ಬೇಸಿಗೆಯ ವಿಶೇಷ-ಹೆಚ್. ಎಸ್. ಪ್ರತಿಮಾ ಹಾಸನ್.

ಬಿಸಿಲ ಬೇಗೆಯು ತಡೆಯಲಾಗುತ್ತಿಲ್ಲ
 ಹನಿ ಹನಿಯ ನೀರಿಗಾಗಿ ಪರಿತಪಿಸುತಿರಲೆಲ್ಲ  
 ಯಾಕೋ ತಿಳಿಯೆ  ಮಳೆರಾಯ ಮುನಿದಿರಲು
 ಇಳೆಯೂ  ಗಗನವನು ನೋಡುತಲಿ  ಕುಳಿತಿರಲು ….

 ಯುಗಾದಿ ಕಳೆದಿದೆ ದೇವನೆ ಕೇಳು ನೀ ಒಮ್ಮೆ
 ಮಳೆರಾಯ ಮುನಿದು ಕುಳಿತಿಹನು ದೇವಾ
 ಲೋಕದಲಿ  ನೀರಿಲ್ಲದೆ ಪರದಾಡುತಿಹರು ಜನತೆ
 ದಯಮಾಡಿ  ಚುಂಬಿಸು ಇಳೆಯ ಬಾ ಮಳೆರಾಯ …..

 ರೈತರ ಸ್ಥಿತಿಯು  ನೋಡಲಾಗುತಿಲ್ಲ
 ವಾತಾವರಣವು ಯಾರಿಗೂ ಹಿಡಿಯುತಿಲ್ಲ
 ದವಸ ಧಾನ್ಯಗಳಿಗೆ ಕೊರತೆಯಾಗುತಿಹದಲ್ಲ
 ಬದುಕು ಏನಾಗುವುದು ಎಂಬ ಆತಂಕದಿ ಇರುವರೆಲ್ಲ….

 ತಂಪು ಪಾನೀಯದ ಮೊರೆ ಹೋಗುತಿರಲು
 ಏಳ ನೀರು ಎಲ್ಲೂ ಸಿಗದೇ ಪರದಾಡುತಿರಲು
 ರೋಗರುಜಿನೆಗಳು ಹೆಚ್ಚಾಗಬಹುದೆಂಬ ಭಯದಲಿ
 ಮಳೆರಾಯನ  ಪ್ರಾರ್ಥನೆಯಲ್ಲಿ ಪೂಜಿಸುತಿಹರೆಲ್ಲ

———————————

3 thoughts on “ಬೇಸಿಗೆಯ ವಿಶೇಷ-ಹೆಚ್. ಎಸ್. ಪ್ರತಿಮಾ ಹಾಸನ್.

Leave a Reply

Back To Top