “ನೋಡು ಅವಳು ನಿನಗೆ ಹೆದರಿ ಹೋಗಿಬಿಟ್ಟ ನೋಡು “ಅನ್ನುತ್ತಿದ್ದರಂತೆ … ನಂತರ ಜಯದೇವಿ ತಾಯಿಯವರು ಸಿದ್ದರಾಮೇಶ್ವರನ ಪ್ರಸಾದವನ್ನು ಹಣೆಗಿಟ್ಟು ಮಲಗಿಸುತ್ತಿದ್ದರಂತೆ.ಇದೆಲ್ಲಾ ಕರ್ಮದ ಫಲಗಳು ಅಂತ ತಾಯಿಯವರು ಹೇಳುತ್ತಿದ್ದರು. ನಾವು ಮಾಡಿದ ಪಾಪ ಪುಣ್ಯಗಳ ಕರ್ಮವನ್ನು ನಮ್ಮ ಮುಂದಿನ ಪೀಳಿಗೆಯು ಭೋಗಿಸಬೇಕಾಗುತ್ತದೆ. ತಾಯಿಯವರು ಜೀವನವನ್ನು ಕೇವಲ ಘಟನೆಗಳ ಸರಣಿ ಹೇಳುತಿದ್ದರು…. ನಮ್ಮ ಕರ್ಮದ ಹಾದಿ ಎಂದು ಗಾಢವಾಗಿ ನಂಬಿದವರು…“ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಪ್ರತಿಫಲ ಇರುತ್ತದೆ… ಅದು ನಮ್ಮನ್ನು, ನಮ್ಮ ಮಕ್ಕಳನ್ನೂ ತಟ್ಟುತ್ತದೆ…” ಎಂದು ಅವರು ಮನಸ್ಸು ತುಂಬಿ ಹೇಳುತ್ತಿದ್ದರು.ಅವರ ಧ್ವನಿಯಲ್ಲಿ… ಅನುಭವದ ಕಿಡಿ ಹೊತ್ತಿತ್ತು… “ನಾವು ಮಾಡಿದ ಪಾಪ… ನಮ್ಮ ನೆರಳಾಗಿ ನಮ್ಮನ್ನು ಹಿಂಬಾಲಿಸುತ್ತದೆ…ನಾವು ಮಾಡಿದ ಪುಣ್ಯ… ನಮ್ಮ ಮಕ್ಕಳಿಗೆ ದಾರಿಯಾಗಿ ಬೆಳಗುತ್ತದೆ…”ಅವರು ನಿಧಾನವಾಗಿ ಮುಂದುವರಿಸುತ್ತಿದ್ದರು:“ಮಕ್ಕಳು ನಮ್ಮ ಸಂಪತ್ತಾದರೆ… ನಮ್ಮ ಕರ್ಮದ ಸಾಲಿಗೂ ವಾರಸುದಾರರಾಗುತ್ತಾರೆ…”ಈ ಮಾತು ಹೇಳುವಾಗ ಅವರ ಕಣ್ಣುಗಳಲ್ಲಿ ಒಂದು ಗಾಢ ನೋವು ಮೂಡುತ್ತಿತ್ತು… ನಾವು ಬದುಕುವ ಪ್ರತಿದಿನವೂ ಜಾಗ್ರತೆ ಇರಬೇಕು…” ಎಂದು ಅವರು ಹೃದಯದಿಂದ ಹೇಳುತ್ತಿದ್ದರು…ಅವರ ಮಾತುಗಳಲ್ಲಿ  ಎಚ್ಚರಿಕೆ ಇತ್ತು…ಪ್ರಾರ್ಥನೆ ಇತ್ತು…ಒಂದು ಪಾಠ ಇತ್ತು…“ನಾವು ಬಿತ್ತಿದ ಬೀಜವೇ ಮರವಾಗಿ ನಮ್ಮ ಮಕ್ಕಳ ಮೇಲೆ ನೆರಳಾಗುತ್ತದೆ…ಅದು ನೆರಳೋ… ಇಲ್ಲ ಬೆಂಕಿಯೋ… ಅದು ನಮ್ಮಕ್ಯೆಯಲ್ಲಿದೆ……ಎಂದು ಯಾವಾಗಲೂ ತಿಳಿ ಹೇಳುತ್ತಿದ್ದರು.  ನೈತಿಕವಾಗಿಯೂ ತಮ್ಮ ಮನೆತನವನ್ನು ಬಲಪಡಿಸಿದರು. ಅವರ ಈ ಕ್ರಮಶೀಲತೆ ಮತ್ತು ಧೈರ್ಯವು ಇತರ ಮಹಿಳೆಯರಿಗೂ ಮಾದರಿಯಾಗಿ ಪರಿಣಮಿಸಿತು.ಪತಿಯನ್ನು ಕಳೆದುಕೊಂಡ ದುಃಖವನ್ನು ಶಕ್ತಿಯಾಗಿ ಪರಿವರ್ತಿಸಿಕೊಂಡು, ಜಯದೇವಿ ತಾಯಿಯವರು ತಮ್ಮ ಜೀವನವನ್ನು ತಮ್ಮ ಸುತ್ತಲಿನ ಜನರ ಜೀವನವನ್ನೂ ಸುಧಾರಿಸುತ ಮಹಾನ್ ವ್ಯಕ್ತಿತ್ವವಾಗಿ ಬೆಳಗಿದರು. “ನೀರಿನಂತೆ ನಿರ್ಮಲ | ಹಿರಿದಾದ ಮನವಾಗಿ ಪರರಿಗಾಗಿ ಸವೆದು ತಣಿಬೇಕು -ದೇವನಬರುವಿಗಾಗಿ ದಾರಿ ಕಾಯಬೇಕು ||” ಎನ್ನುವಂತೆ ಜೀವನವನ್ನು ಸಮರ್ಪಿಸಿಕೊಂಡಿದ್ದರು. (ಮುಂದುವರೆಯುವುದು) ಸವಿತಾ ದೇಶಮುಖ

Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ -18 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಪತಿ ಚೆನ್ನಮಲ್ಲಪ್ಪನವರ ವಿಯೋಗ ೧೯೪೮೯ ಸಮಯ ….ಆಗಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿತ್ತು….. ಸಂಸ್ಥಾನಗಳ ವಿಲೀನಿಕರಣವಾಗಿ, ನಿರಾಶ್ರಿತರು ತಮ್ಮ ತಮ್ಮ ತಾಣಕ್ಕೆ ಹೋಗಿ ಸೇರಿದ್ದರು.ಜಯದೇವಿ ತಾಯಿಯವರು ಅನೇಕ ಕುಟುಂಬಗಳ ಬದುಕಿಗೆ ಬೆಳಕಾಗಿದ್ದರು .. ಅವರಲ್ಲಿ ಆಶ್ರಯ ಪಡೆದ ಅನಾಥರಿಗೆ ಸಂಸಾರ ದೊರಕಿಸಿಕೊಟ್ಟರು…ತಾಯಿಯ ಮಮತೆಯಿಲ್ಲದೆ ಅಳುತ್ತಿದ್ದ ಮಕ್ಕಳಿಗೆ ತಾಯಿಯ ಅಕ್ಕರೆ ಸಿಕ್ಕಿತು…ಬಾಣಂತಿ ನೋವಿನಲ್ಲಿ ನರಳುತ್ತಿದ್ದ ಮಹಿಳೆಯರಿಗೆ ಅವರು ತಾಯಿ ಆಗಿ ಸೇವೆ ಸಲ್ಲಿಸಿದರು…ಅಜ್ಞಾನದಲ್ಲಿ ಕಳೆದು ಹೋಗುತ್ತಿದ್ದ ಮಕ್ಕಳಿಗೆ ಶಿಕ್ಷಣದ ದಾರಿ ತೋರಿಸಿದರು…ಬಡತನದ  ಸಂಕೋಲೆಗಳನ್ನು ಕತ್ತರಿಸಿ ಅವರ ಬದುಕಿಗೆ ನಂಬಿಕೆ ತುಂಬಿದರು…!!!ಆದರೆಜಯದೇವಿ ತಾಯಿಯವರ  ಮನಸ್ಸಿನಲ್ಲಿ ದುಃಖದ ಸಾಗರ ಉಕ್ಕುತ್ತಿತು……!!!ಎಲ್ಲರಿಗೂ ಬದುಕು ಕೊಟ್ಟ ಆ ಮಹಾತಾಯಿ,ಸ್ವಂತ ಮನಸ್ಸಿನಲಿ ನೋವನ್ನು ಹೋತ್ತು ಕೊಂಡಿದ್ದರು…..ತಮ್ಮಕಷ್ಟವನ್ನು ಮಾತ್ರ ಯಾರಿಗೂ ತೋರಿಸಲಿಲ್ಲ…ಬಾಹ್ಯವಾಗಿ ಅವರು ಸದಾ ನಗುತ್ತಿದ್ದರು…ಆದರೆ ಆ ನಗುವಿನ ಹಿಂದೆ ಅನೇಕ ಕಹಿ ಅನುಭವಗಳು, ತ್ಯಾಗಗಳ ಗಾಯಗಳು ಮರೆಮಾಚಿಕೊಂಡಿದ್ದವು…ಇತರರ ಕಣ್ಣೀರನ್ನು ಒರೆಸಿದ ಕೈಗಳು,ತಮ್ಮ ಕಣ್ಣೀರನ್ನು ತಾವೇ ಒರೆಸಿಕೊಳ್ಳುತ್ತಿದ್ದರು… ಎಲ್ಲರ ಸಂತೋಷವೇ ತನ್ನ ಸಂತೋಷ ಎಂದು ಕೊಂಡವರ ಬದುಕು ಒಂದು ತ್ಯಾಗದ ಗಾಥೆ,ತನ್ನ ನೋವನ್ನು ಮನದಲ್ಲಿ ಮಡಚಿಟ್ಟಕೊಂಡ ಮಹಾನ್ ಆತ್ಮವದು.ತಾಯಿಯವರ ಗಂಡ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು .ಮಲಗಿದ ಅವರ ನಿಶಕ್ತ ದೇಹದ… ಪ್ರತಿ ಉಸಿರು ಅವರ ಆಯುಷ್ಯದ ರೇಖೆಯನ್ನು ಕಡಿಮೆಗೊಳ್ಳಿಸುತ್ತಿರುವದ  ತೋರುತ್ತಿತ್ತು. ಗಂಡನ ಕಣ್ಣಿನಲ್ಲಿ ಕಾಣುತ್ತಿದ್ದ ವೇದನೆ ಸಹಿಸದಾಗಿತ್ತು… ತಿಳಿಯದ ಅಜ್ಞಾತ ಭಯ ಕಾಡುತ್ತಿತ್ತು…..!!!! ಆದರೂ ಮುಖದಲ್ಲಿ ನೋವಿನ ಛಾಯೆ ತೋರಿಸಲಿಲ್ಲ. ಧೈರ್ಯವಾಗಿ ನಿಂತವರು. ಸಭೇ- ಸಮಾರಂಭ-ಜನರ ಮಧ್ಯೆ ಹಾಜರಾಗುತ್ತಿದ್ದರು. ಅವರಿಗೆ ಯಾವ  ಸಮಾರಂಭಕ್ಕೆ ಹೋಗುವದು ಬೇಡವಾದರೂ ಗಂಡ ಮಾತ್ರ ಹರ್ಷದಿಂದಲೇ ಅವರಿಗೆ ಹೋಗಿ ಬರಲು ಹೇಳುತ್ತಿದ್ದರು. “ನನ್ನನ್ನು ನೋಡಿಕೊಳ್ಳಲು ಆಳುಗಳು ಇದ್ದಾರಲ್ಲ ಎರಡು ದಿನದಲ್ಲಿ ನನಗೇನಾಗತದ??!! ಹೋಗಿ ಬಾ” ಅಂತ ಉತ್ಸಾಹ ತುಂಬಿಸುತ್ತಿದ್ದರು. ಒಂದು ಕಡೆ ದೇಶದ ಸ್ವಾತಂತ್ರ್ಯದ ಸಂಭ್ರಮದ ಆಚರಣೆ ಮತ್ತೊಂದು ಕಡೆ ಅತ್ಯಂತ ಪ್ರೀತಿಯ ವ್ಯಕ್ತಿಯನ್ನು ಕಳೆದುಕೊಳ್ಳುವ ಭೀತಿ…ಈ ಎರಡರ ನಡುವೆ ತಾಯಿಯ ಮನಸ್ಸು ಹೋರಾಡುತ್ತಿತ್ತು.ತಮ್ಮ ವೈಯಕ್ತಿಕ ದುಃಖವನ್ನು ಮರೆತು, ಸಮಾಜದ ಹಿತಕ್ಕಾಗಿ ಸದಾ ಮುಂದೆ ಸಾಗಿದ ಅಜರಾಮರ ವ್ಯಕ್ತಿತ್ವ. *ಸಂಸಾರ ಸಾಗರವು|ಈಸಲು ಹೊರಟಾಗಏಸೊಂದು ಕಷ್ಟಗಳ ಮೊಸಳೆ -ಬಂದು ನುಸುಳೂತ ಹಾದಿ ಕಟ್ಟುವವು!! *.ಆ ಕ್ಷಣಗಳು ಅವರ ಜೀವನದ ಅತ್ಯಂತ ಕಠಿಣ ಅಧ್ಯಾಯವಾಗಿದ್ದರೂ, ತಾಯಿಯವರ ಅಂತರಂಗದ ಶಕ್ತಿಯನ್ನು ಮತ್ತಷ್ಟು ಗಾಢಗೊಳಿಸಿತು… ತಮ್ಮ ಆರೋಗ್ಯದ ಸ್ಥಿತಿ ಗೊತ್ತಿದ್ದ ಚನ್ನಲ್ಲಪ್ಪನವರು ತನ್ನ ಹಿರಿಯ ಮಗಳ ಮದುವೆಯನ್ನಾದರೂ ಮಾಡಬೇಕೆಂದು ಹಂಬಲ ಪಟ್ಟರು ಹಾಗೆ ತನ್ನ ಮಾವನಾದ ಚನ್ನಬಸಪ್ಪ ಮಡಿಕಿ ಅವರೊಂದಿಗೆ ಸಮಾಲೋಚನೆ ಮಾಡಿ ಇತ್ಯರ್ಥಕ್ಕೆ ಬಂದರು. ಅವರ ಮಗ ರಾಜಶೇಖರ ಮಡಿಕೇರಿ (ಜಯದೇವಿ ತಾಯಿಯವರ ತಮ್ಮ)ಅತ್ಯಂತ ಸುಶೀಲರು ಸುದ್ರೂಪಿಯು ಆಗಿದ್ದ ರಾಜಶೇಖರನಿಗೆ ಕೊಟ್ಟು ಮದುವೆ ಮಾಡಬೇಕು ಅನ್ನುವ ಹಂಬಲ ವ್ಯಕ್ತಪಡಿಸಿದರು……ಅದರಂತೆ ತಾಯಿಯವರು ಮನಸ್ಸಿನಿಂದ ಒಪ್ಪಿ ಮದುವೆ ಮಾಡಿ ಮುಗಿಸಿದರು. ಅತ್ಯಂತ ವಿಜೃಂಭಣೆಯಿಂದ ಮದುವೆಯನ್ನು ಮಾಡಿದರು. ಅಳಿಯನಿಗೆ ಕಾಲೇಜ್ ಹೋಗಿ ಬರಲು ಕುದುರೆಯನ್ನು ಕಾಣಿಕೆಯಾಗಿ ಕೊಟ್ಟರು. ಜಯದೇವಿ ತಾಯಿಯವರು ತಮ್ಮಗಂಡನ ಆರೋಗ್ಯದ ಸ್ಥಿತಿ ಸುಧಾರಿಸಲು ಅದೆಷ್ಟೊಂದು ವ್ರತಗಳನ್ನು ಉಪವಾಸ ತಪವಾಸಗಳನ್ನು ಮಾಡಲು ಪ್ರಾರಂಭಿಸಿದರು. ಹಾಗೆ ಸಿದ್ದರಾಮನ ದೇವಸ್ಥಾನಕ್ಕೆ ಬರಿಗಾಲಿನಿಂದ ನಡೆದುಕೊಂಡುಹೋಗುವರು… ,ಮನೆಯ ಹೂದೂಟದಲ್ಲಿ ಬೆಳೆದ ಹೂಗಳನ್ನು ತೆಗೆದುಕೊಂಡು ಸುಂದರವಾದ ಹಾರನ್ನು ಹೆಣೆದು ಸಿದ್ದರಾಮನಿಗೆ ಅರ್ಪಿಸಿ ನಂತರ ಮನೆಗೆ ಬಂದು ಪ್ರಸಾದ ತೆಗೆದುಕೊಳ್ಳುವರು .ಅಷ್ಟರೊಳಗಾಗಿ ಮೂರು ನಾಲ್ಕು ಗಂಟೆ ಆಗಿರುತ್ತಿತ್ತು ಅಲ್ಲಿಯವರೆಗೂ ಉಪವಾಸವಿರುತ್ತಿದ್ದರು. ಹೀಗಾಗಿ ಅವರ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮಗಳು ಬೀಳಲು ಆರಂಭಿಸಿದವು ಅಂತ ತಾಯಿಯವರೇ ನಮಗೆ ಬಹಳಷ್ಟು ಸಲ ಹೇಳುತ್ತಿದ್ದ ನೆನಪು ……!!!ಹಾಗೆ ಮುಂಜಾನೆಯ ಫಲಹಾರ ಆರೋಗ್ಯದ ಗುಟ್ಟು ಅಂತನು ಹೇಳ್ತಾ ಇದ್ದರು . ಒಂದು ದಿನ ಸಿದ್ದರಾಮನ ಹಣೆಯ ಅಂಗಾರವ  ತಂದು ಗಂಡನ ಮಸ್ತಕಕ್ಕೆ ಹಚ್ಚಲು ಲಗುಬಗೆಯಿಂದ ಮೆಟ್ಟಲು ಏರಲು ಹೋಗಿ ಕಾಲು ಜಾರಿ ಬಿದ್ದು ಸೊಂಟ ನೋವನ್ನು ಅನುಭವಿಸಿದ್ದರು. ಆದರೆ ಈ ಸಮಾಚಾರವನ್ನು‌ ಗಂಡನಿಗೆ ಯಾರು ಹೇಳು ತಕ್ಕದ್ದಲ್ಲ ಅಂತ ಹೇಳಿದ್ದರು ಆ ನೋವಿನಲ್ಲಿ ಅವರು ಎದ್ದು ಮತ್ತೆ ಗಂಡನ ಸೂಶ್ರುಷಯದಲಿ ತೊಡಗಿದ್ದರು.ಪತಿ ಇಹಲೋಕವನ್ನು ಬಿಟ್ಟು ಹೋಗುವ ಸಮಯ ಸಮಿಪಿಸಿದಂತೆ…. ಗಂಡ ತಾಯಿಯವರಿಗೆ ಮಗುವಾದರು… ಮೇಲಿಂದ ಮೇಲೆ ತಾಯಿಯವರಿಗೆ ಕರೆದು  ಹತ್ತಿರ ಕುಳಿತುಕೊಳ್ಳಲು ಕೇಳುತ್ತಿದ್ದರು. ಆತುರದಿಂದ |ಓತು ನೋಡುವ ಕಣ್ಣು,ಆತುಮಕ್ಕೆ ಶಾಂತಿ ನೀಡೂವ- ಪರಿಶುದ್ಧ ಮಾತುಗಳನ್ನು ಕೇಳಿಸುವ ತವಕ ||  ಸತತವಾಗಿ ಬಸವಣ್ಣನ ವಚನಗಳನ್ನು ಪಠಣ ಮಾಡಲು ಕೇಳಿಕೊಳ್ಳುತ್ತಿದ್ದರು .ಹಾಗೆ ಮಂತ್ರಗಳ ಉಚ್ಚರಣೆ ಮಾಡಲು ಹೇಳುತ್ತಿದ್ದರು .ಅವರ ಜೊತೆಗೆ ತಾನು ಕೂಡ ಆ ಮಂತ್ರ ಪಠಣವನ್ನು ಮಾಡುತ್ತಿದ್ದರು. “ನಿಮಗೆ ಆಯಾಸವಾಗಿತ್ತು ಜೋರಾಗಿ ಹೇಳಬೇಡಿ ನಾನು ಹೇಳ್ತೀನಿ ಕೇಳ್ರಿ “ಅಂತ ತಾಯಿಯವರು ಬಹಳಷ್ಟು ಸಲ ಹೇಳಿದರೂ ಅದಕ್ಕೆ ಅವರು ನಕ್ಕು “ದೇವರ ಹೆಸರು ಹೇಳಿದರೆ ಆಯಾಸ ಯಾತರದು” ಅಂದು ತಾವು ಕೂಡ ಜೋರ ಜೋರಾಗಿ ಮಂತ್ರಗಳನ್ನು  ಹೇಳುತ್ತಿದ್ದರು. ಆ ದಿನ ಅದೇಕೋ ಪತಿಯ ಆರೋಗ್ಯ ಕ್ಷೀಣವಾಗ್ತಾ ಇದೆ ಅಂತ ಅನಿಸಿದಾಗ ತಾಯಿಯವರು   ಒಂದು ನಿಮಿಷವೂ ಗಂಡನಿಂದ ದೂರ ಸರಿಯಲಿಲ್ಲ .ಕೊನೆಗೆ ಸಂಜೆ ಹೊತ್ತಿಗೆ  ಸ್ವಲ್ಪ ಪ್ರಸಾದ ತೆಗೆದುಕೊಂಡು ಬರಲು ಒತ್ತಾಯಿಸಿದರೂ ಅವರು ಅಲ್ಲಿಂದ ಕದಲಲಿಲ್ಲ ….ತಾಯಿಯವರ ತಂದೆ ಬಂದಾಗ “ಈಗ ನಿಮ್ಮ ತಂದೆ ಬಂದಿದ್ದಾರೆ ಸ್ವಲ್ಪ ಹೋಗು ಹೊಟ್ಟೆ ಏನಾರು ತೆಗೆದುಕೊಂಡು ಬಾ”ಅಂತ ಒತ್ತಾಯಿಸಿದರು..ಆಗ ತಾಯಿಯವರು ಅಲ್ಲಿಂದ ಹೋಗಿ ಸ್ನಾನ ಪೂಜೆಯನ್ನು ಮುಗಿಸಿದರು . ಅವರಿಗೆ ಪ್ರಸಾದ ಸೇರಲೇ ಇಲ್ಲ ಅಂದೆಕೋ ಏನೋ ಕಳೆದು ಹೋಗುವ ತಳಮಳ ಅವರಲ್ಲಿ ಇತ್ತು . “ಗಂಡನನ್ನು ನೀನು ನೋಡಿಕೊಳ್ಳುವುದು ಹೇಗೆ ಸಾಧ್ಯ ಹೀಗೆ ಉಪವಾಸ ಇದ್ದರೆ “ಅಂತ ಅತ್ತಿಯಂದಿರ ಆಗ್ರಹಿಸಿದ್ದಕ್ಕೆ  ಒಲ್ಲದ ಮನಸ್ಸಿನಿಂದ ಒಂದು ಬಟ್ಟಲು ಹಾಲನ್ನು ಕುಡಿದು…. ಸಿದ್ದರಾಮನ  ಹಣೆಯ ಅಂಗಾರ ತೆಗೆದುಕೊಂಡು ಪತಿಯ ಹತ್ತಿರ ಬಂದರು.    ಅವರ ಹತ್ತಿರವಿದ ಆಳ ಶಂಕರವನ್ನು ” ಇನ್ನು ನೀನು ಹೋಗಿ ಪ್ರಸಾದ ತೆಗೆದುಕೊಂಡು ಬಾ, ನಾನು ಇರುತ್ತೇನೆ ಅಂದರು ಎಂಥ ಪರಿಸ್ಥಿತಿಯಲಿಯೂ ಎಲ್ಲರ ಕಾಳಜಿಯನ್ನು ಮಾಡುವುದನ್ನು ಮಾತ್ರ ಜಯದೇವಿ ತಾಯಿಯವರು ಮರೆಯುತ್ತಿರಲಿಲ್ಲ .ಗಂಡ ಚನ್ಮಲ್ಲಪ್ಪನವರು ದೀರ್ಘವಾಗಿ ತಾಯಿಯವರನ್ನು ಒಮ್ಮೆ ನೋಡಿ  ಮಂತ್ರ ಪಠಣ ಮಾಡಲು ಮತ್ತೇ ಹೇಳಿದರು *ಸಾವಿಗೆ ಅಂಜದಿರು |ನೋವಿಗೆ ಕುಗ್ಗದಿರುಭವ ಮಾಲೆಯಲ್ಲಿ ಸಿಗದಿರು- ಸುದೈವದೇವನ ಸ್ಮರಣೆಯ ಮರೆಯದಿರು !!* ಎನ್ನುವಂತೆ ಅಂತಿಮ ಕ್ಷಣಗಳು ಹತ್ತಿರವಾಗುತ್ತಿವೆ ಎಂಬುದನ್ನು ತಿಳಿಯಲು ತಡವಾಗಲಿಲ್ಲಮನೆಯಲ್ಲಿ ಒಂದು ವಿಚಿತ್ರ ವಾತಾವರಣ. ವಿದಾಯದ ಮುನ್ನದ ಭಾರವಾದ ನಿಶ್ಶಬ್ದ.ಮಂತ್ರ ಹೇಳುತ್ತಾ ಹೇಳುತ್ತಲೇ ತಾಯಿಯವರ ಸ್ವಲ್ಪ ಕಣ್ಣು ಕುಳಿತಲ್ಲಿಯೇ ಕಣ್ಣು ರೆಪ್ಪೆಗಳು ಮುಚ್ಚಿದ್ದವು…..ಪತಿ ತಾಯಿಯವರ ಹೆಸರನ್ನು ಜೋರಾಗಿ ಕೂಗಿ ಕರೆದರು ಗಡಿಬಿಡಿಸಿಕೊಂಡು ….. ಜಯದೇವಿ ತಾಯಿಯವರು” ಏನಾಯಿತು…. !!??ಅಂತ ಕೇಳಿದರು.ಪತಿ ನಿಧಾನವಾಗಿ ತಾಯಿಯವರ ಕೈ ಹಿಡಿದರು…, ಕಣ್ಣಲ್ಲಿ ಅನೇಕ ಕೇಳಬೇಕಾದ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಸುಮ್ಮನೆ ನೋಡಿದರು.“ಮಂತ್ರ ಪಠಿಸು…”ಅಂದರುಆ ಮಾತು ಕೇಳುತ್ತಿದ್ದಂತೆ ತಾಯಿಯವರ ಹೃದಯ ನಡುಗಿತು…!!!ಆದರೂ ಅವರು ಕುಗ್ಗಲಿಲ್ಲ.ಕಣ್ಣೀರನ್ನು ಒಳಗೇ ನುಂಗಿ, ದೈರ್ಯವನ್ನು ಧರಿಸಿ ಮಂತ್ರಗಳನ್ನು ಜಪಿಸಲು ಆರಂಭಿಸಿದರು.“ಓಂ… ”ಅವರ ಧ್ವನಿ ಮೊದಲು ಸ್ವಲ್ಪ ನಡುಗಿತು…ಆದರೆ ನಂತರ ನಿಧಾನವಾಗಿ ಗಟ್ಟಿಯಾಗತೊಡಗಿತು.ವಚನಗಳನ್ನು ಹೇಳಲಾರಂಭಿಸಿದರು. ಒಂದು ಕಡೆ ದೇವರ ಸ್ಮರಣೆ, ಮತ್ತೊಂದು ಕಡೆ ಜೀವದ ಕೊನೆಯ ಹಂತ…ಆದರೆ ಅಚ್ಚರಿಯ ಸಂಗತಿಗಂಡನ ಧ್ವನಿಯೇ ಹೆಚ್ಚು ಜೋರಾಗಿ ಕೇಳಿಸತೊಡಗಿತಹಾಸಿಗೆಯ ಮೇಲೆ ನಿಶಕ್ತನಾಗಿ ಮಲಗಿದವರು, ತನ್ನ ಉಳಿದ ಶಕ್ತಿಯನ್ನೆಲ್ಲಾ ಸೇರಿಸಿಕೊಂಡು ತಾಯಿಯವರಿಗಿಂತಲೂ ಜೋರಾಗಿ ಮಂತ್ರಗಳನ್ನು ಉಚ್ಚರಿಸಲಾರಂಭಿಸಿದರು…… ಮಂತ್ರಪಠನವು..