ಗಿಳಿ ಶಾಸ್ತ್ರ ನುಡಿದ ಭವಿಷ್ಯ….!

ಹಾಸ್ಯ ಸಂಗಾತಿ

ಗಿಳಿ ಶಾಸ್ತ್ರ ನುಡಿದ ಭವಿಷ್ಯ….!

ಐಗೂರು ಮೋಹನ್ ದಾಸ್, ಜಿ.

ಕಳೆದ ಸೋಮವಾರ…. ಸಂಜೆ ಸುಮಾರು ಐದು ಗಂಟೆ ಸಮಯ…. ಚಳಿಯ ವಾತಾವರಣ… ಸಣ್ಣದಾಗಿ ಮಳೆ ಬರುವ ಎಲ್ಲಾ ಲಕ್ಷಣಗಳು ಇತ್ತು .. ! ಕೊಡಗಿನ ಮಧುರ ಚಳಿಗೆ ದೇಹದಲ್ಲಿ ಸಣ್ಣ ಚಳಿ ‘ದೇವರು’ ಬಂದಾಗ, ತುಸು ಬೇಗಾನೆ ‘ಕೆಂಪು ಎಣ್ಣೆ’ ಕುಡಿದು ಮನೆಯ ತಿರುವಿನಲ್ಲಿರುವ
‘ಮೋರಿ ಕಟ್ಟೆ’ಯ ಮೇಲೆ ಕುಳಿತುಕೊಂಡಿದ್ದೆ…! ಈ ಸಮಯದಲ್ಲಿ ರಸ್ತೆಯಲ್ಲಿ ಗಿಳಿ ಶಾಸ್ತ್ರ ಹೇಳುವ ಎರಡು ಮಂದಿಯನ್ನು ಕಂಡಾಗ, ನನ್ನ ಹುಚ್ಚಾಟ ಎಂದಿನಂತೆ ಪ್ರಾರಂಭವಾಯಿತ್ತು…!ಏಕೆಂದರೆ ನಾನು ಈ ಶಾಸ್ತ್ರ… ದೇವಮಾನವರು… ಮಾಟ-ಮಂತ್ರಗಳಂತಹ ‘ ಮೂಢನಂಬಿಕೆ’ ಗಳಿಂದ ಬಲು ದೂರು…! ಸತ್ಯ ಹೇಳಿದ್ದರೇ ನನಗೆ ಸರಿಯಾಗಿ ‘ಭಗವಂತ’ನಲ್ಲಿಯೂ ಸಹ ಒಂದು ಶುದ್ಧ
‘ಪ್ರಾಥ೯ನೆ’ ಮಾಡಲು ಗೊತ್ತಿಲ್ಲ…!!
ಆ ಗಿಳಿಶಾಸ್ತ್ರ ಹೇಳುವ ಮಂದಿಯನ್ನು ನಾನು ಕೈ ಬೀಸಿ ಕರೆದಾಗ, ಆ ಭವಿಷ್ಯ ಹೇಳುವ ಮಂದಿಯ ಮುಖವು ಅರಳಿ ಬಿಟ್ಟಿತ್ತು…! ಹೊಸ ‘ ಕುರಿ’ ಸಿಕ್ಕಿದ ಆನಂದ ಅವರ ಮುಖದಲ್ಲಿ ಇತ್ತು..! ಆದರೆ ಅವರ ಲೆಕ್ಕಚಾರ ಎಲ್ಲಾವು ತಲೆಕೆಳಗಾಗಿ ಬಿಟ್ಟವು…!
ಆ ಪುಣ್ಯವಂತರಿಗೆ ಕನ್ನಡ ಭಾಷೆ ಗೊತ್ತಿರಲಿಲ್ಲ…!ಆದರಿಂದ ಅವರ ಭಾಷೆಯಾದ ತಮಿಳುನಲ್ಲಿ ಮಾತುಕತೆ ಶುರು ಮಾಡಿಬಿಟ್ಟೆ….!
ನನ್ನ ಬಾಡಿದ ಮುಖ ಮತ್ತು ಹೆಂಡದ ವಾಸನೆಯಿಂದ ನನ್ನ
‘ಇತಿಹಾಸ’ ಆ ಗಿಳಿ ಮಂದಿಗೆ ಸುಲುಭವಾಗಿ ತಿಳಿಯಿತ್ತು..!
” ಚಾಮಿ…! ನೀವು ಮಹಾನ್ ವ್ಯಕ್ತಿ…!ಹೆಂಡದ ದಾಸ..!ಆದರೂ ನಿಮಗೆ ರಾಜಯೋಗ ಉಂಟು…!” ಎಂದು ಭವಿಷ್ಯಗಾರ ನುಡಿದಾಗ, ನನಗೆ ತುಸು ಕೋಪ ಬಂತು..!
” ಈ ವಿಚಾರ ಎಲ್ಲಾರಿಗೂ ಗೊತ್ತು…! ರಸ್ತೆಯಲ್ಲಿ ಇರುವ ಎಲ್ಲಾ ಗುಂಡಿ – ಹೊಂಡಗಳು ನಾನು ಬಿದ್ದಿರುವ ವಿಚಾರವನ್ನು ಹೇಳುತ್ತದೆ…! ನನಗೆ ತಿಳಿಯಬೇಕಾಗಿರುವ ವಿಚಾರವೇ ಬೇರೆ…!” ಎಂದು ನುಡಿದಾಗ, ಗಿಳಿ ಶಾಸ್ತ್ರ ಮಂದಿ ನನ್ನನ್ನು ದಿಟ್ಟಿಸಿ ನೋಡಿದ್ದರು.
” ಮತ್ತೆ ಯಾವ ವಿಷಯ ತಿಳಿಯಬೇಕು…?” ಎಂದು ಕೇಳಿದಾಗ, ನಾನು ಮೆಲ್ಲನೆ ಪ್ರಶ್ನೆಗಳ ಸುರಿಮಳೆಯನ್ನು ಸುರಿಸಿಬಿಟ್ಟೆ…!
I) ಮುಂದಿನ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲಿ ಯಾವ ಪಕ್ಷ ಆಧಿಕಾರ ಕುಚಿ೯ಗೆ ಏರುತ್ತದೆ..?
2) ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು…?
3) ನನಗೆ ಚುನಾವಣೆಯಲ್ಲಿ ಸ್ಪರ್ಥಿಸಲು ‘ ಟಿಕೆಟ್’
ದೊರೆಯಬಹುದಾ…?
4) ಸಿದ್ಧಣ್ಣನವರ ಕ್ಷೇತ್ರ ಯಾವುದು…?
5) ರಾಹುಲ್ ಈಗ ಏಲ್ಲಿಗೆ ತಲುಪಿರಬಹುದು..?
6) ನಮ್ಮ ನ್ಯೂಸ್ ಚಾನೆಲ್ ಗಳ ಚುನಾವಣೆ ‘ಸಮೀಕ್ಷೆ’ಯನ್ನು ನಂಬಬಹುದೇ…?

