ಶರಣ ಸಂಗಾತಿ
ಸಾವಿಲ್ಲದ ಶರಣರು ಮಾಲಿಕೆ–
ʼಮಹಾಶರಣ ಹರಳಯ್ಯʼ
ಶಶಿಕಾಂತ್ ಪಟ್ಟಣ ರಾಮದುರ್ಗ

ಅವರು 12 ನೇ ಶತಮಾನದ ಶ್ರೇಷ್ಠ ಸಂತ ಮತ್ತು ಭಾರತದಲ್ಲಿನ ಕರ್ನಾಟಕದಲ್ಲಿ ಉಗಮಗೊಂಡ ವಚನ ಚಳುವಳಿಯ ಸಾಹಿತ್ಯದ ಹರಿಕಾರ . ಅವರು ಬಸವಣ್ಣನವರು ರಚಿಸಿದ ಅನುಭವ ಮಂಟಪಕ್ಕೆ ಸೇರಿದರು ,
ಇತಿಹಾಸ
ಹರಳಯ್ಯ ಅವರು ಕರ್ನಾಟಕದ ಚಾಮರ ಸಮಗಾರ ಚಪ್ಪಲಿ ತಯಾರಿಸುವ ವೃತ್ತಿಯವನು ಸಮುದಾಯ ಕಲ್ಯಾಣದಲ್ಲಿ ಜನಿಸಿದರು . ಅವರು ಚಮ್ಮಾರರು ಮತ್ತು ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಬಸವನ ಕಟ್ಟಾ ಅನುಯಾಯಿಯಾಗಿದ್ದರು . ಹರಳಯ್ಯನವರು ಬಸವಣ್ಣನವರಿಗಿಂತ ವಯಸ್ಸಿನಲ್ಲಿ ಹಿರಿಯರು ತಮ್ಮ ಕುಲಕಸುಬಿನ ಕಾಯಾಕ ಮಾಡುತ್ತಿರುವ ಕಲ್ಯಾಣಮ್ಮನನ್ನು ವಿವಾಹವಾಗಿದ್ದರು.
ಒಮ್ಮೆ ಅವರು ಬಸವಣ್ಣನವರನ್ನು ಬೀದಿಯಲ್ಲಿ ಭೇಟಿಯಾಗಿ ಶರಣಾರ್ಥಿ ಎಂದು ನಮಸ್ಕರಿಸಿದಾಗ ,ಅದಕ್ಕೆ ಪ್ರತಿಯಾಗಿ ಬಸವಣ್ಣನವರು ಶರಣು ಶರಣಾರ್ಥಿ ಎಂದು ಉತ್ತರವನ್ನು ನೀಡಿದರು . ಹರಳಯ್ಯನು ಇದರಿಂದ ಚಿಂತೆಗೆ ಒಳಗಾಗಿ ಮೂಕನಾದನು, ಕೀಳು ಕುಲದ ಹರಳಯ್ಯನನ್ನು ರಾಜನ ಭಂಡಾರಿ ಮಹಾಮಂತ್ರಿಯು ಯು ತುಂಬಾ ಸೌಜನ್ಯದಿಂದ ಗೌರವಿಸಿದನು . ಬಳಿಕ ಬಸವನ ವಂದನೆಗೆ ಉತ್ತರ ನೀಡದೆ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋರದೆ ಸೋತರು ಎಂದು ವಿಷಾದ ವ್ಯಕ್ತಪಡಿಸಿದರು. ಹೀಗಾಗಿ ಅವರು ತಮ್ಮ ಬಲದ ತೊಡೆಯ ಮತ್ತು ಕಲ್ಯಾಣಮ್ಮ ತಮ್ಮಎಡದ ತೊಡೆಯ ಚರ್ಮದಿಂದ ತಯಾರಿಸಿದ ಪಾದರಕ್ಷೆಗಳನ್ನು ಬಸವಣ್ಣನವರಿಗೆ ಅರ್ಪಿಸಲು ನಿರ್ಧರಿಸಿದರು. ಆದರೆ ಬಸವಣ್ಣನವರು ಇಂತಹ ಭಕ್ತಿಪೂರ್ವಕವಾದ ಚಮ್ಮಾವುಗೆ ಪೃಥ್ವಿಗೆ ಅಧಿಕ ಎಂದು ಹೇಳುತ್ತಾ ಇವು ಕೂಡಲ ಸಂಗಮನಾಥ ಮೆಟ್ಟುವ ಜೋಡು ಇಂತಹ ಮೆಟ್ಟುಗಳನ್ನು ಮೆಟ್ಟಲು ತಾನು ಯೋಗ್ಯನೆಂದು ಪರಿಗಣಿಸದ ಕಾರಣ ಉಡುಗೊರೆಯನ್ನು ಸ್ವೀಕರಿಸಲು ನಿರಾಕರಿಸಿ ಅವುಗಳನ್ನು ತನ್ನ ತಲೆಯ ಮೇಲೆ ಬಸವಣ್ಣನವರು ಇಟ್ಟರು.
