ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಹಬ್ಬಗಳ ಆಚರಣೆ ಅಂದು ಇಂದು…”   ವಿಶೇಷ ಲೇಖನ,ಪ್ರೊ .ರಾಜೇಶ್ವರಿ ಶೀಲವಂತ ಪುಣೆ

ಸಂಸ್ಕೃತಿ ಸಂಗಾತಿ ಪ್ರೊ .ರಾಜೇಶ್ವರಿ ಶೀಲವಂತ ಪುಣೆ “ಹಬ್ಬಗಳ ಆಚರಣೆ ಅಂದು ಇಂದು…”   ಹಿಂದೂ ಧಾರ್ಮಿಕತೆ ಸಂಕ್ರಾಂತಿ, ಹೋಳಿ,ಯುಗಾದಿ,ಗಣೇಶ ಚತುರ್ಥಿ, ದಸರಾ,ದೀಪಾವಳಿ ಮುಂತಾದ ಹಬ್ಬಗಳನ್ನೊಳಗೊಂಡಿದೆ.  ಈ ಎಲ್ಲ ಹಬ್ಬಗಳಲ್ಲಿ  ಮೊದಲ ಆಚರಣೆ ಸಂಕ್ರಾಂತಿ. ಅದನ್ನು ಸ್ವಲ್ಪ ವಿವರವಾಗಿ ನೋಡೋಣ.ಸಂಕ್ರಾತಿ ಹಬ್ಬ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಕೇರಳ, ತಮಿಳ್ನಾಡು ಮುಂತಾದ ಕಡೆಗಳಲ್ಲಿ ಮುಖ್ಯ ಹಬ್ಬವಾಗಿ ಆಚರಿಸಲಾಗುತ್ತದೆ.ರೈತರು ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲ್ಪಡುವದರಿಂದ ಇದು  ಸಮೃದ್ಧಿಯ ಸಂಕೇತ.               ಸಂಕ್ರಾಂತಿ ಹಬ್ಬವನ್ನು ಎಲ್ಲ ಪ್ರದೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಉದಾಹರಣೆಗೆ , ಬೆಳೆ ಪೂಜೆ, ಸೂರ್ಯ ಪೂಜೆ,ನೃತ್ಯ, ಗಾಳಿಪಟ ಹಾರಿಸುವುದು, ನದಿ ಸ್ನಾನ ,ಮುಂತಾದುವುಗಳು. ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲ ಎನ್ನುತ್ತಾರೆ. ಈ ಹಬ್ಬದ   ದಿನದಿಂದ ಹಗಲು ಜಾಸ್ತಿಯಾಗಿ ರಾತ್ರಿ ಕಡಿಮೆಯಾಗುವುದು.ಅದೇರೀತಿ ಬಿಸಿಲಿನ ತಾಪಮಾನ ಕೂಡ ಜಾಸ್ತಿಯಾಗುತ್ತಾ ಹೋಗುತ್ತದೆ.                ಈ ಸಂಕ್ರಾಂತಿ ಹಬ್ಬ ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸಲಾಗುವುದು.ಇದು ರೈತರ ಪಾಲಿಗೆ ಸುಗ್ಗಿ ಹಬ್ಬ.ಅಂದರೆ ಅರಿಶಿಣ, ಕಬ್ಬು,ಗೋಧಿ,ಜೋಳ, ಭತ್ತ ಮುಂತಾದ ಭೂಮಿಯ ಮೇಲೆ ಬೆಳೆದ ಇವುಗಳಿಗೆ ಜೀವ ಶಕ್ತಿ  ತುಂಬಿದ ಆ ಸೂರ್ಯ ದೇವನಿಗೆ ಪೂಜೆ ಹಾಗು ನೈವೇದ್ಯದ ಮೂಲಕ ಕೃತಜ್ಞತೆ ಸಮರ್ಪಿಸುವರು.              ಕರ್ನಾಟಕದ ಸಂಕ್ರಾಂತಿಯ ಖಾದ್ಯಗಳು ಎಂತವರಿಗೂ ಬಾಯಲ್ಲಿ ನೀರೂರಿಸುತ್ತವೆ ಹಾಗು ಚಳಿಗಾಲದ ಚಳಿಯಿಂದ ತಣ್ಣಗಾದ ದೇಹವನ್ನು ಬೆಚ್ಚ ಗಿಡಲು ವೈಜ್ಞಾನಿಕ ರೀತಿಯಲ್ಲಿ ಸಹಾಯ ಮಾಡುತ್ತವೆ. ನೈಸರ್ಗಿಕವಾಗಿ ದೇಹಕ್ಕೆ ಉಷ್ಣತೆ ನೀಡುವ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಶೇಂಗಾ ಮತ್ತು ಎಳ್ಳು ಮಿಶ್ರಣದ ಹೋಳಿಗೆ, ಹೂರಣ ಹೋಳಿಗೆ, ಮಾದಲಿ, ಕಫ ನಿವಾರಿಸುವ ಬದನೆಕಾಯಿ ಭರಿತ ,ಶೇಂಗಾ ಚಟ್ನಿ, ಅಗಸೆ ಚಟ್ನಿ, ಬೆಣ್ಣೆ,ಮೊಸರು, ಜುಣಕದ ವಡಿ, ಮಡಿಕೆ ಕಾಳು ಉಸುಳಿ,ಗಜಿಬಿಜಿ ಪಲ್ಯ,ಪಚಡಿ, ಹುಳಿಬಾನ, ಹೀಗೆ ಹತ್ತು ಹಲವಾರು ಖಾದ್ಯಗಳು.ಇವೆಲ್ಲವನ್ನೂ ಒಬ್ಬರ ಮನೆಯಿಂದ ಇನ್ನೊಬ್ಬರ ಮನೆಗೆ ಹಂಚುವುದರ ಮೂಲಕ ಬಾಂಧವ್ಯ ಬೆಸೆಯಲಾಗುವುದು.           ಸಾಯಂಕಾಲ ಹೊಸ ಬಟ್ಟೆ ತೊಟ್ಟು , ಹಿರಿಯರಿಗೆ ಎಳ್ಳು ಬೆಲ್ಲದ ವಿನಿಮಯದೊಂದಿಗೆ ನಮಸ್ಕಾರ.  ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ, ಎಳ್ಳು ಬೆಲ್ಲ ತೊಗೊಂಡು ಎಳ್ಳು ಬೆಳ್ಳದಂಗಿರೋಣ ಅಂತ ಹೇಳುವುದು.  ಶಾಂತಿ ,ಪ್ರೀತಿ ಮತ್ತು ಸೌಹಾರ್ದತೆಯ ಸಂಕೇತವೇ ಈ ಮಕರ ಸಂಕ್ರಾಂತಿಯಾಗಿತ್ತು ಅಂದು.                ಇನ್ನು ಹೋಳಿ ಹಬ್ಬ ,ನಾಡಿನಾದ್ಯಂತ ವಸಂತ ಕಾಲದ ಆಗಮನವೆಂದು ಪರಿಗಣಿಸಲಾಗಿದೆ.  ವಿವಿಧ ಬಣ್ಣದ ಓಕುಳಿ ಆಟ ,ಹಲಗೆ ಬರಿಸುವುದು, ಕಾಮ ದಹನ, ಇವೆಲ್ಲವನ್ನೊಳಗೊಂಡಿದೆ. ಅದೇ ರೀತಿ ಯುಗಾದಿ ಹಬ್ಬವನ್ನು ಹಿಂದೂಗಳ ಹೊಸ ವರುಷವೆಂದು ಪರಿಗಣಿಸುತ್ತೇವೆ. ಇದನ್ನು ದೇವರ ಪೂಜೆ, ಹಿರಿಯರ ಪೂಜೆ, ಅಂಗಡಿ ಪೂಜೆಯೊಂದಿಗೆ ಆಚರಿಸಲಾಗುವುದು.  ಅಂಗಡಿಕಾರರು ಹೊಸ ಲೆಕ್ಕ ಪತ್ರ ಪ್ರಾರಂಭಿಸುವರು. ಜೀವನದ ಸಿಹಿ ಕಹಿ ಸಮನಾಗಿ ಕಾಣೋಣ ಅಂತ ಬೇವು ಬೆಲ್ಲ ನೈವೇದ್ಯ ಮಾಡಿ  ಎಲ್ಲರೂ ಸೇವಿಸುವರು.             ಗಣೇಶ್ ಚತುರ್ಥಿಯನ್ನು ನಾಡಿನಾದ್ಯಂತ ಎಲ್ಲೆಡೆ ಆಚರಿಸುವರು. ಮಹಾರಾಷ್ಟ್ರದಲ್ಲಿ ಈ  ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾರೆ.   ವಿಘ್ನ ನಾಶಕನಾದ ವಿನಾಯಕನಿಗೆ ಧೂಪ, ದೀಪ , ನೈವೇದ್ಯಗಳನ್ನು ಭಕ್ತಿಯಿಂದ ಸಮರ್ಪಿಸುವರು. ಇನ್ನು ನಾಡ  ಹಬ್ಬ ಎಂದು ಕರೆಯುವ ದಸರಾ ಹಬ್ಬವನ್ನು ಹಲವಾರು ದೇಶಗಳಲ್ಲಿ ವಿಭಿನ್ನವಾಗಿ ಆಚರಿಸುವರು.ಕರ್ನಾಟಕದ ಮೈಸೂರಿನ ದಸರಾ ಆಚರಣೆ ತುಂಬಾ  ವಿಜೃಂಭಣೆಯಿಂದ ನಡೆಯುತ್ತದೆ. ಹಲವೆಡೆ ನವರಾತ್ರಿಯ ಆಚರಣೆಯ ಮೂಲಕ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಆರಾಧಿಸಲಾಗುವದು. ಹತ್ತನೇ ದಿವಸ  ರಾವಣನ ಪ್ರತಿಮೆ ದಹನ ಮಾಡುವುದರ ಮೂಲಕ ಶ್ರೀರಾಮನ ವಿಜಯೋತ್ಸವವನ್ನು ಮೆರೆಯಲಾಗುವುದು.                     ವರ್ಷದ ಕೊನೆಯ ಹಬ್ಬವಾಗಿ ದೀಪಾವಳಿಯನ್ನು ಜಗದಾದ್ಯಂತ ಬೆಳಕಿನ ಹಬ್ಬವೆಂದು ಸಂಬ್ರಮಿಸಲಾಗುವದು.  ಐದು ದಿನಗಳ ಹಬ್ಬವಾದ ದೀಪಾವಳಿಯ ಮೊದಲ ದಿನ ನೀರು ತುಂಬುವ ಹಬ್ಬ, ಎರಡನೇ ದಿನ ನರಕಚತುರ್ದಶಿ, ಮೂರನೇ ದಿನ ದೀಪಾವಳಿ ಅಮವಾಸ್ಯೆ, ನಾಲ್ಕನೇ ದಿನ ಬಲಿ ಪಾಡ್ಯ ಹಾಗೂ ಐದನೇ ದಿನ ಕಡೆ ಪಾಡ್ಯ  . ಒಂದೊಂದು ದಿನಕ್ಕೂ  ತನ್ನದೇ ಆದ ಮಹತ್ವ ಇದೆ. ಬಣ್ಣ ಬಣ್ಣದ ರಂಗೋಲಿ, ಹೂವುಗಳ ಅಲಂಕಾರ, ಪೂಜೆ, ಹೊಸ ಬಟ್ಟೆ, ಸಿಹಿ ತಿಂಡಿಗಳ ವಿನಿಮಯ ನವ ವಿವಾಹಿತರಿಗೆ ಪ್ರಾಧಾನ್ಯ. ಮುಂತಾದುವುಗಳನ್ನು ಇಲ್ಲಿ  ಕಾಣಬಹುದು.                      ಆದರೆ ವಿಷಾಧದ ಸಂಗಾತಿ ಎಂದರೆ  ಆಧುನಿಕತೆಯ ಹೆಸರಿನಲ್ಲಿ ಇಂದು ಹಬ್ಬಗಳ ಪ್ರಾಧಾನ್ಯತೆ ಕಡಿಮೆಯಾಗಿದೆ. ನೌಕರಿಯ ಒತ್ತಡದಲ್ಲಿ, ಸಮಯದ ಅಭಾವದಲ್ಲಿ  ಹಬ್ಬಗಳ  ಆಚರಣೆಯ ಹುರುಪು ಉಳಿದಿಲ್ಲ.  ಅವಿಭಕ್ತ ಕುಟುಂಬದಲ್ಲಿ ಎಲ್ಲ ಖಾದ್ಯಗಳನ್ನು ತಯಾರಿಸುತ್ತಿದ್ದರು. ಎಲ್ಲ ಸಂಪ್ರದಾಯಗಳನ್ನು ಸಂಭ್ರಮಿಸುತ್ತಿದ್ದರು.ಈಗಿನ ವಿಭಕ್ತ ಕುಟುಂಬಕ್ಕೆ ಮಾಡುವುದು ತಿನ್ನುವುದು ಎರಡೂ ಗೊತ್ತಿಲ್ಲ.  ಸ್ವಿಗ್ಗಿ, ಜೋಮಾಟೋಗಳಿಂದ ಪಿಜ್ಜಾ,ಬರ್ಗರ್, ಮ್ಯಾಗಿಗಳ ರುಚಿ ಕಂಡೋರಿಗೆ ಮೇಲಿನ ಅಡುಗೆಗಳ ಬೆಲೆಯೇ ಗೊತ್ತಿಲ್ಲ. ಹಬ್ಬದ ಸಿಹಿ ತಿಂಡಿಗಳು ಕೂಡಾ  ಆನ್ಲೈನ್ನಲ್ಲಿಯೇ ತರಿಸುವರು .ಸಂಕ್ರಾಂತಿಯ ಎಳ್ಳು ಬೆಲ್ಲದ ವಿನಿಮಯದಿಂದ  ಹಿಡಿದು ದೀಪಾವಳಿಯ ಸಿಹಿ ತಿಂಡಿಗಳು ಕೂಡಾ ವಾಟ್ಸಾಪ್ನಲ್ಲಿಯೇ ಹಂಚಲಾಗುವುದು. ಹಿರಿಯರ ನಮಸ್ಕಾರ ,        ಆಶೀರ್ವಾದವಂತೂ ತುಂಬಾ ದೂರದ ಮಾತು. ಯಾರಿಗೂ ಉತ್ಸಾಹನೂ ಇಲ್ಲ , ಆಸಕ್ತಿನೂ ಇಲ್ಲ.  ಯುವ ಜನಾಂಗದ ಸೌಹಾರ್ಧ ಭಾವ ಮೆರೆಯುವ ಎಲ್ಲ ಸಂಸ್ಕಾರ ಮತ್ತು ಸಂಪ್ರದಾಯಗಳೂ  ದಿನೇ ದಿನೇ ಮರೆಯಾಗುತ್ತಿವೆ.  ಪ್ರೊ .ರಾಜೇಶ್ವರಿ ಶೀಲವಂತ ಪುಣೆ

