ಸಂಜುಕುಮಾರ್ ಎಸ್ ಜಟ್ಟೆನೋರ್ ಅವರ ಕವಿತೆ-ಭಾಗ್ಯದ ಬೆಳಕು

ಸಾವಿರ ಸಮಸ್ಯೆಗೆ ಉತ್ತರ ನೀನು
ಭಾರತ ಭೂಮಿಯ ನೀ ಭಾಗ್ಯವಿದಾತನು
ಬಹು ಜನರೇ ತಿಳಿಯಿರಿ ಸಂವಿಧಾನವನು
ಮರೆಯಲಾಗದು ಎಂದು ಅಂಬೇಡ್ಕರ್ ರನು

ನಿದ್ರೆಯ ಮರೆತು ಓದಿದೆ ನೀನು
ಅಂಧಕಾರಕೆ ಮಹಾ ಬೆಳಕು ನೀನು
ದೂರ್ತರ ಕುಟಿಲಕೆ ಜಗ್ಗದೆ ನೀನು
ಸರ್ವರ ಹಿತಕ್ಕೆ ಆಶಿಸಿದಾತನು

ಮಹಾ ನಾಯಕನೇ ಸಮನಾರು ನಿನಗೆ
ಕುಂದಿದ ಜನರ ಶಕ್ತಿ ದಾತನು ನೀನು
ಹೋರಾಟದ ಮಾರ್ಗವ ತುಳಿದು ನೀನು
ಮಾನವ ಸಂಕೋಲೆಗಳನು ಮುರಿದಾತನು ನೀನು

ಗೊಡ್ಡು ಸಂಪ್ರದಾಯಗಳಿಗೆ ತಿಲಾಂಜಲಿ ಇಟ್ಟು
ಮೂಢನಂಬಿಕೆಗಳಿಗೆ ಸಂಕಲ್ಪದಿ ಮೆಟ್ಟಿ
ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿ ಅಷ್ಟು
ಶಿಷ್ಟರ ರಕ್ಷಣೆ ಮಾಡಿದೆ ಪಣತೊಟ್ಟು

ದೇಶದ ಹಿತಕ್ಕೆ ತ್ಯಾಗವ ಮಾಡಿ
ಸರ್ವರಿಗೂ ತಂದೆ ಒಂದೇ ಸೂರಿನಡಿ
ಸಮಾಜದ ನಿಜ ಸುಧಾರಕ ನೀನು
ಶೋಷಿತರ ಆಶಾಕಿರಣನು ನೀನು


One thought on “ಸಂಜುಕುಮಾರ್ ಎಸ್ ಜಟ್ಟೆನೋರ್ ಅವರ ಕವಿತೆ-ಭಾಗ್ಯದ ಬೆಳಕು

Leave a Reply

Back To Top