ಜೀವನದ ಅಂತಿಮ ಘೋಷಣೆಯಾಗಿತ್ತು….!!!!! ಒಂದು ಆತ್ಮ ತನ್ನ ಪಯಣವನ್ನು ಮುಗಿಸುವ ಮುನ್ನದ ಶುದ್ಧ ಸಂಕಲ್ಪ…ತಾಯಿಯವರ ಕಣ್ಣೀರು ತಡೆಯಲಾಗದೆ ಹರಿಯಲಾರಂಭೀಸಿದ್ದವು…ಆದರೂ ಜಪ ನಿಲ್ಲಿಸಲಿಲ್ಲ. *ಅತ್ತತ್ತು ಕಣ್ಣಿರು |ಬತ್ತಿ ಹೋಗಿವು ಇಂದುಹೊತ್ತಿಸಿದ ಒಲಿ ಆರುವದು-ನಿನಗಾಗಿಹೋತ್ತಿದ ಎದೆಯು ಆರದು||* ಪ್ರತಿ ಪದವೂ ಹೃದಯವನ್ನು ಕೀಳುತ್ತಿದ್ದರೂ, ಪಠಣ ನಿಲ್ಲಿಸಲಿಲ್ಲ ಅಂತಿಮ ಕ್ಷಣಗಳು ಸಮಿಪಿಸುತಿದ್ದಂತೆಗಂಡನ ಧ್ವನಿ ನಿಧಾನವಾಗಿ ಕುಂದುತ್ತಾ ಹೋಯಿತು…ಆದರೆ ಕೊನೆಯ ಉಸಿರಿನವರೆಗೂ ಮಂತ್ರವನ್ನು ಬಿಟ್ಟಿರಲಿಲ್ಲ…ಒಂದು ದೀರ್ಘ ಶ್ವಾಸ… ಶಾಂತ ಮುಖ…ಮತ್ತೊಂದು ಕ್ಷಣ…..ಎಲ್ಲವೂ ನಿಶ್ಶಬ್ದ… ಧ್ವನಿ ನಿಂತಿತು…ಆತ್ಮ ಶಾಂತವಾಗಿತ್ತು …!!!!! *ಕಣ್ಣೊಳಗಿನ ತೇಜ| ಬಣ್ಣಿಸಲಾಗುವುದುಹುಣ್ಣಿಮೆಯ ಚಂದ್ರನ ತಂಡವ -ಬೀರುತ್ತಾಕಣ್ಣು ಚಲಿಸದೆ ನಿಶ್ಚಲ||* ತಾಯಿಯವರ ಕೈಯಲ್ಲೇ ಅವರ ಜೀವ ಕೊನೆಯ ಬಾರಿ ನಡುಗಿ, ಶಾಂತವಾಗಿ ನಿಂತುಹೋಯಿತು… ಜೀವನದ ಅಂತ್ಯ… ಆತ್ಮದ ಪವಿತ್ರ ಮುಕ್ತಿಯ ಕ್ಷಣ…ತಾಯಿಯವರು ಕಣ್ಣೀರಿನಲ್ಲಿ ಮುಳುಗಿದರು . *ಸಮಾಧಾನವ ಹೇಳಿ| ರವಿಸುವ ಮಾತಿಲ್ಲ ಮಮತೆಯ ಬೀರುವ ನೋಟಿಲ್ಲ- ಓ ತಂದೆಆತುಮಕೆ ಶಾಂತಿ ಹೇಳವರ ಇನ್ನು ಇಲ್ಲ|| ಎಂದು ಅನ್ನಿಸಿದರೂ *ಆಯಾಸವಿಲ್ಲದೆ |ಕಾಯ ಬಯಲಾಯಿತು ಹಾಯಗೊಂಡಿತ್ತು ಎನಮನ- ಸಿದ್ದನ ಕರುಣೆಯಛಾಯೆ ಇದಂತೆ ತೋರಿತ್ತು||* ತಮ್ಮ ಜೀವನ ಸಂಗಾತಿ ದೇವರ ನಾಮಸ್ಮರಣೆಯಲ್ಲೇ ಕೊನೆಯ ಉಸಿರೆಳೆದಿದ್ದರು.ಅದು ದೇವರಲ್ಲಿ ಒಂದಾದ ಕ್ಷಣ ಶಾಂತಿಯಲಿ ಶಾಶ್ವತ ವಿದಾಯದ ಕ್ಷಣ…!!! ಮನಸ್ಸಿಗೆ ತುಸು ನೆಮ್ಮದಿ ತಂದಿತ್ತು. *ನೆನೆಯಲಿನ್ಯಾರಿಗೆ |ಮನ ಮಂದಿರದೊಳುಮನವೇ ಸಜ್ಜೆಯಾಗಿ ಪರಿಣಮಿಸಿ- ಎನ್ನಯ್ಯಮನವಿ ಲಿಂಗವಾಗಿ ಬೆಳಗಿತ್ತು||* ಪತಿಯ ವಿಯೋಗದಿಂದ ಪೂರ್ತಿಯಾಗಿ ಅವರು ಸಿದ್ದರಾಮನ ಭಕ್ತಿಯಲಿ ಲೀನವಾದರು.  ಲಿಂಗಪತಿ ಶರಣಸತಿಯನ್ನಾಗಿಸಿ ಬಾಳಲಾರಂಭಿಸಿದರು . *ಹುಟ್ಟಿದ ಗುಣ ಕಳೆದು| ಕೊಟ್ಟರು ಲಿಂಗವನಟ್ಟಿತು ಎನ ಮನ ಪ್ರಾಣ -ಭಾವವಮುಟ್ಟಿ ಲಿಂಗ ಧ್ಯಾನ ಮಾಡುವದಕ||* ಸಂಸಾರದ ವ್ಯಾಮೋಹವನ್ನೆಲ್ಲ ಕಳಚಿ… ಶರಣರ ಆಣತಿಯಂತೆ ಇಂದು ಸಂಸಾರವನ್ನು ಮಾಡಿ ಜಗವ ಗೆದ್ದು ಲಿಂಗಯ್ಯನ ಪತಿಯಾಗಿ ಸ್ವೀಕರಿಸಿ ಬಾಳಹತ್ತಿದ್ದರು… ಈಗ ಪೂರ್ತಿಯಾಗಿ ಗುರು ಸಿದ್ದರಾಮನ ಕೂಸಾಗಿ ಬಾಳಲು ಪ್ರಾರಂಭಿಸಿದರು. *ಕರುಣೆಯ ಕಂಗಳ |ಅರುಣೋದಯವಾಯಿತು ಗುರುವಿನ ಗುರು ಸಿದ್ದರಾಮನ-ದಯೆಯಿಂದದುರಿತ ಕರ್ಮವು ಹರಿಯಿತು||*ಎನ್ನುವಂತೆಸೊನ್ನಲಿಗೆಯಗುರು ಸಿದ್ದರಾಮನಲಿ ಒಂದಾಗಿ ನಿಂದರು.ಚೆನ್ನ ಮಲ್ಲಪ್ಪನವರು ಹೀಗೆ ಐದು ಮಕ್ಕಳು ಐದು  ಅತ್ತಿಯಂದಿರು ತಮ್ಮ- ತಮ್ಮನ ಹೆಂಡತಿ ಮಕ್ಕಳು ಹಾಗೂ ಅಪಾರವಾದ ಆಸ್ತಿಯ ಜವಾಬ್ದಾರಿ ಬಿಟ್ಟು ಭೂಲೋಕ ತೇಜಿಸಿದ್ದರು. ಚೆನ್ನ ಮಲ್ಲಪ್ಪನವರಿಗೆ ತಾಯಿಯವರ ಮೇಲೆ ಅಪಾರವಾದ ವಿಶ್ವಾಸವಿತ್ತು ,ಅಭಿಮಾನವಿತ್ತು “ಎಂತಹ ಕಷ್ಟಗಳು ಬಂದರೂ ನಿಭಾಯಿಸಿಕೊಂಡು ಹೋಗುವ,ಎಲ್ಲರ ಉದ್ಧಾರ ಮಾಡುವ ಕೈಗಳು ನಿನ್ನವು  ನಾನು ನಿಶ್ಚಿತವಾಗಿ ಎಲ್ಲವನ್ನು ಬಿಟ್ಟು ಹೋಗುತ್ತಿದ್ದೇನೆ” ಅಂತ ಹೇಳಿದ್ದರು .ಹಾಗೆ ಮುಂದೆ ತಾಯಿಯವರು ಇಡೀ ಆಸ್ತಿಯ ಜವಾಬ್ದಾರಿಯನ್ನು ಹೊತ್ತು ಅದನ್ನು ಒಂದು ಇಂಚನ್ನು ಕೂಡ ಮಾರದೇ ಎಲ್ಲವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದರು.(ಮುಂದುವರೆಯುವುದು) ಸವಿತಾ ದೇಶಮುಖ  

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-17 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ‌ ಮಹಾನ್ ಚೇತನ ಸವಿತಾ ದೇಶಮುಖ ರಜಾಕರರ ಹಾವಳಿಯಿಂದ ಮನೆಬಿಟ್ಟು ಓಡಿಬಂದ ನಿರಾಶ್ರಿತರ ದುಃಖವ ನೋಡಿ.,.., ತಾಯಿಯವರ ಹೃದಯದಲ್ಲಿ ಮೂಡಿದ ಕರುಣೆ.. ತಾಯಿತನದ ಕರೆಯಾಗಿ ಮೂಡಿದ ತ್ರಿಪದಿ…. *ಬಡ ಮಕ್ಕಳಿಗೆ ಹಾಲು|ತಾಯಿಗೆ ಸೀರೆಒಡಲ ತುಂಬ ಅನ್ನ ನೀಡುತ-ರೋಗಗಳಓಡಿಸ  ಬೇಕಯ್ಯಾ ಸಿದ್ದೇಶ|| ಈ ಕವನದಲ್ಲಿ ಹಾಲಿಲ್ಲದೆ ಅಳುವ ಮಕ್ಕಳನ್ನು ನೋಡಿ ಅವರ ಮನಸು ಕರಗುತ್ತದೆ.ಬಟ್ಟೆಯಿಲ್ಲದೆ ನಾಚಿಕೆಪಡುವ ತಾಯಂದಿರ ನೋವ ಕಂಡು ಕಳವಳ ಗೊಂಡರು.ಹಸಿವಿನಿಂದ ಕಂಗೆಟ್ಟ ಜನರಿಗೆ ಅನ್ನ ಕೊಡಬೇಕೆಂಬ ಹಂಬಲ……“ಸೀರೆ ಒಡಲ ತುಂಬ” …. ತಾಯಂದಿರ ಗೌರವ, ಮಾನವನ್ನು ಕಾಪಾಡುವ ಕಾಳಜಿ.“ಅನ್ನ ನೀಡುತ” “ರೋಗಗಳ ಓಡಿಸಬೇಕಯ್ಯಾ”  ಆರೋಗ್ಯ ಮತ್ತು ಸುರಕ್ಷತೆ ಕೂಡ ಅಗತ್ಯವೆಂಬ ಅರಿವು.ಕೊನೆಯಲ್ಲಿ “ಸಿದ್ದೇಶ” ಎಂದು ಕರೆಯುವ ತಾಯಿಯವರು, ತಮ್ಮ ಕರ್ತವ್ಯವನ್ನು ದೈವಿಕ ಶಕ್ತಿಗೆ ಅರ್ಪಿಸುತ್ತಿದ್ದಾರೆ. ಇದು ಅವರ ಭಕ್ತಿ, ವಿಶ್ವಾಸ ಮತ್ತು ಮಾನವೀಯತೆಯ ಸಂಕಲನ. ಈ ಕವನದ ಹಿನ್ನಲೆಯಲ್ಲಿ ಇರುವ ದೃಶ್ಯ ತುಂಬ ಹೃದಯವಿದ್ರಾವಕ….!!!ರಜಾಕರರ ಹಿಂಸೆಯಿಂದ ಓಡಿಬಂದ ಜನರು… ಭಯ, ಹಸಿವು, ನಿರಾಶ್ರಿತ ಜೀವನಕ್ಕೆ ತಾಯಿಯವರಂತಹ ಮಹಾನ್ ಹೃದಯಿ ಆಶ್ರಯ, ಆಹಾರ ಮತ್ತು ಆಶೆಯನ್ನು ನೀಡಿದರು. *ಸಿದ್ದನ ಛತ್ತರಕ್ಕ ಬೆಂದು ಬಂದ ಮಕ್ಕಳಎದ್ದು ಕಂಣ್ಣೀರ ಒರೆಸುವ ,ಭಾಗ್ಯವಸಿದ್ದ ನನಗೆ ನೀಡಿ ದುಡಿಸಿದಿ* ತಾಯಿಯವರಲಿದ್ದ ದಯೆ, ಕರುಣೆ ಮತ್ತು ಸೇವಾಭಾವ ತುಂಬ ಸ್ಪಷ್ಟವಾಗಿ ಕಾಣಿಸುತ್ತದೆ.ನಿಜಾಮನ ದಬ್ಬಾಳಿಕೆಯಿಂದ ಸಂಕಷ್ಟಕ್ಕೊಳಗಾದ ನಿರಾಶ್ರಿತರು ತಮ್ಮ ಊರುಗಳನ್ನು ಬಿಟ್ಟು,  ಕಣ್ಣೀರನ್ನು ಹೊತ್ತುಕೊಂಡು ಸೊಲ್ಲಾಪುರಕ್ಕೆ ಬಂದಾಗ, ಅವರ ಪರಿಸ್ಥಿತಿ ತುಂಬ ದಯನೀಯವಾಗಿತ್ತು. ಮನೆ ಇಲ್ಲ, ಊರು ಇಲ್ಲ, ಬದುಕಿನ ಭರವಸೆ ಇಲ್ಲ….!! “ಬೆಂದು ಬಂದ ಮಕ್ಕಳ” ಎನ್ನುವ ಪದ ಬಹಳ ಗಂಭೀರ. ಇದು ಅವರ ನೋವನ್ನು ತಾಯಿಯವರು ಎಷ್ಟು ಆಳವಾಗಿ ಅನುಭವಿಸಿದ್ದಾರೆ ಎಂಬುದನ್ನು ತೋರಿಸುತ್ತದೆ.  ತಾಯಿಗೆ ಮಕ್ಕಳಂತೆ ಅವರು…..“ಎದ್ದು ಕಣ್ಣೀರ ಒರೆಸುವ ಭಾಗ್ಯ” — ಇಲ್ಲಿ ತಾಯಿಯವರು ಸೇವೆಯನ್ನು ಕರ್ತವ್ಯವಾಗಿ ಮಾತ್ರ ನೋಡುತ್ತಿಲ್ಲ. ಅದನ್ನು “ಭಾಗ್ಯ” ಎಂದುಕೊಂಡಿದ್ದಾರೆ. “ಸಿದ್ದ ನನಗೆ ನೀಡಿ ದುಡಿಸಿದಿ” ದೇವರು ನನಗೆ ಈ ಕೆಲಸ ಕೊಟ್ಟಿದ್ದಾನೆ, ಈ ಜನರ ಸೇವೆ ಮಾಡುವ ಅವಕಾಶ ನೀಡಿದ್ದಾನೆ ಎಂದು ತಾಯಿಯವರು ಕೃತಜ್ಞತೆಯಿಂದ ಹೇಳುತ್ತಾರ. ತಾಯಿಯವರಲ್ಲಿ ಇರುವ  ಮಾನವೀಯತೆ ಮತ್ತು ದೈವಭಕ್ತಿ ತೊರುವದು.  ಅವರ ಸೇವೆಯನ್ನು ತಮ್ಮ ಕರ್ತವ್ಯ ತಮ್ಮ ಧರ್ಮದಂತೆ ಸ್ವೀಕರಿಸಿದ್ದು ಇಲ್ಲಿ ಗೋಚರಿಸುತ್ತದೆ. ಆಗಿನ ಕಾಲದಲ್ಲಿಶ್ರೀ ಚಂಡರಕಿ (ಬೆನಕೊಪ್ಪ) ಉರ್ದು ಭಾಷೆಯ ಕವಿಯೊಬ್ಬನು  ವೀರಗಾಸೆ ಕುಣಿತದಲ್ಲಿ ಪ್ರಸಿದ್ಧರಾದವರು. ಸೊಲ್ಲಾಪುರಕ್ಕೆ ಬಂದ ನಿರಾಶ್ರಿತರಿಗೆ  ಆಶ್ರಿತರಾಗಿ ನಿಂತ ತಾಯಿಯವರ ಬಗ್ಗೆ ಉರ್ದುನಲ್ಲಿ ಕವಿತೆ ಬರ್ತಾನೆ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು ಡಾ. ಶಂಕರ. ಮೂಗಿ(ನನ್ನ ತಂದೆ)*ತಾಯಿ ನಿನಗೆ ಸಲಾಮು ನಿನಗೆ ಸಲಾಮು * ಅಟ್ಟಿ ಜಡಿಸಿದ ಕಾಸೀಮ ಗಜನಿಕಟ್ಟಿಕೊಂಡು ರಜಾಕಾರರ ದಂಡುಓಡಿ ಬಂದೆವು ನಾವಂದುತೋಳ ಕಂಡ ಕುರಿಯ ಹಿಂಡು ಉಟ್ಟಿದ ಸೀರೆ ತೊಟ್ಟಿದ್ದವಲ್ಲಬೆನ್ನು ಬಿರಿವ ಬಿಸಿಲಿನಲ್ಲಿಸೊನ್ನಲಿಗೆ ಭೂಮಿಗೆ ಬಂದುನಿಂದೆವು ಸಿದ್ದನ ಛತ್ರದಲ್ಲಿ….., ಅಂತ‌ ತಾಯಿಯವರ ಬಗ್ಗೆ ಬರಿತಾನೆ…… ಸೊಲ್ಲಾಪುರ ರೈಲ್ವೆ ನಿಲ್ದಾಣಕ್ಕೆ ಒಲಸಿ ಬಂದ ಜನರ ಜಾತಿಭೇದ ಲೆಕ್ಕಿಸದೆ ಜಯದೇವಿ ತಾಯಿಯವರು ವಸತಿ ವ್ಯವಸ್ಥೆ ,ಆಹಾರ ಸೌಲಭ್ಯ ,ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಸಿದ್ಧ ಮಾಡಿದರು. ಇದರಿಂದ ಸ್ಥಳೀಯ ಸಂಘ-ಸಂಸ್ಥೆಗಳು ಅದರಲ್ಲೂ ಮಹಿಳಾ ಜ್ಞಾನ ಮಂದಿರ ,ಶ್ರಾವಿಕಾಶ್ರಮ, ಸರಸ್ವತಿ ಸದನಗಳ ಕಾರ್ಯಕರ್ತರು ಸೇರಿ ನಿರಾಶ್ರಿತರಿಗೆ ಊಟದ ಪಟ್ಟಣಗಳನ್ನು, ನೀರು, ಹಾಲು,. ನಿತ್ಯ ಉಪಯೋಗವಾಗುವ ವಸ್ತುಗಳನ್ನು ವಿತರಿಸಲಾರಂಭಿಸಿದರು .ಇಡೀ ಸೊಲ್ಲಾಪುರದ ಜನತೆ ಅವರ ಸಹಾಯಕ್ಕೆ ನಿಂತರು.ಇಲ್ಲಿ ವಾರದ  ಬಾಬಾ ಸಾಹೇಬರು, ಕಾಡಾದಿ ನಾಗಪ್ಪನವರು ,ಜಯದೇವಿ ತಾಯಿಯವರು ನಿರಾಶ್ರಿತರಿಗೆ ಆಶ್ರಯ ಕೊಟ್ಟರು. ಹಾಗೂ ಭಾಲ್ಕಿ ಪಟ್ಟ ದೇವರನ್ನು ಕಂಡು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ನಿರಾಶ್ರಿತ ಮಕ್ಕಳ ಜೊತೆ ಎಲ್ಲರನ್ನೂ ನೋಡಿಕೊಳ್ಳುವಂತೆ ಭರವಸೆ ಕೊಟ್ಟು ವಸತಿ ವ್ಯವಸ್ಥೆಯನ್ನು ಮಾಡಿದರು. *ಹೊಲದಲ್ಲಿ ಮನೆ ಕಟ್ಟಿಕೊಟ್ಟೀರಿಕೊಯ್ದಿರಿ ನಿಂತ ಫಸಲುಆ ವರುಷ ನಿಮಗಾಗಲಿಲ್ಲಬೆಳೆಯಲ್ಲಿ ಏನು ಅಸಲು ಕೂಸು ಕಂಡಿರಲಿಲ್ಲ ನೆತ್ತಿಗೆಣ್ಣೆಹೊಟ್ಟೆಗಿರಲಿಲ್ಲ ಹಾಲು ತೊಟ್ಟುಹೊದಿಕೆ ಹಾಸಿ, ಹಾಸು ಇರಲಿಲ್ಲತಂದು ಒಗಿಸಿದಿರಿ ಚಾದರದ ಕಟ್ಟು* ತಾಯಿಯವರು ತಮ್ಮ ನಲವತ್ತು ಎಕರೆ ಭೂಮಿಯಲ್ಲಿ ಬೆಳೆದು ನಿಂತ ಬೆಳೆಯನ್ನು ತೆಗೆಸಿ…ಸೆಡ್ ಹಾಕಿ ನಿರಾಶ್ರಿತರಿಗೆ ಇರಲು ಹೊಸ ವೆವ್ಯಸ್ತೆಯನ್ನು ಮಾಡಿದರು. ತಮ್ಮ ಮನೆಯಾದ ಜೈನಿಕೇತನದಿಂದಲೇ  ನಿರಾಶ್ರಿತ ಜನರಿಗೆ ಬಟ್ಟೆಯನ್ನು ದಾನ ಮಾಡುತ್ತಿದ್ದರು  ಇಷ್ಟೇ ಅಲ್ಲದೆ ಜಯದೇವಿ ತಾಯಿಯವರು ಶಿಬಿರಕ್ಕೆ ಆಗಾಗ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಕೇಳುತ್ತಿದ್ದರು … ಬಡವರು ದಲಿತರು ನಿರಾಶ್ರಿತರು ಅದು ಯಾವುದೇ ಮತ ಕುಲಕ್ಕೆ ಸಂಬಂಧಿಸಿದ್ದರು ಎಲ್ಲರಿಗೂ ತಾಯಿ ಮಕ್ಕಳನ್ನು ನೋಡುವಂತೆ ನೋಡಿಕೊಂಡರು. *ಹಡೆದ ನಾರಿಯರ ಕರೆದುತಂದು ಮಾಡಿದಿರಿ ಆರೈಕೆತವರಿಗೆ ಕಡಿಮೆ ಅಲ್ಲದಂತೆಪಡೆದೆವು ಅಮ್ಮ ನಿನ್ನ ಹರಿಕೆ * ನಿರಾಶ್ರಿತ್ರಿರಗೆ ಆಶ್ರಯ ಕೊಡುವದು ಅಂಥ ಸುಲಭದ ಕೆಲಸವೇನು ಆಗಿರಲಿಲ್ಲ ಅದರಲ್ಲಿ ಬಾಣಂತಿಯರು ಗರ್ಭಿಣಿಯರಂಥ  ಸ್ತ್ರೀಯರು ಕೂಡ ಇದ್ದರು ಅವರೆಲ್ಲರಿಗೂ ಕರೆದು ಬಾಣಂತನವನ್ನು ಮಾಡಿಸಿ ನವಜಾತ ಶಿಶುಗಳ ಆರೈಕೆ ಮಾಡಿಸಿದರು. ಗರ್ಭಿಣಿಯರಿಗೆ ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸಿದರು.ವಿವಿಧ ಸಂಸ್ಥಾನಗಳ ವಿಲೀನಿಕರಣ ಸಂದರ್ಭದಲ್ಲಿ ದೇಶದ ಏಕೀಕರಣಕ್ಕಾಗಿ ಶಕ್ತಿಯಾಗಿ ನಿಂತ ನಾಯಕ ಸರ್ದಾರ್ ವಲ್ಲಭಾಯಿ ಪಟೇಲರು.ಸ್ಥಿತಿ ಹಿಡಿತದಿಂದ ತಪ್ಪುತ್ತಿರುವುದು ಕಂಡಾಗ, ಪಟೇಲರು ತಕ್ಷಣವೇ ಶೀಘ್ರ ಹಾಗೂ ದೃಢ ಕ್ರಮ ಕೈಗೊಂಡರು. ಅವರ ದೃಷ್ಟಿಯಲ್ಲಿ ದೇಶದ ಏಕತೆ ಮತ್ತು ಭದ್ರತೆ ಅತ್ಯಂತ ಮುಖ್ಯವಾಗಿತ್ತು.ಶೀಘ್ರ ಕಾರ್ಯಾಚರಣೆಯಲಿ(ಕ್ವಕ ಆಕ್ಷನ್)ಪಟೇಲರ ದೃಢ ನಿಲುವು ತೆಗೆದುಕೊಂಡರು.ಈ ಸಂದರ್ಭದಲ್ಲಿ ಪಟೇಲರು ಮಾತುಕತೆ ಜೊತೆಗೆ ಅಗತ್ಯವಾದರೆ ಶಕ್ತಿಯನ್ನೂ ಬಳಸಬೇಕು ಎಂಬ ನಿಲುವನ್ನು ತಾಳಿದರು.ಹೈದರಾಬಾದ್ ಸಂಸ್ಥಾನದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ, ಅವರು “ಪೊಲೀಸ್ ಆಕ್ಷನ್”  ಸೈನಿಕ ಕ್ರಮವನ್ನು ಜಾರಿಗೊಳಿಸಿದರು. ಇದನ್ನು *ಆಪರೇಷನ್ ಪೋಲೋ*ಎಂದು ಕರೆಯಲಾಗುತ್ತದೆ. ಈ ಕಾರ್ಯಾಚರಣೆಯ ಮೂಲಕ ಕೇವಲ ಐದು ದಿನಗಳಲ್ಲಿ ಹೈದರಾಬಾದ್ ಸಂಸ್ಥಾನವನ್ನು ಭಾರತದ ಭಾಗವನ್ನಾಗಿ ಮಾಡಲಾಯಿತು.ಪಟೇಲರ ನಾಯಕತ್ವದ ವೈಶಿಷ್ಟ್ಯದೃಢ ನಿರ್ಧಾರ ಶಕ್ತಿ,ತ್ವರಿತ ಕಾರ್ಯಾಚರಣೆ,ದೇಶದ ಏಕತೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧತೆಯಲಿ ಇದ್ದರು ಪಟೇಲರು….. ಈ ಶೀಘ್ರ ಮತ್ತು ದೃಢ ಕ್ರಮಗಳ ಫಲವಾಗಿ, ಭಾರತ ಒಂದು ಏಕೀಕೃತ ರಾಷ್ಟ್ರವಾಗಿ ರೂಪುಗೊಂಡಿತು. *” ದೇಶದ ಏಕತೆಯ ಕಗ್ಗತ್ತಲಲ್ಲಿ ಬೆಳಕಾಗಿ ಕಾಣಿಸಿಕೊಂಡವರು ಸರ್ದಾರ್ ವಲ್ಲಭಾಯಿ ಪಟೇಲರು…..