“ಹಬ್ಬಗಳ ಆಚರಣೆ ಅಂದು ಇಂದು…”   ವಿಶೇಷ ಲೇಖನ,ಪ್ರೊ .ರಾಜೇಶ್ವರಿ ಶೀಲವಂತ ಪುಣೆ Read Post »

ಕಾವ್ಯಯಾನ

ನಿರಂಜನ ಕೇಶವ ನಾಯಕ “ಶೂನ್ಯದ ಸವಿ”

ಕಾವ್ಯ ಸಂಗಾತಿ ನಿರಂಜನ ಕೇಶವ ನಾಯಕ “ಶೂನ್ಯದ ಸವಿ” ನಿದ್ದೆ ಸುಲಭದಿ ಒಲಿದರೆ ವರಕಳೆವುದು ಬಾಳಿನ ದಿನದ ಭಾರಕನಸ ಕಂಗಳಿಗೆ ಈತ ಸರದಾರಮಂಜಿನಷ್ಟು ಈಗ ಮನ ಹಗುರ. ಕುಳಿತಲ್ಲೇ ತೂಕಡಿಕೆಯ ತಡವರಿಕೆಬೇಸರ ತೀರದ ಬವಣೆಯ ಹರಕೆತಂಗಾಳಿಯ ಸವಿಯ ಬೀಸಣಿಕೆಇರದು ಸಂಕೋಲೆಗಳ ಎಣಿಕೆ. ಜಗವ ಮರೆತು ಶೂನ್ಯವಾಗಿಕಂಡ ಕಲ್ಪನೆಯ ಮಗುವಾಗಿಹಿತವಾಗಿ ಉಸಿರನೇರಿ ಸಾಗಿರೋಗಿಯೂ ಆಗುವನು ಭೋಗಿ. ಕಾಯಕ್ಕಿರಲಿ ವಿರಾಮದ ಜಾಗನಿರಂತರತೆ ತರುವುದು ರೋಗಅಲ್ಪಕಾಲದ ಈ ವೈಭೋಗಸಿಗದಿದ್ದರೆ ಇರದು ಸುಯೋಗ. ನಿರಂಜನ ಕೇಶವ ನಾಯಕ

ನಿರಂಜನ ಕೇಶವ ನಾಯಕ “ಶೂನ್ಯದ ಸವಿ” Read Post »

ಕಾವ್ಯಯಾನ, ನಿಮ್ಮೊಂದಿಗೆ

ಶ್ರೀದೇವಿ ಗುಮ್ಮಗೋಳ ಅವರ ಕವಿತೆ “ಜಗದ ಕವಿ”

