ರಮ್ಯಕೃಷ್ಣಪ್ರಭು ಅವರ ಕವಿತೆ,ಮುಗಿಯಿತೆಂದರೆ ಮುಗಿಯುವುದೇ?

ಮುಗಿಯಿತೆಂದರೆ ಮುಗಿಯುವುದೇ ದಿನನಿತ್ಯದ ಜಂಜಾಟವು
ಒಂದು ಮುಗಿತಲ್ಲ ಅಬ್ಬಾ ಭಾರಿ ಈಗಂತು ಸಂತೋಷವು
ಅಯ್ಯೋ! ಉಳಿಯಿತು ಇನ್ನೊಂದು ಕೆಲಸ ಕಣ್ಣೆದುರು ಬಂದು ನೋವು
ಆ ಕ್ಷಣಕೆ ಎನಿಸಬಹುದು ಬಾಳೊಂದು ಗೋಳೆಂದು ನಿತ್ಯ ಅದೇ ಪುರಾಣವು |

ಅಂದಿನ ಕೆಲಸವ ಅಂದೇ ಮಾಡಿಬಿಡೋದು ಜಾಣತನವು
ನಾಳೆ ಮಾಡಿರಾಯಿತು ಬಿಡು ಒಂದು ದಿನ ಅಲ್ವ ಎಂದರೆ ದಡ್ಡತನವು
ಬಗುರಿಯಂತೆ ತಿರುಗಬೇಕು ಕೆಲಸದಲ್ಲಿ ಶ್ರದ್ಧೆಯಿರಬೇಕು
ಹಿರಿಯರ ಮಾತಿನಲ್ಲಿ ಅಡಗಿರುವ ಸ್ವಾರಸ್ಯವ ಅರಿಯಬೇಕು||

ಗಾದೆಯೇ ಇದೆಯಂತೆ ಕೂತು ಉಂಡರೆ ಕುಡಿಕೆ ಹೊನ್ನು ಸಾಲದೆಂದು
ದುಡಿದು ತಿಂದರೆ ಯಾವ ರೋಗವು ಹತ್ತಿರ ಬರಲಾರದೆಂದು
ಕಾಯಕವ ನಂಬಿದವನಿಗೆ ನಿರಾಸೆಯಾಗದೆಂದು
ಜೀವನಮೌಲ್ಯವ ಅರಿತವನು ಬಾಳಲ್ಲಿ ಸೋಲನೆಂದು||


Leave a Reply

Back To Top