ಮನೆಗೆ ಹಿಂದಿರುಗುವಾಗ, ಹರಳಯ್ಯನು ಕಳಚೂರಿ ಬ್ರಾಹ್ಮಣ ಮಂತ್ರಿ ಮಾಧವರಸನನ್ನು ಭೇಟಿಯಾದನು, ಅವನು ಪಾದರಕ್ಷೆಗಳನ್ನು ಕಸಿದುಕೊಂಡು ತನ್ನೊಂದಿಗೆ ತೆಗೆದುಕೊಳ್ಳಲು ಪ್ರಯತ್ನಿಸಿದನು, ಆದರೆ ಈ ದುಷ್ಕೃತ್ಯದಿಂದ ಅವನು ಕುಷ್ಠರೋಗಕ್ಕೆ ತುತ್ತಾದನು . ಅವನ ದಾಸಿಯು ಅವನನ್ನು ಗುಣಪಡಿಸಲು ಹರಳಯ್ಯನ ಬಳಿಗೆ ಕರೆದೊಯ್ದು ಹರಳಯ್ಯನ ತೊಟ್ಟಿಯ ನೀರಿನಲ್ಲಿ ಸ್ನಾನ ಮಾಡಿದ ನಂತರ ಅವನು ವಾಸಿಯಾದನು. ಮಾಧವರಸನು ಅವನಲ್ಲಿ ಕ್ಷಮೆಯಾಚಿಸಿ ಬಸವಣ್ಣ ಮತ್ತು ಎಲ್ಲ ಶರಣರ ಸಮ್ಮುಖದಲ್ಲಿ ‘ಇಷ್ಟಲಿಂಗದೀಕ್ಷೆ’ ಪಡೆದುಕೊಂಡು ಲಿಂಗಾಯತ ಧರ್ಮದ ಅನುಯಾಯಿಯಾದನು .
ಬಸವನು ಮಾಧವರಸನ ಮಗಳು ಲಾವಣ್ಯಳನ್ನು ಹರಳಯ್ಯನ ಮಗ ಶೀಲವಂತನಿಗೆ ಮದುವೆಯನ್ನು ಏರ್ಪಡಿಸಿದನು, ಇದು ದಕ್ಷಿಣದ ಕಲಚುರಿಗಳ ದೊರೆ ಬಿಜ್ಜಳ II ರ ಆಸ್ಥಾನದ ಮಂತ್ರಿಗಳಿಗೆ ಸಂಪ್ರದಾಯವಾದಿಗಳಿಗೆ ಪ್ರಬಲ ವಿರೋಧಕ್ಕೆ ಕಾರಣವಾಯಿತು . ಈ ನಿರ್ಧಾರದಿಂದ ಮನನೊಂದ ಆತ ಮಾಧವರ ಮತ್ತು ಹರಳಯ್ಯನವರನ್ನು ವಿಚಾರಣೆಯ ನೆಪ ಒಡ್ಡಿ ವಿಲೋಮ ಪದ್ದತಿಯ ಈ ವಿವಾಹವನ್ನು ರದ್ದು ಗೊಳಿಸಲು ಒತ್ತಾಯ ಹೇರುತ್ತಾರೆ . ಇದಕ್ಕೆ ಒಪ್ಪದ ಮಾಧವರಸ ಮತ್ತು ಹರಳಯ್ಯನವರು ಆನೆ ಕಾಲಿಗೆ ಕಟ್ಟಿ ಕಣ್ಣು ಕಿತ್ತು ಎಳೆ ಹೂಟಿ ಶಿಕ್ಷೆ ನೀಡಿ ಅವರನ್ನು ಆನೆ ಕಾಲಿಗೆ ಹಾಕಿ ತುಳಿಸಿ ಕೊಲ್ಲಲು ಬಿಜ್ಜಳನ ಮಗ ಸೋಮಿದೇವ ಆದೇಶ ನೀಡುತ್ತಾನೆ.
