ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎಲ್ಲೆಲ್ಲೂ ಒಣ ಭೂಮಿ
ಬಾಯಿ ತೆರೆದು ಕಾದಿದೆ ನಾಲ್ಕು ಹನಿಗೆ
ಬೀಸುವ ಗಾಳಿ ಎಲ್ಲ ಬಿಸಿಯಾಗಿ
ಬೇಸತ್ತಿದೆ ಬೇಸರದ ಬೆವರಿಗೆ

ಇಂಥ ಬರಗಾಲ ಎಂದು ಕಂಡಿಲ್ಲ
ಬೆಂಕಿ ಉಗುಳುವ ಸೂರ್ಯಗೆ ಕರುಣೆ ಇಲ್ಲ
ಅದೆಷ್ಟೋ ಗಿಡ ಮರಗಳು ಒಣಗಿಹೋದವಲ್ಲ
ಕಾಡ್ಗಿಚ್ಚಿಗೆ ಸೋಕದಿದ್ದರಷ್ಟೇ ಸಾಕಲ್ಲ

ಆಧುನಿಕತೆಯ ಬರದಲ್ಲಿ ಬರೆದು ಮಾಡಿ
ಬರ ಬಂದಿದೆ ಎಂದು ಕೊರಗುವವರ ನೋಡಿ
ಮತ್ತಷ್ಟು ಬೆಂಕಿಯ ಉಗುಳುತಿಹನು ರವಿ
ಬೇಸಿಗೆ ಭೀಕರೆತೆಗೆ ಬರೆದಾದವು ಕೆರೆ ಬಾವಿ

ಕೆಂಡವಾಗುತ್ತಿದೆ ಧರೆಯೊಡಲು
ಮರ ಕಡಿದರೆ ಇನ್ನೆಲ್ಲಿ ನೆರಳು
ಮಳೆಗಾಗಿ ದೇವರ ಪ್ರಾರ್ಥಿಸುವ ಬದಲು
ಶ್ರಮಿಸು ಮಾನವ ಮತ್ತಷ್ಟು ಕಾಡು ಬೆಳೆಯಲು

ಪ್ರಕೃತಿ ಮುನಿದರೆ ಕಾಯುವವರಿಲ್ಲ
ಅದು ಕೋಪಿಸಿಕೊಂಡರೆ ಸಾಯುವೆ ಎಲ್ಲಾ
ಮುಂದಿನ ಪೀಳಿಗೆಗೆ ಆನಂದ ನೀಡುವುದಾದರೆ
ಕಡಿದ ಜಾಗದಲ್ಲಿ ಮತ್ತೆ ಮರಗಳನ್ನು ಬೆಳೆಸು

ಕೆರೆಕುಂಟೆಗಳ ಒತ್ತುವರಿ ನಿಲ್ಲಿಸು
ಓಡುವ ನೀರನ್ನು ಅಲ್ಲಿ ತಡೆದು ನಿಲ್ಲಿಸು
ಅಂತರ್ಜಲಕ್ಕೆ ಮರುಪೂರಣ ಮಾಡು
ಆಗ ಹನಿ ನೀರಿಗೆ ಅಹಾಕಾರ ತಪ್ಪುವುದು ನೋಡು


About The Author

Leave a Reply

You cannot copy content of this page

Scroll to Top