“ಭಾರತದ ಕಬ್ಬಿಣ ಮನುಷ್ಯನು” ಎಂದು ಜಯದೇವಿ ತಾಯಿಯವರು ಬಹಳ ಹೆಮ್ಮೆಯಿಂದ ಎಲ್ಲ ಭಾಷಣಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಕೊನೆಗೊಮ್ಮೆ… ಅನುಭವಿಸಿದ ನೋವು, ನಿರಾಶೆ, ಅಲೆಮಾರಿ ಜೀವನದ ನಂತರ, ನಿರಾಶ್ರಿತರು ಮತ್ತೆ ತಮ್ಮ ಆಶ್ರಯದ ನೆಲೆಗೆ ಹಿಂದಿರುಗುವ ಕ್ಷಣ ಬಂದಾಗ, ಅದು ಅವರ ಬದುಕಿನ ಪುನರ್ಜನ್ಮದಂತಿತ್ತು. ಆ ಸಂತಸದ ದಿನ ಬಂದು ಒದಗಿದ್ದು ೩೦-೯-೪೮ ರಂದು. ನಿರಾಶ್ರಿತರು ತಮ್ಮ ಆಶ್ರಿತ ಸ್ಥಾನಕ್ಕೆ ಹೊರಟು ನಿಂತರು….. ಸ್ವಸ್ಥಾನಕ್ಕೆ ಹಿಂದುತ್ತಿರುವಾಗ ಅವರಲ್ಲಿ ಇದ್ದ ಆನಂದ ಉತ್ಸಾಹ ಹೇಳುತೀರದಾಗಿತ್ತು ….. ಅವರಿಗೆ ನಿಜವಾದ ಸ್ವಾತಂತ್ರ ಈಗ ಬಂದಾಗಿತ್ತು ..,!!!.ಎಲ್ಲರೂ ತಾಯಿಯವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸ್ತಾ ಹಾಡಿ ಹರಿಸಿ ಹೊಗಳಿ ಅಲ್ಲಿಂದ ತೆರಳಿದರು. ತಮ್ಮ ಮನೆಗಳ ಬಾಗಿಲುಗಳನ್ನು ಮತ್ತೆ ತೆರೆಯುವ ತವಕ …ಕಣ್ಣಲ್ಲಿ ಆನಂದದ ಕಣ್ಣೀರು ತುಂಬಿಕೊಂಡವು…. ಆಸರೆ ಕೊಟ್ಟ ನೆಲವನ್ನು ಬಿಟ್ಟು ಹೋಗುವಾಗ. ..ಆ ಮಣ್ಣನ್ನು  ಸ್ಪರ್ಶಿಸಿದಾಗ ಅವರ ಹೃದಯ ತುಂಬ ಒಂದು ಶಾಂತಿಯ ಅಲೆ ಹರಡಿತು.ಭೂಮಿಗೆ ನಮಿಸಿದರು.ಮಕ್ಕಳು ಸಂತೋಷದಿಂದ ಓಡಾಡುತ್ತಿದ್ದರು, .ಪ್ರತಿ ಹೆಜ್ಜೆ   ಪ್ರತಿ ಉಸಿರು  ಒಂದು ಕಥೆ ಹೇಳುವಂತೆ ಇತ್ತು…..ಆ ಕ್ಷಣದಲ್ಲಿ ಅವರು ತಮ್ಮ ಕಷ್ಟಕಾಲದಲ್ಲಿ ತಾಯಿಯಂತೆ ನೆರವಾದ ಆ ಮಹಾನ್ ವ್ಯಕ್ತಿಯ ಜಯದೇವಿ ತಾಯಿಯವರನ್ನು ನೆನೆಸಿಕೊಂಡರು“ತಾಯಿ… ನಮ್ಮ ಜೀವ ಉಳಿಸಿದವಳು ನೀವು… ನಾವು ಕಳೆದುಕೊಂಡ ವಿಶ್ವಾಸವನ್ನು ಮತ್ತೆ ನಮ್ಮೊಳಗೆ ತುಂಬಿದವಳು ನೀವು… ನಮ್ಮ ನೆರಳಿಲ್ಲದ ಬದುಕಿಗೆ ಆಶ್ರಯವಾದವಳು ನೀವು… ಇಂದು ನಾವು ಮತ್ತೆ ನಮ್ಮ ನೆಲಕ್ಕಹಿಂದಿರುಗುತ್ತಿದ್ದೇವೆಆದರೆ ಈ ಸಂತೋಷದ ಪ್ರತಿಯೊಂದು ಹನಿ ನಿಮ್ಮ ಆಶೀರ್ವಾದವೇ…ನಾವು ನಿಮ್ಮ ಋಣವನ್ನು ಯಾವತ್ತೂ ತೀರಿಸಲಾರೆವು… ನಮ್ಮ ಹೃದಯದ ತುಂಬು ಕೃತಜ್ಞತೆಗಳನ್ನು ನಿಮಗೆ ಅರ್ಪಿಸುತ್ತೇವೆ ಎನ್ನುತ ಹಾಡಿ ಹರಸಿದರು……. *ಹೇಗೆ ತೀರಿಸಬೇಕು ತಾಯಿನಿನ್ನ ಋಣವ ಒಟ್ಟುನೆನೆವೆವು ಹಡೆದ ಮಕ್ಕಳಿಗೆ*ನಿನ್ನ ಹೆಸರು ಇಟ್ಟು,*‌‌….!!! ಜಯಭೇರಿ ಕೇಳಿ ಕುಣಿದೆವುಆಯಿತು ರಜಾಕರರ ಹೋಮಮಕ್ಕಳು ಮರಿ ಹೋಗಿ ಬರುವೆವುತಾಯಿ ನಿನಗೆ ಸಲಾಂ.. ನಿನಗೆ ಸಲಾಮ* (ಚಂಡರಕಿ ಉರ್ದು ಕವಿ) ಅವರ ಮುಖದಲ್ಲಿ ಕಂಡ ಆ ಸಂತಸ ಅವರ ಹೃದಯದಲ್ಲಿ ಮೂಡಿದ ಆ ಶಾಂತಿ—ಅದು ತಾಯಿಯ ಸೇವೆಗೆ ದೊರಕಿದ ಅತ್ಯಂತ ಮಹತ್ತರ ಗೌರವ.ಈ ದೃಶ್ಯ… ನೋವಿನಿಂದ ಆರಂಭವಾಗಿ, ಕೃತಜ್ಞತೆಯಲ್ಲಿ ಮುಗಿಯುವ ಒಂದು ಬದುಕಿನ ಪಯಣ.ಮುಂದುವರಿಯುವುದು ಸವಿತಾ  ದೇಶಮುಖ 

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಸವಿತಾ ದೇಶಮುಖ ಭಾರತಕ್ಕೆ ಸ್ವಾತಂತ್ರವೇನೋ ದೊರೆತಿತ್ತು ನಿಜ ಆದರೆಅನೇಕ ಸ್ಥಿತ್ಯಂತರಗಳು ಹಾಗೂ ಸಮಸ್ಯಗಳ ಕುರಿತು ಪರಿಹಾರ ಹುಡುಕಬೇಕಾಗಿತ್ತು.ಇಂತಹ ಕಾಲದಲ್ಲಿ ಜನತೆಗಾಗಿ ದೇಶದ ಅಭಿವೃದ್ಧಿಗೆ ಪೂರಕವಾಗ ಬೇಕೆಂತಹ ಕಾರ್ಯಗಳನ್ನು ಹಮ್ಮಿಕೊಳ್ಳ ಬೇಕಾಗಿದನ್ನು ಅರಿತುಕೊಂಡಿದ್ದರು ಜಯದೇವಿ ತಾಯಿಯವರು ಹಾಗೂ ಅವರ ಸಂಘಟನಾ ಸದಸ್ಯರು. ೧೯೪೭ ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ, ದೇಶದ ಮುಂದೆ ದೊಡ್ಡ ಸವಾಲಾಗಿ ನಿಂತದ್ದು ಸಂಸ್ಥಾನಗಳ ವಿಲೀನಿಕರಣ …… ಸುಮಾರ ೫೬೫ ಕ್ಕೂ ಹೆಚ್ಚು ಸಂಸ್ಥಾನಗಳು ಇದ್ದವು ಮತ್ತು ಅವುಗಳಿಗೆ ಸ್ವತಂತ್ರವಾಗಿರುವದೇ ಅಥವಾ ಭಾರತ ಇಲ್ಲವೇ ಪಾಕಿಸ್ತಾನಕ್ಕೆ ಸೇರೋದು ಎಂಬ ಆಯ್ಕೆ ನೀಡಲಾಗಿತ್ತು…..ಇದರಿಂದ ಅನೇಕ ಸಮಸ್ಯೆಗಳು ಉಂಟಾದವು. ಸ್ವಾತಂತ್ರ್ಯದ ಆಸೆ ಯಿಂದಾಗಿ ಕೆಲವು ರಾಜರು ಭಾರತಕ್ಕೆ ಅಥವಾ ಪಾಕಿಸ್ತಾನಕ್ಕೂ ಸೇರುವುದನ್ನು ಬಯಸದೇ, ಸ್ವತಂತ್ರ ರಾಷ್ಟ್ರವಾಗಿರಲು ಯತ್ನಿಸಿತ್ತು ಅದುವೇ* ಹೈದರಾಬಾದ ಸಂಸ್ಥಾನ*…..ಇದರಿಂದ ದೇಶ ತುಂಡಾಗಿ ಹೋಗುವ ಭೀತಿ  ಉಂಟಾಯಿತು.ಧರ್ಮ ಮತ್ತು ಭೌಗೋಳಿಕವಾಗಿ ಕೆಲವು ಸಂಸ್ಥಾನಗಳಲ್ಲಿ ಜನಸಂಖ್ಯೆ ಮತ್ತು ರಾಜರ ಧರ್ಮ ಭಿನ್ನವಾಗಿತ್ತು.*ಜುನಾಗಢದ*ಲಿ….ಹಿಂದೂ ಜನರು…ಮುಸ್ಲಿಂ ನವಾಬ ಇದ್ದನು..ಅದೇ‌ ರೀತಿ ಕಾಶ್ಮೀರದಲ್ಲಿಮುಸ್ಲಿಂ ಜನರು…ಹಿಂದೂ ರಾಜನಿದ್ದ….ಇದರಿಂದ ಗೊಂದಲ, ಹೋರಾಟಗಳು ನಡೆದವು. ಇಲ್ಲಿ ಮೈಸೂರು ಸಂಸ್ಥಾನ ಒಂದು ಪ್ರಮುಖ ಸಂಸ್ಥಾನವಾಗಿತ್ತು….ಮೈಸೂರು ಅರಸರು ಭಾರತ ಸೇರುವುದನ್ನು ವಿರೋಧಿಸಿದಾಗ ಜನರು ದಂಗೆ ಎದ್ದಾಗ ಅಲ್ಲಿ ಗೋಲಿಬಾರ್ ಆಗಿ ಕೆಲ ಜನರು ಅನಾಹುತಕ್ಕೆ ಇಡಾದರು…. ಇದನ್ನು ಖಂಡಿಸಿ *ಜಯದೇವಿ ತಾಯಿಯವರು* ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟ ಧೀರ ಮಹಿಳೆ.ಅದರಂತೆ ಮುಂದೆ ಮಹಾರಾಜ ಜಯಚಾಮರಾಜೇಂದ್ರ ವಡಿಯರ.  ೯ ಆಗಸ್ಟ್೧೯೪೭ ರಂದು ಭಾರತಕ್ಕೆ ಸೇರುವ ಒಪ್ಪಂದಕ್ಕೆ ಸಹಿ ಹಾಕಿದರು.ಮುಂದೆ ಮೈಸೂರು ಶಾಂತಿಯುತವಾಗಿ ಭಾರತಕ್ಕೆ ಸೇರಿತು‌. ಇಲ್ಲಿ ಸಮಸ್ಯೆ ಉದ್ಭವಿಸಿದ್ದು ಹೈದ್ರಾಬಾದ್ ನಿಜಾಮನ ಆಳ್ವಿಕೆಯಲ್ಲಿ……!!! ಹೈದರಾಬಾದ್ ಸಂಸ್ಥಾನವು ಭಾರತದ ಅತಿ ದೊಡ್ಡ ಮತ್ತು ಶ್ರೀಮಂತ ಸಂಸ್ಥಾನವಾಗಿತ್ತು.ಜನಸಂಖ್ಯೆಯಲ್ಲಿ ಬಹುಪಾಲು ಹಿಂದೂಗಳು, ಆದರೆ ಆಡಳಿತ ಮುಸ್ಲಿಂ ನಿಜಾಮನ ಕೈಯಲ್ಲಿ ಇತ್ತು.ನಿಜಾಮ್ ತನ್ನ ರಾಜ್ಯವನ್ನು “ಸ್ವತಂತ್ರ ದೇಶ”ವಾಗಿ ಉಳಿಸಿಕೊಳ್ಳಲು ಬಯಸಿದ “ಮಿರ್ ಒಸ್ಮಾನ್ ಅಲಿ ಖಾನನು ಭಾರತಕ್ಕೂ ಸೇರುವುದಿಲ್ಲ,ಪಾಕಿಸ್ತಾನಕ್ಕೂ ಸೇರುವುದಿಲ್ಲವೆಂದು…..“ಸ್ವತಂತ್ರ ಹೈದರಾಬಾದ್ ರಾಷ್ಟ್ರ” ನಿರ್ಮಿಸಲು ಬಯಸಿದ ಅವರು ಭಾರತ ಸರ್ಕಾರದ ಜೊತೆ  “ಸ್ಟ್ಯಾಂಡ್ ಸ್ಟಿಲ್” ಒಪಂದ ಮಾಡಿಕೊಂಡು ಸಮಯ ಕಳೆಯಲು ಪ್ರಯತ್ನಿಸಿದ. ನಿಜಾಮನ ಆಡಳಿತದಲ್ಲಿ, ವಿಶೇಷವಾಗಿ ರಜಾಕಾರ್ ದಳದ ಕಾರಣದಿಂದ ಜನರು ತುಂಬಾ ಸಂಕಷ್ಟ ಅನುಭವಿಸಿದರು.ಕಾಸಿಂ ರಿಜ್ವಿ ನೇತೃತ್ವದಲ್ಲಿ ರಜಾಕಾರ ಸಂಘಟನೆಗ್ರಾಮಗಳಲ್ಲಿ ದಾಳಿ, ಹಿಂಸೆ, ಲೂಟಿ ಮಹಿಳೆಯರ ಮೇಲೆ ಅತ್ಯಾಚಾರಗಳಂಥ ದುಷ್ಕೃತ್ತಿಗಳು ನಡೆದವು..ಇದರಿಂದ ಸಾವಿರಾರು ಜನರು ಮನೆಬಿಟ್ಟು ಓಡಿನಿರಾಶ್ರಿತರ ಆಗಿ ಬೇರೆ ಪ್ರದೇಶಗಳಿಗೆ ಹೋದರುರೈತರು ಮತ್ತು ಸಾಮಾನ್ಯ ಜನರ ಸ್ಥಿತಿ ಹೇಳತೀರದಾಗಿತ್ತು….. ಜಮೀನ್ದಾರರು ದೌರ್ಜನ್ಯಕೆ ಒಳಪಟ್ಟು ಭಾರೀ ತೆರಿಗೆ ಕಟ್ಟಬೇಕಾಗಿ ಬಂತು…ಬಡ ರೈತರು ಹಿಂಸೆಗೆ ಒಳಗಾದರು…..ಇದಕ್ಕೆ ಪ್ರತಿಯಾಗಿಹೈದರಾಬಾದ್ ಜನರು ಸ್ವಾತಂತ್ರ್ಯ ಬಂದರೂ ಕೂಡಸ್ವಾತಂತ್ರ್ಯದ ಸುವಾಸನೆ ಅನುಭವಿಸಲಿಲ್ಲ… ನಿಜಾಮನ ಸ್ವತಂತ್ರವಾಗಿ ರಾಜ್ಯ ಕಟ್ಟುವ ಆಸೆ ಜನರಿಗೆ ಸಂಕಷ್ಟವಾಯಿತು…ಹೈದರಾಬಾದ್ ಸಂಸ್ಥಾನದಲ್ಲಿ ಮಿರ್ ಒಸ್ಮಾನ್ ಅಲಿ ಖಾನ್ ಅವರ ಆಡಳಿತದ ಕೊನೆಯ ದಿನಗಳಲ್ಲಿ, ವಿಶೇಷವಾಗಿ ರಜಾಕಾರ್ ಹಿಂಸಾಚಾರದ ಸಮಯದಲ್ಲಿ, ಸಾವಿರಾರು ಜನರು ನಿರಾಶ್ರಿತರಾಗಿ ಭಾರೀ ಸಂಕಷ್ಟ ಅನುಭವಿಸಿದರು. ರಜಾಕಾರ್ ದಾಳಿಗಳು ಹಠಾತಆಗಿ ನಡೆಯುತ್ತಿತ್ತುಗ್ರಾಮಗಳಲ್ಲಿ ಹತ್ಯೆ, ಬೆಂಕಿ ಹಚ್ಚುವುದು, ದೋಚಾಟ ಸಾಮಾನ್ಯವಾಗಿತ್ತು ಜನರು ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಬೇಕಾಯಿತು….ಮನೆಗಳನ್ನು ಸುಟ್ಟುಹಾಕುವುದು ಧಾನ್ಯ, ಪಶು, ಆಸ್ತಿ ದೋಚಿಕೊಳ್ಳುವಂಥ ದುಷ್ಕೃತ್ಯಗಳು ನಡೆದವು. ಒಂದೇ ರಾತ್ರಿಯಲ್ಲಿ ಜನರು ಎಲ್ಲವನ್ನೂ ಕಳೆದುಕೊಂಡರು.  ಮಹಿಳೆಯರ ಮೇಲಿನ ಹಿಂಸೆ ಅತ್ಯಾಚಾರ, ಅವಮಾನಕಾರಿ ವರ್ತನೆಯಿಂದಾಗಿ ಕುಟುಂಬಗಳು ಭೀತಿಯಿಂದ ಊರು ಬಿಟ್ಟು ಹೋಗುವ ಪರಿಸ್ಥಿತಿ  ಬಂದಿತು,ಆಹಾರ ಮತ್ತು ಆಶ್ರಯದ ಕೊರತೆಯಿಂದಾಗಿ ಓಡಿಹೋಗುವಾಗ ಆಹಾರ ಇಲ್ಲದೆ ನರಳಿದರು ….ಚಿಕ್ಕ ಮಕ್ಕಳೊಂದಿಗೆ ಕಾಡು, ಹೊಲಗಳಲ್ಲಿ ಅಲೆದಾಡಲಾರಂಭಿಸಿದರು.ಹಸಿವು, ದಾಹ, ರೋಗಗಳಿಂದ ನರಳಿದರು. ಓಡಾಟದಲ್ಲಿ ಕುಟುಂಬದವರು ಬೇರೆಯಾದರು ಮಕ್ಕಳು, ಮಹಿಳೆಯರು ಕಳೆದುಹೋಗುವ ಘಟನೆಗಳು ನಡೆದವು…. ಹೀಗಾಗಿಹೈದರಾಬಾದ್ ಸಂಸ್ಥಾನದ ಜನರು ಹತ್ತಿರದ *ಮೈಸೂರು ಪ್ರದೇಶ *…ಇಂದಿನ ಕರ್ನಾಟಕಕ್ಕೆ ಸುರಕ್ಷಿತ ಪ್ರದೇಶಗಳಿಗೆ ಕುಟುಂಬ ವನ್ನು ರವಾನಿಸಿದರು.ಬಳ್ಳಾರಿ,ರಾಯಚೂರು ಪ್ರದೇಶಗಳಿಗೆ ಹಲವರು ಹೋದರು……ಇಲ್ಲಿ ಜನರು ತಾತ್ಕಾಲಿಕ ಆಶ್ರಯ ಪಡೆದರು. ಇನ್ನು ಹಲವರು* ಬಾಂಬೆ ಪ್ರೆಸಿಡೆನ್ಸಿ* ಭಾಗಗಳು  ಅಂದರೆ ಇಂದಿನ ಮಹಾರಾಷ್ಟ್ರ. ಸೋಲಾಪುರ,ಪೂಣೆಗಡಿ ಪ್ರದೇಶಗಳಿಗೆ ಹೆಚ್ಚಿನ ಜನರು ಹರಿದು ಬಂದರು. ಇನ್ನು ಹಲವರು *ಮದ್ರಾಸ್ ಪ್ರೆಸಿಡೆನ್ಸಿ *ಭಾಗಗಳು ಇಂದಿನ ಆಂಧ್ರಪ್ರದೇಶ ಮತ್ತು ತಮಿಳುನಾಡು, ಕುರ್ನೂಲ್,ಗುಂಟೂರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡರು…. ಎಲ್ಲ ಪ್ರದೇಶಗಳಲ್ಲಿ ಅಲ್ಲಲ್ಲಿ ನಿರಾಶ್ರಿತ್ರಿಗೆ ಶಿಬಿರಗಳಲ್ಲಿ ತಂಗಿದರು.ಸರ್ಕಾರ ಮತ್ತು ಸಮಾಜದಿಂದ ಸ್ವಲ್ಪ ಸಹಾಯ ದೊರೆತರೂ ಅನಿಶ್ಚಿತ ಭವಿಷ್ಯ “ನಮ್ಮ ಊರು ಯಾವಾಗ ಮರಳಿ ಸಿಗುತ್ತೆ?” ಎಂಬ ನೋವು ಹೊತ್ತು ಬಾಳುತ್ತಿದ್ದರು. *ಈ ಸಮಯದಲ್ಲಿ ಸಾವಿರಾರು ಜನರು ಸೊಲ್ಲಾಪುರದತ ಧಾವಿಸಿದರು ರಜಾಕಾರರ ರಕ್ಕಸಿಯ ದವಡೆಗೆ ಸಿಲುಕಿದ ನಿರಾಶ್ರಿತರಿಗೆ ಅನ್ನ ಅರಿವೆ ಆಶ್ರಯವನ್ನು ಜಯದೇವಿ ತಾಯಿಯವರು ಕೊಟ್ಟ‌ ಸಲುಹಿದರು* ಮನೆಮಾರ ತೊರೆದಾರ, ಕನವರೆಸಿ ಬಂದಾರಅನ್ನ ನೀರಿಗೆ ದಿಕ್ಕಿಲ್ಲ ,ನನ್ನ ಜನಸೊನ್ನಲಿಗಿ ದಾರೀ ಹಿಡಿದಾರ !! ಸೊಲ್ಲಾಪುರ ರೈಲ್ವೆ ನಿಲ್ದಾಣಕ್ಕೆ ಒಲಸಿ ಬಂದ ಜನರ ಜಾತಿಭೇದ ಲೆಕ್ಕಿಸದೆ ಜಯದೇವಿ ತಾಯಿಯವರು ವಸತಿ ವ್ಯವಸ್ಥೆ ,ಆಹಾರ ಸೌಲಭ್ಯ ,ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಸಿದ್ಧ ಮಾಡಿದರು. ಇದರಿಂದ ಸ್ಥಳೀಯ ಸಂಘ-ಸಂಸ್ಥೆಗಳು ಅದರಲ್ಲೂ ಮಹಿಳಾ ಜ್ಞಾನ ಮಂದಿರ ,ಶ್ರಾವಿಕಾಶ್ರಮ, ಸರಸ್ವತಿ ಸದನಗಳ ಕಾರ್ಯಕರ್ತರು ಸೇರಿ ನಿರಾಶ್ರಿತರಿಗೆ ಊಟದ ಪಟ್ಟಣಗಳನ್ನು, ನೀರು, ಹಾಲು,. ನಿತ್ಯ ಉಪಯೋಗವಾಗುವ ವಸ್ತುಗಳನ್ನು ವಿತರಿಸಲಾರಂಭಿಸಿದರು .ಇಡೀ ಸೊಲ್ಲಾಪುರದ ಜನತೆ ಅವರ ಸಹಾಯಕ್ಕೆ ನಿಂತರು.ಇಲ್ಲಿಗೆ ವಾರದ  ಬಾಬಾ ಸಾಹೇಬರು, ಕಾಡಾದಿ ನಾಗಪ್ಪನವರು ,ಜಯದೇವಿ ತಾಯಿಯವರು ನಿರಾಶ್ರಿತರಿಗೆ ಆಶ್ರಯ ಕೊಟ್ಟರು. ಹಾಗೂ ಭಾಲ್ಕಿ ಪಟ್ಟ ದೇವರನ್ನು ಕಂಡು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ನಿರಾಶ್ರಿತ ಮಕ್ಕಳ ಜೊತೆ ಎಲ್ಲರನ್ನೂ ನೋಡಿಕೊಳ್ಳುವಂತೆ ಭರವಸೆ ಕೊಟ್ಟು ವಸತಿ ವ್ಯವಸ್ಥೆಯನ್ನು ಮಾಡಿದರು.  ತಾಯಿಯವರು ತಮ್ಮ ನಲವತ್ತು ಎಕರೆ ಭೂಮಿಯಲ್ಲಿ ಸೆಡ್ ಹಾಕಿ ನಿರಾಶ್ರಿತರಿಗೆ ಇರಲು ಹೊಸ ವೆವ್ಯಸ್ತೆಯನ್ನು ಮಾಡಿದರು. ಬಡವರು ದಲಿತರ ಬದುಕನ್ನು ತಮ್ಮ ಹಿತಾಸಕ್ತಿಗಾಗಿ ನಾಶ ಮಾಡುತ್ತಿದ್ದಂತೆ ಜಮೀನ್ದಾರಿ ವರ್ಗಕ್ಕೆ ವೆತರಿಕ್ತವಾಗಿ ಜನಪರ ಕೆಲಸವನ್ನು ಮಾಡುತ್ತಾ ಬಂದರು.  ಶಾಲಾ ವಿದ್ಯಾರ್ಥಿಗಳಿಗೆ ಕುಂಟೋಜಿ ಮಠದಲ್ಲಿ ಇವರಿಗೆ ವ್ಯವಸ್ಥೆ ಮಾಡಲಾಯಿತು. ನಿರಾಶ್ರಿತರಿಗೆ  ಬೇಕಾದ ಸಾಮಾನುಗಳು ದವಸ ಧಾನ್ಯ ಪಟ್ಟಿಯನ್ನು ಮಾಡಿ ಉದ್ಯಮಿ ಪತಿಗಳು ನಿಗದಿತ ಸ್ಥಳಕ್ಕೆ ತಂದು ತಲುಪಿಸುವಂಥ ಯೋಜನೆಗಳನ್ನು ಹಾಕಿದರು. ಇಂಥ ಕೆಲಸಗಳಲ್ಲಿಜಯದೇವಿ ತಾಯಿಯವರ ಜೊತೆಗೂಡಿದವರು  ಶ್ರೀಮತಿ ಘಾಟಿಗೆ ಸುಮಿತ್ರಾಬಾಯಿ ,ವಾರದ ಬಾಬಾ ಸಾಹೇಬ ,ನಾಗಪ್ಪ ಕಾಡದಿ, ಚಾಕುತಿ ಈರಮ್ಮ, ಸಂಗವ್ವ ಮಡಿಕೆ ಮೊದಲಾದ ಪ್ರಮುಖರು ಸಭೆಯೊಂದು ಸೇರಿ ಸೌಲಭ್ಯ ಒದಗಿಸುವ ನಿರ್ಣಯವನ್ನು ತೆಗೆದುಕೊಂಡರು .