ಇದರಿಂದ ಕಲ್ಯಾಣದ ಶರಣರು ವಚನಗಳನ್ನು ಉಳಿಸಲು ಕಲ್ಯಾಣ ತೊರೆದು ಬೇರೆ ಬೇರೆ ಕಡೆಗೆ ಪಲಾಯನಗೊಂಡರು. ಒಂದು ಅರ್ಥದಲ್ಲಿ ಹರಳಯ್ಯ ಮತ್ತು ಮಾಧವರಸರು ಕಲ್ಯಾಣ ಕ್ರಾಂತಿಗೆ ವೈಚಾರಿಕ ವಿಜಯೋತ್ಸವಕ್ಕೆ ಮುಖ್ಯ ಕರಣ ಎಂದರೆ ತಪ್ಪಾಗಲಾರದು.
ಕರ್ನಾಟಕದಲ್ಲಿ ಉಳಿಯ ಕ್ಷೇತ್ರದಲ್ಲಿ ಹರಳಯ್ಯನ ತ್ಯಾಗದ ನೆನಪಿಗಾಗಿ ಹರಳಯ್ಯನ ಚಿಲುಮೆ ಶರಣರು ನಿರ್ಮಿಸಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿಯೂ ಹರಳಯ್ಯನ ಕಟ್ಟೆ ಎಂದು ಸ್ಮಾರಕವೂ ಇದೆ. ಆದರೆ ಹರಳಯ್ಯ ಮತ್ತು ಮಾಧವರಸರ ಕೊಲೆ ಕಲ್ಯಾಣದಲ್ಲಿ ನಡೆಯಿತು ಎಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ.
ಜಾನಪದ ಕವಿಗಳು ಕಲ್ಯಾಣ ಕ್ರಾಂತಿಯನ್ನು ತಮ್ಮ ಅತ್ಯಂತ ದೇಸಿ ಶೈಲಿಯಲ್ಲಿ ನೆಲ ಮೂಲ ಸಾಂಗತ್ಯದಲ್ಲಿ ಕಣ್ಣಿಗೆ ಕಟ್ಟುವ ಹಾಗೆ ಚರಿತ್ರೆ ಕಟ್ಟಿ ಕೊಟ್ಟಿದ್ದಾರೆ.
