ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತನಗ ದ ಬಗ್ಗೆ ಒಂದಿಷ್ಟು

ತನಗ ದ ಬಗ್ಗೆ ಒಂದಿಷ್ಟು

ಈ “ತನಗ” ಫಿಲಿಫೈನ್ಸ ನ ಕಾವ್ಯ ಕನ್ಯೆ.
ಸುಮಾರು 300 ವರ್ಷ ಚಾರಿತ್ರ್ಯ ಹೊಂದಿದ್ದು,ಅಲ್ಲಿನ “ಟ್ಯಾಗ್ಲೋಗ್” ಭಾಷೆಯಲ್ಲಿ ಅಲಂಕಾರಗೊಂಡು ಈಗ ವಿಶ್ವದ ಮೂಲೆ ಮೂಲೆಯಲ್ಲಿ ಸಂಚರಿಸಿರಬಹುದು.
ನಮ್ಮ ಮಾತಿನಲ್ಲಿ ಹೇಳುವುದಾದರೆ  ಒಂದು ಸಾಲಿನಲ್ಲಿ ಏಳು ಮಾತ್ರಾಗಳು,
ಅಂಥ ನಾಲ್ಕು ಸಾಲುಗಳ  ಚೌಪದಿ.
       ಏಳು ಅಕ್ಷರದಲಿ
       ನಾಕೇ ಸಾಲಿನೊಳಗ
       ಫಿಲಿಫೈನ್ಸ ನ ಕಾವ್ಯಾ

       ಬಂದವಳೇ ತನಗ
“ತನಗ” ಕ್ಕೆ ತಲೆಬರಹ ಇಲ್ಲ. ಪ್ರಾಸ ಸಾಧ್ಯವಾಗದಿದ್ದರೆ ತ್ರಾಸ ಬೇಡ.
ಆದರೂ ಎರಡು ಮತ್ತು ನಾಲ್ಕನೇ ಸಾಲು ಅಥವಾ ಕೊನೆಯ ಎರಡು ಸಾಲು ಪ್ರಾಸವಿದ್ದರೆ ಚೆಂದ.
ಬದುಕು, ಸಂಸ್ಕೃತಿ, ಸಂಪ್ರದಾಯ
ಇತಿಹಾಸ, ಪುರಾಣ, ರಾಜಕೀಯ ಬೇಸಾಯ,ಸಮಾಜ ಹೀಗೆ ಎಲ್ಲ ವಿಷಯಗಳಲ್ಲೂ, ನವರಸಗಳಲ್ಲಿ
“ತನಗ” ರಚನೆ ಸಾಗುತ್ತಲಿದೆ.
        ತಕ್ಷಣವೇ ಬಾ ಎಂದೆ
            ಆ ಆಶು ಕವಿತೆಗೆ
         ಮೇಕಪ್ ಇಲ್ಲದೆಯೇ

             ಬರಲಿಲ್ಲ ಹೊರಗೆ
ತಕ್ಷಣದ ವಿಷಯಕ್ಕೆ  ಅವಸರದಿ ಹುಟ್ಟುವ “ತನಗ”ವು ಅಲ್ಪಾಯುಸಿ, ಆದರೆ
ಸರ್ವಜ್ಞನ ವಚನದಂತೆ ಸರ್ವ ಕಾಲಕ್ಕೂ ಪ್ರಸ್ತುತ ವೆನಿಸುವ “ತನಗ”ಗಳಿಗೆ ಹೆಚ್ಚಿನ ಬೆಲೆ.
ಎಲ್ಲ ಸಾಹಿತ್ಯ ಪ್ರಕಾರಗಳಂತೆ ಈ “ತನಗ”ದ ಕೃಷಿಯಲ್ಲಿಯೂ ಪ್ರತಿಮೆ, ದರ್ಪಣ, “ಪಂಚ್” “ಪಟ್ಟು” ಗಳ ಬಳಕೆ ಸಾಹಿತಿಗಳ ಕೈಚಳಕದಲ್ಲಿದೆ.
“ತನಗ” ವನ್ನು ಕನ್ನಡಕ್ಕೆ ಪರಿಚಯಿಸಿದವರು ಡಾ|ಗೋವಿಂದ ಹೆಗಡೆಯವರು. ಮೊದಲನೇ “ತನಗ” ಸಂಕಲನ ಪ್ರಕಟಿಸಿದವರು ಹುನಗುಂದದ ಸಿದ್ದಲಿಂಗಪ್ಪ ಬೀಳಗಿಯವರು
ಈಗ ನಮಗೆ ದೊರಕಿದ ವರದಿ ಪ್ರಕಾರ ಒಟ್ಟು ಏಳು “ತನಗ” ಸಂಕಲನ ಪ್ರಗಟಗೊಂಡಿವೆ
೧ ನೀಲಿ ಕಣ್ಣಿನ ಹವಳ
     ಸಿದ್ದಲಿಂಗಪ್ಪ ಬೀಳಗಿ
೨ ಪುಟಕ್ಕಂಟಿದ ಪತಂಗ
     ವೀರೇಶ ಕುರಿ
೩ ತನಗ ತರಂಗ
    ಡಾ|ಸುರೇಶ ನೆಗಳಗುಳಿ
೪ ತೇಲಿ ಬಂದಿದೆ ದೋಣಿ
      ಪಿ ಎಲ್ ಕುಮಾರ್
೫ ನದಿಯ ಹಂಗು ಸಾಗರಕೆ
     ಜಿ ಎಸ್ ಬಿಜಾಪುರ
೬. ಕಿರು ಗೆಜ್ಜೆಯ ಹಾಡು
      ಸುಧಾ. ಎನ್ ತೇಲ್ಕರ್
೭ ನೀಲ ಸಾಗರ ಮಣಿ
     ಶಕುಂತಲಾ ಹಿರೇಮಠ.
ಇದಲ್ಲದೇ
ಡಾ|ವೈ ಎ ಯಾಕೊಳ್ಳಿ ಹಾಗೂ
ಪ್ರಮೀಳಾ ಪಾಟೀಲ ಇವರಿಬ್ಬರ
“ತನಗ” ಸಂಕಲನ ಮುದ್ರಣ ಹಂತದಲ್ಲಿವೆ.

