ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಲ್ಪನಾ ಎಸ್‌ ಪಾಟೀಲ್‌ ಅವರ ಕವಿತೆ “ನೀ ನನಗೆ ನಾ ನಿನಗೆ”

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ್‌ ಅವರ ಕವಿತೆ ನೀ ನನಗೆ ನಾ ನಿನಗೆ” ದತ್ತ ಪದ :- ಪ್ರಿಯ ನೀ ನನಗಾಗಿ..ಶೀರ್ಷಿಕೆ:- ನೀ ನನಗೆ ನಾ ನಿನಗೆ ನಿನಗೆಂದೆ ಕಾಯ್ದು ಕುಳಿತೆ ಆ ಇರುಳಲಿಮಾಮರವು ಜೊತೆಯಾಗಿ ಮೌನದಲಿಬಂದೆ ಬರುವನೆಂಬ ಭರವಸೆ ಮನದಲಿನೀ ಕೊಟ್ಟ ಮಾತು ನೆನೆದು ನಗುತಲಿ ಪ್ರಿಯ ನೀ ನನಗಾಗಿ ಮೊಳ ಮಲ್ಲಿಗೆಯತಂದೆ ತರವೆ ಎನ್ನುವ ಆಸೆಯತರದೆ ಇದ್ದರೆ ತೋರೆ ನಾ ನಿರಾಸೆಯಬಲ್ಲೆ ನಾ ನಿನ್ನ ಅಂತಃಕರಣದ ಪ್ರೀತಿಯ ತೇಲಿದೆ ಮನ ನಿನ್ನ ನಾಮವ ಆಲಿಸೆಹಾರಿದೆ ಹಕ್ಕಿಯಾಗಿ ಆಗಸ ಚುಂಬಿಸೆಬಲ್ಲೆ ಏನು ಮಿಡಿವ ಹೃದಯದ ಒತ್ತಾಸೆಆಗುವಾಸೆ ನಿನ್ನ ಮಡಿಲೊಳು ನಾ ನಿನ್ನ ಕೂಸೆ ನೀ ನನಗೆ ನಾ ನಿನಗೆ ಜೊತೆಯಾಗುವದುಂಬಿಯಂತಾಗಿ ಮಕರಂದ ಹೀರುವಹೊಸೆದು ಬೆಸೆಯೋಣ ಮಧುರ ಬಂಧವಬೆರೆಯೋಣ ಮರೆತು ಈ ಜಗವ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ್‌ ಅವರ ಕವಿತೆ “ನೀ ನನಗೆ ನಾ ನಿನಗೆ” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಹೂವೆಂದು ಕೈಗೆತ್ತಿಕೊಂಡೆ ಮುಳ್ಳಾಗಿ ಚುಚ್ಚಿತುಬಳ್ಳಿಯೆಂದು ನೀರೆರೆದೆ ಹಾವಾಗಿ ಮೇಲೆರಗಿತು!! ಹೇಗೆ ತೋರಲಿ? ಹಸಿಯಾದ ಹೃದಯದ ಗಾಯವನುಕರುಣೆಗಾಗಿ ಕೈಮುಗಿದೆ ಕಠೋರವಾಗಿ ಎದೆಗಿರಿಯಿತು!! ನಂಬಿಸಿ ಅನಾಯಾಸವಾಗಿ ಗಿಚ್ಚಬಹುದೇ ಹೀಗೆ ಮುತ್ತಿಟ್ಟು ಕೆನ್ನೆಯನು,ಗಲ್ಲವನು ಜೋರಾಗಿ ಕಿರುಚಿ ಹೇಳಿದೆ..ಕಿವುಡಾಗಿ ಕಚ್ಚಿತು!! ಮಾಯಾವಿ ಮಾತುಗಳು ಮನಸ್ಸಿಗಿಳಿದವು..ಈ ಯುದ್ಧ ಸಾಕು ಬೇಡವೆಂದೇ,ಮೋಹವಾಗಿ ಪಾಶವಾಯ್ತು!! ದೀಪಾವಳಿಯ ರಾತ್ರಿ ಕತ್ತಲೆಯಿತ್ತು..ಬೆಳಕಿನ ಜೊತೆ ಸರಸಬೇಡವೆಂದೇ..ಬೀಜವಾಗಿ  ಸಸಿಯಾಯಿತು!! ಬಾಳ ಕದ್ದವನಿನ್ನೂ ಸಿಕ್ಕಿಬಿದ್ದಿಲ್ಲಾ,,ಬಗಲಲ್ಲಿ ಕಂದ ನಗುತ್ತಿಲ್ಲಾಹುಡುಕಾಡಿದೆ ಬದುಕೇ ಮರಳುಗಾಡಾಗಿ ಭಾಸವಾಯ್ತು!! ಮರುಕವಷ್ಟೇ ಹುಟ್ಟೀತು,ನಷ್ಟವನು ಯಾವುದರಿಂದ ತುಂಬಲಿ ಜಯ?ಅಮೃತವೆಂದು ಸೇವಿಸಿದೆ ವಿಷವಾಗಿ ಕೊಂದಿತು!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

ಅನುವಾದ

ಶೀಲಾ ಸುಭದ್ರಾದೇವಿಯವರ ತೆಲುಗು ಕವಿತೆ “ಸ್ನೇಹವೆಂಬ ಬಣ್ಣದ ವಿಷ” ಕನ್ನಡಾನುವಾದ ಕೋಡೀಹಳ್ಳಿ ಮುರಳೀ ಮೋಹನ್