ಕಾವ್ಯ ಸಂಗಾತಿ ಶ್ರೀದೇವಿ ಗುಮ್ಮಗೋಳ “ಜಗದ ಕವಿ” ಓ ಕವಿ ನಾಯಕ ಕುವೆಂಪುನೀವ ಬರೆದ ಕವನಗಳ ಇಂಪುನೀಡಿದೆ ಕನ್ನಡ ಸಾಹಿತ್ಯಕ್ಕೆ ತಂಪುಪಸರಿಸಿದೆ ಹಾವ ಭಾವಗಳ ಕಂಪು| ಹಸ್ತದ ಸಂಗೀತಕ್ಕೆ ನಾಟ್ಯವಾಡಿತು ‘ನವಿಲು’|ಪದಪುಂಜ ನಾದದ ‘ಕೊಳಲು’ಗೆಮೊಳಗಿತು ‘ಪಾಂಚಜನ್ಯ’|ಕನ್ನಡವಾಯಿತು ಧನ್ಯ| ಕನ್ನಡ ನಿಸರ್ಗದಲ್ಲಿಮೂಡಿಬಂದ ‘ಪಕ್ಷಿ ಕಾಶಿ’|ಕನ್ನಡ ಮಾತೆಯ ಮಡಿಲಲ್ಲಿಬೆಳದ  ‘ಷೋಡಶಿ’ ಕನ್ನಡ ಸಾಗರದ ಆಳದಿಂದಹೊರಬಂದ ಮುತ್ತು|ನೀಡಿದ್ದು ನಮ್ಮಗೆಲ್ಲಶಾಶ್ವತ ಸಾಹಿತ್ಯ ಸೊತ್ತು| ಅಮೋಘ ಸೇವೆಯ ಫಲದೊರೆತ ಅಗ್ರ ಜ್ಞಾನ ಪೀಠ ಪ್ರಶಸ್ತಿ|ತಾವು ಎಂದೆಂದು ಮರೆಯಾಲಗದಕನ್ನಡ ಕುಲಕೋಟಿಯ ಆಸ್ತಿ |        ಶ್ರೀದೇವಿ ಗುಮ್ಮಗೋಳ

ಶ್ರೀದೇವಿ ಗುಮ್ಮಗೋಳ ಅವರ ಕವಿತೆ “ಜಗದ ಕವಿ” Read Post »

ಕಾವ್ಯಯಾನ

ಡಾ. ಡೋ. ನಾ. ವೆಂಕಟೇಶ ಕವಿತೆ,”ಮತ್ತೊಂದು ಶ್ರೀಕಾರ”

ಕಾವ್ಯ ಸಂಗಾತಿ ಡಾ. ಡೋ. ನಾ. ವೆಂಕಟೇಶ “ಮತ್ತೊಂದು ಶ್ರೀಕಾರ” ನನ್ನಿಂದಾಗುವುದಿಲ್ಲಗೆಳೆಯಾ ಈಗೀಗಬರೆಯಲಿಕ್ಕೆ ಕೊಟ್ಟ ಈ ಚಿತ್ರಕ್ಕೆ ಆ ವಿಚಿತ್ರಕ್ಕೆ! ಹೂ ಹಣ್ಣು ಗಿರಿ ಪಂಕ್ತಿಗಳ ಜಾಡುಹಕ್ಕಿ ಪಿಕ್ಕಿಗಳ ನೃತ್ಯಮನುಜರ ಕೃತ್ಯರಕ್ಕಸರ ಕುಕೃತ್ಯ ಕುರಿತೋದದ ಜೀವನ ಕಹಳೆಗಳುಕೇಳರಿಯದ ಸುಗಂಧದ ಚೆಂದಹೂವಿನ ಪಕಳೆಆಕಾಶದ ನಕ್ಷತ್ರ ರಾತ್ರಿ ಹಗಲುಗನಸು ಹಾಗೂಮತ್ತಷ್ಟು ಬ್ರಹ್ಮಾಂಡಗಳು! ಹೇಗೆ ಬರೆಯಲಿ ಗೆಳೆಯ ಉದ್ದುದ್ದ ಸಾಲುಗಳುನಿರ್ಮೋಹಿ ಮನಸುಗಳುನಿರ್ದಯ ಕನಸುಗಳುಅಗಮ್ಯ ಅನೂಚನ ಕಾಯಗಳುಬಾಡಿದ ಮೊಗ್ಗುಗಳು. ಹೇಗೆ ಬರೆಯಲಿ ಕಥೆಶಾಯಿ ಮುಗಿಯುವ ಮುನ್ನಬರೆದ ಲೆಕ್ಕಣಿಕೆ ಮುರಿದು ಹೋಗುವ ಮುನ್ನ? ಮತ್ತಷ್ಟುಕವನ ಕಗ್ಗಂಟು ಮುಗ್ಗಂಟುಧಾರಾವಾಹಿಯಾಗಿ ಹೊಸತೊಂದು ಅಧ್ಯಾಯಹೊಸೆಯುವ ಮುನ್ನ-ಹೇಗೆ ಹಾಡಲಿ ಹೊಸ ರಾಗ! ಹೇಗೆ ಬರೆಯಲಿ ಚಿನ್ನಮತ್ತೊಂದು ಶ್ರೀಕಾರಕ್ಕೆಚೆನ್ನುಡಿ ಹಾಕುವ ಮುನ್ನಕ್ಕೆ! ಡಾ. ಡೋ. ನಾ. ವೆಂಕಟೇಶ

ಡಾ. ಡೋ. ನಾ. ವೆಂಕಟೇಶ ಕವಿತೆ,”ಮತ್ತೊಂದು ಶ್ರೀಕಾರ” Read Post »

ಅನುವಾದ

ಅಕ್ಕ ಮಹಾದೇವಿಯ ವಚನ ತಮಿಳಿಗೆ ಅನುವಾದ : ಶಶಿಕಲಾ ಪಿ

ಅನುವಾದ ಸಂಗಾತಿ ಅಕ್ಕ ಮಹಾದೇವಿಯ ವಚನ ತಮಿಳಿಗೆ ಅನುವಾದ : ಶಶಿಕಲಾ ಪಿ ಕಾಯಕ್ಕೆ ನೆರಳಾಗಿ ಕಾಡಿತ್ತು ಮಾಯೆಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆಮನಕ್ಕೆ ನೆನಹಾಗಿ ಕಾಡಿತ್ತು ಮಾಯೆನೆನಹಿಗೆ ಅರಿವಾಗಿ ಕಾಡಿತ್ತು ಮಾಯೆಅರಿವಿಗೆ ಮರೆವಾಗಿ ಕಾಡಿತ್ತು ಮಾಯೆಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆಚೆನ್ನಮಲ್ಲಿಕಾರ್ಜುನಾ, ನೀನೊಡ್ಡಿದ ಮಾಯೆಯನಾರಿಗೂ ಗೆಲಬಾರದು. Illusion had haunted the body as shadowIllusion had haunted the life as mindIllusion had haunted the mind as memoryIllusion had haunted the memory as knowledgeIllusion had haunted the knowledge as oblivionIllusion had haunted the masses of the world rasing the fire stickChennamallikarjuna, no-one should win the illusion that you build. உடலுக்கு நிழலாய் இடற்படுத்தது மாயைஉயிருக்கு மணமாய் இடர்படுத்தது மாயைமனசுக்கு நினைவாய் இடற்படுத்தது மாயைநினைவுக்கு அறிவாய் இடற்படுத்தது மாயைஅறிவுக்கு மரதியாய் இடற்படுத்தது மாயைஉலகத்தின் திரளுக்கு தீவட்டியாய் எடுத்துஇடற்படுத்தது மாயைசெண்ணமல்லிகார்ஜுனா, நீ தந்த மாயேயை யாருக்கும் வெற்றிக்கொள்ளக்கூடாது ಉಡಲುಕ್ಕು ನಿಳಲಾಯ್ ಇಡರ್ಪಡುತ್ತದು ಮಾಯೈಉಯಿರುಕ್ಕು ಮನಮಾಯ್ ಇಡರ್ಪಡುತ್ತದು ಮಾಯೈಮನಸುಕ್ಕು ನಿನೈವಾಯ್ ಇಡರ್ಪಡುತ್ತದು ಮಾಯೈನಿನೈವುಕ್ಕು ಅರಿವಾಯ್ ಇಡರ್ಪಡುತ್ತದು ಮಾಯೈಅರಿವುಕ್ಕು ಮರತಿಯಾಯ್ ಇಡರ್ಪಡುತ್ತದು ಮಾಯೈಉಲಗತ್ತಿನ್ ತಿರಳುಕ್ಕು ತೀವಟ್ಟಿಯಾಯ್ ಎಡುತ್ತು ಇಡರ್ಪಡುತ್ತದು ಮಾಯೈಚೆನ್ನಲ್ಲಿಕಾರ್ಜುನಾ, ನೀ ತಂದ ಮಾಯೆಯೈ ಯಾರುಕ್ಕುಂ ವೆಟ್ರಿಕ್ಕೊಳ್ಳಕ್ಕೂಡಾದು ಅಕ್ಕ ಮಹಾದೇವಿಯ ವಚನಅನುವಾದ : ಶಶಿಕಲಾ ಪಿ