ಬೀದರ್ ರೈಚೂರ್ ಕಲ್ಬುರ್ಗಿಯಿಂದ ವಲಸಿ ಬಂದ ಮಕ್ಕಳಿಗೆ ಕಾಡದೇ ಹೈಸ್ಕೂಲ್ನಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟರು . ಜಯದೇವಿ ತಾಯಿಯವರು ತಮ್ಮ ಮನೆಯಾದ ಜೈನಿಕೇತನದಿಂದಲೇ  ನಿರಾಶ್ರಿತ ಜನರಿಗೆ ಬಟ್ಟೆಯನ್ನು ದಾನ ಮಾಡುತ್ತಿದ್ದರು  ಇಷ್ಟೇ ಅಲ್ಲದೆ ಜಯದೇವಿ ತಾಯಿಯವರು ಶಿಬಿರಕ್ಕೆ ಆಗಾಗ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಕೇಳುತ್ತಿದ್ದರು …ಅವರಿಗಾಗಿ ೫ ಲಕ್ಷ ೮೦೧೪ ರೂಪಾಯಿಗಳನ್ನು ಸಂಗ್ರಹಿಸಿದರು . ಸಾವಿರಾರು  ಸೀರೆಗಳು ಮತ್ತು ಅಷ್ಟೇ ಬೆಲೆ ಬಾಳುವ ರಘ ಪಡೆದರು. ಸರಿಯಾಗಿ ಹಂಚಿ ಅವುಗಳನ್ನು ವಿತರಿಸಿದರು ವುಲನ್ ತಂದು ಶಾಲಾ ಶಿಕ್ಷಕಿಯರಿಂದ ಸ್ವೀಟರ್ ಗಳನ್ನು ಹೆಣಿ‌ಸಿ ನಿರಾಶೆತ್ರಿಗೆ ಕೊಡುತ್ತಿದ್ದರು. ಇನ್ನುಳಿದ ಮಕ್ಕಳಿಗೆ ಅನುಕೂಲವಾಗುವಂತೆ ಮಾಧ್ಯಮಿಕ ಶಾಲೆಯನ್ನು ಕೂಡ ಪ್ರಾರಂಭಿಸಿದರುತಾಯಿಯವರು ಹೇಳ್ತಾರೆ. *ಸಿದ್ದನ ಛತ್ತರಕ್ಕ ಬೆಂದು ಬಂದ ಮಕ್ಕಳಎದ್ದು ಕಂಣ್ಣೀರ ಒರೆಸುವ ,ಭಾಗ್ಯವಸಿದ್ದ ನನಗೆ ನೀಡಿ ದುಡಿಸಿದಿ* ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-15 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ. ಲೇ:ಸವಿತಾ ದೇಶಮುಖ  ೧೯೪೭ರ ಸಮಯ… ದೇಶಕ್ಕೆ ಸ್ವಾತಂತ್ರ್ಯದ ಸುಳಿವು ಸಿಗುತ್ತಿದ್ದಂತೆಯೇ, ಜಯದೇವಿ ತಾಯಿಯವರು ಸ್ತ್ರೀಯರನ್ನು ಒಗ್ಗೂಡಿಸಿ ಸಭೆಗಳನ್ನು ನಡೆಸಲಾರಂಭಿಸಿದರು.ಸ್ವಾಭಿಮಾನಿ ಸಮಾಜ, ಸ್ತ್ರೀಯರ ಕರ್ತವ್ಯ ಮತ್ತು ಸ್ವಾತಂತ್ರ ಭಾರತದ ಬದುಕಿನ ಬಗ್ಗೆ ಊರು-ಊರುಗಳಲ್ಲಿ ಜಾಗೃತಿ ಮೂಡಿಸಿದರು. ಮನೆಯಲ್ಲಿ ಗಂಡನ ಆರೋಗ್ಯ ಸರಿಯಿಲ್ಲದಿದ್ದರೂ, ಕುಟುಂಬದ ಬೆಂಬಲದೊಂದಿಗೆ ಅವರು ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡರು. ಕೊನೆಗೂ… ಆ ಮಹಾನ್ ಕ್ಷಣ ಬಂತು ಭಾರತ ಮಾತೆ ಬಿಡುಗಡೆ ಹೊಂದುವ ದಿನ ಬಂದೇಬಿಟ್ಟಿತು… ಭಾರತದ ಕೊನೆಯ ಬ್ರಿಟನ್  ವೈಸರಾಯ ಲೂಯಿಸ್ ಲಾರ್ಡ್ ಮೌಂಟ್ ಬೆಂಟನ್   ಭಾರತಕ್ಕೆ ಸ್ವಾತಂತ್ರ್ಯವನ್ನು ಘೋಷಿಸಿದ…… ೧೪-೮-೧೯೪೭ ರಂದು ದೇಶ ಸ್ವಾತಂತ್ರ್ಯವಾಗುವ ಸಂತಸದ ಮುನ್ನಾ ದಿನ…. ಅಂದು ಸಂಜೆ ತಾಯಿ ಸಂಗವ್ವನವರು,  ಅಜ್ಜಿಯಂದಿರಾದ ಬಸವ್ವಬಾಯಿ ವಾರದ ಮತ್ತು ಗೌರವ್ವ ಬಾಯಿ ವಾರದ ಮುಂತಾದ ಹಿರಿಯರೊಡನೆ ಜಯದೇವಿ ತಾಯಿಯವರು ಶಿವಯೋಗಿ ಸಿದ್ದರಾಮೇಶ್ವರನ ಮಂದಿರದಲ್ಲಿ ಅವನ ಸನ್ನಿಧಿಗೆ ಬಂದರು …ಮೊಟ್ಟಮೊದಲ ಬಾರಿಗೆ ಸಿದ್ದರಾಮನ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿದರು ‌.ಇಡೀ ರಾತ್ರಿ ಅಲ್ಲಿಯೇ ಉಳಿದರು…. ಆ ಕಡೆ ದೇಶ ಸ್ವಾತಂತ್ರವಾಗುತ್ತಿದ್ದರೆ ಈಕಡೆ ಎಲ್ಲ ತಾಯಿಯಂದಿರು ಮಂದಿರದಲ್ಲಿ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದರು‌. ಧ್ಯಾನ ಭಜನೆ ಜಾಗರಣೆಯು ಪ್ರಾರಂಭವಾಗಿತ್ತು. ೧೫-೮-೧೯೪೭ ರ ಸುಪ್ರಭಾತದಲ್ಲಿ ಗೌರವ್ವಬಾಯಿ ವಾರದ ಧ್ವಜಾರೋಹಣ ಮಾಡಿದರು.  ಎಲ್ಲರೂ ಕೂಡಿ ಇಡೀ ಊರಿಗೆ ಊಟ ಕೊಟ್ಟರು .ಸ್ವಾತಂತ್ರದ ಸಂಭ್ರಮಾಚರಣೆ ಮಾಡಿದರು. ಸ್ವಾತಂತ್ರ್ಯ ಸಿಗುವ ಹಿಂದಿನ ದಿನದಿಂದ ಅಂದರೆ ೧೪ ರಿಂದ ೧೮ ತಾರೀಖಿನ ಮುಂಜಾನೆಯವರೆಗೂ  ಮೂರು ದಿನ ಮತ್ತು ನಾಲ್ಕು ರಾತ್ರಿಗಳು ಸತತವಾಗಿ ಎಲ್ಲ ತಾಯಂದಿರು ದೇವಾಲಯದ ಆವರಣದಲ್ಲಿಯೇ ಹಗಲು ಹೊತ್ತು ಚರಕದ ಮೂಲಕ ನೂಲ ತೆಗೆಯುವ ನೇಯ್ಗಗೆ ಕಾಯಕ ಮತ್ತು ಅನ್ನದಾಸೋಹ ಮಾಡಿದರು….ರಾತ್ರಿ ಹೊತ್ತು ಸಿದ್ದರಾಮನ ಸನ್ನಿಧಿಯಲ್ಲಿ ಕಾಲ ಕಳೆದರು.ಊರಿನ ಎಲ್ಲರಿಗೂ ಅನ್ನದಾಸೋಹ ನಡೆಯಿತು.ಮೂರು ದಿನಗಳ ಕಾಲ ಸೇವೆ, ಭಕ್ತಿ ಮತ್ತು ಕಾಯಕ ಒಂದಾಗಿ ಬೆಸೆದವು. ಭಾರತಾಂಬೆಯ ಬಿಡುಗಡೆಯ ಸಂದರ್ಭವನ್ನು ಜಯದೇವಿ ತಾಯಿಯವರು ನಮ್ಮೆದುರಿಗೆ ಈ ರೀತಿಯಾಗಿ ವಿವರಿಸಿ ಹೇಳುತ್ತಿದ್ದರು…….  ಭಾರತಭೂಮಿಯ ಇತಿಹಾಸದಲ್ಲಿ ಒಂದು ಹೊಸ ಬೆಳಗಿನ ಉದಯವಾಗಿತ್ತು. ಶತಮಾನಗಳ ದಾಸ್ಯದಿಂದ ಬಳಲಿದ ಜನರ ಹೃದಯಗಳಲ್ಲಿ, ಆ ದಿನ ಉದಯಿಸಿದ ಸೂರ್ಯ ಕೇವಲ ಬೆಳಕನ್ನ ಅಲ್ಲಸ್ವಾತಂತ್ರ್ಯದ ಉಸಿರಾಟಕ್ಕೆ ಉಸಿರು ತಂದನು.  “ಭಾರತ ದೇಶಕ್ಕೆ ಸ್ವಾತಂತ್ರ್ಯ”……ಘೋಷಣೆ ಆಗುತ್ತಿದ್ದಂತೆ, ದೇಶದಾದ್ಯಂತ ಒಂದು ಅದ್ಭುತ ಭಾವನಾತ್ಮಕ ಅಲೆ ಹರಡಿತು.ಗ್ರಾಮದಿಂದ ನಗರವರೆಗೆ, ಶ್ರೀಮಂತರಿಂದ ಬಡವರವರೆಗೆ ಪ್ರತಿ ಹೃದಯದಲ್ಲೂ ಒಂದೇ ಮಾತು……“ನಾವು ಸ್ವತಂತ್ರರು!”ರಾತ್ರಿಯ ಮಧ್ಯದಲ್ಲಿ ರೇಡಿಯೋಗಳ ಮುಂದೆ ಕುಳಿತು ಜನರ ಕಣ್ಣುಗಳು ಕಣ್ಣೀರಿನಿಂದ ತುಂಬಿಕೊಂಡವು……ಆ ಕಣ್ಣೀರು… ಅನೇಕ ಶೂರರು ವೀರರ ತ್ಯಾಗ ಬಲಿದಾನದ ಕನಸು ನೆರವೇರಿದ ಸಂತಸದ ಕಣ್ಣೀರು……!!!ಎಲ್ಲಿ ನೋಡಿದರಲ್ಲಿ ಹಬ್ಬದ ಸಂಭ್ರಮದ ವಾತಾವರಣಮಕ್ಕಳು ಯುವಕರು ಹಿರಿಯರು ಓಡಾಡುತ್ತಾ “ವಂದೇ ಮಾತರಂ” ಎಂದು ಕೂಗುತ್ತಿದ್ದರು, ಮಹಿಳೆಯರು ಮನೆ ಮುಂಭಾಗ ರಂಗೋಲಿ ಹಾಕಿ, ದೀಪ ಬೆಳಗಿಸಿ ಹಬ್ಬ ಆಚರಿಸುತ್ತಿದ್ದರು, ಎಲ್ಲಹಳೆಯ ಕಷ್ಟಗಳನ್ನು ಮರೆತು ಎಲ್ಲರೂ ಪರಸ್ಪರ ಅಪ್ಪಿಕೊಂಡು ಹರ್ಷ ವ್ಯಕ್ತಪಡಿಸುತ್ತಿದ್ದರು. ರಸ್ತೆಗಳು ಜನಸಾಗರದಿಂದ ತುಂಬಿ ಹೋಗಿದ್ದವು.ತ್ರಿವರ್ಣ ಧ್ವಜವು ಗಾಳಿಯಲ್ಲಿ ಹಾರಾಡುತ್ತಿತ್ತು…… *ಜನರ ಹೃದಯದಲಿ ಗರ್ವದ ಬಾವುಟ ಹಾರಾಡುತಿತ್ತು..*ಜನರು ನೃತ್ಯ ಮಾಡಿ, ಹಾಡಿ, ಸಿಹಿ ಹಂಚಿಕೊಂಡು ಉಲ್ಲಾಸದಲ್ಲಿ ಮುಳುಗಿದ್ದರು. ಅಂದು ಕೆಲವರು ತಮ್ಮ ಜೀವವನ್ನು ತ್ಯಾಗ ಮಾಡಿದವರನ್ನು ನೆನೆದು ಮೌನವಾಗಿ ಕಣ್ಣೀರಿಟ್ಟರು.ಸುಭಾಷ್ ಚಂದ್ರ ಬೋಸ್- ಭಗತ್ ಸಿಂಗ್ ಹೀಗೆ ಅನೇಕ ವೀರರ ಬಲಿದಾನವೇ ಈ ಸ್ವಾತಂತ್ರ್ಯದ ಬೆಲೆ ಎಂಬ ಅರಿವು ಜನರಲ್ಲಿ ಗಾಢವಾಗಿತ್ತು.ಹೃದಯಗಳಲ್ಲಿ ಒಂದೇ ಭಾವನೆ….“ಇದು ನಮ್ಮ ದೇಶ… ನಮ್ಮ ಸ್ವಾತಂತ್ರ್ಯ… ನಮ್ಮ ಭವಿಷ್ಯ!”ಆ ದಿನದ ಹರುಷವನ್ನು ಪದಗಳಲ್ಲಿ ಸಂಪೂರ್ಣವಾಗಿ ಹಿಡಿಯಲು ಸಾಧ್ಯವಿಲ್ಲ.ಅದು ನಮ್ಮ ದೇಶದ ಪುನರ್ಜನ್ಮ ಸಂದರ್ಭ….ದೇಶದ ಆತ್ಮ ಪುನಃ ಹುಟ್ಟಿದ ಕ್ಷಣ…….ಆ ಕ್ಷಣದಲ್ಲೇ ಜನರು ಭವಿಷ್ಯದ ಕನಸುಗಳನ್ನು ಕಟ್ಟಿಕೊಂಡರು….ನಮ್ಮ ಭಾರತ ದೇಶವು ಅಂದಿನಿಂದಬಡತನವಿಲ್ಲದ ದೇಶ, ಸಮಾನತೆಯ ಸಮಾಜ, ಶಾಂತಿಯ ಭಾರತ ಕಟ್ಟವ ಕನಸು ಕಂಡುಕೊಳ್ಳಲಾರಂಭಿಸಿದ್ದೇವು…ಆದರೆ…ಆ ಹರುಷದ ನಡುವೆಯೇ ವಿಭಜನೆಯ ನೋವು ಕೂಡ ಎಲ್ಲ ಹೃದಯಗಳನ್ನು ಕಾಡುತ್ತಿತ್ತು. ಆದರೂ, ಆ ದಿನದ ಸಂತೋಷದ ಹೊಳೆಯು ಆ ನೋವನ್ನು ಸಹ ಮಸುಕಾಗಿಸಿತು.೧೯೪೭ ರ ಆ ದಿನ…ಭಾರತದ ಪ್ರತಿಯೊಂದು ಹೃದಯವೂ ಒಂದೇ ಲಯದಲ್ಲಿ ಹಾಡುತಿತ್ತು…….*ಜೈ ಹಿಂದ*.. ಜೈ ಹಿಂದ್… ಭಾರತ ಮಾತೆಗೆ ಜಯವಾಗಲಿ…. ಭಾರತ ಮಾತಾ ಕಿ ಜೈ ಎನ್ನುವ ಕೂಗು ಎಲ್ಲಡೇಗೂ ಕೇಳುತ್ತಿತ್ತು…….!!!! ಭಾರತೀಯರು ಸ್ವಾತಂತ್ರ್ಯದ ದಿನಗಳನ್ನು ಅನುಭವಿಸುವದ್ರಲ್ಲಿಯೇ ದೇಶಕ್ಕೆ ಒಂದು ದೊಡ್ಡ ಅಘಾತ ಕಾದಿತ್ತು ….ಸ್ವಾತಂತ್ರ ಲಭಿಸಿದ ಕೆಲವು ತಿಂಗಳೊಳಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹತ್ತೆ ಆಗಿತ್ತು……..ಈ ದುರಂತ ಜಯದೇವಿ ತಾಯಿಯವರನ್ನು ಬಹಳ ದುಃಖಕ್ಕೆ ಇಡುಮಾಡಿತ್ತು…  ತಾಯಿಯವರು ಹೇಳುತ್ತಿದ್ದಂತೆ ಗಾಂಧೀಜಿಯವರು ತೀರಿಕೊಂಡಾಗ ಇಡೀ ದೇಶವೇ ಸ್ಮಶಾಣದ ಮೌನದಲಿ ಮುಳಗಿತ್ತು.. ಅಘಾತಕ್ಕೆ ಒಳಗಾಗಿತ್ತು…ಗಾಂಧೀಜಿಯವರ ಹತ್ಯೆ (೧೯೪೮ ಜನವರಿ ೩0) ದೇಶದ ಇತಿಹಾಸದಲ್ಲಿ ಅತಿ ದುಃಖಭರಿತ ಕ್ಷಣವಾಗಿತ್ತು….. ಜನ- ಮನಗಳನ್ನು ತಲ್ಲಣಗೊಳಿಸಿತು. ಜಯದೇವಿ ತಾಯಿಯವರು ಈ ಸುದ್ದಿಯನ್ನು ಕೇಳಿದಾಗ ಅವರ ಮನ ಕುಸಿದುಹೋಯಿತು. ….“ದೇಶಕ್ಕೆ ಅಹಿಂಸೆಯ ದೀಪ ಹಚ್ಚಿದ ಮಹಾತ್ಮನನ್ನು ಕತ್ತಲೆಯು ನುಂಗಿದೆ. ಅಹಿಂಸೆಯ ಪಾಠ ಹೇಳಿಕೊಟ್ಟ ಮಹಾತ್ಮರು ಹಿಂಸೆಯ ಅಟ್ಟಹಾಸಕ್ಕೆಬಲಿಯಾದರು….ಅವರು ಬದುಕಿದ್ದರೆ ನಮ್ಮ ಹಾದಿ ಬೆಳಗುತ್ತಿತ್ತು… ಈಗ ನಮ್ಮೊಳಗೆ ನಾವು ಬೆಳಕಾಗಬೇಕು.ಗಾಂಧೀಜಿಯವರ ದೇಹ ಹೋಗಿರಬಹುದು, ಆದರೆ ಅವರ ತತ್ತ್ವಗಳು ಸಾಯುವುದಿಲ್ಲ” ಎಂದು ಜನರಿಗೆ ಧೈರ್ಯ ತುಂಬಿದರು.ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯಿತು.. ಜೊತೆಗೆ ಹೃದಯದಲ್ಲಿ ಒಂದು ದಿಟ್ಟ ಸಂಕಲ್ಪ ಹುಟ್ಟಿತು….. ಗಾಂಧೀಜಿಯ ಆಚಾರ ವಿಚಾರಗಳನ್ನು ಮುಂದುವರಿಸಿಕೊಂಡು ಹೋಗುವ ಪಣತೊಟ್ಟರು. ದೇಶದಾದ್ಯಂತ .. ಜನರ ನೋವು ಆಕ್ರೋಶದಲಿ ಮೂಳಗಿರುವುದನ್ನು ನೋಡಿದಾಗ….. ಗಾಂಧೀಜಿಯವರು ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದ್ದರು ಎನ್ನುವುದು ತೋರುತ್ತಿತ್ತು….“ಇನ್ನು ಮುಂದೆ ದೇಶಕ್ಕೆ ದಾರಿ ತೋರುವರು ಯಾರು?! ಎಂಬ ಪ್ರಶ್ನೆ ಜನರನ್ನು ಕಾಡಿತು.ಹೊಸತಾಗಿ ಸಿಕ್ಕ ಸ್ವಾತಂತ್ರ್ಯದ ಸ್ಥಿರತೆಗೆ ಬಗ್ಗೆ ಯೋಚಿಸಿ ಜನರಲ್ಲಿ ಭಯ ಉಂಟಾಯಿತು. ಜೊತೆ ಜೊತೆಗೆ ಧರ್ಮ, ಜಾತಿ ಭೇದಗಳಿಂದ ದೂರ ಇರಬೇಕು ಎಂಬ ಅರಿವು ಮೂಡಿಸುವ ಸಲುವಾಗಿಗ್ರಾಮಗಳಲ್ಲಿ, ನಗರಗಳಲ್ಲಿ ಶೋಕ ಸಭೆಗಳು ನಡೆದಸಿದರು….. ಗಾಂಧೀಜಿಯವರು ಬೋಧಿಸಿದ ಅಹಿಂಸೆ, ಸತ್ಯದ ಮಾರ್ಗವನ್ನು ಮತ್ತೆ ನೆನಪಿಸಿಕೊಟ್ಟರು .ಜನರು ತಮ್ಮೊಳಗಿನ ನಾಯಕತ್ವವನ್ನು ಹುಡುಕಲು ಪ್ರೇರೇಪಿಸಿದರು.“ನಾವು ಗಾಂಧೀಜಿಯವರಂತೆ ಬದುಕಬೇಕು” ಎಂಬ ಮನೋಭಾವನ್ನು ಬೆಳೆಸಲು ಸತತವಾಗಿ ಪ್ರಯತ್ನಿಸಿದರು .ಜಯದೇವಿ ತಾಯಿಯವರು ಜನರನ್ನು ಉದ್ದೇಶಿಸಿ“ಗಾಂಧೀಜಿಯವರ ರಕ್ತದ ಪ್ರತಿಯೊಂದು ಹನಿ ನಮ್ಮ ಹೃದಯದಲ್ಲಿ ದೇಶಭಕ್ತಿಯ ಬೀಜವಾಗಬೇಕು.ಕೋಪದಿಂದ ಅಲ್ಲ, ಪ್ರೀತಿಯಿಂದ ಈ ದೇಶವನ್ನು ಕಟ್ಟೋಣ…..ಗಾಂಧೀಜಿಯವರ ಹತ್ಯೆ ಕೇವಲ ಒಬ್ಬ ಮಹಾನ್ ವ್ಯಕ್ತಿಯ ಮರಣವಲ್ಲ,ಅದು ಒಂದು ಯುಗದ ಅಂತ ಆದರೆ ಮತ್ತೊಂದು ಯುಗದ ಆರಂಭವೂ ಹೌದು …. ಜನರು ಅವರ ಮಾರ್ಗವನ್ನು ಅನುಸರಿಸಲು ಪ್ರೇರೇಪಿತವಾಗು ಕ್ಷಣ ಬಂದೋದಗಿದೆ .ನಾವೆಲ್ಲರೂ ಸೇರಿ ಭಾರತ ಮಾತೆಯ ಸೇವೆ ಗ್ಯ್ಯೋಣ ಎಂದು ಸಾರಿದರು. ಗಾಂಧೀಜಿಯವರ ಹತ್ಯೆಯಾದ ಸಮಯದಲ್ಲಿ ಜಾತಿ ಮತಗಳ ಮಧ್ಯೆ ಕಲಹ ಪ್ರಾರಂಭವಾಗಿತ್ತು ಸಾಮರಸ್ಯ ಕಳೆದು ಹೋಗಿದ್ದು ಬಹುತೇಕ ಜನರು ಜಾತಿಗಲಭೆ ನಡೆಯುತ್ತಿದ್ದವು ಅಲ್ಲಲ್ಲಿ ಭಾವಿಸಿ ತಾಯಿಯವರು ಸಹನೆ ಸಾಮರಸ್ಯದಂತ ವಿಚಾರಗಳನ್ನು ಜನರಿಗೆ ಮನದಟ್ಟು ಮಾಡಿಕೊಳ್ಳುವಲ್ಲಿ  ಪ್ರಯತ್ನ ಪಟ್ಟರು. ಗಾಢ ದುಃಖ, ಆತಂಕ ಮತ್ತು ಜಾಗೃತಿ ತುಂಬಿದ ಒಂದು ಭಾಷಣವನ್ನು ಜತದೇವಿ ತಾಯಿಯವರು“ಸಹೋದರ ಸಹೋದರಿಯರೇ…”ಇಂದು ನಮ್ಮ ಹೃದಯಗಳು ಒಡೆದಿವೆ…ನಮ್ಮ ದೇಶದ ಆತ್ಮವೇ ಆಗಿದ್ದ ಮಹಾತ್ಮ ಗಾಂಧೀಜಿ ಅವರು ನಮ್ಮನ್ನೆ ಬಿಟ್ಟು ಹೋಗಿದ್ದಾರೆ.ಅವರ ದೇಹ ಕೊನೆಗೊಂಡಿರಬಹುದು… ಆದರೆ ಅವರ ಚಿಂತನೆ, ಅವರ ಅಹಿಂಸೆಯ ಮಾರ್ಗ ಯಾವತ್ತೂ ಸಾಯುವುದಿಲ್ಲ.ಇಂತಹ ಸಮಯದಲ್ಲಿ, ಕೆಲವರು ಜಾತಿ-ಧರ್ಮದ ಹೆಸರಿನಲ್ಲಿ ಮತ್ತೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.ಆದರೆ ನಾನು ಒಂದು ಪ್ರಶ್ನೆ ಕೇಳುತ್ತೇನೆಗಾಂಧೀಜಿ ಅವರು ತಮ್ಮ ಪ್ರಾಣವನ್ನೇ ಕೊಟ್ಟದ್ದು ಏಕೆ?ಅವರು ಹಿಂದು, ಮುಸ್ಲಿಂ, ದಲಿತ, ಬ್ರಾಹ್ಮಣ… ಎನ್ನದೇ“ನಾವು ಎಲ್ಲರೂ ಭಾರತೀಯರು” ಎಂದು ಬದುಕಿದರು…ಅದೇ ಮಾತನ್ನು ಅವರು ಕೊನೆಯ ಉಸಿರಿನಲ್ಲೂ ಹೇಳಿ ಹೋಗಿದ್ದಾರೆ.ಇಂದು ನಾವು ಜಗಳ ಮಾಡಿದರೆ…ಅದು ಗಾಂಧೀಜಿಯವರ ಆತ್ಮಕ್ಕೆ ನೋವು ಕೊಡುತ್ತದೆ.ಅವರು ನಮಗೆ ತೋರಿಸಿದ ದಾರಿ — ಪ್ರೀತಿ, ಸಹನೆ, ಸೌಹಾರ್ದ — ಅದನ್ನೇ ನಾವು ಅನುಸರಿಸಬೇಕು.ಜಾತಿ ಎನ್ನುವುದು ನಮ್ಮ ನಡುವೆ ಗೋಡೆ ಕಟ್ಟಲು ಅಲ್ಲ…ಅದು ವೈವಿಧ್ಯದ ಸುಂದರತೆಯನ್ನು ಅರಿಯಲು.ಇಂದು ನಾನು ನಿಮಗೆ ವಿನಂತಿ ಮಾಡುತ್ತೇನೆ  ಕೋಪ ದ್ವೇಷ ಕಲಹವನ್ನು ಬಿಡಿ…ಹೃದಯವನ್ನು ತೆರೆದುಕೊಳ್ಳಿ…ಒಬ್ಬರನ್ನೊಬ್ಬರು ಅಪ್ಪಿಕೊಳ್ಳಿ…ಗಾಂಧೀಜಿ ಜೀವಂತವಾಗಿರುವುದು ನಮ್ಮ ನಡೆ-ನುಡಿಯಲ್ಲಿ…ನಮ್ಮ ಒಗ್ಗಟ್ಟಿನಲ್ಲಿ… ನಮ್ಮ ಮಾನವೀಯತೆಯಲ್ಲಿ…ನಾವು ಒಟ್ಟಿಗೆ ನಿಂತರೆ… ಭಾರತ ಸದಾ ಶಕ್ತಿಶಾಲಿಯಾಗಿರುತ್ತದೆ. “ಸಿದ್ದರಾಮ ಬಸವ| ಬುದ್ಧ ಗಾಂಧೀಜಿಯುತಿದ್ದಲು ಜನ ಮನ ದುಡದಾರ- ಲೋಕವೂಶುದ್ಧ ಸದಾಚಾರಿ ಮಾಡಲು!!”

