ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಲುಮೆಯ ಬಣ್ಣದೋಕುಳಿಯಲಿ ಮೀಯಿಸಿದವ ಎಲ್ಲಿ ಹೋದೆ
ಇರುಳು ಕನಸಲಿ ಕಚಗುಳಿಯಿಟ್ಟು ನಗಿಸಿದವ ಎಲ್ಲಿ ಹೋದೆ

ಸುಳಿಗಾಳಿಗೆ ಸೆರಗು ಪತಂಗವಾಗಿ ಹಾರುತಿದೆ ಬಾನಿಗೆ
ಕೆನ್ನೆಗೆ ಮುತ್ತಿಕ್ಕಿ ಮುಂಗುರುಳ ಸರಿಸಿದವ ಎಲ್ಲಿ ಹೋದೆ

ಶಶಿ ಅಪ್ಪುಗೆಯಲಿ ವಾರಿಧಿ ಉಕ್ಕಿ ಸಂತಸದಿ ನಲಿಯುತಿದೆ
ಯಮುನೆಯ ತಟದಿ ರಾಸಲೀಲೆ ಆಡಿಸಿದವ ಎಲ್ಲಿ ಹೋದೆ

ಕೊಳದಿಂದ ಹೊರ ಬರಲಾರದೆ  ಚಡಪಡಿಸುತಿವೆ ಜೀವಿಗಳು
ಕಳಚಿಟ್ಟ ಉಡುಪುಗಳ ಕದ್ದು ಕಾಡಿಸಿದವ ಎಲ್ಲಿ ಹೋದೆ

ವ್ಯಾಮೋಹದ ಗುಂಗಿನಲಿ ಚಂದಿರ ತಾರೆ ಮುಸುಕುಹಾಕಿವೆ
ಮೋಹದಿ ಬಂಧಿಸಿ ಪ್ರಭೆಯ ಹರೆ ದಣಿಸಿದವ ಎಲ್ಲಿ ಹೋದೆ


About The Author

7 thoughts on “ಪ್ರಭಾವತಿ ಎಸ್ ದೇಸಾಯಿ ಅವರ ಹೊಸ ಗಜಲ್”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಶೃಂಗಾರ ಕವನ ಚೆನ್ನಾಗಿದೆ ಮೇಡಂ ಧನ್ಯವಾದಗಳು

  2. ತುಂಬಾ ಸುಂದರ ರಚನೆ ಅಕ್ಕ..

    ಹಮೀದಾ ಬೇಗಂ ದೇಸಾಯಿ ಸಂಕೇಶ್ವರ

Leave a Reply

You cannot copy content of this page

Scroll to Top