ಅಕ್ಕ ಮಹಾದೇವಿಯ ವಚನ ತಮಿಳಿಗೆ ಅನುವಾದ : ಶಶಿಕಲಾ ಪಿ Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ ಬೊಮ್ಮಾ ಸಾವಿಲ್ಲದ ಮನೆಯ ಸಾಸಿವೆ ಹುಡುಕುತ್ತ… ಒಂದೊಂದು ಸಲ ಬದುಕು ಅಂದ್ರ ಏನಂತ ತಿಳಿವಲ್ದು. ರಾತ್ರಿ ಮಲಕ್ಕೊಂಡು ಮರುದಿನದ ಬೆಳಕು ನೊಡಿದ್ರ ಅದೇ ಬದುಕು. ಮುಂದಿನ ಕ್ಷಣ ಏನು ಎತ್ತ ಅಂತ ಚಿಂತಿ ಮಾಡೊವಷ್ಟರಾಗ ಏನೇನೊ ಘಟಿಸಿ ಬಿಡಲತದ. ಚಿಕ್ಕವರಿದ್ದಾಗ ಸಾವು ವಯಸ್ಸಾದವ್ರಿಗಿ ಮಾತ್ರ ಬರತದ ಅಂತ ತಿಳಕೊಂಡ ಕಾಲ ಒಂದಿತ್ತು. ಹಾಗೆ ಘಟಿಸತಿತ್ತು.ಆತ್ಮಹತ್ಯೆ ಅಂದರ ಏನು ಅಂತ ಕೂಡ ತಿಳದಿರಲಿಲ್ಲ.ಈಗಿಗ ಚಿಕ್ಕ ಪ್ರಾಯದವರ ಸಾವು ಬಹಳ ಕಂಗೆಡಸತದ.ಬದುಕು ಕಾಣಬೇಕಾದವ್ರು ಅಕಾಲಿಕವಾಗಿ ತೀರಿ ಹೋದ್ರ ಮನಸ್ಸು ಒಂಥರಾ ವಿಷಾದ ಆಗತದ.ಅದರಲ್ಲೂ ಆತ್ಮಹತ್ಯೆ ಅಂತ ಸಾವುಗಳಿಗಿ ಮರುಗಬೇಕೋ ಸಿಟ್ಟು ಮಾಡ್ಕೋಬೇಕೋ ತಿಳಿವಲ್ದು. ಆತ್ಮಹತ್ಯೆಗಳಿಗಿ ಚಿಕ್ಕವಯಸ್ಸಿನವರೆ ಹೆಚ್ಚು ಬಲಿ ಆಗತಿದ್ದಾರ.ದುಡುಕಿನ ಮತ್ತು ಸಿಟ್ಟಿನಲ್ಲಿ ತಗೊಂಡ ನಿರ್ದಾರಗಳು ಅದೆಷ್ಟು ಬೇಗ ಜೀವ ತಗೊಂಡು ಬಿಡತಾವ. ಸಾಯಲಕ್ಕ ತೋರಿಸೋ ದೈರ್ಯ ಬದುಕಲಕ್ಕ ಯಾಕ ತೋರಿಸೋದಿಲ್ಲ..! ಸಾಯುವಷ್ಟು ದೈರ್ಯ ಬದುಕಲಿಕ್ಕ ಬೇಕಾಗಿಯೂ ಇಲ್ಲ. ಬದುಕು ಅದರ ಪಾಡಿಗದು ನಡಿತಿರತದ.ಆದ್ರ ಈಗಿನ ಯುವ ಜನ ಒಂದು ಸ್ವಲ್ಪ ಜೀವನದಾಗ ಏರು ಪೇರಾದ್ರೂ ಜೀವಕ್ಕ ಸಂಚಕಾರ ತಂದುಕೊಳ್ಳತಿದ್ದಾರ. ಚಿಕ್ಕ ವಯಸ್ಸಿನವವರದು ದುಡುಕಿನ ನಿರ್ದಾರ ಅನ್ನಬಹುದು. ಜೀವನದ ಅರ್ದ ಶತಮಾನದ ಏಳು ಬೀಳುಗಳನ್ನು ನೋಡಿದವ್ರು ಯಾವದೊ ಒಂದು ಕಾರಣಕ್ಕ ಜೀವನಾನೆ ಬಲಿ ತಗೊಂಡು ಬಿಡತಿದ್ದಾರಂದ್ರ ..ಏನು ಕಾರಣ ಹುಡುಕಬೇಕು. ಆತ್ಮ ಹತ್ಯೆಗ ಮುಖ್ಯ ಕಾರಣ ಖಿನ್ನತೆ ಅಂತ ಮೇಲ್ನೋಟಕ್ಕೆ ತಿಳಿಬಹುದು.ಜೊತೆಗಿರುವವರು ಖಿನ್ನತೆಗೆ ಒಳಪಟ್ಟವರನ್ನು ಹೇಗೆ ಗುರುತಿಸಬೇಕು.ಎಲ್ಲರ ಜೋತೆ ಚಂದ ಉಂಡು ಓಡಾಡಿ ಮಾತಾಡಿ ಯಾವದೊ ಒಂದು ಕ್ಷಣದಲ್ಲಿ ತಂತಾನೆ ಲೋಕದಿಂದ ನಿರ್ಗಮಿಸಿ ಬಿಟ್ಟ ಸಂಬಂಧ ಪಟ್ಟವರು ತಡಕೊಳ್ಲೋದು ಎಷ್ಟು ಕಷ್ಟ.ಜೀವನ ಪರ್ಯಂತ ಅವರ ಸಾವಿಗಿ ಕಾರಣ ಹುಡುಕಾಡೊದು ಬಿಟ್ಟು ಮತ್ತೆನು ಮಾಡ್ಲಿಕ್ಕಾಗತದ. ನಾನು ನೋಡಿದ ಮಟ್ಟಿಗಿ ಖಿನ್ನತೆ ಕಾಡುವದು ಎಲ್ಲಾ ಉಳ್ಳವರಿಗಿ.ದಿನಾ ದುಡದು ತಿನ್ನೊವರ್ರಿಗಿ ಇದು ಹೆಚ್ಚಾಗಿ ಕಾಡಲ್ಕ ಅನಿಸ್ತದ. ಮೈ ಮುರಿದು ದುಡಿಯೋರಿಗಿ ಮನಸ್ಸು ಖುಷಿಯಾಗಿ ಇರಲು ಬೇಕಾದ  ಡೂಪ್ ಮೀನ್ ಎಂಬ ಹಾರ್ಮೊನ್ ತನ್ನ ತಾನೆ ಉತ್ಪತ್ತಿ ಆಗತದ. ಎಲ್ಲಾ ಸೌಲಭ್ಯ ಇರೋರು , ಸದಾ ಕಂಫರ್ಟ ಝೊನ್ ನಲ್ಲಿ ಇರೋರಿಗಿ , ಮೈಗಳ್ಳರಿಗಿ ,ದೇಹಕ್ಕ ವ್ಯಾಯಾಮ ಇಲ್ದವರಿಗಿ ಡೋಪ್ ಮೀನ್ ಹಾರ್ಮೊನ್ ಉತ್ಪತ್ತಿ ಆಗೋದೆ ಇಲ್ಲ. ಆಗ ಮನಸ್ಸು ಬೇಜಾರು , ನಿರಾಸೆಗೆ ಒಳಪಡತದ.ಎಲ್ಲದರ ಮ್ಯಾಲಿನ ಆಸಕ್ತಿ ಕಮ್ಮಿ ಆಗತದ.ಎಲ್ಲರೊಂದಿಗೆ ಛಲೋ ವರ್ತಿಸತಿದ್ರು ಅವ್ರು ಒಳಗ ಅಸಮಾಧಾನದಿಂದ ಇರತಾರ.ಸದಾ ಒಂಟಿ ಆಗಿ ಇರಲಕ್ಜ ಬಯಸ್ತಾರ. ಇಲ್ಲ ಬರೀ ಪೋನ್ ನೊಂದಿಗೆ ಇರತಾರ.ಪೋನ್ ನೊಡೊದ್ರಿಂದ ಮಿದುಳಿನಾಗ ಡೂಪ್ಮೀನ್ ಹಾರ್ಮೊನು ಉತ್ಪತ್ತಿ ಆಗಿ ಮನಸ್ಸು ಸಮಾಧಾನದಿಂದ ಇಡತದ.ಅದಕ್ಕ ಎಲ್ರೂ ಈಗ ಪೋನ್ ವ್ಯಸನಿಗಳಾಗಿರೋದು. ಪೋನ್ ಹಿಡಕ್ಕೊಂಡು ಕುಂತಷ್ಟು ಹೊತ್ತು ತಲೆಯೊಳಗ ಯಾವ್ದೆ ಆಲೋಚನೆ ಬರಲಾರದೆ ಈ ಹಾರ್ಮೊನ್ ತಡಿತದ. ಪೋನ್ ಬಿಟ್ಟ ತಕ್ಷಣ ಮತ್ತ ಮತ್ತ ಪೋನ್ ಕಡಿಗೆ ಮನಸ್ಸು ಏಳಿತದ. ಅಲ್ಕೋಹಾಲ್ ಕುಡಿದಾಗ , ಗುಟಕಾ ತಿನ್ನುವಾಗ , ದೂಮಪಾನ ಮಾಡುವಾಗ ಹೀಗೆ ಈ ಎಲ್ಲಾ ಚಟಗಳು ಆ ಸಮಯದಲ್ಲಿ ನಮ್ಮ ದೇಹದ ಖುಷಿಯ ಹಾರ್ಮೋನ್ ಬಿಡುಗಡೆಗೊಳಿಸಿ ನಮ್ಮನ್ನು ಪದೆ ಪದೆ ಅದನ್ನೆ ಮಾಡಲು ಪ್ರೇರೆಪಿಸ್ತದ. ಆದ್ರ ಈ ಎಲ್ಲಾ ಚಟಗಳು ನಮಗ ಯಾವಾಗ ವ್ಯಸನಗಳಾಗಿ ಬದಲಾಗತಾವ ನಮಗ ಅರಿವಿಗಿ ಬರೊದಿಲ್ಲ.