ವ್ಯಾಸ ಜೋಷಿಯವರ ತನಗಗಳು

ಮತ ಮಾರಿಕೊಂಡವ
ಅಮಾನವೀಯ ಮೂರ್ಖ,
ಮತದಾನ ಮಾಡದ-
-ಪಾಖಂಡಿ ಶತಮೂರ್ಖ.


ಜಾತಿ ಹಣಬಲದ
ಗಣಿತ ಶುರುವಾಯ್ತು,
ಗುಣ ಅಭಿವೃದ್ದಿಯು
ಲೆಕ್ಕಕ್ಕೆ ಬಾರದಾಯ್ತು.


ಬಿಸಿಯಾದ ಮುನಿಸು
ತಣ್ಣಗಾದಾಗ ಮಾತ್ರ,
ಸಂಸಾರ, ರಾಜಕೀಯ
ಸಾಗುವದು ಸುಸೂತ್ರ.


ಚುನಾವಣೆಯ ಕಾವು
ಬಿಸಿಲು ಏರಿದಂತೆ
ಸೊಂಪಾದ ಫಲಿತಾಂಶ
ತಂಪಾದ ಜೂನ್ನಲ್ಲಂತೆ.


ಯಾವುದೇ ಪಕ್ಷವಿರಲಿ
ಎಲ್ಲರಲೂ ಹುಳುಕು,
ಕುಟುಂಬ ರಾಜಕೀಯ
ಬಿಟ್ಟಿರದ ಕೊಳಕು.


ದೇಶದಿ ಶುರುವಾಯ್ತು
ಮತದಾರನ ಪಾಕ,
ಜೂನ್ ನಾಲ್ಕನೇ ದಿನ
ಭಾರಿ ಭೂರೀಭೋಜನ.


ರಾಜಕಾರಣಿ ಕುರ್ಚಿ
ಮಠಾಧಿಕಾರಿ ಪೀಠ
ವ್ಯಾಪಾರಿಯ ಹಾಗೆಯೇ
ಕುಟುಂಬಕ್ಕೇ ಸೀಮಿತ.


Leave a Reply

Back To Top