ಮಹದಾಸೆ

ಕಾವ್ಯ ಸಂಗಾತಿ

ಮಹದಾಸೆ

ಶಂಕರಾನಂದ ಹೆಬ್ಬಾಳ

ನೀ ಹಚ್ಚಿದ ಹಣತೆಯ
ಬೆಳಕಿನಲ್ಲಿ ಬಾಳುತ್ತಿದ್ದೇನೆ
ನೀ ಜೊತೆಗಿರುವೆ ಎಂಬ
ಆತ್ಮಸ್ತೈರ್ಯದಿಂದ…..

ಇರುಳಿನ ಕೌಮುದಿಯಲ್ಲಿ
ಪ್ರಭೆಯಾಗಿ ಹರಿಯುತ್ತಿದ್ದೇನೆ
ನಿನ್ನೊಲವಿನ
ಮೃದುಸ್ಪರ್ಶದಿಂದ…

ತಂಗಾಳಿಯ ಅಲೆಯಲ್ಲಿ
ಸುಳಿದಾಡುತ್ತಿದ್ದೇನೆ
ನಿನ್ನನ್ನೆ ತಬ್ಬಿ ಮುದ್ದಾಡುವ
ಅಸೆಯಿಂದ….

ಅರಳಿದ ಸುಮದಲ್ಲಿ ದುಂಬಿಗೆ
ಹಾತೊರೆಯುತ್ತಿದ್ದೇನೆ
ನಿನ್ನ ಸವಿಚುಂಬನ ಪಡೆಯುವ
ಅಭಿಪ್ಸೆಯಿಂದ…

ಕಣ್ಣಿಗೆ ರೆಪ್ಪೆಯಾಗಿ ಅಹರ್ನಿಶಿ
ಕಾಯುತ್ತಿದ್ದೇನೆ,
ಬಾಳಪಥದಿ ಕೈಬಿಡದೆ ಜೊತೆಗಿರುವೆ
ಎಂಬ ಅಭಿಮಾನದಿಂದ…


Leave a Reply

Back To Top