ಅಷ್ಟರಲ್ಲಿ ತಡ ಆಗಿರತದ.ವ್ಯಸನ ಮನುಷ್ಯ ನನ್ನು ಖಿನ್ನತೆಗೆ ಒಳಪಡಸ್ತದ. ವ್ಯಸನಗಳಿಲದೆಯು ಮನುಷ್ಯ ಖಿನ್ನತೆಗೆ ಹೋಗಬಹುದು.ಚಿಕ್ಕವಯಸ್ಸಿನಲ್ಲಿ ಆಗಿರೋ ಅಹಿತಕರ ಘಟನೆಗಳು , ಅಥವಾ ಪೋಷಕರಿಂದ ಸಿಗಬೇಕಾದ ಪ್ರೀತಿ ಮಮತೆಗಳು ಸಿಗದೆ ಇದ್ದಾಗ , ಕೌಟುಂಬಿಕ ದೌರ್ಜನ್ಯ ಗಳು , ಪ್ರೀತಿ ಪಾತ್ರರನ್ನು ಕಳಕೊಂಡ ನೋವು ಇವುಗಳು ಖಿನ್ನತೆಗೆ ದೂಡತಾವ.ಆದ್ರ ಇದರ ಅರಿವು ಆಗೊವಷ್ಟರಲ್ಲಿ ಅವ್ರು ಪೂರ್ಣವಾಗಿ ಖಿನ್ನತೆಯೊಳಗ ಜಾರಿಬಿಟ್ಟಿರತಾರ. ಜೀವನದ ಬಗ್ಗೆ ಬ್ಯಾಸರ. ನಿರಾಸಕ್ತಿ , ಯಾವದರಲ್ಲೂ ಆಸಕ್ತಿ ಇಲ್ಲದಿರೋದು , ನಿದ್ಧೆ ಬರದೆ ಇರೋದು , ಅತೀ ಭಾವುಕರಾಗೋದು , ಸದಾ ನೆಗೆಟಿವ್ ಆಲೋಚನೆಗಳು , ನಾನು ಎಲ್ಲರಿಂದ ನಿರಾದರಕ್ಕ ಒಳಪಟ್ಟಿದ್ದೆನೆಂಬ ಭ್ರಮೆ , ಇವೆಲ್ಲವೂ ಖಿನ್ನತೆಯ ಲಕ್ಷಣಗಳು. ಅವರಿಗೆ ಗೊತ್ತಿಲ್ಲದಂತೆ ಮನಸ್ಸಿನಾಗ ಆತ್ಮಹತ್ಯೆ ವಿಚಾರಗಳು ಬರತಾವ.ಒಟ್ಟು ಜೀವನ ಕೊನೆಗಾಣಿಸಬೇಕು ಎಂಬ ತುಡಿತ ಸದಾ ಇರತದ.ಇಂತಹ ವಿಚಾರಗಳು ಅವ್ರು ಯಾರ ಹತ್ರನೂ ಹಂಚಿಕೊಳ್ಳೊದಿಲ್ಲ.ಒಂದು ವ್ಯಾಳೆ ಹೇಳಿದ್ರು ಮನೆಯವರು ಮೊದಲು ಮಾಡೋದೆ ದೇವ್ರು ದೆವ್ವ ಎಂಬ ಪ್ರಯೋಗಗಳು.ಮಾನಸಿಕ ರೋಗ ತಜ್ಞ ರಲ್ಲಿ ಹೋಗಬೇಕೆಂಬ ಆಲೋಚನೆಯೂ ಮಾಡೊದಿಲ್ಲ. ಎಷ್ಟೋ ಜನ ನಾವು ಖಿನ್ನತೆಗೆ ಒಳಪಟ್ಟಿವಿ ಎಂದು ನಂಬಲಿಕ್ಕೂ ತಯ್ಯಾರಿರಲ್ಲ.ಖಿನ್ನತೆ ಅಂದ್ರ ಹುಚ್ಚು ಅಂತ ತಿಳಕೊಂಡಿರೋರು ಇದ್ದಾರ.ಅಂತವರು ಮಾನಸಿಕ ರೋಗ ತಜ್ಞ ರ ಹೆಸರು ಕೆಳಿದ್ರ ಅಂಜತಾರ. ಅಂತ ಡಾಕ್ಟರ ಹತ್ದ ಹೊದ್ರ ಜನ ಎಲ್ಲಿ ತಮಗ ಹುಚ್ಚರ ಪಟ್ಟ ಕಟ್ಟಾತಾರೋ ಅನ್ನೊ ಅಂಜಿಕಿ ಇರತದ. ತಮ್ಮ ಖಿನ್ನತೆ ನಿಭಾಯಿಸಲಕ್ಕ ಆಗ್ಧ ಕೊನೆಗೆ ಸಾವಿನಲ್ಲಿ ಪರಿಹಾರ ಕಾಣತಾರ. ಮಕ್ಕಳಲ್ಲಿ ಖಿನ್ನತೆ ಲಕ್ಷಣ ಹ್ಯಾಂಗ್ ಗುರುತಿಸಬೇಕು.ಅವ್ರು ದಿನಾ ಉಣ್ಣತಾರ ,ತಿಂತಾರ , ಸಾಲಿಗಿ ಹೋಗತಾರ ,ನಗತಾರ ,ಅಳತಾರ ,ಜಗಳ ಆಡತಾದ..ಒಟ್ಟಿನಾಗ ಎಲ್ರೂ ಇರೊ ಹಂಗ ಇರತಾರ . ಒಮ್ಮ ನೇಣಿಗಿ ಶರಣಾಗತಾದ.ಆಗ ಯಾವ ಕಾರಣ ಹುಡುಕಬೇಕು.ಹೆತ್ತವರು ಹ್ಯಂಗ್ ಬದುಕಬೇಕು.ಜೀವನ ಪರ್ಯಂತ ಈ ಪ್ರಶ್ನೆಗೆ ಉತ್ತರ ಹುಡುಕ್ಕೊಂತ ಬದುಕುವ ಅವರ ಪಾಡು ಹ್ಯಾಂಗ್ ವರ್ಣಿಸಬೇಕು..! ಕಾಲೇಜು , ಹಾಸ್ಟೆಲ್ ನಲ್ಲಿರುವ ಮಕ್ಕಳು ಈ ರೀತಿ ಮಾಡಿಕೊಳ್ಳುವದಕ್ಕ ಮುಖ್ಯ ಕಾರಣ ಖಿನ್ನತೆ.ಒತ್ತಡ. ಓದುವ ಅಥವಾ ಪ್ರೆಮ ವೈಫಲ್ಯ , ಮನೆಯವರು ಬೈದರೆಂದು , ಶಿಕ್ಷಕರು ಹೊಡೆದರೆಂದು , ಮೊಬೈಲ್ ಕಸಕೊಂಡರು ಎಂದು ಸಣ್ಣ ಸಣ್ಣ ಕಾರಣಗಳಿಗಿ ಆತ್ಮಹತ್ಯೆ ಮಾಡ್ಕೊಳ್ಳೊದು ಹೆಚ್ಚು ಆಗಲತದ. ಇದಕ್ಕ ಕಾರಣ ಹುಡುಕಿದ್ರ ಮೊಟ್ಟಮೊದಲು ಕಾಣೋದು ಮಕ್ಳು ಮತ್ತು ಹರೆದವರಿಗಿ ಒತ್ತಡ ನಿಭಾಯಿಸಲಿಕ್ಕ ಆಗ್ದೆ ಇರೋದು.ಸದಾ ಆರಾಮ ಮತ್ತು ಕಂಫರ್ಟ ನ್ನು ಹೆತ್ತವರು ಮಕ್ಳಿಗಿ ಕೊಡತಿದ್ದಾರ.ಅವ್ರು ಬೇಡಿದ್ಚು ಕೊಡ್ಸಿ ಅವ್ರು ಕೇಳಿದ್ದು ತಿನ್ಸಿ ಅವ್ರನ್ನ ಏನು ಮಾಡ್ಲಿಕ್ಕ ಬಿಡದಂಗ ಮಾಡಿ ಅವ್ರನ್ನ ಒಂದು ಕಂಫರ್ಟ ಎಂಬ ಒಂದು ವರ್ತುಲ ದೊಳಗ ಸಿಕ್ಕಿ ಹಾಕ್ತಿವಿ.ಹೊರಗ ಏನು ಚಂದಿಲ್ಲ ಎಂಬ ನಿಗರಾನಿಯೊಳಗ ಬೆಳೆಸ್ತಿವಿ .ಒಂದಿಷ್ಟು ಜೀವನದೊಂದಿಗೆ ಹೋರಾಡೋ ಶಕ್ತಿನೂ ಅವ್ರರಲ್ಲಿ ತುಂಬದೆ ಬೆಳೆಸಿತಿದ್ದಿವಿ.ಯಾವದೋ ಒಂದು ಹಂತದಲ್ಲಿ ಒತ್ತಡ ನಿಭಾಯಿಸ್ಲಿಕ್ಕ ಆಗ್ದೆ ಆತ್ಮಹತ್ಯೆ ಗೆ ಶರಣಾಗತಾರ. ಎಷ್ಟು ದುಡುಕಿನ ನಿರ್ಧಾರ. ಮಕ್ಕಳು ಮನಬಿಚ್ಚಿ ತಂದೆತಾಯಿಯೊಂದಿಗೆ ಮಾತಾಡಲಾರದಂಗ ಆಗತುದ್ದಾರ.