ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನಾಗತ ದಿನಗಳ ಕುಣಿತ
ತಲೆಯಲ್ಲಿ ನೂರು ಭಾವ ಭವಿತ
ಮಾತು ಕೃತಿ ನಗು ಅಳು
ಎಲ್ಲವೂ ಸುತ್ತಿದ ಮಿಳಿತ
ಒಂದಿಷ್ಟು ಅನುಭವ ಅನುಭಾವ
ಸೇರಿದರೆ ನಾಲ್ಕು ದಿನಕೆ ಉಳಿಕೆ
ಕಳೆದದ್ದು ಹೆಚ್ಚು ಪಡೆದದ್ದು ಕಡಿಮೆ
ಎಲ್ಲಾ ಮುಗಿದರೆ ನಾಳೆ ಚಿಂತೆ
ಅರ್ಥ ಅನರ್ಥಗಳ ಪ್ರಶ್ನೆ ಉತ್ತರ
ಕೊನೆಗೊಮ್ಮೆ ನಮ್ಮದೇ ಸಾಂತ್ವನ
ಬರಲಿರುವ ದಿನಗಳ ಕುತೂಹಲ
ಏಕೆ ಹೇಗೆ ಎಂದರೂ ನಿರ್ದಿಷ್ಟವಿಲ್ಲ
ಬದುಕೆಂದರೆ ಎಲ್ಲವೂ ಸುಪ್ತ
ಅಂತರಂಗದಿ ಕುಳಿತು ನಗುವ ಭಾವ
ಸರಿಸುಮಾರು ಮಾತು ಜೀವಂತ
ಇರಲು ಇರದಿರಲು ಜೀವದ ಧಾವಂತ
ಸ್ಪಷ್ಟ ಹೆಜ್ಜೆಗೆ ಅದರದೇ ಉತ್ತರ
ಕಾಯುವುದು ಬದುಕಿನ ಕಾತರ
ದಿನ ಕ್ಷಣಗಳ ಉಲ್ಲಸಿತ ಮನ
ಬರಲಿ ಬರವಿಲ್ಲದ ಸಂತಸದ ದಿನ


About The Author

2 thoughts on “ನಾಗರಾಜ ಬಿ.ನಾಯ್ಕಕವಿತೆ-ಅನಾಗತ”

  1. ಬದುಕಿನ ಸೌಂದರ್ಯ ಅಡಗಿರುವುದೇ ನಾಳಿನ ಕೌತುಕತೆಯಲಿ.. ಭಾವನೆಗಳ ಮಿಡಿತ ನಮ್ಮನ್ನ ಖುಷಿಯಲ್ಲಿ ತೇಲಿಸುತ್ತದೆ. ಹತ್ತು ಹಲವು ಪ್ರಶ್ನೆಗಳು ಮನಸ್ಸಿನಲ್ಲಿ.. ಸಂತಸದ ಕ್ಷಣಗಳನ್ನು ಆಶಿಸುತ್ತಾ.. ಉಲ್ಲಾಸ ಗೊಳ್ಳುವುದು ಮನವು. ಆಶಾಸೌಧ ಕಟ್ಟಿಕೊಳ್ಳದೆ ಒಳ್ಳೆಯದನ್ನು ಬಯಸುವ ಕವಿತೆಯ ಸಾರ ವಿಶಿಷ್ಟವಾದುದಾಗಿದೆ.

    ನಾನಾ

  2. ಬದುಕು ಬವಣೆಯ ಸುತ್ತ ಸುಳಿವ ಸುಳಿಗಾಳಿ.
    ಸುಂದರ ನಿರೂಪಣೆ.

Leave a Reply

You cannot copy content of this page

Scroll to Top