ಅನುವಾದ ಸಂಗಾತಿ “ಸ್ನೇಹವೆಂಬ ಬಣ್ಣದ ವಿಷ” ತೆಲುಗು ಮೂಲ: ಶೀಲಾ ಸುಭದ್ರಾದೇವಿಕನ್ನಡಕ್ಕೆ: ಕೋಡೀಹಳ್ಳಿ  ಮುರಳೀ ಮೋಹನ್ ಇಪ್ಪತ್ತು ವರ್ಷಗಳ ಹಿಂದೆ ಒಂದು ಸ್ನೇಹದ ಕೂಟದಲ್ಲಿಸ್ನೇಹವೆಂಬ ಬಣ್ಣದ ವಿಷಸ್ನೇಹದ ಲೇಪ ಹಚ್ಚಿದ ಒಮ್ಮೆಗಿನ ಮಾತುಕತೆ –ಅದು ಮಾತುಕತೆ ಅಲ್ಲಮರೆಯಾಗದ ಗಾಯಕ್ಕೆ ಸವರಿದ ಉಪ್ಪುಕಣ್ಣುಗಳಲ್ಲಿ ಸುಳಿದಾಡಿದ ಸುಡಿಗುಂಡಿಗಳು ಹತ್ತು ವರ್ಷಗಳ ಹಿಂದೆಒಂದು ಮದುವೆ ಮಂಟಪದಲ್ಲಿಮದುವೆಯ ಸಂಭ್ರಮ ತುಟಿಗಳ ನಗುವಾದಾಗಸ್ನೇಹದ ನಗುವಿನೊಂದಿಗೆ ಒಮ್ಮೆಗಿನ ಮಾತುಕತೆಅದು ಮಾತುಕತೆ ಅಲ್ಲವಾಸಿಯಾದ ಪುಣ್ಣಿನ ಮೇಲೆ  ಕಾರದ ಮಳೆ ಐದು ವರ್ಷಗಳ ಹಿಂದೆ ಬಜಾರಿನಲ್ಲಿಹರಟೆಗಳ ಗಾಳಿಪಟಗಳನ್ನು ಹಾರಿಸುತ್ತಿದ್ದಾಗಗಾಳಿಯ ಹೊಡೆತದಂತೆ ಒಮ್ಮೆಗಿನ ಮಾತುಕತೆಅದು ಮಾತುಕತೆ ಅಲ್ಲಪಟಕ್ಕನೆ ಮಂಜಾ ದಾರಿಯನ್ನು ಕತ್ತರಿಸಿಕುತ್ತಿಗೆಗೆ ಸುತ್ತಿದ ವಿಷದ ನಗು ನಿನ್ನೆ ಮೊನ್ನೆಯ ರಾತ್ರಿಕನಸಿನಲ್ಲಿ ಕಣ್ಣು ಮುಚ್ಚಲೊಡನೆಕರೆ ಮಾಡಿ ಬಂದುಕುಣಿಯುತ್ತಿದ್ದ ಕನಸುಗಳನ್ನುನೆಟ್ಟಗೆ ಸುಟ್ಟುಹಾಕಿತುಅವಳು ಯಾರೇ ಆಗಿರಲಿ;ಸ್ನೇಹದ ಲೇಪ ಹಚ್ಚಿದ ಕಟುವಾದ ಮುಳ್ಳಿನಿಂದಗುಣವಾಗುತ್ತಿದ್ದ ಹೃದಯಗಾಯವನ್ನು ಕೆದಕಿದಾಗಆ ಕಣ್ಣುಗಳಲ್ಲಿ ಎಷ್ಟು ಮಿನುಗು!ಅವಳೋ  ಅಥವಾ ಅವನೋ  ಯಾರಾದರೇನು?ನಮ್ಮ ಸುತ್ತಲೂ ಅಂಥವರು ಎಷ್ಟು ಜನವೋ! ತೆಲುಗು ಮೂಲ: ಶೀಲಾ ಸುಭದ್ರಾದೇವಿಕನ್ನಡಕ್ಕೆ: ಕೋಡೀಹಳ್ಳಿ  ಮುರಳೀ ಮೋಹನ್