ತಮ್ಮ ಆತಂಕಗಳನ್ನು ಅಲೆಕ್ಸಾ  ಅಥವಾ ಗೂಗಲ್ ಗೆ ಹೇಳತಾರ ಹೊರತಾಗಿ ಹೆತ್ತವ್ರಿಗಿ ಹೇಳಲ್ಲ.ಎಷ್ಟು ವಿಪರ್ಯಾಸ. ಸಾವು ಎಂಬುದು ಹುಟ್ಟುತ್ತಲೆ ಬದುಕಿಗೆ ಅಂಟಿಕೊಂಡೆ ಬಂದಿರತದ.ಅದು ಬರುವಾಗ ಬಂದೆ ಬರತದ.ಅಲ್ಲಿವರೆಗೆ ಬದುಕಬೇಕು.ಸುಖ ದುಃಖ ಗಳೆಲ್ಲ ಚಕ್ರದಂಗ ತಿರುಗತಾ ಇರತಾವ.ಒಂದರ ಬೆನ್ನಿಗಿ ಒಂದು. ಚಕ್ರ ನಿಲ್ಲಿಸಲಿಕ್ಕ ಆಗೊದಿಲ್ಲ.ಕೆಟ್ಟ ಸಂದರ್ಭಗಳಲ್ಲಿ ತಾಳ್ಮೆ ಒಂದೇ ಸಂಜೀವಿನಿ. ಹಣಕಾಸಿನ ಸಮಸ್ಯೆ ಮತ್ತು ಆರೋಗ್ಯ ಸಮಸ್ಯೆ ಎರಡು ಜೀವನದ ದೊಡ್ಡ ಶತ್ರುಗಳು.ಇದು ಜೀವನಾನೆ ಅಲ್ಲೊಲ ಕಲ್ಲೋಲ ಮಾಡ್ತದ.ಹಾಗಂತ ಜೀವ ಕಳಕೊಳ್ಳೊದು ಮೂರ್ಖತನ. ಹೌದು ,ಎಷ್ಟೊಂದು ಓದಿರತಿವಿ , ಕೇಳಿರತೀವಿ , ಉಪದೇಶನೂ ಮಾಡಿರತೀವಿ.ಆದ್ರ ಖಿನ್ನತೆ ಅದಾವ ಮಾಯದಾಗ ಆವರಿಸಿಕೊಂಡು ಬಿಡತದ ಅರಿವುಗೂ ಬರಲ್ಲ.ಇದಕ್ಕ ಪರಿಹಾರ ಅಂದ್ರ ಮನಸ್ಸು ಬಿಚ್ಚಿ ಮಾತಾಡೋದು.ತಂದೆತಾಯಿ ಗೆಳೆಯರು ಬಳಗದವ್ರು ಯಾರೊಂದಿಗಾದ್ರೂ ಮನಸ್ಸು ಬಿಚ್ಚಿ ಮಾತಾಡೋದು.ಯಾರಿಗೂ ಹೇಳಬೇಕು ಅನಿಸದಿದ್ರ ಬರೆದು ಬಿಸಾಕೋದು. ಖಿನ್ನತೆಯನ್ನು ಬೆರೆಯವರು ಗುರುತಿಸೊದಕ್ಕಿಂತ ಮೊದಲು ನಾವೆ ಅದನ್ನ ಪತ್ತೆ ಹಚ್ಚಕೊಳ್ಳಬೇಕು.ಎಲ್ಲರೊಂದಿಗೆ ಇದ್ರು ಒಂಟಿತನ ಭಾದಿಸ್ತಾ ಇದ್ರೆ.ರಾತ್ರಿ ನಿದ್ರೆ ಬರದಿದ್ರೆ ನಿರುತ್ಸಾಹ ನಿರಾಸಕ್ತಿಇವೆಲ್ಲ ಬಾಳ ದಿನಗಳಿಂದ ನಮಗ ಕಾಡತಿದ್ರ ಮಾನಸಿಕ ತಜ್ಞ ರಲ್ಲಿ ಹೋಗೊದಕ್ಕ ಹಿಂದಮುಂದ ನೋಡ್ಲೆಬಾರ್ದು.ನಮ್ಮ ಜೊತೆಗಿರುವವರಿಗೆ ಈ ಸಮಸ್ಯೆ ಗಳು ಕಾಡತಿದ್ರೆ ಅವ್ರನ್ನ ಡಾಕ್ಟರ್ ಹತ್ರ ಕರಕೊಂಡು ಹೋಗಲು ಒಪ್ಪಿಸಬೇಕು. ಎಷ್ಟೋ ತಿಳವಳಿಕೆ ಉಳ್ಳವ್ರು ಸಾಯುವಂತ ದುಡುಕಿನ ನಿರ್ಧಾರ ತಗೊಳ್ತಿರೋದು ಆತಂಕದ ಸಂಗತಿ. ಬುಧ್ದಿಯಿಂದ ಅತಿ ಶಕ್ತಿಶಾಲಿಯಾದ ಮನುಷ್ಯ ಆತ್ಮಹತ್ಯೆ ಯಂತ ನಿರ್ಣಯಗಳಲ್ಲಿ ಎಷ್ಟು ದುರ್ಬಲನಾಗತಾನ. ಅತೀ ವಿದ್ಯಾವಂತರೆ ಇಂತಹ ಘಟನೆಗಳಿಗೆ ಬಲಿಯಾಗ್ತಿರೋದು ಯಾಕೆ ಎಂದು ತಿಳಿತಿಲ್ಲ.ಸದಾ ಎಲ್ಲರ ಮುಂದೆ ಒಳ್ಳೆಯವರಾಗಿರಬೇಕು , ಶ್ರೇಷ್ಟರಾಗಿರಬೇಕು , ಜಾಣ ಎನಿಸಿಕೊಳ್ಳಬೇಕು ಎಂಬ ಇಂತಹ ಹಂಬಲಗಳು ಕೂಡ ಮನುಷ್ಯ ಗ ದುರ್ಬಲ ಮಾಡಿಬಿಡತಾವ.ಅತೀ ಮಹತ್ವಾಕಾಂಕ್ಷೆಯು ಮನುಷ್ಯ ನನ್ನು ದುಃಖಿತ ನನ್ನಾಗಿಸ್ತದ.ಭಾವನೆಗಳನ್ನು ನಿಯಂತ್ರಿಸಿಕೊಳ್ಳೊದು ಕಲಿತರೆ ಜೀವನ ಅರ್ಧ ಗೆದ್ದಂಗೆ.ಅದರಲ್ಲೂ ಸಿಟ್ಟಿನ ಕೈಗೆ ಬುದ್ದಿ ಎಂದೂ ಕೋಡ್ಲೆಬಾರದು. ಈಗೀಗ ನಾವು ಎಷ್ಟು ಒಂಟಿ ಆಗತಿದ್ದೆವೆ ಅಂದ್ರ ನಮ್ಮ ಸಮಸ್ಯೆ ಹೆತ್ತವ್ರಿಗೆ ಗೆಳೆಯರಿಗೆ ತಿಳಿಸಲಿಕ್ಕೆ ಆಗದಿರುವಷ್ಟು.ಆಪ್ತ ಸಮಾಲೋಚರಿಗೆ ನಮ್ಮ ಸಮಸ್ಯೆ ಮುಕ್ತ ವಾಗಿ ಹೇಳಿಕೊಂಡಷ್ಟು ನಮ್ಮ ಜೊತೆಗಿರುವರಿಗೆ ಹೇಳಕೊಳ್ಳಕ್ಕ ಆಗ್ತಿಲ್ಲ ಅಂದ್ರ ಸಂಭಂಧಗಳು ಎಷ್ಟು ಅರ್ಥಹೀನ ಆಗ್ತಿವೆ ಎಂದು ಚಿಂತಿಸಬೇಕಾಗ್ತದ. ಆತ್ಮಹತ್ಯೆ ಒಂದು ಸಾಮಾಜಿಕ ಪಿಡುಗು.ಇದನ್ನು ತಡೆಯಲು ನಾವು ಪ್ರಯತ್ನಿಸಬೆಕಂದ್ರೆ ನಮ್ಮ ಸುತ್ತಲಿರುವವರೊಂದಿಗೆ ಮನಸ್ಸು ಬಿಚ್ಚಿ ಮಾತಾಡೋದು.ಆತಂಕವನ್ನು ಮತ್ತೊಬ್ಬ ರೊಂದಿಗೆ ಹಂಚಕೊಳ್ಳೊದು.ಪ್ರೀತಿ ಕೊಟ್ಟು ಪಡಕೊಳ್ಳೊದು.ಖಿನ್ನತೆ ಬಗ್ಗೆ ತಿಳಿದುಕೊಂಡು ಮತ್ತೊಬ್ಬರಿಗೆ ಅದರ ಬಗ್ಗೆ ತಿಳಿಸೊದು.ಪ್ರಯತ್ನ ನಿರಂತರ ಜಾರಿಯಲ್ಲಿರಲಿ. ಜ್ಯೋತಿ ಡಿ ಬೊಮ್ಮಾ ಜ್ಯೋತಿ ಡಿ , ಬೊಮ್ಮಾ ಅವರು ಕಲಬುರಗಿ ಜಿಲ್ಲೆಯವರು. ನಾಲ್ಕು ಕವನ ಸಂಕಲನಗಳು , ಎರಡು ಪ್ರಭಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಪ್ರತಿ ತಿಂಗಳು ಸಂಗಾತಿ ಪತ್ರಿಕೆಗಾಗಿ ಅವರ ದೇಸಿ ನುಡಿಗಟ್ಟಿನಲ್ಲಿ ಅಂಕಣ ಬರಹವನ್ನು ಪ್ರಕಟಿಸುತ್ತಾರೆ

