ಕಾವ್ಯ ಸಂಗಾತಿ
ದಯಾನಂದ ರೈ ಕಳ್ವಾಜೆ
ಸಂಜೆಗಣ್ಣಿನ ನೋಟ….

ದಯಾದದಯಾನಂದ ರೈ ಕಳ್ವಾಜೆಯಾನಂದ ರೈ ಕಳ್ವಾಜೆನಂದಯಾನಂದ ರೈ ಕಳ್ವಾಜೆದ ರೈ ಕಳ್ವಾಜೆ
ಆ ಶ್ರಾವಣದ ಸಂಜೆ ಬೀಸಿದ ಗಾಳಿ,
ಕಸಕಡ್ಡಿಗಳಿಗೆಲ್ಲ ಜೀವ ತುಂಬಿ ಮೌನವಾಗಿ
ನನ್ನೊಳಗೂ ಚಡಪಡಿಕೆಯ ಸಂಚಲನವನ್ನು ಮೂಡಿಸಿದ್ದು ನಿಜ!
ಅತ್ತ ಆಕಾಶಕ್ಕೂ ಮತ್ತೆ ಮನಸಿಗೂ ಚಂಚಲದ ನೋಟ!
ರಾಮ,ಅಲ್ಲಾಹು,ಏಸು,ಎಲ್ಲರೂ ಪಡುವಣದ ಬಾನಿನಲ್ಲಿ ಚಿತ್ತಾರಗಳಾಗಿದ್ದರು!!,
ಸಾಮರಸ್ಯದ ಫಲುಕು
ಕವಿಮನಸಿಗೂ ಹಿತ ಆನಂದ
ಕವಿತೆಗಾಗಿ ಅಕ್ಷರಗಳ ಹುಡುಕತೊಡಗಿದೆ….
ಚದುರಿಹೋಗಿದ್ದ ಪದಗಳೆಲ್ಲವೂ ನೆಲಕಚ್ಚಿದ್ದವು
ಬಿಕ್ಕಳಿಸಿ ಬಿಕ್ಕಳಿಸಿ ಮೌನತಳೆದಿದ್ದವು!!
ಕಹಿಯಾಗಿದೆ ಕವಿಯೊಡಲು
ಪರದಾಸ್ಯದ ಕತೆ ಮೂಡಿದ್ದವು ಒಳಗೆ!
ಕನ್ನಡವೆಲ್ಲಿದೆ ಗಡಿಯೊಡಲ ನೆಲದಿ?
ಕವಿ, ಕಾವ್ಯ,ಸಂವಾದಕ್ಕೇ ಹೊರತು…?!
ಕಯ್ಯಾರರ ಐಕ್ಯಗಾನದ ಪರಿ,
ಕವಿಯಾಶಯಕ್ಕೇ ಸೀಮಿತ ಅಷ್ಟೇ…!
ಬಿದ್ದ ಬೆಂಕಿಯ ಕೆನ್ನಾಲಿಗೆ ಧಗಿಸತೊಡಗಿದೆ ಕಾಸರಗೋಡಿನ ಒಳಗೂ ಹೊರಗೂ!
ಕತ್ತಲು ಆವರಿಸತೊಡಗಿದೆ ಸುತ್ತಲೂ ಒಂದಷ್ಟು,
ಬಾನು ಬಯಲಾಗಿದೆ,ಬಯಲು ಬರಡಾಗಿದೆ..!!
ಬಿಳಿಯ ಚಿತ್ತಾರದ ಮೋಡಗಳು ಸರಕು ತುಂಬಿ ಸಾಗತೊಡವೆ,
ಕನ್ನಡದ ಕಥೆ,ಕಾವ್ಯ ,ಜಾನಪದ ನಾಟಕ,ಬೊಂಬೆಯಾಟ ಎಲ್ಲವೂ….,
ರೈಯವರು, ಪೈಯವರು, ಭಂಡಾರಿಯವರೂ ಸ್ತಬ್ದ ಚಿತ್ರಗಳಂತೆ ಕಾಣುತ್ತಿದ್ದಾರೆ ನನಗೆ!!!
ನನ್ನ ಕವಿತೆಗೆ ಜೀವಮೊಳತಿಲ್ಲ ಕೊನೆಗೂ…
ಮತ್ತೆ ಹುಡುಕಾಟದಲ್ಲೇ ಇರುವೆ
ಅವಕಾಶಕ್ಕಾಗಿ,
ಕವಿತೆಗೆ ಜೀವತುಂಬಲು ಆಕಾಶನೋಡಿ ಸ್ಪೂರ್ತಿಗಾಗಿ….
———-
ದಯಾನಂದ ರೈ ಕಳ್ವಾಜೆ
ಕಳ್ವಾಜೆ ಯವರೇ. .ಬಹಳ ಸೊಗಸಾಗಿ ಅಕ್ಷರ ಜೋಡಿಸಿದ್ದೀರಿ. ನಿಮ್ಮ ಮುಂದಿನ ಕವಿತೆಗಳಿಗೆ ಜೀವ ತುಂಬಲು ಒಳ್ಳೆಯ, ಸ್ಫೂರ್ತಿಯ ಅಕ್ಷರಗಳು ಸಿಗಲಿ
ಶಿರಸಾಷ್ಟಾಂಗ ಪ್ರಣಾಮಗಳು ಸರ್. ದೇವರೊಲುಮೆ ಸದಾ ಕಾಪಾಡಲಿ.ನಿಮ್ಮ ಪ್ರೀತಿಗೆ ಶರಣು