ಶೀಲಾ ಸುಭದ್ರಾದೇವಿಯವರ ತೆಲುಗು ಕವಿತೆ “ಸ್ನೇಹವೆಂಬ ಬಣ್ಣದ ವಿಷ” ಕನ್ನಡಾನುವಾದ ಕೋಡೀಹಳ್ಳಿ ಮುರಳೀ ಮೋಹನ್ Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-29 ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೯ ಈ ಹಿಂದೆ ಮೈಸೂರಿನಿಂದ ವರ್ಗವಾಗಿ ಹೋಗಿದ್ದ ರೇಣುಕುಮಾರಿ ಹಾಗೂ ಪದ್ಮಿನಿ ಎನ್ನುವರು ಅಲ್ಲಿ ಒಬ್ಬರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಇದ್ದರು. ಅವರು ಮತ್ತೆ ವಾಪಸ್ ಮೈಸೂರಿಗೆ ವರ್ಗವಾಗಿದ್ದರಿಂದ ಅವರ ಜಾಗದಲ್ಲಿ ಆ ಹಾಸ್ಟೆಲಿಗೆ ನಾವು ಸೇರುವುದು ಎಂದು ಈಗಾಗಲೇ ನಾನು ಸುಲೋಚನ ನಿರ್ಧರಿಸಿದ್ದೆವು. ರವೀಶ್ ನನ್ನ ಜೊತೆ ಬರಲು ನಿರ್ಧರಿಸಿದ್ದರಿಂದ ಸುಲೋಚನ ಅವರ ಅಕ್ಕ ಬರುವುದು ಬೇಡ ಎಂದು ಹೇಳಿ ನಾವು ಡಿಸೆಂಬರ್ ೧ ೧೯೯೭ರ  ಬೆಳಿಗ್ಗೆ 5:30 ಬಸ್ಸಿಗೆ ಸಕಲೇಶಪುರಕ್ಕೆ ಹೊರಟೆವು.ಮೊದಲು ರವೀಶ್ ಅವರ ಸಂಬಂಧಿ ಸತ್ಯ ಅವರ ಮನೆಗೆ ಹೋಗಿ ತಿಂಡಿ ತಿಂದು ನಂತರ ಆಫೀಸಿನ ಕಡೆ ಹೋದೆವು. ಮಾಮೂಲಿನಂತೆ ಡ್ಯೂಟಿ ರಿಪೋರ್ಟ್ ಹಾಗೂ ವರ್ಗಾವಣೆ ಅರ್ಜಿ ಎರಡನ್ನು ಸಲ್ಲಿಸಿಆಯಿತು. ಆದರೆ ಕನ್ಫರ್ಮೇಷನ್ ಆಗುವ ತನಕ ನಮ್ಮ ಅರ್ಜಿಗೆ ಮಾನ್ಯತೆ ಇರುವುದಿಲ್ಲ.  ನಾನು ಈಗಾಗಲೇ ಹೊಸ ವ್ಯವಹಾರ ವಿಭಾಗದಲ್ಲಿ ವಿಭಾಗ ಕಚೇರಿಯಲ್ಲಿ ಇದ್ದುದರಿಂದ ನನಗೆ ಅದೇ ಡಿಪಾರ್ಟ್ಮೆಂಟ್ ಕೊಟ್ಟರು. ಸುಲೋಚನಾ ಅವರು ಪಾಲಿಸಿ ಸೇವಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಅವರಿಗೆ ಗೊತ್ತಿದ್ದ ಅದೇ ಡಿಪಾರ್ಟ್ಮೆಂಟ್. ಮಧ್ಯಾಹ್ನ ರವೀಶ್ ಅವರು ವಾಪಸ್ ಹೋದರು. ಸಂಜೆ ಕಚೇರಿ ಮುಗಿದ ನಂತರ ರೇಣು ಅವರ ಜೊತೆಯಲ್ಲಿ ಹಾಸ್ಟೆಲ್ ಗೆ ಹೋದೆವು. ಈಗಾಗಲೇ ಅಲ್ಲಿ ಮತ್ತೊಬ್ಬರು ಉಪಾಧ್ಯಾಯಿನಿ ಶಿಲ್ಪ ಎನ್ನುವವರು ಇದ್ದರು.  ಒಟ್ಟು ಮೂರು ಜನ ಒಂದು ಕೋಣೆಯಲ್ಲಿ ಇದ್ದುದ್ದು. ನಾವು ಹೊಸಬರು ಡ್ಯೂಟಿ ರಿಪೋರ್ಟ್ ಮಾಡಿಕೊಂಡ ನಂತರ ಮುಂದಿನ ವಾರ ಅವರು ಅಲ್ಲಿಂದ ರಿಲೀವ್ ಆಗಬೇಕಿದ್ದು ಹಾಗಾಗಿ ಆ ಒಂದು ವಾರ ಆ ಚಿಕ್ಕ ಕೋಣೆಯಲ್ಲಿ ನಾವು ಇರಲು ಸಾಧ್ಯವಿರಲಿಲ್ಲ. ಆ ಪ್ರಶ್ನೆ ನಮಗೆ  ಎದುರಾಗಿಯೇ ಇರದುದ್ದರಿಂದ ಎಲ್ಲಿ ಇರುವುದು ಎನ್ನುವ ಪ್ರಶ್ನೆ ಉದ್ಭವವಾಯಿತು. ಸಂಬಂಧಿಗಳ ಮನೆ ಸಹ ಚಿಕ್ಕದಾಗಿದ್ದರಿಂದ ಅಲ್ಲಿ ಉಳಿಯುವುದು ಸಾಧ್ಯವಿರಲಿಲ್ಲ. ಕಡೆಗೆ ಊರಿಗೆ ವಾಪಸ್ ಆಗಿ ಮುಂದಿನ ವಾರ ಬರುವುದು ಎಂಬ ನಿರ್ಧಾರಕ್ಕೂ ಬಂದೆವು. ಸದ್ಯ ಅಲ್ಲಿಯೇ ಮೂರು ಜನ ಬೇರೆ ನಮ್ಮ ಕಚೇರಿಯ ಉದ್ಯೋಗಿಗಳು ಒಂದು ಮನೆ ಮಾಡಿಕೊಂಡು ಇದ್ದರು. ಇನ್ನುಳಿದ ಐದು ದಿನ ಇಲ್ಲಿಯೇ ಇರಿ ಎಂದು ಅವರು ಆಹ್ವಾನಿಸಿದ್ದರಿಂದ ರಜೆ ಹಾಕುವ  ಯೋಚನೆ ಕೈ ಬಿಟ್ಟು ಅಲ್ಲಿಯೇ ಇರಬೇಕಾಯಿತು. ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಇದ್ದ ಅವರ ಮನೆ ಅಲ್ಲೇ ಬಸ್ಟಾಂಡ್. ಎದುರಿಗೆ ಆಫೀಸ್. ಅಂತೂ ಅವರ ಜೊತೆ ಅವರಿಗೆ ತೊಂದರೆ ಕೊಟ್ಟುಕೊಂಡು 5 ದಿನ ಇದ್ದು ಹಾಸ್ಟೆಲ್ ಗೆ ಅಡ್ವಾನ್ಸ್ ಕೊಟ್ಟು ಜಾಗ ಖಚಿತಪಡಿಸಿಕೊಂಡಿದ್ದಾಯಿತು.ನನಗೆ ಹೊಸ ವ್ಯವಹಾರ ವಿಭಾಗದಲ್ಲಿ ಆಗ ಜವರಯ್ಯ ಮತ್ತು ಕುಮಾರ್ ಎಂಬುವವರು ಸಹಾಯಕರು. ಇಸ್ಮಾಯಿಲ್ ಎನ್ನುವರು ಅಲ್ಲಿನ ರೆಕಾರ್ಡ್ ಕ್ಲರ್ಕ್. ತುಂಬಾ ಹೊಂದಿಕೊಳ್ಳುವಂತಹ ವ್ಯಕ್ತಿತ್ವದವರು. ಅಲ್ಲಿ ಇದ್ದ ಚಂದ್ರು ಎನ್ನುವವರು ಕ್ಯಾಶಿಯರ್ ಆಗಿ ಹೋಗಿದ್ದರು ಸ್ವಲ್ಪ ಕೆಲಸ ಬಾಕಿ ಉಳಿದಿತ್ತು ಡಿಸೆಂಬರ್ ಅಂತ್ಯದ ವೇಳೆಗೆ ಶೆಡ್ಯೂಲ್ ಗಳನ್ನು ಸಲ್ಲಿಸಬೇಕಿತ್ತು ಅದರ ಕಡೆಯ ಕೆಲಸ ಏನು ಆಗಿರಲಿಲ್ಲ ಸ್ವಲ್ಪ ಹೆಚ್ಚಿನ ಶ್ರಮ ಹಾಕಬೇಕಿತ್ತು.