ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಸುಧಾ ಪಾಟೀಲ್

ಆಗಿಬಿಡು

ಬೆಳಕು ಪಸರಿಸುವ ಮುನ್ನ
ಬೆಳಕಾಗಿ ಬಿಡು
ಜ್ಞಾನ ಹಂಚುವ ಮುನ್ನ
ಜ್ಞಾನದೀವಿಗೆಯಾಗಿ ಬಿಡು
ವಿಷಯವನ್ನು ಅರುಹುವ ಮುನ್ನ
ವಿಶೇಷಜ್ಞನಾಗಿ ಬಿಡು
ಪ್ರೀತಿಯನ್ನು ಅಪ್ಪಿಕೊಳ್ಳುವ
ಮುನ್ನ ಪ್ರೇಮವೆಂಬ
ಆಲದ ಮರವಾಗಿ ಬಿಡು

ವಚನವನ್ನು ಅರಿಯುವ ಮುನ್ನ
ವಚನದ ಕುರುಹಾಗಿ ಬಿಡು
ದಾಸೋಹವ ಮಾಡುವ ಮುನ್ನ
ಶರಣತತ್ವವ ನಂಬಿ ಬಿಡು
ಗುರುವನ್ನು ಅನುಸರಿಸುವ ಮುನ್ನ
ನೀನೇ ಗುರುವಾಗಿಬಿಡು

ಲಿಂಗವ ಪೂಜಿಸುವ ಮುನ್ನ
ಲಿಂಗದಲ್ಲಿ ಲೀನನಾಗಿ ಬಿಡು
ಬಾರದ ಭಾಗ್ಯವ ಬಯಸುವ ಮುನ್ನ
ನೀನೇ ಭಾಗ್ಯದಾತಳಾಗಿ ಬಿಡು
ಬೇರೆಯವರನ್ನು ಆಲಿಸುವ ಮುನ್ನ
ನೀನೇ ಎಲ್ಲರಿಗೂ ಕಿವಿಯಾಗಿ ಬಿಡು

ಸಂತೋಷವ ಹುಡುಕುವ ಮುನ್ನ
ನೀನೇ ಆನಂದದಿಂದ
ಇದ್ದು ಬಿಡು
ನೆರಳು ಅರಸುವ ಮುನ್ನ
ನೀನೇ ಆಶ್ರಯದಾತಳಾಗಿ ಬಿಡು

ಯಶಸ್ಸನ್ನು ಮುಟ್ಟುವ ಮುನ್ನ
ಶಿಖರದ ಉತ್ತುಂಗವ ತಲುಪಿ ಬಿಡು
ಬಾಳ್ವೆಯ ಒಗ್ಗೂಡಿಸುವ ಮುನ್ನ
ಸಹಕಾರದ ಪಾಠ ಕಲಿತು ಬಿಡು
ಜೀವನದ ಅರ್ಥವ ಹುಡುಕುವ
ಮುನ್ನ ಜೀವನೋತ್ಸಾಹಿಯಾಗಿ ಬಿಡು
ಬಸವನ ಅರ್ಥೈಸಿಕೊಳ್ಳುವ ಮುನ್ನ
ನೀನೇ ಬಸವಣ್ಣನಾಗಿ ಬಿಡು

ಸುಧಾ ಪಾಟೀಲ್

About The Author

5 thoughts on “ಸುಧಾ ಪಾಟೀಲ್ ಕವಿತೆ-ಆಗಿಬಿಡು”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಶರಣರ ಆಶಯವನ್ನು ಹೊತ್ತು ತಂದ ಕವಿತೆ ಧನ್ಯವಾದಗಳು ಮೇಡಂ

  2. ಕವನ ಮೆಚ್ಚಿದ ಎಲ್ಲ ಕವಿಮನಸುಗಳಿಗೆ ಧನ್ಯವಾದಗಳು

    ಸುಶಿ

Leave a Reply

You cannot copy content of this page

Scroll to Top