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-14 ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ ಲೇ: ಸವಿತಾ ದೇಶಮುಖ ಹರಿಜನ ಕೇರಿಯ ಉದ್ಧಾರಕ್ಕಾಗಿ ಸತತವಾಗಿ ಕೇರಿಗಳಿಗೆ ಭೇಟಿ ಕೊಡುತ್ತಿದ್ದ ಜಯದೇವಿ ತಾಯಿಯವರು ಹೇಳಿತಾರೆ….. *ನುಡಿಯಿರಿ ಸತ್ಯವನು ನಡೆಯಿರಿ ಆಚಾರದಿ ದುಡಿಯಿರಿ ಮೈ ಉಳಿಸದೆ ಯಾರಿಗೂದುಡಿಕಿ ಮನ ನೋಯಿಸಬೇಡಿ* ಜಯದೇವಿ ತಾಯಿಯವರು ಅಸ್ಪೃಶ್ಯತೆಯನ್ನು ಮಾತ್ರ ವಿರೋಧಿಸಿದವರಲ್ಲ,ಅವರು ಸಂಪೂರ್ಣ ಸಮಾಜದಲ್ಲಿ ಇರುವ ಜಾತಿ-ಮತ ಭೇದಭಾವವನ್ನು ಬೇರು ಸಮೇತ ತೆಗೆದುಹಾಕಬೇಕೆಂದು ಸಂಕಲ್ಪ ಮಾಡಿದ ಮಹಾನ್ ಸಮಾಜಸೇವಕಿ.ಅವರ ಜೀವನವೇ ಈ ಸಂದೇಶದ ಪ್ರತಿಬಿಂಬವಾಗಿತ್ತು.ಇದನ್ನು ವಿಸ್ತಾರವಾಗಿ ನೋಡಿದರೆ ಅವರ ಜೀವನದಲ್ಲಿ ನಡೆದಂತಹ ಹಲವು ಘಟನೆಗಳು ಅವರ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ… ಕೆಲವು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಈ ಅನ್ಯಾಯದ ವಿರುದ್ಧ ಅವರು ಧೈರ್ಯವಾಗಿ ನಿಂತರು. ಒಮ್ಮೆ ದಲಿತರನ್ನು ಕರೆದುಕೊಂಡು ದೇವಸ್ಥಾನದೊಳಗೆ ಪ್ರವೇಶ ಮಾಡಿಸಿದರು. ಇದರಿಂದ ಹಲವಾರು ವಿರೋಧಗಳು ಎದುರಾದರೂ, ಅವರು ಹಿಂದೆ ಸರಿಯಲಿಲ್ಲ.ದೇವರು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಸಮಾಜಕ್ಕೆ ಬೋಧಿಸಿದರು. *ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾಪಂಜು ಹಿಡಿದು ನಿಜತತ್ವವ- ಸಾರುವೇ ಕೆಂಜಡೆಯವನ ಕೃಪೆಯಿಂದ* ಕೆಂಜಡೆಯವನು- ಶಿವನ ಕೃಪೆಯಿಂದ ನಾನು ಯಾವ ಸತ್ಕಾರ್ಯಕ್ಕೂ ಹಿಂಜರಿಯಲಾರೆ ಅಂತ ಹೋರಾಡುತ್ತಿದ್ದರು. ತಾಯಿ ಸಂಗವ್ವನವರು  ಅದೆಷ್ಟೇ ಆಧುನಿಕ ವಿಚಾರವಂತೆ ಯಾಗಿದ್ದರು ಮನೆಯಲ್ಲಿ ಒಳ ಪಂಗಡದ ಬೇರೆ ಜನರು, ಕೆಳ ಜಾತಿಯ  ಯಾರಾದರೂ ಒಳಗೆ ಬಂದು ನೀರಿನ ಕೊಡಗಳನ್ನು ಮುಟ್ಟಿದ್ದರೆ ಅವುಗಳನ್ನು ತೊಳೆದು ಮತ್ತೆ ಸ್ವಚ್ಛಗೊಳಿಸಿದ ನೀರನ್ನು ತುಂಬಿಡುವ ಮಡಿವಂತಿಕೆ ಅವರದಾಗಿತ್ತು .ಇದನ್ನೆಲ್ಲಾ ಗಮನಿಸುತ್ತಿದ್ದ ಜಯದೇವಿ ತಾಯಿಯವರು ಕಳವಳಗೊಂಡು ಶರಣರು ಉತ್ತಿಬಿತ್ತಿ ಬೆಳೆದಂಥ   ವಚನವನ್ನು ನೆನಪಿಸಿ ಕೊಡುತ್ತಿದ್ದರಂತೆ.“ಇವನಾರವ ಇವನಾರವ ಇವನಾರವ ಎಂದೇನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆಎನಿಸಯ್ಯ…..” ಅನ್ನುವ ವಚನ ತಾಯಿಗೆ ಮೇಲಿಂದ ಮೇಲೆ ಹೇಳಿ ಅವರ ಮನವನ್ನು ಬದಲಾಯಿಸಿದರು ಅಂತ ತಾಯಿಯವರೇ ಸ್ವಂತ ಹೇಳುತ್ತಿದ್ದರು.  ಜಾತಿ ಮೀರಿದ ವಿವಾಹಗಳಿಗೆ ಬೆಂಬಲ ನೀಡುತ್ತಿದ್ದರು.ಜಾತಿ ಭೇದವನ್ನು ಕಡಿಮೆ ಮಾಡಲು ಅವರು ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದರು.“ಪ್ರೇಮಕ್ಕೆ ಜಾತಿ ಬೇಧವಿಲ್ಲ” ಎಂಬುದನ್ನು ಅವರು ಸಮರ್ಥಿಸಿದರು. ಇಂತಹ ವಿವಾಹಗಳಿಗೆ ಸಾಮಾಜಿಕ ಒಪ್ಪಿಗೆ ಸಿಗುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. “ಮಾನವೀಯತೆ ಧರ್ಮಕ್ಕಿಂತ ದೊಡ್ಡ ಧರ್ಮ ಇನ್ನಾಆವುದು ಇರಲಾರದು” ಎಂಬುದು ಅವರ ಸಂದೇಶ.  ವೈಯಕ್ತಿಕ ಜೀವನದಲ್ಲಿಯೂ ಅನುಸರಿಸಿದ್ದರು .ತಮ್ಮ ಮನೆ ಬಾಗಿಲು ಎಲ್ಲರಿಗೂ ತೆರೆಯಲ್ಪಟ್ಟಿತ್ತು.ಯಾರೇ ಬಂದರೂ ಅವರ ಜಾತಿ-ಮತ ಕೇಳದೆ ಸಹಾಯ ಮಾಡುತ್ತಿದ್ದರು. ಆದರಾತಿಥ್ಯವನ್ನು ಕೊಟ್ಟು ಕಳಿಸುತ್ತಿದ್ದರು.  ಸಜೀವ ಘಟನೆಗಳನ್ನು ಉಲ್ಲೇಖ ಮಾಡಬೇಕೆಂದರೆಆ ಕಾಲದಲ್ಲಿ ಸಮಾಜದ ಮನಸ್ಸುಗಳಲ್ಲಿ ಇನ್ನೂ ಕೀಳರಿಮೆ ಮತ ಭೇದದ ನೆರಳಿನಲ್ಲಿ ನರಳುತ್ತಿತ್ತು… ಜಯದೇವಿ ತಾಯಿಯವರು … ನೂರಾರು ಎಕರೆ ಭೂಮಿಯ ಒಡೆಯರಾಗಿದ್ದರೂ, ಅವರ ಹೃದಯ ಮಾತ್ರ ಮಣ್ಣಿನಂತೇ ಮೃದು….ಆ ಪ್ರದೇಶದಲ್ಲಿ “ಪಾರದೇರು” ಎನ್ನುವ ಒಂದು ಜಾತಿಯ ಜನರ ಬಗ್ಗೆ ಜನರಲ್ಲಿ ಭಯ ಇತ್ತು.“ಅವರು ಕಳ್ಳರು… ಮೋಸಗಾರರು…” ಎಂದು ಸಮಾಜದಿಂದ ಅವರಿಗೆ ದೂರ ಇಡಲ್ಪಟ್ಟಿತು.ಯಾರೂ  ಕೆಲಸ ಕೊಡುತ್ತಿರಲಿಲ್ಲ. ಅವರು ತಪ್ಪು ದಾರಿಗೆ ಹೋಗುವುದೇ ಅವರ ಬದುಕಿನ ಮಾರ್ಗವಾಗಿಬಿಟ್ಟಿತ್ತು….. ಒಂದು ದಿನ, ಆ ಸಮುದಾಯದ ಒಬ್ಬ ಮುಖಂಡನು ಜಯದೇವಿ ತಾಯಿಯವರ ಸಮಾಜಮುಖಿ  ಕೆಲಸಗಳನ್ನು ನೋಡಿ ಭೇಟಿ ಮಾಡಲು ಬಂದನು.ಅವನ ಕಣ್ಣುಗಳಲ್ಲಿ ಹತಾಶೆ… ಮನಸ್ಸಿನಲ್ಲಿ ನೋವು ಹೊತ್ತು ಬಂದಿದ್ದಾ…“ತಾಯಿ… ನಾವು ತಪ್ಪು ಮಾಡಿದ್ದೇವೆ… ಆದರೆ ನಮಗೆ ಯಾರು ಕೆಲಸ ಕೊಡಲ್ಲ… ನಾವು ಸುಳ್ಳು ತನ ಕಳ್ಳತನ ಮಾಡದೆ ಇದ್ದರೆ ನಮ್ಮ ಜನಾಂಗದವರು ಬದುಕೋದು ಹೇಗೆ?” ಎಂದು ಕೇಳಿದನು.ಆ ಮಾತು ಕೇಳಿ ತಾಯಿಯವರ ಹೃದಯ ಕದಲಿತು.  ತಾಯಿಯವರ ನಂತರ ನಿಧಾನವಾಗಿ ಹೇಳಿದರು…“ನೀವು ತಪ್ಪು ಮಾಡುವುದನ್ನು ಒಪ್ಪಿಕೊಳ್ಳುತ್ತಾ ಇದ್ದೀರಿ… ತಪ್ಪುಗಳನ್ನು ಮಾಡುತ್ತಾ ಬರುತ್ತಲೇ ಇದ್ದೀರಿ..ಆದರೆ ನೀವು ಮನುಷ್ಯರು…ನಿಮಗೆ ಅವಕಾಶ ಕೊಟ್ಟರೆ ಬದಲಾಗ ಬಹುದೇನೋ…ನೋಡೋಣ ಹಾಗಿದ್ದರೆ“ನೀವು ನನ್ನ ಹೊಲಕ್ಕೆ ಬನ್ನಿ… ಕೆಲಸ ಮಾಡಿ…” ಎಂದು ಆಹ್ವಾನಿಸಿದರು.ಹೀಗೆ ಹೊಸ ಜೀವನದ ಆರಂಭ ಪಾರದೇರು ಜನಾಂಗಕ್ಕೆ ಆಯಿತು. ಅನೇಕ ಜನರಿಗೆ ಅವರು ಕೇವಲ ಕೆಲಸ ಕೊಟ್ಟರಲ್ಲದೇ… ವಾಸಿಸಲು ಹೊಲಗಳಲ್ಲಿ ಜಾಗ ಕೊಟ್ಟರು…ನಿನ್ನೆಯವರೆಗೆ ಕಳ್ಳತನ ಮಾಡುತ್ತಿದ್ದ ಕೈಗಳು,ಇಂದು ಮಣ್ಣನ್ನು ಅಗೆದು ಬೆಳೆ ಬೆಳೆಸತೊಡಗಿದವು. ಇದನ್ನು ನೋಡಿದ ಅನೇಕ ಜನರು ಆಶ್ಚರ್ಯದಿಂದ“ಇವರು ಬದಲಾಗ್ತಾರಾ?” ಎಂಬ ಸಂಶಯಪಟ್ಟರು.ಆದರೆ ತಾಯಿಯವರ ನಂಬಿಕೆ ಗೆದ್ದಿತು.ಆ ಜನರು ತಮ್ಮ ಜೀವನವನ್ನು ಸತ್ಯದ ದಾರಿಯಲ್ಲಿ ಸಾಗಿಸಲು ಆರಂಭಿಸಿದರು. ಮುಂದೆ ಭಾರತದಲ್ಲಿ ಲ್ಯಾಂಡ್ ರಿಫಾರ್ಮ್ ಕಾಯಿದೆ ಜಾರಿಯಾದಾಗ, ಹಲವಾರು ಜಮೀನುಗಳು ರೈತರ ಹೆಸರಿಗೆ ಬರೆಯ ಆರಂಭವಾಯಿತು.ಆ ಸಮಯದಲ್ಲಿ ಜಯದೇವಿ ತಾಯಿಯವರು ದೊಡ್ಡ ನಿರ್ಧಾರ ಕೈಗೊಂಡರು.“ಈ ಭೂಮಿಯನ್ನು ಯಾರು ನಿಜವಾಗಿ ಬೆಳೆದಿದ್ದಾರೆ…ಅವರಿಗೆ ಒಪ್ಪಿಸುವಂತೆ…ಪಾದರೆಯ ಜನರು ಕೆಳ ಜಾತಿಯ ಜನರ ಹೆಸರನ್ನು ನೋಂದಾಯಿಸಿದರು.ಹೀಗೆ,ಒಮ್ಮೆ ಸಮಾಜದಿಂದ ತಳ್ಳಲ್ಪಟ್ಟ “ಪಾರದೆರು” ಜನರು,ತಾಯಿಯವರ ಕೃಪೆಯಿಂದ ತಮ್ಮದೇ ಭೂಮಿಯ ಒಡೆಯರಾಗಿದರು. ಶತಶತಮಾನಗಳಿಂದ ಆಳಾಗಿ ದುಡಿಯುತ ಬಂದವರಿಗೆ ಆ ದಿನ ಕಣ್ಣುಗಳಲ್ಲಿ ಕಣ್ಣೀರು…ಹರಿದವುಆದರೆ ಅದು ನೋವಿನಲ್ಲ ಕಣ್ಣಿರಲ್ಲ… ಗೌರವದಿಂದ ಕೂಡಿತ್ತು…“ನಮಗೆ ಜೀವನ ಕೊಟ್ಟವರು ತಾಯಿ…” ಎಂದು ಇನ್ನು ಆದರೂ ನೆನೆಯುತ್ತಾರೆ.“ಜಯದೇವಿ ತಾಯಿಯವರು ಕೇವಲ ಭೂಮಿಯನ್ನು ಕೊಡಲಿಲ್ಲ ಅವರ ಜೀವನಕ್ಕೆ ದಿಕ್ಕು ತೋರಿಸಿದ ತಾಯಿಯಾದರು…” ಮುಂದೆ….ಸಮಾಜ ಏಕತೆ, ಸಮಾನತೆ ಮತ್ತು ಚೇತನ ಶಕ್ತಿಯನ್ನು ಸಜೀವವಾಗಿ ಕಟ್ಟಲು…*ಶರಣ ಸಮಾಜ* ಸಂಘವನ್ನು ಕಟ್ಟಿದರು‌. ಗಾಂಧೀಜಿಯವರು ಕೀಳ ಜಾತಿಯವರಿಗೆ ಹರಿಜನರೆಂದು ಹೆಸರು ಕೊಟ್ಟಸಮಯ .. ಗಾಂಧೀಜಿಯವರ ಧ್ಯೇಯ- ಸದುದ್ದೇಶಕ್ಕಾಗಿ ಸ್ಪೂರ್ತಿದಾಯಕವಾಗಿ *ಶರಣ ಸಮಾಜ* ನಿರ್ಮಾಣಗೊಂಡಿತ್ತು. *ದೀನ ದಲಿತರಿಗೆ | ಹೀನ ಪಾಮರರಿಗೆತನ್ನ ಬಳಿ ಸೆಳೆದುಕೊಂಡ- ಪುಣ್ಯಜೀವಿಹರಿಜನರೆಂಬ ಹೆಸರ ಕೊಟ್ಟಗಾಂಧೀಜಿ * ಎಂದು ಗಾಂಧೀಜಿಯವರ ಬಗ್ಗೆ ತಾಯಿಯವರು ಹಾಡಿ ಹೊಗಳಿದರು.ಎಲ್ಲರೂ ಒಂದೇ ಕುಟುಂಬದವರಂತೆ ಬದುಕಬೇಕು ಜಾತಿ-ಮತ ಭೇದಗಳು ಗಟ್ಟಿಗಳ ಬೇರುಸಹಿತ ಕಿತ್ತೆಸೆಯಲು.ಭೇದಗಳ ಒಡೆಯಬೇಕೆಂದು ಜಯದೇವಿ ತಾಯಿಯವರ ಒಂದು ದೊಡ್ಡ ಕನಸು  .ಈ ಆಲೋಚನೆಯಿಂದಲೇ ಅವರು “ಶರಣ ಸಮಾಜ” ಎನ್ನುವ ಸಂಘವನ್ನು ಸ್ಥಾಪಿಸಿದರು. ಈ ಸಂಘ ಕೇವಲ ಒಂದು ಸಂಸ್ಥೆಯಂತಲ್ಲ…ಇದು ಒಂದು ಚಳವಳಿ…ಸಂಘದ ಉದ್ದೇಶವೆಂದರೆಜಾತಿ, ಮತ, ವರ್ಗ ಎಂಬ ಗೋಡೆಗಳನ್ನು ಒಡೆಯುವ ಪ್ರಯತ್ನ.ಇಲ್ಲಿ ಎಲ್ಲ ಸಮಾಜದ ಜನರು‌…ಬಡವರು, ಶ್ರೀಮಂತರು, ದಲಿತರು, ಮೇಲ್ಜಾತಿಯವರುಎಲ್ಲರೂ ಒಂದೇ ವೇದಿಕೆಯಲ್ಲಿ ಕೂತುಕೊಳ್ಳುತ್ತಿದ್ದರು. ಇಂಥ  ಮಹತ್ವದ ಕಾರ್ಯಕ್ಕೆ ಗೌರವ ನೀಡಲು, ಮುಂದಿನ ದಿನಗಳಲ್ಲಿ ತಾಯಿಯವರು ದೇಶದ ಪ್ರಮುಖ ನಾಯಕನಾದ*ಬಾಬು ಜಗಜೀವನ್ ರಾಮರನ್ನು *ಮನೆಗೆ ಆಹ್ವಾನಿಸಿ ಬೆಳ್ಳಿಯ ತಟ್ಟೆಯಲ್ಲಿ ಊಟಕ್ಕೆ ಇರಿಸಿದ್ದರು.ಆ ದಿನದ ವಾತಾವರಣ ಕಂಡು ಅತ್ಯಂತ ಉತ್ಸಾಹಭರಿತರಾದ ಜನರು, ವಿವಿಧ ಸಮುದಾಯದವರೆಲ್ಲರೂ ಒಂದೇ ಸ್ಥಳದಲ್ಲಿ ಸೇರಿ ಒಂದು ಹೊಸ ಇತಿಹಾಸಕ್ಕೆ ಸಾಕ್ಷಿಯಾದರು.  ಜಯದೇವಿ ತಾಯಿಯವರನ್ನು ಉದ್ದೇಶಿಸಿಬಾಬು ಜಗಜೀವನ್ ರಾಮ್ ಅವರು ಮಾತನಾಡುತ್ತಾ ಹೇಳಿದರು:“ಸಮಾನತೆ ಎನ್ನುವುದು ಕೇವಲ ಮಾತಲ್ಲ…ಅದನ್ನು ಜೀವನದಲ್ಲಿ ಅನುಸರಿಸುವವರೇ ನಿಜವಾದ ನಾಯಕರಾಗಲು ಸಾಧ್ಯ… ಜಯದೇವಿ ತಾಯಿಯವರೊಂದು  ಆಧ್ಯಾತ್ಮಿಕ ಜೀವಿಯು  ಕೂಡಾ ಇಂಥವರು ನಿಮ್ಮ ಮಧ್ಯದಲ್ಲಿ ಇದ್ದಿದ್ದು ನಿಮ್ಮಲ್ಲರ ಪುಣ್ಯವೇ ಸರಿ”ಎನ್ನುತಅವರು ತಾಯಿಯವರ ಕಾರ್ಯವನ್ನು ಹೊಗಳಿದರು.ಆ ಮಾತುಗಳು ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದವು . “ಶರಣ ಸಮಾಜ”ದ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು..ಎಲ್ಲ ಜಾತಿಯವರಿಗೂ ಸಹಭೋಜನಶಿಕ್ಷಣ ಮತ್ತು ಜಾಗೃತಿ ಶಿಬಿರಗಳುಮಹಿಳಾ ಸಬಲೀಕರಣ ಕಾರ್ಯಕ್ರಮಗಳುದಲಿತ ಮತ್ತು ಹಿಂದುಳಿದ ವರ್ಗಗಳಿಗೆ ನೆರವು… ಇಲ್ಲಿ “ನಾನು–ನೀನು” ಎನ್ನುವ ಭೇದವಿಲ್ಲ…“ನಾವು” ಎನ್ನುವ ಭಾವನೆ ಮಾತ್ರ ಇತ್ತು. ಇಂಥ ಸಂಘಗಳ ಸಂಘಟನೆಗಳಿಂದಾಗಿ ನಿಧಾನವಾಗಿ ಬದಲಾವಣೆ ಆರಂಭವಾಯಿತು ಅಂತ ಹೇಳಬಹುದುಜನರು ಪರಸ್ಪರ ಗೌರವದಿಂದ ನೋಡಲು ಆರಂಭಿಸಿದರು.ಒಮ್ಮೆ ದೂರ ದೂರ ಇದ್ದ ಹೃದಯಗಳು,ಸ್ವಲ್ಪಮಟ್ಟಿಗಾದರೂ ಹತ್ತಿರವಾಗತೊಡಗಿದವು.ಈ ಚಳುವಳಿಯಲ್ಲಿ ಶರಣ “ಕಂಬಳಿ ಬಾಬ” ಅವರ ಕಾರ್ಯ ಮಹತ್ವದ್ದು ಎಂದು ನೆನೆಯಬೇಕಾಗುತ್ತದೆ. ಜಯದೇವಿ ತಾಯಿಯವರು ಹೇಳ್ತಾರೆ ….*ಎಲ್ಲರೂ ತೋರಿರುವ| ಹೆದ್ದಾರಿ ಒಂದಿರಲುತಿದ್ದದಲೇ ಮನ ಬುದ್ಧಿಗಳು- ಲೋಕದಿಒದ್ದಾಡುವರು ಕೀಳು ಮೇಲೆಂದು* ಶರಣ ಸಮಾಜವು ಸಮಾನತೆಯ ಬೀಜ ಬಿತ್ತಿದ ಸಾಹಸದ ಚಳುವಳಿಯಾಗಿತ್ತು. ಹುಟ್ಟಿಗೆ ಕುಲವಿಲ್ಲ | ಬಟ್ಟೆಗೆ ಬೆಲೆ ಇಲ್ಲಮಟ್ಟ ಅರಿಬೇಕು ಆಚಾರದ- ಶಿವನಲ್ಲಿದಿಟ್ಟಿ ಇಡಬೇಕ ನಿಶ್ಚಯದಿ!! ಮನುಷ್ಯನಾಗಿ ಹುಟ್ಟಿದ ಮೇಲೆ ಯಾವುದೇ ವ್ಯಕ್ತಿ ಇರಲಿ ಅವನು ಹುಟ್ಟಿ ಬರುವಾಗ ಆ ಜಾತಿ ಈ ಜಾತಿ ಸೇರಿದವನಲ್ಲ …. ಹಣೆಗೆ ಪಟ್ಟಿ ಹಂಚಿಕೊಂಡು ಹುಟ್ಟಿದವನಲ್ಲ ಜನ್ಮ ತಾಳಿದ ಶಿಶುವಿಗೆ ಯಾವ ಜಾತಿ ಇದೆ ಹೇಳಿ ಯಾವ ಕುಲವಿದೆ ಗೋತ್ರವಿದೆ ?!…ಎಂದು ತಾಯಿಯವರು ಕೇಳುತ್ತಿದ್ದರು‌. ಅದೇ ರೀತಿ ಬಟ್ಟೆಗೆ ಬೆಲೆ ಇಲ್ಲ ಅಂದ್ರೆ ಬದುಕು ಮಾಡಲು ಪ್ರತಿ ಜೀವಿಯು ಕಾಯಕವನ್ನು ಮಾಡಿ ಬದುಕಬೇಕಾಗುತ್ತದೆ.