ಐದು ವರೆಗೆ ಸರಿಯಾಗಿ ನಾವು ಹೊರಟರೆ ಅಲ್ಲಿ ಎಲ್ಲರಿಗೂ ಆಶ್ಚರ್ಯ. ಎಲ್ಲರೂ ಅಲ್ಲಿ ಆರು ವರೆ ಏಳು ಗಂಟೆಯ ತನಕ ಆಫೀಸಿನಲ್ಲಿಯೇ ಇರುತ್ತಿದ್ದವರು. ಕೆಲಸ ಬಾಕಿ ಉಳಿದಿದ್ದವರು ಕೆಲಸ ಮಾಡುತ್ತಿದ್ದರು. ಇಲ್ಲದಿದ್ದವರು ಕೇರಂ ಅಥವಾ ಟಿಟಿ ಆಡುತ್ತಾ ಕಾಲ ಕಳೆಯುತ್ತಿದ್ದರು. ಬಹಳಷ್ಟು ಜನ ಮನೆಗಳಿಂದ ದೂರ ಬಂದು ಇಲ್ಲಿ ರೂಮ್ ಮಾಡಿಕೊಂಡು ಇರುತ್ತಿದುದರಿಂದ ಇಲ್ಲಿ ಅದೇ ಸಂಸ್ಕೃತಿ ಬೆಳೆದು ಬಂದಿತ್ತು. ಆ ಒಂದು ವಾರ ನಾವು ಉಳಿದಿದ್ದ ನಮ್ಮ ಉದ್ಯೋಗಿಗಳು ಎಲ್ಲರೂ ಉಡುಪಿಯ ಕಡೆಯವರು. ಅವರಲ್ಲಿ ನೀರಜ ಎನ್ನುವವರಿಗೆ ಮದುವೆಯಾಗಿ ಒಂದು ಮಗುವಿತ್ತು. ಈ ಹಿಂದೆ ಪೋಸ್ಟಲ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದವರು ಅದನ್ನು ಬಿಟ್ಟು ಇಲ್ಲಿ ಸೇರಿದ್ದರು. ಮಂಗಳೂರಿಗೆ ವರ್ಗಾವಣೆ ಅರ್ಜಿ ಕೋರೊದ್ದರು. ಪ್ರತಿ ಶನಿವಾರ ಮಧ್ಯಾಹ್ನ ಅವರು ಮಂಗಳೂರಿಗೆ ಹೋಗಿ ಸೋಮವಾರ ಬೆಳಿಗ್ಗೆ ವಾಪಸ್ ಆಗುತ್ತಿದ್ದರು. ಇನ್ನೊಬ್ಬರು ಶುಭದಾ. ಅವರು ಅಷ್ಟೇ ಉಡುಪಿಯವರು. ಅವರ ತಂದೆ ಸಹ ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದರು ಅವರಿಗೂ ಒಂದು ಪುಟ್ಟ ಮಗು ಇತ್ತು .ಮತ್ತು ಒಬ್ಬರು ಶ್ರೀಲತಾ ಆಗತಾನೇ ವಿವಾಹವಾಗಿ ವಿವಾಹದ ಆಧಾರದ ಮೇಲೆ ಮಂಗಳೂರಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಈಗ ಅವರೊಂದಿಗೆ ನಾವು ಇಬ್ಬರು ಸೇರಿದ್ದೆವು ತುಂಬಾ ಒಳ್ಳೆಯವರು ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದರು ನಮ್ಮ ಕಡೆಯ ಅಡುಗೆ ಇಷ್ಟವಾಗಿದ್ದರಿಂದ ಆ ಐದು ದಿನ ಅಡುಗೆಯ ಹೊಣೆ ನಾನೇ ಹೊತ್ತಿದ್ದೆ ಅಲ್ಲಿ ಎಷ್ಟು ಹೊಂದಾಣಿಕೆ ಇತ್ತೆಂದರೆ ಹಾಸ್ಟೆಲ್ ಬದಲು ಅಲ್ಲೇ ಮುಂದುವರೆಯಬಹುದಿತ್ತು ಆದರೆ ಐದು ಜನಕ್ಕೆ ಆ ಮನೆ ಸ್ವಲ್ಪ ಚಿಕ್ಕದಾಗುತ್ತಿತ್ತು ಹಾಗಾಗಿ ಆ ಯೋಜನೆ ಕೈ ಬಿಟ್ಟೆವು. ನಮ್ಮ ಜೊತೆಗೆ ಶಶಿಕಲಾ ಎನ್ನುವವರು ಹುಣಸೂರಿನಿಂದ ಇಲ್ಲಿಗೆ ಉನ್ನತ ದರ್ಜೆ ಸಹಾಯಕಿಯಾಗಿ ಬಂದಿದ್ದರು ಅವರಿಗೆ ಇಬ್ಬರು ಮಕ್ಕಳು, ಬೆಂಗಳೂರಿನಲ್ಲಿ ಅವರ ಪತಿ ಹಾಗೂ ತಾಯಿಯ ಮನೆ ಇತ್ತು ಪ್ರತಿವಾರ ಬೆಂಗಳೂರಿಗೆ ಹೋಗಲು ಕಷ್ಟ ಎಂದು ಎರಡು ವಾರಕ್ಕೊಮ್ಮೆ ಹೋಗುತ್ತಿದ್ದರು ಅವರು ಈ ಬೇರೆ ಇನ್ನೊಂದು ಹಾಸ್ಟೆಲ್ ಸೇರಿದ್ದರು ಆದರೆ ಅದು ನಾನ್-ವೆಜ್ ಸಹ ಇರುವುದರಿಂದ ನಾವು ಹೋಗಲು ಇಷ್ಟಪಡಲಿಲ್ಲ.ಮೊದಲು ನಮ್ಮ ಶಾಖೆ ಬಸ್ ನಿಲ್ದಾಣದ ಎದುರಿನ ರಸ್ತೆ ಮಸೀದಿಯ ಎದುರು ಇತ್ತು ಆದರೆ ಜನವರಿ ತಿಂಗಳಿನಲ್ಲಿ ಬಸ್ ನಿಲ್ದಾಣದ ಎದುರು ಮುಖ್ಯರಸ್ತೆಯ ಒಂದು ಹೊಸ ಕಾಂಪ್ಲೆಕ್ಸ್ ನ ೧ ಹಾಗೂ ೨ ನೆಯ ಮಹಡಿಗೆ ಸ್ಥಳಾಂತರ ಗೊಳ್ಳಲಿತ್ತು. ಆ ನಿಟ್ಟಿನಲ್ಲಿ ಪ್ಯಾಕಿಂಗ್ ಮತ್ತು ಸಾಗಣೆ ಕೆಲಸಗಳ ಹೊರೆಯೂ ಇತ್ತು.ಈ ಹಿಂದೆ ಹೊಸದಾಗಿ ಕೆಲಸಕ್ಕೆ ಸೇರುವಾಗ ನಮ್ಮ ಜೊತೆಯ ಬ್ಯಾಚ್ನಲ್ಲಿ ಇದ್ದ ಮುಕುಂದನ್ ಅವರೂ ಸಹ ಉನ್ನತ ದರ್ಜೆ ಸಹಾಯಕರಾಗಿ ಈ ಶಾಖೆಯಲ್ಲೇ ಇದ್ದರು. ವಿಕ್ರಯ ವಿಭಾಗದಲ್ಲಿ ಅವರಿದ್ದುದು. ಅವರ ಪತ್ನಿ ಅಲ್ಲಿನ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದುದರಿಂದ ಅವರು ಇಲ್ಲಿಗೆ ವರ್ಗಾವಣೆ ತೆಗೆದುಕೊಂಡಿದ್ದರು. ನಮ್ಮ ಹೊಸ ವ್ಯವಹಾರ ವಿಭಾಗಕ್ಕೆ ಸಹಾಯಕ ಆಡಳಿತ ಅಧಿಕಾರಿಯಾಗಿ ಇದ್ದವರು ಮಂಜುನಾಥ್ ಎಂಬವರು ಅವರ ಪತ್ನಿ ನವರತ್ನಮ್ಮ ಅವರು ಸಹ ನಮ್ಮ ನಿಗಮದ ಉದ್ಯೋಗಿ ಅದೇ ಶಾಖೆಯಲ್ಲಿ ಇದ್ದರು. ಇತ್ತೀಚಿಗೆ ಸರ್ವಿಸ್ ನಲ್ಲಿ ಇದ್ದಾಗಲೇ ನವರತ್ನ ಅವರು ನಿಧನ ಹೊಂದಿದ್ದರು. ತುಂಬಾ ಒಳ್ಳೆಯವರು. ಸ್ನೇಹಜೀವಿ ಕೂಡ. ಮೊದಲ ವಾರ ಶನಿವಾರ ಮುಗಿದ ನಂತರವೇ ನಾನು ಸುಲೋಚನಾ ಮೈಸೂರಿಗೆ ವಾಪಸ್ ಆದೆವು. ಆನಂತರ ಒಂದೆರಡು ಮೂರು ದಿನ ರಜಾ ಹಾಕಿ ಮತ್ತೆ ಬರುವುದು ಎಂದು ನಿರ್ಧರಿಸಿದ್ದರಿಂದ ಗುರುವಾರದ ದಿನ ಸಕಲೇಶಪುರಕ್ಕೆ ಹೋಗಿ ಸಂಜೆ ಹಾಸ್ಟೆಲ್ ಗೆ ಹೋದೆವು. ಸಕಲೇಶಪುರದ ಚಂಪಕ ನಗರದಲ್ಲಿ ರೋಟರಿ ಎಕ್ಸ್ಟೆಂಶನ್ ಎಂದು ಅದನ್ನು ಕರೆಯುತ್ತಿದ್ದರು. ಮೊದಲ ದಿನ ಮಾತನಾಡಲು ಹೋದಾಗಲೇ ತಲಾ 600 ಅಡ್ವಾನ್ಸ್ ತೆಗೆದುಕೊಂಡಿದ್ದರು. ಚಿಕ್ಕ ರೂಂ ಒಂದು ಡಬಲ್ ಕಾಟ್ ಹಾಕಿದರೆ ಬೆಳಗ್ಗೆ ಸ್ವಲ್ಪ ಜಾಗ ಉಳಿದಿರುತ್ತಿತ್ತು ಅಷ್ಟೇ, ಮೂರು ಜನ ಆದುದರಿಂದ ಹಾಸಿಗೆಯನ್ನು ಸಹ ನಾವೇ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇಬ್ಬರು ಮಂಚದ ಮೇಲೆ ಒಬ್ಬರು ನೆಲದ ಮೇಲೆ. ಏಕೋ ವಾತಾವರಣವೇ ಸರಿ ಹೋಗಲಿಲ್ಲ .