ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೆಂದೊಡಲ ಬೇಗೆಯನು ತಿಂದೊಡಲು ತಣಿಸುತಿದೆ
ಕಂದನಾಗಿದ್ದರೂ ತಾನು ಕುಂದಿಲ್ಲದೆ ಪ್ರೀತಿ ಸುರಿಸಿದೆ
ಮಂದಿಯೆಲ್ಲರೂ ಇದ ನೋಡುತಲಿ ಕಲಿಯಬೇಕಿದೆ
ಚಂದಿರನ ತೋರಿ ಬೆಳೆಸಿದಮ್ಮನಿಗೆ ಹಿತವೆನಿಸುತಿದೆ

ಕೆಲಸದ ನಡುವೆ ಮರೆತಳವಳು ಸುರಿವ ಮಳೆಹನಿಯ
ಕಲಿತ ಆ ಮುತ್ತು ಮಾತ್ರ ಮರೆಯಲಿಲ್ಲ ಜನನಿಯ
ಫಳಫಳನೆ ಹೊಳೆಯಲು ಶ್ರಮವಿಲ್ಲಿ ಹಲ ಬಗೆಯ
ಕಳವಳವು ಮುಗ್ಧ ಹೃದಯಕೆ ಮಾತೆ ನೀ ಕಾಣೆಯ

ಹೆಜ್ಜೆಯದು ನಿಂತ ಭಂಗಿಯಲಿ ಹೆಮ್ಮೆ ಕಾಣುತಿದೆ
ಲಜ್ಜೆಯಾಗುವಂತಾಗಿದೆ ಹನಿಗೂ ಇದ ನೋಡುತಲಿ
ಗೆಜ್ಜೆಯ ಸದ್ದಿನಂತೆ ಕುಣಿ ಕುಣಿದು ಬಾನಿಂದ ಜಾರಿದೆ
ಮಜ್ಜನದ ಸೊಬಗಂತೆ ಕಂಡಿದೆ ಕರಿಯ ಕೊಡೆಯಲಿ

ಸುತ್ತಲು ತುಂಬಿಹ ಪರಿಸರದಿ ಸಿರಿಯಿಲ್ಲ ನೀ ನೋಡು
ಮುತ್ತಿನಾ ಮುಗ್ಧತೆಯು ತೋರಿರುವ ನಗುವ ಬೀಡು
ಮೆತ್ತಿರುವ ಮಣ್ಣು ತಿಳಿಸಿದೆ ಗೋಡೆಯೊಳಗಣ ಗುಟ್ಟು
ಹೊತ್ತು ಹೊತ್ತಿಗೂ ಸರಿಯದಿರಲಿ ಆ ಪ್ರೀತಿಯ ಕಟ್ಟು

———————————————

About The Author

1 thought on “ಅಶ್ವಿಜ ಶ್ರೀಧರ್ ಕವಿತೆ-ಬಾಳ ಗೀತೆ”

Leave a Reply

You cannot copy content of this page

Scroll to Top