       ನಿತ್ಯ ಹಗಲು ರಾತ್ರಿ
        ಧ್ಯಾನದಲ್ಲಿ “ತನಗ”
        ಹೇಳಿರುವೆ ಬರಲು
            ಕನಸಲ್ಲಿ ನನಗ

ಈ ಕನ್ನಡದ “ತನಗ” ದೇವಳದ ಪ್ರಾಕಾರದಲ್ಲಿ ವಿದ್ವಾಂಸರು,ಪಂಡಿತರು, ಗುರುಗಳು, ಆರೈಕೆಗೆ ವೈದ್ಯರು, ರುಚಿಯ ತಯಾರಿಸುವ ಬಾಣಸಿಗರು, ಹಸಿವು ಹಿಂಗಿಸುವ ಅನ್ನಪೂರ್ಣಿಯರು, ಹೀಗೆ ಸಾಹಿತಿಗಳ ದಂಡೇ ಇದೆ. ಈ ಗುಂಪಿನಲ್ಲಿ ನಾನೊಬ್ಬ “ತನಗ”ದ ಪೂಜಾರಿ.

————————————–

About The Author

4 thoughts on ““ತನಗ ಕಾವ್ಯ ಪ್ರಕಾರದ ಬಗ್ಗೆ ಒಂದಿಷ್ಟು ಮಾಹಿತಿ” ತನಗ ಕವಿ ವ್ಯಾಸ ಜೋಷಿ ಅವರಿಂದ”

  1. ಕಾವ್ಯ ಸಾಹಿತ್ಯದ ಹರಿವಿಗೆ
    ಅಕ್ಷರದ ಆಣೆಕಟ್ಟನ್ನು ಕಟ್ಟಿ
    ನೀರಾವರಿ ಕೃಷಿ ಸಾಹಿತ್ಯ
    ಈ ತನಗ

    ಪ್ರಮೋದ ಜೋಶಿ

  2. ತನಗ ಕಾವ್ಯದ ಬಗ್ಗೆ ಉತ್ತಮವಾದ ಲೇಖನ ಹಾಗೂ ಉಪಯುಕ್ತ ಮಾಹಿತಿ…. ಧನ್ಯವಾದಗಳು ಶ್ರೀ ವ್ಯಾಸ ಜೋಶಿಯವರಿಗೆ

  3. ತನಗ ಕಾವ್ಯ ರಚನೆಯ ಕುರಿತು ಬೆಳಕು ಚೆಲ್ಲುವ ಲೇಖನ ಬಹಳ ಉಪಯುಕ್ತವಾಗಿದೆ. ಧನ್ಯವಾದಗಳು ಶ್ರೀ ವ್ಯಾಸ ಜೋಶಿಯವರಿಗೆ……ಎ. ಹೇಮಗಂಗಾ

Leave a Reply

You cannot copy content of this page

Scroll to Top