ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೃದಯ ಮೂಕವಾಯಿತು ಸಂಶಯ ಊರಿದ ಮೇಲೆ
ಮನಸು ಬಂಡೆಯಾಯಿತು ಪ್ರೀತಿ ಮುರಿದ ಮೇಲೆ

ಇಂಚುಇಂಚಿಗೆ ಕದನಗೈವ ಗುಣಕೆ ಏನು ಹೇಳಲಿ
ತನುವು ಭಾರವಾಯಿತು ದ್ವೇಷವ ಸಾರಿದ ಮೇಲೆ

ಒಡಲಲಿ ಚುಚ್ಚುವ ವ್ಯಾಧಿಗೆ ಮದ್ದೆ ಇರದಾಯಿತೇ
ಸುಪ್ತಿಯೆ ಇಲ್ಲವಾಯಿತು ಬದುಕು ಉರಿದ ಮೇಲೆ

ಗುರಿಯೆ ಇಲ್ಲದ ದಾರಿಯಲಿ ಬಾಳಿನ ಪಯಣ
ಕನಸಿದು ಬರಿದಾಯಿತು ಸತ್ಯವ ಕಾರಿದ ಮೇಲೆ

ಅಭಿನವಗೆ ದುಃಖ ಉಮ್ಮಳಿಸಿ ಬಂದೀತು ನೋಡು
ಜೀವವಿದು ಕೃಶವಾಯಿತು ಒಲವು ತೀರಿದ ಮೇಲೆ


About The Author

Leave a Reply

You cannot copy content of this page

Scroll to Top