ಕುಲದಲ್ಲಿ ಹೊಲೆಯನವ,ಹೊಲಬಿನಲಿ ಹೊಲೆಯಿಲ್ಲ /
ಹೊಲೆಯನೆಲೆ ಬಲ್ಲ ಘನ ಶರಣ / ಹರಳಯ್ಯ
ನೆಲೆಸಿ ಕಲ್ಯಾಣ ಪುರದೊಳಗೆ/
ಹರಳಯ್ಯನು ಮೂಲ ತಳಸಮುದಾಯದ ಸಮಗಾರ ಹೊಲೆಯ ಜಾತಿಯವನೆಂದು ಹೇಳುವ ಮೇಲ್ವರ್ಗದ ವೈದಿಕರಿಗೆ ಜಾನಪದ ಕವಿಗಳು ಚಾಟಿ ಏಟು ನೀಡುತ್ತಾರೆ.ಹೊಳೆಯನಾದ ಹರಳಯ್ಯನ ವೃತ್ತಿಯಲ್ಲಿ ರೀತಿ ನೀತಿ ನಡುವಳಿಕೆಗಳಲ್ಲಿ ಹೊಲೆತನವಿಲ್ಲ .ಹೊಲೆಯ ನೆಲೆಯ ಬಲ್ಲ ಘನ ಶರಣನು ಕಲ್ಯಾಣ ಪುರದೊಳಗೆ ತನ್ನ ಚಾಂಆವುಗೆ ಕಾಯಕ ಮಾಡುತ್ತಾ ವಾಸವಾಗಿದ್ದನು ಎಂದು ಜನಪದಿಗರು ಹಾಡುತ್ತಾರೆ.
ಹಿರಿಕುಲದ ಮಧುವರಸ ಕಿರಿಕುಲಕೆ ಬೀಗಾದ
ಸರಿ ಏನು ಪಾಪ ಮಾಡಿದನು /ಕೊಂಡಿಗಳು
ಜರೆದು ಅರಸನಿಗೆ ತಿಳಿಸಿದರು.
ಇಲ್ಲಿ ಶ್ರೇಷ್ಠ ಕುಲದಲ್ಲಿ ಹುಟ್ಟಿದ ಮಧುವರಸನ ಮಗಳು ಲಾವಣ್ಯ ಕೀಳು ಕುಲದಲ್ಲಿ ಹುಟ್ಟಿದ ಹರಳಯ್ಯನ ಮಗನಾದ ಶಿಇಳವಂತನ ಜೊತೆಗೆ ವಿವಾಹ ನಿಶ್ಚಯವಾಗಿದ್ದನ್ನು ಜನಪದಿಗರು ದಾಖಲಿಸುತ್ತಾರಲ್ಲದೆ,ಅದರಲ್ಲಿ ಕೀಳು ಕುಲದಲ್ಲಿ ಹುಟ್ಟಿದ ಹರಣ ತಪ್ಪೇನು ಎನ್ನುತ್ತಾರೆ. ಆದರೆ ಕೆಲ ಸಂಪ್ರದಾಯವಾದಿಗಳು ಇದನ್ನು ದೊಡ್ಡದನ್ನಾಗಿ ಮಾಡಿ ಅರಸು ಬಿಜ್ಜಳನಿಗೆ ಚಾಡಿ ಹೇಳುತ್ತಾರೆ ಎಂದು ಜಾನಪದ ಕವಿಗಳು ಹೇಳುತ್ತಾರೆ.
ಕುಲಗೆಡಿಸಿ ಬಸವೇಶ ,ಕಲಕು ಮಾಡಿದ ನಾಡು/
ಚಿಲಕ ಮುರಿದಂತೆ ಬಾಗಿಲಕೆ / ಅರಮನೆಯ
ಮಲಕು ಮುರಿದಂತೆ ಅರಸಿದ್ದು
ಬಹುತೇಕ ವೈದಿಕರು ಹಾರುವರು ಬಸವಣ್ಣನವರ ಕಲ್ಯಾಣ ಧರ್ಮ ಶರಣ ಧರ್ಮದಲ್ಲಿನ ಇಂತಹ ಬ್ರಾಹ್ಮಣ ಹೊಲೆಯರ ಸಂಬಂಧವನ್ನು ವಿರೋಧಿಸುತ್ತಾರೆ. ಇದು ಮನೆಯ ಬಾಗಿಲಿನ ಚಿಲಕ ಮೈಮುರಿದಂತೆ ಮತ್ತು ಅರಮನೆಯ ಮಲಕು ಮುರಿದಂತೆ ಎಂದು ತಮ್ಮ ಅಸಮಾಧಾನವನ್ನು ಬಿಜ್ಜಳನ ಮುಂದೆ ತೋಡಿಕೊಳ್ಳುತ್ತಾರೆ ಎಂದು ಜನಪದಿಗರು ಹೇಳುತ್ತಾರೆ.
