ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೇಳು ನೀ ತಂಗಾಳಿಯೆ ಶ್ಯಾಮನೇಕೆ ಬಾರನು
ಕಾದು ಕುಳಿತೆ ಅವನಿಗಾಗಿ ತೆರೆದು ಮನದ ಕದವನು

ಕದಪು ಸವರಿ ಮಾಯವಾಗೊ ಅವನದೆಂಥ ಮಾಯೆಯೋ
ಒನಪು ತೋರಿ ನಲಿವ ಬಯಕೆ ನನ್ನದೆಂಥ ಆಸೆಯೋ

ಮುತ್ತಿಟ್ಟು ಕಾಡುವ ಮುಂಗುರುಳ ಸರಿಸು ಬಾ ಮುರಾರಿ
ಎನಿತು ಸೊಗಸು ನಿದಿರೆಯಲೂ ಕಾಡುವ ನಿನ್ನ ಮೋಹದ ಪರಿ

ಮುಕುಂದನೆಂದೆಣಿಸಿ ತರುವ ತಬ್ಬಿದೆ ಭ್ರಮೆಯಲಿ
ಮಾರ್ಧನಿಸುತಿದೆ ಕೊಳಲ ಗಾನ ಬಿಡದೆ ಎನ್ನ ಎದೆಯಲಿ

ಯಮುನೆಯಲೆಯಲೂ ತೇಲಿ ಬರುವ ನಿನ್ನ ಬಿಂಬ
ಎಲ್ಲಿ ನೋಡಲಲ್ಲಿ ಕೃಷ್ಣನೆಂಬ ಪ್ರತಿಧ್ವನಿ ಬನದ ತುಂಬ

ಈ ಬೆಳದಿಂಗಳಿರುಳೂ ತಂಪೆನಿಸುತಿಲ್ಲ ಮಾಧವ
ಕಾಯಿಸದೆ ಈ ರಾಧೆಯ ತೋರಿ ಬಿಡು ನಿನ್ನ ಮೊಗವ


About The Author

3 thoughts on “ಮಧುಮಾಲತಿ ರುದ್ರೇಶ್ “ಶ್ಯಾಮನೇಕೆ ಬಾರನು”””

  1. ಕಾವ್ಯ ಸಂಗಾತಿ ಬರಹಗಾರರಿಗೆ ಅತ್ಯುತ್ತಮ ವೇದಿಕೆ..ಬರಹಕ್ಕೆ ತಕ್ಕ ಚಿತ್ರಗಳೊಂದಿಗೆ ಪ್ರಕಟಿಸುವ ಉತ್ತಮ ಕಾರ್ಯ.ಸಾವಿರಾರು ಓದುಗರಿಗೆ ಏಕಕಾಲಕ್ಕೆ ಒದಗಿಸುವ ಕಾರ್ಯ ಶ್ಲಾಘನೀಯವಾದದ್ದು. ಈ ವೇದಿಕೆ ಹೆಚ್ಚಿನ ಓದುಗರನ್ನು ಆಕರ್ಷಿಸಲಿ ಎಂಬ ಸದಾಶಯ ನಮ್ಮದು.
    ಮಧುಮಾಲತಿರುದ್ರೇಶ್

Leave a Reply

You cannot copy content of this page

Scroll to Top