ಬಾಗೇಪಲ್ಲಿಅವರ ಗಜಲ್

ಅವಕಾಶ ನೀಡದಿರು ಹೆಣ್ಣೇ ಆಗಲು ಗಂಡಿನಿಂದ ಅವಜ್ಞೆ
ಇಂದೇ ಮಾಡು ಅದಕಾಗಿ ಪ್ರಥಮ ಸದೃಢವಾದ ಪ್ರತಿಜ್ಞೆ

ಯಾವ ಹೆಣ್ಣೂ ಎಂದೆಂದಿಗೂ ತೃಣವಲ್ಲ ಅದುವೇ ವಿಶೇಷ
ಮೂಡಲಿ ಆಕೆಯ ಬಗ್ಗೆ ಜಗದಿ ನವ ನವೀನವಾದ ಪ್ರಜ್ಞೆ

ನಿನ್ನ ಈ ಸ್ಥಿತಿಗೆ ಆರ್ಥಿಕ ದುರ್ಬಲತೆಯೇ ಪ್ರಮುಖ ಕಾರಣ
ಸತತ ಅಭ್ಯಾಸವ ಮಾಡಿ ಆಗು ನೀ ಎಲ್ಲ ವಿಷಯದಿ ತಜ್ಞೆ

‘ನಹಿಃ ಜ್ಞನೇನ ಸದೃಶಂ’ ಎನ್ನುವುದು ಒಂದು ಉಪನಿಷತ್ತು
ಪಡೆದೆಯಾದೊಡೆ ವಿಜ್ಞಾನ ಅವಕಾಶವಿದೆ ಆಗೆ ಸಾಮ್ರಾಜ್ಞೆ

ತೊಡೆಗೆ ಹೊಡೆಯೆಂದು ಪ್ರತ್ಯೇಕ ಹೇಳಲಿಲ್ಲಾ ತಾ ಕೃಷ್ಣಾ!
ಮಾಡಿ ತೋರಿಧನು ಭೀಮಗೆ ಸಣ್ಣ ಪ್ರಮಾಣದಲಿ ಸಂಜ್ಞೆ.


Leave a Reply

Back To Top