ಮುತ್ತು ಬಳ್ಳಾ ಕಮತಪುರ ಅವರ ದ್ವಿಪದಿಗಳು

ತಪ್ಪುಗಳನ್ನು ಹುಡುಕುವುದು ಜೀವನ ಆದರೆ..
ಸಂತೋಷದಿಂದ ಇರಲು ಸಾಧ್ಯವೇ ಇಲ್ಲಾರೀ..

ಭಾವನೆಗಳನ್ನು ಕೆರಳಿಸುವುದು ಬಿಟ್ಟು ಸಂತಸದಿಂದ ಇರಲು ಕಲಿರೀ
ನೋವುಗಳಿಗೆ ಮುಲಾಮ ಹಚ್ಚದೆ ನೋವಿನಲ್ಲಿ ಆನಂದಪಡಬೇಡಿ

ಅವರ ಇವರ ವಿಚಾರಗಳಿಗೆ ಬುದ್ದಿಮಂತ ತರ ಆಡಬೇಡಿ
ಬದುಕು ಬಲು ದುಬಾರಿ ದೇಹಕೂ ಮನಸಿಗೂ ಹತೋಟಿ ಇರಲೀ..

ನಗು ಮಾರಾಟವಿಟ್ಟ ಜನರ ನಡುವೆ ಸಮಾಧಿಯಾದ ಪ್ರೀತಿ
ಗೋರಿಯ ಮೇಲೆ ಆದರೂ ತುಸು ಗರಿಕೆ ಬೆಳೆದು ಪ್ರೇಮದ ಪಸೆ ಚಿಗುರಲಿ


Leave a Reply

Back To Top