—————–


.
.
.
.
ಹೀಗೆ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ, ಆ ಗಿಳಿಶಾಸ್ತ್ರ ಮಂದಿಯು,
ಗಿಳಿಯನ್ನು ಗೂಡಿಗೆ ಸೇರಿಸಿ, ತನ್ನ ಕಾಯ೯ಕ್ರಮಕ್ಕೆ ಮಂಗಳ ಹಾಡಿಯೇ ಬಿಟ್ಟರು…!
“ನಮ್ಮ ಗಿಳಿ ರಾಜಕೀಯ ಭವಿಷ್ಯ ನುಡಿಯುವುದಿಲ್ಲ..! ನಿನ್ನ ಎಲ್ಲಾ ವಿಚಾರಗಳನ್ನು ಹೇಳುತ್ತದೆ…! ನಿನ್ನ ಪ್ರೇಮ ಪುರಾಣ ಹೇಳಬೇಕಾ…?” ಎಂದು ಪುನಃ ಆ ಮಂದಿ ರಾಗ ಎಳೆದಾಗ, ನಾನು ಪುನಃ ಒಂದು ಪ್ರಶ್ನೆ ಕೇಳಿದೆ.
” ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಗೆಲುವು ಸಾಧಿಸುತ್ತದೆ…? ಮುಂದಿನ ಪ್ರಧಾನಿ ಯಾರು…?” ಎಂದು ಕೇಳುತ್ತಿದ್ದಂತೆ, ” ಗೊತ್ತಿಲ್ಲ…ನಮಗೆ ಈ ವಿಚಾರವೇ ಗೊತ್ತಿಲ್ಲ…! ನಾವು ನಿನ್ನ ಭವಿಷ್ಯ ನುಡಿಯುವುದೇ ಇಲ್ಲ…!” ಎಂದು ಹೇಳುತ್ತಾ, ಆ ಮಂದಿ ಜಾಗ ಖಾಲಿ ಮಾಡಿಬಿಟ್ಟರು..!!
ಈ ಸಂದಭ೯ ಒಂದು ವಿಚಾರ ನಾನು ಹೇಳಲೇ ಬೇಕು.!
ಆ ಗಿಳಿ ಮಂದಿಗೆ ತಿಳಿಯದೇ ಇರುವ ‘ಉತ್ತರ’ ಗಳು, ನನಗೆ
ಸರಿಯಾಗಿ ಗೊತ್ತು… !! ನಾನು ನುಡಿಯವ ರಾಜಕೀಯ
ಸಮೀಕ್ಷೆ ‘ ಢಮಾರ್ ‘ವಾಗುವುದೇ ಇಲ್ಲ…!ಏಕೆಂದರೆ ನಾನು
ಪ್ರಣಯದ ‘ಮಂತ್ರವಾದಿ’…!!!

Leave a Reply

Back To Top