ಕಾಯಕಕ್ಕೆ ಮೇಲು ಕೀಳು ಎಂಬ ತಾರತಮ್ಯ ಸಲ್ಲದು ಯಾವ ಕಾಯಕವೂ ಮಾಡಿದರೂ ಅದು ಶ್ರೇಷ್ಠವಾದದ್ದೇ ಅಂತ ಅಂದರೆ “Dignity of Labour ” ಅನ್ನು ಎತ್ತಿ ಹೇಳುತ್ತದೆ.  ಕಾಯಕ ಶ್ರೇಷ್ಠತೆಯಿಂದ  ಮನುಷ್ಯ ಶ್ರೇಷ್ಠನಾಗಲು ಸಾಧ್ಯ ಎನ್ನುತ್ತಾ ಸಾಮಾಜಿಕ ಕ್ರಾಂತಿಯಗೆ ತಿರುವು ಕೊಟ್ಟ ಕೀರ್ತಿ ನಮ್ಮ ಶರಣ ಸಮಾಜಕ್ಕೆ ಸಲ್ಲುವುದು ಅನ್ನುತ್ತಿದ್ದರು.  ವಿಶ್ವ ಇತಿಹಾಸದಲ್ಲಿ   ಕಾಯಕವೇ ಕೈಲಾಸವೆಂದು ಸಾರಿದ ಬಸವಣ್ಣನ ಹೆಸರು ಮೊದಲಾಗುವುದು…. ಸತ್ಯ ಶುದ್ಧ ಕಾಯಕದ ಅನುಷ್ಠಾನ ಮನುಜನ ಆದ್ಯ ಕರ್ತವ್ಯ … ಕೈಗೊತ್ತಿಕೊಂಡ ಕಾಯಕದಲ್ಲಿ ಭಕ್ತಿ ಶ್ರದ್ಧೆ ಇರಬೇಕು ಅದಕ್ಕೆ ಮೇಲು ಕೀಳ ಎಂಬ ಸೂತಕ ತಟ್ಟಬಾರದು ಅನ್ನುತ್ತಿದ್ದರು ತಾಯಿಯವರು…  ವೈಚಾರಿಕ ಆಚಾರವೆಂದರೆ ದುಡಿಮೆ ದಾನ ಏನೇ ಇದ್ದರೂ ಎಷ್ಟೇ ಇದ್ದರು ಆಚಾರ ರಹಿತ ವರ್ತನೆಯಲ್ಲಿ ಅದು ಸಂಪೂರ್ಣ ನಿರರ್ಥಕ , ಆದ್ದರಿಂದ ಆಚಾರ ಸಂಪನ್ನನಾಗಿರಬೇಕು ಮನುಷ್ಯ ಅನ್ನುತ್ತಾರೆ ಇದು ಕಾಯದಿಂದ ಬಂದ ಹಣ ಯೋಗ್ಯವಾದ  ಕರ್ಮ ಕ್ರಿಯೆಗಳಾದ ಜಂಗಮ ದಾಸೋಹಕ್ಕೆ ಗುರು ಸೇವೆಗೆ ಲಿಂಗದ ಆರಾಧನೆಯೇ ಅಂತಹ ಕೆಲಸಕ್ಕೆ ಸಲ್ಲಬೇಕು. ಸದಾಚಾರ ಕಾಯಕಕ್ಕೆ ಹೆಚ್ಚು ಮಹತ್ವ ನೀಡುತ್ತದೆ ಅನ್ನುತ್ತಿದ್ದರು . * ಪರಶಿವನ ಸೇವೆಯಲ್ಲಿ ಸದಾ ತೊಡಗುವುದೇ ಶಿವಾಚಾರ ನಡೆ-ನುಡಿಗಳಲ್ಲಿ ಮಡಿಯಾದವರು ಶಿವಾಚಾರ ಸಂಪನ್ನರು ಅಂತ ಹೇಳ್ತ… ಜಾತಿ ಮತ ರಹಿತ‌ಸಮಾಜ ನಿರ್ಮಿಸಲು ತಾಯಿಯವರು ಒತ್ತುಕೊಟ್ಟವರು.( ಮುಂದುವರೆಯುವುದು) ಸವಿತಾ ಹರಿಜನ ಕೇರಿಯ ಉದ್ಧಾರಕ್ಕಾಗಿ ಸತತವಾಗಿ ಕೇರಿಗಳಿಗೆ ಭೇಟಿ ಕೊಡುತ್ತಿದ್ದ ಜಯದೇವಿ ತಾಯಿಯವರು ಹೇಳಿತಾರೆ….. *ನುಡಿಯಿರಿ ಸತ್ಯವನು ನಡೆಯಿರಿ ಆಚಾರದಿ ದುಡಿಯಿರಿ ಮೈ ಉಳಿಸದೆ ಯಾರಿಗೂದುಡಿಕಿ ಮನ ನೋಯಿಸಬೇಡಿ* ಜಯದೇವಿ ತಾಯಿಯವರು ಅಸ್ಪೃಶ್ಯತೆಯನ್ನು ಮಾತ್ರ ವಿರೋಧಿಸಿದವರಲ್ಲ,ಅವರು ಸಂಪೂರ್ಣ ಸಮಾಜದಲ್ಲಿ ಇರುವ ಜಾತಿ-ಮತ ಭೇದಭಾವವನ್ನು ಬೇರು ಸಮೇತ ತೆಗೆದುಹಾಕಬೇಕೆಂದು ಸಂಕಲ್ಪ ಮಾಡಿದ ಮಹಾನ್ ಸಮಾಜಸೇವಕಿ.ಅವರ ಜೀವನವೇ ಈ ಸಂದೇಶದ ಪ್ರತಿಬಿಂಬವಾಗಿತ್ತು.ಇದನ್ನು ವಿಸ್ತಾರವಾಗಿ ನೋಡಿದರೆ ಅವರ ಜೀವನದಲ್ಲಿ ನಡೆದಂತಹ ಹಲವು ಘಟನೆಗಳು ಅವರ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ… ಕೆಲವು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಈ ಅನ್ಯಾಯದ ವಿರುದ್ಧ ಅವರು ಧೈರ್ಯವಾಗಿ ನಿಂತರು. ಒಮ್ಮೆ ದಲಿತರನ್ನು ಕರೆದುಕೊಂಡು ದೇವಸ್ಥಾನದೊಳಗೆ ಪ್ರವೇಶ ಮಾಡಿಸಿದರು. ಇದರಿಂದ ಹಲವಾರು ವಿರೋಧಗಳು ಎದುರಾದರೂ, ಅವರು ಹಿಂದೆ ಸರಿಯಲಿಲ್ಲ.ದೇವರು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಸಮಾಜಕ್ಕೆ ಬೋಧಿಸಿದರು. *ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾಪಂಜು ಹಿಡಿದು ನಿಜತತ್ವವ- ಸಾರುವೇ ಕೆಂಜಡೆಯವನ ಕೃಪೆಯಿಂದ* ಕೆಂಜಡೆಯವನು- ಶಿವನ ಕೃಪೆಯಿಂದ ನಾನು ಯಾವ ಸತ್ಕಾರ್ಯಕ್ಕೂ ಹಿಂಜರಿಯಲಾರೆ ಅಂತ ಹೋರಾಡುತ್ತಿದ್ದರು. ತಾಯಿ ಸಂಗವ್ವನವರು  ಅದೆಷ್ಟೇ ಆಧುನಿಕ ವಿಚಾರವಂತೆ ಯಾಗಿದ್ದರು ಮನೆಯಲ್ಲಿ ಒಳ ಪಂಗಡದ ಬೇರೆ ಜನರು, ಕೆಳ ಜಾತಿಯ  ಯಾರಾದರೂ ಒಳಗೆ ಬಂದು ನೀರಿನ ಕೊಡಗಳನ್ನು ಮುಟ್ಟಿದ್ದರೆ ಅವುಗಳನ್ನು ತೊಳೆದು ಮತ್ತೆ ಸ್ವಚ್ಛಗೊಳಿಸಿದ ನೀರನ್ನು ತುಂಬಿಡುವ ಮಡಿವಂತಿಕೆ ಅವರದಾಗಿತ್ತು .ಇದನ್ನೆಲ್ಲಾ ಗಮನಿಸುತ್ತಿದ್ದ ಜಯದೇವಿ ತಾಯಿಯವರು ಕಳವಳಗೊಂಡು ಶರಣರು ಉತ್ತಿಬಿತ್ತಿ ಬೆಳೆದಂಥ   ವಚನವನ್ನು

Read Post »

ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-13 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಲೇ: ಸವಿತಾ ದೇಶಮುಖ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ *ಭಯವನು ಗೆದ್ದವರು ಇತಿಹಾಸವನ್ನು ರಚಿಸುವರು* ಅನ್ನುವ ಮಾತು ಸುಳ್ಳಾಗಲಿಲ್ಲ……!!! ಜಯದೇವಿ ತಾಯಿಯವರ  ನಿಜಾಮನಂಥ ಶಿಷ್ಟ ಆಳರಸನ ಆಜ್ಞೆಯನ್ನು ಉಲ್ಲಂಘಿಸಿ ಜಹೀರಾಬಾದಿನ ಕಾಂಗ್ರೆಸ್ ಪ್ರಾಂತೀಯ ಪರಿಷತ್ತಿನಲ್ಲಿ ಭಾಗವಹಿಸಿ ಜನಸ್ತೋಮದ ಸ್ಪೂರ್ತಿ ಉತ್ಸಾಹವನ್ನು ಉಲ್ಬಣಿಸಿದ್ದರು. ಇತಿಹಾಸವನ್ನು ರಚಿಸಿದರು.  * ಶರಣರ ಭೂಮ್ಯಾಗ ಮರಣವೆ ಲೇಸಂದು ಹರಣದ ಹಂಗ ತೊರೆದೇನ, ಕಲ್ಯಾಣದಶರಣರಿಗೆ ನೆನೆದೇನ ಮನದಾಗ * ಅಂತ ಹೇಳುತ್ತಾ ಹೈದರಾಬಾದಿನ ಜಹೇರಾಬಾದಿನಲ್ಲಿ ಗರ್ಜಿಸಿದ ಜಯದೇವಿ ತಾಯಿಯವರು ಕಲ್ಯಾಣ ಶರಣರ ಗಣಾಚಾರ ನೆನೆಯುತ ಕೆಚ್ಚದೆಯ ಧೈರ್ಯ ಸಾಹಸ ಮೇರೆದರು. ನಿಜಾಮನ ಫರ್ಮಾನ್‌ನ್ನು ಧಿಕ್ಕರಿಸಿ ಹೈದರಾಬಾದ್ ಮಣ್ಣಿಗೆ ಕಾಲಿಟ್ಟ ಜಯದೇವಿ ತಾಯಿಯವರ ಧೈರ್ಯ….. ಬ್ರಿಟಿಷರ ಗಮನ ಸೆಳೆದಿತ್ತು. ಆ ಸಮಯದಲ್ಲಿ ಎರಡನೇ ಮಹಾಯುದ್ಧ ಉಗ್ರವಾಗಿ ನಡೆಯುತ್ತಿತ್ತು.  ಯುದ್ಧದ ಹೊತ್ತಿನಲ್ಲಿ ತಮ್ಮ ಸೇನೆಗೆ ಹೆಚ್ಚಿನ ಜನರನ್ನು ಸೇರಿಸಿಕೊಳ್ಳಲು ಬ್ರಿಟಿಷರು ವಿವಿಧ ಸಮಾಜಗಳ ನಾಯಕರನ್ನು ಸಂಪರ್ಕಿಸುತ್ತಿದ್ದರು.ಜಯದೇವಿ ತಾಯಿಯವರನ್ನು ಭೇಟಿ ಮಾಡಿ ವಿನಂತಿಯ ರೂಪದಲ್ಲಿ ಒಂದು ಮಾತು ಹೇಳಿದರು…. “ನೀವು ಲಿಂಗಾಯತ ಸಮಾಜದಲ್ಲಿ ಪ್ರಭಾವ ಹೊಂದಿದ್ದೀರಿ. ನಮ್ಮ ಸೈನ್ಯಕ್ಕಾಗಿ ಲಿಂಗಾಯತ ಯುವಕರನ್ನು ಕೂಡಿಸಿ, ಅವರನ್ನು ಸೇನೆಗೆ ಸೇರಲು ಪ್ರೇರೇಪಿಸಿ. ದೇಶ ಸೇವೆಯ ಹೆಸರಿನಲ್ಲಿ ಇದು ದೊಡ್ಡ ಕಾರ್ಯವಾಗುತ್ತದೆ. ನಿಮ್ಮ ಸೇವೆಗೆ ನಾವು ಗೌರವ ಮತ್ತು ಪ್ರಶಸ್ತಿಯನ್ನು ನೀಡುತ್ತೇವೆ.”ಎಂದರು ಆ ಮಾತು ಕೇಳಿದ ತಾಯಿಯವರು ಕ್ಷಣಕಾಲ ನಿಶ್ಶಬ್ದವಾಗಿ ನಿಂತರು.ಅವರು ನಿಧಾನವಾಗಿ ತಲೆಯನ್ನು ಎತ್ತಿ, ಕಣ್ಣಲ್ಲಿ ಸ್ಪಷ್ಟತೆ ಮತ್ತು ಧೈರ್ಯ ತುಂಬಿಸಿಕೊಂಡು ಹೇಳಿದರು….“ಇದು…. ದೇಶ ಸೇವೆಯೇ…..?? ನಮ್ಮ ಜನರನ್ನು ಪರರ ಯುದ್ಧಕ್ಕೆ ಒಪ್ಪಿಸುವ ದಾರಿ…..?”“ನನ್ನ ಜನರನ್ನು ನಿಮ್ಮ ಯುದ್ಧಕ್ಕಾಗಿ ಹುರಿದುಂಬಿಸಲಾದಿತ್ತೇ????…….  ನಾವೇಲ್ಲ ಈ ಮಣ್ಣಿನ ಮಕ್ಕಳು… ನಮ್ಮ ಶಕ್ತಿ, ನಮ್ಮ ಜೀವ…. ದೇಶದ ಸ್ವಾತಂತ್ರ್ಯಕ್ಕಾಗಿ  ಹೊರತು ವಿದೇಶಿಯರ ಯುದ್ಧಕ್ಕಾಗಿ ಅಲ್ಲ.” ಎಂದು ಸ್ಪಷ್ಟಪಡಿಸಿದರು. ಬ್ರಿಟಿಷರು ಮತ್ತೆ ಆಮಿಷಗಳನ್ನು ಮುಂದಿಟ್ಟರುಪ್ರಶಸ್ತಿ, ಕೀರ್ತಿ, ಸನ್ಮಾನ ಅಂತ……!!!ಆದರೆ ತಾಯಿಯವರ ಹೃದಯದಲ್ಲಿ ಅವುಗಳಿಗೆ ಯಾವುದೇ ಸ್ಥಳ ಇರಲಿಲ್ಲ.“ನನ್ನ ಜನರ ಭವಿಷ್ಯವನ್ನು ನಾನು ಮಾರುವುದಿಲ್ಲ,” ಎಂದು ಅವರು ದೃಢವಾಗಿ ಉತ್ತರಿಸಿದರು.  ಜಯದೇವಿ ತಾಯಿಯವರು ಪ್ರಶಸ್ತಿಗಳನ್ನು ಕೇವಲ ನಿರಾಕರಿಸಿದವರಲ್ಲ….*ಅವರು ತಮ್ಮ ಸಮುದಾಯದ ಗೌರವವನ್ನು, ದೇಶದ ಆತ್ಮಸಮ್ಮಾನವನ್ನು ಕಾಪಾಡಿದ ಮಹಾನ್ ನಾಯಕಿ ಆಗಿದ್ದರು.*ಅವರು ಹೇಳುವಂತೆ …. ಮಹಾತ್ಮ ಗಾಂಧಿಯ ಅನುಯಾಯಿಯಾಗಿ ಸ್ವದೇಶಿ ವಸ್ತ್ರವನ್ನು ಧರಿಸಿ ವಿದೇಶರಿಗೆ ಸಹಾಯ ಮಾಡುವುದೆಂದರೆ ದೇಶದ್ರೋಹವೇ ಸರಿ ಎಂದರು.ಪೂರ್ಣ ಪ್ರಮಾಣದಲ್ಲಿ ರಾಷ್ಟ್ರಪಿತಮಹಾನೊಂದಿಗೆ ದೇಶ ಸೇವೆಗೆ ಕಂಕಣ ಬದ್ಧರಾಗಿ ನಿಂತರು.  ಆದರೆ ಮನೆಯಲ್ಲಿಯ ವಿರೋಧವನ್ನು ಎದುರಿಸಬೇಕಾಯಿತು ಏಕೆಂದರೆ ಬ್ರಿಟಿಷರು ಅವರ ಆಸ್ತಿಯ ಮೇಲೆ ತೆರಿಗೆಯ ಭಾರವನ್ನು ಹೇರಿದರು.  ಹೆಚ್ಚಿನ ಮೊತ್ತದ “ವಾರ್ ಫಂಡ್” ಜಯದೇವಿ ತಾಯಿಯವರು ಮನೆಯವರು ಕಟ್ಟಬೇಕಾಗಿ ಬಂತು. ತಾಯಿಯವರು ಸ್ವದೇಶಿ ಅರಿವೇ ಉಡಲು ಪ್ರಾರಂಭಿಸಿದರು.ಇದೇ ಸಮಯದಲ್ಲಿ. ಹರಡೇಕರ್ ಮಂಜಪ್ಪನವರ ನೇತೃತ್ವದಲ್ಲಿ* ಹಿಂದೂಸ್ತಾನಿ ಸೇವಾದಳ *ಸ್ಥಾಪನೆಯ ಸಂಕಲ್ಪವು ಎಲ್ಲೇಲ್ಲೂ ನಡೆದಿತ್ತು. ಆಗಿನ ಕಾರಾಗ್ರಹ ವಾಸವು ನರಕ ಸದೃಶವಾಗಿತ್ತು. ಕೆಲವು ಹಸಿಬಿಸಿ ತರುಣರು ಕಾರಾಗೃಹದಲ್ಲಿ ಇದ್ದಾಗ ಬ್ರಿಟಿಷರು ಕೊಡುತ್ತಿದ್ದ ಹಿಂಸೆಯ ತಾಳಲಾರದೆ ಕ್ಷಮಾಪಣೆ ಪತ್ರ ಬರೆದು ಕೊಟ್ಟು ಸೆರೆಮನೆಯಿಂದ ಹೊರ ಬಂದರೆಂಬ ವಿಷಯ ಕಿವಿಗೆ ಬಿದ್ದು ಹರಡೇಕರ ಮಂಜಪ್ಪನವರು ಹಾಗೂ ಇನ್ನು ಕೆಲವು ಮುಖಂಡರು ಬಲು ನೊಂದುರು ….ವಿವೇಚನೆಯಿಂದ ದೇಶದಲ್ಲಿ ತರುಣ ಸಂಘಟನೆ ಮಾಡಿ ಅವರಿಗೆ ದೇಶ ಪ್ರೇಮದ ಕೆಚ್ಚು, ದೇಶಾಭಿಮಾನ , ಸ್ವಾಭಿಮಾನ,ಶಿಸ್ತು, ಸಂಯಮ, ಕಷ್ಟ ಸಹಿಷ್ಣತೆ, ಶರೀರ ಬಲ ವರ್ಧನೆ,  ಇವುಗಳೆಲ್ಲವನ್ನು ಮೇಳ್ಯಸಿ ವೀರ ಯುವಕರನ್ನು ನಿರ್ಮಾಣ ಮಾಡುವ ಸಂಘಟನೆಯನ್ನು ಕಟ್ಟಬೇಕೆಂದು ದೃಢ ನಿರ್ಧಾರವನ್ನು ಮಾಡಿ ಸೇವಾದಳ ಸ್ಥಾಪನೆಯನ್ನು ಅಲ್ಲಲ್ಲಿ ಮಾಡಲು ಪ್ರಾರಂಭಿಸಿದರು.  ಈ ಹಿನ್ನೆಲೆಯಿಂದಲೇ ಕರ್ನಾಟಕದಲಿ ಅತ್ಯಂತ ಭರದಲಿ ರಾಷ್ಟ್ರೀಯ ಸೇವಾದಳ ಸ್ಥಾಪನೆಗೆ ಚಾಲನೆ ದೊರಕಿತು..‌ ಇಂಥ ಸಂಘಟನೆ ಪ್ರಾರಂಭವಾದಾಗ ಇದು ಪುರುಷರಷ್ಟೇ ಪಾಲುಕೊಳ್ಳುತ್ತಿದ್ದರು. ರಾಷ್ಟ್ರ ಹಿತಕ್ಕೆ ಹೋರಾಡಲು ಮಹಿಳೆಯರು ಪುರುಷರಿಗೆ ಹೆಗಲುಕೊಟ್ಟು ನಿಲ್ಲುವ ಸಂದರ್ಭಗಳು ಬಂದೊದಗಿತ್ತು. ಅದಕ್ಕಾಗಿ  ಮಹಿಳೆಯರಿಗಾಗಿ ನಿರ್ದಿಷ್ಟವಾದಂಥ ಸಂಘಟನೆ ಯಾವುದು ಇರಲಿಲ್ಲ ….ಹೀಗಾಗಿ ಈ ಸಂಘಟನೆಯಲ್ಲಿ ಸೇರಿ ಕೊಳ್ಳುವ ಮೂಲಕ ರಾಷ್ಟ್ರೀಯ ಚಳುವಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿತ್ತು‌‌…. ಹಾಗೆ ಮಹಿಳೆಯರು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳಲು ಅವರಿಗೆ ಪ್ರೇರೆಪಿಸುತ ರಾಷ್ಟ್ರದ ಆಗೂ ಹೋಗುಗಳ ಅರಿವು ಮೂಡಿಸಿ… ರಾಷ್ಟ್ರೀಯತೆಯನ್ನು ಉತ್ತೇಜಿಸುವ ಅನೇಕ ಸಂಘ-ಸಂಸ್ಥೆಗಳು ಹುಟ್ಟಿಕೊಂಡವು. ೧೯೪೭ರಲ್ಲಿ ಮಹಿಳೆಯರ ಹೋರಾಟಕ್ಕೆ ಬೆಂಬಲಿಸಿ   *ಜಯದೇವಿ ತಾಯಿಯವರು ತಮ್ಮ ಮನೆಯಾದ *ಜಯನಿಕೇತನದಲ್ಲಿ *ರಾಷ್ಟ್ರೀಯ ಸೇವಾದಳ,*ಪ್ರೌಢ ಸ್ತ್ರೀ ಶಾಖೆ*ಯನ್ನು ಆರಂಭಿಸಿದರು.  