ಕುಲ ಹಿಡಿದು ಬಿಜ್ಜಳನು ಹೊಲೆತನದ ಬಲವೆಂದು
ಚಿಲಕಕ್ಕೆ ಬಿಗಿದ ಹರಳಯ್ಯ /ಮಧುವರಿಗೆ
ಹುಲಿ ಕೊಂದ ಬತವೊ ಹಾರುವಗೆ /
ಬ್ರಾಹ್ಮಣರ ಚಾಡಿ ಒಪ್ಪದ ಬಿಜ್ಜಳನು ಹೊಲೆಯನಾದರೇನಂತೆ ಹರಳಯ್ಯ ಮತ್ತು ಮಧುವರಸರು ಲಿಂಗಾಯತರು ,ತಮ್ಮ ಅರಮನೆಗೆ ಹರಳಯ್ಯನಂತವರು ಗಟ್ಟಿ ಚಿಲಕವಿದ್ದಂತೆ ಎಂದು ಹರಳಯ್ಯನ ಪರ ನಿಲ್ಲುತ್ತಾನೆ, ಆದರೆ ಬ್ರಾಹ್ಮಣರು ಹರಳಯ್ಯ ಮತ್ತು ಮಧುವರಸರನ್ನು ಹುಲಿ ಕೊಂದ ಹಾಗೆ ಕೊಳ್ಳ ಬೇಕೆಂದು ತಪ ಪಣ ಮಾಡುತ್ತಾರೆ ಎಂದು ಜನಪದಿಗರು ಹೇಳುತ್ತಾರೆ.
ಬಿಜ್ಜಳನ ವಧೆಯಾಯ್ತು ,ಹೆಜ್ಜೆ ಮೀರಿತು ನಾಡು
ಕಜ್ಜ ಹದಗೆಟ್ಟ ಶಿವಶರಣ /ರೂಳಿಗವು
ಸಜ್ಜುಗೆಡಾಗಿ ಊರಬಿಟ್ಟು
ಬಿಜ್ಜಳನ ಔದಾರ್ಯತೆಯಿಂದ ಕುಪಿತ ಗೊಂಡ ವೈದಿಕರು ಹೇಗಾದರೂ ಮಾಡಿ ಬಿಜ್ಜಳನ ಕೊಲೆ ಮಾಡಲು ಹೊಂಚು ಹಾಕುತ್ತಿದ್ದರು ,ಇದೆ ಸಂದರ್ಭದಲ್ಲಿ ಚಾಲುಕ್ಯರ ಜಟ್ಟಿಗಳು ಮಲ್ಲಿಬೊಮ್ಮಿದೇವ ಮತ್ತು ಜಗದೇವರು ಬಿಜ್ಜಳನ ಕೊಲೆ ಮಾಡುತ್ತಾರೆ. ಈ ಕೊಲೆ ಒಂದು ರಾಜಕೀಯ ವೈಷಮ್ಯವಾದ್ದು ಅದನ್ನು ವೈದಿಕರು ಬಸವಣ್ಣ ಮತ್ತು ಶರಣರ ತಲೆಗೆ ಕಟ್ಟುತ್ತಾರೆ . ಕಲ್ಯಾಣವು ಕಟುಕರ ಕೇರಿಯಾಯಿತು , ಅನುಭವದ ಅಡುಗೆ ಕಜ್ಜ ಹದಗೆಡ ಹತ್ತಿತು ,ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪಕಕ್ಕೆ ಸಂಪ್ರದಾಯವಾದಿಗಳು ಬೆಂಕಿ ಹಚ್ಚಲು ಆರಂಭಿಸುತ್ತಾರೆ. ಹೀಗಾಗಿ ಶರಣರು ತಾವು ರಚಿಸಿದ ಶರಣರು ರಚಿಸಿದ ವಚನಗಳನ್ನು ಕಟ್ಟಿಕೊಂಡು ಕಲ್ಯಾಣ ಬಿಟ್ಟು ಬೇರೆ ಬೇರೆ ದಿಕ್ಕಿಗೆ ತೊರೆದರು ಎಂದು ಜನಪದಿಗರು ಹೇಳುತ್ತಾರೆ .
