ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ದೇವರಾಜ್ ಹುಣಸಿಕಟ್ಟಿ

ನೋವು ಮಾತನಾಡಿದಷ್ಟು ಸಂತಸ ಮಾತನಾಡಲೇ ಇಲ್ಲಾ….!
ವಿರಹ ಕೊಟ್ಟಷ್ಟು ಹಿತಾನುಭವ ಪ್ರೀತಿ ಕೊಡಲೇ ಇಲ್ಲಾ…..!!

ಜಗದೊಳಗೆ ಸುಖ ದುಃಖವನ್ನಳಿಯುವ ಮಾಪನವುಂಟೆ..?
ಹೃದಯ ಬಿಕ್ಕಿದಷ್ಟು ಕಂಗಳು ಕಂಬನಿ ಸುರಿಸಲೇ ಇಲ್ಲಾ

ನಿಜ ಹೇಳಲಾ ಅತ್ತು ಹಗುರಾಗುವುದೆಲ್ಲ ಜಗದ ಸುಳ್ಳಿನ ಒಪ್ಪಂದ..ಗೆಳೆಯ
ಮನ ರೋಧಿಸಿದರೆಷ್ಟು ಎದೆಯ ಭಾರ ಇಳಿಯಲೇ ಇಲ್ಲಾ

ತೆರೆದ ಒಲವ ಬಾಗಿಲುಗಳಿಗೆ ಅದೆಷ್ಟು ಬೀಗ ಜಡಿಯಬಹುದು ಹೇಳಿ..?
ಅದೆಷ್ಟು ದೂರ ಸರಿದರೂ ನೀನು ನೆನಪಿನ ಅಂಗಳದಿಂದ ಜಾರಲೇ ಇಲ್ಲಾ

ಹೃದಯದ ಬಯಕೆಯ ಬಳ್ಳಿ ಬಯಸಿ ಮುಡಿದು ಉದುರಿದ ಹೂವಲ್ಲವೇ
ನಿನ್ನ ಹೊರೆತು ಅದೆಷ್ಟೇ ದೀಪ ಉರಿದರೂ ದೇವ ನಗರಿಯ ಕತ್ತಲೆ ಕಳೆಯಲೇ ಇಲ್ಲಾ


About The Author

Leave a Reply

You cannot copy content of this page

Scroll to Top