ಭಾರತಿ ಅಶೋಕ್ ಕವಿತೆ “ಕಾದಿರುವೆ”

ಈ ಹುಣ್ಣಿಮೆ
ಬೆಳಕೆನ್ನ ಸ್ಪರ್ಶಿಸಿ
ದರ್ಶಿಸ ಹೊರಟಿದೆ ನಿನ್ನತ್ತ
ನಾ ಹೇಳಬೇಕೆಂದ
ಪಿಸು ಮಾತನ್ನು ತಾ ಹೊತ್ತು

ದಾರಿಯಲಿ ಕಾದು
ಕಿವಿಯಾಗು
ನಾನುಸುರದ ನನ್ನೇಕಾಂತವನ್ನು
ಹೇಳುವಾಗ
ಪುಳಕಗೊಳ್ಳವ ನಿನ್ನಿರುವನ್ನು
ಹೊತ್ತು ತರುವ ಘಳಿಗೆಗೆ
ನಾನಿಲ್ಲೇ ಕಾದಿರುವೆ


Leave a Reply

Back To Top