ಗಾಂಧಿ ವಿಶೇಷ

ಬಾಪೂ

ಸತ್ಯಸಂಧ ಸರಳ ಗಾಂಧಿ ಮೋಹನ
ಸತ್ಯಾಗ್ರಹದಿಂದ ಜಯವ ತಂದವನ
ಅತಿಮೋಸದಿಂದ ಕೊಂದರಲ್ಲ ಬಾಪೂ

ಗುಂಡು ತುಂಡುಗಳ ಮುಟ್ಟದವನ
ಗುಂಡಿನಿಂದಲೇ ನಿನ್ನ ದೇಹವನು
ತುಂಡುಮಾಡಿ ಕೊಂದರಲ್ಲ ಬಾಪೂ

ಅಹಿಂಸೆಯೇ ಪರಮಧರ್ಮವೆಂದವನ
ರಕ್ತಪಾತವಿಲ್ಲದೆ ಸ್ವಾತಂತ್ರ್ಯ ತಂದವನ
ಹಿಂಸೆಯಿಂದಲೇ ಕೊಂದರಲ್ಲ ಬಾಪೂ

ಸಾಟಿಯಿಲ್ಲದ ಪ್ರಾಮಾಣಿಕ ಅವಧೂತನ
ನೋಟಿಗಳ ಮೇಲೆ ಹಾಕಿ ನಿನ್ನ ಚಿತ್ರಣ
ಅಟ್ಟಹಾಸದ ಭ್ರಷ್ಟಾಚಾರಗೈದರಲ್ಲ ಬಾಪೂ

ದೇವದೂತನಂತ ಶಾಂತ ಜೀವನದ ಸಂತನ
ಜೀವಂತವಿರುವಾಗ ಕಡೆಗಣಿಸಿ ರಾಮಭಕ್ತನ
ಸಾವಿನ ನಂತರ ನಿನ್ನ ಪೂಜಿಸಿದರಲ್ಲ ಬಾಪೂ

ಸ್ವಚ್ಛತಾ ಅಭಿಯಾನದ ಸುಳ್ಳು ಹೆಸರಿನಲಿ
ನಿಶ್ಚಲ ನಿರ್ಮಲ ನಿನ್ನ ಸಾತ್ವಿಕ ತತ್ವಗಳನೆಲ್ಲ
ಕೊಚ್ಚೆಯಂತೆ ಗುಡಿಸಿ ಒಗೆದರಲ್ಲ ಬಾಪೂ

ರಾಮರಾಜ್ಯದ ಸಿಹಿ ಕನಸು ಕಂಡವನ
ನಾಮ ಸ್ಮರಣೆಯನು ಮನಸಿನಿಂದಲೇ
ಸುಮ್ಮನೆ ತೆಗೆದು ಒಗೆದರಲ್ಲ ಬಾಪೂ

********************************

ವಿನುತಾ ಹಂಚಿನಮನಿ

ಕಸಾಪಗೆ ಮಹಿಳಾ ಅಧ್ಯಕ್ಷರು

One thought on “

Leave a Reply

Back To Top