Read Post »

ಕಾವ್ಯಯಾನ

“ಬೇಂದ್ರೆ ಅಜ್ಜನ ನೆನಪು”ಶಿವಕುಮಾರ ಕೋಡಿಹಾಳ ಮೂಡಲಗಿ

ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ ಮೂಡಲಗಿ “ಬೇಂದ್ರೆ ಅಜ್ಜನ ನೆನಪು” ಜನೇವರಿ ತಿಂಗಳ ಬಂತಂದ್ರ ನೆನಪಾಗೋ ಜೀವ ಅಂದ್ರ ಬೇಂದ್ರೆ ಅಜ್ಜಾ§ನನಕ್ಕು ಸಾಯ್ರೋ ನಕ್ಕು ಸಾಯ್ರಿ ಅಂತಾ ನಮಗೆಲ್ಲಾ ಹೇಳಿ ನಕ್ಕೋತ ಹೋದ ದತ್ತು ಮುತ್ಯಾಬಡತನಕ ಹೇಸಿದಾವಲ್ಲ  ಮೆಟ್ಟಿ ನಿಂತಾವಬೆಂದು ಬೇಂದ್ರೆಯಾದಾವ ರಾಮಚಂದ್ರ ಅಂಬೂತಾಯಿಯ ಮಗನಾಗಿಗೋದೂಬಾಯಿ ನೆರಳಿನಾಗ ಕನ್ನಡ ನಾಡಿನ ಆಲದ ಮರಾ ಆಗಿದ್ದಾ§ವಮಾತು ಆಡಿದರ ಹಸಿ ಗೋಡ್ಯಾಗ ಹಳ್ಳ ಒಗದಂಗ ಮಾತಾಡಾವಕನ್ನಡದವ್ವ ಅಂದ್ರ ನಿನಗ ಪಂಚಪ್ರಾಣತಾಯಿ ಋಣ ತೀರಸಾಕ ಅಕ್ಷರದ ಮಹಲು ಕಟ್ಟಿದಾವ ತನ್ನ ಹಾಡಿನಾಗಮಲ್ಲಿಗಿ ಹೂವಿನಗಮಗಮಕುರುಡು ಕಾಂಚಾಣದ ಜಣಜಣಕರಡಿ ಕುಣಿತದತಕತಕ  ಮೂಡಲ ಮನೆಯಚುಮು ಚುಮುಕಾಣಿಸಿದಾವ ಇನ್ನೂ ಯಾಕ ಬರಲಿಲ್ಲಾವ ಹುಬ್ಬಳ್ಳಿಯಾವ ಅಂತ ಹೇಳಿಕನಸಿನೊಳಗೆ ಬಂದು ಕನಸು ಬಿತ್ತಿದಾವನಮಗೆಲ್ಲಾ ಹುಸಿನಗುತ ಬಂದೀರಿನಸುನಗುತ ತೆರಳಿಅಂತಾ ನೀತಿ ಪಾಠ ಹೇಳಿದಾವ ಕನ್ನಡದವರು ಮನಸು ಮಾಡಿದರ ಚರಿತ್ರೆ ಸೃಷ್ಟಿಸ್ಯಾರ ಆ ಕಡೆ ಲಕ್ಷ್ಯ ಕೊಡ್ರಿ ಎಂದು ಹೇಳಿನಮಗೆಲ್ಲಾ ತಾಯಿ ಸೇವೆ ಮಾಡಾಕ ಹಚ್ಚಿದಾಂವಕನ್ನಡ ನಮ್ಮ ಮೈಯಾಗ ಕಣಕಣದಾಗ ಬೆರತೈತಿ ಅನ್ನೋ ಸತ್ಯ ತಿಳಿಸಿದಾವ ಗುಂಗುರು ಕೂದಲಿನ ಮುತ್ಯಾಮಾತಿನ ಮಲ್ಲ ಶಬ್ದ ಗಾರುಡಿಗನಮ್ಮ ನಾಡಿನ ಮಾಣಿಕ್ಯನಮಗಅರಳು ಮರಳು ಆದ್ರೂನಿನ್ನ ನೆನಪು ಎಂದೂ ಸಾಯುವುದಿಲ್ಲನೀನು ನಮ್ಮ ನಾಡಿನಾಗ ಹುಟ್ಟಿದ್ದೇ ಒಂದು ಪವಾಡನಿನ್ನ ಜನುಮದಿನ ನಮಗೆಲ್ಲಾ ಹಬ್ಬನಮಗೆಲ್ಲಾ ಹಬ್ಬಆಶೀರ್ವಾದ ಮಾಡು ಮುತ್ಯಾ  ಶಿವಕುಮಾರ ಕೋಡಿಹಾಳ ಮೂಡಲಗಿ

“ಬೇಂದ್ರೆ ಅಜ್ಜನ ನೆನಪು”ಶಿವಕುಮಾರ ಕೋಡಿಹಾಳ ಮೂಡಲಗಿ Read Post »

ಕಾವ್ಯಯಾನ

“ಅರ್ಥವಾಗದವಳು”ಡಾ ತಾರಾ ಬಿ ಎನ್ ಧಾರವಾಡ

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ “ಅರ್ಥವಾಗದವಳು”  ನಿಶ್ಶಬ್ದದೊಳಗೆ ಮಾತಾಡುವವಳು,ನಗುವಿನ ಹಿಂದೆ ಸಾವಿರ ಪ್ರಶ್ನೆಗಳನ್ನು ಮರೆಸುವವಳು.ಕಣ್ಣಲ್ಲಿ ಕನಸುಗಳ ನದಿ ಹರಿದರೂಕಾಣದವರ ಮಧ್ಯೆ ಬದುಕುವವಳು.ತನ್ನತನವನ್ನು ತಾನೇ ಹೊತ್ತುಕೊಂಡುಪ್ರಪಂಚದ ತೂಕವನ್ನೂಸಹ ನಗುತ್ತಲೇ ಸಾಗಿಸುವವಳು,“ಬಲಿಷ್ಠ” ಎಂದರೆ ಕಲ್ಲಿನಂತೆಇರಬೇಕು ಎಂದುಕೊಂಡವರಿಗೆಹೂವಿನಂತೆ ಮೃದುವಾಗಿಬಲವಾಗಿರುವವಳು.ಮೌನವನ್ನು ಅಹಂಕಾರವೆಂದವರುಅಳುವನ್ನು ದುರ್ಬಲತೆ ಎಂದರು, ಪ್ರಶ್ನೆಗಳನ್ನು ಬಂಡಾಯವೆಂದರು,ಆದರೆ ಅವಳೊಳಗಿನ ಸತ್ಯವನ್ನುಯಾರೂ ಕೇಳಲಿಲ್ಲ.ತನ್ನವರ ನಡುವೆ ಇದ್ದೂಒಂಟಿಯಾಗಿದ್ದಳು,ತನ್ನ ಭಾಷೆಯನ್ನೇ ಮಾತಾಡುತ್ತಿದ್ದರೂ ಅಂತರಂತೆ,ಅನ್ಯಭಾಷೆಯಂತೆಅವಳ ಮನಸ್ಸಿನ ಅಕ್ಷರಗಳುಅವರ ಕಣ್ಣಿಗೆ ಒಂದಾಗಲೇ   ಇಲ್ಲ,  ಅಸ್ಮಿತೆ ಕಾಣಲೇ ಇಲ್ಲ.ತನ್ನ ನೋವಿಗೆ ತಾನೇಸಮಾಧಾನ ಹೇಳಿಕೊಂಡಳು,ತನ್ನ ಕಣ್ಣೀರಿಗೆ ತಾನೇ ಉತ್ತರವಾದಳು.ಬಿದ್ದಾಗ ಕೈ ಹಿಡಿಯುವವರುಇರಲಿಲ್ಲ,ಆದರೂಮತ್ತೆ ನಿಂತು ನಡೆಯುವ ಧೈರ್ಯಅವಳು ಕಳೆದುಕೊಳ್ಳಲಿಲ್ಲ,ಅವಳು ವಿಭಿನ್ನ. ವಿಶಿಷ್ಟ,ಅವಳು ದುರ್ಬಲ ಅಲ್ಲ,ಅವಳು ಆಳವಾದಳು.ಒಂದು ದಿನ…ಅವಳನ್ನು ಅರ್ಥಮಾಡಿಕೊಳ್ಳದ ಲೋಕವೇಬೆಳಕಿಗೆ ದಾರಿ ಕೇಳುತ್ತದೆ.ಆಗಲೂ  ಕಹಿಯಾಗುವುದಿಲ್ಲ,ನಗುಮುಖದಿಂದಲೇ ದಾರಿದೀಪವಾಗುತ್ತಾಳೆ.ಏಕೆಂದರೆನನ್ನವರಿಗೇ ಅರ್ಥವಾಗದವಳುಒಂದು ದಿನತನ್ನನ್ನೇ ಸಂಪೂರ್ಣವಾಗಿ ಅರ್ಥಮಾಡಿಕೊಂಡವಳು. ಡಾ ತಾರಾ ಬಿ ಎನ್ ಧಾರವಾಡ