ಮಧುವರಸ ಹರಳಯ್ಯ ಹೊಡ್ದಿನ ಶಿವನಡಿಗೆ/
ಬೀದಿ ಬೀದಿಗಳು ಕಿಡಿಕಾರಿ/ ಕಲ್ಯಾಣ
ಹಾದಿ ಹೌಹಾರಿ ತಳಮಳಿಸಿ
ಸೋಮಿದೇವನ ಅಣತಿಯಂತೆ ಮಧುವರಸರು ಮತ್ತು ಹರಳಯ್ಯನವರ ಕೊಲೆಯಾಗುತ್ತದೆ ಈ ಘೋರ ಶಿಕ್ಷೆಗೆ ಗುರಿಯಾದ ಮಧುವರಸರು ಮತ್ತು ಹರಳಯ್ಯ ಶಿವಾಂದಿಗೆ ಸೇರುತ್ತಾರೆ . ಇದರಿಂದ ಬೀದಿ ಬೀದಿಯಲಿ ಶರಣರು ಕಿಡಿ ಕಾರುತ್ತಾರೆ ,ಆದರೆ ಶಾಂತಿಪ್ರಿಯ ಶರಣರು ಅಸಹಾಯಕರಾಗುತ್ತಾರೆ .ಕಲ್ಯಾಣವೆನ್ನುವುದು ಕಟುಕರ ಕೇರಿಯಾಯಿತು. ಶರಣರ ಹೆಣಗಳು ದಾರಿ ಬೀದಿಯಲಿ ಬೀಳಹತ್ತಿದವು .ಕಲ್ಯಾಣದ ಹಾದಿ ದುರ್ಗಮ ಎನಿಸ ಹತ್ತಿದವು. ಹೀಗಾಗಿ ಎಲ್ಲಾ ಶರಣರು ಕಲ್ಯಾಣವನ್ನು ತೊರೆದರು. ಕಲ್ಯಾಣ ಬಸವಣ್ಣನವರ ಸಮಾನತೆಯ ಕನಸಿನ ಗೂಡು ಅದನ್ನು ವೈದಿಕರು ಘನ ಘೋರ ರಕ್ತದ ಕಲೆಗಳನ್ನು ನಿರ್ಮಿಸಿದರು ಇದರಿಂದ ಜನರು ಹೌಹಾರಿ ತಳಮಳದಿಂದ ಊರು ಬಿಟ್ಟರು ಎಂದು ಜನಪದಿಗರು ಹೇಳುತ್ತಾರೆ. ಇಲ್ಲಿ ಜನಪದಿಗರು ಸ್ಪಷ್ಟವಾಗಿ ಮಧುವರಸರನ್ನು ಮತ್ತು ಹರಳಯ್ಯನವರನ್ನು ಆನೆ ಕಾಲಿಗೆ ಕಟ್ಟಿ ಎಲೆ ಹೂಟೆ ಶಿಕ್ಷೆ ಕೊಟ್ಟು ಕಣ್ಣು ಕಿತ್ತು ಕೊನೆಗೆ ಆನೆಯ ಕಾಲಿನಿಂದ ಕೊಂದರು ಎಂದು ಹೇಳುತ್ತಾ ಇವರಿಬ್ಬರ ಸಾವು ಕಲ್ಯಾಣದಲ್ಲಿ ಸಂಪ್ರದಾಯವಾದಿಗಳ ಅಸಹನೆಗೆ ಕಾರಣ ಎಂದು ಹೇಳುತ್ತಾರೆ.
