ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊರಗ ಹೋಗಿ ಬಂದಾಗ ಹೊರ ಜನರು ವಿಚಿತ್ರ
ಒಳ ಕರೆದು ಇದ್ದಾಗ ಒಳ ಬಂದ ಜನರು ವಿಚಿತ್ರ

ಒಳಗೊಂದು ಹೊರಗೊಂದು
ಏನೂ ತಿಳಿಯದ ರಹಸ್ಯ
ಒಬ್ಬರ ಮ್ಯಾಲ ಒಬ್ಬರು ಹೇಳೊದು ಕೇಳಿ ಇದೆಂಥ ಸಮಸ್ಯೆ
ಯಾರ ಬಳಿ ಯಾವುತ್ತರ ತಿಳಿಯದ ಜನರ ಜಗತ್ತು

ನಂಬಿದರ ಹಿಂದ ಮಾತು
ಹೊರ ದಬ್ಬಿದರ ನೂರು ಮಾತು
ಎಂಥಾ ಮಾತು ನಂಬಿಕೆಯಿಲ್ಲದ ಕನಸುಗಳು

ಆಡಿದರೆ ನೂರೆಂಟು ವೇದಗಳು
ಕೂಡಿದರೆ ನೂರೆಂಟು ನೆಪಗಳು
ಅಡ್ಡಾದಿಡ್ಡಿ ಬಂದರೆ ಎಡುವುದು ಕಾಲುಗಳು
ಯಾರೇನು ಯಾವಾಗೇನು ತೊಂದರೆ ಕಲಿಯುಗ ಕಾಲವಿದು.

ಬೆಣ್ಣೆಯಂತೆ ನಯ ನಾಜೂಕು ಮನಸ್ಸುಗಳು
ವಿಷವಾದ ವಿತಂಡವಾದಕ್ಕೆ ಅನ್ಯಾಯದ ಕಟೆ ಕಟೆ
ವಿಷಾದ ಕೊಡದ ಜನರ ಮಧ್ಯೆ ಅಘಾತ
ಗಾಯದಲ್ಲಿ ಮುಂದುವರೆದ ಬದುಕು.

ಕೊನೆಯನ್ನು ವಿರಹದಿಂದ ಕೊನೆಗಾಣಿಸುವ ಹುನ್ನಾರ
ಕೊನೆಯಲ್ಲಿ ಕಣ್ಣೀರಿನ ದುಃಖದಲ್ಲಿ ಕೊನೆ ಮಾತು ಸಾಂತ್ವಾನ
ಒಂದಿಷ್ಟು ಸಮಾಧಾನದ ಸಂಧಾನ
ಕೊಡೊದಿಲ್ಲ ಜೀವಂತ ಜೀವದಾನ.

——————————

About The Author

Leave a Reply

You cannot copy content of this page

Scroll to Top