ಸೊಲ್ಲಾಪುರದಲ್ಲಿ ಪ್ರಾಂತೀಯ ಸಂಘಟಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಈ ಸಂಘವು ಅನುತಾಲಿಮಯೋ ಅವರಿಂದ ಉದ್ಘಾಟಿಸಲಾಯಿತು. ಇಲ್ಲಿ ಪ್ರತಿ ವಾರ ಸಭೆ ಸೇರಿ ರಾಷ್ಟ್ರೀಯ ಹಿತ ಚಿಂತನೆಗಾಗಿ ರಾಜಕೀಯ ಸಾಮಾಜಿಕ ವಿಚಾರಗಳನ್ನು ಚರ್ಚಿಸುತ್ತಿದ್ದರು. ಮಹಿಳೆಯರ ಭೌಧಿಕ-ಭೌತಿಕ ಆರೊಗ್ಯಕರ ವಿಕಾಸದೊಂದಿಗೆ ದೇಶಪ್ರೇಮ ಹಾಗೂ ಮಹಾನ್ ಆದರ್ಶ ಪುರುಷರು-ಸ್ತ್ರೀಯರ ಬಗ್ಗೆ ಅನೇಕ ಭಾಷಣವನ್ನು ಏರ್ಪಡಿಸಲಾಗುತ್ತಿತ್ತು. ಜಯದೇವಿ ತಾಯಿ ಮತ್ತು *ರಾಮಕೃಷ್ಣ ಜಾಜುಜಿ* ಅಂಥವರ ಭಾಷಣದಿಂದ ಹೆಣ್ಣು ಮಕ್ಕಳು ಪ್ರೇರಿತರಾಗುತ್ತಿದ್ದರು. ಇವರೊಂದಿಗೆ ಮಹಿಳಾ ಜ್ಞಾನ ಮಂದಿರದಿಂದಲೂ ಜಯದೇವಿ ತಾಯಿಯವರು ಹೆಣ್ಣು ಮಕ್ಕಳನ್ನು ಸಂಘಟಿಸುತ್ತಿದ್ದರು. ಮಹಿಳೆಯರಲ್ಲಿ ದೇಶ ಪ್ರೇಮ ಮೂಡಿಸಿ ಸಹಕರಿಸುತ್ತಿದ್ದರು. ಸ್ವಾತಂತ್ರದ ಹೋರಾಟದಲ್ಲಿ ಪಾಲ್ಗೊಳ್ಳುವ ಮಹಿಳೆಯರಲ್ಲಿ ರಾಷ್ಟ್ರೀಯ ನಾಡ ನುಡಿಯ ಜಾಗೃತಿಯನ್ನು ಮೂಡಿಸುತ್ತಿದ್ದರು. ೧೯೪೭ ಅಷ್ಟರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸೂಚನೆ ಸಿಗಲಾರಂಬಿಸಿತ್ತು. ಜಯದೇವಿ ತಾಯಿಯವರು ಅಕ್ಕನ ಬಳಗ ಹಾಗೂ ಸರಸ್ವತಿ ವಿದ್ಯಾ ಮಂದಿರ, ಶ್ರಾವಿಕಾಶ್ರಮ ,ಸ್ತ್ರೀ ಶಕ್ತಿ ಹೋರಾಟಗಳು ಜೋರಾಗಿ ನಡೆಯಿತು . ಸ್ವಾತಂತ್ರ್ಯ ದೇಶದಲ್ಲಿ ಸ್ತ್ರೀಯರ ಕರ್ತವ್ಯಗಳು,  ಸ್ತ್ರೀ ಸ್ವಾವಲಂಬನೆ, ಸ್ತ್ರೀ ಆರ್ಥಿಕ ಸ್ಥಿರತೆ,ವರ್ತಮಾನ ಕಾಲದ ವೆಚ್ಚರಹಿತ ಸರಳ ವಿವಾಹಗಳ ಪದ್ಧತಿ, ಸಾಮಾಜಿಕವಾಗಿ ನಾರಿಯರು ಗೌರವದಿಂದ ಬದುಕುವ ವಿಧಾನವನ್ನು ಮುಂತಾದ ವಿಷಯಗಳ ಮೇಲೆ ವಿವಿಧ ಬಡಾವಣೆಗಳಲ್ಲಿ ಭಾಷಣ ವ್ಯಾಖ್ಯಾನ ಮಾಲೆಯನ್ನು ಏರ್ಪಡಿಸುತ್ತಿದ್ದರು ‌. ಸಂಸ್ಕೃತಿಕ ವಿದ್ಯಾವಂತ ಮಹಿಳೆಯರಿಂದ ಸುವ್ಯವಸ್ಥಿತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ತಾಯಿಯವರ ನಿಲುವಾಗಿತ್ತು. ಸುಖ ಶಾಂತಿ ನೆಲೆಸುವಂತೆ ಮಾಡುವುದು ಧರ್ಮದ ಗುರಿ ,ದುಃಖಕ್ಕೆ ಕಾರಣವಾಗುವ  ಅಜ್ಞಾನ..ಬಡತನ ಮತ್ತು ವರ್ಗ ಕಲಹಗಳು ಕಾರಣವಾಗುತ್ತವೆಂದು…… ಈ ಅಜ್ಞಾನವನ್ನು ದೂರ ಮಾಡಬೇಕು ಕುಟುಂಬದ ಅನ್ಯಾಯವನ್ನು ದೂರ ಮಾಡಬೇಕಾದರೆ ಮುಖ್ಯವಾಗಿ ಮನೆಯ ಸ್ತ್ರೀ ತಾಯಿಯೂ ವಿದ್ಯಾವಂತಳು ಆಗಿರಲೇಬೇಕು  ಸ್ತ್ರೀ ಶಿಕ್ಷಣ ಅದರೊಂದರಿಂದಲೇ ಶಾಂತಿಭರಿತವಾದ‌ ಬದುಕು ಹಾಗೂ ಸಾಮಾಜಿಕೆ ಸಮಾನತೆಯ ಬೆಳವಣಿಗೆಗೆ ಮುಖ್ಯ ಎಂದು ಅವರು ಪ್ರತಿಪಾದಿಸುತ್ತಿದ್ದರು. *ಅಸ್ಪೃಶ್ಯ ನಿವಾರಣೆ* ಅದೇ ಸಮಯದಲ್ಲಿ ಅಸ್ಪೃಶ್ಯರು ಎಂದು ಕರೆದ ಒಂದು ಜನ ಸಮುಹವನು‌ ಕಡೆಗಣಿಸುವ ಅತ್ಯಂತ ಹೀನ ರೀತಿಯಲ್ಲಿ ಅವರನ್ನು ನೋಡಿಕೊಳ್ಳುವ ಪದ್ಧತಿ ಸರಿ ಅಲ್ಲವೆಂದು ವಿರೋಧಿಸಿದ ಗಾಂಧೀಜಿಯವರ‌ ಕರೆಕೊಟ್ಟಂತೆ ಅಸ್ಪೃಶ್ಯರನ್ನು ಹರೀಜನರು ಎಂದು ಕರೆಯಲು ಜಯದೇವಿತಾಯಿಯವರು ಮುಂದಾದರು.ಅದೇ ರೀತಿ 12ನೇ ಶತಮಾನದ ಶರಣರು ಎಲ್ಲರಲ್ಲಿ ಸಮಾನತೆಯ ಮನಸ್ಸನ್ನು ಹುಟ್ಟು ಹಾಕಿದ್ದರು ಕಾಯಕದಿಂದ ಹುಟ್ಟಿದ ಜಾತಿಯನ್ನು ವ್ಯಯಕ್ತಿಕವಾಗಿ ಸಂಭಧ ಆರಂಭಿಸುವುದು, ಅವಮಾನ ಗೊಳಿಸುವುದು ಅಪಚಾರವೆದುಂದು ಹೇಳುತ್ತಿದ್ದರು.    ಶರಣ ಅಂಬಿಗರ ಚೌಡಯ್ಯ ಮಾದರ ಚೆನ್ನಯ್ಯರಂತೆ ಬದುಕನ್ನು ಅರಿತುಕೊಂಡ ಜಯದೇವಿ ತಾಯಿಯವರು ಶರಣರ ಆದರ್ಶವನ್ನು ಮನದಲ್ಲಿ ತುಂಬಿಕೊಂಡು ಗಾಂಧೀಜಿಯವರ ಹರೀಜನರ ಆಂದೋಲನಕೆ ಕೈಜೋಡಿಸಿದ್ದರು.ಪೂಜೆ ತೀರ್ಥ ಪ್ರಸಾದಗಳನ್ನು ಹರಿಜನರಿಗೆ ನಿರಾಕರಿಸಿದ್ದನ್ನು ಜಯದೇವಿ ತಾಯಿಯವರು ಗಾಢವಾಗಿ ವಿರೋಧಿಸುತ ಅನೇಕ ಕಡೆಭಾಷಣ ಮಾಡುತ್ತಿದ್ದರು. ಹಾಗೆ ಸ್ತ್ರೀಯರ ಆಧ್ಯ ಕರ್ತವ್ಯ ಅವರ ನಿಶ್ಚಲವಾದ ನಿರ್ಭಯತೆ ನಿರ್ಮಲತೆಯ…… ವಿಷಯಗಳ ಕುರಿತು ಕೇರಿಯ ಜನರಿಗೆ ತಿಳಿಹೇತ್ತಿದ್ದರು. ಸೊಲ್ಲಾಪುರ ಮತ್ತು ಬಾರ್ಷಿಗಳ ರಿಮೈಂಡ್ ಹೋಂ ಮತ್ತು ಹರಿಜನ ಸಂಘಗಳಿಗೆ, ಗಾಂಧಿ ಛತ್ರಾಲಯಗಳಿಗೆ ಜಯದೇವಿ ತಾಯಿಯವರು ಬೆಂಬಲ ಪ್ರೇರಣೆ ನೀಡಿದವರು. ಆಡಳಿತಗಾರರಿಗೆ ಭೇಟಿಯಾಗಿ  ಅವರ ಸಮಸ್ಯೆಗಳನ್ನು ತಿಳಿದುಕೊಂಡು ಧನ ಸಹಾಯವನ್ನು ತಕ್ಷಣವಾಗಿ ಒದಗಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟ ಹಾಗೂ ಮಹಾಪುರುಷರ ವಿಷಯಗಳು ಹಾಗೂ ಧೀರ ಮಹಿಳೆಯರು ಹೋರಾಟಗಾರರ ಬಗ್ಗೆ ವಿಸ್ತೃತಗೊಳಿಸಿ ಅವರ ಜೀವನ ಚರಿತ್ರೆಯ ಬಗ್ಗೆ ಹರಿ ಜನರಿಗೆ ತಿಳಿ ಹೇಳುತ್ತಿದ್ದರು . ಹೆಣ್ಣು ಮಕ್ಕಳಿಗೆ ಸ್ವಚ್ಛತೆಯ ಪ್ರಾಮುಖ್ಯತೆಯನ್ನು ತಿಳಿ ಹೇಳುತ್ತಿದ್ದರು.ಇವರು ಆಗಾಗ ಹರಿಜನ ಕೇರಿಗೆ ಬರುವರೆಂದು ತಿಳಿದ ಕೇರಿಯವರು ಎಲ್ಲವನ್ನು ಸ್ವಚ್ಛ ಮಾಡಿ ಚಳಿ ಹೊಡೆದು ತರಿಳು ತೋರಣವನ್ನು ಕಟ್ಟಿ, ಆರತಿ ತುಂಬಿಕೊಂಡು ಜನರು ಸ್ವಾಗತಿಸುತ್ತಿದ್ದರು. ಅಸ್ಪೃಶ್ಯ ಕೇರಿಗೆ  ಇನ್ನಿತರ ಕಾರ್ಯಕ್ರಮದಲ್ಲಿ ಓಡಾಡುವ ಕಾರ್ಯಕರ್ತರು ಜಯದೇವಿ ತಾಯಿಯವರನ್ನು ಪರೀಕ್ಷಿಸಲು  ಜಯದೇವಿ ತಾಯಿಯವರನ್ನು ಅಲ್ಲಿ  ಬೋಜನೆ ಮಾಡಲು ಕೇಳಿಕೊಂಡರು …..ಅದಕ್ಕೆ ತಾಯಿಯವರು ಎಂದಿನಂತೆ ಅವರ ಪೂಜೆ ನಂತರವೇ ಪ್ರಸಾದ ತೆದುಕೊಳ್ಳುತ್ತಿದ್ದರು ಹೀಗಾಗಿ ಅವರು ತಮ್ಮ ಪೂಜೆಯನ್ನು ಮುಗಿಸಿ ಅಲ್ಲಿಗೆ ಬಂದು ಎಲ್ಲರೊಂದಿಗೆ ಪ್ರಸಾದವನ್ನು ತೆಗೆದುಕೊಂಡದ್ದು ಒಂದು ಇತಿಹಾಸವೇವಾಯಿತು.  ಹಾಗೆ ತಮ್ಮ  ಭಾಷಣ ಒಂದರಲ್ಲಿ ಹೀಗೆ ಹೇಳಿದ್ದರು ಇಂದು ನಮ್ಮಲ್ಲಿ ಬಹಳ ಜನರು ಸಾಮಾಜಿಕ ಕಾರ್ಯಗಳಲ್ಲಿ ಸಮಾಜದ ದುಡ್ಡು ದುಡಿಮೆಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ರೂಡಿ ಮಾಡಿಕೊಂಡಿದ್ದಾರೆ ನಮಗೆ ನಮ್ಮ ಅನ್ನವನ್ನು ತಿಂದು ಸಮಾಜ ಕಾರ್ಯ ಮಾಡುವ ಅಭ್ಯಾಸವಾಗಿದೆ ಅಂತ ಅಲ್ಲಿ ತಾಯಿಯವರನ್ನು ಸಂಘಟಿಕರಿಗೆ ಉತ್ತರ ನೀಡಿದ್ದರು. ಹೀಗೆ ತಾಯಿಯವರು ದೀನ,ದಲಿತ, ಶೋಷಿತ ಅಸ್ಪೃಶ್ಯರ ಸಲುವಾಗಿ ಅವರ ಜೀರ್ಣೋದ್ಧಾರದ ಸಲುವಾಗಿ ಶ್ರಮಿಸಿದರು. ಶರಣರು ತೋರಿದ ಸಮಾಜದ ಧಾರ್ಮಿಕ ಹಿನ್ನೆಲೆ ಅವರದಗಿತ್ತು. ಸೊಲ್ಲಾಪುರ ಬಾರ್ಸಿಗಳಲ್ಲಿದ್ದ ಹರಿಜನ ಕೇರಿಗಳಿಗೆ ಹರಿಜನ ಬೋರ್ಡಗಳಿಗೆ ಹೋಗಿ ಸಹಾಯ ಸಹಕಾರ ನೀಡುತ್ತಿದ್ದರು.ಹರಿಜನರಲ್ಲಿ ಸಾಕ್ಷರತೆ -ಸ್ವಾವಲಂಬನೆ- ಸ್ವಾಭಿಮಾನ ಮೂಡಿಬರುವಂತೆ ಜಯದೇವಿ ತಾಯಿಯವರು ಸತತವಾಗಿ ಹೋರಾಡಿದ ಘಟನೆಗಳನ್ನು ಜನರು ಇನ್ನೂ ಆದರೂ ನೆನೆಯುವಧನ್ನು ನೋಡಬಹುದು.ಜಯದೇವಿ ತಾಯಿಯವರಿಗೆ ಹರಿಜನರ ಬಗ್ಗೆ ಇದ್ದ ಕಳಕಳಿ ಅಪಾರವಾದದ್ದು ಎಂದು ಭಾಲ್ಕೀ  ಹಿರೇಮಠ್ ಪೂಜ್ಯ.ಚನ್ನಬಸವ ಪಟ್ಟದೇವರು, ಇಳಕಲ ಚಿತ್ತಗರಿ  ಸಂಸ್ಥಾನ ಮಠದ ಪೂಜ್ಯ ಮಹಾಂತ ಸ್ವಾಮಿಗಳು  ಮೆಚ್ಚಿಕೊಂಡು ಹರ್ಷವನ್ನು ವ್ಯಕ್ತಪಡಿಸುತಿದ್ದರು. ಅದೇರೀತಿ ಬೆಲ್ಲದಾಳ ಸಿದ್ದರಾಮ ಶರಣರನ್ನು (ಹರಿಜನ ಬಾಲಕ ವಿಠಲರು )ಶರಣನಾದದ್ದನ್ನು ಕಂಡು ಗೌರವಿಸುತ್ತಿದ್ದರು.. ಜಯದೇವಿ ತಾಯಿಯವರು ದಲಿತೋದ್ಧಾರ ಅಸ್ಪೃಶ್ಯೋದ್ಧಾರ ಬಗ್ಗೆ ಕಳಕಳಿಯಿಂದ ಕೇವಲ ಭಾಷಣ ಮಾಡಿದರೆ ಸಾಲದು ಶತಶತಮಾನಗಳಿಂದ ತುಳಿತಕ್ಕೆ ಒಳಗಾಗಿ ಅವರ ಅನುಭವಿಸಿದ ನೋವನ್ನು ಕಡಿಮೆಗೊಳಿಸುವ ಪ್ರಯತ್ನದಲಿದ್ದ ತಾಯಿಯವರು ಬರಿತಾರೆ…. *ಕೀಳು  ಮೇಲುಗಳೆಂಬ ಕುಲಾಚಾರವಳಿದುಕೊಳೆ ತೊಳೆಯಲು ಕೂಡಿದರು ಸಾರುವದಕೆ ಇಳೆಯೊಳು ಮಾನವ -ಕುಲ ಒಂದೇ * *ಜಗವು ಒಂದಾಗಲಿ ನಗುತ ಕೈಗೂಡಿಸಿರಿಬಗೆಯಲಿ ಅಣ್ಣ ತಮ್ಮಂದಿರಂತೆ, ಲೋಕದಿಹಗೆಯಂಬ ಭಾವ ಅಳಿಯಲಿ*  ವಿಶ್ವವೇ ಒಂದುಗೂಡಿಸುವ ..‌ಸಾರ್ವತ್ರಿಕ ಸರ್ವಕಾಲಿಕ ವಿಶ್ವಮಾನವೀಯ ಮೌಲ್ಯಗಳ ಒಡ್ಡೋಲಗ ಎಲ್ಲೆಡೆಯೂ ಸ್ಥಾಪಿತವಾಗಲಿ ಎನ್ನುವ ಆಸೆಯ ಹೊತ್ತವರು. *ನಾನು ನೀನೆಂಬ ಭೇದ ನಮ್ಮವರಿಗಿಲ್ಲತನ್ನಂತೆ ಜಗವ ಕಂಡಾರ -ಶರಣರುಭಿನ್ನಲ್ಲ ಉನ್ನತಿ ಪಡೆದಾರ!!* ಎಂದರು ಜಯದೇವಿತಾಯಿಅವರು. ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-12 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ *೧೯೪೪-೪೫*ರ ಸಮಯ….. ಸೋಲ್ಲಾಪುರದಲ್ಲಿ ಕಾಲರಾ ರೋಗ ಭೀಕರವಾಗಿ ಹರಡಲಾರಂಭಿಸಿತು…ಜನರು ಭಯದಿಂದ ನಡುಗುತ್ತಿದ್ದರು. ಮನೆಮನೆಯಲೂ ಅಳಲು, ಆತಂಕ, ನಿರಾಶೆಯ ಕತ್ತಲೆ ಆವರಿಸಿತ್ತು.ಜಯದೇವಿ ತಾಯಿಯವರು ಮತ್ತು ಅವರ ತಾಯಿ ಸಂಗವ್ವ ಬಾಯಿಯವರು ಇನ್ನುಳಿದ ಮಹಿಳೆಯರನ್ನು ಕರೆದುಕೊಂಡು ರೋಗ ಪೀಡಿತರಿಗೆ ಸಹಾಯ ಹಸ್ತ ಚಾಚಲಾರಂಭೀಸಿದರು. ಅವರ ಸಹಾಯಕ್ಕಾಗಿ ಅಕ್ಕನ ಬಳಗದ ಹೆಣ್ಣು ಮಕ್ಕಳನ್ನೆಲ್ಲ ಕರೆದುಕೊಂಡು ಹೋಗುತ್ತಿದ್ದರು. ಅಂಥ ಸಮಯದಲ್ಲಿ ಜಯದೇವಿತಾಯಿಯವರು ಮಾಡಿದ ಸೇವೆ ಕೇವಲ ಸಹಾಯವಲ್ಲ… ಅದು ಮಾನವೀಯತೆಯ ಜೀವಂತ ರೂಪ.ರೋಗಿಗಳ ಬಳಿ ಹೋಗುವುದಕ್ಕೂ ಜನ ಹೆದರುತ್ತಿದ್ದಾಗ…ಜಯದೇವಿ ತಾಯಿಯವರು…. ಅವರ ಮನೆಗಳಿಗೆ ಹೋಗಿ ಧೈರ್ಯ ತುಂಬಿದವರು.ಅವರು ತಮ್ಮ ಕೈಯಿಂದಲೇ ಔಷಧಿ ಕೊಡುತ್ತಿದ್ದರು, ಪೌಷ್ಟಿಕ ಆಹಾರ  ರೋಗಿಗಳಿಗೆ ಒದಗಿಸುತಿದ್ದರು.ಕಾಲರಾ ಹರಡುವುದನ್ನು ತಡೆಯಲು ಸ್ವಚ್ಛತೆಯ ಮಹತ್ವವನ್ನು ಜನರಿಗೆ ತಿಳಿಸುತ್ತಿದ್ದರು.ನೀರನ್ನು ಕುದಿಸಿ ಕುಡಿಯಬೇಕು, ಪರಿಸರ ಸ್ವಚ್ಛವಾಗಿರಬೇಕು ಎಂದೆಲ್ಲಿ ತಿಳಿಸಿ ಹೇಳುತಿದ್ದರು. ಈ ರೋಗದಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳನ್ನು ಅವರು ಒಬ್ಬ ತಾಯಿಯಾಗಿ ಅಪ್ಪಿಕೊಂಡರು. ರೋಗದ ಬಗ್ಗೆ ಭಯಾನಕವಾದ ಆತಂಕವು ಎಲ್ಲರಲ್ಲಿ ನೆಲ ಮಾಡಿತು.ಆ ಕರಾಳಭಯ ನೀಗಿಸಿ ಧೈರ್ಯ ಹೇಳಿದವರು.ಅನಾಥ ಮಕ್ಕಳಿಗೆ ಇರಲು ವ್ಯವಸ್ಥೆ ಮಾಡಿ ಬಟ್ಟೆ ಪುಸ್ತಕವನ್ನು ಕೊಟ್ಟು ಶಾಲೆ ಕಲಿಸಿದರು. ರೋಗ ಪೀಡೆತರಿಗಾಗಿ ,ಬಡ ಮಕ್ಕಳಿಗಾಗಿ, ಅನಾಥರಿಗಾಗಿ ಸಿದ್ದರಾಮನ ದೇವಸ್ಥಾನಕ್ಕೆ ಹೋಗಿ ಬೇಡಿಕೊಂಡು ಬರುತ್ತಿದ್ದರು. *ಬಡ ಮಕ್ಕಳಿಗೆ ಹಾಲು,ಉಡಲು ತಾಯಿಗೆ ಸೀರೆ, ಒಡಲ ತುಂಬ ಅನ್ನ ನೀಡುತ್ತ, ರೋಗಗಳಓಡಿಸಲು ಕರುಣಿಸ ಬೇಕಯ್ಯ ಸಿದ್ದೇಶ!!*ಎಂದು ಹಾಡಿ ಕಳಕಳಿಯಿಂದ ಪ್ರಾರ್ಥನೆ ಮಾಡಿದವರು..“ನಾವು ಒಟ್ಟಿಗೆ ಇದನ್ನು ಎದುರಿಸೋಣ” ಎಂದು ಜನರಿಗೆ ಮನೋಬಲ ತುಂಬುತ್ತಿದ್ದರು.ಆ ದಿನಗಳಲ್ಲಿ… ತಮ್ಮ ವೈಯುಕ್ತಿಕ ಜೀವದ ಹಂಗು ಹರಿದು… ಇತರರ ಜೀವ ಉಳಿಸಲು ಓಡಾಡುತ್ತಿದ್ದರು.ರಾತ್ರಿ-ಹಗಲು ಎನ್ನದೆ…ಅವರ ಕಣ್ಣುಗಳಲ್ಲಿ ನಿದ್ರೆ ಮರೆತರು…ಹೃದಯದಲ್ಲಿ ಒಂದೇ ಉದ್ದೇಶವಿತ್ತು.“ಯಾರೂ ಸಹಾಯವಿಲ್ಲದೆ ನಿಸ್ಸಾಯಕರು ನಿರ್ಗತಿಕರಾಗಿ ರೋಗಿಗಳುಸಾಯಬಾರದೆಂದು …!!! ಸೋಲಾಪುರದ ಜನರು ನಂತರ ಹೇಳುತ್ತಿದ್ದರು…“ಆ ಕಾಲರಾ ಕಾಲದಲ್ಲಿ… ದೇವರು ನಮ್ಮನ್ನು ಕಾಪಾಡಲು ಜಯದೇವಿಯವರನ್ನು ತಾಯಿ ರೂಪದಲ್ಲಿ…ಕಳುಹಿಸಿದನೆಂದು…ಅವರ ಸೇವೆ ಕೇವಲ ರೋಗವನ್ನು ಎದುರಿಸುವುದು ಅಷ್ಟೇ ಅಲ್ಲ..ಅದರ ಜೊತೆಗೆ ಉದ್ಭವಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಿದರು.!! ಆದರೂ ಅದೆಷ್ಟೋ ಜನರ ಜೀವವನ್ನು ಉಳಿಸಲು ಆಗಲಿಲ್ಲ. ಅನ್ನುವ ಕಳವಳ ಅವರಲ್ಲಿ ಇತ್ತು.ಮನೆಯಲ್ಲಿ ಪತಿಯ  ಆರೋಗ್ಯ ಕೂಡ ಸರಿ ಇರಲಿಲ್ಲ ಆದರೂ ಅಂಥ ನೋವಿನಲ್ಲಿಯೂ ಇನ್ನೊಬ್ಬರ ಕಣ್ಣೀರನ್ನು ಒರಿಸಲು ತಾಯಿಯವರು ಸದಾ ಬದ್ಧರಾಗಿರುತ್ತಿದ್ದರು. ಇದು ಒಂದು ಮಾನವೀಯ ಐತಿಹಾಸಿಕ ಪುಟದಲ್ಲಿ ಮರೆಯಲಾಗದ ಘಟನೆ. *೧೯೪೬ ರ *ಸಮಯದಲ್ಲಿ  ಕಾಂಗ್ರೆಸ್ಸಿಗರು ಕರ್ನಾಟಕ ಪರಿಷತ್ತು, ಮಹಾರಾಷ್ಟ್ರ ಪರಿಷತ್ತು ಮತ್ತು ಆಂಧ್ರ ಸಭೆಗಳು ಸೇರಿ ಸ್ಥಳೀಯವಾಗಿ ಪ್ರಬಲವಾಗಿ ರಾಜಕಿಯೇತರ ಸಂಘಟನೆಗಳಾಗಿ ಬೆಳೆದು ನಿಂತಿದ್ದವು.ಗಾಂಧಿ ತತ್ವ ಆದರ್ಶಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರಾಂತೀಯ ಸರ್ಕಾರಗಳು ರಚನೆಗೊಂಡಿತು.  ಇದನ್ನೆಲ್ಲಾ ಗಮನಿಸುತ್ತಿದ್ದ ಆಗಿನ ನಿರಂಕುಶ ರಾಜನಾದ ನಿಜಾಮನಲ್ಲಿ ಭಯವ ಹುಟ್ಟಿಸಿದ್ದವು.