“ಅರ್ಥವಾಗದವಳು”ಡಾ ತಾರಾ ಬಿ ಎನ್ ಧಾರವಾಡ Read Post »

ಪುಸ್ತಕ ಸಂಗಾತಿ

ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ ಅವರ ಕೃತಿ “ಅಂತರಂಗದ ಪ್ರಣತಿ” ಅವಲೋಕನ ಅಂಬಿಕಾ ಅವಟಿ ಚಡಚಣ

ಪುಸ್ತಕ ಸಂಗಾತಿ ಅಂಬಿಕಾ ಅವಟಿ ಚಡಚಣ ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ “ಅಂತರಂಗದ ಪ್ರಣತಿ” ಅವಲೋಕನ ಅಂತರಂಗದ ಪ್ರಣತಿ… ಅಲ್ಪಾಕ್ಷರಗಳಲ್ಲಿ ಅನಂತದರ್ಶನಕನ್ನಡ ಸಾಹಿತ್ಯ ಲೋಕಕ್ಕೆ ‘ತನಗ’  ಎಂಬ ಫಿಲಿಪೈನ್ಸ್ ಮೂಲದ ಕಾವ್ಯ ಪ್ರಕಾರವನ್ನು ಪರಿಚಯಿಸಿ, ಅದರಲ್ಲಿ ದೇಸೀ ಸೊಬಗನ್ನು ತುಂಬಿದವರು ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ (ಕನ್ನಡದ ಕಂದ). ಈ ಕೃತಿಯನ್ನು ಲೇಖಕರು ಅತ್ಯಂತ ಪ್ರೀತಿ ಮತ್ತು ಸ್ನೇಹಪೂರ್ವಕವಾಗಿ ನನಗೆ ಉಡುಗೊರೆಯಾಗಿ ಕಳಿಸಿಕೊಟ್ಟಿದ್ದು, ಇದನ್ನು ಓದಿದಾಗ ಮನಸ್ಸಿಗೆ ಅಪಾರ ಸಂತೋಷವಾಯಿತು. ಅವರ ‘ಅಂತರಂಗದ ಪ್ರಣತಿ’ ಸಂಕಲನವು ಕೇವಲ ನಾಲ್ಕು ಸಾಲುಗಳಲ್ಲಿ ಬದುಕಿನ ಮಹೋನ್ನತ ಸತ್ಯಗಳನ್ನು ಹಿಡಿದಿಡುವ ಅದ್ಭುತ ಪ್ರಯತ್ನವಾಗಿದೆ. “ಕಡಿಮೆ ಪದಗಳಲ್ಲಿ ಹೆಚ್ಚಿನ ಅರ್ಥ”  ಇದು ಆಲಮೇಲರ ಕಾವ್ಯದ ಮಂತ್ರ. ಸಾಗರದ ಅಲೆಗಳು ಮೌನವಾಗಿ ತೇರನ್ನು ಎಳೆಯುವಂತೆ, ಇವರ ತನಗಗಳು ಓದುಗರ ಮನಸ್ಸನ್ನು ಮೌನವಾಗಿ ಆವರಿಸಿಕೊಳ್ಳುತ್ತವೆ. ಇಲ್ಲಿ ಶಬ್ದಗಳ ಆರ್ಭಟವಿಲ್ಲ, ಬದಲಾಗಿ ಅರ್ಥದ ಗಾಂಭೀರ್ಯವಿದೆ. ಮುಂಜಾನೆಯ ಮಂಜಿನ ಚೆಲ್ಲಾಟದಿಂದ ಹಿಡಿದು ಋತುಮಾನಗಳ ಬದಲಾವಣೆಯವರೆಗೆ ಪ್ರಕೃತಿಯ ಪ್ರತಿ ಚಲನೆಯನ್ನು ಇವರು ಕಾವ್ಯವಾಗಿಸಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ಬಣ್ಣಿಸುತ್ತಲೇ, ಬದುಕಿನ **”ಹೊಸತನದ ಹಂದರ”**ವನ್ನು ಕವಿ ಇಲ್ಲಿ ಅನಾವರಣಗೊಳಿಸುತ್ತಾರೆ. ಜಗತ್ತು ಎಂಬ ಮಾಯಾಜಾಲದಲ್ಲಿ ಮನುಷ್ಯ ಅನುಭವಿಸುವ ಒದ್ದಾಟ, ದುಶ್ಚಟಗಳು, ಮೋಸ ಮತ್ತು ಅಸತ್ಯಗಳ ಕುರಿತು ಈ ತನಗಗಳು ಎಚ್ಚರಿಸುತ್ತವೆ.   ಗುರುವಿನ ಮಹತ್ವ ಮತ್ತು ಜ್ಞಾನದ ಅಗತ್ಯವನ್ನು ಶಕ್ತವಾಗಿ ಪ್ರತಿಪಾದಿಸಲಾಗಿದೆ.  ಜನನ ಮರಣಗಳ ನಡುವಿನ ಹೋರಾಟ, ನಂಬಿಕೆ ಮತ್ತು ವಿಶ್ವಾಸಗಳ ಮಹತ್ವವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಸೂರ್ಯ, ಚಂದ್ರ ಹಾಗೂ ಹೆಣ್ಣಿನ ಸೌಂದರ್ಯವನ್ನು ಕೇವಲ ನಾಲ್ಕು ಸಾಲುಗಳಲ್ಲಿ ಹಿಡಿದಿಡುವುದು ಒಂದು ಸವಾಲೇ ಸರಿ. ಆದರೆ ಆಲಮೇಲರು ಪ್ರೀತಿಯ ಉತ್ತುಂಗವನ್ನು ಮತ್ತು ಪ್ರಕೃತಿಯ ಚೆಲುವನ್ನು ಸೋಜಿಗವೆನಿಸುವಂತೆ ಅಲ್ಪ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಡಾ. ಮಲ್ಲಿಕಾರ್ಜುನ ಸರ್ ಅವರಿಗೆ ಒಂದೆರಡು ಚೆನ್ನುಡಿಗಳು. ಅಕ್ಷರಗಳ ಹಣತೆಯಲ್ಲಿ ಜ್ಞಾನದ ಎಣ್ಣೆ ಹೊಯ್ದು, ಸ್ನೇಹದ ಬತ್ತಿಯ ಮೂಲಕ ‘ಅಂತರಂಗದ ಪ್ರಣತಿ’ಯನ್ನು ಬೆಳಗಿದ್ದೀರಿ ಸರ್. ನಿಮ್ಮ ಈ ಕೃತಿ ಕೇವಲ ಕಾವ್ಯವಲ್ಲ, ಅದು ಬದುಕಿನ ದಾರಿದೀಪ. ತನಗ ಸಾಹಿತ್ಯದ ಮೂಲಕ ಕನ್ನಡದ ಕಣಜಕ್ಕೆ ಹೊಸ ಮೆರುಗು ನೀಡಿದ ನಿಮ್ಮ ಲೇಖನಿ ಹೀಗೆಯೇ ನಿರಂತರವಾಗಿ ಸಾಗಲಿ. ಒಟ್ಟಾರೆಯಾಗಿ ಹೇಳಬೇಕು ಅಂದರೆ‘ಅಂತರಂಗದ ಪ್ರಣತಿ’ ಕೃತಿಯು ಸಾಮಾಜಿಕ ಮತ್ತು ವೈಯಕ್ತಿಕ ಜೀವನದ ವಾಸ್ತವಗಳನ್ನು ಕನ್ನಡಿಯಂತೆ ಪ್ರತಿಫಲಿಸುತ್ತದೆ. ಫಿಲಿಪೈನ್ಸ್ ಮೂಲದ ಕಾವ್ಯ ಪ್ರಕಾರವನ್ನೇ ಬಳಸಿ ಕನ್ನಡ ಕಾವ್ಯದ ಕಣಜವನ್ನು ಶ್ರೀಮಂತಗೊಳಿಸಿರುವ ಡಾ. ಮಲ್ಲಿಕಾರ್ಜುನ ಆಲಮೇಲರ ಪ್ರಯತ್ನ ಶ್ಲಾಘನೀಯ. ಇದು ಅಂತರಂಗವನ್ನು ಬೆಳಗುವ ನಿಜವಾದ ಪ್ರಣತಿ… ಅಂಬಿಕಾ ಅವಟಿ ಚಡಚಣ.

ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ ಅವರ ಕೃತಿ “ಅಂತರಂಗದ ಪ್ರಣತಿ” ಅವಲೋಕನ ಅಂಬಿಕಾ ಅವಟಿ ಚಡಚಣ Read Post »

You cannot copy content of this page

Scroll to Top