ಇನ್ನು ಊಟ ತಿಂಡಿ ಆ ದೇವರಿಗೆ ಪ್ರೀತಿ .ಎಲ್ಲಾ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟುಬಿಡುತ್ತಿದ್ದರು. ನಾವು ತಿನ್ನಲು ಹೋಗುವ ವೇಳೆಗೆ ಆರಿ ಅಕ್ಷತೆ ಆಗಿರುತ್ತಿತ್ತು. ಲೆಕ್ಕಾಚಾರವಾಗಿ ಅಷ್ಟೇ ಇಡುತ್ತಿದ್ದರು ನಮಗೇನು ಆ ರುಚಿ ಗೆ ಹೆಚ್ಚು ಬೇಕಾಗುತ್ತಲೂ ಇರಲಿಲ್ಲ. ಆದರೆ ಒಂದು ತರಹ ಇರಸುಮುರಸು ಮೊದಲ ದಿನದಿಂದಲೇ. ನಾಲ್ಕೈದು ದಿನ ಕಳೆದ ನಂತರ ನಮಗೆ ಇಲ್ಲಿ ಸರಿ ಬರುವುದಿಲ್ಲ ಬೇರೆ ಮನೆ ಮಾಡಿಕೊಳ್ಳುವ ಎಂದು ನಿರ್ಧರಿಸಿದೆವು. ಆಫೀಸಿನಲ್ಲಿ ಎಲ್ಲರಿಗೂ ಮನೆ ನೋಡಲು ಹೇಳಿದೆವು.  ಸಂಜೆ ಆಯಿತೆಂದರೆ ಯಾರಾದರೂ ಮನೆ ಖಾಲಿ ಇದೆ ಎಂದು ಹೇಳಿದ ಕಡೆ ಹೋಗುವುದು. ಮನೆ ನೋಡುವುದು .ಆದರೆ ಯಾಕೋ ಯಾವುದೂ ಸರಿ ಹೋಗುತ್ತಿರಲಿಲ್ಲ. ಸರಿ ಹೋದ ಮನೆಗೆ ಸಿಕ್ಕಾಪಟ್ಟೆ ಬಾಡಿಗೆ. ಸಕಲೇಶಪುರ ಬೆಂಗಳೂರಿಗಿಂತಲೂ ದುಬಾರಿ ಎಂದು ನಮಗೆ ಅರಿವಾಗಿದ್ದು ಆಗಲೇ. ಹೋಗಲಿ ಎಂದರೆ ಯಾವುದು ಸರಿ ಹೋಗುತ್ತಲೂ ಇರಲಿಲ್ಲ .ಮೈಸೂರಿನಿಂದಲೇ ಒಂದಷ್ಟು ಪುಡಿಗಳು ಚಟ್ನಿಪುಡಿ ಮೆಂತ್ಯದ ಹಿಟ್ಟು ಅನ್ನದ ಪುಡಿ ತುಪ್ಪ ಮತ್ತು ಉಪ್ಪಿನಕಾಯಿ ತೊಕ್ಕುಗಳನ್ನು ತೆಗೆದುಕೊಂಡು ಹೋಗಿದ್ದರಿಂದ ಹೇಗೋ ಅದನ್ನೇ ಬಳಸಿಕೊಂಡು ಊಟ ಮಾಡುತಿದ್ದೆವು. ಬೆಳಿಗ್ಗೆ ಕಾಫಿಗೆ ಹೋದಾಗ ಎದುರುಗಿನ ಹೋಟೆಲ್ನಲ್ಲಿ ಅಲ್ಲಿನ ಸ್ಪೆಷಾಲಿಟಿ ಕಡುಬು ಮತ್ತು ಅಕ್ಕಿ ರೊಟ್ಟಿ ಒಂದರಲ್ಲಿ ಅರ್ಧ ಮಾಡಿ ತ ತಿನ್ನುತ್ತಿದ್ದುದು.  ಸಂಜೆ ಕಚೇರಿ ಮುಗಿದ ನಂತರ ಮನೆ ಹುಡುಕಲು ಯಾರಾದರೂ ಮನೆಗೆ ಹೋದಾಗ ಅಲ್ಲಿ ಕಾಫಿ ಇನ್ನೇನಾದರೂ ಆತಿಥ್ಯ ಆಗುತ್ತಿತ್ತು. ಇಲ್ಲದಿದ್ದರೆ ಸಂಜೆಯ ವೇಳೆಯೂ ಅಲ್ಲಿ ಹೋಗಿ ತಿಂಡಿ ತಿಂದು ಮನೆಗೆ ಹೋಗುತ್ತಿದ್ದುದು.. ಹೋದ ತಕ್ಷಣ ಒಂದರ್ಧ ಲೋಟ ಕಾಫಿ ಕೊಡುತ್ತಿದ್ದರು ಅಷ್ಟೇ. ರಾತ್ರಿಯ ಊಟವೂ ಅಷ್ಟೇ ಬೆಳಗ್ಗೆ ಉಳಿದದ್ದನ್ನು ಹಾಕುತ್ತಿದ್ದು ಎಷ್ಟು ಬಾರಿ ಹೇಳಿದರು ಒಂದು ದಿನವೂ ಬಿಸಿ ಊಟ ತಿಂಡಿ ಹಾಕಲಿಲ್ಲ .ಆ ಡಿಸೆಂಬರ್ ಚಳಿಗೆ ಆ ಊರಿನ ವಾತಾವರಣಕ್ಕೆ ಆರಿದ್ದು ತಿನ್ನುವುದು ತುಂಬಾ ಹಿಂಸೆ ಎನಿಸುತ್ತಿತ್ತು. ಯಾವಾಗ ನಾವು ನಮಗೆ ಬೇರೆ ಮನೆ ಮಾಡುತ್ತೇವಪ್ಪಾ ಅಂತ ಅನ್ನಿಸತೊಡಗಿತ್ತು. ಯಾವುದೇ ಹಾಸ್ಟೆಲ್ ನಲ್ಲಿದ್ದು‌ ಅಭ್ಯಾಸ ಇಲ್ಲದ ನಮಗೆ ಹೊರಗಿನ ಊಟದ ಕಷ್ಟ ಏನೆಂದು ಆಗ ಅರ್ಥವಾಯಿತು. ಅಲ್ಲದೆ ಹೆಚ್ಚು ಕಡಿಮೆ ಮೂರು ಕಿಲೋಮೀಟರ್ ದೂರ ಇತ್ತು ಅದು ನಮ್ಮ ಕಚೇರಿಯಿಂದ. ಹೋಗಿ ಬರುವುದು ಸಹ ಕಷ್ಟವೇ. ಸದ್ಯ ಆಗ ಡಿಸೆಂಬರ್ ನಲ್ಲಿ ಮಳೆ ಇಲ್ಲದಿದ್ದರಿಂದ ಹೇಗೋ ನಡೆಯಿತು ಹಾಗಾಗಿ ಕಚೇರಿಗೆ ಹತ್ತಿರದ ಸ್ಥಳಗಳಲ್ಲಿ ನಾವು ಮನೆ ಹುಡುಕುತ್ತಿದ್ದು. ಕೆಲವು ದೂರದ ಪ್ರದೇಶ ಏರಿಯಾದಲ್ಲಿ ಮನೆ ಸಿಕ್ಕುತ್ತಿದ್ದರು ನಮ್ಮ ಬಳಿ ವಾಹನ ಇಲ್ಲದ್ದರಿಂದ ಅಲ್ಲಿನ ಮಳೆ ಸಮಯದಲ್ಲಿ ಓಡಾಡಲು ಕಷ್ಟ ಎಂದು ಎಲ್ಲರೂ ಹೇಳಿದ್ದರಿಂದ ದೂರದ ಏರಿಯಾಗಳಿಗೆ ಹೋಗಲು ಮನಸ್ಸು ಮಾಡಲಿಲ್ಲ.ಕಡೆಗೆ ಕಚೇರಿಯಿಂದ ಒಂದೇ ಕಿಲೋಮೀಟರ್ ದೂರ ಇದ್ದ ಕುಶಾಲನಗರ ಎಕ್ಸ್ಟೆಂಶನ್ ಎಂಬಲ್ಲಿ ಮಹಡಿಯ ಮೇಲೆ ಒಂದು ಮನೆ ಖಾಲಿ ಇದೆ ಎಂದು ತಿಳಿಯಿತು ರಾಜಮ್ಮ ಎನ್ನುವವರು ಅಲ್ಲಿನ ರಾಜಕೀಯ ಪುಡಾರಿ ಅವರದೇ ಮನೆ. ಕೆಳಗಡೆ ಅವರದೊಂದು ದೊಡ್ಡ ಮನೆ. ಪಕ್ಕದಲ್ಲಿ ಸ್ವಲ್ಪ ಜಾಗ ಅವರ ಮನೆಗೆ ಸೇರಿದಂತೆಯೇ ಮಹಡಿಯ ಮೇಲೆ ಎರಡು ಮನೆಗಳು ಅಲ್ಲಿ ಕೆಳಗಡೆ ಅಟಾಚ್ಡ್ ಬಾತ್ರೂಮ್ ಇರುವಂತಹ ಎರಡು ಕೊಠಡಿಗಳು. ಅಂತಹ ಒಂದು ಕೊಠಡಿಯಲ್ಲಿ ನಮ್ಮದೇ ಆಫೀಸಿನ ಹೊಸ ರೆಕ್ರೂಟ್ಮೆಂಟ್ ಆದ ಆನಂದ್ ಮತ್ತು ಮೋಹನ್ ಎನ್ನುವವರು ಇದ್ದುದರಿಂದ ಅವರ ಮೇಲಿನ ಮನೆ ಖಾಲಿಯಾಗುತ್ತದೆ ಎಂದು ತಿಳಿಸಿದರು. ಹಾಗಾಗಿ ಅಲ್ಲಿ ನೋಡಲು ಹೋದೆವು. ಅವರ ಮನೆಯಲ್ಲಿ ಟೀ ಚೌಚೌ ಆತಿಥ್ಯ ಸ್ವೀಕರಿಸಿ ಮನೆ ನೋಡಲು ಹೋದೆವು. ಒಂದು ರೂಮಿನ ಮನೆ. ಮನೆ ಏನೋ ಚೆನ್ನಾಗಿತ್ತು ಆದರೆ ಅಲ್ಲಿ ಯಾರು

Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಬಹುಮಾನ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಬಹುಮಾನ” ಸದ್ದು ಗದ್ದಲವಿಲ್ಲದಪ್ರಸಿದ್ಧಿ ಪ್ರಚಾರವಿಲ್ಲದಗಟ್ಟಿ ಜೀವಹಲವು ಕನಸುನಿತ್ಯ ಪಯಣಹೆಜ್ಜೆ ಹಾಕುವುದುನಿಂತಿಲ್ಲ ಸೋಲೋ ಗೆಲುವೋಗೊತ್ತಿಲ್ಲಅಳುಕು ಆತಂಕಆನಂದ ಐಸಿರಿಎಲ್ಲವೂ ವಿಧಿಯಾಟನಡೆದ ದಾರಿಯಶ್ರಮ ದೂರಸಂತೃಪ್ತಿ ಮೌನನನ್ನ ನಿನ್ನಯಪ್ರೀತಿ ಬಹುಮಾನ ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಬಹುಮಾನ” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಕವಿತೆ “ಬಚ್ಚಿಟ್ಟ ಬಯಕೆ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಬಚ್ಚಿಟ್ಟ ಬಯಕೆ” ಎದೆಯ ಗೂಡಿನಲ್ಲಿತುಂಬಿ ತುಳುಕುವಬಚ್ಚಿಟ್ಟ ಬಯಕೆಗಳನುಬಿಚ್ಚಿಡುವ ಆತುರ ಮನದ ಆಲಯದಲ್ಲಿಹುದುಗಿದ್ದ ಅದೆಷ್ಟೋಆಕರ್ಷಣೆಗಳ ಸೆಳೆತಕೆತೆರೆದುಕೊಳ್ಳುವ ಕಾತುರ ಮುಗಿಯದಷ್ಟು ಮಾತುಗಳುಮನದಾಳದಲ್ಲಿ ಮೊಳೆತಿವೆಚಿಗುರೊಡೆವ ಬಯಕೆಗೆಕನಸುಗಳು ಸಾವಿರ ಮಾತುಗಳು ಮೌನವಾಗಿಮೌನದಲ್ಲೇ ಹರಿಸಿ ಹಾರೈಸಿಸ್ಪಂದಿಸುವ ಜೀವಕ್ಕೆನೆನಪುಗಳ ನಿರಾಳತೆ ಮಧುರ ಕಾಣದ ಕಡಲನುಸೇರುವ ಕಾತುರಅಬ್ಬರದ ಅಳೆಗಳನ್ನುಅಪ್ಪಿಕೊಳ್ಳುವ ಅವಸರ ಆಕಾಶದ ನೀಲಿಗೆಕಾರ್ಮೋಡಗಳ ತೋರಣಇಳೆಗೆ ಮಳೆಯ ಸಿಂಚನಸೇರಲು ಮಾನಸ ಸರೋವರ ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಕವಿತೆ “ಬಚ್ಚಿಟ್ಟ ಬಯಕೆ” Read Post »

