ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾದಿರುವೆ
ಅಹಲ್ಯೆಯಂತೆ ನಿನ್ನ ಪಾದ ಸ್ಪರ್ಶಕೆ
ಶ್ರೀರಾಮನಾಗಿ ಬರುವೆಯಾ?
ದ್ರೌಪದಿಯ ತೆರದಿ
ಕೈ ಮುಗಿದು ಮೊರೆಯಿಡುವೆ
ಶ್ರೀಕೃಷ್ಣನಂತೆ ಪೊರೆಯುವೆಯಾ?

ಅಪ್ಪುವೆನು ಮಾರ್ಕಾಂಡೇಯನಂತೆ
ಎಡೆ ಬಿಡದೆ ಭಜಿಸುವೆ ಪ್ರಹ್ಲಾದನಂತೆ
ನಿನ್ನ ದರುಶನ ಭಾಗ್ಯ ನೀಡುವೆಯಾ?
ದಾರಿ ಕಾಣದೆ
ಅಲೆದೇ ಅಲೆದೆನು ಅಕ್ಕನಂತಾದೆ
ಅನುದಿನವೂ
ನೆನೆದು ನೆನೆದು ದುಃಖದಿ ಮೀರಾಳನೂ ಮೀರಿಸಿದೆ.

ಬಾಳ ಕಡುಗತ್ತಲು ಕವಿಯುತಿರೆ
ಕನಕನಂತೆ ಗೋಗರೆವೆನು
ಕಿರುಕಿಂಡಿಯಲಿ ಬೆಳಕು ತೋರುವೆಯಾ?

ಅಪ್ಪ…
ನೀನಿಲ್ಲದ ಈ ಮನೆಯಲಿ
ನಿನ್ನ ನೆನಪಿನ ನಂದಾದೀಪ ಉರಿಯುತಿದೆ
ನಿನ್ನ ನೆನಪಲೇ ಮನೆ ಮನ ಬೇಯುತಿದೆ..
ಮರಳಿ ಮತ್ತೆ ನೀ ಬರುವೆಯಾ?
—————–

About The Author

Leave a Reply

You cannot copy content of this page

Scroll to Top