ಕಾಂಗ್ರೆಸ್ ಚಳುವಳಿಗಳು ಹೈದರಾಬಾದ್ ಪ್ರಾಂತದ ಮೇಲೆ ಹೆಚ್ಚು ಪರಿಣಾಮ ಬೀರಲಾರಂಭಿಸಿದ್ದು ನಿಜಾಮನಿಗೆ ಸಹನೆ ಆಗಲಿಲ್ಲ.  ಹೈದರಾಬಾದ್ ನಿಜಾಮ ಸರ್ಕಾರವು ಕಾಂಗ್ರೆಸ್ ಚಟುವಟಿಕೆಗಳನ್ನು ವಿರೋಧಿಸುತ್ತಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಹೈದರಾಬಾದ್ ಪ್ರಾಂಥದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಕಂಡುಕೊಂಡಿತ್ತು. ಅಲ್ಲಿ ಹೈದರಾಬಾದ್ ಸ್ಟೇಟ್ ಕಾಂಗ್ರೆಸ್ ಆರಂಭವಾಗಿತ್ತು ಇದಕ್ಕೆ ಸ್ವಾಮಿ *ರಮಾನಂದ ತೀರ್ಥರು* ಅಧ್ಯಕ್ಷರಾಗಿದ್ದರು.  ಬ್ರಿಟಿಷರ ಪರವಾಗಿದ್ದ ನಿಜಾಮನು ತನ್ನ ಜನತೆ ಕಾಂಗ್ರೆಸ್ ಜೊತೆಗೆ ಬಲವಾದ ಯಾವ ರೀತಿಯ ವ್ಯವಹಾರಗಳನ್ನಾಗಲಿ ಅಥವಾ ಸಂಬಂಧವನ್ನಾಗಿ ಇಟ್ಟುಕೊಳ್ಳಬಾರದೆಂದು ಅದಕ್ಕೆ ಬದಲಾಗಿ *ಇಂಡಿಯನ್ ಪೆಟ್ರಿಯಾಟಿಕ್ ಅಸೋಶಿಯೇಶನ್* ಜೊತೆ ಸಹಕರಿಸಬೇಕೆಂದು ತಿಳಿಸಿದಾ. ಅದರಂತೆ ನಿಜಾಮನು  ತನ್ನ ಪ್ರಾಂತ್ಯದಲ್ಲಿ ತಿಲಕರು ಜಾರಿಗೆ ತಂದಿದ್ದ ಗಣೇಶ ಶಿವಾಜಿ ಉತ್ಸವವನ್ನು ನಿಶೇಸಿದ್ದ…ಯಾವುದೇ ಚಟುವಟಿಕೆಗಳು ನಡೆಯಬಾರದೆಂದು ಕಟ್ಟಪ್ಪಣೆ ಮಾಡಿದ್ದ….. ನಿಜಾಮನ ನಿರಂಕುಶ ಪ್ರಭುತ್ವದ ವಿರುದ್ಧ ಮಾತನಾಡುವದು, ಹೋರಾಡುವುದು ಅವಶ್ಯಕವಾಗಿತ್ತು…ಜಯದೇವಿ ತಾಯಿಯವರು ಕಾಂಗ್ರೆಸ್ ಸದಸ್ಯರಾಗಿದ್ದರು.ತಮ್ಮ ವಿಚಾರಗಳನ್ನು ಮುಕ್ತವಾಗಿ ಯಾರ ಭಯವಿಲ್ಲದೆ ಪ್ರಸ್ತಾಪಿಸುತ್ತಿದ್ದರು. ಆಗಿನ ಕಾಲದಲ್ಲಿ ಮಹಿಳೆಯರು ತಮ್ಮ ಧ್ವನಿಯನ್ನು ಎತ್ತುವುದು ಅಷ್ಟು ಸುಲಭದ ವಿಷಯವಾಗಿರಲಿಲ್ಲ. ಆದರೆ ಜಯದೇವಿ ತಾಯಿಯವರು  ಅನ್ಯಾಯವನ್ನು ಸಹಿಸುವ ಮೌನವನ್ನು ಒಪ್ಪಿಕೊಂಡವರಲ್ಲ, ಸತ್ಯವನ್ನು ನಿಂತು ಹೇಳುವ ಶಕ್ತಿಯುಳ್ಳವರಾಗಿದ್ದರು.ಕಾಂಗ್ರೆಸಿನ ಸದಸ್ಯೆಯಾಗಿದ್ದ .. ಹೆಸರಿಗಾಗಿ ಅಲ್ಲ ಮನಸ್ಸಿನ ಆಳದಿಂದ ನಂಬಿದ ಮೌಲ್ಯಗಳಿಗಾಗಿ ಆ ಸಂಘಟನೆಯೊಂದಿಗಿದ್ದರು.ದೇಶದ ಸ್ವಾತಂತ್ರ್ಯ, ಸಮಾನತೆ, ಹಾಗೂ ಸಾಮಾಜಿಕ ನ್ಯಾಯ ಎಂಬ ತತ್ವಗಳು ಅವರ ಹೃದಯದಲ್ಲಿ ಬೆಳೆದ ಮರದಂತೆ ಬೇರೂರಿದ್ದವು.ಯಾರೇ ಎದುರು ಬಂದರೂ, ಯಾವ ಪರಿಸ್ಥಿತಿ ಬಂದರೂ, ತಮ್ಮ ಮಾತು ಹೇಳಲು ಅವರು ಹೆದರಲಿಲ್ಲ. ಅವರ ಧ್ವನಿಯಲ್ಲಿ ತಾಳ್ಮೆ ಇತ್ತಾದರು  ಹೆಚ್ಚು ದೃಢತೆ ಇತ್ತು…..“ಸತ್ಯದ ಮಾರ್ಗದಲ್ಲಿ ನಡೆಯುವವನಿಗೆ ಭಯವೇ ಇಲ್ಲ” ಎಂಬ ನಂಬಿಕೆ ಅವರ ಜೀವನದ ದೀವಿಗೆಯಾಗಿತ್ತು.ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿ ಕಣ್ಣೀರಿಟ್ಟು ಕುಳಿತುಕೊಳ್ಳುವವರಲ್ಲ ಅವರು. ಅದರ ವಿರುದ್ಧ ನಿಲ್ಲುವ ಧೈರ್ಯ ಅವರ ರಕ್ತದಲ್ಲೇ ಹರಿಯುತ್ತಿತ್ತು. ತಮ್ಮ ನಂಬಿಕೆಗಳಿಗಾಗಿ ಹೋರಾಡುವುದು ಅವರಿಗೊಂದು ಕರ್ತವ್ಯವಾಗಿತ್ತು…ಅವರ ಮನಸ್ಸು ಒಂದು ಹೋರಾಟದ ಮೈದಾನವಾಗಿತ್ತು .  ಯಾವ ಸಂಕಷ್ಟ ಬಂದರೂ, “ನಾನು ನನ್ನ-ಸತ್ಯ ನನ್ನ ಜೊತೆ ಇದೆ” ಎಂಬ ಆತ್ಮವಿಶ್ವಾಸದಿಂದ ಮುಂದೆ ಸಾಗುತ್ತಿದ್ದವರು ಜಯದೇವಿ ತಾಯಿಯವರು.ಅವರ ಜೀವನವೇ ಒಂದು ಸಂದೇಶ: “ದಿಟ್ಟತನದಿ ಮಾತನಾಡಿ, ನಂಬಿಕೆಯೊಂದಿಗೆ ಹೋರಾಡಿ, ಸತ್ಯದೊಂದಿಗೆ ಸ್ಥಿರವಾಗಿ ನಿಲ್ಲಿರಿ ಅನ್ನುವ ಕರೆ ಕೊಡುತ್ತಿದ್ದರು.ಇಂತಹ ದೈರ್ಯ ಮತ್ತು ದೃಢ ನಂಬಿಕೆ ಅವರ ವ್ಯಕ್ತಿತ್ವವನ್ನು ಅಸಾಧಾರಣವಾಗಿಸಿದೆ.  ಈ ಕಾರಣಕ್ಕಾಗಿ 1946ರಲ್ಲಿ ಜಹೀರಾಬಾದಿನ   ಕಾಂಗ್ರೆಸ್ ಪ್ರಾಂತೀಯ ಪರಿಷತ್ತಿನ ಮೂರನೆ ಅಧೀವೇಶನಕ್ಕೆ ಜಯದೇವಿ ತಾಯಿಯವರನ್ನು ಆಹ್ವಾನಿಸಿದ್ದರು. ಅಧಿವೇಶನದ ದ್ವಾರಕ್ಕೆ” ಜಯದೇವಿ ತಾಯಿ ದ್ವಾರ “ಅಂತ ಹೆಸರಿಡಲಾಯಿತು. ಜಯದೇವಿ ತಾಯಿಯವರು ಆ ಸಮಾರಂಭಕ್ಕೆ ಬರುತ್ತಿರುವರು ಎನ್ನುವದ ಕೇಳಿದ ನಿಜಾಮನು ಕೋಪದಿಂದ ಜಯದೇವಿತಾಯಿಯವರು ತನ್ನ ಭೂಮಿಯಲ್ಲಿ ಬರೆದಿದ್ದಂತೆ ಫರ್ಮಾನ್  ಹೊರಡಿಸಿದ್ದ.ಅವರು ಬರಬಾರದು” ಎಂಬುದೇ ಆ ಆದೇಶದ ಅರ್ಥ. ನಿಜಾಮನ ಆದೇಶ“ಪರ್ಮಾನ್”—ಎಂದರೆ ಸಾಮಾನ್ಯರಿಗೆ ಅದು ಒಂದು ಗಡಿ, ಒಂದು ಭೀತಿ, ಒಂದು ತಡೆಯ ಗೋಡೆ. ಆ ಮಣ್ಣಿನಲ್ಲಿ ಕಾಲಿಡುವುದು ಎಂದರೆ ಆ ಆದೇಶವನ್ನು ಮೀರಿ ನಿಲ್ಲುವವರಿಗೆ ಎಂಟೆದೆಯ ಧೈರ್ಯ ಬೇಕಾಗಿತ್ತು.ಆದರೆ ಜಯದೇವಿ ತಾಯಿಯವರಿಗೆ ಭಯ ಎನ್ನುವುದು ಅಡ್ಡಿಯಾಗಲಿಲ್ಲ… ಅದು ಅವರ ಹೆಜ್ಜೆಗಳ ಕೆಳಗೆ ಬಿದ್ದ ನೆರಳಷ್ಟೇ….. ಸರಳವಾಗಿ ಆ ಭೂವಿಯಲ್ಲಿ ಕಾಲಿಟ್ಟರು.ಸತ್ಯದ ದಾರಿಯಲ್ಲಿ ನಡೆಯುವವರನ್ನು ಯಾರ ಆದೇಶ ತಡೆಯಬಲ್ಲದು?ಅಂದು… ಆ ಬೆಳಗಿನ ಹೊತ್ತಿನಲ್ಲಿ, ಹೈದರಾಬಾದಿನ ಜೈರಾಬಾದಿನ ಮಣ್ಣಿನ ಮೇಲೆ ಮೊದಲ ಹೆಜ್ಜೆಯನ್ನು ಇಡುವಾಗ, ಜಯದೇವಿ ತಾಯಿಯವರ ಕಾಲುಗಳು ನಡುಗಲಿಲ್ಲ ಇನ್ನಷ್ಟು ದೃಢತೆ ಇತ್ತು, ಧೈರ್ಯ ಇತ್ತು, ನಂಬಿಕೆಯ ಶಕ್ತಿ ಇತ್ತು.ಅವರ ಹೆಜ್ಜೆಗಳು ನಿಧಾನವಾಗಿರಲಿಲ್ಲ… ಪ್ರತಿ ಹೆಜ್ಜೆಯೂ ಒಂದು ಘೋಷಣೆಯಂತಿತ್ತು. “ನ್ಯಾಯಕ್ಕಾಗಿ ನಾನು ಬಂದಿದ್ದೇನೆ” ಎಂದು. ಅಲ್ಲಿ ನೆರೆದಂಥ ಜನರ ಕಣ್ಣುಗಳಲ್ಲಿ ಆಶ್ಚರ್ಯ, ಭಯ, ಮತ್ತು ಗೌರವ ಮಿಶ್ರವಾಗಿತ್ತು. ಆದರೆ ತಾಯಿಯವರ ಮುಖದಲ್ಲಿ ಮಾತ್ರ ಶಾಂತಿ ಹೊಳೆಯುತ್ತಿತ್ತು ಒಂದು ಸಣ್ಣ ನಗು, ಆದರೆ ಅದರಲ್ಲಿ ಅನೇಕ ಹೋರಾಟಗಳ ಶಕ್ತಿ ಅಡಗಿತ್ತು.ಪರ್ಮಾನ್ ಎಂಬುದು ಕಾಗದದ ಮೇಲೆ ಬರೆದ ಅಕ್ಷರ ಮಾತ್ರ… ಆದರೆ ಅವರ ನಂಬಿಕೆ ಕಲ್ಲಿನಂತೆ ಗಟ್ಟಿತನ ಹೊಂದಿತ್ತು.ಆ ಕ್ಷಣದಲ್ಲಿ, ಜ್ಯೆರಾಬಾದ್‌ನ ಮಣ್ಣು ಕೂಡ ಅವರ ಹೆಜ್ಜೆಗಳಿಗೆ ಹೆಮ್ಮೆಪಟ್ಟಂತೆ ಕಾಣಿಸಿತು… ಯಾಕೆಂದರೆ ಅದು ಸಾಮಾನ್ಯ ಹೆಜ್ಜೆಯಲ್ಲ, ಒಬ್ಬ ಧೈರ್ಯಶಾಲಿ ಮಹಿಳೆಯು ಇಟ್ಟ ಹೆಜ್ಜೆಯಾಗಿತ್ತು. *ಆ ಸನ್ನಿವೇಶವೇ ಒಂದು ಇತಿಹಾಸ* ಒಬ್ಬ ಮಹಿಳೆ, ಒಂದು ಆದೇಶವನ್ನು ಅಲ್ಲ, ಒಂದು ಅನ್ಯಾಯವನ್ನು ಮೀರಿ ನಿಂತ ಕ್ಷಣ…..ಜಯದೇವಿ ತಾಯಿಯವರು ಆ ದಿನ ಹೈದರಾಬಾದ್‌ಗೆ ಬಂದಿದ್ದು ಭಾರತ ಮಾತೆಯ ವೀರ ಮಹಿಳೆಯ ಧೈರ್ಯ ಸಾಹಸದ ಪತಾಕೆ ಹಾರಿಸಿದ್ದರು. ಸಬಲೆಯರ ವ್ಯಕ್ತಿತ್ವಕ್ಕೆ ಹೊಸ ಅರ್ಥ ಕೊಟ್ಟರು. ಜಯದೇವಿ ತಾಯಿಯವರು ಜೇಹರಾಬಾದ್ ನಿಜಾಮನ “ಪರ್ಮನ್” (ಅಂದರೆ ನಿರ್ಬಂಧ ಆದೇಶ) ವನ್ನು ಲೆಕ್ಕಿಸದೇ ಹೈದರಾಬಾದ್‌ನ ಮಣ್ಣಿನಲ್ಲಿ ಕಾಲಿಟ್ಟ ಘಟನೆ ಧೀಮಂತ ಮಹಿಳೆಯ ಮನೋಬಲವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆ ಕಾಲದಲ್ಲಿ ನಿಜಾಮನ ಆಡಳಿತದಲ್ಲಿ ಇಂತಹ ನಿರ್ಬಂಧವನ್ನು ಉಲ್ಲಂಘಿಸುವುದು ಅತಿ ದೊಡ್ಡ ಅಪಾಯದ ಮುನ್ಸೂಚನೆಯಾಗಿತ್ತು  ನಿಜಾಮನು ಯಾವ ಕಾಲಕ್ಕಾದರೂ ಬಂಧನ, ಶಿಕ್ಷೆ, ಅಥವಾ ಜೀವ ಹಾನಿಯೂ ಎಡೆ ಮಾಡಬಹುದಾಗಿತ್ತು. ಯಾವುದನ್ನು ಲೆಕ್ಕಿಸದೆ ಅವರು ಮುಂದುವರಿದದ್ದು ಅವರ ಧೀರೋದ್ಯಾಥ್ಯ ವ್ಯಕ್ತಿತ್ವದ ಮೆರಗಿನ ಮಹತ್ವವನ್ನು ತೋರಿಸುತ್ತದೆ.ಜಯದೇವಿ ತಾಯಿಯವರ  ಅಚಲ ಧೈರ್ಯದಲಿನಿಜಾಮನ ಭಯದ ನೆರಳು ಕೂಡ ಅವರನ್ನು ತಟ್ಟಲಿಲ್ಲ. ಸತ್ಯ ಮತ್ತು ನ್ಯಾಯಕ್ಕಾಗಿ ಅವರು ಯಾವ ಅಪಾಯವನ್ನೂ ಎದುರಿಸಲು ಸಿದ್ಧರಾಗಿದ್ದರು.  *ಅವರಲ್ಲಿದ್ದ ರಾಷ್ಟ್ರಪ್ರೇಮ,ಹೃದಯದಲ್ಲಿ  ದೇಶದ ಮೇಲೆದ್ದ ಅಪಾರ ಪ್ರೀತಿ,. ದೇಶದ ಸ್ವಾತಂತ್ರ್ಯ ಮತ್ತು ಜನರ ಹಕ್ಕುಗಳಿಗಾಗಿ ತಮ್ಮ ವೈಯಕ್ತಿಕ ಭದ್ರತೆಯನ್ನೇ ತ್ಯಜಿಸಿದರು.* ಒಮ್ಮೆ ತೀರ್ಮಾನ ಮಾಡಿದ ಮೇಲೆ ಹಿಂದಿರುಗುವ ಸ್ವಭಾವ ಅವರದಾಗಿರಲಿಲ್ಲ… ನಿರ್ಧಾರಾತ್ಮಕತೆ ಎಂಥದ್ದು ಅಂದರೆ ನಿಜಾಮನ ಆದೇಶವೂ ಅವರ ನಿರ್ಧಾರವನ್ನು ತಡೆಯಲಿಲ್ಲ….!!ರಜಾಕಾರರ ನಿರಂತರ ಶೋಷಣೆಯಿಂದ ಜನರನ್ನು ಮುಕ್ತಗೊಳಿಸಲು ಅಲ್ಲಿಯ ಸಮಸ್ಯೆ ಮತ್ತು ಪರಿಹಾರವನ್ನು ಕುರಿತು ಚರ್ಚಿಸುವ ಸಮಾವೇಶ ಅದಾಗಿತ್ತು .ಅಲ್ಲಿ ಹತ್ತರಿಂದ ಹನ್ನೆರಡು ಸಾವಿರ ಜನ ಪಾಲ್ಗೊಂಡಿದ್ದರು. ಜಯದೇವಿ ತಾಯಿಯವರು. ಸಭಾಮಂಟಪವನ್ನು ಪ್ರವೇಶಿಸಿ ಭಾಷಣ ಮಾಡಿದರು….ಅವರ ವ್ಯಕ್ತಿತ್ವ ಎಂಥ ಮೆರಗುಗೊಳಿಸುವಂಥದ್ದು ಅಂದರೆ ಅವರನ್ನು ನೋಡುತ್ತಿದ್ದಂತೆ ಜನರೆಲ್ಲರೂ ಮಂತ್ರ ಮುಗ್ಧರಾಗುತ್ತಿದ್ದರು.ಕಣ್ಣು ಕಿವಿಗಳು‌ ಅರಳಿಸಿ ಎಚ್ಚೆತ್ತು ತದೇಕಚಿತದಿಂದ ಭಾಷಣ ಕೇಳಲು ಅಣಿಯಾಗುತ್ತಿದ್ದರು. ಜಯದೇವಿ ತಾಯಿಯವರು ಭಾಷಣವನ್ನು ಕೇಳಿದವರು ಹೇಳುತ್ತಿದ್ದರು…. ತಾಯಿಯವರ ಭಾಷಣಕ್ಕೆ ಎದ್ದು ನಿಂತರೆ   ಸಭಾಂಗಣದಲ್ಲಿ ಅದೆಂಥ ಶಾಂತಿ ನೆಲೆಗೊಳ್ಳುತ್ತಿತು ಅಂದರೆ ಜನಜಂಗುಳಿಯ ಮಧ್ಯದಲ್ಲಿ ಒಂದು ಸೂಜಿ ಕೂಡ ಬಿದ್ದರೂ ಅದರ ಸಪ್ಪಳ ಕೇಳಬಹುದಾಗಿತ್ತು. ಅನ್ನುವ ಮಟ್ಟಿಗೆ ಜನರು ಮೈ ಮನ ಮರೆತು ಕುಳಿತುಕೊಳ್ಳುತ್ತಿದ್ದರು ಅಂತ ಹೇಳುತಿದ್ದರು. ನಿಜಾಮನ ನಿರಂಕುಶ ಆಡಳಿತದ ವಿರುದ್ಧ ಜ್ವಾಲಾಮುಖಿಯಂತೆ ಉಕ್ಕಿ ಬಂದ ಜಯದೇವಿ ತಾಯಿಯವರ ಧ್ವನಿ ಕೇವಲ ವಿರೋಧದ ಧ್ವನಿ ಮಾತ್ರವಲ್ಲ ಅದು ಸ್ವಾತಂತ್ರ್ಯದ ಕಿರುಚಾಟ, ನ್ಯಾಯದ ಹೋರಾಟ, ದೇಶಭಕ್ತಿಯ ಮಹಾ ಘೋಷವಾಗಿತ್ತು.ದೇಶಭಕ್ತಿಯ ಘೋಷಣೆದಂತೆ ಜಯದೇವಿ ತಾಯಿಯವರ ಭಾಷಣ…ಮೊಟ್ಟ ಮೊದಲಿಗೆ ಶಿವಯೋಗಿ ಸಿದ್ದರಾಮನನ್ನು ನೆನೆಯುವುದು,“ಯೋಗಿ ಬಂದಿದಾರೇನ…..ಯೋಗದ ಕೀಲ ತಿಳಿಸುವರೇನ ಯೋಗಿ ಬಂದಿದಾರೇನ….!!ರಾಗಭೋಗದ ಆಚೆ ಒಯ್ಯುವರೇನಾ…ಯೋಗಿ ಬಂದಿದಾರೇನ …!!”“ನನ್ನ ಪ್ರಿಯ ಸಹೋದರ ಸಹೋದರಿಯರೇ…ನಾನು ವೀರ ಗಣಾಚಾರಿ ಶ್ರೀ ಯೋಗಿ ಸಿದ್ದರಾಮನ ಭೂಮಿಯ ಅಲ್ಲಿ ಹುಟ್ಟಿದವಳು ಸಿದ್ದರಾಮನ ಕರುವೆಯ ಕೂಸಾಗಿ ನಿಮ್ಮೊಂದಿಗೆ ಜೊತೆಯಾಗಲು ಬಂದಿದ್ದೇನೆ ಈ ಭಾರತದ ಮಣ್ಣಿನಲ್ಲಿ ಹುಟ್ಟಿದ ನಾವು, ಈ ಮಣ್ಣೇ ನಮ್ಮ ತಂದೆ ತಾಯಿಯೆಂದು ಬದುಕುತ್ತಿರುವ ನಾವು, ಯಾವ ಕಾರಣಕ್ಕೂ ದಾಸ್ಯವನ್ನು ಒಪ್ಪಿಕೊಳ್ಳಲಾರೆವು!ನಿಜಾಮನ ನಿರಂಕುಶ ಪ್ರಭುತ್ವದ ಉಚ್ಛಾಟನೆ ಆಗಲೇಬೇಕು!ಇದು ಕೇವಲ ನಮ್ಮ ಬೇಡಿಕೆ ಅಲ್ಲ….ಇದು ನಮ್ಮ ಹಕ್ಕು!ಬಹು ಸಂಖ್ಯಾತರಾದ ಹಿಂದೂ ಪ್ರಜೆಗಳು ಜಾತ್ಯಾಂಧತೆಯ ಜುಗ್ಗಿನಲ್ಲಿ ಬದುಕುವುದನ್ನು ಇನ್ನೂ ಸಹಿಸಲಾರರು.ಧರ್ಮದ ಹೆಸರಿನಲ್ಲಿ ದಬ್ಬಾಳಿಕೆ, ಅಧಿಕಾರದ ಹೆಸರಿನಲ್ಲಿ ಅನ್ಯಾಯ….ಇವು ನಮ್ಮ ಭೂಮಿಯಲ್ಲಿ ಮುಂದುವರಿಯಲಾರವು!ನಾವು ಶಾಂತಿಯ ಪ್ರಜೆಯಾದರೂ, ನಮ್ಮ ಸಹನೆಯನ್ನು ದುರ್ಬಲತೆ ಎಂದು ಯಾರೂ ಭಾವಿಸಬಾರದು.ನಮ್ಮ ಸಹನೆಗೆ ಒಂದು ಮಿತಿ ಇದೆ… ಆ ಮಿತಿಯನ್ನು ದಾಟಿದಾಗ, ನಮ್ಮ ಪ್ರತಿಯೊಂದು ಉಸಿರು ಕ್ರಾಂತಿಯ ಕಿಡಿಯಾಗುತ್ತದೆ!ಈ ಮಣ್ಣಿನಲ್ಲಿ ಸ್ವಾತಂತ್ರ್ಯವೇ ನಮ್ಮ ಉಸಿರು, ಸಮಾನತೆಯೇ ನಮ್ಮ ಹಕ್ಕು!ನಾವು ಯಾರಿಗೂ ದಾಸರಲ್ಲ… ನಾವು ಈ ದೇಶದ ಯಜಮಾನರು!ನಾವು ಒಂದಾಗಿ ನಿಂತರೆ, ಯಾವ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ!ನಮ್ಮ ಏಕತೆಯೇ ನಮ್ಮ ಬಲ, ನಮ್ಮ ಧೈರ್ಯವೇ ನಮ್ಮ ಶಕ್ತಿ!ಇಂದು ನಾನು ನಿಮ್ಮ ಮುಂದೆ ಒಂದು ಮಾತು ಮಾತ್ರ ಹೇಳುತ್ತೇನೆ……!!!!ಭಯವನ್ನು

Read Post »

You cannot copy content of this page

Scroll to Top