ಕಾವ್ಯಯಾನ

ಸಿದ್ದಲಿಂಗಪ್ಪ ಬೀಳಗಿ ಅವರ ತನಗಗಳು

ಕಾವ್ಯ ಸಂಗಾತಿ ಸಿದ್ದಲಿಂಗಪ್ಪ ಬೀಳಗಿ ತನಗಗಳು ೧ಸೋತು ಹೋದೆನೆನ್ನುವಪಾಪ ಪ್ರಜ್ಞೆ ಬಿಸಾಕುಗೆಲುವಿನ ಕುದುರೆಹತ್ತಿ ಓಡಿಸು ಸಾಕು೨ಸಾಸಿವೆಯ ತರಲುಸಾಲುಗಟ್ಟಿದ ಜನಸಾವಿಲ್ಲದ ಮನೆಯಹುಡುಕಿ ಕಳಾಹೀನ೩ನನ್ನ ನಿನ್ನ ನಡುವೆಸುಮ್ಮನೇಕೆ ಬಿರುಕುತಣ್ಣನೆಯ ಪ್ರೀತಿಯುನೆಮ್ಮದಿಯ ಸರಕು೪ಮುಡಿ ತುಂಬ ಮಲ್ಲಿಗೆಮೊಗದಿ ನಗು ಹಾರನೋಡುವ ಮನದಲಿಪ್ರೀತಿ ಪೋಣಿಸು ದಾರ೫ಊರ ಮಂದಿಗೆ ಅಂಜಿಊರೂರು ಸುತ್ತಿದಾತದಾರಿ ಸರಿದ ಮೇಲೆವಾಸ್ತವಕೆ ಬಂದಾತ೬ನಗೆ ಬೀರಿದಾಗೊಮ್ಮೆಎದೆಯಲಿ ನಡುಕಹದವಾಗಿ ತಬ್ಬಲುಬಿಸಿ ಗಾಳಿಯ ತಾಪ ಸಿದ್ದಲಿಂಗಪ್ಪ ಬೀಳಗಿ

ಸಿದ್ದಲಿಂಗಪ್ಪ ಬೀಳಗಿ ಅವರ ತನಗಗಳು Read Post »

ಇತರೆ

“ವಿಶ್ವ  ಮಾತೃ ಭಾಷಾ ದಿನ” ಗಾಯತ್ರಿ ಸುಂಕದ

ಭಾಷಾ ಸಂಗಾತಿ “ವಿಶ್ವ  ಮಾತೃ ಭಾಷಾ ದಿನ” ಗಾಯತ್ರಿ ಸುಂಕದ ನಮ್ಮ ಜೀವನದಲ್ಲಿ  ತಾಯಿ, ತಾಯ್ನಾಡು, ಹೇಗೆ ಮುಖ್ಯವೋ ಹಾಗೆ ತಾಯಿ ನುಡಿ ಕೂಡ ಅಷ್ಟೇ ಮುಖ್ಯ.ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎನ್ನುವಂತೆ ನಮ್ಮ ಮಾತೃ ಭಾಷೆ ಶುರು ಆಗುವುದು ನಮ್ಮ ಮನೆಯಲ್ಲಿ.ಮಾತೃ ಭಾಷೆ ನಮ್ಮ ಭಾವನೆಗಳಿಗೆ ಕನ್ನಡಿ ಇದ್ದ ಹಾಗೆ.ನಾವು ಎಷ್ಟೇ ಬೇರೆ ಭಾಷೆಗಳಲ್ಲಿ ಪರಿಣಿತಿ ಇದ್ದರೂ. ನಮ್ಮ ಭಾವನೆಗಳು ಮಾತೃಭಾಷೆ ಮುಖಾಂತರ ಹೊರ ಬರುತ್ತವೆ.ನಮಗೆ ದುಃಖ ಬಂದಾಗ ಅಯ್ಯೋ ರಾಮ  ಅನ್ನುತ್ತವೆಯೋ ಹೊರತು ಬೇರೆ ಯಾವ ಶಬ್ದ ಗಳು ಬರುವುದಿಲ್ಲ.ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ದೇವರಿಗೆ ಬೇಡಿ ಕೊಳ್ಳಬೇಕಾದಾಗ. ಕೇವಲ ಮಾತೃಭಾಷೆಯಲ್ಲಿ ಬೇಡಿಕೊ, ದೇವರು ಒಲಿಯುತ್ತಾನೆ ಎನ್ನುತ್ತಿದ್ದರು. ಹೀಗಾಗಿಯೇ ಈಗಲೂ ದೇವರ ಮುಂದೆ ನಿಂತಾಗ ನಮ್ಮ ಪ್ರಾರ್ಥನೆಗಳು ನಮ್ಮ ಆಡು ಭಾಷೆಯಲ್ಲಿ ಹೊರ ಬರುತ್ತವೆ.ನಮ್ಮ ಮಾತೃಭಾಷೆ ನಮ್ಮನ್ನು ಪ್ರತಿನಿಧಿಸುತ್ತದೆ. ಲಂಬಾಣಿ ಭಾಷೆ, ಕೊಂಕಣಿ ಭಾಷೆ,  ತುಳು ಭಾಷೆ ಈಗಲೂ ಉಳಿಯಬೇಕಾದರೆ ಮುಖ್ಯ ಕಾರಣ ಎಂದರೆ ಅವು ಕೆಲ ಪ್ರದೇಶದ ಜನರ ಮಾತೃಭಾಷೆ  ಆಗಿವೆ. ಕೆಲವೊಂದು  ಮಾತೃ ಭಾಷೆಗಳು ಲಿಪಿ ಇಲ್ಲದೆ ಇದ್ದರೂ ಈಗಲೂ ತಮ್ಮ ಅಸ್ತಿತ್ವವನ್ನು ಉಳಿಸಿ ಕೊಂಡಿವೆ.ನಮಗೆ ಕೆಟ್ಟ  ಕನಸು ಬಿದ್ದರೆ ಅಮ್ಮ ಎಂದು ಕೂಗುತ್ತೇವೆ ಹೊರತು  ಬೇರೆ ಯಾವ. ಭಾಷೆ ನಮ್ಮನ್ನು ಕೈ ಹಿಡಿಯುವುದಿಲ್ಲ.ಬನ್ನಿಮಾತೃ ಭಾಷೆ ಯನ್ನೂ ಉಳಿಸಿ ಬೆಳೆಸೋಣ. ಗಾಯತ್ರಿ ಸುಂಕದ

