ಮನ್ಸೂರ್ ಮೂಲ್ಕಿ ಅವರ ಕವಿತೆ -ಚಂದ್ರ ಚುಕ್ಕಿ

ಮುಸ್ಸಂಜೆ ಮುಗಿಲು ಕೆಂಪೇರಲು
ಹೂವು ಕೂಡಾ ಕಮರಿತು
ಕಡಲ ತಟವು ತುಂಬಿ ತುಳುಕಿ
ಹೃದಯ ಪ್ರೀತಿ ಹುಟ್ಟಿತು.

ಮುಗಿಲೇರಿ ಬಂದ ಆಸೆ
ಹಕ್ಕಿಯಂತೆ ಹಾರಿತು
ಪಾದತೊಯ್ದು ಹೋದ ನೀರು
ಮನಸ್ಸಿನಲ್ಲೂ ತುಂಬಿತು

ಸಾಕೆಂದರೂ ಬಿಡದ ತಟವು
ಬಾಳು ಸೇರಿಕೊಂಡಿತು
ಹೊಳೆಯುತ್ತಿರುವ ನಗುವ ಕಂಡು
ತೆರೆಯು ನಗುವ ಬೀರಿತು

ಕಡಲು ತನ್ನತನವ ಬಿಡದೆ
ಹೊಳೆವ ತೆರೆಯ ನೀಡಿತು
ಚಂದ್ರ ಚುಕ್ಕಿ ಮೂಡಿ ಬಂದು
ಪ್ರೇಮಿಗಳ ಕರೆಯಿತು.


Leave a Reply

Back To Top