ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ -ಪೂನಾ ಅವರಕವಿತೆ-
ಕೆಂಪು ಸೂರ್ಯ

ಕಪ್ಪು ಮಣ್ಣಿನ
ದಲಿತ ಕೇರಿಯ
ಮಹಾರಾಷ್ಟ್ರದ
ಕೆಂಪು ಸೂರ್ಯ.
ಬುದ್ಧ ಬಸವ ಮಾರ್ಕ್ಸ್
ಪುಲೆ ಶಾಹು ಚಿಂತನ
ಬರಿಗಾಲಿನ ಪಯಣ
ಕಿತ್ತು ತಿನ್ನುವ ಬಡತನ
ಶೃದ್ಧೆ ಶ್ರಮದ ಗೆಳೆತನ
ಕೊಲಂಬಿಯಾ ಶಿಕ್ಷಣ
ನೂರು ಪದವಿಯ ಜಾಣ
ಸತ್ಯ ಸಮತೆಯ ಬಾಣ .
ಹಗಲಿರುಳು ಕಠಿಣ ಕಾರ್ಯ
ಬರೆದಿಟ್ಟರು ಲಿಖಿತ ಘಟನಾ ,
ಭಾರತ ದೇಶದ ಮಾನ ಸಮ್ಮಾನ
ಡಾ ಅಂಬೇಡ್ಕರರ ದಿವ್ಯ ಜ್ಞಾನ .
ನ್ಯಾಯಕ್ಕಾಗಿ ಘೋಷಣಾ
ಇಲ್ಲವಾಯಿತು ಶೋಷಣಾ
ಬನ್ನಿ ಭಾರತೀಯರೇ
ಉಳಿಸುವ ನಮ್ಮ ಸಂವಿಧಾನ.
ಕೆಂಪು ಸೂರ್ಯ ಮುಳಗಲಾರ
ಸಮಾನತೆಯ ಹರಿಕಾರ .
ಬಾಬಾ ಸಾಹೇಬ ಅಮರ ರಹೇ
ಬುದ್ಧ ಬಸವ ಜಿಂದಾಬಾದ
————————————————–

ಡಾ ಶಶಿಕಾಂತ ಪಟ್ಟಣ ಪುಣೆ
super…. ಎಕ್ಸಲೆಂಟ್…
Poem……
ಸಮಾನತೆಯ ಹರಿಕಾರ ಅಂಬೇಡ್ಕರ್
ಅವರ ಜನ್ಮ ದಿನದಂದು ಮೂಡಿ
ಬಂದ ಒಂದು ಅದ್ಭುತ ಕವನ ಸರ್ “ಕೆಂಪು ಸೂರ್ಯ ಮುಳುಗಲಾರ ”
ಸುಧಾ ಪಾಟೀಲ
ಬೆಳಗಾವಿ
ದಲಿತರ ನೋವಿನ ಧ್ವನಿ ಅಂಬೇಡ್ಕರ್ ಕವನ ಚೆನ್ನಾಗಿ ಮೂಡಿ ಬಂದಿದೆ ಸರ್