ಕವಿತೆ

ಬಾಪೂಜಿ

ಮಮತೆಯ ಬಾಪೂಜಿ
ಸತ್ಯಾಗ್ರಹಕೆ ನೀನಾದೆ ರಾಜಿ

ಧೀಮಂತ ನೇತಾರ
ಸತ್ಯ ಶಾಂತಿಯ ಮೂರ್ತಿ
ವರ್ಣಾತೀತ ನಿಲುವು
ಸ್ವಾತಂತ್ರ್ಯದ ಉಷಾಕಿರಣ

ದೇಶ ಪ್ರೇಮ ಹುರಿದುಂಬಿಸಿ
ಬ್ರಿಟಿಷರಿಗಾದೆ ಕಂಟಕ
ಬರೆದೆ ನವಯುಗದ ಭಾಷ್ಯ
ನ್ಯಾಯ ಪರತೆಗೆ ಸ್ಪೂರ್ತಿ

ದಾಸ್ಯದಿಂದ ಬಿಡುಗಡೆಗೆ ನಿನ್ನ ಕರೆ
ತ್ಯಾಗ ಬಲಿದಾನಕೆ ವರದಾನ
ಮೂಲಶಿಕ್ಷಣದ ಪರತೆ
ಸ್ವಚ್ಛತಾ ಆಂದೋಲನಕೆ ರುವಾರಿ

ಮೂಡಿಸಿದೆ ಸಂಚಲನ
ಭಾರತಾಂಬೆಯ ಕುಡಿಯಲಿ
ಬಡವನ ಅಂತಃಕರಣದ ಪ್ರತಿ
ಇದೋ ಮಹಾತ್ಮ ನಿನಗೆ ಒಂದನ‌.

******************************

Leave a Reply

Back To Top