ಕುದುರೆ ಸವಾರ

ಮಕ್ಕಳ ಕವಿತೆ

ಕುದುರೆ ಸವಾರ

ಸೋಮಲಿಂಗ ಬೇಡರ

ಬಂದನೊಬ್ಬ ಸವಾರ
ಬಿಳಿಯ ಕುದುರೆ ಹತ್ತಿ
ಕೋರೆ ಮೀಸೆ ತಿರುವುತ
ಓಣಿ ಓಣಿ ಸುತ್ತಿ

ಓಣಿ ಮಕ್ಕಳೆಲ್ಲರು
ನೋಡುತವನ ಮೆಚ್ಚಿ
ಕುದುರೆ ಹಿಂದೆ ನಡೆದರು
ಹಾಕುತವರು ಹೆಜ್ಜಿ

ಊರ ಜಾತ್ರೆ ಮರುದಿನ
ಕುಸ್ತಿ ಗೆದ್ದ ವೀರ
ತಾನೇ ಎನುತ ಗತ್ತಲಿ
ಸಾರುತ್ತಿದ್ದ ಧೀರ

ಬೆಳಗುತ್ತಿದ್ದರಾರುತಿ
ದೃಷ್ಟಿ ಬೊಟ್ಟು ಇಟ್ಟು
ನಗುತಲಿದ್ದ ಸವಾರ
ಹೆಚ್ಚು ಹೆಮ್ಮೆ ಪಟ್ಟು

ಢಂ! ಎಂದು ಒಮ್ಮೆಲೆ
ಸಿಡಿಯಿತಲ್ಲಿ‌ ಮದ್ದು
ಕುದರೆ ಬೆಚ್ಚಿ ನೆಗೆಯಲು
ಬಿದ್ದನವ ಜಟ್ಟಿಯು

ಕಣ್ಣು ಬಿಟ್ಟು ನೋಡಿದ
ನಗುತಲಿದ್ದ ತಮ್ಮ
ಮಂಚದಿಂದ ತಿಮ್ಮನು
ಬಿದ್ದು ಎದ್ದ ಸುಮ್ಮ!


Leave a Reply

Back To Top