ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
![](https://sangaati.in/wp-content/uploads/2024/01/byada.jpg)
ಮನಸ್ಸು
![](https://sangaati.in/wp-content/uploads/2024/07/cobblestones-3678292_640.jpg)
ಕನಸು ನೂರು ಕಣ್ಣಿನಲ್ಲಿ
ಹಾಗೆಯೇ ನೆಲೆಸಿದೆ
ಮನಸು ಹೊಸಹೊಸ
ಕನಸುಗಳ ಮತ್ತೆ ಹೆಣೆದಿದೆ
ಹುಚ್ಚು ಕನಸುಗಳ ಜೊತೆಗೆ
ಬದುಕು ಸಾಗಿದೆ
ದಿನ ಕಳೆದಂತೆಲ್ಲ ಮನಸು
ಹೆಚ್ಚು ಹೆಚ್ಚು ಮಾಗಿದೆ
ಕಾಡುವ ನೋವುಗಳಿಗೆ
ಮನವು ನೊಂದಿದೆ
ಫಲಿಸದ ಆಸೆಗಳಿಗೆ
ನಿರಾಸೆ ಒಂದಿಷ್ಟು ಕಾಡಿದೆ
ಎತ್ತೆತ್ತಲೋ ಓಡುತ್ತಿದ್ದ ಮನಸು
ಇಂದು ಸರಿದಾರಿಗೆ ಬಂದಿದೆ
ಸೋಲಿಗೆ ಅಂಜಿ ಶರಣಾಗದೆ
ಎಡೆಬಿಡದೆ ಪ್ರಯತ್ನವನ್ನು
ಮುಂದುವರೆಸಿದೆ
ಕಷ್ಟವ ಮರೆತು ಇಷ್ಟದ ಜೊತೆಗೆ
ಹೆಜ್ಜೆಯನ್ನು ಇಟ್ಟಿದೆ
ಮರಳಿ ಪ್ರಯತ್ನವ ಮಾಡುತ
ಯಶಸ್ಸಿನ ದಾರಿಗೆ ಮರಳಿದೆ
ಸೋಲು ಗೆಲುವು
ನೋವು ನಲಿವುಗಳ
ಲೆಕ್ಕಾಚಾರ ಬಿಟ್ಟಾಗ ಇಷ್ಟವು
ಕೈ ಹಿಡಿದು ಮುಂದೆ ನಡೆಸಿದೆ
ಬದುಕಿನ ದಾರಿಯು ಹೊಸದಾಗಿದೆ
ಹಸಿರಾಗಿದೆ ಉಸಿರಾಗಿದೆ
ನಡೆಯುವ ದಾರಿಯ ತುಂಬ
ಹೂವು ಅರಳಿ ನಗುವ ಬೀರಿದೆ
ನಾಗರಾಜ ಜಿ. ಎನ್. ಬಾಡ
![](https://sangaati.in/wp-content/uploads/2024/01/byada-2-797x1024.jpg)
ಕನಸು ನೂರು ಕಣ್ಣಿನಲ್ಲಿ ಹಾಗೆಯೇ ನೆಲೆಸಿವೆ….. … ಹೂ ಅರಳಿ ನಗೆಯ ಬೀರಿದೆ. ಮನಸ್ಸಿನ ಏರಿಳಿತಗಳ ಅಲೆಗಳನ್ನು ಜೋಡಿಸಿ ಸುಂದರ ಕವನವನ್ನು ಹೆಣೆದಿದ್ದೀರಿ ಹಾರ್ದಿಕ ಅಭಿನಂದನೆಗಳು.
…ಡಾ ಬಿ ಆರ್ ಅಣ್ಣಾಸಾಗರ
ಧನ್ಯವಾದಗಳು ಸರ್