ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಪ್ಪನು ಹಾಕಿದ ಆಲದ ಮರದ ನೆರಳು ಇರುಳು ಮೂಡುವ ತನಕ
ತಪ್ಪನು ಮಾಡಿದ ಮೋದದ ಮನದ ತೆವಲು ಸರಳು ಜೀರುವ ತನಕ

ದುಡಿದು ದೂಡಿದ ಬದುಕು ಕರಕೆ ಬೆಸೆದು ಆಯಿತು ಸಂಸಾರ ಸಾರ್ಥಕ
ಪೊರೆದು ಪಡೆದ ಪದಕ ಕ್ಷಣಿಕ ತಂದೈತಿ ಪುಳಕ ಕೊಳೆವ ತನಕ

ಸಾಧನೆ ಹಾದಿಯು ಕಠಿಣ ಛಲದಿ ತೀರಿಸು ಸಾಫಲ್ಯ ಪಡೆದು ನಗಲು
ವೇದನೆ ಸರಿಸಿ ಮುನ್ನಡೆ ಸರ್ವವೂ ಬಳುಕಿ ಬರದು ಮೊಳೆವ ತನಕ

ಕೈಚಾಚಿ ಬೇಡದೆ ರಟ್ಟೆಯ ಮುರಿದು ಕಾಯಕ ಮಾಡಲು ಅನ್ನವು ಸೇರದೇ
ಶುಚಿಯ ಕಾಪಲು ಕಾಯದಿ ಮಾನಸ ಲಹರಿ ಹರಿಸು ಹಿಗ್ಗುವ ತನಕ

ರವಿಯು ಬೆಳಗಿ ಛವಿಯ ಪಸರಿ ಜ್ಞಾನಿಯು ಸುಜ್ಞಾನ ಎಲ್ಲೆಡೆ ಹರಡಿ
ಕೀರುತಿ ಪತಾಕೆ ಹಿಡಿದು ಯಾತ್ರಿಸು ಜಗವು ನಲಿದು ಬೀಗುವ ತನಕ


About The Author

Leave a Reply

You cannot copy content of this page

Scroll to Top