ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನುಂಗಿರುವೆ ಅದೆಷ್ಟು ನೋವನು
ಕ್ರೂರಿ ಮನಸುಗಳ ನಂಜನು
ಕಲ್ಲು ಮಣ್ಣು ಮಸಿ ಬೀಸಿದರು
ಮುಳ್ಳಿನ ಕಿರೀಟವ ಹಾಕಿದರು

ಮುಗ್ಧ ನಗೆಯ ಹೊನಲು
ಹರಿಸಿದಿ ಪ್ರೇಮದ ಕಡಲು
ಶಿಲುಬೆಗೆ ಏರಿಸಿ ಕಟ್ಟಿದರಲ್ಲ
ಕ್ಷಮಿಸುತ್ತಿದ್ದೆ ನೀ ಅವರನ್ನೆಲ್ಲ

ಮೊಳೆ ಬಡೆಯುವರಿಗೆ ಹೇಳಿದೆ
ಜಾಗ್ರತೆ ನಿಮಗೂಬಡಿದೀತೆಂದು
ಹೇ ಸಹನತೆಯ ಸರದಾರನೇ
ಅದೆಷ್ಟು ಕ್ಷಮಾಶೀಲ ನೀನು

ಎಷ್ಟೊಂದು ನಿರ್ದಯಿ ಹೊಡೆತಗಳು
ರಕ್ತ ಸುರಿಯುವ ಗಾಯಗಳು
ಬೆತ್ಲಹೆಮ್ಮಿನ ಕರುಣೆಯ ಜ್ಯೋತಿಯೇ
ತೋರಿಸಿಬಿಟ್ಟೆ ಜಗಕೆಲ್ಲ ಬೆಳಕನು


About The Author

Leave a Reply

You cannot copy content of this page

Scroll to Top