“ವಿಶ್ವ  ಮಾತೃ ಭಾಷಾ ದಿನ” ಗಾಯತ್ರಿ ಸುಂಕದ Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು “ಜೀವನ-ಮರಣ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಜೀವನ-ಮರಣ” ಅಯ್ಯೋ ಪ್ರಾಣವೇ…ನಿನಗಲ್ಲ, ನನಗಾಗಿದೆ ಪ್ರಾಯ,ತ್ರಾಣವಿಲ್ಲದ ಎಲುಬುಗಳ ಮಧ್ಯೆಉಸಿರೊಂದೇ ಈಗ ಉಳಿದಿರಲು,! ಪ್ರಾಣವೆಂಬ ಈ ಜೀವಾತ್ಮವುಜೀವನದಾಟಗಳ ಮುಗಿಸಿ ಕೂತಿದೆ,ಉಸಿರು ಹಾರುವ ತವಕದಲಿಜೀವನದ ಬಯಕೆಗಳ ಮುಗಿಸಲು,! ಬರೀ ಗೋಳು, ಈ ಬದುಕುದೇವನೇ ತೆಗೆದು ಬಿಡು ಪ್ರಾಣವ,ನನ್ನೂಸಿರನು ಈ ದೇಹದಿಂದೊಮ್ಮೆಈ ಜನ್ಮವು ಸಾಕು, ಮುಗಿಸಿ ಬಿಡಲು,! ಯಾರಿಗೂ ಹೊರೆಯಾಗದೆಯಾರಿಂದಲೂ ನನ್ನ ತಿರಸ್ಕರಿಸದೆನೋಯಿಸುವ ಮುನ್ನ, ನನ್ನನ್ನೊಮ್ಮೆಕರೆಸಿ ಬಿಡು ದೇವ, ನಿನ್ನ ಬಳಿ ಸೇರಲು,! ನನ್ನಾತ್ಮವನು ಸ್ವೀಕರಿಸಿನಿನ್ನೊಡನೆ ಸುಖವಾಗಿರಲು ಬಿಡು,ನನ್ನಯ ಸತ್ಕರ್ಮಗಳೊಮ್ಮೆಬೇಗನೆ ತೂಲನೆ ನೀ ಮಾಡಿ ಬಿಡಲು,! ದುಷ್ಟರಿಂದ ತುಂಬಿದ ಜಗತ್ತುಜಗಮಗಿಸುತ್ತಿರಲು,ನಾನಿರಲಾರೆ,ಹಿಂಸಿಸಿ ಕೊಲ್ಲುವ ಜನರೊಳಗಿಂದಸುರಕ್ಷಿತ ಮರಣವನು ದಯಪಾಲಿಸಲು.! ಹಮೀದ್ ಹಸನ್ ಮಾಡೂರು

ಹಮೀದ್ ಹಸನ್ ಮಾಡೂರು “ಜೀವನ-ಮರಣ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಚೂರಾದ ಮನ ಗಾಜು”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ ಅ “ಚೂರಾದ ಮನ ಗಾಜು” ಹೆಣ್ಣು ಮೃದು ಮನದ ಪಯಣದಲಿಮುಗ್ಧ ಮನದ ಹೂ ತೋಟದಲ್ಲಿನಂಬಿಕೆಯ ಹೂಗಳು ಅರಳಿದಾಗ,ಸಿಹಿ ಮಾತಿನ ಮಳೆ ಸುರಿಸಿಮನ ಕದಡುವ ಕಟುಕರು ನೆರಳಾಗಿ ನಿಲ್ಲಬೇಕಾದವರುಕಟುವಾಗಿ ವರ್ತನೆ ತೋರುವರುನಂಬಿಕೆಗೆ ಅರ್ಹತೆ ಇಲ್ಲದವರುಮೋಸದ  ಮುಖವಾಡದವರು ಕಣ್ಣಿನಲ್ಲಿ ಕನಸು ಕಟ್ಟಿಸಿನಾಳೆಯ ಚಿತ್ರ ಬರೆದವರು,ಅದೇ ಕೈಯಿಂದ ಕನಸು ಕಿತ್ತುಮೌನದ ಗಾಯ ಬಿತ್ತಿದವರು. ಹೃದಯವೆಂಬ ನಾಜೂಕಿನ ಗಾಜಿಗೆಸುಳ್ಳಿನ ಕಲ್ಲು ತೂರಿದವರುಚೂರುಚೂರಾದ ಪ್ರತಿಬಿಂಬದಲ್ಲಿನಗುವೂ ಕಳೆದುಹೋಗಲು ಕಾರಣವಾದವರು ಆದರೂ  ಹೆಣ್ಣು ಮಣ್ಣಲ್ಲಮಳೆ ಬಂದರೂ ಕರಗದ ಶಿಲೆ.ಗಾಯಗಳನ್ನೇ ಗರಿಗರಿಯಾಗಿ ಮಾಡಿಹೊಸ ಬದುಕಿಗೆ ಹೆಜ್ಜೆ ಇಡುವವಳು ಆಕೆಯ ಭಾವನೆಗಳ ಜೊತೆ ಆಟವಾಡುವವರಿಗೆಒಂದು ದಿನ ಅರಿವಾಗುತ್ತದೆಹೆಣ್ಣು ಮನವೆಂಬ ಸಮುದ್ರದ ಆಳವನ್ನು ಅಳೆಯಲು  ಸಾಧ್ಯವಾಗದು ಎಂದು. ಹೆಣ್ಣು ಹೃದಯವನ್ನು ನೋಯಿಸಿದ  ಮನ ,ಕೈಗಳುಒಮ್ಮೆ ಖಾಲಿಯಾಗುವ ಅರಿವಾಗುವುದೇ!ಆದರೆ ಆಕೆಯ ಆತ್ಮಸಮ್ಮಾನಎಂದೆಂದಿಗೂ ಎತ್ತರದಲ್ಲೇ ಇರುವುದು ಡಾ ತಾರಾ ಬಿ ಎನ್ ಧಾರವಾಡ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಚೂರಾದ ಮನ ಗಾಜು” Read Post »

You cannot copy content of this page

Scroll to Top