ಪ್ರಭಾವತಿ ಎಸ್ ದೇಸಾಯಿ-ಗಜಲ್ ೧೦೪(ಮಾತ್ರೆ ೨೧)

ಮಾವು ಬೇವಿನ ತೋರಣವಿರಲಿ ಬಾಳ ಹಾದಿಗೆ
ರಣ ರಣ ಬಿಸಿಲು ನೆರಳಿರಲಿ ದುಡಿಯುವಾ ಜೀವಿಗೆ

ಪ್ರಕೃತಿ ಪುರುಷರ ಮಿಲನಕೆ ಸುಮ ಬೀರಿದೆ ಪರಿಮಳ
ಪಿಕದ ಇಂಪಾದ ಗಾನವಿರಲಿ ನೊಂದ ಮನಸಿಗೆ

ಜಗದ ವನವು ಚಿಗುರಿ ಬಳಕುತ ಮಿಡಿ ಉಡಿ ತುಂಬಿದೆ
ಬನದಲಿ ಕುಸುಮ ಕಂಪಿರಲಿ ಬೇಸರದ. ಉಸಿರಿಗೆ

ಚೈತ್ರವು ಬರಿದಾದ ಗಿಡ ಮರಕೆ ಉಡಿಸಿದೆ ಹಸಿರು
ವಸಂತನ ಆಗಮನ ಇರಲಿ ಅಗಲಿದ ವಿರಹಿಗೆ

ಮೂಡಣವು ರಂಗೇರಿ ರವಿ ಕಿರಣ ತಬ್ಬಿದೆ ಭುವಿ
ಯುಗಾದಿ ಚೈತನ್ಯ ನೀಡಲಿ ಪ್ರಭೆಯ. ಬದುಕಿಗೆ


Leave a Reply

Back To Top