ಆಕರಗಳು
ಡಿಕ್ಕಿರಾನ್; ಲಿಟೆಂಟ್ (1 ಜನವರಿ 2014). ಹರಳಯ್ಯ . ಲಿಟೆಂಟ್.
ಸಿಂಗ್, ನಾಗೇಂದ್ರ ಕೆಆರ್ (2006). ಗ್ಲೋಬಲ್ ಎನ್ಸೈಕ್ಲೋಪೀಡಿಯಾ ಆಫ್ ದಿ ಸೌತ್ ಇಂಡಿಯನ್ ದಲಿತ್ಸ್ ಎಥ್ನೋಗ್ರಫಿ . ಗ್ಲೋಬಲ್ ವಿಷನ್ ಪಬ್ಲಿಷಿಂಗ್ ಹೌಸ್. ISBN 978-81-8220-168-2.
ಸ್ಕೌಟೆನ್, ಜಾನ್ ಪೀಟರ್ (1995). ಮಿಸ್ಟಿಕ್ಸ್ ಕ್ರಾಂತಿ: ವೀರಶೈವಿಸಂನ ಸಾಮಾಜಿಕ ಅಂಶಗಳ ಮೇಲೆ . ಮೋತಿಲಾಲ್ ಬನಾರಸಿದಾಸ್ ಪಬ್ಲಿಷರ್ಸ್. ISBN 978-81-208-1238-3.
“ಹರಳಯ್ಯ ಮತ್ತು ಕಲ್ಯಾಣಮ್ಮ” . ಲಿಂಗಾಯತ ಧರ್ಮ . 20 ಮೇ 2020 ರಂದು ಮರುಸಂಪಾದಿಸಲಾಗಿದೆ .
ಪಿಳ್ಳೈ, ಮನು ಎಸ್. (28 ಜುಲೈ 2017). “ಬಸವ ಮತ್ತು ಲಿಂಗಾಯತ ಅಸ್ಮಿತೆಯ ಹೊರಹೊಮ್ಮುವಿಕೆ” . ಲೈವ್ಮಿಂಟ್ . 20 ಮೇ 2020 ರಂದು ಮರುಸಂಪಾದಿಸಲಾಗಿದೆ .
ಮಹಾಶರಣ ಹರಳಯ್ಯ ಚಲನಚಿತ್ರ ವಿಮರ್ಶೆ {3.5/5}: ಟೈಮ್ಸ್ ಆಫ್ ಇಂಡಿಯಾದಿಂದ ಮಹಾಶರಣ ಹರಳಯ್ಯನ ವಿಮರ್ಶಕರ ವಿಮರ್ಶೆ , 20 ಮೇ 2020 ರಂದು ಮರುಸಂಪಾದಿಸಲಾಗಿದೆ
ಕಲ್ಯಾಣಕರ್ನಾಟಕ (25 ಡಿಸೆಂಬರ್ 2019). “108 ಅಡಿ ಬಸವಣ್ಣನ ಪ್ರತಿಮೆ ಬಸವಕಲ್ಯಾಣ” . ಕಲ್ಯಾಣ ಕರ್ನಾಟಕ . 20 ಮೇ 2020 ರಂದು ಮರುಸಂಪಾದಿಸಲಾಗಿದೆ .
ಕನ್ನಡ ಜಾನಪದ ಗೀತೆಗಳು – ಡಾ ಬಿ ಎಸ ಗದ್ದಗಿಮಠ
—————————————————————————–
ಡಾ ಶಶಿಕಾಂತ ಪಟ್ಟಣ ರಾಮದುರ್ಗ 9552002338

ಹೊಲೆಯರಿಗೂ ಸಮಗಾರರಿಗೂ ವ್ಯತ್ಯಾಸ ಇದೆ ರೀ ಸಮಗಾರರು ಹೊಲೆಯರಲ್ಲರೀ.
ಉತ್ತಮ ವಿವರಣೆಯೊಂದಿಗೆ ಹೃದಯ ತಟ್ಟಿದ ನೆನಪು